Homeಕರ್ನಾಟಕಪಾಪ! ಯಾರಿಗೂ ಬೇಡ ಸ್ಪೀಕರ್ ಕಾಗೇರಿಯ ಪೀಕಲಾಟ!!

ಪಾಪ! ಯಾರಿಗೂ ಬೇಡ ಸ್ಪೀಕರ್ ಕಾಗೇರಿಯ ಪೀಕಲಾಟ!!

ಸಂಸದೀಯ ಪಟ್ಟುಗಳು, ಭಾಷೆಯ ಮೇಲಿನ ಹಿಡಿತ, ಕಾನೂನು, ನೆನಪಿನ ಶಕ್ತಿಯ ಧೈತ್ಯ ಸಿದ್ಧರಾಮಯ್ಯ ಮಾತಿಗೆ ನಿಂತರಂತೂ ಕಾಗೇರಿಗೆ ದಿಕ್ಕೇ ತೋಚದಂತಾಗುತ್ತದೆ.

- Advertisement -
- Advertisement -

ಒಲ್ಲದ ಮನಸ್ಸಿನಿಂದಲೇ ಸ್ಪೀಕರಿಕೆ “ದಂಡ” ದೀಕ್ಷೆ ಪಡೆದ ವಿಶ್ವೇಶ್ವರ ಹೆಗಡೆ ಕಾಗೇರಿ ಈಗ ಕತ್ತಲಲ್ಲಿ ಕೋಲು ಕಳಕೊಂಡ ಅರೆ ಕುರುಡನಂತೆ ಕಂಗಾಲು ಬಿದ್ದಿದ್ದಾರೆ. ಸತತ ಆರು ಬಾರಿ ಮತೋನ್ಮತ್ತ ಮಸಲತ್ತಿನ ಬಲದಿಂದ ಶಾಸಕಾಗಿರುವ ಈ ಎಬಿವಿಪಿ ಕೇಡರಿನ “ಹಿರಿಯ” ಸಂಘಿ ಸರದಾರ, ಸದನದಲ್ಲಿ ಸಂಸದೀಯ ಜಾಣ್ಮೆ ಪ್ರದರ್ಶಿಸಿದ ಕುರುಹುಗಳೇನೂ ಕಾಣಿಸುತ್ತಿಲ್ಲ. ಕಾಗೇರಿ ಅಂಥ ಜನತಾಂತ್ರಿಕ, ಜನಪದ ಕುಶಾಗ್ರಮತಿ ರಾಜಕಾರಣಿಯೇನಲ್ಲ ಎಂಬುದು ಆತನ ಕಾಲು ಶತಮಾನದ ಗ್ರಾಫು-ಟ್ಯ್ರಾಕು ನೋಡಿದರೆ ಎಂಥವರಿಗೆ ಪಕ್ಕಾ ಆಗುತ್ತದೆ. ಆತನ ಸ್ವಪಕ್ಷದ ಆಜನ್ಮ ಶತ್ರುವೂ, ಬೆಂಕಿ ಬಡಾಯಿ ಸಂಸದನೂ ಆದ ಅನಂತ್ಮಾಣಿ ಆಗಾಗ ಕಾಗೇರಿಗೆ “ಸಂಭಾವಿತ ಹೇಡಿ” ಎಂದು ಪರೋಕ್ಷವಾಗಿ ತಿವಿಯುತ್ತಲೇ ಇರುತ್ತಾನೆ.

ನಿಧಾನಗತಿಯ ಕಾಗೇರಿಯಲ್ಲಿ ಸದನ ನಿಭಾಯಿಸುವ ಪ್ರಜಾತಾಂತ್ರಿಕ ಕೌಶಲ್ಯವಾಗಲೀ, ಹಾರಾಡುವ ಶಾಸಕರನ್ನು ನಿಯಮ ನೀತಿಗಳ ಅಂಕುಶದಿಂದ ನಿಯಂತ್ರಿಸುವ ಜ್ಞಾನವಾಗಲೀ ಇಲ್ಲವೆಂದು ಕೇಶವಕೃಪದಲ್ಲಿ ಒಂದು ಸುತ್ತಿನ ಚರ್ಚೆಯೂ ಆಗಿದೆಯಂತೆ. ಆತ ಅಧಿವೇಶನ ನಡೆಯುವ ಹೊತ್ತಲ್ಲಿ ವಿಧಾನಸಭಾ ಅಧ್ಯಕ್ಷತೆ ಕುರ್ಚಿಯಲ್ಲಿ ಒಂಥರಾ ಕಕ್ಕಾಬಿಕ್ಕಿ ಆಗಿರುವುದಂತೂ ಹೌದು. ಸಂಸದೀಯ ಪಟ್ಟುಗಳು, ಭಾಷೆಯ ಮೇಲಿನ ಹಿಡಿತ, ಕಾನೂನು, ನೆನಪಿನ ಶಕ್ತಿಯ ಧೈತ್ಯ ಸಿದ್ಧರಾಮಯ್ಯ ಮಾತಿಗೆ ನಿಂತರಂತೂ ಕಾಗೇರಿಗೆ ದಿಕ್ಕೇ ತೋಚದಂತಾಗುತ್ತದೆ.

ಯಡ್ಡಿ ಸರ್ಕಾರದ ಕಡೆಯಲ್ಲಿ ಸಂಸದೀಯ ವ್ಯವಹಾರ ಸಚಿವ ಮಾಧುಸ್ವಾಮಿ ಒಬ್ಬರು ಬಿಟ್ಟರೆ ಸಂಸಧೀಯ ಪರಿಭಾಷೆಯಲ್ಲಿ ಮಾತಾಡುವ ತಂತ್ರಗಾರರು ಇಲ್ಲ. ಸಿ.ಟಿ.ರವಿಯಂಥ ದೇಶ “ಕುಟ್ಟುವ” ಹಿಂದೂತ್ವದ ಹಿರೇಮಣಿಗಳು ಬಿಜೆಪಿ ಬದಿಯಲ್ಲಿದ್ದಾರೆಯೇ ಹೊರತು ಕಾಂಗ್ರೆಸ್‍ನ ಸಿದ್ದು, ರಮೇಶ್ ಕುಮಾರ್, ಕೃಷ್ಣ ಭೈರೇಗೌಡ….. ಮುಂತಾದ ನುರಿತ ಸಂಸದೀಯ ಪಟುಗಳಿಗೆ ತಿರುಗೇಟು ಕೊಡುವ ಚತುರರಿಲ್ಲ!

ಇದು ಪೆದ್ದು ಸ್ಪೀಕರ್ ಪೀಕಲಾಟವನ್ನು ಮತ್ತಷ್ಟು ಜಾಸ್ತಿಮಾಡಿದೆ! ಆತ ಯಡ್ಡಿಯ ಅಕ್ರಮ ಸರ್ಕಾರಕ್ಕೆ ಸಂದಿಗ್ಧ ಎದುರಾದಾಗೆಲ್ಲಾ ತಿಣುಕಾಡುವಂತಾಗಿದೆ ಪಾಪ!!. ಕಾಗೇರಿಯ ಇನ್ನೊಂದು ದೊಡ್ಡ ಕಷ್ಣವೆಂದರೆ ಅನರ್ಹ ಶಾಸಕರ ಗಲೀಜು ಪ್ರಕರಣ. ಈ ಕೇಸು ಸುಪ್ರೀಂ ಕೋರ್ಟಿನಲ್ಲಿದೆಯಾದರೂ ವಿಧಾನಸಭಾಧ್ಯಕ್ಷ ಕಾಗೇರಿಯನ್ನೂ ಇದು ಕಂಡೂಕಾಣದಂತೆ ಬಾದಿಸುತ್ತಿದೆ. ಮಾಧ್ಯಮದವರನ್ನು ಅಧಿವೇಶನಕ್ಕೆ ಬರದಂತೆ ನಿರ್ಬಂಧಿಸಿರುವ ಕಾಗೇರಿ ವಿವಾದಕ್ಕೆ ಸಿಲುಕಿದ್ದಾರೆ. ಇಂಥ ಹಲವು “ಧರ್ಮಸೂಕ್ಷ್ಮ”ಕ್ಕೆ ಬಿದ್ದಿರುವ ಕಾಗೇರಿಗೆ ಸ್ಪೀಕರಿಕೆ ಹೊಣೆಗಾರಿಕೆ ಸುಸ್ತು ಹೊಡೆಸುತ್ತಿದೆ.

ಅಧಿಕಾರ ವಹಿಸಿಕೊಂಡ ಮರುಕ್ಷಣದಿಂದಲೇ ಕಾಗೇರಿ ಆಸರೆಗಾಗಿ ತಡಕಾಡುತ್ತಲೇ ಇದ್ದರು. ಸದನ ಮತ್ತು ಕಲಾಪದ ತಂತ್ರಜ್ಞಾನದ ಆಳ-ಅಗಲ ಬಲ್ಲವನೊಬ್ಬನ ಸಹಾಯಕನಾಗಿ ನೇಮಿಸಿಕೊಳ್ಳುವ ಅರ್ಜಂಟಿಗೆ ಬಿದ್ದಿದ್ದರು. ಕಾಗೇರಿಯ ದೌರ್ಬಲ್ಯ ಗೊತ್ತಾಗಿದ್ದೇ ತಡ, ವಿಧಾನ ಸಭೆಯ ನಿವೃತ್ತ ಕಾರ್ಯದರ್ಶಿ ಓಂ ಪ್ರಕಾಶ್ ಚುರುಕಾದರು. ಬಿಜೆಪಿ ವಲಯದಲ್ಲಿ ಪ್ರಭಾವಿ ಸಂಪರ್ಕಗಳನ್ನು ಹೊಂದಿರುವ ಓಂ ಪ್ರಕಾಶ್ ಹತ್ತಿರದ ಸಂಬಂಧಿಯೊಬ್ಬರು ಬಿಜೆಪಿಯ ಆಯಕಟ್ಟಿನ ಜಾಗದಲ್ಲೂ ಇದ್ದಾರೆ. ಈತ ಕಾಗೇರಿಗೂ ಪರಮಾಪ್ತ. ಹಿಂದೆ ಇಂಥದೇ ಆಟ ಆಡಿ ವಿಧಾನಸಭೆ-ವಿಧಾನ ಪರಿಷತ್ ಎರಡಕ್ಕೂ ಸೇರಿದ ಮಹಾಪ್ರಧಾನ ಕಾರ್ಯದರ್ಶಿ ಆಗಲು ಓಂ ಪ್ರಕಾಶ್ ಹವಣಿಸಿದ್ದರು. ಆಗ ಯಡ್ಡಿ ಸಿಎಂ ಆಗಿದ್ದರೆ, ಒಂ ಪ್ರಕಾಶ್ ವಿಧಾನಸಭೆಯ ಕಾರ್ಯದರ್ಶಿಯಾಗಿದ್ದರು. ಆದರೆ ಆಗ ಅದು ವಿಫಲವಾಗಿತ್ತು.

ಇದೇ ಓಂ ಪ್ರಕಾಶ್‍ರನ್ನು ಕಾಗೇರಿ ಈಗ ತನ್ನ “ಸಲಹೆಗಾರ”ನಾಗಿ ನೇಮಿಸಿಕೊಂಡಿದ್ದಾರೆ. ವಿಧಾನಸಭೆಯ ಇತಿಹಾಸದಲ್ಲೇ ಯಾವ ಸ್ಪೀಕರೂ ಇಂಥ ದೈನೇಸಿ ಸ್ಥಿತಿಗೆ ಬಿದ್ದಿರಲಿಲ್ಲ. ಸ್ಪೀಕರ್ ವಿಶೇಷ ಕರ್ತವ್ಯಾಧಿಕಾರಿ ನೇಮಿಸಿ ಕೊಳ್ಳಬಹುದೇ ಹೊರತು “ಸಲಹೆಗಾರ” ಹುದ್ದೆ ಸೃಷ್ಟಿಗೆ ವಿಧಾನಸಭೆಯ ಸಿ ಆ್ಯಂಡ್ ಆರ್ ನಿಯಮದಂತೆ ಅವಕಾಶವೇ ಇಲ್ಲ! ನಡುಪಕ್ಷೀಯವಾಗಿ ಓಂ ಪ್ರಕಾಶ್‍ರನ್ನು ಸಲಹೆಗಾರನೆಂದು ನೇಮಿಸಿಕೊಂಡಿರುವ ಕಾಗೇರಿ ಸಂಪ್ರದಾಯ, ನೀತಿಯನ್ನೆಲ್ಲಿ ಬುದ್ದಿ ಪೂರ್ವಕವಾಗೇ ದಿಕ್ಕರಿಸಿದ್ದಾರೆ. ಇಂಥ ನೇಮಕಾತಿ ಹೊತ್ತಲ್ಲಿ ವಿಧಾನಸಭೆ ಸಮಿತಿ ಸಭೆ ಕರೆಯುವುದು ಪದ್ಧತಿ. ವಾಡಿಕೆಯನ್ನೆಲ್ಲ ಕಡೆಗಣಿಸಿ ಸಲಹೆಗಾರನ ನೇಮಿಸಿಕೊಂಡಿರುವ ಕಾಗೇರಿ ನಡೆಯಿಂದ ವಿಧಾನಸಭೆ ಸಿಬ್ಬಂದಿ ಬೆಚ್ಚಿಬಿದ್ದಿದೆ. ಇದ್ಯಾವುದಕ್ಕೂ ಕೇರ್ ಮಾಡದ ಕಾಗೇರಿ ತನ್ನ ನಿಲುವು ಅಚಲ ಎಂದು ಸಿಬ್ಬಂದಿಗೆ ರೋಪು ಹಾಕಿದ್ದಾರಂತೆ.

ವಿಧಾನಸಭೆಯ ಕಾರ್ಯದರ್ಶಿಗೆ ತತ್ಸಮಾನವಾದ ಹುದ್ದೆ ಸಲಹೆಗಾರ ಸಾಹೇಬರಿಗೆ ದಯಪಾಲಿಸಲಾಗಿದೆ. ಇದರಿಂದ ಎರಡು ಅಧಿಕಾರ ಕೇಂದ್ರ ಸೃಷ್ಟಿಯಾಗಿ ಸಿಬ್ಬಂದಿಯಲ್ಲಿ ಗುಂಪುಗಾರಿಕೆ ಅನಾಹುತ ಎದುರಾಗಲಿದೆ. ದೈನಂದಿನ ಕಾರ್ಯನಿರ್ವಹಣೆಯಲ್ಲಿ ಎಡವಟ್ಟಾಗಲಿದೆ. ಅನಗತ್ಯ ದುಂದು ವೆಚ್ಚವಾಗಲಿದೆ. ಅಷ್ಟಕ್ಕೂ ಇಂಥದೊಂದು ಸಲಹೆಗಾರನ ಅಗತ್ಯವಾದರೂ ಇತ್ತೇ ಎಂದರೆ, ಊಹುಂ ಅದೂ ಇಲ್ಲ! ಸಚಿವಾಲಯದ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿಗಳಿಗೆ ಸದನದ ಕಲಾಪದ ನಿಯಮಾವಳಿ, ಇನ್ನಿತರ ಕಾನೂನು, ಶಾಸಕರ ಹಕ್ಕು ಬಾಧ್ಯತೆಗಳ ತಿಳುವಳಿಕೆ ಇದ್ದೇ ಇರುತ್ತದೆ. ಇವರೆಲ್ಲ ಸ್ಪೀಕರ್ ಎಂಥ ಮೊದ್ಮಣಿಯಾದರೂ ಗೈಡ್ ಮಾಡಿ ಹಳಿಗೆ ತರುವ ಜಾಣರಿರುತ್ತಾರೆ.

ಆದರೆ ಗೊಂದಲಕ್ಕೆ ಬಿದ್ದಿರುವ ಕಾಗೇರಿಗೆ ಸಿಬ್ಬಂದಿ, ಕಾರ್ಯದರ್ಶಿಗಳಿಗಿಂತ ಖಾಸಗಿ ಸಲಹೆಗಾರನ ಮೇಲೆಯೇ ನಂಬಿಕೆ ಹೆಚ್ಚು! ಸಾಮಾನ್ಯವಾಗಿ ಇಂಥ ಅಯೋಗ್ಯ ನೇಮಕಾತಿಗೆ ಹಣಕಾಸು ಇಲಾಖೆ ಆಕ್ಷೇಪವೆತ್ತಿ ಕಡತ ತಿರಸ್ಕಾರಿಸುತ್ತಾರೆ. ಆದರೆ ವಿಚಿತ್ರವೆಂದರೆ ಕಾಗೇರಿಯ ಈ ಕರಾಮತ್ತನ್ನು ಈವರೆಗೆ ಹಣಕಾಸು ಇಲಾಖೆ ಪ್ರಶ್ನಿಸದೇ ನಿಗೂಢ ಮೌನದಲ್ಲಿದೆ.

ಇದು ಸಂಘದೊಳಗಿನ ಸರ್ಕಸ್ ಮತ್ತು ಕಾಗೇರಿಯ ಪೊಕ್ಕುತನದ ಮಹಿಮೆ!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...