ಕೆಐಐಎಫ್ಬಿ ಮಸಾಲಾ ಬಾಂಡ್ ಪ್ರಕರಣದಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್, ಮಾಜಿ ಹಣಕಾಸು ಸಚಿವ ಥಾಮಸ್ ಐಸಾಕ್ ಮತ್ತು ಮುಖ್ಯಮಂತ್ರಿಗಳ ಕಾರ್ಯದರ್ಶಿ ಕೆ.ಎಂ ಅಬ್ರಹಾಂ ಅವರಿಗೆ ಜಾರಿ ನಿರ್ದೇಶನಾಲ 466 ಕೋಟಿ ರೂ.ಗಳ ಫೆಮಾ ಶೋಕಾಸ್ ನೋಟಿಸ್ ಜಾರಿ ಮಾಡಿದೆ ಎಂದು ವರದಿಯಾಗಿದೆ.
ವೈಯಕ್ತಿಕ ಹಾಜರಾತಿಯ ಅಗತ್ಯವಿಲ್ಲದ ಈ ನೋಟಿಸ್ ಅನ್ನು ಸುಮಾರು 10-12 ದಿನಗಳ ಹಿಂದೆ ಇಡಿ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ)ಯ ನಿಬಂಧನೆಗಳ ಅಡಿಯಲ್ಲಿ ನೀಡಿದೆ.
ಫೆಮಾ ಪ್ರಕರಣಗಳಲ್ಲಿ ತನಿಖೆ ಮುಗಿದ ನಂತರ ಶೋಕಾಸ್ ನೋಟಿಸ್ ನೀಡಲಾಗುತ್ತದೆ ಮತ್ತು ಅದರಲ್ಲಿ ಉಲ್ಲೇಖಿಸಲಾದ ಉಲ್ಲಂಘನೆಯು ದಂಡಕ್ಕೆ ಸಮಾನವಾಗಿರುತ್ತದೆ.
ಮಸಾಲಾ ಬಾಂಡ್ಗಳ ಮೂಲಕ ಕೆಐಐಎಫ್ಬಿ ಸಂಗ್ರಹಿಸಿದ 2,000 ಕೋಟಿ ರೂ.ಗಳ ಅಂತಿಮ ಬಳಕೆ ಮತ್ತು ಫೆಮಾ ಮಾನದಂಡಗಳ ಅನುಸರಣೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ.
ಕೆಐಐಎಫ್ಬಿ (ಕೇರಳ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿ) ರಾಜ್ಯ ಸರ್ಕಾರದ ಪ್ರಮುಖ ಸಂಸ್ಥೆಯಾಗಿದ್ದು, ರಾಜ್ಯದಲ್ಲಿನ ದೊಡ್ಡ ಮತ್ತು ನಿರ್ಣಾಯಕ ಮೂಲಸೌಕರ್ಯ ಯೋಜನೆಗಳಿಗೆ ಹಣಕಾಸು ಒದಗಿಸಲು 50,000 ಕೋಟಿ ರೂ.ಗಳನ್ನು ಕ್ರೋಢೀಕರಿಸುವ ಯೋಜನೆಯ ಭಾಗವಾಗಿ 2019ರಲ್ಲಿ ತನ್ನ ಚೊಚ್ಚಲ ಮಸಾಲಾ ಬಾಂಡ್ ವಿತರಣೆಯ ಮೂಲಕ 2,150 ಕೋಟಿ ರೂ.ಗಳನ್ನು ಸಂಗ್ರಹಿಸಿತ್ತು.


