ಖಾನ್ಪುರದ ಸ್ವತಂತ್ರ ಶಾಸಕ ಉಮೇಶ್ ಕುಮಾರ್ ಮತ್ತು ಲಕ್ಸರ್ ಕುನ್ವಾರ್ನ ಬಿಜೆಪಿ ಶಾಸಕ ಪ್ರಣವ್ ಸಿಂಗ್ ಚಾಂಪಿಯನ್ ನಡುವಿನ ದೀರ್ಘಕಾಲದ ಜಗಳ ಭಾನುವಾರ ಹಿಂಸಾತ್ಮಕ ತಿರುವು ಪಡೆದುಕೊಂಡಿದೆ. ಪ್ರಣವ್ ಸಿಂಗ್ ಚಾಂಪಿಯನ್ ಮಾಜಿ ಅಧಿಕಾರಿಯ ಬಳಿಗೆ ಬಂದು ಪಿಸ್ತೂಲಿನಿಂದ ಗುಂಡು ಹಾರಿಸಿ ಕಲ್ಲು ಎಸೆಯಲು ಪ್ರಾರಂಭಿಸಿರುವ ವಿಡಿಯೊ ವೈರಲ್ ಆಗಿದೆ.
ಇಡೀ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಶೀಘ್ರದಲ್ಲೇ ವೈರಲ್ ಆಗಿದೆ. ವೀಡಿಯೊದಲ್ಲಿ, ಚಾಂಪಿಯನ್ ಮತ್ತು ಅವರ ಬೆಂಬಲಿಗರು ಕುಮಾರ್ ಅವರ ಕಚೇರಿಯ ಮೇಲೆ ಗಲಾಟೆ ಮಾಡುತ್ತಿರುವುದು ಕಂಡುಬಂದಿದೆ.
ಅವರು ಪಿಸ್ತೂಲುಗಳಿಂದ ಹಲವಾರು ಗುಂಡು ಹಾರಿಸುತ್ತಾ ನಿಂಸಿದಿದ್ದಾರೆ. ಕಲ್ಲುಗಳನ್ನು ಎಸೆಯುತ್ತಿರುವುದು ಕಂಡುಬಂದಿದೆ. ಪ್ರತಿಯಾಗಿ, ಕುಮಾರ್ ಮತ್ತು ಅವರ ಬೆಂಬಲಿಗರು ಚಾಂಪಿಯನ್ ಅವರ ಕಚೇರಿಯ ಮೇಲೆ ಗುಂಡು ಹಾರಿಸಿದ್ದಾರೆ.
BJP leader and Ex-MLA Pranav Singh
who is a close associate of @pushkardhami, has attacked the Khanpur’s MLA (Independent) Umesh Kumar’s office with guns and goons, shot multiple fires.Is that what we call “सुशासन”?@BJP4India @RahulGandhi @BJP4UK @INCIndia @narendramodi pic.twitter.com/qZ8xFBpeTQ
— गौरव त्यागी 🇮🇳 (@GAURAV__TYAGI) January 26, 2025
ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಆರೋಪಿಗಳು ಹಗಲು ಹೊತ್ತಿನಲ್ಲಿ ಕುಮಾರ್ ಅವರ ಕಚೇರಿಯ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದರು. ದೃಶ್ಯಗಳಲ್ಲಿ, ಕಚೇರಿಯ ಗಾಜಿನ ಕಿಟಕಿಯಲ್ಲಿ ಎರಡು ಗುಂಡುಗಳ ರಂಧ್ರಗಳು ಕಂಡುಬಂದಿವೆ ಮತ್ತು ಗೋಡೆಯ ಮೇಲೆ ಗುಂಡುಗಳ ಗುರುತುಗಳು ಸಹ ಗೋಚರಿಸುತ್ತಿವೆ.
ಗುಂಡು ಹಾರಿಸಿದ ಆರೋಪದ ಮೇಲೆ ಪೊಲೀಸರು ಇಬ್ಬರೂ ನಾಯಕರನ್ನು ಬಂಧಿಸಿದ್ದಾರೆ. ದಾಳಿಯ ಬಗ್ಗೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ವಿಡಿಯೋ ವೈರಲ್ ಆದ ನಂತರ ಇಬ್ಬರೂ ನಾಯಕರನ್ನು ಬಂಧಿಸಿದರು.
ಕುಮಾರ್ ಅವರ ದಾಳಿಗೆ ಪ್ರತೀಕಾರ ತೀರಿಸಿಕೊಂಡಿದ್ದಾಗಿ ಬಿಜೆಪಿ ನಾಯಕ ಹೇಳಿದ್ದಾರೆ. ತನ್ನ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ.
“ನಾನು ಪ್ರತಿಕ್ರಿಯಿಸಿದಾಗ, ನನ್ನನ್ನು ಬಂಧಿಸಲಾಯಿತು ಇದು ಅನ್ಯಾಯ. ನಾನು ಅದರ ವಿರುದ್ಧ ಹೋರಾಡುತ್ತೇನೆ” ಎಂದು ಚಾಂಪಿಯನ್ ಮಾಧ್ಯಮಗಳಿಗೆ ತಿಳಿಸಿದರು.
ದಾಳಿಯ ಬಗ್ಗೆ ದೂರು ನೀಡಿದಾಗ ಪೊಲೀಸರು ಕ್ರಮ ಕೈಗೊಳ್ಳಲಿಲ್ಲ ಎಂದು ಅವರ ಪತ್ನಿ ದೇವಯಾನಿ ಸಿಂಗ್ ಹೇಳಿದ್ದಾರೆ. “ಗೌರವ ಉಳಿಸಲು ತಮ್ಮ ಪತಿಯ ಪ್ರತಿಕ್ರಿಯೆ ಅಗತ್ಯವಾಗಿತ್ತು ಎಂದು ಹೇಳಿದರು.
ಹರಿದ್ವಾರ ಎಸ್ಎಸ್ಪಿ ಪ್ರಮೇಂದ್ರ ಸಿಂಗ್ ದೋವಲ್ ಅವರು ಚಾಂಪಿಯನ್ ಮತ್ತು ಕುಮಾರ್ ಇಬ್ಬರನ್ನೂ ವಶಕ್ಕೆ ಪಡೆದಿದ್ದೇವೆ ಎಂದು ಹೇಳಿದರು. ಇಬ್ಬರು ನಾಯಕರ ನಡುವಿನ ಪೈಪೋಟಿ ಪ್ರಸಿದ್ಧವಾಗಿದೆ. ಅವರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಆಗಾಗ್ಗೆ ಪರಸ್ಪರ ಜಗಳವಾಡುತ್ತಾರೆ ಎಂದು ದೋವಲ್ ತಿಳಿಸಿದ್ದಾರೆ.
ಇದನ್ನೂ ಓದಿ; ನೀರಿನ ಟ್ಯಾಂಕ್ ಮಲೀನ ಪ್ರಕರಣ: ಸಿಬಿಐ ತನಿಖೆಗೆ ಆಗ್ರಹಿಸಿ ವೆಂಗೈವಾಯಲ್ನಲ್ಲಿ ದಲಿತರಿಂದ ಪ್ರತಿಭಟನೆ


