Homeಅಂಕಣಗಳುಜಂಟಿ ಕಾರ್ಯದರ್ಶಿ ಹುದ್ದೆಗಳ ನೇರ ನೇಮಕದ ಹುನ್ನಾರಗಳು

ಜಂಟಿ ಕಾರ್ಯದರ್ಶಿ ಹುದ್ದೆಗಳ ನೇರ ನೇಮಕದ ಹುನ್ನಾರಗಳು

- Advertisement -
- Advertisement -

ಇದೊಂದು ತೀರಾ ಅಪಾಯಕಾರಿ ಸಂವಿಧಾನ ವಿರೋಧಿ ನಡೆ. ಭಾರತೀಯ ಪ್ರತಿಭಾವಂತ ಉತ್ಸಾಹಿಗಳಿಗೆ ಸದೃಢ ಭಾರತವನ್ನು ಕಟ್ಟಲು ನೀವು ಜಂಟಿ ಕಾರ್ಯದರ್ಶಿಯಾಗಿ ಸರಕಾರದೊಂದಿಗೆ ಕೈಜೋಡಿಸಿ ಎಂದು ಹೇಳುವ ಸರಕಾರದ ಈ ಘೋಷಣೆಯಲ್ಲಿಯೇ ಬಹುದೊಡ್ಡ ಹುನ್ನಾರ ಅಡಗಿದೆ. ನೇರ ಆಯ್ಕೆಯಲ್ಲಿ ಆಯ್ಕೆಯಾಗುವ ಈ ಜಾಯಿಂಟ್ ಸೆಕ್ರೆಟ್ರಿಗಳು ಯೋಜನೆಗಳನ್ನು ರೂಪಿಸುವುದಲ್ಲದೆ, ಈ ಯೋಜನೆಗಳನ್ನು ಸ್ವತಂತ್ರವಾಗಿ ಜಾರಿಗೊಳಿಸುವ ಪರಮಾಧಿಕಾರವನ್ನೂ ಹೊಂದಿದ್ದಾರೆ.
ಇದೀಗ ಹಣಕಾಸು, ಆರ್ಥಿಕವ್ಯವಹಾರ, ಕೃಷಿ ಮತ್ತು ಕೃಷಿಕರ ಕಲ್ಯಾಣ, ಸಾರಿಗೆ, ನಾಗರಿಕ ವಿಮಾನಯಾನ, ನೌಕಾಯಾನ, ಪರಿಸರ, ಅರಣ್ಯ ಮೊದಲಾದ ಪ್ರಮುಖ 10 ಇಲಾಖೆಗಳಿಗೆ ಈ ಹುದ್ದೆಗಳನ್ನು ಕರೆಯಲಾಗಿದೆ. ಹುದ್ದೆಗಿರುವ ಮಾನದಂಡಗಳನ್ನು ಗಮನಿಸೋಣ. ಜುಲೈ 1, 2018 ಕ್ಕೆ ಸರಿಯಾಗಿ 40 ವರ್ಷ ತುಂಬಿರಬೇಕು, ಪದವೀಧರರಾಗಿರಬೇಕು, ಈಗಾಗಲೆ ಜಾಯಿಂಟ್ ಸೆಕ್ರೆಟರಿಯ ಪದನಾಮಕ್ಕೆ ಸಮನಾದ ಹುದ್ದೆಗಳಲ್ಲಿ ಅನುಭವ ಇದ್ದವರಿಗೆ ಆದ್ಯತೆ ಇದೆ. ಖಾಸಗಿಯಾಗಿಯೂ ಕನಿಷ್ಠ 15 ವರ್ಷಗಳ ಕಾಲ ಖಾಸಗಿ, ಡೀಮ್ಡ್ ಕಂಪನಿಗಳನ್ನು ಒಳಗೊಂಡಂತೆ ವಿಶ್ವವಿದ್ಯಾಲಯಗಳು, ಎನ್‍ಜಿಓಗಳಲ್ಲಿ ಕೆಲಸ ಮಾಡಿದವರನ್ನೂ ಪರಿಗಣಿಸಲಾಗುವುದು. ಇದು 3 ವರ್ಷದಿಂದ 5 ವರ್ಷದ ಅವಧಿಯ ಕಾಂಟ್ರಾಕ್ಟ್ ಬೇಸ್ಡ್ ಆದ ಜವಾಬ್ದಾರಿಯಾಗಿದೆ. ಸಂಬಳ 144200 ರಿಂದ 218200/- ತನಕ ನಿಗದಿ ಮಾಡಬಹುದಾಗಿದೆ. ಇದೇ ಜೂನ್ 15 ರಿಂದ ಜುಲೈ 30 ರತನಕ ಅರ್ಜಿಯನ್ನು ಆನ್‍ಲೈನಲ್ಲಿ ಆಹ್ವಾನಿಸಲಾಗಿದೆ. ಅರ್ಜಿ ಹಾಕಿದವರಲ್ಲಿ ಅರ್ಹರಾದವರ ಅಂತಿಮ ಪಟ್ಟಿ ಸಿದ್ಧಪಡಿಸಿ, ಈ ಅಂತಿಮ ಪಟ್ಟಿಯಲ್ಲಿರುವವರನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಕಾರ್ಪೊರೇಟ್‍ಗಳು, ಬಂಡವಾಳಶಾಹಿಗಳು ಹಣ ಹೂಡಿ ಒಬ್ಬ ರಾಜಕಾರಣಿಯನ್ನು ಗೆಲ್ಲಿಸುವುದಿದೆ. ಅದೀಗ ದೇಶದ ಬಲಾಢ್ಯ ಕಾರ್ಪೊರೇಟ್‍ಗಳ ಒಕ್ಕೂಟ ಬಂಡವಾಳ ಹೂಡಿ ಈ ದೇಶದ ಪ್ರಧಾನಿಯನ್ನು ನಿರ್ಧರಿಸುವ ಹಂತಕ್ಕೆ ತಲುಪಿದೆ. ಆದರೆ ಭಾರತೀಯ ನಾಗರಿಕ ಸೇವೆಯ ಉನ್ನತ ಅಧಿಕಾರಿಗಳನ್ನು ಹೀಗೆ ಕೊಳ್ಳುವುದು ಕಷ್ಟ. ಈತನಕ ಲೋಕಸೇವಾ ಆಯೋಗದ ಐಎಎಸ್‍ನ ಆಯ್ಕೆ ಸಾಧ್ಯವಾದಷ್ಟು ಪಾರದರ್ಶಕವಾಗಿ ನಡೆಯುತ್ತಿದೆ. ಆದರೆ ಈ ಬೆಳವಣಿಗೆಯನ್ನು ನೋಡಿದರೆ ಕಾರ್ಪೊರೇಟ್ ಶ್ರೀಮಂತರ ಒಕ್ಕೂಟ ಇದೀಗ ಲೋಕಸೇವಾ ಆಯೋಗಕ್ಕೂ ಲಗ್ಗೆ ಇಟ್ಟು ತಮಗೆ ಬೇಕಾದವರನ್ನು ನಿರ್ಧರಿಸಿ ಅವರ ಆಯ್ಕೆಗೆ ಬೇಕಾದ ಲಾಬಿ ಮಾಡುವ ಕಾಲವೂ ದೂರವಿಲ್ಲ ಅನ್ನಿಸುತ್ತದೆ. ಹಾಗಾಗಿ ಮೊದಲನೆಯದಾಗಿ ನಾಗರಿಕ ಸೇವೆಯ ಕನಸು ಕಾಣುವ ಯುವ ಸಮುದಾಯ ಈ ಬಗ್ಗೆ ಎಚ್ಚರಗೊಳ್ಳಬೇಕಿದೆ.
ಈ ನಡೆಯ ಅಪಾಯವನ್ನು ಪಕ್ಷಾತೀತವಾಗಿ ವಿರೋಧಿಸುವಿಕೆ ಕಂಡುಬರುತ್ತಿದೆ. ಅಂತಹ ಕೆಲವು ಚರ್ಚೆಗಳನ್ನು ಗಮನಿಸುವಾಗ ಬಿಹಾರದ ಆರ್‍ಜೆಡಿ ಮುಖಂಡ ತೇಜಸ್ವಿ ಯಾದವ್ ಟ್ವೀಟ್‍ನ್ನು ಗಮನಿಸಬಹುದು, `ಈ ಮನುವಾದಿ ಸರಕಾರ ಯುಪಿಎಸ್‍ಸಿ ವ್ಯವಸ್ಥೆಯನ್ನು ಬದಿಗೆ ಸರಿಸಿ, ಯಾವುದೇ ಪರೀಕ್ಷೆ ನಡೆಸದೆ ತನಗಿಷ್ಟ ಬಂದವರನ್ನು ಜಂಟಿ ಕಾರ್ಯದರ್ಶಿಗಳಂತಹ ಪ್ರಮುಖ ಹುದ್ದೆಗೆ ಆಯ್ಕೆ ಮಾಡಿಕೊಳ್ಳುವುದು ಸರಿಯೇ? ಇದು ಸಂವಿಧಾನದ ಮತ್ತು ಮೀಸಲಾತಿ ನಿಯಮದ ಉಲ್ಲಂಘನೆಯಾಗಿದೆ. ನಾಳೆ ಚುನಾವಣೆ ನಡೆಸದೆ ಪ್ರಧಾನಿಯನ್ನು ಮತ್ತು ಸಚಿವ ಸಂಪುಟವನ್ನೂ ಅವರು ನೇಮಿಸಬಹುದು. ಈ ಸರಕಾರ ಸಂವಿಧಾನವನ್ನು ಒಂದು ತಮಾಷೆಯ ವಿಷಯವನ್ನಾಗಿಸಿದೆ’ ಎನ್ನುತ್ತಾರೆ. ಅಂತೆಯೇ ಕಾಂಗ್ರೆಸ್ ಮುಖಂಡ ಪಿ.ಎಲ್.ಪುನಿಯಾ `ಬಿಜೆಪಿ ಕಾರ್ಯಕರ್ತರಿಗೆ ಹಾಗೂ ಆರೆಸ್ಸೆಸ್ ಸಿದ್ಧಾಂತದ ಹಿನ್ನೆಲೆಯ ವ್ಯಕ್ತಿಗಳಿಗೆ ಅವಕಾಶ ಮಾಡಿಕೊಡಲು ಸರಕಾರ ರೂಪಿಸಿದ ಯೋಜನೆ ಇದಾಗಿದೆ. ಇಂತಹ ಪ್ರಮುಖ ಹುದ್ದೆಗಳಿಗೆ ಆರೆಸ್ಸೆಸ್ ಹಿನ್ನೆಲೆಯ ವ್ಯಕ್ತಿಗಳನ್ನು ನೇಮಿಸಿ ಅವರು ಸರಕಾರದ ನಿರ್ಧಾರದ ಮೇಲೆ ನೇರವಾಗಿ ಪ್ರಭಾವ ಬೀರುವ ಯೋಜನೆ ಇದಾಗಿದೆ’ ಎಂದು ಟೀಕಿಸಿದ್ದಾರೆ.
ಅಧಿಸೂಚನೆಯಲ್ಲಿ `ಪ್ರತಿಭಾವಂತ ಉತ್ಸಾಹಿ’ ಎನ್ನುವ ಪದವನ್ನು ಬಳಸಲಾಗಿದೆ. ಈ ಪದವೆ ಮೀಸಲಾತಿಯ ವಿರೋಧಿಯಾಗಿದೆ. ಪ್ರತಿಭಾವಂತರನ್ನು ಗುರುತಿಸುವ ಮಾನದಂಡಗಳೇನು? ನಿಸ್ಸಂಶಯವಾಗಿ ಇದು ಮೇಲುಜಾತಿಗಳ, ಕಾರ್ಪೋರೇಟ್ ಕಂಪನಿಗಳ ಸಿಇಓಗಳಂತವರನ್ನು ಪ್ರತಿಭಾವಂತರೆಂದು ಭಾವಿಸುವ ಸಾಧ್ಯತೆಯಿದೆ. ಅಂತೆಯೇ ಆರ್‍ಎಸ್‍ಎಸ್ ನಂತಹ ಸಂಸ್ಥೆಗಳಲ್ಲಿರುವವರು ನಿಸ್ಸಂಶಯವಾಗಿ ಈ ಹುದ್ದೆಗಳಿಗೆ ಆಯ್ಕೆಯಾಗುವ ಬಗ್ಗೆ ಈಗಾಗಲೆ ಹಲವಾರು ರಾಜಕೀಯ ನಾಯಕರು ಪ್ರತಿಕ್ರಿಯಿಸಿದ್ದಾರೆ.
ಈ ಹುದ್ದೆಗಳು ಕಾಂಟ್ರಾಕ್ಟ್ ಬೇಸ್ಡ್ ಎನ್ನುತ್ತಲೇ, ಮೂರರಿಂದ ಐದು ವರ್ಷದ ಅವಧಿಯ ಹುದ್ದೆಗಳು ಎಂದಾಗ, ಇವರುಗಳು ಸರಕಾರದ ಪೂರ್ಣಪ್ರಮಾಣದ ಯೋಜನೆಗಳನ್ನು ಜಾರಿ ಮಾಡುವ ಅಧಿಕಾರವನ್ನು ಹೇಗೆ ಪಡೆಯುತ್ತಾರೆ? ಯಾವುದೇ ಯೋಜನೆಗಳು ಜಾರಿಯಾದಾಗಲೂ ಅದಕ್ಕೆ ಅಧಿಕಾರಿ ವಲಯವೆ ಉತ್ತರದಾಯಿತ್ವವನ್ನು ಹೊಂದಿರುತ್ತದೆ. ಯಾವುದೇ ಮಂತ್ರಿ ಭ್ರಷ್ಟಾಚಾರ ಮಾಡಿದಾಗಲೂ ಆಯಾ ಮಂತ್ರಿಯ ಸಚಿವಾಲಯವೂ ಇದಕ್ಕೆ ಉತ್ತರದಾಯಿತ್ವದ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ಹಾಗಾದರೆ ಯೋಜನೆಗಳನ್ನು ಜಾರಿಗೊಳಿಸಿ ಐದು ವರ್ಷದ ನಂತರ ಹುದ್ದೆಗಳನ್ನು ಬಿಟ್ಟುಹೋದರೆ ಈ ಯೋಜನೆಗಳ ಉತ್ತರದಾಯಿತ್ವದ ಹೊಣೆಗಾರಿಕೆ ಯಾರದು? ಎನ್ನುವ ಪ್ರಶ್ನೆಯಿದೆ. ಇದು ಭಾರತೀಯ ನಾಗರಿಕ ಸೇವಾ ಅಧಿಕಾರಿಗಳಿಗೆ ದೊಡ್ಡ ಗಂಡಾಂತರ ತಂದಿಡುತ್ತದೆ. ಕಾರಣ ಈ ಅರೆಕಾಲಿಕ ಜಾಯಿಂಟ್ ಸೆಕ್ರೆಟ್ರಿಗಳು ಮಾಡಿದ ಯಡವಟ್ಟುಗಳಿಗೆ ಈ ಐಎಎಸ್ ಅಧಿಕಾರಿಗಳು ಉತ್ತರ ಕೊಡಬೇಕಾಗುತ್ತದೆ. ಹಾಗಾಗಿ ಮೊದಲನೆಯದಾಗಿ ಐಎಎಸ್ ಅಧಿಕಾರಿಗಳ ಸಮೂಹ ಈ ಆಯ್ಕೆ ಕ್ರಮವನ್ನು ಗಟ್ಟಿಯಾಗಿ ಪ್ರತಿರೋಧಿಸಬೇಕಿದೆ.
ಈ ಮೇಲಿನ ಸಂಗತಿಗಳನ್ನು ಒಳಗೊಂಡಂತೆ ಸೂಕ್ಷ್ಮವಾಗಿ ಗಮನಿಸಿದರೆ, ಕೆಲವು ಗಂಭೀರ ಪ್ರಶ್ನೆಗಳು ಕಾಡುತ್ತವೆ. ಮೊದಲೆ ಹೇಳಿದಂತೆ, ಜನರು ಚುನಾವಣೆಯ ಮೂಲಕ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಶಾಸಕಾಂಗವನ್ನು ಬಂಡವಾಳಶಾಹಿ ಶಕ್ತಿಗಳು ನಿಯಂತ್ರಿಸುತ್ತಿವೆ. ಅಂತೆಯೇ ಈಚಿನ ನ್ಯಾಯಾಂಗದ ಕೆಲವು ತೀರ್ಮಾನಗಳನ್ನು ನೋಡಿದರೆ ಕಾರ್ಪೊರೇಟ್ ಶಕ್ತಿಗಳಿಗೆ ನ್ಯಾಯಾಂಗವೂ ಮಣಿಯುತ್ತಿರುವಂತಿದೆ. ಆಳ್ವಿಕೆಗೆ ಸಂಬಂಧಿಸಿದ ಶಾಸನಗಳನ್ನು ಶಾಸಕಾಂಗ ರಚಿಸಿದರೆ, ನ್ಯಾಯಾಂಗ ಅದನ್ನು ಅರ್ಥೈಸುತ್ತದೆ, ಅನ್ವಯಿಸುತ್ತದೆ. ಆದರೆ ಇದನ್ನು ಜಾರಿ ಮಾಡುವುದು, ಈ ಶಾಸನಗಳನ್ನು ಕಾರ್ಯಗತ ಮಾಡುವ ಪರಮ ಅಧಿಕಾರ ಕಾರ್ಯಾಂಗಕ್ಕಿದೆ. ಸಂವಿಧಾನಬದ್ಧವಾಗಿ ಕಾರ್ಯನಿರ್ವಹಿಸಬೇಕಿರುವ ಕಾರ್ಯಾಂಗ ಸಾಮಾನ್ಯವಾಗಿ ಸಂವಿಧಾನಿಕವಲ್ಲದ ನಡೆಗಳನ್ನು ಬೆಂಬಲಿಸುವುದಿಲ್ಲ. ಹಾಗಾಗಿ ಶಾಸಕಾಂಗ ಮತ್ತು ನ್ಯಾಯಾಂಗವನ್ನು ಕಾರ್ಪೊರೇಟ್ ಶಕ್ತಿಗಳು ಮಣಿಸಿದಂತೆ ಸುಲಭವಾಗಿ ಕಾರ್ಯಾಂಗವನ್ನು ಮಣಿಸುವುದು ಕಷ್ಟ. ಮೇಲಿನ ಜಂಟಿಕಾರ್ಯದರ್ಶಿಗಳ ನೇರ ಆಯ್ಕೆ, ನೇರವಾಗಿ ಕಾರ್ಯಾಂಗವನ್ನು ಕೈವಶಮಾಡಿಕೊಳ್ಳುವ ಹುನ್ನಾರವಾಗಿದೆ. ಹೀಗಾಗಿ ಈಗಿನ ಕಾರ್ಯಾಂಗದ ಭಾಗವಾಗಿರುವ ಸದಸ್ಯರು ಈ ಆಯ್ಕೆಯ ಬಗ್ಗೆ ಸಂವಿಧಾನಿಕ ವಿರೋಧಿ ನಡೆಯನ್ನು ಜನರೆದುರು ಬಯಲುಗೊಳಿಸಬೇಕಿದೆ.
ಇದನ್ನು ಗಮನಿಸಿದರೆ, ಈಗಾಗಲೆ ಇರುವ ಕಾರ್ಯಾಂಗವನ್ನು ಬದಿಗೆ ಸರಿಸಿ ತಮಗೆ ಬೇಕಾದ ಕಾರ್ಯಾಂಗವನ್ನು ಮರುಸೃಷ್ಟಿ ಮಾಡಿಕೊಳ್ಳುತ್ತಿದೆ. ಇದು ದೇಶದ ಸಂವಿಧಾನಕ್ಕೆ ಎದುರಾದ ಬಹುದೊಡ್ಡ ಗಂಡಾಂತರಗಳಲ್ಲಿ ಒಂದಾಗಿದೆ. ಈ ದೇಶದ ದಲಿತ ದಮನಿತ ಕೆಳಜಾತಿ ಅಲ್ಪಸಂಖ್ಯಾತರು ಈ ಆಯ್ಕೆ ಪ್ರಕ್ರಿಯೆಯ ವಿರುದ್ಧ ದೇಶವ್ಯಾಪಿ ಸಂವಿಧಾನಬದ್ಧ ಪ್ರಶ್ನೆಗಳನ್ನು ಕೇಳಬೇಕಾಗಿದೆ. ಕಾರಣ ಈ ನಡೆ ಪರೋಕ್ಷವಾಗಿ ಸಂವಿಧಾನವನ್ನು ಇಲ್ಲವಾಗಿಸುವ ಹುನ್ನಾರ. ಅಂತೆಯೇ ಈ ಬಗೆಯ ಚಟುವಟಿಕೆಗಳ ಮೂಲಕವೆ ಸಂವಿಧಾನವನ್ನು ನಿಧಾನಕ್ಕೆ ದುರ್ಬಲಗೊಳಿಸಲಾಗುತ್ತದೆ. ಅದರ ಜತೆಗೆ ಸಂವಿಧಾನ ಪರವಾದ ಹೋರಾಟ ಮತ್ತು ಚಳವಳಿಗಳನ್ನೂ ದಿಕ್ಕುತಪ್ಪಿಸುವ ಸಾಧ್ಯತೆಯಿದೆ.

– ಅರುಣ್ ಜೋಳದ ಕೂಡ್ಲಿಗಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...