- Advertisement -
- Advertisement -
ಗೌರಿಬಿದನೂರು: ತಾಲ್ಲೂಕಿನ ತೊಂಡೇಭಾವಿ ಹೋಬಳಿ ಬೆಳಚಿಕ್ಕನ ಹಳ್ಳಿಯಲ್ಲಿ ಶುಕ್ರವಾರದಂದು ವೆಂಕಟರಮಣ ದೇವಸ್ಥಾನದ ಪ್ರವೇಶಕ್ಕೆಂದು ಹೋದ ಪರಿಶಿಷ್ಟ ಜಾತಿಯ ವ್ಯಕ್ತಿಯೊಬ್ಬರಿಗೆ ಪ್ರವೇಶ ನಿರಾಕರಿಸಿದ ಘಟನೆ ವರದಿಯಾಗಿದೆ.
ಈ ಕುರಿತು ಪೊಲೀಸ್ ದೂರು ದಾಖಲಾಗುತ್ತಿದ್ದಂತೆ ಈ ಘಟನೆಗೆ ಸಂಬಂಧಿಸಿದ ಗ್ರಾಮದ ತಿಮ್ಮಾರೆಡ್ಡಿ, ಭಾಸ್ಕರ್ರೆಡ್ಡಿ, ಬಿ.ವಿ.ವೆಂಕಟೇಶರೆಡ್ಡಿ ಮತ್ತು ಪಿಂಜಾರ್ಲಹಳ್ಳಿ ಶ್ರೀನಿವಾಸರೆಡ್ಡಿ ಎಂಬುವರು ತಲೆಮರೆಸಿಕೊಂಡಿದ್ದಾರೆ.
ತಹಶೀಲ್ದಾರ್ ಮಹೇಶ್ ಪತ್ರಿ, ಡಿವೈಎಸ್ಪಿ ಶಿವಕುಮಾರ್, ಸರ್ಕಲ್ ಇನ್ಸ್ಪೆಕ್ಟರ್ ಕೆ.ಪಿ.ಸತ್ಯನಾರಾಯಣ್ ಶನಿವಾರ ಗ್ರಾಮಕ್ಕೆ ಭೇಟಿ ದಲಿತ ಮುಖಂಡರ ಸಮ್ಮುಖದಲ್ಲಿ ಶಾಂತಿ ಸಭೆ ನಡೆಸಿದರು. ಶಾಂತಿಸಭೆಯ ಬಳಿಕ ಗ್ರಾಮಸ್ಥರ ಸಮ್ಮುಖದಲ್ಲಿ ಅಧಿಕಾರಿಗಳು ಗೋಪಾಲಪ್ಪ ಅವರನ್ನು ದೇವಸ್ಥಾನದ ಒಳಗೆ ಕರೆದೊಯ್ದರು.
ಜೈಭೀಮ್ ಹಾಡಿದ ದಲಿತ ಯುವಕರ ಮೇಲೆ ಹಲ್ಲೆ: ಪೊಲೀಸ್ ಅಧಿಕಾರಿ ಬಂಧನಕ್ಕೆ ರೈತ ಸಂಘ ಒತ್ತಾಯ


