Homeಸಾಮಾಜಿಕವಿಜ್ಞಾನ ನಾಚುವಂತಹ ಪೂಜಾ, ಜ್ಯೋತಿಷ್ಯ ಆವಿಷ್ಕಾರಗಳು!

ವಿಜ್ಞಾನ ನಾಚುವಂತಹ ಪೂಜಾ, ಜ್ಯೋತಿಷ್ಯ ಆವಿಷ್ಕಾರಗಳು!

- Advertisement -
- Advertisement -

ಪ್ಪತ್ತನೆಯ ಶತಮಾನದ ಅದಿಭಾಗದಿಂದ ಹಿಡಿದು ಇತ್ತೀಚಿನವರೆಗೆ ವಿಶ್ವದಲ್ಲಿ ಸಾವಿರಾರು ಆವಿಷ್ಕಾರಗಳಾಗಿವೆ. ಇಂದು ಮಧ್ಯವಯಸ್ಸಿನಲ್ಲಿರುವವರು ಅದೃಷ್ಟಶಾಲಿಗಳೆಂದು ಹೇಳಬಹುದು!
ಚಿಮಣಿ ದೀಪಗಳಿದ್ದ ಮನೆಗಳಿಗೆ ವಿದ್ಯುತ್ ದೀಪಗಳು ಬಂದಿವೆ. ಟೆಂಟು ಬಂದರೆ ಮಾತ್ರ ನೋಡಲು ಸಾಧ್ಯವಾಗುತ್ತಿದ್ಧ ಸಿನಿಮಾ ಮನೆಯಲ್ಲೇ ಕುಳಿತು ನೋಡಬಹುದು. ಸಿನಿಮಾ, ಧಾರಾವಾಹಿಗಳೇ ಜೀವನ ಎಂದು ತಿಳಿದುಕೊಂಡವರೂ ನಮ್ಮ ನಡುವೆ ಇದ್ದಾರೆ.
ಸಂಪರ್ಕದ ಕೊಂಡಿಯಾಗಿದ್ದ ಅಂಚೆ ಇಂದು ಇತಿಹಾಸವಾಗುತ್ತಿದೆ. ಯಾರಾದರೂ ಸತ್ತರೆ ದೂರದ ಊರುಗಳಲ್ಲಿ ಇರುವ ಬಂಧುಗಳಿಗೆ “ಮದರ್ ಸೀರಿಯಸ್. ಸ್ಟಾರ್ಟ್ ಇಮ್ಮಿಡಿಯೆಟ್ಲಿ” ಎಂದು ‘ವಯರ್’ ಕಳಿಸುತ್ತಿದ್ದ- ಅಂದರೆ ಟೆಲಿಗ್ರಾಂ ಕಳಿಸುತ್ತಿದ್ದ ಕಾಲದಿಂದ ವಯರ್ ಇಲ್ಲದೇ ಹೆಣದ ಫೋಟೊ ತೆಗೆದು ಲೈವಾಗಿ ಸಂಬಂಧಿಕರಿಗೆ ತಿಳಿಸುವ ಯುಗವನ್ನು ಮುಟ್ಟಿದ್ದೇವೆ! ಕಂಪ್ಯೂಟರ್ ಬಂದಿದೆ! ಕ್ಯಾಷ್‍ಲೆಸ್ ಆಗಿದ್ದೇವೆ! ವಿಜ್ಞಾನದ ಆವಿಷ್ಕಾರಗಳ ಫಲವನ್ನು ಉಣ್ಣುತ್ತಾ ಬಂದಿದ್ದೇವೆ. ಮೂಷಿಕ, ಗರುಡ, ಸಿಂಹ, ನಂದಿ ವಾಹನರಾಗಿದ್ದ ನಾವು- ಬೈಕ್, ಸ್ಕೂಟರ್, ಕಾರು, ಬಸ್ಸು, ರೈಲು ವಿಮಾನ ವಾಹನರಾಗಿದ್ದೇವೆ! ಚಪ್ಪಡೆ ಭೂಮಿಯನ್ನು ದುಂಡಗೆ ಮಾಡಿದ್ದೇವೆ! ಸಾಮೂಹಿಕ ವಿನಾಶದ ಅಸ್ತ್ರಗಳನ್ನು ದಾಸ್ತಾನು ಇಟ್ಟಿದ್ದೇವೆ! … ವಿಷಗಳನ್ನು, ವಿಷಯಗಳನ್ನು ಉತ್ಪಾದಿಸುತ್ತಿದ್ದೇವೆ!
ಬರೆಯುತ್ತಾ ಹೋದರೆ ಸಾವಿರಾರಿವೆ! ನಮ್ಮ ಸುತ್ತಲೂ ಬೇಕೆಂದೋ ಬೇಡವೆಂದೋ ರಾಶಿಬಿದ್ದಿರುವ ಸಲಕರಣೆಗಳು ತಂತ್ರಜ್ಞಾನಗಳನ್ನು ಒಮ್ಮೆ ನೋಡಿದರೆ, ಇದನ್ನು ಕಂಡುಹಿಡಿದವರ ನೆನಪಾದರೂ ನಮಗಿದೆಯೆ?
ಅದರೆ, ನಮಗೆ ಕೋಟ್ಯಾಂತರ ದೇವರು, ದೈವಗಳ, ಅಂತರ, ಬೆಂತರ, ಕುಲೆ, ಪಿಶಾಚಿಗಳ ನೆನಪಿದೆ! ಯಾಕೆಂದರೆ ನಮಗೆ ಭಯವಿದೆ! ಅದನ್ನೇ ನಾವು ನಂಬಿಕೆ ಎಂದು ಕರೆಯುತ್ತೇವೆ!
ಇದೇ ಭಯವನ್ನು ಬಂಡವಾಳ ಮಾಡಿಕೊಂಡು ಸಾವಿರದ ಒಂದು, ಹನ್ನೊಂದು ಸಾವಿರದ ಒಂದು… ಹೀಗೆ ಜ್ಯೋತಿಷ್ಯ ಮತ್ತು ಪೂಜಾ ಕ್ಷೇತ್ರಗಳಲ್ಲಿ ಅವಿಷ್ಕಾರಗಳಾಗಿವೆ! ಹಿಂದೆ ಮನೆಯ ಒಂದು ಕೋಣೆಯೊಳಗಿನ ಅಥವಾ ಗೋಡೆಗಂಟಿದ ಹಲವಾರು ದೇವರುಗಳಿಗೆ ಊದುಬತ್ತಿ ಹಚ್ಚಿ, ಕೈಮುಗಿದು ಬೇಡಿಕೊಂಡರೆ ಸಾಕಿತ್ತು. ಹೆಚ್ಚು ಭಯವಾದರೆ ಮುಡಿಪು ಇಟ್ಟರೆ ಸಾಕಿತ್ತು! ಅದರೆ, ಈ ಕೋಮುವಾದಿ ವಿಷ ಧರ್ಮದಲ್ಲಿ ಇರಲಿಲ್ಲ! ಈಗ ಹೇಗೆ ಧರ್ಮವನ್ನು ಕೋಮುವಾದಿ ಬಿಸಿನೆಸ್ ಮಾಡುವಲ್ಲಿ ಎಷ್ಟೆಲ್ಲಾ ಅವಿಷ್ಕಾರಗಳನ್ನು ಮಾಡಲಾಗಿದೆ ಎಂಬುದನ್ನು ನೀವೇ ನೋಡಬಹುದು.
ಮಗುವಿಗೆ ಹೆಸರು ಇಡುವುದರಿಂದ ಹಿಡಿದು, ಹುಟ್ಟಿದ ಜಾತಕ, ತಗಲಿಕೊಂಡಿರುವ ರೋಗಗಳು, ಪೂರ್ವಜಾತ ದೋಷಗಳು, ನಕ್ಷತ್ರಗಳು, ಅವುಗಳ ಫಲಗಳು, ಯಮಗಂಡ, ರಾಹುಗಂಡ, ಕೇತುಗಂಡ, ನಾಗದೋಷ, ಶನಿಪ್ರಭಾವ ಮತ್ತು ಶಾಪ, ಹಿರಿಯರ ಶಾಪ, ಅಶಾಂತಿ… ಮತ್ತದಕ್ಕೆ ಪರಿಹಾರಗಳು! ಎಲ್ಲವಕ್ಕೂ ಮಹಾ ಸಂಶೋಧನೆಗಳು ಅಗಿವೆ- ವಿಜ್ಞಾನವನ್ನು ನಾಚಿಸುವಷ್ಟು! ನೀವೇ ಯೋಚಿಸಿದರೆ ಲೆಕ್ಕ ಹಾಕಬಹುದು! ಆದರೂ ಮುಂದಕ್ಕೆ ಎಲ್ಲಾ ಸಂಶೋಧನೆಗಳನ್ನೂ ಸಂಶೋಧಕರನ್ನು ವಿವರವಾಗಿ ನೋಡಿ! ಸಂಶೋಧನೆಯ ವಿವರಗಳು ಅನಂತವಾಗಿವೆ!
ಇಂದು ಬೆಳಗಾಗುತ್ತ ಎದ್ದಾಗ ನಾವು ನೋಡುವುದೇನು?! ಟಿವಿ, ಇಂಟರ್ನೆಟ್! ವಿಜ್ಞಾನದ ಉತ್ಪತ್ತಿಗಳಲ್ಲಿ ರಾರಾಜಿಸುವುದೇನು ಬ್ರಹ್ಮಾಂಡ ಜ್ಯೋತಿಷ್ಯದ ಮಹಾನ್ ಆವಿಷ್ಕಾರಗಳು! ಆ ಮಹಾನ್ ಸಂಶೋಧನೆಗಳು!
ಮಗು ಹುಟ್ಟಿದಾಗ ಏನು ಮಾಡಬೇಕು? ಬಾಲ ಕರ್ಮಗಳೇನು? ಜಾತದೋಷಗಳೇನು? ಭವಿಷ್ಯ ಏನು? ಗಂಡಗಳೇನು? ದೋಷಗಳೇನು? ಪರಿಹಾರಗಳೇನು?
ಹಾವು ಸತ್ತರೆ ಏನು ಮಾಡಬೇಕು? ಎಷ್ಟು ಜನ ಬ್ರಾಹ್ಮಣರಿಗೆ ಊಟ ಹಾಕಬೇಕು? ಗೋದಾನ, ಭೂದಾನ, ಸುವರ್ಣ ದಾನ ಇತ್ಯಾದಿಗಳ ಪುಣ್ಯ ಫಲವೇನು? ಗೋವು, ಸುವರ್ಣ ಇಲ್ಲದಿದ್ದಲ್ಲಿ ಪರಿಹಾರವೇನು? ಇಂಟರ್‍ನೆಟ್‍ನಿಂದ ಹೇಗೆ ಪೂಜೆ ಮಾಡಿಸಬಹುದು? ಪ್ರಸಾದ ಪಡೆಯಬಹುದು? ಇವೆಲ್ಲವುಗಳ ಬಗ್ಗೆ ಸಾವಿರಾರು ಸಂಶೋಧನೆಗಳು ಲಭ್ಯವಿವೆ! ಪೇಟೆಂಟ್ ಮಾಡಿಕೊಂಡಿರುವ ವಿಜ್ಞಾನಿಗಳೂ ಲಭ್ಯವಿದ್ದಾರೆ! ಅವರನ್ನೆಲ್ಲಾ ಮುಂದಿನ ವಾರ ಭೇಟಿಯಾಗೋಣ!

– ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಸ್ಸಾಂನ ನಾಲ್ವರು ಮುಸ್ಲಿಂ ಮಹಿಳೆಯರ ಗಡೀಪಾರು ಪ್ರಕ್ರಿಯೆಗೆ ಸುಪ್ರೀಂ ತಡೆ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ನೋಟಿಸ್‌

ಅಸ್ಸಾಂನಲ್ಲಿ 'ವಿದೇಶಿಯರು' ಎಂದು ಘೋಷಿತರಾಗಿ ಗಡೀಪಾರು ಭೀತಿ ಎದುರಿಸುತ್ತಿದ್ದ ನಾಲ್ವರು ಮುಸ್ಲಿಂ ಮಹಿಳೆಯರ ವಿಚಾರದಲ್ಲಿ ಭಾರತದ ಸುಪ್ರೀಂ ಕೋರ್ಟ್ ಮಹತ್ವದ ಮಧ್ಯಪ್ರವೇಶ ಮಾಡಿದೆ. ಈ ಮಹಿಳೆಯರನ್ನು ದೇಶದಿಂದ ಹೊರಹಾಕುವ (ಗಡೀಪಾರು ಮಾಡುವ) ಪ್ರಕ್ರಿಯೆಗೆ...

ದೆಹಲಿಗೆ ಬಂದಿಳಿದ ಕಾಕ್ರೋಚ್ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ : ಜಂತರ್‌ ಮಂತರ್‌ನಲ್ಲಿ ಪ್ರತಿಭಟಿಸಲು ಪೊಲೀಸರಿಂದ ಅನುಮತಿ

ಶನಿವಾರ (ಜೂ.6) ಬೆಳಿಗ್ಗೆ ದೆಹಲಿಗೆ ಆಗಮಿಸಿದ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ ಎಂದು ತಿಳಿಸಿದ್ದು, ಯೋಜಿತ ಆಂದೋಲನಕ್ಕಾಗಿ ನೇರವಾಗಿ ಜಂತರ್ ಮಂತರ್‌ನಲ್ಲಿ...

ಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ ಸಾಕ್ಷಿಯಾಗುತ್ತಿರುವ ಭಾರತ

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನಾದ್ಯಂತ ಗಿಡ ನೆಡುವ, ಹಸಿರು ಭಾಷಣ ಬಿಗಿಯುವ ಮತ್ತು ಪರಿಸರ ಕಾಳಜಿಯ ಸಡಗರದ ಆಚರಣೆಗಳು ಎಲ್ಲೆಡೆ ವಿಭಿನ್ನ ರೀತಿಗಳಲ್ಲಿ ವಿಜೃಂಭಿಸುತ್ತಿವೆ. ಆದರೆ, ಇದೇ ಹೊತ್ತಿನಲ್ಲಿ ವಿಶ್ವಸಂಸ್ಥೆಯು...

ಮಣಿಪುರ ಎಸ್‌ಐಆರ್ ವಿರೋಧಿಸಿದ ಕುಕಿ-ಝೋ ಗುಂಪುಗಳು

ಮಣಿಪುರ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ. ಕುಕಿ-ಝೋ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಗುಂಪಾದ ಕುಕಿ ಇನ್ಪಿ ಮಣಿಪುರ (ಕೆಐಎಂ) ಮತದಾರರ ಪಟ್ಟಿ...

ಹೇಗಿತ್ತು ‘ಕಾಕ್ರೋಚ್ ಜನತಾ ಪಕ್ಷ’ದ ಮೊದಲ ಸುದ್ದಿಗೋಷ್ಠಿ…? ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಕರೆ

ಜೂನ್ 6, 2026 ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ 'ಶಾಂತಿಯುತ ಪ್ರತಿಭಟನೆ'ಗೆ ಮುನ್ನ ಜಿರಳೆ ಜನತಾ ಪಕ್ಷ (ಸಿಜೆಪಿ) ತನ್ನ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದೆ. ಬುಧವಾರ ಸಂಜೆ (ಜೂ.3) ಸಿಜೆಪಿಯ ಮೂವರು ವಕ್ತಾರರು...

‘ಇದು ಆತ್ಮಹತ್ಯೆಯಲ್ಲ, ಮೋದಿ ಸರ್ಕಾರದ ಭ್ರಷ್ಟ ವ್ಯವಸ್ಥೆ ಮಾಡಿದ ಕೊಲೆ’: ನೀಟ್ ಆಕಾಂಕ್ಷಿಯ ಸಾವಿಗೆ ರಾಹುಲ್ ಗಾಂಧಿ ಆಕ್ರೋಶ

ದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ (NEET-UG) ವಿವಾದ ಮತ್ತು ವಿದ್ಯಾರ್ಥಿಗಳ ಸಾವುಗಳು ಭಾರತದ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಿವೆ. ಪರೀಕ್ಷಾ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು...

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...