Homeಮುಖಪುಟಅಯೋಧ್ಯ ತೀರ್ಪು: ಶಹಾಪುರ ನ್ಯಾಯವೋ, ಹಾವೇರಿ ನ್ಯಾಯವೋ?

ಅಯೋಧ್ಯ ತೀರ್ಪು: ಶಹಾಪುರ ನ್ಯಾಯವೋ, ಹಾವೇರಿ ನ್ಯಾಯವೋ?

ಬಾಬರಿ ಮಸೀದಿಯ ಕಟ್ಟಡ ಧ್ವಂಸ ಹಾಗೂ ರಾಮಲಲ್ಲಾನ ಮೂರ್ತಿ ಇಟ್ಟ ಪ್ರಕರಣಗಳನ್ನು ಕಾನೂನುಬಾಹಿರ ಎಂದು ಕರೆದಿರುವ ತೀರ್ಪು ಅದರ ಕ್ರಿಮಿನಲ್ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವ ’ಮನಸ್ಸು’ ಮಾಡಬಹುದೇ? ಅಂತಹ ಮನಸ್ಸು ಇದೆಯೇ?

- Advertisement -
- Advertisement -

 

 

| ದೇವು ಪತ್ತಾರ್ |

ಬಾಬರಿ ಮಸೀದಿ ಧ್ವಂಸ ಹಾಗೂ ರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತದ ಸರ್ವೋಚ್ಚ ನ್ಯಾಯಾಲಯದ ತೀರ್ಪು ’ನ್ಯಾಯ’ ನೀಡುವುದಕ್ಕಿಂತ ಹೆಚ್ಚಿನದನ್ನು ಮಾಡುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಹೈದರಾಬಾದ್ ಕರ್ನಾಟಕದಲ್ಲಿ ‘ಶಹಾಪುರ ನ್ಯಾಯ’ ಎಂಬ ಮಾತೊಂದು ಚಾಲ್ತಿಯಲ್ಲಿದೆ. ‘ಶಹಾಪುರ ನ್ಯಾಯ’ ಮಾಡುವ ವ್ಯಕ್ತಿಯನ್ನು ನಿಂದಾತ್ಮಕ ರೀತಿಯಲ್ಲಿ ಗುರುತಿಸಲಾಗುತ್ತದೆ. ಹಾಗಂತ ಅದು ಅನ್ಯಾಯವೇನಲ್ಲ.

ಏನಿದು ಶಹಾಪುರ ನ್ಯಾಯ?

ಧಾನ್ಯ ಅಳೆಯಲು ಸೇರು ಅಥವಾ ಬಳ್ಳ ಬಳಸಲಾಗುತ್ತದೆ. ಸೇರಿನ ಬಾಯನ್ನು ಮೇಲ್ಮುಖವಾಗಿ ಇಟ್ಟು ಅಳೆದರೆ ಅದು ನ್ಯಾಯ. ಸೇರನ್ನು ಬೋರಲಾಗಿ ಹಾಕಿ ಅಳೆದರೆ ಅನ್ಯಾಯ. ಶಹಾಪುರ ನ್ಯಾಯ ಅದೆರಡನ್ನೂ ಮಾಡುವುದಿಲ್ಲ. ಬದಲಿಗೆ ಸೇರನ್ನು ಅಡ್ಡಲಾಗಿ ಮಲಗಿಸಿ ಅದರ ಮೇಲೆ ಧಾನ್ಯ ಸುರಿಯುತ್ತ ಹೋಗುತ್ತದೆ. ಸೇರಿನ ಎರಡೂ ಬದಿಯಲ್ಲಿ ಬೀಳುವ ಧಾನ್ಯವನ್ನು ಎರಡೂ ಪಕ್ಷಗಳಿಗೆ ಹಂಚಲಾಗುತ್ತದೆ. ಮೇಲ್ನೋಟಕ್ಕೆ ಹಾಗೂ ತಾರ್ಕಿಕವಾಗಿ ಸರಿ ಎನ್ನಿಸುವ ಈ ವಿಧಾನವನ್ನು ’ನ್ಯಾಯ’ ಎಂದು ಯಾರೂ ಪರಿಗಣಿಸಲು ಸಾಧ್ಯವಿಲ್ಲ.

ಮತ್ತೊಂದು ಉದಾಹರಣೆ
ಇಬ್ಬರು ನೆರೆಹೊರೆಯವರ ನಡುವೆ ತಮ್ಮ ಮನೆಯ ನಡುವಿನ ಮರವೊಂದಕ್ಕೆ ಸಂಬಂಧಿಸಿದಂತೆ ಜಗಳ-ಭಿನ್ನಾಭಿಪ್ರಾಯ ಉಂಟಾಯಿತು. ಒಬ್ಬರು ಮರ ಇರುವ ನೆಲ (ಜಾಗ) ನನಗೆ ಸೇರಿದ್ದು ಎಂದು ವಾದಿಸಿದ. ಆದರೆ, ಮತ್ತೊಬ್ಬ ಮರ ಹಚ್ಚಿ, ನೀರೆರೆದು ಬೆಳೆಸಿದ್ದರಿಂದ ಅದು ನನ್ನದು ಹಾಗೂ ಅಷ್ಟೇ ಅಲ್ಲ ಮರ ಇರುವ ಪ್ರದೇಶ ನನಗೇ ಸೇರಿದ್ದು ಎಂದುಕೊಂಡು ಅದನ್ನು ಬೆಳೆಸಿದೆ. ಬೇರೆಯವರ ಜಾಗದಲ್ಲಿರುವ ಮರವನ್ನ ನಾನೇಕೆ ನೀರು ಹಾಕಿ ಬೆಳೆಸಲಿ? ಎಂಬ ಆಕ್ಷೇಪ ವ್ಯಕ್ತಪಡಿಸಿದ. ’ಶಹಾಪುರ ನ್ಯಾಯ ಮಾಡಿದ ಹಿರಿಯ, ಮರವನ್ನು ಎರಡನೆಯವನಿಗೂ ಜಾಗವನ್ನೂ ಮೊದಲನೆಯವನಿಗೂ ಹಂಚಿ ತೀರ್ಪು ನೀಡಿದ. ಊರವರೆಲ್ಲ ಇಬ್ಬರೂ ಕಳೆದುಕೊಂಡದ್ದಕ್ಕಿಂತ ಪಡೆದದ್ದೇ ಹೆಚ್ಚು ಎಂದು ಭಾವಿಸಿ ಸಂಭ್ರಮಿಸಿದರು.

ಯಾವುದೇ ರೀತಿಯ ತಗಾದೆ, ಜಗಳ, ಭಿನ್ನಾಭಿಪ್ರಾಯ ಉಂಟಾದರೆ ಮಧ್ಯಸ್ಥಿಕೆ ವಹಿಸಿ ಮಾತನಾಡುವವರನ್ನು ‘ನೀ ಇಲ್ಲಿ ಶಾಪುರ ನ್ಯಾಯ ಮಾಡಾಕ ಬರಬ್ಯಾಡ’ ಎಂದು ಪ್ರತಿಕ್ರಿಯಿಸುತ್ತಾರೆ. ‘ನ್ಯಾಯ’ ಪ್ರಕ್ರಿಯೆಯ ಅಣಕದಂತಿರುವ ಈ ನ್ಯಾಯವನ್ನು ಅನ್ಯಾಯ ಎಂದು ತಿರಸ್ಕರಿಸಲಾಗುವುದಿಲ್ಲ. ಹಾಗೆಯೇ ನ್ಯಾಯ ಎಂದು ಒಪ್ಪಿಕೊಳ್ಳುವುದು ಕೂಡ ಕಷ್ಟ.

ಈ ರೀತಿಯ ನ್ಯಾಯ ನೀಡುವ ಪ್ರಕ್ರಿಯೆಯನ್ನು ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ. ಮುಂಬೈ ಕರ್ನಾಟಕದಲ್ಲಿ ‘ಹಾವೇರಿ ನ್ಯಾಯ’ ಎಂದು ಗುರುತಿಸಲಾಗುತ್ತದೆ. ಹಾವೇರಿ ನ್ಯಾಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಗಮನಿಸಬೇಕು. ಕೆಲವು ಕಡೆ ಇದನ್ನು ’ಕಾಜಿ ನ್ಯಾಯ’ ಎಂದೂ ಕರೆಯಲಾಗುತ್ತದೆ. ಪತ್ನಿಯ ತಕರಾರು ಇಲ್ಲದ ಕಾರಣ ನೀಡಿ ಪತಿಗೆ ನಾಲ್ಕಕ್ಕಿಂತ ಹೆಚ್ಚು ಮದುವೆಗೆ ಅವಕಾಶ ನೀಡುವ ಪದ್ಧತಿಯಿದು. ಕೆಲವೆಡೆ ಖಾಪ್ ಪಂಚಾಯ್ತಿ ಎಂದೂ ಕರೆಯಲಾಗುತ್ತದೆ. ’ಜಿಸ್ ಲಾಠಿ ಉಸ್ ಕಾ ಭೈಂಸ್’ ಎಂಬ ಮಾತು ಕೂಡ ಇಂತಹ ನ್ಯಾಯಿಕ ಪ್ರಕ್ರಿಯೆಯ ಕಾರಣದಿಂದಾಗಿ ಹುಟ್ಟಿಕೊಂಡದ್ದು.

ನ್ಯಾಯಾಂಗದ ಬಗ್ಗೆ ಇರುವ ಎರಡು ಪ್ರಮುಖ ಸಂಗತಿಗಳನ್ನು ಇಲ್ಲಿ ಉಲ್ಲೇಖಿಸಬಹುದು. ನ್ಯಾಯ ನೀಡುವುದು ಮಾತ್ರವಲ್ಲ. ನೀಡಿದ್ದು ನ್ಯಾಯ ಎಂದು ಖಚಿತಪಡಿಸುವ ಹಾಗಿರಬೇಕು. ಮತ್ತೊಂದು ನೂರು ಅಪರಾಧಿಗಳು ತಪ್ಪಿಸಿಕೊಂಡರು ಪರವಾಯಿಲ್ಲ, ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು. ಈ ಎರಡೂ ಮಾತುಗಳು ನ್ಯಾಯಾಂಗದ ಘನತೆ ಮತ್ತು ಅದಕ್ಕಿರುವ ಮಹತ್ವವನ್ನು ವಿವರಿಸುತ್ತವೆ.

ಬಾಬರಿ ಮಸೀದಿಯ ಕಟ್ಟಡ ಧ್ವಂಸ ಹಾಗೂ ರಾಮಲಲ್ಲಾನ ಮೂರ್ತಿ ಇಟ್ಟ ಪ್ರಕರಣಗಳನ್ನು ಕಾನೂನುಬಾಹಿರ ಎಂದು ಕರೆದಿರುವ ತೀರ್ಪು ಅದರ ಕ್ರಿಮಿನಲ್ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವ ’ಮನಸ್ಸು’ ಮಾಡಬಹುದೇ? ಅಂತಹ ಮನಸ್ಸು ಇದೆಯೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...