Homeಕರ್ನಾಟಕ‘ಈದಿನ’ ಮಾಧ್ಯಮದ ಚುನಾವಣಾ ಮೆಗಾ ಸರ್ವೇ; ಬೊಮ್ಮಾಯಿ ಬೇಡ ಎಂದ ಜನತೆ

‘ಈದಿನ’ ಮಾಧ್ಯಮದ ಚುನಾವಣಾ ಮೆಗಾ ಸರ್ವೇ; ಬೊಮ್ಮಾಯಿ ಬೇಡ ಎಂದ ಜನತೆ

- Advertisement -
- Advertisement -

ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಸದ್ದು ಮಾಡುತ್ತಿರುವ ‘ಈದಿನ.ಕಾಂ’ ಸಂಸ್ಥೆಯು ಚುನಾವಣಾಪೂರ್ವ ಮೆಗಾ ಸರ್ವೇಯನ್ನು ನಡೆಸಿದ್ದು, “ಬೊಮ್ಮಾಯಿ ಸರ್ಕಾರ ಮುಂದುವರಿಯಬಾರದು ಎಂದು 67% ಜನರು ಅಭಿಪ್ರಾಯ ತಾಳಿದ್ದಾರೆ” ಎಂದು ತಿಳಿಸಿದೆ.

ಈಗಾಗಲೇ ಹಂತಹಂತವಾಗಿ ಸಮೀಕ್ಷೆಯ ವಿವರಗಳನ್ನು ಪ್ರಕಟಿಸುತ್ತಿದ್ದು, “ಯಾವ ಪಕ್ಷ ಎಷ್ಟು ಕ್ಷೇತ್ರಗಳಲ್ಲಿ ಗೆಲ್ಲಲಿವೆ ಎಂಬ ಮಾಹಿತಿಯನ್ನು ಗುರುವಾರ (ಏಪ್ರಿಲ್ 26) ಪ್ರಕಟಿಸಲಾಗುವುದು” ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ ನಡೆಸಲಾದ ಅತಿ ದೊಡ್ಡ ಸಮೀಕ್ಷೆ ಇದಾಗಿದ್ದು 41,169 ಮತದಾರರನ್ನು ಮಾತನಾಡಿಸಲಾಗಿದೆ ಎಂದು ‘ಈದಿನ’ ತಿಳಿಸಿದೆ.

ಈ ಕುರಿತು ಸಮೀಕ್ಷೆಯ ಯೋಜನಾ ಮುಖ್ಯಸ್ಥರಾದ ಡಾ.ಎಚ್.ವಿ.ವಾಸು ಮತ್ತು ‘ಈದಿನ’ ಸಂಪಾದಕರಾದ ಬಸವರಾಜು ಮೇಗಲಕೇರಿಯವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

ಪತ್ರಿಕಾ ಪ್ರಕಟಣೆಯಲ್ಲಿ ಏನಿದೆ? ಚುನಾವಣಾ ವಿವರಗಳೇನು?

“ಡಿಜಿಟಲ್ ಯುಗದಲ್ಲಿ ನಾಗರಿಕರೇ ಸುದ್ದಿಯನ್ನು ರೂಪಿಸುವವರು ಮತ್ತು ವಿತರಕರು, ಹಾಗಾಗಿ ಸಿಟಿಜನ್ ಜರ್ನಲಿಸ್ಟರೇ ಕೇಂದ್ರವಾಗಿರುವ ವಿಶಿಷ್ಟ ಮಾಧ್ಯಮ ಪ್ರಯತ್ನವೇ ಈದಿನ.ಕಾಮ್. ಕಳೆದ ಒಂದು ವರ್ಷದಿಂದ ಈ ಪ್ರಯೋಗವು ಹಂತಹಂತವಾಗಿ ಅನಾವರಣಗೊಳ್ಳುತ್ತಿವೆ. ಡಿಜಿಟಲ್ ಮಾಧ್ಯಮಗಳು ಪ್ರತ್ಯೇಕ ದ್ವೀಪಗಳಾಗಿ ಕಾರ್ಯನಿರ್ವಹಿಸುವ ಬದಲು, ಪ್ರಜಾತಂತ್ರದ ಹಿತದೃಷ್ಟಿಯಿಂದ ಪರಸ್ಪರ ಪೂರಕವಾಗಿ ಒಂದು ನೆಟ್ವರ್ಕ್ ಆಗಿ ಕೆಲಸ ಮಾಡಬೇಕೆಂದು ಈದಿನ.ಕಾಮ್ ನಂಬುತ್ತದೆ.”

2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ದಿನ.ಕಾಮ್ ನಡೆಸಿದ ಸಮೀಕ್ಷೆಯ ವಿವರಗಳನ್ನು ಈಗಾಗಲೇ www.eedina.com ವೆಬ್‌ಸೈಟಿನಲ್ಲಿ ಏಪ್ರಿಲ್ 22ರಿಂದ ಪ್ರಕಟಿಸಲಾಗುತ್ತಿದೆ. ಕರ್ನಾಟಕದಲ್ಲಿ ಸ್ಪಷ್ಟವಾಗಿ ಆಡಳಿತ ವಿರೋಧಿ ಅಲೆ ಇರುವುದನ್ನು ಈ ಸಮೀಕ್ಷೆ ತೋರಿಸುತ್ತಿದೆ, ನಾಳೆ ಅಂದರೆ ಏಪ್ರಿಲ್ 27ರಂದು ಯಾವ ಪಕ್ಷಗಳಿಗೆ ಎಷ್ಟು ಸೀಟು ಸಿಗಲಿದೆ ಎಂಬ ವಿವರವನ್ನು ಪ್ರಕಟಿಸಲಿದ್ದೇವೆ.

ಸಮೀಕ್ಷೆಯಲ್ಲಿ ಹೊರಬಂದಿರುವ ಸಂಗತಿಗಳು

1. ಕರ್ನಾಟಕದಲ್ಲಿ ಸ್ಪಷ್ಟ ಆಡಳಿತ ವಿರೋಧಿ ಅಲೆ ಇದೆ.

ಈ ಅಭಿಪ್ರಾಯ ಹೊಂದಿರುವವರಲ್ಲಿ ಶೇ.67ರಷ್ಟು ಜನ ಮತದಾರರು ಈ ಸರ್ಕಾರಕ್ಕೆ ಇನ್ನೊಂದು ಬಾರಿ ಅವಕಾಶ ಕೊಡಬಾರದೆಂಬ ಅಭಿಪ್ರಾಯ ಹೊಂದಿದ್ದಾರೆ. ಶೇ.33ರಷ್ಟು ಮತದಾರರು ಈ ಸರ್ಕಾರಕ್ಕೆ ಇನ್ನೊಮ್ಮೆ ಅವಕಾಶ ಕೊಡಬಹುದೆಂಬ ಅನಿಸಿಕೆ ಹೊಂದಿದ್ದಾರೆ.

May be an image of text that says "ವಿಧಾನಸಭಾ ಚುನಾವಣೆ 2023 ಈದಿನ.ಕಾಮ್ ಮೆಗಾ ಸರ್ವ ಶದಿನ o.com eedino. ನ್ಯಾಯ ಪ್ರೀತಿ ಕರ್ನಾಟಕದಲ್ಲಿ ಆಡಳಿತ ವಿರೋಧ ಅಲೆ ಯಾವ ಸಮುದಾಯಗಳು ಯಾವ ಪ್ರಮಾಣದಲ್ಲಿ ಬೊಮ್ಮಾಯಿ ಸರ್ಕಾರಕ್ಕೆ ಇನ್ನೊಂದು ಅವಕಾಶ ಕೊಡಬಾರದು ಎಂದಿದ್ದಾರೆ? ಒಟ್ಟು ಬ್ರಾಹ್ಮಣ, 67% ವೈಶ್ಯ ಇತ್ಯಾದಿ 43% 86% ಮುಸ್ಲಿಮರು ಲಿಂಗಾಯತ 47% 78% ಒಕ್ಕಲಿಗ 67% ಪ.ಪಂಗಡ 74% 71% ಪ.ಜಾತಿ ಕುರುಬ Eedina.com Megha Survey ಈದಿನ.ಕಾಂ ಮಾರ್ಚ್ ತರಿಂದ ಏಪ್ರಿಲ್ 21ರವರೆಗೆ ನಡೆಸಿದ ಮೆಗಾಸರ್ವೆ ಫಲಿತಾಂಶ www.eedina.com"

May be an image of text that says "ವಿಧಾನಸಭಾ ಚುನಾವಣೆ 2023 ಈದಿನ. ಕಾಮ್ ಮೆಗಾ ಸರ್ವ ೀದಿನ eedina.com ಸತ್ಯ ನ್ಯಾಯ ।ಪ್ರೀತಿ ಕರ್ನಾಟಕದಲ್ಲಿ ಆಡಳಿತರ ವಿರೋಧ ಅಲೆ ಈದಿನ.ಕಾಂ ಮೆಗಾ ಸರ್ವೆಯ ಮೊದಲ ಪ್ರಶ್ನೆ: ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಇನ್ನೊಂದು ಅವಕಾಶ ಕೊಡಬೇಕೇ? 33% ಈ ಸರ್ಕಾರ ಮುಂದುವರೆಯಲಿ 67 ಈ ಸರ್ಕಾರ ಮುಂದುವರೆಯಬಾರದು *ಶೇ.32ರಷ್ಟು ಜನರು ಯಾವ ಅಭಿಪ್ರಾಯವನ್ನೂ ಹೇಳಿಲ್ಲ. ಅಭಿಪ್ರಾಯ ಹೇಳಿರುವವರ ಪೈಕಿ ಮೇಲಿನ ಪ್ರಮಾಣದಲ್ಲಿ ಹೌದು ಅಥವಾ ಇಲ್ಲ ಎಂದಿದ್ದಾರೆ. ಮಾರ್ಚ್ 3ರಿಂದ ಏಪ್ರಿಲ್ 21ರವರೆಗೆ ನಡೆದ ಸಮೀಕ್ಷೆ www.eedina.com"

2. ಬಸವರಾಜ ಬೊಮ್ಮಾಯಿಯವರ ಸರ್ಕಾರವೇ ಇತ್ತೀಚಿನ ಸರ್ಕಾರಗಳಲ್ಲಿ ಅತ್ಯಂತ ಭ್ರಷ್ಟ ಸರ್ಕಾರವೆಂಬ ಅನಿಸಿಕೆ ಜನರಲ್ಲಿದೆ. 33% ಜನರು ಈ ಸರ್ಕಾರ ಅತ್ಯಂತ ಭ್ರಷ್ಟ ಎಂದರೆ, 14% ಜನರು ಯಡಿಯೂರಪ್ಪನವರ ಸರ್ಕಾರವನ್ನೂ 12% ಜನರು ಸಿದ್ದರಾಮಯ್ಯನವರ ಸರ್ಕಾರವನ್ನೂ, 8% ಜನರು ಕುಮಾರಸ್ವಾಮಿಯವರ ಸರ್ಕಾರವನ್ನು ಅತ್ಯಂತ ಭ್ರಷ್ಟವೆಂದು ಹೇಳಿದ್ದಾರೆ.

3. ಮತದಾನವನ್ನು ಪ್ರಭಾವಿಸುವ ಅಂಶಗಳಾಗಿ ಜನರು ಭ್ರಷ್ಟಾಚಾರ, ಬೆಲೆ ಏರಿಕೆ ಮತ್ತು ನಿರುದ್ಯೋಗಗಳನ್ನು ಮೊದಲ ಮೂರು ಸಂಗತಿಗಳಾಗಿ ಗುರುತಿಸಿದ್ದಾರೆ.

4. ರಾಜ್ಯ ಬಿಜೆಪಿ ಸರ್ಕಾರದ್ದೇ ಆದ ಯಾವ ಯೋಜನೆಗಳೂ ಜನರಿಗೆ ನೆನಪಿಲ್ಲ. ಮೂರನೇ ಒಂದು ಭಾಗ ಜನರಿಗೆ ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಯಾವುದೇ ಗೊತ್ತಿಲ್ಲ. ಮೂರನೇ ಒಂದು ಭಾಗ ಜನರಿಗೆ ಕಾಂಗ್ರೆಸ್‌ ಗ್ಯಾರಂಟಿಗಳೂ ಗೊತ್ತಿಲ್ಲ; ಗೊತ್ತಿರುವವರಲ್ಲಿ ಅರ್ಧ ಜನಕ್ಕೆ ಅದನ್ನು ಜಾರಿಗೆ ತರುತ್ತಾರೆ ಎಂಬ ವಿಶ್ವಾಸವಿಲ್ಲ.

5. ಸರ್ಕಾರಕ್ಕೆ ಇದ್ದಷ್ಟು ಆಡಳಿತ ವಿರೋಧಿ ಅಲೆ ಶಾಸಕರಿಗಿಲ್ಲ. ಆದರೆ ಹಾಲಿ ಶಾಸಕರ ಪೈಕಿ ಹೆಚ್ಚಿನ ವಿರೋಧ ಬಿಜೆಪಿ ಶಾಸಕರಿಗಿದೆ.

ಸಮೀಕ್ಷೆಯ ವಿಶಿಷ್ಟ ಅಂಶಗಳು

1. ಇದು ಈ ಚುನಾವಣೆಗೆ ಸಂಬಂಧಿಸಿದಂತೆ ನಡೆಸಲಾದ ಅತಿ ದೊಡ್ಡ ಸಮೀಕ್ಷೆ: 41,169 ಮತದಾರರನ್ನು ಇದರಲ್ಲಿ ಮಾತಾಡಿಸಲಾಗಿದೆ (Very big sample size).

2. (Scientific random sampling) ಯಾವುದೇ ಪೂರ್ವಗ್ರಹ ಕೆಲಸ ಮಾಡದ ರೀತಿಯಲ್ಲಿ ವೈಜ್ಞಾನಿಕವಾಗಿ ಆಯ್ದುಕೊಂಡ ಮತಗಟ್ಟೆಗಳಲ್ಲಿ ಮತ್ತು ಪ್ರತಿ ಮತಗಟ್ಟೆಯಲ್ಲಿ ವೈಜ್ಞಾನಿಕವಾಗಿ ಆಯ್ದುಕೊಂಡ ಮತದಾರರ ಪಟ್ಟಿಯಲ್ಲಿರುವವರ ಪ್ರತಿಕ್ರಿಯೆಗಳನ್ನು ಪಡೆಯಲಾಗಿದೆ.

3. ಸಮೀಕ್ಷೆಯನ್ನು ಬಹುತೇಕ ರಾಜ್ಯದಾದ್ಯಂತ ಇರುವ ನಾಗರಿಕ ಪತ್ರಕರ್ತರು (ಮೀಡಿಯಾ ಜರ್ನಲಿಸ್ಟ್) ನಡೆಸಿರುತ್ತಾರೆ.

4. ಇದು ದೂರವಾಣಿ ಮೂಲಕ ನಡೆದ ಸಮೀಕ್ಷೆ ಅಲ್ಲ. ಮತದಾರರನ್ನು ಅವರವರ ಮನೆಗಳಲ್ಲೇ ಮಾತನಾಡಿಸಲಾದ ಮುಖಾಮುಖಿ ಸಮೀಕ್ಷೆ.

5. ನಮ್ಮ ಡೇಟಾ ಪರಿಶೀಲನೆಯ ಪ್ರಕ್ರಿಯೆ ಮುಗಿದ ನಂತರ ಸಂಶೋಧನೆ ಮಾಡಬಯಸುವ ವಿಶ್ವವಿದ್ಯಾಲಯಗಳು ಕೇಳಿದರೆ ಅವರಿಗೆ ಸಂಪೂರ್ಣ ಡೇಟಾ ಕೊಡಲಾಗುವುದು.

6. ಇಂದು (ಏಪ್ರಿಲ್ 26) ನಾವು ವಿವಿಧ ಪಕ್ಷಗಳು, ಸಮುದಾಯಗಳು ಮತ್ತು ಪ್ರದೇಶವಾರು ಪಡೆಯಬಹುದಾದ ಮತಗಳ ಅಂದಾಜು ನೀಡುತ್ತೇವೆ.

7. ನಾಳೆ (ಏಪ್ರಿಲ್ 27) ಸೀಟು ಹಂಚಿಕೆಯ ವಿವರಗಳನ್ನು ನೀಡಲಿದ್ದೇವೆ.

ಇಂತಹ ಸಮೀಕ್ಷೆಗಳ ಅಂತಿಮ ಫಲಿತಾಂಶ ಮತ್ತು ಅಂಕಿ-ಸಂಖ್ಯೆಗಳು ಮಾತ್ರವಲ್ಲದೇ, ಅಳವಡಿಸಿದ ವಿಧಾನ ಹಾಗೂ ಪೂರ್ಣ ದತ್ತಾಂಶಗಳೂ ಸಹಾ ಮುಕ್ತವಾಗಿರಬೇಕು ಎಂದು ಈದಿನ.ಕಾಮ್ ನಂಬುತ್ತದೆ. ಸುಮಾರು 23 ವಿವಿಧ ಅಂಶಗಳನ್ನು (Variable) ಬಳಸಿರುವ ಈ ಸಮೀಕ್ಷೆಯು ಸಂಶೋಧನಾರ್ಥಿಗಳಿಗೆ ಅಪಾರ ಪ್ರಮಾಣದ ವಿವರಗಳನ್ನು ಒದಗಿಸುತ್ತವೆ. ಹಾಗಾಗಿ ಕರ್ನಾಟಕದ ಯಾವುದೇ ವಿಶ್ವವಿದ್ಯಾಲಯದ ರಾಜಕೀಯ ಶಾಸ್ತ್ರ ಅಥವಾ ಇನ್ನಿತರ ವಿಭಾಗಗಳ ಸಂಶೋಧನಾ ಕೇಂದ್ರಗಳಿಗೆ ಅದನ್ನು ನೀಡಲಾಗುತ್ತದೆ.

ಸೀಟು ಹಂಚಿಕೆಯ ವಿವರಗಳನ್ನು ಏಪ್ರಿಲ್ 27 ರಂದು ಪ್ರಸ್ತುತಪಡಿಸಲಾಗುತ್ತದೆ. ಅದೇ ಸಮಯದಲ್ಲಿ ಪ್ರಕಟಿಸಲು ಆಸಕ್ತಿ ತೋರುವ ಇತರ ಮಾಧ್ಯಮ ಸಂಸ್ಥೆಗಳೊಂದಿಗೆ ಈ ವಿವರಗಳನ್ನು ಹಂಚಿಕೊಳ್ಳಲಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...