Homeಕರ್ನಾಟಕಲಿಂಗಾಯತರು ಅರ್ಥ ಮಾಡಿಕೊಳ್ಳಲೇಬೇಕಾದ ಪಾಠವಿದು!

ಲಿಂಗಾಯತರು ಅರ್ಥ ಮಾಡಿಕೊಳ್ಳಲೇಬೇಕಾದ ಪಾಠವಿದು!

ಇವತ್ತಿನ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಭೂಪಟದಲ್ಲಿ ಲಿಂಗಾಯತರು ಮೇಲ್ಜಾತಿಯ ಬೆಚ್ಚಪ್ಪುಗೆಯಲ್ಲಿ ಇದ್ದಾರಾದರು, ಆರೆಸೆಸ್ ನಂಬುವ ಚಾತುರ್ವರ್ಣದ ವ್ಯವಸ್ಥೆಯಲ್ಲಿ ಅವರು ಯಾವತ್ತಿಗೂ ‘ಶೂದ್ರ ವಿಂಗಡಣೆಗೇ ಸೀಮಿತವಾಗುವಂತವರು.

- Advertisement -
- Advertisement -

ಮೊನ್ನೆ ಸಿಎಂ ಯಡಿಯೂರಪ್ಪನವರು ದಿಲ್ಲಿಗೆ ಹೋಗಿಬಂದರು. ಹಾಗೆ ಹೋಗಲು ಅವರ ಬಳಿ ಎರಡು ಕಾರಣಗಳಿದ್ದವು. ಒಂದು, ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಕೇಂದ್ರದಿಂದ ಒಂದಷ್ಟು ಪರಿಹಾರ ಮಂಜೂರು ಮಾಡಿಸಿಕೊಳ್ಳೋದು. ಎರಡನೆಯದು, ಸಚಿವ ಸಂಪುಟ ರಚನೆಗೆ ಹೈಕಮಾಂಡಿನಿಂದ ಅನುಮತಿ ಪಡೆದು ಬರೋದು. ಮೊದಲನೇ ಕೆಲಸದಲ್ಲಿ ಅವರು ಸಂಪೂರ್ಣ ಸೋತುಹೋದರೂ ಎರಡನೇ ಕೆಲಸದಲ್ಲಿ ಭಾಗಶಃ ಗೆದ್ದು ಬಂದಿದ್ದಾರೆ. ಈಗವರ ಅರೆಸಂಪುಟವೂ ಸಿದ್ದವಾಗಿದೆ. ಆದರೆ ನೆರೆ ಮತ್ತು ಸಂಪುಟ ರಚನೆ ಅಬ್ಬರದಲ್ಲಿ ಅವರ ದಿಲ್ಲಿ ಭೇಟಿಯ ಒಂದು ಸಂಗತಿ ಹೆಚ್ಚು ಮಹತ್ವ ಪಡೆಯದೇ ಹೋಯ್ತು. ಅದು ಯಡಿಯೂರಪ್ಪನವರು ದಿಲ್ಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯನ್ನು ಭೇಟಿಯಾದದ್ದು. ಆ ಹುದ್ದೆಯಲ್ಲಿರೋದು ಬೇರಾರೂ ಅಲ್ಲ,ಕರ್ನಾಟಕದಿಂದಲೇ ಹೋದ ಬಿ.ಎಲ್.ಸಂತೋಷ್! ಇನ್ನೂ ನಿಖರವಾಗಿ ಹೇಳಬೇಕೆಂದರೆ, ಯಡಿಯೂರಪ್ಪನವರಿಗೆ ಬಿಜೆಪಿಯೊಳಗೆ ಮಗ್ಗುಲ ಮುಳ್ಳಾಗಿ ಹೆಜ್ಜೆಹೆಜ್ಜೆಗು ಕಾಡುತ್ತಾ ಬಂದ ವ್ಯಕ್ತಿ. ಈ ಬ್ರಹ್ಮಚಾರಿ ಬ್ರಾಹ್ಮಣ ಮಹಾಶಯರ ಹಿಕಮತ್ತಿನಿಂದಲೇ ಹಿಂದೆ ತಾನು ಬಿಜೆಪಿ ತೊರೆದು ಕೆಜೆಪಿ ಕಟ್ಟಬೇಕಾಯ್ತು;ವಾಪಾಸ್ ಬಿಜೆಪಿಗೆ ಬಂದಮೇಲೂ ತನ್ನ ವಿರುದ್ಧ ಬ್ರಿಗೇಡು ಪಿತೂರಿಗಳು ನಡೆದದ್ದೂ ಸಂತೋಷ್ ಶಿಷ್ಯರ ಹಿಕಮತ್ತಿನಿಂದಲೇ ಎಂಬುದನ್ನು ಸ್ವತಃ ಯಡಿಯೂರಪ್ಪನವರೇ ಹಲವು ಬಾರಿ ಬಹಿರಂಗವಾಗಿ ಹೇಳಿಕೊಂಡಿದ್ದುಂಟು.

ಈಗ ಅಂಥಾ ಸಂತೋಷ್‌ರವರ ಮುಂದೆಯೇ ಯಡಿಯೂರಪ್ಪನವರು ಮಂತ್ರಿಮಂಡಲ ರಚನೆಗಾಗಿ ಕೈಕಟ್ಟಿ ನಿಲ್ಲಬೇಕಾದ ಪರಿಸ್ಥಿತಿ ಬಂದೆರಗಿದೆ. ಆ ವ್ಯಕ್ತಿಯ ಬಳಿಹೋಗಿ ಚರ್ಚಿಸಿದ ನಂತರವಷ್ಟೇ ಯಡಿಯೂರಪ್ಪನವರ ಸಂಪುಟ ಹಿಗ್ಗಲು ಅನುಮತಿ ಸಿಕ್ಕಿರೋದು. ಇದು ಪಕ್ಷದೊಳಗೆ ನಡೆದ ಅಕಸ್ಮಾತ್ ಹಾವುಏಣಿಯ ಆಟವಲ್ಲ, ವ್ಯವಸ್ಥಿತವಾಗಿ ಹೆಣೆದ ಹುನ್ನಾರ. ಯಾಕೆಂದರೆ ಈ ಸಂತೋಷ್‌ರನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಹುದ್ದೆಗೆ ಮೇಲ್ದರ್ಜೆಗೇರಿಸಿದ್ದೇ ತೀರಾ ಇತ್ತೀಚೆಗೆ. ಸ್ಪಷ್ಟವಾಗಿ ಹೇಳಬೇಕೆಂದರೆ, ಲೇಟೆಸ್ಟ್ ಆಪರೇಷನ್ ಕಮಲದ ವಹಿವಾಟುಗಳು ಶುರುವಾಗಿ ಇನ್ನೇನು ಯಡಿಯೂರಪ್ಪನವರು ಸಿಎಂ ಆಗಿಯೇ ಬಿಡುತ್ತಾರೆ ಎಂಬ ಎಲ್ಲಾ ಸಾಧ್ಯತೆಗಳು ನಿಶ್ಚಯವಾದ ನಂತರವೇ!

ಬಿಜೆಪಿಯನ್ನು ನಿಂತ್ರಿಸುತ್ತಿರುವುದು ಆರೆಸೆಸ್ ಎಂಬುದಾಗಲಿ, ಈ ಆರೆಸೆಸ್ ಯಾವ ಸಮುದಾಯದ ಕ್ಷೇಮಾಭಿವೃದ್ಧಿ ‘ಸಂಘ’ ಎಂಬುದಾಗಲಿ ಈಗ ರಹಸ್ಯವಾಗೇನೂ ಉಳಿದಿಲ್ಲ. ರಾಜಕೀಯ ಅನುಕೂಲಕ್ಕಾಗಿ ಆಯಾ ಪ್ರಾಂತ್ಯಗಳ ಮೇಲ್ವರ್ಗಗಳ ಪ್ರತಿನಿಧಿಯಂತೆ ಬಿಜೆಪಿ ವರ್ತಿಸಿದರೂ, ಅದರ ಸೈದ್ಧಾಂತಿಕ ಬೆನ್ನೆಲುಬಾದ ಆರೆಸೆಸ್‌ನ ಅಜಮಾಸು ಈ ನೂರು ವರ್ಷಗಳ ಅವಧಿಯಲ್ಲಿ ಅದಕ್ಕೆ ಮುಖ್ಯಸ್ಥನಾಗಲು ಸಾಧ್ಯವಾದದ್ದು ಕೇವಲ ಒಬ್ಬ ಬ್ರಾಹ್ಮಣೇತರ ವ್ಯಕ್ತಿಗಷ್ಟೇ ಎಂಬುದನ್ನೂ ನಾವು ಮರೆಯಬಾರದು.

ಇವತ್ತಿನ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಭೂಪಟದಲ್ಲಿ ಲಿಂಗಾಯತರು ಮೇಲ್ಜಾತಿಯ ಬೆಚ್ಚಪ್ಪುಗೆಯಲ್ಲಿ ಇದ್ದಾರಾದರು, ಆರೆಸೆಸ್ ನಂಬುವ ಚಾತುರ್ವರ್ಣದ ವ್ಯವಸ್ಥೆಯಲ್ಲಿ ಅವರು ಯಾವತ್ತಿಗೂ ‘ಶೂದ್ರ ವಿಂಗಡಣೆಗೇ ಸೀಮಿತವಾಗುವಂತವರು. ಬ್ರಾಹ್ಮಣರೂ ಅಲ್ಲದ, ವೈಶ್ಯರೂ ಆಗದ, ಯುದ್ಧ ಮಾಡುವ ಕ್ಷತ್ರಿಯರೂ ಅನಿಸಿಕೊಳ್ಳದ, ಕೃಷಿಯಂತಹ ‘ಶ್ರಮ’ದಾಯಕ ಕಸುಬುಗಳನ್ನು ನಂಬಿಬದುಕುವ ಲಿಂಗಾಯತರು ಈ ನಾಲ್ಕು ಅಂತಸ್ತಿನ ಮಹಡಿಯಲ್ಲಿ ತಳಮಹಡಿಗೆ ತಳ್ಳಲ್ಪಡದೆ ಇನ್ನೆಲ್ಲಿಗೆ ಸೇರಿಯಾರು? ಶೂದ್ರರನ್ನು ಈ ಚಾತುರ್ವರ್ಣ ವ್ಯವಸ್ಥೆಹೇಗೆಲ್ಲ ಬಳಸಿಕೊಳ್ಳುತ್ತಾ ಬಂದಿದೆ ಎಂಬುದನ್ನು ವಿವರಿಸುವ ಅಗತ್ಯವಿಲ್ಲ.

ತನ್ನೊಂದು ಸಂಪುಟ ರಚಿಸಿಕೊಳ್ಳುವ ಸ್ವಾತಂತ್ರ್ಯವೂ ಇಲ್ಲದೆ, ತನ್ನದೇ ಪಕ್ಷ ಕೇಂದ್ರ ಸರ್ಕಾರವಾಗಿದ್ದಾಗ್ಯೂ ಭೀಕರ ಪ್ರವಾಹಕ್ಕೆ ಪರಿಹಾರವನ್ನು ಮಂಜೂರು ಮಾಡಿಸಿಕೊಳ್ಳಲಿಕ್ಕೂ ಆಗದೆ ಜನರ ದೃಷ್ಟಿಯಲ್ಲಿ ‘ನಾಲಾಯಕ್ ಸಿಎಂ ಮೂದಲಿಕೆಗೆ ತುತ್ತಾಗಿರುವ ಯಡಿಯೂರಪ್ಪನವರದು ಇಂಥಾ ಚಾರಿತ್ರಿಕ ಹಿನ್ನೆಲೆಯ ಸಾಂದರ್ಭಿಕ ನಿದರ್ಶನವಷ್ಟೆ.

ಯಡಿಯೂರಪ್ಪನವರನ್ನು ಮುಂದಿಟ್ಟುಕೊಂಡು ಇಲ್ಲಿದ್ದ ಮೈತ್ರಿ ಸರ್ಕಾರವನ್ನು ಬೀಳಿಸುವುದು ಬಿಜೆಪಿಯ ಸೈದ್ಧಾಂತಿಕ ಮಿದುಳುಗಳ ಯೋಜನೆಯಾಗಿತ್ತೇ ವಿನಾಃ ಅವರನ್ನು ಸಿಎಂ ಮಾಡುವುದಾಗಿರಲಿಲ್ಲ. ಮಧ್ಯಂತರ ಚುನಾವಣೆಗೆ ಹೋಗಿ, ಯಡಿಯೂರಪ್ಪನವರ ಹಂಗಿಲ್ಲದೆ ನಡೆಯಲಿದ್ದ ಆ ಚುನಾವಣೆಯಲ್ಲಿ ಸ್ಪಷ್ಟ ಬಹುಮತದ ಜನಾದೇಶ ‘ಖರೀದಿ’ಸಿಕೊಂಡು ಒಬ್ಬ ಸಂಘನಿಷ್ಠ ವ್ಯಕ್ತಿಯನ್ನು (ಅದು ಬಿ.ಎಲ್.ಸಂತೋಷ್ ಎಂಬ ಮಾತಿದೆ) ಸಿಎಂ ಮಾಡುವ ಆಲೋಚನೆ ಅವರಿಗಿತ್ತು. ಆದರೆ ಯಡಿಯೂರಪ್ಪನವರ ಬ್ಲ್ಯಾಕ್‌ಮೇಲ್ ತಂತ್ರ ಮತ್ತು ಸ್ಪೀಕರ್-ಸುಪ್ರೀಂ ಕೋರ್ಟ್‌ನಂತಹ ಸಾಂವಿಧಾನಿಕ ಬಿಕ್ಕಟ್ಟುಗಳಿಂದಾಗಿ ಪರಿವಾರ ತನ್ನ ಯೋಜನೆಯಲ್ಲಿ ತುಸು ಬದಲಾವಣೆ ಮಾಡಿಕೊಳ್ಳಬೇಕಾಯ್ತು. ಆದರೆ ಅದಕ್ಕು ಮುನ್ನ ರಾಜ್ಯ ರಾಜಕಾರಣದಲ್ಲಿದ್ದ ಸಂತೋಷ್‌ರಿಗೆ ಪದೋನ್ನತಿ ಕೊಟ್ಟು ರಾಷ್ಟ್ರ ರಾಜಕಾರಣದ ಮೇಲ್ದರ್ಜೆಗೇರಿಸುವುದನ್ನು ಮರೆಯಲಿಲ್ಲ. ಆ ಮೂಲಕ ಯಡಿಯೂರಪ್ಪ ಸಿಎಂ ಆದರೂ ಸಂತೋಷ್‌ರ ಎದುರು ಕೈಕಟ್ಟಿ ನಿಲ್ಲುವಂತಹ ಅನಿವಾರ್ಯತೆಗೆ ರಾಜಕಾರಣವನ್ನು ಅಣಿಗೊಳಿಸಲಾಯ್ತು. ಇದರ ಭಾಗವಾಗಿಯೇ ಸಂಪುಟ ರಚನೆಗೆ ಸತಾಯಿಸಿದ್ದು, ಕಡೆಗೆ ಯಡಿಯೂರಪ್ಪ ಸಂತೋಷ್‌ರ ಮುಂದೆ ಅವಲತ್ತು ಕಂಡ ನಂತರವೇ ಗ್ರೀನ್‌ಸಿಗ್ನಲ್ ಸಿಕ್ಕಿದ್ದು.

ಇದನ್ನು ಕೇವಲ ರಾಜಕೀಯ ಸನ್ನಿವೇಶವಾಗಿಯಷ್ಟೆ ನೋಡದೆ, ಶೂದ್ರರನ್ನು ಪಳಗಿಸುವ ಮತ್ತು ಕಟ್ಟಕಡೆಗೆ ಅವರು ತಮ್ಮ ಮುಂದೆ ತಲೆಬಾಗಿ ನಿಲ್ಲುವಂತೆ ಮಾಡುವ ಚಾರಿತ್ರಿಕ ಹುನ್ನಾರದ ಭಾಗವಾಗಿಯೂ ನೋಡಬೇಕಿದೆ. ಭರತ ಖಂಡದ ಇತಿಹಾಸ ಸಾಗಿಬಂದಿರುವುದೇ ಇಂಥಾ ಹುನ್ನಾರಗಳ ಅಡ್ಡಹಾದಿಯಲ್ಲಿ.‘ಇವ ನಮ್ಮವ’ ಎಂಬ ಕಾರಣಕ್ಕೆ ಯಡಿಯೂರಪ್ಪನವರ ಬೆನ್ನಿಗೆ ನಿಲ್ಲಲು ಹೋಗಿ ಚಾತುರ್ವರ್ಣ ಪ್ರತಿಪಾದಕ ಬಿಜೆಪಿಯ ಸಾರಾಸಗಟು ಮತದಾರರು ಎನಿಸಿಕೊಂಡಿರುವ ಲಿಂಗಾಯತರು ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಅದಕ್ಕು ಮುನ್ನ ತನ್ನ ರಾಜಕೀಯ ಹಿತಾಸಕ್ತಿಗಾಗಿ ತನ್ನನ್ನು ನಂಬಿಹೊರಟಿರುವ ಲಿಂಗಾಯತ ಸಮುದಾಯಕ್ಕೆ ತಾನೆಂಥ ಚಾರಿತ್ರಿಕ ದ್ರೋಹ ಎಸಗುತ್ತಿದ್ದೇನೆ ಎಂಬುದನ್ನು ಯಡಿಯೂರಪ್ಪನವರೂ ಅರ್ಥ ಮಾಡಿಕೊಳ್ಳಬೇಕಾಗಿದೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ಲಿಂಗಾಯತ ಎಂಬುದು ಜಾತಿ ಅಲ್ಲವೇ ಅಲ್ಲ….ಲಿಂಗಾಯತರಲ್ಲಿ ಬ್ರಾಹ್ಮಣ ,ಕ್ಷತ್ರಿಯ, ವೈಶ್ಯ,ಶೂದ್ರ ಮೂಲದ ಒಳಪಂಗಡದವರಿದ್ದಾರೆ…..

  2. For heaven sake donot go with wrong information on caste Veerashaiva Lingayaths are more intelligent. Brave. Couraged people than so called subgroup shudra ksthriya all other brahmin groups . There is no major recognizable contribution to human society from bramins than Lingayaths. Santhosh may be now acting but he is now where recognised in Karnataka.

LEAVE A REPLY

Please enter your comment!
Please enter your name here

- Advertisment -

ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನರಿಗೆ ಬಾಬು ಜಗಜೀವನ್‌ ರಾಮ್‌ ಪ್ರಶಸ್ತಿ

ಹಿರಿಯ ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನ ಹಿರಿಯ ಸಾಧಕರು 2026ನೇ ಸಾಲಿನ ಬಾಬು ಜಗಜೀವನ್‌ ರಾಮ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಯಚೂರು ಜಿಲ್ಲೆಯ ಹಿರಿಯ ದಲಿತ ಹೋರಾಟಗಾರ...

ಗಾಜಾ; ಗೊಂಬೆಯೊಂದಿಗೆ ‘ಅಂತ್ಯಕ್ರಿಯೆ’ ಆಟ ಆಡುವ ಎಳೆಯ ಮಕ್ಕಳ ವಿಡಿಯೋ ವೈರಲ್; ಸುತ್ತಲಿನ ಘಟನೆಯನ್ನು ಪುನರಾವರ್ತಿಸುವ ಮಕ್ಕಳು

ಅಕ್ಟೋಬರ್ 2023 ರಲ್ಲಿ ಇಸ್ರೇಲಿ ಮಿಲಿಟರಿ ದಾಳಿಯನ್ನು ಪ್ರಾರಂಭಿಸಿದ ನಂತರ ಗಾಜಾದಿಂದ ದುಃಖಕರ ದೃಶ್ಯಗಳು ಹೊರಹೊಮ್ಮುತ್ತಿವೆ. ಇತ್ತೀಚಿನ ಒಂದು ಘಟನೆಯಲ್ಲಿ, ಚಿಕ್ಕ ಮಕ್ಕಳು ಅಂತ್ಯಕ್ರಿಯೆಗಾಗಿ ಗೊಂಬೆಯನ್ನು ಹೊತ್ತುಕೊಂಡು ಹೋಗುವುದನ್ನು ಕಾಣಬಹುದು - ಇದು ಅವರು...

ದೆಹಲಿ| ಆಳವಾದ ಚರಂಡಿಗೆ ಬಿದ್ದು ನೈರ್ಮಲ್ಯ ಕಾರ್ಮಿಕ ಸಾವು; ನ್ಯಾಯಕ್ಕೆ ಆಗ್ರಹಿಸಿದ ಮೃತನ ಕುಟುಂಬ

ಮಾರ್ಚ್ 30 ರಂದು ಪೂರ್ವ ದೆಹಲಿಯ ದಿಲ್ಶಾದ್ ಗಾರ್ಡನ್ ಪ್ರದೇಶದಲ್ಲಿ ಸುರಕ್ಷತಾ ಸಾಧನಗಳಿಲ್ಲದೆ ಆಳವಾದ ಚರಂಡಿ ಸ್ವಚ್ಛಗೊಳಿಸುವ ಸಮಯದಲ್ಲಿ ಯುವ ನೈರ್ಮಲ್ಯ ಕಾರ್ಮಿಕ ರಾಹುಲ್ ಎಂಬುವವರು ಸಾವನ್ನಪ್ಪಿದ್ದಾರೆ. ಮಧ್ಯಾಹ್ನ 2:00 ರ ಸುಮಾರಿಗೆ...

ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಆಸ್ಪತ್ರೆಗೆ ದಾಖಲು; ಕಾರ್ಯಕ್ರಮದಲ್ಲಿ ಏಕಾಏಕಿ ಕುಸಿದು ಬಿದ್ದು ಅಸ್ವಸ್ಥ

ಬೆಂಗಳೂರು: ಕರ್ನಾಟಕದ ನಿವೃತ್ತ ಲೋಕಾಯುಕ್ತ ಎನ್‌.ಸಂತೋಷ್‌ ಹೆಗ್ಡೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಭಾಷಣದ ವೇಳೆ ಕುಸಿದು ಬಿದ್ದು ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಏಪ್ರಿಲ್ 4ರ, ಶುಕ್ರವಾರ ಬೆಂಗಳೂರಿನ ಕೊಂಡಜಿ ಬಸಪ್ಪ ಸಭಾಂಗಣದಲ್ಲಿ...

ಎಸ್‌ಎಸ್‌ಎಲ್‌ಸಿಯಲ್ಲಿ ತೃತೀಯ ಭಾಷೆಗೆ ಗ್ರೇಡ್: ನಿರ್ಧಾರ ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ ರಾಜ್ಯಪಾಲ ಗೆಹ್ಲೋಟ್ 

ಬೆಂಗಳೂರು: 10ನೇ ತರಗತಿ ಪರೀಕ್ಷೆಯಲ್ಲಿ ತೃತೀಯ ಭಾಷೆಯ ವಿಷಯಕ್ಕೆ ಅಂಕಗಳನ್ನು ಬದಲಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ರಾಜ್ಯ ಸರ್ಕಾರವನ್ನು ಕೇಳಿದ್ದಾರೆ. ಸರ್ಕಾರವು ಈ ನಿರ್ಧಾರವನ್ನು "ಸಮಗ್ರವಾಗಿ ಪರಿಶೀಲಿಸಬೇಕು" ಎಂದು ಲೋಕಭವನವು...

ತಿರುಚ್ಚಿ ಪೂರ್ವದ ಪೆರಂಬೂರಿನಲ್ಲಿ ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಅಫಿಡವಿಟ್‌ಗಳಲ್ಲಿ ಹಲವು ವ್ಯತ್ಯಾಸಗಳಿರುವುದಾಗಿ ವರದಿ  

ಚೆನ್ನೈ: ನಟ ಮತ್ತು ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಎರಡು ಪ್ರತ್ಯೇಕ ಚುನಾವಣಾ ಅಫಿಡವಿಟ್‌ಗಳಲ್ಲಿ ವ್ಯತ್ಯಾಸಗಳು ಕಾಣಿಸಿಕೊಂಡಿದ್ದು, ವಿಧಾನಸಭಾ ಚುನಾವಣೆಗೆ ಮುನ್ನ ಕಾನೂನು ಮತ್ತು ರಾಜಕೀಯ ಪರಿಶೀಲನೆಗೆ ಅವಕಾಶ ನೀಡುವ ಸಾಧ್ಯತೆಯಿದೆ. ಪೆರಂಬೂರು ಮತ್ತು...

ಉತ್ತಮ್ ನಗರದಲ್ಲಿ ಶಾಂತಿ ಕಾಪಾಡುವಲ್ಲಿ ದೆಹಲಿ ಪೊಲೀಸರ ಪ್ರಯತ್ನಗಳನ್ನು ಶ್ಲಾಘಿಸಿದ ಎಪಿಸಿಆರ್

ಈದ್ ಅಲ್-ಫಿತರ್, ರಾಮ ನವಮಿ ಮತ್ತು ಹನುಮಾನ್ ಜಯಂತಿ ಸೇರಿದಂತೆ ಧಾರ್ಮಿಕ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯ ಉತ್ತಮ್ ನಗರ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿದ್ದಕ್ಕಾಗಿ ನಾಗರಿಕ ಹಕ್ಕುಗಳ ರಕ್ಷಣಾ...

ದಲಿತ ಸಮುದಾಯಕ್ಕೆ ಕ್ಷಮೆಯಾಚಿಸಿದ ನೇಪಾಳದ ಹೊಸ ಸರ್ಕಾರ

ಪ್ರಧಾನಿ ಬಾಲೇಂದ್ರ ಶಾ ಅವರ ನೇಪಾಳದ ಹೊಸ ಸರ್ಕಾರದ 100 ಅಂಶಗಳ ಸುಧಾರಣಾ ಕಾರ್ಯಸೂಚಿಯಡಿಯಲ್ಲಿ, ಮುಂದಿನ 15 ದಿನಗಳ ಒಳಗೆ ದಲಿತರು ಮತ್ತು ಐತಿಹಾಸಿಕವಾಗಿ ಹೊರಗಿಡಲ್ಪಟ್ಟ ಇತರೆ ಸಮುದಾಯಗಳಿಗೆ 'ಔಪಚಾರಿಕ ಕ್ಷಮೆಯಾಚನೆ' ಕೇಳುವುದಾಗಿ...

‘ಯಾರು ಹೆದರುತ್ತಾನೋ ಅವನು ಸತ್ತಂತೆ’: ರಾಘವ್ ಛಡ್ಡಾಗೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ ಎಎಪಿ ನಾಯಕ ಸೌರಭ್ ಭಾರದ್ವಾಜ್ 

ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ದೆಹಲಿ ಘಟಕದ ಮುಖ್ಯಸ್ಥ ಸೌರಭ್ ಭಾರದ್ವಾಜ್ ಅವರು ವೀಡಿಯೊ ಸಂದೇಶದಲ್ಲಿ ಆಪ್ ಸಂಸದ ರಾಘವ್ ಛಡ್ಡಾ ಅವರು ಸಂಸತ್ತಿನಲ್ಲಿ "ಸಾಫ್ಟ್ ಪಿಆರ್" ನಲ್ಲಿ ತೊಡಗಿದ್ದಾರೆ...

ಚಂಡೀಗಢ ಬಿಜೆಪಿ ಕಚೇರಿ ಸ್ಫೋಟ: ಪಂಜಾಬ್ ಕೌಂಟರ್ ಇಂಟೆಲಿಜೆನ್ಸ್ ಪಡೆಯಿಂದ ಇಬ್ಬರು ಶಂಕಿತರ ಮನೆಗಳ ಮೇಲೆ ದಾಳಿ

ಚಂಡೀಗಢದಲ್ಲಿರುವ ಪಂಜಾಬ್ ಬಿಜೆಪಿ ಕಚೇರಿಯ ಹೊರಗೆ ಸ್ಫೋಟ ನಡೆಸಿದ ಆರೋಪದ ಮೇಲೆ ಇಬ್ಬರು ಶಂಕಿತರ ಮನೆಗಳ ಮೇಲೆ  ಪಂಜಾಬ್ ಪೊಲೀಸರ ಗುಪ್ತಚರ ನಿಗ್ರಹ ದಳವು ಇಂದು ಮುಂಜಾನೆ ದಾಳಿ ನಡೆಸಿದೆ.  ರೋಪರ್ ಜಿಲ್ಲೆಯ ಮೊರಿಂಡಾ ಪ್ರದೇಶದ...