Homeಕರ್ನಾಟಕ‘ಈದಿನ’ ಮಾಧ್ಯಮದ ಚುನಾವಣಾ ಮೆಗಾ ಸರ್ವೇ; ಬೊಮ್ಮಾಯಿ ಬೇಡ ಎಂದ ಜನತೆ

‘ಈದಿನ’ ಮಾಧ್ಯಮದ ಚುನಾವಣಾ ಮೆಗಾ ಸರ್ವೇ; ಬೊಮ್ಮಾಯಿ ಬೇಡ ಎಂದ ಜನತೆ

- Advertisement -
- Advertisement -

ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಸದ್ದು ಮಾಡುತ್ತಿರುವ ‘ಈದಿನ.ಕಾಂ’ ಸಂಸ್ಥೆಯು ಚುನಾವಣಾಪೂರ್ವ ಮೆಗಾ ಸರ್ವೇಯನ್ನು ನಡೆಸಿದ್ದು, “ಬೊಮ್ಮಾಯಿ ಸರ್ಕಾರ ಮುಂದುವರಿಯಬಾರದು ಎಂದು 67% ಜನರು ಅಭಿಪ್ರಾಯ ತಾಳಿದ್ದಾರೆ” ಎಂದು ತಿಳಿಸಿದೆ.

ಈಗಾಗಲೇ ಹಂತಹಂತವಾಗಿ ಸಮೀಕ್ಷೆಯ ವಿವರಗಳನ್ನು ಪ್ರಕಟಿಸುತ್ತಿದ್ದು, “ಯಾವ ಪಕ್ಷ ಎಷ್ಟು ಕ್ಷೇತ್ರಗಳಲ್ಲಿ ಗೆಲ್ಲಲಿವೆ ಎಂಬ ಮಾಹಿತಿಯನ್ನು ಗುರುವಾರ (ಏಪ್ರಿಲ್ 26) ಪ್ರಕಟಿಸಲಾಗುವುದು” ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ ನಡೆಸಲಾದ ಅತಿ ದೊಡ್ಡ ಸಮೀಕ್ಷೆ ಇದಾಗಿದ್ದು 41,169 ಮತದಾರರನ್ನು ಮಾತನಾಡಿಸಲಾಗಿದೆ ಎಂದು ‘ಈದಿನ’ ತಿಳಿಸಿದೆ.

ಈ ಕುರಿತು ಸಮೀಕ್ಷೆಯ ಯೋಜನಾ ಮುಖ್ಯಸ್ಥರಾದ ಡಾ.ಎಚ್.ವಿ.ವಾಸು ಮತ್ತು ‘ಈದಿನ’ ಸಂಪಾದಕರಾದ ಬಸವರಾಜು ಮೇಗಲಕೇರಿಯವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

ಪತ್ರಿಕಾ ಪ್ರಕಟಣೆಯಲ್ಲಿ ಏನಿದೆ? ಚುನಾವಣಾ ವಿವರಗಳೇನು?

“ಡಿಜಿಟಲ್ ಯುಗದಲ್ಲಿ ನಾಗರಿಕರೇ ಸುದ್ದಿಯನ್ನು ರೂಪಿಸುವವರು ಮತ್ತು ವಿತರಕರು, ಹಾಗಾಗಿ ಸಿಟಿಜನ್ ಜರ್ನಲಿಸ್ಟರೇ ಕೇಂದ್ರವಾಗಿರುವ ವಿಶಿಷ್ಟ ಮಾಧ್ಯಮ ಪ್ರಯತ್ನವೇ ಈದಿನ.ಕಾಮ್. ಕಳೆದ ಒಂದು ವರ್ಷದಿಂದ ಈ ಪ್ರಯೋಗವು ಹಂತಹಂತವಾಗಿ ಅನಾವರಣಗೊಳ್ಳುತ್ತಿವೆ. ಡಿಜಿಟಲ್ ಮಾಧ್ಯಮಗಳು ಪ್ರತ್ಯೇಕ ದ್ವೀಪಗಳಾಗಿ ಕಾರ್ಯನಿರ್ವಹಿಸುವ ಬದಲು, ಪ್ರಜಾತಂತ್ರದ ಹಿತದೃಷ್ಟಿಯಿಂದ ಪರಸ್ಪರ ಪೂರಕವಾಗಿ ಒಂದು ನೆಟ್ವರ್ಕ್ ಆಗಿ ಕೆಲಸ ಮಾಡಬೇಕೆಂದು ಈದಿನ.ಕಾಮ್ ನಂಬುತ್ತದೆ.”

2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ದಿನ.ಕಾಮ್ ನಡೆಸಿದ ಸಮೀಕ್ಷೆಯ ವಿವರಗಳನ್ನು ಈಗಾಗಲೇ www.eedina.com ವೆಬ್‌ಸೈಟಿನಲ್ಲಿ ಏಪ್ರಿಲ್ 22ರಿಂದ ಪ್ರಕಟಿಸಲಾಗುತ್ತಿದೆ. ಕರ್ನಾಟಕದಲ್ಲಿ ಸ್ಪಷ್ಟವಾಗಿ ಆಡಳಿತ ವಿರೋಧಿ ಅಲೆ ಇರುವುದನ್ನು ಈ ಸಮೀಕ್ಷೆ ತೋರಿಸುತ್ತಿದೆ, ನಾಳೆ ಅಂದರೆ ಏಪ್ರಿಲ್ 27ರಂದು ಯಾವ ಪಕ್ಷಗಳಿಗೆ ಎಷ್ಟು ಸೀಟು ಸಿಗಲಿದೆ ಎಂಬ ವಿವರವನ್ನು ಪ್ರಕಟಿಸಲಿದ್ದೇವೆ.

ಸಮೀಕ್ಷೆಯಲ್ಲಿ ಹೊರಬಂದಿರುವ ಸಂಗತಿಗಳು

1. ಕರ್ನಾಟಕದಲ್ಲಿ ಸ್ಪಷ್ಟ ಆಡಳಿತ ವಿರೋಧಿ ಅಲೆ ಇದೆ.

ಈ ಅಭಿಪ್ರಾಯ ಹೊಂದಿರುವವರಲ್ಲಿ ಶೇ.67ರಷ್ಟು ಜನ ಮತದಾರರು ಈ ಸರ್ಕಾರಕ್ಕೆ ಇನ್ನೊಂದು ಬಾರಿ ಅವಕಾಶ ಕೊಡಬಾರದೆಂಬ ಅಭಿಪ್ರಾಯ ಹೊಂದಿದ್ದಾರೆ. ಶೇ.33ರಷ್ಟು ಮತದಾರರು ಈ ಸರ್ಕಾರಕ್ಕೆ ಇನ್ನೊಮ್ಮೆ ಅವಕಾಶ ಕೊಡಬಹುದೆಂಬ ಅನಿಸಿಕೆ ಹೊಂದಿದ್ದಾರೆ.

May be an image of text that says "ವಿಧಾನಸಭಾ ಚುನಾವಣೆ 2023 ಈದಿನ.ಕಾಮ್ ಮೆಗಾ ಸರ್ವ ಶದಿನ o.com eedino. ನ್ಯಾಯ ಪ್ರೀತಿ ಕರ್ನಾಟಕದಲ್ಲಿ ಆಡಳಿತ ವಿರೋಧ ಅಲೆ ಯಾವ ಸಮುದಾಯಗಳು ಯಾವ ಪ್ರಮಾಣದಲ್ಲಿ ಬೊಮ್ಮಾಯಿ ಸರ್ಕಾರಕ್ಕೆ ಇನ್ನೊಂದು ಅವಕಾಶ ಕೊಡಬಾರದು ಎಂದಿದ್ದಾರೆ? ಒಟ್ಟು ಬ್ರಾಹ್ಮಣ, 67% ವೈಶ್ಯ ಇತ್ಯಾದಿ 43% 86% ಮುಸ್ಲಿಮರು ಲಿಂಗಾಯತ 47% 78% ಒಕ್ಕಲಿಗ 67% ಪ.ಪಂಗಡ 74% 71% ಪ.ಜಾತಿ ಕುರುಬ Eedina.com Megha Survey ಈದಿನ.ಕಾಂ ಮಾರ್ಚ್ ತರಿಂದ ಏಪ್ರಿಲ್ 21ರವರೆಗೆ ನಡೆಸಿದ ಮೆಗಾಸರ್ವೆ ಫಲಿತಾಂಶ www.eedina.com"

May be an image of text that says "ವಿಧಾನಸಭಾ ಚುನಾವಣೆ 2023 ಈದಿನ. ಕಾಮ್ ಮೆಗಾ ಸರ್ವ ೀದಿನ eedina.com ಸತ್ಯ ನ್ಯಾಯ ।ಪ್ರೀತಿ ಕರ್ನಾಟಕದಲ್ಲಿ ಆಡಳಿತರ ವಿರೋಧ ಅಲೆ ಈದಿನ.ಕಾಂ ಮೆಗಾ ಸರ್ವೆಯ ಮೊದಲ ಪ್ರಶ್ನೆ: ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಇನ್ನೊಂದು ಅವಕಾಶ ಕೊಡಬೇಕೇ? 33% ಈ ಸರ್ಕಾರ ಮುಂದುವರೆಯಲಿ 67 ಈ ಸರ್ಕಾರ ಮುಂದುವರೆಯಬಾರದು *ಶೇ.32ರಷ್ಟು ಜನರು ಯಾವ ಅಭಿಪ್ರಾಯವನ್ನೂ ಹೇಳಿಲ್ಲ. ಅಭಿಪ್ರಾಯ ಹೇಳಿರುವವರ ಪೈಕಿ ಮೇಲಿನ ಪ್ರಮಾಣದಲ್ಲಿ ಹೌದು ಅಥವಾ ಇಲ್ಲ ಎಂದಿದ್ದಾರೆ. ಮಾರ್ಚ್ 3ರಿಂದ ಏಪ್ರಿಲ್ 21ರವರೆಗೆ ನಡೆದ ಸಮೀಕ್ಷೆ www.eedina.com"

2. ಬಸವರಾಜ ಬೊಮ್ಮಾಯಿಯವರ ಸರ್ಕಾರವೇ ಇತ್ತೀಚಿನ ಸರ್ಕಾರಗಳಲ್ಲಿ ಅತ್ಯಂತ ಭ್ರಷ್ಟ ಸರ್ಕಾರವೆಂಬ ಅನಿಸಿಕೆ ಜನರಲ್ಲಿದೆ. 33% ಜನರು ಈ ಸರ್ಕಾರ ಅತ್ಯಂತ ಭ್ರಷ್ಟ ಎಂದರೆ, 14% ಜನರು ಯಡಿಯೂರಪ್ಪನವರ ಸರ್ಕಾರವನ್ನೂ 12% ಜನರು ಸಿದ್ದರಾಮಯ್ಯನವರ ಸರ್ಕಾರವನ್ನೂ, 8% ಜನರು ಕುಮಾರಸ್ವಾಮಿಯವರ ಸರ್ಕಾರವನ್ನು ಅತ್ಯಂತ ಭ್ರಷ್ಟವೆಂದು ಹೇಳಿದ್ದಾರೆ.

3. ಮತದಾನವನ್ನು ಪ್ರಭಾವಿಸುವ ಅಂಶಗಳಾಗಿ ಜನರು ಭ್ರಷ್ಟಾಚಾರ, ಬೆಲೆ ಏರಿಕೆ ಮತ್ತು ನಿರುದ್ಯೋಗಗಳನ್ನು ಮೊದಲ ಮೂರು ಸಂಗತಿಗಳಾಗಿ ಗುರುತಿಸಿದ್ದಾರೆ.

4. ರಾಜ್ಯ ಬಿಜೆಪಿ ಸರ್ಕಾರದ್ದೇ ಆದ ಯಾವ ಯೋಜನೆಗಳೂ ಜನರಿಗೆ ನೆನಪಿಲ್ಲ. ಮೂರನೇ ಒಂದು ಭಾಗ ಜನರಿಗೆ ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಯಾವುದೇ ಗೊತ್ತಿಲ್ಲ. ಮೂರನೇ ಒಂದು ಭಾಗ ಜನರಿಗೆ ಕಾಂಗ್ರೆಸ್‌ ಗ್ಯಾರಂಟಿಗಳೂ ಗೊತ್ತಿಲ್ಲ; ಗೊತ್ತಿರುವವರಲ್ಲಿ ಅರ್ಧ ಜನಕ್ಕೆ ಅದನ್ನು ಜಾರಿಗೆ ತರುತ್ತಾರೆ ಎಂಬ ವಿಶ್ವಾಸವಿಲ್ಲ.

5. ಸರ್ಕಾರಕ್ಕೆ ಇದ್ದಷ್ಟು ಆಡಳಿತ ವಿರೋಧಿ ಅಲೆ ಶಾಸಕರಿಗಿಲ್ಲ. ಆದರೆ ಹಾಲಿ ಶಾಸಕರ ಪೈಕಿ ಹೆಚ್ಚಿನ ವಿರೋಧ ಬಿಜೆಪಿ ಶಾಸಕರಿಗಿದೆ.

ಸಮೀಕ್ಷೆಯ ವಿಶಿಷ್ಟ ಅಂಶಗಳು

1. ಇದು ಈ ಚುನಾವಣೆಗೆ ಸಂಬಂಧಿಸಿದಂತೆ ನಡೆಸಲಾದ ಅತಿ ದೊಡ್ಡ ಸಮೀಕ್ಷೆ: 41,169 ಮತದಾರರನ್ನು ಇದರಲ್ಲಿ ಮಾತಾಡಿಸಲಾಗಿದೆ (Very big sample size).

2. (Scientific random sampling) ಯಾವುದೇ ಪೂರ್ವಗ್ರಹ ಕೆಲಸ ಮಾಡದ ರೀತಿಯಲ್ಲಿ ವೈಜ್ಞಾನಿಕವಾಗಿ ಆಯ್ದುಕೊಂಡ ಮತಗಟ್ಟೆಗಳಲ್ಲಿ ಮತ್ತು ಪ್ರತಿ ಮತಗಟ್ಟೆಯಲ್ಲಿ ವೈಜ್ಞಾನಿಕವಾಗಿ ಆಯ್ದುಕೊಂಡ ಮತದಾರರ ಪಟ್ಟಿಯಲ್ಲಿರುವವರ ಪ್ರತಿಕ್ರಿಯೆಗಳನ್ನು ಪಡೆಯಲಾಗಿದೆ.

3. ಸಮೀಕ್ಷೆಯನ್ನು ಬಹುತೇಕ ರಾಜ್ಯದಾದ್ಯಂತ ಇರುವ ನಾಗರಿಕ ಪತ್ರಕರ್ತರು (ಮೀಡಿಯಾ ಜರ್ನಲಿಸ್ಟ್) ನಡೆಸಿರುತ್ತಾರೆ.

4. ಇದು ದೂರವಾಣಿ ಮೂಲಕ ನಡೆದ ಸಮೀಕ್ಷೆ ಅಲ್ಲ. ಮತದಾರರನ್ನು ಅವರವರ ಮನೆಗಳಲ್ಲೇ ಮಾತನಾಡಿಸಲಾದ ಮುಖಾಮುಖಿ ಸಮೀಕ್ಷೆ.

5. ನಮ್ಮ ಡೇಟಾ ಪರಿಶೀಲನೆಯ ಪ್ರಕ್ರಿಯೆ ಮುಗಿದ ನಂತರ ಸಂಶೋಧನೆ ಮಾಡಬಯಸುವ ವಿಶ್ವವಿದ್ಯಾಲಯಗಳು ಕೇಳಿದರೆ ಅವರಿಗೆ ಸಂಪೂರ್ಣ ಡೇಟಾ ಕೊಡಲಾಗುವುದು.

6. ಇಂದು (ಏಪ್ರಿಲ್ 26) ನಾವು ವಿವಿಧ ಪಕ್ಷಗಳು, ಸಮುದಾಯಗಳು ಮತ್ತು ಪ್ರದೇಶವಾರು ಪಡೆಯಬಹುದಾದ ಮತಗಳ ಅಂದಾಜು ನೀಡುತ್ತೇವೆ.

7. ನಾಳೆ (ಏಪ್ರಿಲ್ 27) ಸೀಟು ಹಂಚಿಕೆಯ ವಿವರಗಳನ್ನು ನೀಡಲಿದ್ದೇವೆ.

ಇಂತಹ ಸಮೀಕ್ಷೆಗಳ ಅಂತಿಮ ಫಲಿತಾಂಶ ಮತ್ತು ಅಂಕಿ-ಸಂಖ್ಯೆಗಳು ಮಾತ್ರವಲ್ಲದೇ, ಅಳವಡಿಸಿದ ವಿಧಾನ ಹಾಗೂ ಪೂರ್ಣ ದತ್ತಾಂಶಗಳೂ ಸಹಾ ಮುಕ್ತವಾಗಿರಬೇಕು ಎಂದು ಈದಿನ.ಕಾಮ್ ನಂಬುತ್ತದೆ. ಸುಮಾರು 23 ವಿವಿಧ ಅಂಶಗಳನ್ನು (Variable) ಬಳಸಿರುವ ಈ ಸಮೀಕ್ಷೆಯು ಸಂಶೋಧನಾರ್ಥಿಗಳಿಗೆ ಅಪಾರ ಪ್ರಮಾಣದ ವಿವರಗಳನ್ನು ಒದಗಿಸುತ್ತವೆ. ಹಾಗಾಗಿ ಕರ್ನಾಟಕದ ಯಾವುದೇ ವಿಶ್ವವಿದ್ಯಾಲಯದ ರಾಜಕೀಯ ಶಾಸ್ತ್ರ ಅಥವಾ ಇನ್ನಿತರ ವಿಭಾಗಗಳ ಸಂಶೋಧನಾ ಕೇಂದ್ರಗಳಿಗೆ ಅದನ್ನು ನೀಡಲಾಗುತ್ತದೆ.

ಸೀಟು ಹಂಚಿಕೆಯ ವಿವರಗಳನ್ನು ಏಪ್ರಿಲ್ 27 ರಂದು ಪ್ರಸ್ತುತಪಡಿಸಲಾಗುತ್ತದೆ. ಅದೇ ಸಮಯದಲ್ಲಿ ಪ್ರಕಟಿಸಲು ಆಸಕ್ತಿ ತೋರುವ ಇತರ ಮಾಧ್ಯಮ ಸಂಸ್ಥೆಗಳೊಂದಿಗೆ ಈ ವಿವರಗಳನ್ನು ಹಂಚಿಕೊಳ್ಳಲಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...