Homeಕರ್ನಾಟಕಮಾರಾಟವಾದ ದಲಿತರ ಭೂಮಿ ವಾಪಸ್ ಕೊಡಿಸುವ PTCL ಕಾಯ್ದೆ ಬಗ್ಗೆ ನಿಮಗೆ ಗೊತ್ತೆ?

ಮಾರಾಟವಾದ ದಲಿತರ ಭೂಮಿ ವಾಪಸ್ ಕೊಡಿಸುವ PTCL ಕಾಯ್ದೆ ಬಗ್ಗೆ ನಿಮಗೆ ಗೊತ್ತೆ?

ಮಂಚೇಗೌಡ ಎಂಬುವವರು 1982/83ರಲ್ಲಿ ಈ ಕಾಯ್ದೆ ಸಂವಿಧಾನ ಬದ್ಧವಾಗಿಲ್ಲ ಎಂದು ವಾದಿಸಿ ತನ್ನ ಕ್ರಯ ಊರ್ಜಿತಗೊಳಿಸಿ ಎಂದು ಮನವಿ ಮಾಡಿದ್ದರು. ಆದರೆ ಸುಪ್ರೀಂ ಕೋರ್ಟ್ ಅರ್ಜಿ ವಜಾಗೊಳಿಸಿದೆ.

- Advertisement -
- Advertisement -

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ತಮ್ಮ ನೆಲದ ಹಕ್ಕಿಗಾಗಿ 183ದಿನಗಳಿಂದ PTCL ಕಾಯ್ದೆ ಸಮರ್ಪಕವಾಗಿ ಜಾರಿಗೆ ಒತ್ತಾಯಿಸಿ ಫ್ರೀಡಂ ಪಾರ್ಕ್ ನಲ್ಲಿ ಅಹೋರಾತ್ರಿ ಹೋರಾಟ ನಡೆಯುತ್ತಿದೆ. ಇದುವರೆಗೂ ಈ ವಿಷಯ ಕುರಿತು ಸರ್ಕಾರ ದ ಜೊತೆ ಅಂದಿನಿಂದ ಇಂದಿನ ವರೆಗೂ ಯಾವ ಮಂತ್ರಿ ಶಾಸಕರು ಭೇಟಿ ನೀಡಿಲ್ಲ ಎಂಬುದು ದುರಂತ.

ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಶೋಷಿತ ಜನರ ಜೀವನ ನಿರ್ವಹಣೆಗೆ ಇದ್ದ ಜಮೀನುಗಳನ್ನ ಕೆಲವು ಮುಂದುವರೆದ ಜಾತಿ ಜನ ಆಸೆ ಆಮಿಷಗಳನ್ನು ತೋರಿಸಿ, ಬಗ್ಗದಿದ್ದರೆ ದೌರ್ಜನ್ಯವೆಸಗಿ ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದಾರೆ. ಇದರಿಂದ ಶೋಷಿತರು ಇದ್ದ ಭೂಮಿ ಕಳೆದುಕೊಂಡು ಭೂ ಹೀನರಾಗಿದ್ದಾರೆ. ಇದನ್ನು ಮನಗಂಡ ಅಂದಿನ ಮಂತ್ರಿ ಶ್ರೀ ಬಸವಲಿಂಗಪ್ಪ ಮತ್ತು ರಾಜ್ಯ ಸರ್ಕಾರ 1978 ತಾ 18/12/1978ರಲ್ಲಿ ಸಂವಿಧಾನ ದ ಆರ್ಟಿಕಲ್ 31ಸಿ ಮತ್ತು 46ರ ರೀತ್ಯ (ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಭೂ ಪರೆಬಾರೆ) ಕಾಯ್ದೆ ಜಾರಿಗೆ ತಂತು. ಈ ಕಾಯ್ದೆಯು 1979ರ ಜನವರಿಯಿಂದ ಜಾರಿಗೆ ತಯಾರಾಗಿದೆ.

ರಾಜ್ಯದ ಪರಿಶಿಷ್ಟ ಜಾತಿ ವರ್ಗಗಳ ಜನರು ಸರ್ಕಾರಿ ಸಾಗುವಳಿದಾರರ ಭೂಮಿ ಹಾಗೂ ಇನಾಂ ಮಂಜೂರು ಭೂಮಿಗಳನ್ನು ಮಾರಾಟ ಮಾಡುವಂತಿಲ್ಲ. ಒಂದು ವೇಳೆ ಮಾರಾಟ ಮಾಡಿದ್ದರೂ ಅಂತಹ ಭೂಮಿ ಮಂಜೂರುದಾರರು ಅಥವ ಅವರ ವಾರಸುದಾರರು ಸಂಬಂಧಿಸಿದ ಎ ಸಿ (ಉಪ ವಿಭಾಗ ಅಧಿಕಾರಿಗಳಿಗೆ) ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಈ ಕಾಯ್ದೆ ಪ್ರಕಾರ ತಮ್ಮ ಭೂಮಿಯನ್ನು ವಾಪಸ್ ಪಡೆದು ಕೊಳ್ಳುವ ಹಕ್ಕು ಕೊಡಲಾಗಿದೆ.

ಈ ಕಾಯ್ದೆ ಇದ್ದಾಗ್ಯೂ ರಾಜ್ಯದಲ್ಲಿ ಸಾವಿರಾರು ಎಕರೆ ಭೂಮಿಯನ್ನ ಪರಬಾರೆ ಮಾಡಲಾಗಿದೆ. ಒಂದು ಅಂದಾಜಿನಿನಂತೆ ಹತ್ತು ಸಾವಿರ ಎಕರೆ ಭೂಮಿ ಮಾರಾಟಗೊಂಡಿದೆ. ಇದುವರೆಗೂ ಸಂಬಂಧ ಸಲ್ಲಿಸಿದ್ದ 1150 ಪ್ರಕರಣಗಳು ಇತ್ಯರ್ಥಗೊಂಡು ಮಾರಿದ್ದ ಭೂಮಿ ವಾಪಸ್ ಪಡೆಯಲಾಗಿದೆ.

ನಗರಪ್ರದೇಶಗಳ ಅಂದರೆ ಬೆಂಗಳೂರು ಸುತ್ತಮುತ್ತ ಹಾಗೂ ಜಿಲ್ಲಾ ಕೇಂದ್ರಗಳ ಸುತ್ತ ಬೆಲೆ ಬಾಳುವ ದಲಿತರ ಜಮೀನು ಗಳನ್ನ ಪುಸಲಾಯಿಸಿ ಒಂದಷ್ಟು ಹೆಚ್ಚು ಹಣ ನೀಡಿ ಖರೀದಿಸಿರುವ ಭೂ ಮಾಫಿಯ ರಾಜಕಾರಣಿಗಳು, ಬಂಡವಾಳಿಗರು ಈ ಕಾಯ್ದೆ ಪ್ರಕಾರ ವಾಪಸ್ ಜಮೀನು ಪಡೆದುಕೊಳ್ಳುವ ಆಲೋಚನೆ ಮಾಡದಂತೆ ದಲಿತರಿಗೆ ಕೆಲವು ಪುಡಾರಿಗಳ ಬೆದರಿಕೆ ಮತ್ತು ಕೆಲವು ಸ್ವಯಂ ಘೋಷಿತವಾದ ದಲಿತ ಸಂಘಟನೆಗಳ ಮುಖಂಡರ ಮೂಲಕ ತಪ್ಪು ಸಂದೇಶ ನೀಡುತ್ತಿದ್ದಾರೆ. ತರಾತುರಿಯಲ್ಲಿ ಕಂದಾಯ ಇಲಾಖೆ ಎ ಸಿ, ಡಿ ಸಿ ಗಳ ಜೊತೆ ಶಾಮೀಲಾಗಿ ಈ PTCL ಕಾಯ್ದೆಯನ್ನ ಹಣದ ಹಗ್ಗದಿಂದ ಬಂಧಿಸಿದ್ದಾರೆ.

ಮಂಚೇಗೌಡ ಎಂಬುವವರು 1982/83ರಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಈ ಕಾಯ್ದೆ ಸಂವಿಧಾನ ಬದ್ಧವಾಗಿಲ್ಲ ಎಂದು ವಾದಿಸಿ ತನ್ನ ಕ್ರಯ ಊರ್ಜಿತಗೊಳಿಸಿ ಎಂದು ಮನವಿ ಮಾಡಿದ್ದರು. ಅವರು 1963ರ ಲಿಮಿಟೇಷನ್ ಕಾಯ್ದೆಗೆ ಒಳಗಾಗಿದೆ ಎಂದು ವಾದಿಸಿದ್ದರು. ಆದರೆ ಸುಪ್ರೀಂಕೋರ್ಟ್ ಇದನ್ನ ತಿರಸ್ಕಾರ ಮಾಡಿ PTCL ಕಾಯ್ದೆ 1963 ಕಾಯ್ದೆಗೆ ಒಳಪಡುವುದಿಲ್ಲ ಎಂದಿದೆ.

ಈ ಕಾಯ್ದೆ ಮೊದಲು 1984 ನಂತರ 2ನೇ ಬಾರಿ 1992 ಮುಂದುವರೆದು 2012ರ ಸುತ್ತೋಲೆಗಳ ಮೂಲಕ ಆದೇಶ ಹೊರಡಿಸಿ ಎಲ್ಲಾ ಜಿಲ್ಲೆಗಳಲ್ಲಿ ಡಿ ಸಿ, ಎ ಸಿ ಗಳು ಮೂಲ ಮಂಜೂರುದಾರರಿಗೆ ಭೂಮಿಯನ್ನ ಪುನರ್ ಸ್ಥಾಪಿಸಲು ನಿಯಮ ರೂಪಿಸಿದೆ. ಹೀಗಿರುವಾಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಡಿ ಸಿ, ಎ ಸಿ ಅಧಿಕಾರಿಗಳು ಇದನ್ನ ಮನೆಗಾಣದೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೊಡ್ಡ ಹಟ್ಟಿ ಗ್ರಾಮದ ಸರ್ವೆ ನಂ 24ಮತ್ತು 24/ಎ ವಿಷಯ ಅಂದರೆ ಖರೀದಿದಾರ ನೆಕ್ಕುಂಟಿ ರಾಜಲಕ್ಷ್ಮಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ 28/10/2017ರಂದು ಚೆಂದಿಲಾಲ್ ಕೇಸ್ ಬಿಹಾರದ ಜನರಲ್ ಕೇಸ್ ಅನ್ನು ಉದಾಹರಣೆ ನೀಡಿ ಇದು 25ವರ್ಷದ ಹಿಂದೆ ಪರೆಬಾರೆ ಆಗಿದೆ. ಹಾಗಾಗಿ 1963ರ ಲಿಮಿಟೇಷನ್ ಕಾಯ್ದೆಗೆ ಒಳಗಾಗಿ ಮಾರಾಟ ಸರಿಯಾಗಿದೆ ಎಂದು ತೀರ್ಪು ನೀಡಿದೆ. ಆದರೆ ಮಂಚೇಗೌಡರ ವಿಷಯದಲ್ಲಿ 1984ರಲ್ಲಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ ಮತ್ತು ನೆಕ್ಕುಂಟಿ ಪ್ರಕರಣದ ಸರ್ವೆನಂಬರ್ ಬೇರೆ ಬೇರೆ ಇದೆ ಎಂದು ಎ ಸಿ, ಡಿ ಸಿ ಆದೇಶ ಹೊರಡಿಸಿದ ಬಗ್ಗೆ ಸುಪ್ರೀಂಕೋರ್ಟ್ಗೆ ಸರ್ಕಾರದ ಪರ ವಕೀಲರು ಸರಿಯಾಗಿ ದಾಖಲಿಸದೆ ಈ ತೀರ್ಪು ನೀಡಿದೆ. ಇದನ್ನ ಹಿಡಿದುಕೊಂಡು ಎಲ್ಲಾ ಜಿಲ್ಲೆಗಳಲ್ಲಿ ಅದರಲ್ಲೂ ವಿಶೇಷವಾಗಿ ಬೆಂಗಳೂರು ಮೈಸೂರು ಇನ್ನೂ ಬೇರೆ ಬೇರೆ ಕಡೆ PTCL ಕಾಯ್ದೆ ವಿರುದ್ಧ ಡಿ.ಸಿ ಕೋರ್ಟುಗಳು ತೀರ್ಪು ನೀಡಲಾಗುತ್ತಿದೆ.

ಇದು ಕಾಯ್ದೆ 1978ರ ಕಲಂ5(1)ಎ ರಂತೆ 1964ರ ಕಲಂ(39)ವಿವರಣೆಯನ್ನ ಎ ಸಿ, ಡಿ ಸಿ ಅಧಿಕಾರಿಗಳು ಪರಿಗಣಿಸುತ್ತಿಲ್ಲ. ನೆಕ್ಕುಂಟಿ ಪ್ರಕರಣವನ್ನು ಮುಂದಿಡುವ ಎ ಸಿ ಮತ್ತು ಡಿ ಸಿ ಅಧಿಕಾರಿಗಳು 2019ರ ಸುಪ್ರೀಂಕೋರ್ಟ್ ದಲಿತ ರೈತರ ಪರವಾದ ತೀರ್ಪು ನೀಡಿದ್ದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಹಾಗೆಯೇ ಜಾರ್ಖಂಡ್ SC/ST ಜಮೀನು ಕಾಯ್ದೆ ಪ್ರಕಾರ 3/3/2020 ರ(SAR CIV 42644)ತೀರ್ಪು ನೀಡಿದೆ. ಇದನ್ನ ಯಾಕೆ ಅಧಿಕಾರಿಗಳು ಪರಿಗಣಿಸುತ್ತಿಲ್ಲ? ಇದು ಇಂಡಿಯನ್ ಲಿಮಿಟೇಷನ್ ಕಾಯ್ದೆಗೆ ಒಳಪಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರೂ ಇದನ್ನ ತಿಳಿಯದ ಎ ಸಿ, ಡಿ ಸಿ ಅಧಿಕಾರಿಗಳು ಭೂ ಮಾಲೀಕರು, ಮಾಫಿಯ ರಾಜಕಾರಣಿಗಳ ಮತ್ತು ತಮ್ಮ ಹೊತ್ತಿನ ಕೂಳಿಗೆ ತಮ್ಮವರನ್ನೆ ಬಡಿದು ತಿನ್ನಲು ನಿಂತಿರುವ ಲೆಟರ್ ಪ್ಯಾಡ್ ಸ್ವಯಂ ಘೋಷಿತ ಏಜೆಂಟ್ ಗಳಿಂದ ಇಂದು ಈ PTCL ಕಾಯ್ದೆ ಜಾರಿಯಾಗದೆ ನಿಂತಿದೆ.

ನೆಕ್ಕಂಟಿ ಕೇಸ್ ನಿಂದ ಇಲ್ಲಿಯತನಕ ಸುಮಾರು 25 ಸಾವಿರ ಕೇಸ್‌ಗಳನ್ನು ಡಿಸಿಗಳು ವಜಾಗೊಳಿಸಿದ್ದಾರೆ. ಇನ್ನೂ ಬಾಕಿ 20 ಸಾವಿರ ಕೇಸ್‌ಗಳು ವಿಚಾರಣೆಯಲ್ಲಿವೆ. ಹಾಗಾಗಿ ದಲಿತರು 2 ಲಕ್ಷ ಎಕರೆಗಿಂತ ಹೆಚ್ಚಿನ ಭೂಮಿ ಕಳೆದುಕೊಂಡಿದ್ದಾರೆ. ಲಕ್ಷಾಂತರ ಜನರ ಜೀವನ ನಾಶವಾಗಿದೆ.  ವಿಶೇಷ ಕಾಯ್ದೆಯಾಗಿರುವುದರಿಂದ ಕಾಲಮಿತಿ ಅನ್ವಯಿಸುವುದಿಲ್ಲ. ಆದರೂ ಬಲಾಢ್ಯರ ಕುತಂತ್ರದಿಂದ ಇದಕ್ಕೆಲ್ಲ ನೇರ ಕಾರಣ ಕಂದಾಯ ಇಲಾಖೆಯ ನೋಂದಣಿಧಿಕಾರಿಗಳು, VA, RI, ತಹಸೀಲ್ದಾರ್ ಸೇರಿಕೊಂಡು ದಲಿತರಿಗೆ ಕೊಳ್ಳಿ ಇಡುತ್ತಿದ್ದಾರೆ.

PTCL ಕಾಯ್ದೆಗೆ 10.12.11ಕಾಲಂ ರಂತೆ ಯಾವ ಕಾಲ ಮಿತಿ ಇದಕ್ಕೆ ಅನ್ವಯವಾಗುವುದಿಲ್ಲ.
ಎ ಸಿ ಗೆ ಅರ್ಜಿ ಹಾಕಿ ನಂತರ ಮೇಲ್ಮನವಿಗೆ 90 ದಿನಗಳ ಒಳಗೆ ಅರ್ಜಿ ಸಲ್ಲಿಸಲು ಮಿತಿ ಇದೆ. ಹಾಗೆ ಕಾಲ ಮಿತಿಗೆ ಕಾರಣ ತಿಳಿಸಿ ಮುಂದುವರೆಯಲು ಅವಕಾಶವಿದೆ. ಇಂತಹ ಪರಿಸ್ಥಿತಿಯಲ್ಲಿ ಕರ್ನಾಟಕದ ಶೋಷಿತರ ದಲಿತರ ಪರ ಕಾಳಜಿಯುಳ್ಳ ಸಂಘಟಕರು ಈ ಹೋರಾಟದ ಪರ ನಿಲ್ಲಬೇಕು. ಒಂದಷ್ಟು ಈ ವಿಷಯ ಕುರಿತು ಅಧ್ಯಯನ ಮಾಡಿ ಜಿಲ್ಲಾಧಿಕಾರಿಗಳಿಗೆ, ಉಪ ವಿಭಾಗಾಧಿಕಾರಿಗಳಿಗೆ ಮನವರಿಕೆ ಮಾಡಿಕೊಡಬೇಕು. ಸರ್ಕಾರಕ್ಕೆ ಈ ಕಾಯ್ದೆ ಜಾರಿಗೆ ತರಲು ಸುಗ್ರೀವಾಜ್ಞೆ ಹೊರಡಿಸಲು ಒತ್ತಡ ತಂದು ರಾಜ್ಯದ ಪರಿಶಿಷ್ಟ ಜಾತಿ ವರ್ಗಗಳ ಜನರಿಗೆ ಭೂಮಿ ವಾಪಸ್ ಕೊಡಿಸಲು ಎಲ್ಲಾ ಹೋರಾಟಗಾರರು ಮುಂದಾಗಬೇಕು. ಚುನಾವಣೆಯಲ್ಲಿ ಬೀದಿಗಿಳಿದು ಹೋರಾಟ ಮಾಡಿದಂತೆ ಈಗಾಗಲೇ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ 183 ದಿನಗಳಿಂದ ನಡೆಯುತ್ತಿರುವ ಭೂ ಹೀನ ಬಡವರ ಹೆಗಲಿಗೆ ಹೆಗಲೊಡ್ಡೋಣ.

ಕಂದೇಗಾಲ ಶ್ರೀನಿವಾಸ
ರಾಜ್ಯ ಉಪಾಧ್ಯಕ್ಷರು ಕರ್ನಾಟಕ ರೈತ ಸಂಘ (ಎಐಕೆಕೆಎಸ್) ಬೆಂಗಳೂರು

ಇದನ್ನೂ ಓದಿ; ಉದ್ದೇಶಪೂರ್ವಕ ಜಾತಿನಿಂದನೆ ಮಾತ್ರ ಅಪರಾಧವಾ?; ಅಟ್ರಾಸಿಟಿ ಕಾನೂನು ನಿಷ್ಕ್ರಿಯೆ ಮಾಡಲಾಗುತ್ತಿದೆಯೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...

ಪೊಲೀಸರ ಅನುಮತಿ ಪಡೆದಿದ್ದರೂ ನೀಟ್ ಪ್ರತಿಭಟನೆಗೆ ವಾಟ್ಸಾಪ್ ಗ್ರೂಪ್ ರಚಿಸಿದ್ದಕ್ಕಾಗಿ ಅಸ್ಸಾಂನಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿಗಳ ಬಂಧನ

ಅಸ್ಸಾಂನಲ್ಲಿ ಬಿಜೆಪಿ ಸರ್ಕಾರದ ಕೋಮುವಾದಿ ಧೋರಣೆ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ದಮನದ ದಾರುಣ ಚಿತ್ರಣವೊಂದು ಮತ್ತೆ ಮುನ್ನೆಲೆಗೆ ಬಂದಿದೆ. ದೇಶಾದ್ಯಂತ ಸದ್ದು ಮಾಡಿದ್ದ 'ನೀಟ್' (NEET) ಅಕ್ರಮಗಳ ವಿರುದ್ಧ ಧ್ವನಿ ಎತ್ತಲು ಮತ್ತು...

‘ವಿದ್ಯಾರ್ಥಿಗಳ ಮೇಲಿನ ವಿಕೃತ ದಾಳಿಗೆ ನಿಮ್ಮ ಸಮ್ಮತಿ ಇತ್ತೇ?’: ಪತ್ರದ ಮೂಲಕ ಅಮಿತ್ ಶಾಗೆ ರಾಹುಲ್ ಗಾಂಧಿ ಪ್ರಶ್ನೆ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾದ ದೇಶವ್ಯಾಪಿ ವಿದ್ಯಾರ್ಥಿ ಆಂದೋಲನದ ವೇಳೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯ ಮತ್ತು ಮಿತಿಮೀರಿದ ಬಲಪ್ರಯೋಗದ ವಿರುದ್ಧ ಲೋಕಸಭೆಯ ವಿರೋಧ...

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭಿಜೀತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಹೋರಾಟವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಕಾಕ್ರೋಚ್‌ಗಳಿಗೆ ಅಭಿನಂದಿಸಿದ ಸೋನಮ್ ವಾಂಗ್‌ಚುಕ್ – ಪ್ರಕಾಶ್‌ ರಾಜ್

ದೇಶದ ಯುವಜನರ ಹಲವು ದಿನಗಳ ಹೋರಾಟದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮುಂದೆ ಮಂಡಿಯೂರಿದೆ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಗೆಲುವಿಗೆ ಕಾಕ್ರೋಚ್ ಜನತಾ ಪಕ್ಷದ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿರಳೆಗಳ ಹರ್ಷೋದ್ಗಾರ: ದೆಹಲಿ ಪೊಲೀಸರಿಂದ ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ

ದೇಶಾದ್ಯಂತ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ನಡುವೆ ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದು, ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್‌ ಜನತಾ...

ಕಾಕ್ರೋಚ್‌ಗಳಿಗೆ ಮಣಿದ ಮೋದಿ ಸರ್ಕಾರ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು (ಜುಲೈ 25) ಪ್ರಧಾನ ಮಂತ್ರಿಗಳಿಗೆ ತಮ್ಮ...

ಅಭಿಜೀತ್ ದಿಪ್ಕೆಗೆ ಟೈಫಾಯ್ಡ್; ಪ್ರತಿಭಟನೆ ಮುಂದುವರಿಯಲಿದೆ ಎಂದ ಸಿಜೆಪಿ ಸಂಸ್ಥಾಪಕ

ತನಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ ಎಂದು ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಇಂದು ಹೇಳಿದ್ದಾರೆ. "ನನ್ನ ಅನಾರೋಗ್ಯವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ...

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...