Homeಮುಖಪುಟಮುನ್ಸೂಚನೆ ಇಲ್ಲದ ವಿದ್ಯುತ್ ಕಡಿತ: ದೆಹಲಿಯ ಜೈ ಹಿಂದ್ ಕ್ಯಾಂಪ್ ನಿವಾಸಿಗಳಿಗೆ ಈಗ ತೆರವು ಭೀತಿ

ಮುನ್ಸೂಚನೆ ಇಲ್ಲದ ವಿದ್ಯುತ್ ಕಡಿತ: ದೆಹಲಿಯ ಜೈ ಹಿಂದ್ ಕ್ಯಾಂಪ್ ನಿವಾಸಿಗಳಿಗೆ ಈಗ ತೆರವು ಭೀತಿ

- Advertisement -
- Advertisement -

ದೆಹಲಿಯ ವಸಂತ್ ಕುಂಜ್‌ನಲ್ಲಿರುವ ಜೈ ಹಿಂದ್ ಕ್ಯಾಂಪ್ ನಿವಾಸಿಗಳು ಹತಾಶೆಯ ಕಂದಕದಲ್ಲಿ ಸಿಲುಕಿದ್ದಾರೆ. ಜೂನ್ 8ರಂದು ಅಧಿಕಾರಿಗಳು ವಿದ್ಯುತ್ ಕಡಿತಗೊಳಿಸಿದ ನಂತರ, ರಾಷ್ಟ್ರ ರಾಜಧಾನಿಯ ಸುಡುವ ಬಿಸಿಲು ಮತ್ತು ಆರ್ದ್ರತೆಯು ಅವರ ಬದುಕನ್ನು ದುಸ್ತರಗೊಳಿಸಿದೆ. 1,400ಕ್ಕೂ ಹೆಚ್ಚು ಕುಟುಂಬಗಳು ವಾಸಿಸುವ ಈ ಕ್ಯಾಂಪ್‌ನ ಮನೆಗಳನ್ನು ಮೇ 30ರ ನ್ಯಾಯಾಲಯದ ಆದೇಶದ ಮೇರೆಗೆ ನೆಲಸಮಗೊಳಿಸಲು ನಿರ್ಧರಿಸಲಾಗಿದೆ ಎಂದು ದಿ ವೈರ್, ಇಂಡಿಯಾ ಟುಡೆ ಪತ್ರಿಕೆಗಳು ವರದಿ ಮಾಡಿವೆ.

ದಶಕಗಳ ಹಿಂದೆ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಿಂದ ವಲಸೆ ಬಂದಿರುವ ಬಹುಪಾಲು ನಿವಾಸಿಗಳು, ಇದು ತಮ್ಮನ್ನು ಗುರಿಯಾಗಿಸಿಕೊಂಡಿರುವ ನಡೆಯೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 40 ವರ್ಷಗಳಷ್ಟು ಹಳೆಯದಾದ ಈ ಕ್ಯಾಂಪ್ ಅನ್ನು ರಾಜ್ಯ ಸರ್ಕಾರ “ಅಕ್ರಮ” ಎಂದು ಘೋಷಿಸಿದೆ. ಪೊಲೀಸರು “ದಾಖಲೆಗಳಿಲ್ಲದ ಬಾಂಗ್ಲಾದೇಶಿಯರು” ಇಲ್ಲಿ ಅಡಗಿಕೊಂಡಿದ್ದಾರೆಂದು ಆರೋಪಿಸಿದ್ದಾರೆ, ಆದರೆ ಸಮುದಾಯವು ಈ ಆರೋಪಗಳನ್ನು “ದುರುದ್ದೇಶಪೂರಿತ” ಎಂದು ಸಂಪೂರ್ಣವಾಗಿ ತಳ್ಳಿಹಾಕಿದೆ.

“ನಾವು ಭಾರತೀಯರು, ಆದರೆ ಕೆಲವರಲ್ಲಿ ದಾಖಲೆಗಳಿಲ್ಲದಿರಬಹುದು. ಆದರೂ ಯಾವುದೇ ಸೂಚನೆ ಇಲ್ಲದೆ ನಮ್ಮ ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಈ ಧಗೆಯಲ್ಲಿ ನಮ್ಮನ್ನು ನರಳುವಂತೆ ಮಾಡಲಾಗಿದೆ” ಎಂದು ಆಯುದ್ದೀನ್ ಹುಸೇನ್ ಹೇಳಿದ್ದಾರೆ. ಚಾಲಕರಾಗಿ ಕರ್ತವ್ಯದಲ್ಲಿದ್ದಾಗ ವಿದ್ಯುತ್ ಕಡಿತದ ಸುದ್ದಿ ಕೇಳಿ ಆಘಾತಗೊಂಡ ಹುಸೇನ್, “ವಿದ್ಯುತ್ ಮಂಡಳಿ, ದೆಹಲಿ ಪೊಲೀಸ್ ಮತ್ತು ಸಿಆರ್‌ಪಿಎಫ್ ಜೊತೆ ಬಂದು ತಂತಿಗಳನ್ನು ಕಟ್ ಮಾಡಿದರು. ನ್ಯಾಯಾಲಯದ ಆದೇಶ ಎಂದರೇ ಹೊರತು, ಯಾವುದೇ ಮುನ್ಸೂಚನೆ ಇರಲಿಲ್ಲ. ಅವರು ನಮ್ಮ ಬದುಕಿನ ಅಸರೆಯನ್ನೇ ಕಿತ್ತುಕೊಂಡರು” ಎಂದು ಅಳಲು ತೋಡಿಕೊಂಡರು.

ಯೋಜಿತ ನೆಲಸಮದ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಆಯುದ್ದೀನ್ ಹುಸೇನ್ ಸ್ಪಷ್ಟಪಡಿಸುತ್ತಾರೆ. “ನಮ್ಮ ಮನೆಗಳು ಕೆಡವಲ್ಪಟ್ಟರೆ ನಾವೇನು ಮಾಡಬಹುದು?” ಎಂದು ಪ್ರಶ್ನಿಸುವ ಅವರ ಮಾತಿನಲ್ಲಿ ಆಳವಾದ ಹತಾಶೆ ಇದೆ. “ಈಗಿನ ಮುಖ್ಯ ಚಿಂತೆ ವಿದ್ಯುತ್. ಚಿಕ್ಕ ಮಕ್ಕಳು, ಗರ್ಭಿಣಿಯರು, ವೃದ್ಧರಿರುವಾಗ ಈ ಬಿಸಿಲಿನಲ್ಲಿ ಒಂದು ಕ್ಷಣವೂ ಇರುವುದು ಕಷ್ಟ. ವಿದ್ಯುತ್ ಏಕೆ ಕಡಿತಗೊಳಿಸಿದರು ಮತ್ತು ಅದನ್ನು ಪುನಃಸ್ಥಾಪಿಸಲಿ ಎಂದು ಮಾತ್ರ ನಾವು ಬೇಡುತ್ತಿದ್ದೇವೆ” ಎಂದು ಅವರು ಕಳವಳ ವ್ಯಕ್ತಪಡಿಸುತ್ತಾರೆ. “ನಾನು ಈ ಬೀದಿಗಳಲ್ಲೇ ಬೆಳೆದಿದ್ದೇನೆ, 30 ವರ್ಷಗಳಿಂದ ಇದೇ ನೆಲದಲ್ಲಿ ಬೇರೂರಿದ್ದೇನೆ. ಜೈ ಹಿಂದ್ ಕ್ಯಾಂಪ್ ಕೇವಲ ಆಶ್ರಯತಾಣವಲ್ಲ; ಅದು ನನ್ನ ಬದುಕಿನ ಸಮಸ್ತ ಅಸ್ತಿತ್ವ” ಎಂದು ಹುಸೇನ್ ಭಾವುಕರಾಗಿ ನುಡಿಯುತ್ತಾರೆ.

ಸುಡುವ ಬೇಸಿಗೆಯ ಬಿಸಿಲಿನಲ್ಲಿ, ನಿವಾಸಿಗಳು ಅಸಹಾಯಕವಾಗಿ ತಮ್ಮ ಮನೆಗಳ ಹೊರಗೆ ಕೈಪಂಖಗಳನ್ನು ಬೀಸುತ್ತಾ ಕುಳಿತಿದ್ದಾರೆ. ಕಳೆದ 22 ವರ್ಷಗಳಿಂದ ಲಖನೌದಿಂದ ವಲಸೆ ಬಂದು ಇದೇ ಕ್ಯಾಂಪ್‌ನಲ್ಲಿ ವಾಸಿಸುತ್ತಿರುವ ಲಲಿತ್ ಕುಮಾರ್ ತಮ್ಮ ಅಳಲನ್ನು ತೋಡಿಕೊಂಡರು: “ನಮ್ಮ ವಿದ್ಯುತ್ ಸಂಪರ್ಕವನ್ನು ನಿನ್ನೆ ಬೆಳಿಗ್ಗೆ 10 ಗಂಟೆಗೆ ಕಡಿತಗೊಳಿಸಿದರು. ಒಂದು ಸಂಪೂರ್ಣ ವಿಡಿಯೋ ತಂಡವೇ ಅಧಿಕಾರಿಗಳೊಂದಿಗೆ ಬಂದು ನಮ್ಮನ್ನು ಚಿತ್ರೀಕರಿಸುತ್ತಿತ್ತು. ಏನಾಗುತ್ತಿದೆ ಎಂದು ನಮಗೆ ಕನಿಷ್ಠ ಸುಳಿವೂ ಇಲ್ಲ. ನಾನು ಪ್ರತಿ ತಿಂಗಳು ಸರಿಯಾಗಿ ವಿದ್ಯುತ್ ಬಿಲ್‌ಗಳನ್ನು ಪಾವತಿಸುತ್ತಿದ್ದೇನೆ, ಹಾಗಿದ್ದರೂ ಅವರು ಏಕೆ ಹೀಗೆ ಮಾಡುತ್ತಿದ್ದಾರೆ?” ಅವರ ಧ್ವನಿಯಲ್ಲಿ ಆತಂಕ ಸ್ಪಷ್ಟವಾಗಿತ್ತು. “24 ಗಂಟೆಗಳಿಗಿಂತ ಹೆಚ್ಚಾಗಿದೆ. ಫ್ಯಾನ್‌ಗಳಿಲ್ಲ, ಕೂಲರ್‌ಗಳಿಲ್ಲ, ಏನೂ ಇಲ್ಲ. ಈ ಬಿಸಿಲಿನಲ್ಲಿ ಒಂದು ಗಂಟೆ ಕೂಡ ಇರಲು ಆಗುತ್ತಿಲ್ಲ. ನಾವಿಲ್ಲಿ 2,000 ಜನರಿದ್ದೇವೆ, ಈಗ ಎಲ್ಲಿಗೆ ಹೋಗಬೇಕು?” ಎಂದು ಅವರು ಹತಾಶೆಯಿಂದ ಪ್ರಶ್ನಿಸಿದರು.

ಮುಸ್ಲಿಂ ನಿವಾಸಿಗಳಿಗೆ ಈ ಪರಿಸ್ಥಿತಿಯು ಆಳವಾದ ಅವಮಾನವನ್ನುಂಟು ಮಾಡಿದೆ. “ನಾವು ಬಂಗಾಳದಿಂದ ಬಂದವರು ಎಂಬ ಒಂದೇ ಕಾರಣಕ್ಕೆ ನಮ್ಮನ್ನು ಬಾಂಗ್ಲಾದೇಶಿಯರು ಎಂದು ಹಣೆಪಟ್ಟಿ ಕಟ್ಟುತ್ತಾರೆ” ಎಂದು ಹುಸೇನ್ ತೀವ್ರ ನೋವಿನಿಂದ ಹೇಳುತ್ತಾರೆ. “ದೆಹಲಿ ಪೊಲೀಸರೇ ನಮ್ಮ ದಾಖಲೆಗಳನ್ನು ಪರಿಶೀಲಿಸಲು ಬಂಗಾಳದಲ್ಲಿರುವ ನಮ್ಮ ಹಳ್ಳಿಗಳಿಗೆ ಭೇಟಿ ನೀಡಿದ್ದರು. ಅಲ್ಲಿನ ಪಂಚಾಯತ್‌ಗಳು ಮತ್ತು ಸಂಸದರು ಸಹ ನಮ್ಮ ಭಾರತೀಯ ಪೌರತ್ವವನ್ನು ದೃಢಪಡಿಸಿದ್ದಾರೆ. ನಾವೆಲ್ಲರೂ ಭಾರತೀಯರು, ಆದರೂ ನಮ್ಮನ್ನು ಪದೇ ಪದೇ ಅದನ್ನು ಸಾಬೀತುಪಡಿಸಲು ಒತ್ತಾಯಿಸಲಾಗುತ್ತಿದೆ” ಎಂದು ಅವರ ಧ್ವನಿಯಲ್ಲಿ ಆಕ್ರೋಶ ಮನೆಮಾಡಿದೆ.

ವಿದ್ಯುತ್ ಕಡಿತವು ಗರ್ಭಿಣಿಯರು, ಮಕ್ಕಳು, ಅಸ್ವಸ್ಥರು ಮತ್ತು ವೃದ್ಧರಂತಹ ದುರ್ಬಲ ವರ್ಗದವರನ್ನು ಹೆಚ್ಚು ಬಾಧಿಸಿದೆ. ಅಸ್ವಸ್ಥ ಪೋಷಕರು, ಕುರುಡು ಸಹೋದರಿ ಮತ್ತು ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವ ವಿಧವೆ ಫಾತಿಮಾ ಅವರ ಆಕ್ರೋಶ ಸ್ಪಷ್ಟವಾಗಿದೆ: “ನಾವು ಮಾನವರಲ್ಲವೇ? ದಶಕಗಳಿಂದ ಇಲ್ಲಿ ವಾಸಿಸಿದ್ದೇವೆ, ಆದರೆ ಈಗ ನಮ್ಮನ್ನು ‘ಅಕ್ರಮ’ ಎನ್ನುತ್ತಾರೆ! ಚುನಾವಣೆ ಬಂದಾಗ ಇದೇ ರಾಜಕಾರಣಿಗಳು ನಮ್ಮ ಮತಕ್ಕಾಗಿ ಭಿಕ್ಷೆ ಬೇಡಲು ಮೊದಲಿಗರಾಗಿದ್ದರು.” ತಮ್ಮ ಹೋರಾಟವನ್ನು ವಿವರಿಸುತ್ತಾ, “ನಾವು ಗೌರವಯುತ ಜೀವನಕ್ಕಾಗಿ ಇಲ್ಲಿಗೆ ಬಂದಿದ್ದೇವೆ, ಆದರೆ ಅವರು ಅದನ್ನೂ ನಮಗೆ ಮಾಡಲು ಬಿಡುತ್ತಿಲ್ಲ. ಎಲ್ಲವನ್ನೂ ಕೋಮುವಾದಿ ಮಾಡುತ್ತಾರೆ. ಹಿಂದೂಗಳು, ಮುಸ್ಲಿಮರು, ಸಿಖ್ಖರು – ನಾವೆಲ್ಲರೂ ಇಲ್ಲಿ ಒಟ್ಟಾಗಿ ವಾಸಿಸುತ್ತೇವೆ” ಎಂದು ಫಾತಿಮಾ ತಮ್ಮ ನೋವು ಮತ್ತು ಅಸಮಾಧಾನವನ್ನು ವ್ಯಕ್ತಪಡಿಸಿದರು.

ಅಡುಗೆಯವರಾದ ರಶೀದಾ ಕಣ್ಣೀರಿಡುತ್ತಾ ತಮ್ಮ ಹೃದಯದ ನೋವನ್ನು ಹಂಚಿಕೊಂಡರು: “ಉತ್ತಮ ಬದುಕಿನ ಆಸೆ ಹೊತ್ತು ಇಲ್ಲಿಗೆ ಬಂದೆವು. ಮೂರು ದಶಕಗಳಿಂದ ಇದೇ ನಮ್ಮ ಮನೆ, ನಮ್ಮ ನೆಲೆ. ಈಗ ನಾವು ಎಲ್ಲಿಗೆ ಹೋಗುವುದು? ಇಲ್ಲಿಂದ ಕದಲುವುದು ಎಂದರೆ ನಮ್ಮ ಬೇರುಗಳನ್ನೇ ಕಿತ್ತುಹಾಕಿದಂತೆ. ನಾವಿಲ್ಲಿಯೇ ಉಳಿಯುತ್ತೇವೆ.” ವಿದ್ಯುತ್ ಸಂಪರ್ಕ ಕಡಿತಗೊಂಡಿರುವುದರಿಂದ, ರಾತ್ರಿಯಿಡೀ ನಿವಾಸಿಗಳು ಬೀದಿಗಳಲ್ಲಿ ಮಲಗಲು ಒತ್ತಾಯಿಸಲ್ಪಟ್ಟಿದ್ದಾರೆ. ಫೋನ್‌ಗಳಿಗೆ ಚಾರ್ಜ್ ಮಾಡಲು ಸಮೀಪದ ಅಂಗಡಿಗಳನ್ನು ಆಶ್ರಯಿಸುವುದು ಅವರಿಗೆ ಅನಿವಾರ್ಯವಾಗಿದೆ.

ವಿದ್ಯುತ್ ಸಂಪರ್ಕವು ಕ್ಯಾಂಪಿನ ಮಸೀದಿ ಮತ್ತು ದೇವಸ್ಥಾನದ ಮೂಲಕ ಸಾಗುತ್ತಿತ್ತು. ಅಧಿಕಾರಿಗಳು ಎರಡೂ ಧಾರ್ಮಿಕ ಕೇಂದ್ರಗಳ ಮೀಟರ್‌ಗಳಿಂದ ತಂತಿಗಳನ್ನು ಕಡಿತಗೊಳಿಸಿದಾಗ, ಇಡೀ ಪ್ರದೇಶವು ಕ್ಷಣಾರ್ಧದಲ್ಲಿ ಕತ್ತಲಲ್ಲಿ ಮುಳುಗಿತು. ಈ ಕ್ರಿಯೆಯು ನಿವಾಸಿಗಳ ಹೃದಯವನ್ನು ತಟ್ಟಿದೆ. “ನಾವು ಬಿಟ್ಟು ಹೋಗುವ ಮೊದಲು ಇಲ್ಲಿಯೇ ಸಾಯುತ್ತೇವೆ” ಎಂದು ಮುಷರಫ್ ಆಕ್ರೋಶದಿಂದ ಪ್ರತಿಜ್ಞೆ ಮಾಡಿದರು. ಫಾತಿಮಾ ಕೂಡ ಗಟ್ಟಿದನಿಯಲ್ಲಿ “ನಮಗೆ ಬೇರೆ ಎಲ್ಲಿಗೂ ಹೋಗಲು ಸ್ಥಳವಿಲ್ಲ. ನಾವು ನಮ್ಮ ಜೀವವನ್ನು ಕೊಡುತ್ತೇವೆ, ಆದರೆ ಇಲ್ಲಿಂದ ಕದಲುವುದಿಲ್ಲ” ಎಂದು ಆ ದೃಢ ಸಂಕಲ್ಪವನ್ನು ಪುನರುಚ್ಚರಿಸಿದರು.

ಅಸಹನೀಯ ಬಿಸಿಲಿನಿಂದಾಗಿ, ಹಲವರು ತಾತ್ಕಾಲಿಕವಾಗಿ ತಮ್ಮ ಸಂಬಂಧಿಕರ ಮನೆಗಳಿಗೆ ತೆರಳಲು ಒತ್ತಾಯಿಸಲ್ಪಟ್ಟಿದ್ದಾರೆ. ತಮ್ಮ ಕೂಲರ್‌ಗಳು ಮತ್ತು ರೆಫ್ರಿಜರೇಟರ್‌ಗಳನ್ನು ಗಾಡಿಗಳಿಗೆ ಲೋಡ್ ಮಾಡುತ್ತಾ, ಉಳಿಸಬಹುದಾದದ್ದನ್ನು ಉಳಿಸಿಕೊಳ್ಳಲು ಅವರು ಹತಾಶ ಪ್ರಯತ್ನ ಮಾಡುತ್ತಿದ್ದರು. “ಹೊರಗಡೆ ಬಾಡಿಗೆ ಕೂಡ ನಮಗೆ ತುಂಬಾ ಹೆಚ್ಚು. ಬಿಟ್ಟು ಹೋಗುವುದು ನಮಗೊಂದು ಆಯ್ಕೆಯಲ್ಲ” ಎಂದು ರಶೀದಾ ಸ್ಪಷ್ಟಪಡಿಸಿದರು, ಇದು ಅವರ ಅಸಹಾಯಕತೆಯನ್ನು ಬಿಂಬಿಸುತ್ತದೆ. ಇಂತಹ ಪರಿಸ್ಥಿತಿಯಲ್ಲೂ, ನಾಗರಿಕ ಸಮಾಜ ಗುಂಪುಗಳು ಪ್ರಕರಣವು ನ್ಯಾಯಾಲಯದಲ್ಲಿ ಬಾಕಿ ಇದೆ ಎಂದು ತಿಳಿಸಿವೆ ಮತ್ತು ನೆಲಸಮಕ್ಕೆ ತಡೆ ನೀಡುವಂತೆ ಅರ್ಜಿ ಸಲ್ಲಿಸಿ, ಕಾನೂನು ಹೋರಾಟವನ್ನು ಮುಂದುವರೆಸಿವೆ.

ಕ್ರಾಂತಿಕಾರಿಗಳ ಹತ್ಯೆಗೆ 50 ವರ್ಷ: ಶ್ರೀಕಾಕುಳಂ ಸಶಸ್ತ್ರ ಹೋರಾಟಗಾರರಾದ ವೆಂಪಟಾಪು ಸತ್ಯನಾರಾಯಣ, ಆದಿಭಟ್ಲಾ ಕೈಲಾಸಂ ಎನ್‌ಕೌಂಟರ್ ರಹಸ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...