Homeಕರ್ನಾಟಕಕಲ್ಲಡ್ಕ ಶಾಲೆಯ ಬಾಬ್ರೀ ಡ್ರಾಮಾ! ದ್ವೇಷ ಬಿತ್ತನೆಗೊಂಡ ಮನಸ್ಸು ದ್ವೇಷವನ್ನಷ್ಟೇ ಕೊಡಬಲ್ಲದು

ಕಲ್ಲಡ್ಕ ಶಾಲೆಯ ಬಾಬ್ರೀ ಡ್ರಾಮಾ! ದ್ವೇಷ ಬಿತ್ತನೆಗೊಂಡ ಮನಸ್ಸು ದ್ವೇಷವನ್ನಷ್ಟೇ ಕೊಡಬಲ್ಲದು

- Advertisement -
- Advertisement -

ಕಲ್ಲಡ್ಕ ಪ್ರಭಾಕರ ಭಟ್ಟರ ಯಜಮಾನಿಕೆಯ ವಿದ್ಯಾಸಂಸ್ಥೆಗಳು ಒಂದರ ಹಿಂದೊಂದರಂತೆ ಸ್ಪರ್ಧೆಗೆ ಬಿದ್ದಂತೆ ವಿಕೃತಿ ಮೂಲಕವೇ ಲೋಕ ಪ್ರಸಿದ್ಧವಾಗುತ್ತಿವೆ! ಕಲ್ಲಡ್ಕದಲ್ಲಿ ಭಟ್ಟರು ನಡೆಸುವ ಶ್ರೀರಾಮ ವಿದ್ಯಾಕೇಂದ್ರದ ಮುಗ್ಧ ವಿದ್ಯಾರ್ಥಿಗಳಿಂದ ಬಾಬರಿ ಮಸೀದಿ ಗುಂಬಜಗಳನ್ನು ರಣೋತ್ಸಾಹದಲ್ಲಿ ಉರುಳಿಸುವ “ಪ್ರಹಸನ” ಆಡಿಸಲಾಗಿದೆ! ಅಲ್ಲಿಗೆ ಹಿಂದೂತ್ವದ ಹರಿಕಾರ ಕಲ್ಲಡ್ಕ ಭಟ್ಟರು ಪ್ರಾಂಜಲ ಮನಸ್ಸಿನ ಮಕ್ಕಳ ಹೃದಯದಲ್ಲಿ ಕಾರ್ಕೋಟಕ ವಿಷ ತುಂಬುವ ಕಾರ್ಯದಲ್ಲಿ ತಲ್ಲೀನನಾಗಿರುವುದು ಪಕ್ಕಾ ಆಗಿಹೋಗಿದೆ…

ಕಲ್ಲಡ್ಕದ ಶ್ರೀರಾಮಶಾಲೆಯ ಪ್ರತಿ ವರ್ಷದ ಕ್ರೀಡೋತ್ಸವದಲ್ಲಿ ಯಾವುದಾದರೊಂದು ಮತಾಂಧ ಮಸಲತ್ತಿನ ಕಾರ್ಯಕ್ರಮ ಮಾಡಿಸದಿದ್ದರೆ ಭಟ್ಟರಿಗೆ ನಿದ್ದೆಯೇ ಬೀಳುವುದಿಲ್ಲ. ಕೊಲ್ಲೂರು ದೇವಳದ ಹುಂಡಿ ಹಣ ವಿದ್ಯಾರ್ಥಿಗಳ ಉದ್ಧಾರದ ನೆಪದಲ್ಲಿ ಸ್ವಾಹಾ ಮಾಡುತ್ತಿದ್ದ ಭಟ್ಟರು, ಆ ಅನುದಾನ ನಿಂತಾಗ ಅಂದಿನ ಜಿಲ್ಲಾ ಉಸ್ತುವಾರಿ ಮಂತ್ರಿ ರಮಾನಾಥ ರೈನನ್ನು ಧರ್ಮ ಭ್ರಷ್ಟನೆಂಬಂತೆ ಬಿಂಬಿಸಿ ಕಳೆದ ವರ್ಷದ ಕ್ರೀಡಾ ಉತ್ಸವದಲ್ಲಿ “ಆಟ” ಆಡಿಸಿದ್ದ. ಈ ಬಾರಿ ಬಾಬರಿ ಮಸೀದಿ ಧ್ವಂಸ ಮರುಸೃಷ್ಠಿ ನಾಟಕ ವಿದ್ಯಾರ್ಥಿಗಳಿಂದ ಮಾಡಿಸಿ ಭಟ್ಟರು ಕೇಕೆ ಹಾಕಿದ್ದಾರೆ. ಕೇಂದ್ರದ ಗೊಬ್ಬರ ಮಂತ್ರಿ ಸದಾನಂದ ಗೌಡ ಮತ್ತು ಪಾಂಡಿಚೇರಿ ಲೆಫ್ಟೆನೆಂಟ್ ಗವರ್ನರ್ ಕಿರಣ್‍ಬೇಡಿ ಮುಖ್ಯ ಅತಿಥಿಗಳಾಗಿದ್ದ ಈ ಕಾರ್ಯಕ್ರಮದಲ್ಲಿ ಕೇಸರಿ-ಬಿಳಿ ಬಣ್ಣದ ಕರಸೇವಕ ವೇಷದಲ್ಲಿದ್ದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ರೋಷಾವೇಷದಲ್ಲಿ ಬಾಬರಿ ಮಸೀದಿ ಮೇಲೆ ದಾಳಿ ನಡೆಸಿದ್ದಾರೆ.

ತೀರಾ ಅಸಹ್ಯವೆಂದರೆ, ಐಪಿಎಸ್ ಅಧಿಕಾರಿಯಾಗಿದ್ದ ಕಿರಣ್ ಬೇಡಿ ಸಹ ಈ ಕಾನೂನುಬಾಹಿರ ಆಟಾಟೋಪ ಆಸ್ವಾದಿಸಿದ್ದಾರೆ. ಅಷ್ಟೇ ಅಲ್ಲ, ಕಲ್ಲಡ್ಕ ಭಟ್ಟರ ತರಬೇತಿಯಲ್ಲಿ ದಾರಿ ತಪ್ಪುತ್ತಿರುವ ಮಕ್ಕಳ ಸಾಧನೆಯನ್ನು ಪ್ರಶಂಸಿಸಿ ಟ್ವೀಟ್ ಸಹ ಮಾಡಿದ್ದಾರೆ. ಸಮಾಜದ ಸ್ವಾಸ್ಥ್ಯ ಕೆಡಿಸುವ ಧರ್ಮಸೂಕ್ಷ್ಮ ‘ಮನರಂಜನೆ’ ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಪೊಲೀಸ್ ವ್ಯವಸ್ಥೆ ಕಣ್ಣು-ಬಾಯಿ ಬಿಟ್ಟುಕೊಂಡು ನೋಡಿತೇ ವಿನಃ ಇದು ಅನಾಹುತಕಾರಿ ಅತಿರೇಕದ ಮಿಮಿಕ್ರಿ ಎಂದು ತಡೆಯುವ ಕರ್ತವ್ಯ ಪ್ರಜ್ಞೆ ಪ್ರದರ್ಶಿಸಲಿಲ್ಲ!! ಕಲ್ಲಡ್ಕ ಭಟ್ಟರ ಅಡಿಯಾಳಿನಂತಿರುವ ಶ್ರೀರಾಮ ಶಾಲೆಯಲ್ಲಿ ಈ ವಿಧ್ವಂಸಕತೆಗೂ ಮೊದಲು ಎಲ್.ಕೆ.ಆಡ್ವಾಣಿ ಹಿಂದೆ ಮಾಡಿದ್ದ ರಥಯಾತ್ರೆ ಕಿತಾಪತಿಯ ಅಣುಕು ಪ್ರದರ್ಶನವೂ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ಮಾಡಿಸಲಾಯಿತ್ತು.

ಕಲ್ಲಡ್ಕ ಭಟ್ಟರ ಧರ್ಮಕಾರಣಕ್ಕಾಗಿ ಶ್ರೀರಾಮ ಶಾಲೆಯಲ್ಲಿ ಕಲಿಯುವ ಮಕ್ಕಳು ದ್ವೇಷಾಸೂಯೆ-ಹಿಂಸೋನ್ಮಾದದ ಮನಃಸ್ಥಿತಿಯಲ್ಲಿ ಬೆಳೆಯಬೇಕಾಗಿ ಬಂದಿರುವುದು ದುರಂತ. ಬಾಸ್‍ನ ಸಂಪ್ರೀತಗೊಳಿಸಲು ಮಕ್ಕಳಿಗೆ ಮುಸ್ಲಿಮರ ದ್ವೇಷಿಸುವ, ಅಟ್ಟಾಡಿಸಿ ಹೊಡೆಯುವ “ವಿದ್ಯೆ” ಬೋಧಿಸುತ್ತಿರುವ ಶ್ರೀರಾಮ ಶಾಲೆಯ ಶಿಕ್ಷಕ ಗಣ ಅವರಿಗರಿವಿಲ್ಲದೆ ಸಮಾಜದ ಯುವಪೀಳಿಗೆಯನ್ನು ಸಮಾಜಘಾತುಕರಾಗಿ ತಯಾರಿಸುತ್ತಿದೆ. ಅಸಹಿಷ್ಣುತೆಯ ತರಬೇತಿ ಪಡೆಯುವ ಮಗು ಮುಂದೆ ಸಾಬರಿಗೇ ಘಾಸಿಗೊಳಿಸಬೇಕೆಂದೇನೂ ಇಲ್ಲ. ಭಿನ್ನಮತ ಬಂದಾಗ ಆ ಪಾಖಂಡಿ ಮಗು ಒಡಹುಟ್ಟಿದವರನ್ನೋ, ಸ್ವಂತ ಧರ್ಮದವರನ್ನೋ ಹಿಂಸಿಸಲು ಹಿಂಜರಿಯದು. ಇದು ಸರಳ ಸಮಾಜ ಶಾಸ್ತ್ರ. ಪಕ್ಕಾ ಮನೋವಿಜ್ಞಾನ ಎತ್ತಿಂದೆತ್ತ ಲೆಕ್ಕಹಾಕಿ ತಾಳೆ ನೋಡಿದರೂ ಶ್ರೀರಾಮ ಶಾಲೆಯ ಮಕ್ಕಳ ತಲೆಯಲ್ಲಿ ತುಂಬುತ್ತಿರುವ ಧರ್ಮ ಪಾಠ ಹುಲಿ ಸವಾರಿ ಆಗುವುದು ಗ್ಯಾರಂಟಿ!!

ಇವತ್ತು ಕರಾವಳಿಯಲ್ಲಿ ಆಗುತ್ತಿರುವುದು ಹಿಂದೂ ಧರ್ಮ ರಕ್ಷಣೆ ಸ್ವಧರ್ಮದವರಿಗೇ ತಿರುಗುಬಾಣವಾಗುತ್ತಿದೆ. ದನ ಸಾಗಿಸುತ್ತಾರೆಂಬ ಅನುಮಾನದಲ್ಲಿ ಪಾಪದ ಹಿಂದೂ ಹುಡುಗರೇ ಹತರಾಗಿದ್ದಾರೆ. ಸಹಪಾಠಿಗಳೊಂದಿಗೆ ಮಾತಾಡಿದರೂ ಸಾಕು, ಹಿಂದೂ ಹುಡುಗಿಯರು ವ್ಯಭಿಚಾರಿಣಿ ಪಟ್ಟ ಪಡೆದು ಹಿಂಸೆ-ಹಲ್ಲೆ ಅನುಭವಿಸಬೇಕಾಗಿ ಬಂದಿದೆ. ಹಲವು ಹಿಂದೂ ಹುಡುಗಿಯರ ಬದುಕು ಅನೈತಿಕ ಪೊಲೀಸ್‍ಗಿರಿಯಿಂದ ಬರ್ಬಾದಾಗಿ ಹೋಗಿದೆ. ಶ್ರೀರಾಮ ಶಾಲೆಯಲ್ಲಿ ಕಲಿಯುತ್ತಿರುವ ಮಗು ಅನಾಹುತಕಾರಿ ಅನೈತಿಕ ಪೊಲೀಸ್ ಆಗುತ್ತದೆಯೇ ಹೊರತು ಸಂಯಮ-ಸಹಬಾಳ್ವೆಯ ನೈತಿಕ ಶಿಷ್ಟಾಚಾರದ ಪ್ರಜೆಯಾಗಲು ಹೇಗೆ ಸಾಧ್ಯ? ಬೇವು ಬಿತ್ತಿ ಮಾವು ಬೇಕೆಂದರೆ ಹೇಗೆ?

ಭಟ್ಟರ ಆಟ-ಹೂಟಗಳನ್ನು ಶ್ರೀರಾಮ ಶಾಲೆ, ವಿವೇಕಾನಂದ ಕಾಲೇಜಿನಲ್ಲಿ ಕಲಿಯುತ್ತಿರುವ ಮಕ್ಕಳ ಪಾಲಕರು ಅರ್ಥಮಾಡಿಕೊಳ್ಳಬೇಕಾದ ಸಂದರ್ಭವಿದು. ಭಟ್ಟರ ಶಾಲೆಯಲ್ಲಿ ಕೊಡುತ್ತಿರುವ ಅಸಹಿಷ್ಣುತೆ, ವ್ಯಗ್ರತೆ, ಸಂಘಟಿತ ಅಪರಾಧ ಕಲೆಯ ತರಬೇತಿಯ ಅಡ್ಡ ಪರಿಣಾಮ ಆಗುವುದು ತಮ್ಮ ಕುಂಟುಂಬದಲ್ಲೇ ಎಂಬುದು ಪಾಲಕರಿಗೆ ಅರಿವಾಗಬೇಕಿದೆ. ಶಾಲೆಯಂಥ ತೀರಾ ಸೂಕ್ಷ್ಮ ಮನಸ್ಸುಗಳಿರುವಲ್ಲಿ ಧ್ವಂಸ-ದ್ವೇಷದ ಕೇಸರಿ ಕಾರ್ಯಕ್ರಮ ನಡೆಸಿದ ಕಲ್ಲಡ್ಕ ಭಟ್ಟರಿಗೆ ಸಾಮಾಜಿಕ ಜಾಲತಾಣದಲ್ಲಿ ಸರಿಯಾದ ಮಂಗಳಾರತಿ ಆಗುತ್ತಿದೆ. ಭಟ್ಟರ ಮೇಲೆ ಕೇಸೇನೊ ದಾಖಲಾಗಿದೆ. ಆದರೆ, ಬಿಜೆಪಿ ಸರ್ಕಾರಕ್ಕೆ ಭಟ್ಟರಂತವರ ಕೋಮು ಅಜೆಂಡಾ ಅರ್ಥವಾದಷ್ಟು ಸಲೀಸಾಗಿ ಮಕ್ಕಳ ಮನೋಸಂಕೀರ್ಣತೆಯ ಮೇಲಾಗುತ್ತಿರುವ ಸೂಕ್ಷ್ಮ ಎಲ್ಲಿ ಅರ್ಥವಾದೀತು. ಪ್ರಕರಣ ಗಟ್ಟಿಯಾಗಿ ನಿಲ್ಲುವ ಸಂಭವವೇ ಇಲ್ಲ. ಆದರೆ ತಮ್ಮ ಮಕ್ಕಳು ರೂಪುಗೊಳ್ಳುತ್ತಿರುವ ಭಯಾನಕ ಭವಿಷ್ಯವನ್ನು ಈಗ ಹೆತ್ತವರೇ ಅರ್ಥ ಮಾಡಿಕೊಂಡು ಮುನ್ನೆಚ್ಚರಿಕೆ ವಹಿಸಬೇಕಿದೆಯಷ್ಟೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...

ಸರ್ಕಾರ ಆಧಾರ್ ವ್ಯವಸ್ಥೆಯನ್ನು ನಂಬುವುದಾದರೆ, SIR‌ ತಪಾಸಣೆಗೂ ಇದನ್ನೇ ಬಳಸಲಿ: ಆರ್‌ ಎಸ್‌ ಶರ್ಮಾ ಸಲಹೆ

ಪ್ರಸ್ತುತ ಚರ್ಚೆಯಲ್ಲಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಮತ್ತು ದಾಖಲೆಗಳ ತಪಾಸಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಧಾರ್‌ ವ್ಯವಸ್ಥೆಯ ಮಾಜಿ ಮುಖ್ಯಸ್ಥ (UIDAI) ಶರ್ಮಾ ಅವರು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಪ್ರತಿ ಬಾರಿ ಸಾವಿರಾರು...

ಸೋಶಿಯಲ್ ಮೀಡಿಯಾಗಳಲ್ಲಿ ಅಪ್ರಾಪ್ತರಿಗೆ ಹೆಚ್ಚುತ್ತಿರುವ ಅಪಾಯ; ಲೈಂಗಿಕ ಶೋಷಣೆ ತಡೆಗೆ ಮೆಟಾದಿಂದ ಮಹತ್ವದ ನಿರ್ಧಾರ!

ಸಾಮಾಜಿಕ ಜಾಲತಾಣಗಳ ಬಳಕೆ ಯುವಜನರು ಮತ್ತು ಮಕ್ಕಳ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಗಿರುವ ಬೆನ್ನಲ್ಲೇ, ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸಲು ಮೆಟಾ ಮಹತ್ವದ ನಿರ್ಧಾರ ಕೈಗೊಂಡಿದೆ....

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...

‘NAZA’ಗೆ ವೆನಿಸ್ ವಿಶೇಷ ಜ್ಯೂರಿ ಪ್ರಶಸ್ತಿ; ಸ್ವದೇಶ ಇಸ್ರೇಲ್‌ನ ಎಐ ಹತ್ಯಾಕಾಂಡ ಬಯಲಿಗೆಳೆದ ನಿರ್ದೇಶಕರಿಗೆ ಪೌರತ್ವ ಕಸಿಯುವ ಬೆದರಿಕೆ

ವೆನಿಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದ ‘NAZA’ ಸಾಕ್ಷ್ಯಚಿತ್ರದ ನಿರ್ದೇಶಕರ ವಿರುದ್ಧ ಇಸ್ರೇಲಿ ಸಂಸ್ಕೃತಿ ಸಚಿವ ಮಿಕಿ ಜೋಹರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯಕ್ಕೆ ದ್ರೋಹ’ ಎಸಗಿದ್ದಾರೆಂದು ಆರೋಪಿಸಿ ಅವರ ಇಸ್ರೇಲಿ...

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...