ಮುಂಬರುವ ರಾಜ್ಯಸಭಾ ಚುನಾವಣೆಗೆ ಸೋಮವಾರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ತನ್ನ ರಾಷ್ಟ್ರೀಯ ವಕ್ತಾರ ಸಾಕೇತ್ ಗೋಖಲೆ ಸೇರಿದಂತೆ 6 ಜನರ ಹೆಸರನ್ನು ಅಭ್ಯರ್ಥಿಗಳಾಗಿ ಸೂಚಿಸಿದೆ.
ಸಾಕೇತ್ ಗೋಖಲೆ ಜೊತೆಗೆ ಟಿಎಂಸಿ ರಾಜ್ಯಸಭಾ ಸಂಸದ ಡೆರೆಕ್ ಒ’ಬ್ರೇನ್, ಸಂಸದರಾದ ಡೋಲಾ ಸೇನ್, ಸುಖೇಂದು ಶೇಖರ್ ರೇ, ಟಿಎಂಸಿ ಸದಸ್ಯರಾದ ಸಮೀರುಲ್ ಇಸ್ಲಾಂ ಮತ್ತು ಪ್ರಕಾಶ್ ಚಿಕ್ ಬರಾಕ್ ಅವರನ್ನು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಹೆಸರಿಸಿದೆ.
ಓ’ಬ್ರೇನ್, ಸೇನ್ ಮತ್ತು ರೇಗೆ ಇದು ಪುನರಾವರ್ತಿತ ಆಯ್ಕೆಯಾಗಿದೆ. ಆದರೆ ಗೋಖಲೆಯವರು ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಂಡಿರುವುದು ಇದೇ ಮೊದಲು. ಗೋಖಲೆ ಅವರ ಜೊತೆಗೆ, ಇತರ ಇಬ್ಬರು ಹೊಸ ಮುಖಗಳು ಇಸ್ಲಾಂ, ಬಾಂಗ್ಲಾ ಸಂಸ್ಕೃತಿ ಮಂಚ ಅಧ್ಯಕ್ಷ ಸಮೀರುಲ್ ಇಸ್ಲಾಂ ಮತ್ತು ಟಿಎಂಸಿಯ ಅಲಿಪುರ್ದೂರ್ ಜಿಲ್ಲಾ ಅಧ್ಯಕ್ಷ ಪ್ರಕಾಶ್ ಚಿಕ್ ಬರಾಕ್ ನಾಮನಿರ್ದೇಶನಗೊಂಡಿದ್ದಾರೆ.
”ಮುಂಬರುವ ರಾಜ್ಯಸಭಾ ಚುನಾವಣೆಗೆ ಸಂಸದ ಡೆರೆಕ್ ಒ’ಬ್ರೇನ್, ಸಂಸದ ಡೋಲಾ ಸೇನ್, ಸುಖೇಂದು ಶೇಖರ್ ರೇ, ಸಮೀರುಲ್ ಇಸ್ಲಾಂ, ಪ್ರಕಾಶ್ ಚಿಕ್ ಬರಾಕ್ ಮತ್ತು ಸಾಕೇತ್ ಗೋಖಲೆ ಅವರ ಉಮೇದುವಾರಿಕೆಯನ್ನು ಘೋಷಿಸಲು ನಾವು ಬಹಳ ಸಂತೋಷಪಡುತ್ತೇವೆ. ಅವರು ಜನರಿಗೆ ಇನ್ನಷ್ಟು ಸೇವೆ ಸಲ್ಲಿಸುವುದನ್ನು ಮುಂದುವರೆಸಲಿ. ಎಲ್ಲರಿಗೂ ನಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸುತ್ತೇವೆ” ಎಂದು ಟಿಎಂಸಿ ಟ್ವೀಟ್ ಮಾಡಿದೆ.
We take great pleasure in announcing the candidatures of @derekobrienmp , @Dolasen7 , @Sukhendusekhar, @Samirul65556476 , @ChikPrakash , and @SaketGokhale for the forthcoming Rajya Sabha elections. May they persist in their dedication to serving the people and uphold Trinamool's…
— All India Trinamool Congress (@AITCofficial) July 10, 2023
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರಿಗೆ ಟ್ವೀಟ್ ಮಾಡಿ ಕೃತಜ್ಞತೆ ಸಲ್ಲಿಸಿದ ಗೋಖಲೆ ಅವರು, ”ನನ್ನ ಮೇಲಿನ ನಂಬಿಕೆ ಮತ್ತು ರಾಜಕೀಯೇತರ ಹಿನ್ನೆಲೆಯಿಂದ ಬಂದ ಮಧ್ಯಮ ವರ್ಗದ ಯುವಕನಿಗೆ ಈ ಅವಕಾಶವನ್ನು ನೀಡಿದ್ದಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಅವರು ನನ್ನ ಶಕ್ತಿಯ ಮೂಲವಾಗಿದ್ದಾರೆ, ಸಾರ್ವಜನಿಕ ಸೇವೆಗಾಗಿ ನನ್ನ ಸ್ಫೂರ್ತಿ ಮತ್ತು ಕಠಿಣ ಸಮಯದಲ್ಲಿ ನನ್ನ ಮತ್ತು ನನ್ನ ಕುಟುಂಬಕ್ಕೆ ಬೆಂಬಲವಾಗಿ ನಿಂತ ಗಟ್ಟಿಯಾದ ಕಂಬಗಳಾಗಿದ್ದಾರೆ” ಎಂದು ಹೇಳಿದ್ದಾರೆ.
ಓ’ಬ್ರೇನ್ ಅವರನ್ನು ”ಮಾರ್ಗದರ್ಶಿ ಮತ್ತು ರಕ್ಷಾಕವಚ” ಎಂದು ಗೋಖಲೆ ಕರೆದಿದ್ದಾರೆ. ”ಡೆರೆಕ್ ಒ’ಬ್ರೇನ್ ಅವರು ನನಗೆ ರಾಜಕೀಯದ ಪಾಠವನ್ನು ಕಲಿಸಿದ್ದಾರೆ ಮತ್ತು ಜೀವನದ ಪ್ರತಿ ಹಂತದಲ್ಲೂ ನನ್ನ ಸಲಹೆಗಾರರಾಗಿದ್ದಾರೆ” ಎಂದು ಗೋಖಲೆ ಹೇಳಿದ್ದಾರೆ.
I’m extremely grateful to my leaders @MamataOfficial & @abhishekaitc for fielding me as a candidate for election as Member of Parliament, Rajya Sabha.
I’m overwhelmed by their faith in me & for giving this opportunity to a young middle-class boy who comes from a non-political… https://t.co/q13h9F79up
— Saket Gokhale (@SaketGokhale) July 10, 2023
”ಓ’ಬ್ರೇನ್, ರೇ ಮತ್ತು ಸೇನ್ ಅವರಲ್ಲದೆ, ಕಾಂಗ್ರೆಸ್ ಸಂಸದ ಪ್ರದೀಪ್ ಭಟ್ಟಾಚಾರ್ಯ, ಟಿಎಂಸಿಯ ಅಸ್ಸಾಂ ನಾಯಕಿ ಸುಶ್ಮಿತಾ ದೇವ್ ಮತ್ತು ಅದರ ಡಾರ್ಜಿಲಿಂಗ್ ನಾಯಕಿ ಶಾಂತಾ ಛೆಟ್ರಿ ಅವರ ಅಧಿಕಾರಾವಧಿ ಕೊನೆಗೊಂಡಿದ್ದು, ಈ ಸ್ಥಾನಗಳು ಇದೀಗ ಒಟ್ಟು ಆರು ಸ್ಥಾನಗಳು ಖಾಲಿಯಾದವು.
ಗೋವಾದ ಮಾಜಿ ಮುಖ್ಯಮಂತ್ರಿ ಲುಜಿನ್ಹೋ ಫಲೈರೊ ಏಪ್ರಿಲ್ನಲ್ಲಿ ಟಿಎಂಸಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಪಶ್ಚಿಮ ಬಂಗಾಳದಿಂದ ಏಳನೇ ರಾಜ್ಯಸಭಾ ಸ್ಥಾನವೂ ಖಾಲಿಯಾಗಿದೆ. ಜುಲೈ 24 ರಂದು ಈ ಆರು ಸ್ಥಾನಗಳಿಗೆ ಚುನಾವಣೆಯೊಂದಿಗೆ ಆ ಸ್ಥಾನಕ್ಕೂ ಉಪಚುನಾವಣೆ ನಡೆಯಲಿದೆ.
ಭಾರತದ ಚುನಾವಣಾ ಆಯೋಗವು ಗುಜರಾತ್, ಪಶ್ಚಿಮ ಬಂಗಾಳ ಮತ್ತು ಗೋವಾ ಸೇರಿ ಒಟ್ಟು ಹತ್ತು ರಾಜ್ಯಸಭಾ ಚುನಾವಣೆಗಳ ವೇಳಾಪಟ್ಟಿಯನ್ನು ಪ್ರಕಟಿಸಿತ್ತು. ಜುಲೈ 24 ರಂದು ಮತದಾನ ನಡೆಯಲಿದ್ದು, ಅದೇ ದಿನ ಮತ ಎಣಿಕೆ ನಡೆಯಲಿದೆ. ಚುನಾವಣಾ ಸಮಿತಿಯು ಬಿಡುಗಡೆ ಮಾಡಿದ ಅಧಿಸೂಚನೆಯ ಪ್ರಕಾರ, ಆಯಾ ಸದಸ್ಯರ ನಿವೃತ್ತಿಯಿಂದಾಗಿ ಈ ಮೂರು ರಾಜ್ಯಗಳಲ್ಲಿ 10 ರಾಜ್ಯಸಭಾ ಸ್ಥಾನಗಳು ಖಾಲಿಯಾಗುತ್ತಿವೆ.
ಪಶ್ಚಿಮ ಬಂಗಾಳದಿಂದ, ಟಿಎಂಸಿ ಪಕ್ಷದ ಸದಸ್ಯರಲ್ಲಿ ಡೆರೆಕ್ ಒ’ಬ್ರೇನ್, ಡೋಲಾ ಸೇನ್, ಸುಶ್ಮಿತಾ ದೇವ್, ಶಾಂತಾ ಛೆಟ್ರಿ ಮತ್ತು ಸುಖೇಂದು ಶೇಖರ್ ರೇ ಸೇರಿದಂತೆ ಅವರ ಅವಧಿ ಮುಗಿಯುತ್ತಿದೆ. ಮಾಜಿ ಕಾಂಗ್ರೆಸ್ ಸದಸ್ಯರಾದ ದೇವ್ ಮತ್ತು ಛೆಟ್ರಿ ಅವರನ್ನು ಸದ್ಯಕ್ಕೆ ಹೊರಗಿಡಲಾಗಿದೆ.
ಇದನ್ನೂ ಓದಿ: ಟ್ವಿಟರ್ಗೆ ಮೋದಿ ಸರ್ಕಾರ ಬೆದರಿಕೆ ಹಾಕಿದ ವಿಚಾರ: ದಾಖಲೆ ಸಮೇತ ಮಾಹಿತಿ ಹಂಚಿಕೊಂಡ ಟಿಎಂಸಿ ವಕ್ತಾರ