ಕನ್ನಡದ ರಾಜ್ಯೋತ್ಸವದ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಕನ್ನಡದಲ್ಲಿ ಟ್ವೀಟ್ ಮಾಡಿ ಪ್ರಾರ್ಥಿಸಿದ್ದಾರೆ. ಹಲವು ಜನರು ಪ್ರಧಾನಿಯವರ ಕನ್ನಡ ಟ್ವೀಟ್ ನೋಡಿ ಪುಳಕಿತಗೊಂಡರೆ ಮತ್ತಷ್ಟು ಜನರು ಪ್ರಧಾನಿ ವಿರುದ್ಧ ಕಿಡಿಕಾರಿದ್ದಾರೆ.
“ರಾಷ್ಟ್ರದ ಬೆಳವಣಿಗೆಗೆ ಕರ್ನಾಟಕ ನೀಡಿದ ಅತ್ಯುನ್ನತ ಕೊಡುಗೆಯನ್ನು ಆಚರಣೆ ಮಾಡುವ ದಿವಸವೇ ಕರ್ನಾಟಕ ರಾಜ್ಯೋತ್ಸವ. ಕನ್ನಡಿಗರ ವಿಶಾಲ ಹೃದಯವಂತಿಕೆ ಹಾಗೂ ಕನ್ನಡ ನಾಡಿನ ಸೌಂದರ್ಯ ಹೆಸರುವಾಸಿಯಾದದ್ದು. ಬರುವ ದಿನಗಳಲ್ಲಿ ಕರ್ನಾಟಕದ ಅಭಿವೃದ್ಧಿಗಾಗಿ ಪ್ರಾರ್ಥಿಸುತ್ತೇನೆ.” ಎಂದು ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದಾರೆ.
ರಾಷ್ಟ್ರದ ಬೆಳವಣಿಗೆಗೆ ಕರ್ನಾಟಕ ನೀಡಿದ ಅತ್ಯುನ್ನತ ಕೊಡುಗೆಯನ್ನು ಆಚರಣೆ ಮಾಡುವ ದಿವಸವೇ ಕರ್ನಾಟಕ ರಾಜ್ಯೋತ್ಸವ. ಕನ್ನಡಿಗರ ವಿಶಾಲ ಹೃದಯವಂತಿಕೆ ಹಾಗೂ ಕನ್ನಡ ನಾಡಿನ ಸೌಂದರ್ಯ ಹೆಸರುವಾಸಿಯಾದದ್ದು. ಬರುವ ದಿನಗಳಲ್ಲಿ ಕರ್ನಾಟಕದ ಅಭಿವೃದ್ಧಿಗಾಗಿ ಪ್ರಾರ್ಥಿಸುತ್ತೇನೆ.
— Narendra Modi (@narendramodi) November 1, 2019
ಇದಕ್ಕೆ “ಸರ್ ನಿಮ್ಮ ಬೆಂಬಲದ ಸರ್ಕಾರ ಇವತ್ತು ಕನ್ನಡದ ಧ್ವಜವನ್ನ ಎಷ್ಟೋ ಜಿಲ್ಲಾ ಕೇಂದ್ರಗಳಲ್ಲಿ ಹಾರಿಸುತ್ತಿಲ್ಲ ಎಂಬ ಸುದ್ದಿ ಬಂದಿಲ್ವ ಯಾಕೆ ಬಂದಿದ್ರು ಸುಮ್ಮನಿದ್ದೀರಾ..” ಎಂದು ಸುಮಂತ್ ಗೌಡ ಎಂಬುವವರು ಪ್ರಶ್ನಿಸಿದ್ದಾರೆ.
ಪ್ರಧಾನಿಗಳೇ.. ಈಗ ಏನೋ ಕರ್ನಾಟಕದ ಕಾಳಜಿ ವಹಿಸೋರ ರೀತಿ ಟ್ವೀಟ್ ಮಾಡೋ ನಾಟಕ ಬಿಡಿ.. ಉತ್ತರ ಕರ್ನಾಟಕದ ಜನ ಪ್ರವಾಹದಿಂದ ಸಂಕಷ್ಟದಲ್ಲಿದ್ದಾರೆ ಅವರ ಜೀವನಕ್ಕೆ ಅಗತ್ಯತೆಗಳನ್ನ ಕಲ್ಪಿಸುವ ಕಡೆ ನಿಮ್ಮ ಗಮನ ಕೊಡಿ.. ಈ ನಾಟಕಗಳೆಲ್ಲ ನಿಲ್ಲಿಸಿ, ಇನ್ಮುಂದೆ ಪ್ರಯೋಜನಕ್ಕೆ ಬರಲ್ಲ ಇವು ಎಂದು ಪ್ರಸನ್ನ ಕುಮಾರ ಎಂಬುವವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಂದೆಡೆ @BJP4Karnataka
ಸರ್ಕಾರ #ನಾಡಧ್ವಜ ಹಾರದಂತಿರಬೇಕು ಎಂಬ ನೀತಿಯನ್ನು ಜಾರಿಗೊಳಿಸಿದೆ, ಇನ್ನೊಂದೆಡೆ #ರಾಜ್ಯೋತ್ಸವ ಹೆಸರಿನಲ್ಲಿ ಹುಸಿ ಶುಭಾಶಯ ಕೋರುವ ಅವರದೇ ಪಕ್ಷದ ನಾಯಕರು. ಎಂತಹ ಆಶಾಢಭೂತಿತನ ಇವರದ್ದು. #KannadaRajyotsava ಮತ್ತು ಬಾವುಟ ನಮ್ಮ ಹಕ್ಕು ಅದನ್ನು ತಡೆಯಲು ನೆಡೆಸುವ ಸಕಲ ಯತ್ನವೂ ಸೋಲಲಿದೆ. #ಜಯಕರ್ನಾಟಕ ಎಂದು ಸ್ವಾಮಿಯವರು ಪ್ರತಿಕ್ರಿಯೆ ನೀಡಿದ್ದಾರೆ.
ಕನ್ನಡದಲ್ಲಿ ಟ್ವೀಟ್ ಮಾಡಿದಕ್ಕೆ ಧನ್ಯವಾದಗಳು ಮೋದಿಜಿ. ಆದರೆ ಕರ್ನಾಟಕಕ್ಕೆ ನಿಮ್ಮ ಕೊಡುಗೆ ಏನು ? ಕನ್ನಡಿಗರು ವಿಶಾಲ ಹೃದಯವಂತಿಕೆಯರು ನಿಜ,ಆದರೆ ನಮ್ಮ ನಾಡ ಧ್ವಜದ ತಂಟೆಗೆ ಬರೋದು,ಬಲವಂತದ ಹಿಂದಿ ಹೇರಿಕೆ ಸಹಿಸೊಲ್ಲ. ಕೊಡುಗೆ ನೀಡಿ ಮಾತಾಡಿ.. ಕನ್ನಡ ಕಾಮಧೇನು… ಕರ್ನಾಟಕ ಕಲ್ಪವೃಕ್ಷ.. ಎಂದು ದೇವರಾಜ್ ಅಚಾರ್ಯರವರು ಕಮೆಂಟ್ ಮಾಡಿದ್ದಾರೆ.
ಇಂದು ಮಾಡುವ ಟ್ವೀಟ್ ಅನ್ನು ಅಂದು ಉತ್ತರ ಕರ್ನಾಟಕ ಮುಳುಗಿದಾಗ ಮಾಡಿದ್ದರೆ ನಮ್ಮ ಜನರಿಗೆ ಇನ್ನೂ ಹತ್ತಿರವಾಗುತ್ತಿದ್ದೀರಿ. ಇನ್ನೂ ಕಾಲ ಮಿಂಚಿಲ್ಲ ಕನ್ನಡತನವನ್ನು ಉಳಿಸಿ ಬೆಳೆಸುವ ನಿಮ್ಮ ಮಾತು ಬರೀ ಟ್ವೀಟ್ ಗೆ ಸಿಮೀತವಾಗದೆ ಕಾರ್ಯರೂಪಕ್ಕೆ ಬರುವ ಮಾತಾಗಲಿ. ಎಂದು ತರ್ಲೆಪುಟ್ಟ ಎಂಬುವವರು ಟ್ವೀಟ್ ಮಾಡಿದ್ದಾರೆ.
ಮೊದಲು ನೆರೆ ಸಂತ್ರಸ್ತರಿಗೆ ಹಣ ಕೊಡಪ್ಪ..ಕನ್ನಡದ ಮೇಲಿನ ದಬ್ಬಾಳಿಕೆ ನಿಲ್ಲಿಸಪ್ಪ ತಾತಪ್ಪ.. ಆಮೇಲೆ ಬೇಕಿದ್ರೆ ನಾಟಕ ಮಾಡು ಎಂದು ಸಾಗರ್ ಮನಸು ಪ್ರತಿಕ್ರಿಯಿಸಿದ್ದಾರೆ.
ಧನ್ಯವಾದಗಳು. ನಿಮ್ಮ ಈ ಸಂದೇಶ ಪರಿಪೂರ್ಣವಾಗುವುದು ನೆರೆ ಸಂತ್ರಸ್ಥರಿಗೆ ಸಿಗಬೇಕಾದ ಎಲ್ಲಾ ರೀತಿಯ ಸಹಾಯಗಳು ದೊರೆತಾಗ ಮಾತ್ರ! ಎಂದು ಗಣೇಶ್ ರಾವ್ರವರು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಚುನಾವಣೆ ಬಂದಾಗ 20ಕ್ಕು ಹೆಚ್ಚು ಬಾರಿ ಚುನಾವಣಾ ಪ್ರಚಾರಕ್ಕೆ ಬರುವ ನೀವು ನೆರೆ ಬಂದಾಗ ಒಮ್ಮೆಯೂ ಭೇಟಿ ನೀಡಿಲ್ಲ ಮತ್ತು ನೀಡೋದು ಇಲ್ಲ. ಆದರೆ ಇವಾಗ ದೊಡ್ಡದಾಗಿ #ಕನ್ನಡರಾಜ್ಯೋತ್ಸವ ದ ಶುಭಾಶಯ ತಿಳಿಸುತ್ತಿದ್ದೀರಿ? ನಿಮ್ಮ ನಟನೆಯ ಮುಂದೆ ಎಲ್ಲಾ ನಟರು ಶೂನ್ಯ ಬಿಡಿ ಎಂದು ಚೇತನ್ ಕುಮಾರ್ ಎಂಬುವವರು ಕಿಡಿಕಾರಿದ್ದಾರೆ.
ತಮಗೂ ಕೂಡಾ ಕನ್ನಡ ರಾಜ್ಯೋತ್ಸವದ ಹಾರ್ಧಿಕ್ ಶುಭಾಶಯಗಳು ನಮ್ಮ ದೇಶದ ಹೆಮ್ಮೆಯ ಮೋದಿಜೀ ಅವರಿಗೆ ಈ ನಿಮ್ಮದ ಟ್ವಿಟ್ ಎಲ್ಲಾ ಕನ್ನಡ ಮಹಾ ಜನತೆಗೆ ಖುಷಿ ತಂದಿದೆ ನನ್ನ ದೇವ್ರು … ಎಂದು ನಮೋ ಮಹಾಂತೇಶ್ ಎಂಬುವವರು ಟ್ವೀಟ್ ಮಾಡಿದ್ದಾರೆ.
ನೀವು ಕನ್ನಡ ಭಾಷೆಯಲ್ಲಿ ಮಾತನಾಡುವುದನ್ನು ಕೇಳುವುದೇ ಚೆಂದ ಮೋದಿ ಅವರೇ, ಹೌದು ಕರ್ನಾಟಕ ವಿಶಾಲ ಹೃದಯ ಉಳ್ಳ ಹೆಮ್ಮೆಯ ಕನ್ನಡಿಗರ ನಾಡು. ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಎಂದು ಸಹನಾ ರೇಣುಕಾರವರು ಪ್ರತಿಕ್ರಿಯೆ ನೀಡಿದ್ದಾರೆ.



ಆತನಿಗೆ ಕನ್ನಡ ಬರುವುದಿಲ್ಲ ಎಂದು ಗೊತ್ತಿದ್ದರೂ ಕೆಲವು ಮೂರ್ಖರು ಪುಳಕಿತರಾಗಿದ್ದಾರಲ್ಲ! ಈತ ರಾಜ್ಯದ ಅಭಿವೃದ್ಧಿಗೆ ಪ್ರಾರ್ಥನೆ ಮಾಡುವ ಬದಲು ಕೆಲಸಮಾಡಲಿ!