Homeಮುಖಪುಟಟ್ವಿಟರ್‌ಗೆ ಮೋದಿ ಸರ್ಕಾರ ಬೆದರಿಕೆ ಹಾಕಿದ ವಿಚಾರ: ದಾಖಲೆ ಸಮೇತ ಮಾಹಿತಿ ಹಂಚಿಕೊಂಡ ಟಿಎಂಸಿ ವಕ್ತಾರ

ಟ್ವಿಟರ್‌ಗೆ ಮೋದಿ ಸರ್ಕಾರ ಬೆದರಿಕೆ ಹಾಕಿದ ವಿಚಾರ: ದಾಖಲೆ ಸಮೇತ ಮಾಹಿತಿ ಹಂಚಿಕೊಂಡ ಟಿಎಂಸಿ ವಕ್ತಾರ

- Advertisement -
- Advertisement -

ಟ್ವಿಟರ್ ಮಾಜಿ ಸಿಇಒ ಜಾಕ್ ಡೋರ್ಸೆ ಅವರು ಭಾರತದಲ್ಲಿ ಟ್ವಿಟರ್ ಕಚೇರಿಯನ್ನು ಸ್ಥಗಿತಗೊಳಿಸುವುದಾಗಿ ಭಾರತ ಸರ್ಕಾರ ಬೆದರಿಕೆ ಹಾಕಿತ್ತು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. ಈ ಬಗ್ಗೆ ಟಿಎಂಸಿ ನಾಯಕ, ಆರ್‌ಟಿಐ ಕಾರ್ಯಕರ್ತ ಸಾಕೇತ್ ಗೋಖಲೆ ಅವರು ಸರಣಿ ಟ್ವಿಟ್ ಮಾಡಿದ್ದು, ಟ್ವಿಟರ್ ಬಳಿ ಕೇಂದ್ರ ಸರ್ಕಾರ ಹಲವು ಖಾತೆಗಳ ಮಾಹಿತಿಯನ್ನು ಕೇಳಿತ್ತು ಎಂಬುವುದನ್ನು ಸೂಚಿಸುವ ದಾಖಲೆಯನ್ನು ಹಂಚಿಕೊಂಡಿದ್ದಾರೆ.

ಜಾಕ್ ಡೋರ್ಸೆ ಅವರ ಬೇಹುಗಾರಿಕೆ ಹಾಗೂ ಸೆನ್ಸಾರ್‌ಶಿಪ್ ಆರೋಪಗಳನ್ನು ಮೋದಿ ಸರ್ಕಾರವು ಸುಳ್ಳು ಎಂದು ಹೇಳಿ ನಿರಾಕರಿಸಿದೆ. ಆದರೆ, ಟ್ವಿಟರ್ ನ ಪಾರದರ್ಶಕತೆ ವರದಿಗಳ ಡೇಟಾವನ್ನು ಆಧರಿಸಿದ ಸತ್ಯ ಇಲ್ಲಿದೆ ಎಂದು ಸಿಎಎ ವಿರೋಧಿ ಪ್ರತಿಭಟನೆ, ರೈತರ ಪ್ರತಿಭಟನೆ ಹಾಗೂ ಕೋವಿಡ್ ಸಂದರ್ಭದಲ್ಲಿ ಸಾವಿರಾರು ಟ್ವಿಟರ್ ಬಳಕೆದಾರರ ಮಾಹಿತಿಯನ್ನು ಮೋದಿ ಸರ್ಕಾರವು ಟ್ವಿಟರ್ ಬಳಿ ಕೇಳಿತ್ತು ಎಂದು ಸಂಬಂಧಪಟ್ಟ ದಾಖಲೆಗಳೊಂದಿಗೆ ಸಾಕೇತ್ ಗೋಖಲೆ ಟ್ವಿಟ್ ಮಾಡಿದ್ದಾರೆ.

ಇದನ್ನೂ ಓದಿ: ಈ ದೇಶದ ಪ್ರಧಾನಿಗೆ ಯಾಕೆ ಇಷ್ಟೊಂದು ಹೇಡಿತನ?: ಟ್ವಿಟರ್‌ನ ಮಾಜಿ ಸಿಇಒ ಹೇಳಿಕೆ ಹಿನ್ನೆಲೆ ಕಾಂಗ್ರೆಸ್ ಪ್ರಶ್ನೆ

”ಈಗ ಕೆಳಗಿನ ಟ್ವೀಟ್‌ಗಳಲ್ಲಿ ಸಿಎಎ ವಿರೋಧಿ ಪ್ರತಿಭಟನೆಗಳು ಮತ್ತು ರೈತ ಪ್ರತಿಭಟನೆಗಳ (2020-2021) ಅವಧಿಯ ಡೇಟಾ ಇಲ್ಲಿದೆ. 👇

CAA ವಿರೋಧಿ ಮತ್ತು ರೈತರ ಪ್ರತಿಭಟನೆಯ ಅವಧಿಯಲ್ಲಿ ಭಾರತ ಸರ್ಕಾರವು ಜಾಗತಿಕವಾಗಿ ಅತಿ ಹೆಚ್ಚು ಮಾಹಿತಿಗಳನ್ನು ಕೇಳಿದ ಸರ್ಕಾರವಾಗಿದೆ.

ಈ ಅವಧಿಯಲ್ಲಿ ಜಾಗತಿಕವಾಗಿ ಸಲ್ಲಿಸಿದ ವಿನಂತಿಗಳಲ್ಲಿ 25% ವಿನಂತಿಗಳನ್ನು ಭಾರತ ಸರ್ಕಾರವೇ ಸಲ್ಲಿಸಿದೆ” ಎಂದು ಸಾಕೇತ್ ಗೋಖಲೆ ಹೇಳಿದ್ದಾರೆ.

2019ರ ಜನವರಿ ಮತ್ತು ಡಿಸೆಂಬರ್ ನಡುವಿನ ಅವಧಿಯಲ್ಲಿ 1,057 ಖಾತೆದಾರರ ಮಾಹಿತಿ ಹಾಗೂ ವಿವರಗಳನ್ನು ಭಾರತ ಸರ್ಕಾರ ಕೇಳಿದೆ.

2020 ರ ಜನವರಿ ಹಾಗೂ ಡಿಸೆಂಬರ್ ಅವಧಿಯಲ್ಲಿ ಮೋದಿ ಸರ್ಕಾರವು 5,830 ಟ್ವಿಟರ್ ಬಳಕೆದಾರರ ಮಾಹಿತಿ ಹಾಗೂ ವಿವರಗಳನ್ನು ನೀಡುವಂತೆ ಟ್ವಿಟರ್ ಸಂಸ್ಥೆಯನ್ನು ಒತ್ತಾಯಿಸಿದೆ ಎಂದು ದತ್ತಾಂಶಗಳೊಡನೆ ಸಾಕೇತ್ ಗೋಖಲೆ ಹೇಳಿದ್ದಾರೆ.

👉ತದನಂತರ, 2020 ರ ಜನವರಿ ಹಾಗೂ ಡಿಸೆಂಬರ್ ಅವಧಿಯಲ್ಲಿ ಸಿಎಎ ಮತ್ತು ರೈತ ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ, ಮೋದಿ ಸರ್ಕಾರವು 5830 ಖಾತೆಗಳಿಗೆ ಮಾಹಿತಿ ಮತ್ತು ಬಳಕೆದಾರರ ವಿವರಗಳನ್ನು ಕೋರಿತು.

ಇದು 452% ರಷ್ಟು ಹೆಚ್ಚಳವಾಗಿದೆ!”

2021 (ಕೋವಿಡ್) ಕಾಲದಲ್ಲಿ ಬಳಕೆದಾರರ ವಿವರಗಳಿಗಾಗಿ ಸಲ್ಲಿಕೆಯಾದ ಒಟ್ಟು ಜಾಗತಿಕ ವಿನಂತಿಗಳಲ್ಲಿ 19% ವಿನಂತಿಗಳನ್ನು ಭಾರತ ಸರ್ಕಾರವೇ ಮಾಡಿದೆ. ಇದೇ ಅವಧಿಯಲ್ಲಿ ಯುನೈಟೆಡ್ ಕಿಂಗ್‌ಡಂ 4% ವಿನಂತಿಗಳನ್ನು ಮಾಡಿದ್ದರೆ, ಜರ್ಮನಿ 6%, ಬ್ರೆಝಿಲ್ 2% ವಿನಂತಿಗಳನ್ನಷ್ಟೇ ಮಾಡಿತ್ತು. ಪಾಕಿಸ್ತಾನ ಕೇವಲ 1% ಕಡಿಮೆ ವಿನಂತಿ ಮಾಡಿದೆ ಎಂದು ಸಾಕೇತ್ ಗೋಖಲೆ ಟ್ವಿಟರ್ ನೀಡಿರುವ ವರದಿಯನ್ನು ಉಲ್ಲೇಖಿಸಿ ತಿಳಿಸಿದ್ದಾರೆ.

ಇನ್ನು, ಟ್ವಿಟರ್ ಖಾತೆಯನ್ನು ಅಮಾನತು ಮಾಡುವುದು ಮತ್ತು ವಿಷಯಗಳನ್ನು ಡಿಲಿಟ್ ಮಾಡುವಂತೆಯೂ ಭಾರತ ಸರ್ಕಾರ ನೀಡಿದ ಆದೇಶಗಳ ಮಾಹಿತಿಯನ್ನು ಟ್ವಿಟರ್ ನೀಡಿದೆ. ಅದರಲ್ಲಿ ಕೋರ್ಟ್‌ ನಿರ್ದೇಶನದ ಪ್ರಕಾರ ಸರ್ಕಾರ ನೀಡಿದ ಆದೇಶಗಳು ಹಾಗೂ ಲೀಗಲ್ ನೋಟಿಸ್ ಇಲ್ಲದೆ ಪೊಲೀಸ್ ಹಾಗೂ ಸರ್ಕಾರಿ ಏಜನ್ಸಿಗಳು ನೀಡಿದ ಆದೇಶಗಳು ಎಂದು ಎರಡು ವಿಭಾಗ ಮಾಡಬಹುದು. 2020 ರಲ್ಲಿ, ವಿಷಯವನ್ನು ತೆಗೆದುಹಾಕುವಿಕೆ ಹಾಗೂ ಖಾತೆಗಳ ಅಮಾನತು ಸೇರಿದಂತೆ 9,724 ಆದೇಶಗಳನ್ನು ಮೋದಿ ಸರ್ಕಾರ ನೀಡಿದೆ. ಅದರಲ್ಲಿ ಕೇವಲ 19 ಮಾತ್ರ ಕೋರ್ಟ್ ನಿರ್ದೇಶನದಂತೆ ಆದೇಶಿಸಲಾಗಿದೆ. ಉಳಿದ ಎಲ್ಲವನ್ನೂ ಮೋದಿ ಸರ್ಕಾರವೇ ಆದೇಶಿಸಿದೆ. 2021 ರಲ್ಲಿ 8,863 ಆದೇಶಗಳನ್ನು ಮೋದಿ ಸರ್ಕಾರ ನೀಡಿದರೆ, ಅದರಲ್ಲಿ ಕೇವಲ 32 ಮಾತ್ರ ಕೋರ್ಟ್ ಆದೇಶಗಳಾಗಿತ್ತು ಎಂದು ಗೋಖಲೆ ಟ್ವಿಟ್ ನಲ್ಲಿ ಹೇಳಿದ್ದಾರೆ.

ಭಾರತ ಸರ್ಕಾರವು 12,916 ಟ್ವಿಟರ್ ಖಾತೆಗಳನ್ನು ನಿಷ್ಕ್ರಿಯಗೊಳಿಸಲು 3,992 ಆದೇಶಗಳನ್ನು ನೀಡಿದ್ದು, ಇದು ಜಾಗತಿಕವಾಗಿ 8% ಆಗಿದೆ. ಅದೇ ವೇಳೆ UK ಕೇವಲ 16 ಆದೇಶ ನೀಡಿದ್ದರೆ, ಅಮೇರಿಕ 32 ಆದೇಶಗಳನ್ನು, ಇಸ್ರೇಲ್ 7 ಆದೇಶಗಳನ್ನು ಮಾತ್ರ ನೀಡಿದೆ. ಇವೆಲ್ಲವೂ ಜಾಗತಿಕ ಆದೇಶಗಳ 1% ವೂ ಇಲ್ಲ. ನೆರೆಯ ಪಾಕಿಸ್ತಾನ 489 ಆದೇಶಗಳನ್ನು ನೀಡಿದ್ದು, ಜಾಗತಿಕವಾಗಿ 1% ಆದೇಶಗಳನ್ನು ನೀಡಿದೆ. ಬಾಂಗ್ಲಾದೇಶ ಟ್ವಿಟರ್ ಖಾತೆ ಅಮಾನತು ಹಾಗೂ ವಿಷಯ ತೆಗೆದುಹಾಕುವಿಕೆ ಕುರಿತಂತೆ ಯಾವುದೇ ಆದೇಶವನ್ನೂ ನೀಡಿಲ್ಲ. ಅದೇ ವೇಳೆ, ಭಾರತ ಸರ್ಕಾರವು 12,919 ಖಾತೆಗಳನ್ನು ನಿಷ್ಕ್ರಿಯಗೊಳಿಸಲು ಆದೇಶಿಸಿದೆ ಎಂದು ಸಾಕೇತ್ ಗೋಖಲೆ ತಿಳಿಸಿದ್ದಾರೆ.

ಈ ಡೇಟಾಗಳ ಪ್ರಕಾರ ಸಿಎಎ ವಿರೋಧಿ ಹಾಗೂ ರೈತರ ಆಂದೋಲನದ ಸಂದರ್ಭದಲ್ಲಿ ಮೋದಿ ಸರ್ಕಾರವು ಟ್ವಿಟರ್ ಖಾತೆದಾರರ ಮಾಹಿತಿ ನೀಡುವಂತೆ ಹಾಗೂ ಖಾತೆಗಳ ನಿಷೇಧಕ್ಕೆ ಒತ್ತಡ ಹೇರಿದೆ ಎನ್ನುವುದು ಖಚಿತವಾಗಿದೆ. ಕೋಮುವಾದಿ ದ್ವೇಷ ಹರಡುವಿಕೆ, ಮಹಿಳಾ ಖಾತೆದಾರರ ಮೇಲೆ ಸೈಬರ್ ನಿಂದನೆ ದಾಳಿ, ಬಿಜೆಪಿ ಐಟಿ ಸೆಲ್ ಗಳು ಮುಕ್ತವಾಗಿ ಸುಳ್ಳು ಸುದ್ದಿ ಹರಡುತ್ತಿರುವ ಸಂದರ್ಭದಲ್ಲೇ ಮೋದಿ ಸರ್ಕಾರವು ಇಷ್ಟೆಲ್ಲಾ ಆದೇಶಗಳನ್ನು ನೀಡಿದೆ. ಬಿಜೆಪಿ ನಾಯಕರ ಟ್ವಿಟ್‌ಗಳನ್ನು ‘ತಿರುಚಿದ ಸುದ್ದಿ’ ಎಂದು ಸ್ವತಃ ಟ್ವಿಟರ್ ಫ್ಲ್ಯಾಗ್ ಮಾಡಿದ್ದರೂ ಸಹ ಅವುಗಳನ್ನು ತೆಗೆದುಹಾಕಿರಲಿಲ್ಲ. ಮೋದಿ ಸರಕಾರ ಟೀಕೆಗಳನ್ನು ಹತ್ತಿಕ್ಕುತ್ತದೆ ಎಂಬುದು ಈ ಅಂಕಿಅಂಶಗಳಿಂದ ಸ್ಪಷ್ಟವಾಗಿದೆ. ಈ ಅಧಿಕೃತ ಡೇಟಾವನ್ನು ನಿರಾಕರಿಸುವ ಮತ್ತು ಆರೋಪಗಳನ್ನು “ಸುಳ್ಳು” ಮತ್ತು “ವಿದೇಶಿ ಪಿತೂರಿ” ಎಂದು ಹೇಳುವ ಧೈರ್ಯವನ್ನು ಮೋದಿ ಸರ್ಕಾರ ಹೊಂದಿದೆಯೇ? ಸಚಿವ ರಾಜೀವ್ ಅವರೇ ನಿಮ್ಮ ಉತ್ತರಕ್ಕಾಗಿ ಕಾಯುತ್ತಿದ್ದೇನೆ ಏಕೆಂದರೆ ಈಗ ನೀವು ಸುಳ್ಳು ಹೇಳಲು ಸಾಧ್ಯವಿಲ್ಲ ಎಂದು ಸಾಕೇತ್ ಗೋಖಲೆ ಟ್ವಿಟ್ ನಲ್ಲಿ ಪ್ರಶ್ನಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...