Homeಅಂಕಣಗಳುಯಜ್ಞ ನಿರ್ವಿಜ್ಞ ಟೆಂಗ್.. ಟೆಂಗ್... ಟೆಂಗ್.....!!

ಯಜ್ಞ ನಿರ್ವಿಜ್ಞ ಟೆಂಗ್.. ಟೆಂಗ್… ಟೆಂಗ್…..!!

- Advertisement -
- Advertisement -

ನಮಸ್ಕಾರ, ಆಘಾತವಾಣಿ ವಾರ್ತೆಗಳಿಗೆ ಸ್ವಾಗತ, ಓದುತ್ತಿರುವವರು ಅಟ್ಯಾಕ್ ಹನ್ಮಂತ.

ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಲಬೆರಕೆ ಸರ್ಕಾರವು ಎಲ್ಲಾ ಬಗೆಯಲ್ಲೂ ಕರ್ನಾಟಕ ರಾಜ್ಯವನ್ನು ಮೌಡ್ಯಗಳ ಕೊಂಪೆಯನ್ನಾಗಿ ಮಾಡೇ ಮಾಡುತ್ತೇವೆಂದು ಗುಪ್ತ ಪ್ರತಿಜ್ಞೆ ಮಾಡಿರುವ ಸಂಗತಿ ಇದೀಗ ಹೊರಬಿದ್ದಿದೆ. ಸಿಎಂ ಕುಮಾರಣ್ಣನವರು ರಾಜ್ಯದ ಸರ್ವ ಗುಡಿಗುಂಡಾರಗಳಿಗೂ ದೌಡಾಯಿಸಿ, ಉರುಳುಸೇವೆ ಮಾಡಿ ಬಂದ ನಂತರ, ಡೆಪ್ಯೂಟಿ ಸಿಎಂ ಪರಂ ಸಾಹೇಬ್ರು ತಮ್ಮ ವಿಧಾನಸೌಧದದ ಚೇಂಬರಿನೊಳಗೇ ವಾಸ್ತುಪ್ರಕಾರ ಬೆಂಕಿ ಹಾಕಿ, ಹೋಮ ನೆರವೇರಿಸಿ ತೀರ್ಥ ಕುಡಿದು ನೆತ್ತಿಗೆ ಸವರಿಕೊಂಡಿರುವುದನ್ನು ತಿಳಿದು, ಕರ್ನಾಟಕ ರಾಜ್ಯ ಇನ್ನು ಎಂತೆಂಥ ಮೌಡ್ಯಗಳಿಗೆ ತಲೆ ಕೊಡಬೇಕಾಗುತ್ತದೋ ಎಂದು ತಲೆಯಲ್ಲಿ ಮಿದುಳಿರುವ ಮಂದಿ ಆತಂಕಕ್ಕೆ ಒಳಗಾಗಿದ್ದಾರೆಂದು ವರದಿಯಾಗಿದೆ. ತಮ್ಮ ಕಛೇರಿಯ ಸೋಫಾ ಮೇಲೆ ಯಜ್ಞಕುಂಡವಿಟ್ಟು ‘ಪೊರ್ಕಿ ಹುಚ್ಚ ವೆಂಕಟ್’ ಚಿತ್ರದ ಸೂಪರ್‍ಹಿಟ್ ಹಾಡು ಹಾಡುತ್ತ ನರ್ತಿಸುತ್ತಿದ್ದ ಪರಂ ಸಾಹೇಬರ ಪಂಚೆಗೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟುಹೋದರೂ, ಅದರ ಪರಿವೆಯಿಲ್ಲದೆ ಟೆಂಗ್ ಟೆಂಗ್ ಟೆಂಗ್ ಎಂದು ಕುಣಿದಾಡುತ್ತ ಪರಂ ಯಜ್ಞವನ್ನು ಪೂರ್ಣಗೊಳಿಸಿದರು ಎಂದು ತಿಳಿದು ಬಂದಿದೆ.

****

ಮಣ್ಣಿನ ಮಕ್ಕಳು, ಮೊಮ್ಮಕ್ಕಳು, ಮತ್ತು ಮರಿಮಕ್ಕಳ ಪಕ್ಷವಾದ ಕೇಡಿಎಸ್ ಪಕ್ಷದ ಪಿಲ್ಲರ್‍ಗಳಾದ ದೊಡ್ಡಗೌಡರ ಮಕ್ಕಳಿಗೆ ಇತ್ತೀಚೆಗೆ ಮಣ್ಣಿನ ಮೇಲೆ ಜಿಗುಪ್ಸೆ ಹುಟ್ಟಿದೆ ಎಂಬ ಅನುಮಾನಗಳು ವ್ಯಕ್ತವಾಗುತ್ತಿದೆ. ಮಸಾಲಾ ಮಿಕ್ಸ್ ಸರ್ಕಾರದ ಸಚಿವ ಸಂಪುಟ ರಚನೆ ಸಂದರ್ಭದಲ್ಲಿ ತಮ್ಮ ಟ್ರೇಡ್‍ಮಾರ್ಕ್ ‘ಮಣ್ಣನ್ನು’ ಪ್ರತಿನಿಧಿಸುವ ಕೃಷಿ ಇಲಾಖೆ, ಪಶು ಸಂಗೋಪನ ಇಲಾಖೆ, ನೀರಾವರಿ ಇಲಾಖೆ, ತೋಟಗಾರಿಕಾ ಇಲಾಖೆ – ಇವೆಲ್ಲದಕ್ಕೂ ಎಳ್ಳುನೀರು ಬಿಟ್ಟಿರುವ ದೊಡ್ಡಗೌಡರ ಮೊದ್ದುಮಣಿ ಮೇವಣ್ಣ ತನಗೆ ಇಂಧನ ಮತ್ತು ಪಿಡಬ್ಲ್ಯುಡಿ ಇಲಾಖೆಯಂಥಹ ಹುಲ್ಲುಗಾವಲುಗಳೇ ಬೇಕು, ಕೊಟ್ರೆ ಇವನ್ನ ಕೊಡಿ, ಇಲ್ಲಾಂದ್ರೆ ಮಂತ್ರಿಸಿದ 8 ನಿಂಬೆಹಣ್ಣನ್ನು ಸಿಪ್ಪೆ ಸಮೇತ ನುಂಗಿ, ನಾಲಿಗೆ ಈಚೆ ಹಾಕ್ಕೊಂಡು ಆತ್ಮಹತ್ಯೆ ಮಾಡಿಕೊಳ್ತೇನೆ ಎಂದು ದೊಡ್ಡಗೌಡರನ್ನು ಬೆದರಿಸಿದ್ದಾರೆ ಎಂಬ ಖಚಿತಸುದ್ದಿ ಆಘಾತವಾಣಿಗೆ ಸದ್ಯ ಲಭ್ಯವಾಗಿಲ್ಲ.

****

ಹೆಂಡ ಕುಡಿದ ಮಂಗಗಳ ಕೈಗೆ ತಲೆಕೊಟ್ಟು ಕರಾವಳಿಯಾದ್ಯಂತ ಹಾಫ್‍ಮೆಂಟ್ಲುಗಳಾದ ಶ್ರಮಿಕವರ್ಗದ ಹುಡುಗರು, ದನಸಾಗಾಟ ಗೋಭಕ್ತಿ ಹೆಸರಿನಲ್ಲಿ ಕಂಡ ಕಂಡವರನ್ನು ಹಿಡಿದು ಬಡಿಯುವುದು, ಇವರ ಜೊತೆ ಪೈಪೋಟಿಗಿಳಿದ ದೊಗಳೆಚೆಡ್ಡಿ ಪೊಲೀಸರು ಈ ಹಾಫ್‍ಮೆಂಟ್ಲು ಹುಡುಗರ ಜೊತೆ ಸೇರಿ ಅಮಾಯಕರ ಮೇಲೆ ಹಲ್ಲೆ ನಡೆಸುವುದು, ಲಾಕಪ್ಪಿಗೆ ತಂದು ರುಬ್ಬುವ ಕರ್ತವ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಾ ಹೇಶವ ಕೃಪದ ಮೆಚ್ಚುಗೆಗೆ ಪಾತ್ರರಾಗಿದ್ದಾರೆಂದು ವರದಿಯಾಗಿದೆ. ತಮ್ಮ ಸಾಧನೆಯ ಬಗ್ಗೆ ಹೇಶವ ಕೃಪಾದ ಮೆಚ್ಚುಗೆ ಕೇಳಿ ಉತ್ತೇಜಿತರಾಗಿರುವ ಕರಾವಳಿ ಪೊಲೀಸರು ಭಜಲಂಗಿ, ಶ್ರೀರ್ಯಾಮ್ ಸೇನೆ ಹುಡುಗರನ್ನೂ ನಾಚಿಸುವಂತೆ ಬಡ ಮುಸ್ಲಿಮರನ್ನು ಹೊಡೆದು ಬಡಿದು ಕೊಲ್ಲಲು ಶುರು ಹಚ್ಚಿಕೊಂಡಿದ್ದಾರೆ. ಪೊಲೀಸ್ ಜೀಪುಗಳನ್ನೇ ಶವ ಸಾಗಿಸುವ ವಾಹನಗಳನ್ನಾಗಿ ಮಾಡಿ ಆ-ರೀಸೆಸ್ ಸಂಘದಿಂದ ‘ವೀರಕೇಸರಿ’ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಈ ನಡುವೆ ಕಾನೂನು ಪುಸ್ತಕದ ಕನಿಷ್ಟ ಅರಿವಿರುವ ಪೊಲೀಸ್ ವರಿಷ್ಟಾಧಿಕಾರಿ ನಿಂಬರ್ಗಿ, ಹುಸೇನಬ್ಬ ಎಂಬ ಅಮಾಯಕ ವೃದ್ಧನನ್ನು ಕೊಂದ ತಮ್ಮ ಕೈ ಕೆಳಗಿನ ಈ ‘ವೀರಕೇಸರಿ’ ಪೊಲೀಸರನ್ನು ಒದ್ದು ಅರೆಸ್ಟ್ ಮಾಡಿ ಜೈಲಿಗೆಸೆದಿದ್ದಾರೆ. ಹೀಗೆ ಡೆಡ್‍ಬಾಡಿ ಮ್ಯಾಟರ್ ಹೊರಬರುತ್ತಿದ್ದಂತೆ ಡೆಡ್‍ಬಾಡಿ ತಜ್ಞೆ ಸೋಪಕ್ಕ ಎಂಟ್ರಿ ಕೊಟ್ಟಿದ್ದಾರೆ. ನಿಂಬರ್ಗಿ ಕಚೇರಿಯಲ್ಲಿ ಹಲ್ಲುಗಿಂಜಿ ಪೋಸು ಕೊಟ್ಟು ಹೊರಬದು ಮಾಧ್ಯಮದೆದುರು ‘ತಮ್ಮ ಭಜಲಂಗಿ ಲಫಂಗರು ಭಾಳಾ ಸಾಬಸ್ಥರು, ಅವರ ಬಾಯೊಳಗೆ ಬಲಗಾಲಿಟ್ರೂ ಅವರಿಗೆ ಕಚ್ಚೋಕೆ ಬರೋದಿಲ್ಲ, ಅವ್ರನ್ನ ಕೂಡಲೇ ಬೇಷರತ್ ಬಿಡುಗಡೆ ಮಾಡಬೇಕು’ ಎಂದು ತಲೆತಲೆ ಚಚ್ಚಿಕೊಂಡು ಗೋಳಾಡುತ್ತಿದ್ದಾರೆಂಬ ಸುದ್ದಿ ಬಂದಿದೆ.

****

ಇಲ್ಲಿಯವರೆಗೂ ದೇಶದಲ್ಲಿರೋ ಪಕ್ಷಗಳ ಶಾಸಕರನ್ನು ಕೇಜಿಲೆಕ್ಕದಲ್ಲಿ ಖರೀದಿ ಮಾಡುತ್ತ ಹಾಯಾಗಿ ಓಡಾಡಿಕೊಂಡಿದ್ದ ಗುಜರಾತ್ ಕೇಡಿ ಹಮೀದ್‍ಶಾ ಪ್ಲಾನುಗಳೆಲ್ಲ ವಾಪಸ್ ತಿರುಗಿ ಬಂದು ತನ್ನ ಬೋಳುತಲೆಯ ಮೇಲೇ ದಬ್ಬಾಕಿಕೊಂಡ ಮೇಲೆ, ಅವರಿಗೆ ರಾಜಕೀಯ ಭಯ ಶುರು ವಾಗಿದೆಯಂತೆ. ಕರ್ನಾಟಕದಲ್ಲಿ ಎಡಬಿಡಂಗಿ ಯಾಗಿರುವ ಹಮೀದ್‍ಶಾ ಸದ್ಯಕ್ಕೆ ತನ್ನ ಶತ್ರುಗಳ ಕಾಲ್ಬೆರಳಲ್ಲಿ ನೆಟಿಕೆ ತೆಗೆದು ಮಸಾಜು ಮಾಡಿ ತಮ್ಮ ಕಡೆಗೆ ಸೆಳೆಯುವ ಪ್ರಯತ್ನದಲ್ಲಿದ್ದಾರೆಂದು ತಿಳಿದುಬಂದಿದೆ. 4 ವರ್ಷ ಸತತವಾಗಿ ದೇಶದ ಜನರ ಬದುಕಿನ ಜೊತೆಗೆ ಚೆಲ್ಲಾಟವಾಡುತ್ತಾ, ಪ್ರಾಬ್ಲಂಗಳು ಬಂದ್ರೆ ಸಾಕು, ವಿದೇಶಕ್ಕೆ ಓಡಿ ಹೋಗುವುದನ್ನೇ ಒಂದು ಚಾಳಿ ಮಾಡಿಕೊಂಡಿದ್ದ ನಾಲಾಯಕ್ ಪಕೋಡೇಂದ್ರನ ಆಟಾಟೋಪಗಳಿಗೆ ಪಕ್ಷದ ಮಾನ ಮರ್ಯಾದೆ ಹಡಾಲೆದ್ದು ಹೋದ ಮೇಲೆ ಈ ಬೋಳುತಲೆ ಕ್ರಿಮಿನಲ್ ಮತ್ತು ಪಕೋಡೇಂದ್ರನ ಕಣ್ಕಟ್ ಕಸುಬಿನ ಅಂಗಡಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ದಬ್ಬಾಕಿಕೊಳ್ಳುವುದು ನಿಶ್ಚಯ ಎಂಬ ವರದಿಗಳು ಎಲ್ಲೆಡೆಯಿಂದ ಬರುತ್ತಿವೆ.

****

ತಮ್ಮ ಪಾಡಿಗೆ ತಾವು ‘ಮಂದಿರ್ ವಹೀ ಬನಾಯೇಂಗೆ, ಸಂಡಾಸ್ ಯಹೀ ಬನಾಯೇಂಗೆ’ ಎಂದು ಕೀರಲುಧ್ವನಿಯಲ್ಲಿ ಕಿರುಚಾಡುತ್ತ ತಿರುಗುತ್ತಿದ್ದ ಸನ್ಮಾನ್ಯ ‘ತೇಜಾವರ ಸ್ವಾಮಿ’ಗಳ ತಲೆಯೊಳಗೆ ಇದ್ದಕ್ಕಿದ್ದಂತೆ 100 ಕ್ಯಾಂಡಲ್ ಬಲ್ಪೊಂದು ಠಣಾರನೆ ಫಳಫಳಿಸಿದೆ ಎಂದು ಗೊತ್ತಾಗಿದೆ. ಈ ಪಕೋಡೇಂದ್ರ ಒಬ್ಬ ನಾಲಾಯಕ್, ಸುಳ್ಳುಪುರುಕ.. ಇವನಿಂದ ಮೂರುಪೈಸೆಯ ಉಪಯೋಗ ಆಗಿಲ್ಲ, ಕಪ್ಪುಹಣವನ್ನ ಗಂಟುಕಟ್ಟಿಕೊಂಡು ತಲೆಮೇಲೆ ಹೊತ್ಕೊಂಡ್ ತರ್ತೀನಿ ಅಂದಿದ್ದ ಈತ, ಸ್ವಿಸ್ ಬ್ಯಾಂಕಿಂದ ಒಂದು ಸೊಳ್ಳೆಯನ್ನೂ ಹಿಡಿದು ತಂದಿಲ್ಲ. ಗಂಗಾನದಿ ಸ್ವಚ್ಛ ಮಾಡ್ತೀನಿ ಅಂದೋನು ದೇಶದೇಶಗಳ ಪ್ಲೇನು ಹತ್ತಿ ಅಪಾಪೋಲಿ ಥರ ಓಡಾಡ್ಕೊಂಡವ್ನೆ ಎಂದು ತಮ್ಮ ಅಸಮಾಧಾನ ಹೊರಗೆಡವಿದ್ದಾರೆ. ತೇಜಾವರ ಶ್ರೀಗಳ ಈ ಅಬ್ಬರ-ಬೊಬ್ಬರವನ್ನು ಕೇಳುತ್ತಿದ್ದಂತೆ ತೊಡೆಸಂದಿಗೆ ಓತಿಕ್ಯಾತ ಹೊಕ್ಕಂತಾದ ಈಶು ಅಂಕಲ್.. ‘ಪಾಪ ಶ್ರೀಗಳಿಗೆ ವಯಸ್ಸಾಗಿ, ಅರುಳು-ಮರುಳು ಆಡಿದಂಗೆ ಆಡ್ತಾವ್ರೆ.. ಅವ್ರನ್ನ ನಾನೇ ಕೈ ಹಿಡಿದು ದರದರ ಎಳ್ಕೊಂಡು ಹೋಗಿ ಹೆಣ ಮುಳುಗಿಸೋ ಗಂಗಾನದಿಯೊಳಗೆ 3 ಸಲ ಮುಳುಗಿಸಿ ವಾಪಸ್ ಕರ್ಕೊಂಡ್ ಬರ್ತೀನಿ’ ಎಂದಿದ್ದಾರೆ. ಇದಕ್ಕೆ ಪ್ರತಿಕ್ರ್ರಿಯಿಸಿರೋ ತೇಜಾವರ ಶ್ರೀಗಳು.. ಈ ಈಶು ನನ್ ಮೇಲೆ ಯಾವ್ದೋ ಹಳೇ ಸೇಡನ್ನ ತೀರಿಸಿಕೊಳ್ಳೋಕೆ ಪ್ಲಾನ್ ಮಾಡಿದ್ದಾನೆ.. ನಾನು ಯಾವ ಕಾರಣಕ್ಕೂ ಅವನ ಜೊತೆ ಹೋಗೋದಿಲ್ಲ ಎಂದು ಹೇಳಿದ ಸುದ್ದಿ ಇನ್ನೂ ವರದಿಯಾಗಿಲ್ಲ.

****

ಮಾತಿಗೆ ಮೂರು ಸಲ ಸೈನಿಕರನ್ನು ಎಳೆತಂದು ದೇಶಭಕ್ತಿ ಅಂದ್ರೆ ಸೈನಿಕರನ್ನು ತೋರಿಸಿ ಪ್ರಶ್ನೆಗಳಿಂದ ತಲೆ ತಪ್ಪಿಸಿಕೊಂಡು ಓಡಿಹೋಗುತ್ತಿದ್ದ ಕಮಲ ಪಕ್ಷದದವರು ಈಗ ಭಯಂಕರ ಕೆಸರಿನ ಹೊಂಡಕ್ಕೆ ತಲೆಯಿಟ್ಟು ಸಿಗೆÉಬಿದ್ದಿದ್ದಾರೆ. ಸೈನಿಕರ ಹೆಣವಿಡುವ ಪೆಟ್ಟಿಗೆಯಲ್ಲೂ ಹಣ ತಿಂದÀ ಈ ಎಂಜಲು ಹೇತ್ಲಾಂಡಿಗಳು ಸೈನಿಕರ ಯೂನಿಫಾರ್ಮಿಗೂ ಹಣ ಕೊಡದೆ ಕೈ ಎತ್ತಿರುವುದು ಬಯಲಾಗಿದೆ. ತನ್ನ ಕಿಸಲಗೇಡಿ ಮುಸುಡಿಯನ್ನು ಪತ್ರಿಕೆಗಳಲ್ಲಿ ಪ್ರಿಂಟು ಹಾಕಿಸಿಕೊಳ್ಳಲು ನಾಲ್ಕೂವರೆ ಸಾವಿರ ಕೋಟಿ ಜನರ ದುಡ್ಡನ್ನು ಬಳಸಿದ ಪಕೋಡೇಂದ್ರನಿಗೆ ಸೈನಿಕರ ಯೂನಿಫಾರ್ಮಿಗೆ ಕೊಡುವಷ್ಟೂ ಹಣವಿಲ್ಲವೇ ಎಂದು ಜನರು ಜರ್ದಾಬೀಡ ಜಗಿದು ಉಗಿಯುತ್ತಿದ್ದಾರೆ. ಇಷ್ಟಾದರೂ ನಾಚಿಕೆಯಿಲ್ಲದ ಪಕೋಡೇಂದ್ರನು ಬೀಡಾ ಬಿದ್ದ ಮುಖವನ್ನು ಒರೆಸಿಕೊಂಡು ಮೀಸೆ ಮೇಲೆ ಮಾತ್ರ ಬಿದ್ದಿಲ್ಲ ಎಂದು ತನ್ನ 56 ಇಂಚಿನ ಪೃಷ್ಠವನ್ನು ತಟ್ಟಿಕೊಳ್ಳುತ್ತಿದ್ದಾನೆಂದು ರಾಜಧಾನಿಯಿಂದ ವರದಿಯಾಗಿದೆ.

ಇಲ್ಲಿಗೆ ಅಟ್ಯಾಕ್ ಹನ್ಮಂತ ಪ್ರಸ್ತುತಪಡಿಸುವ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮುಂದಿನವಾರ ಮತ್ತೆ ಸಿಗೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...