Homeಅಂತರಾಷ್ಟ್ರೀಯಟ್ರಂಪ್ ಯುದ್ಧಾಧಿಕಾರಕ್ಕೆ ಬ್ರೇಕ್ ಹಾಕುವ ಪ್ರಯತ್ನಕ್ಕೆ ಹಿನ್ನಡೆ; ಸೆನೆಟ್‌ನಲ್ಲಿ ನಿರ್ಣಯಕ್ಕೆ ಸೋಲು 

ಟ್ರಂಪ್ ಯುದ್ಧಾಧಿಕಾರಕ್ಕೆ ಬ್ರೇಕ್ ಹಾಕುವ ಪ್ರಯತ್ನಕ್ಕೆ ಹಿನ್ನಡೆ; ಸೆನೆಟ್‌ನಲ್ಲಿ ನಿರ್ಣಯಕ್ಕೆ ಸೋಲು 

- Advertisement -
- Advertisement -

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಯುದ್ಧಾಧಿಕಾರಕ್ಕೆ ಲಗಾಮು ಹಾಕುವ ನಿರ್ಣಯಕ್ಕೆ ಅಮೆರಿಕ ಸೆನೆಟ್‌ನಲ್ಲಿ (ಸಂಸತ್ತಿನ ಮೇಲ್ಮನೆ) ಸೋಲಾಗಿದೆ. ಇದರಿಂದ ಪ್ರಸ್ತುತ ನಡೆಸುತ್ತಿರುವ ಇರಾನ್ ಮೇಲಿನ ದಾಳಿಯನ್ನು ಇನ್ನಷ್ಟು ಹೆಚ್ಚಿಸಲು ಟ್ರಂಪ್‌ಗೆ ಅನುಮತಿ ಸಿಕ್ಕಂತಾಗಿದೆ.

ನಿರ್ಣಯವು ಹೆಚ್ಚಾಗಿ ಪಕ್ಷದ ಆಧಾರದ ಮೇಲೆ ನಡೆದ ಮತದಾನದಲ್ಲಿ 53-47 ಮತಗಳ ಅಂತರದಿಂದ ತಿರಸ್ಕೃತಗೊಂಡಿದೆ. ಒಂದು ವೇಳೆ ಈ ನಿರ್ಣಯವು ಅಂಗೀಕಾರವಾಗಿದ್ದರೆ, ಕಾಂಗ್ರೆಸ್‌ನ (ಸಂಸತ್ತಿನ) ಅನುಮೋದನೆಯಿಲ್ಲದೆ ಇರಾನ್ ವಿರುದ್ಧ ಅಮೆರಿಕ ನಡೆಸುತ್ತಿರುವ ಮಿಲಿಟರಿ ಕ್ರಮಗಳನ್ನು ಇದು ತಡೆಯುತ್ತಿತ್ತು.

ಟ್ರಂಪ್ ಕಾಂಗ್ರೆಸ್ ಅನ್ನು ಕಡೆಗಣಿಸಿದ್ದಾರೆ ಮತ್ತು ಯುದ್ಧಕ್ಕೆ ಬದಲಾಗುತ್ತಿರುವ ಕಾರಣಗಳನ್ನು ನೀಡುತ್ತಿದ್ದಾರೆ ಎಂದು ಡೆಮೋಕ್ರಾಟ್‌ಗಳು ಹೇಳಿದ್ದಾರೆ. ಹೆಚ್ಚಿನ ರಿಪಬ್ಲಿಕನ್ನರು ಈ ನಿರ್ಣಯವನ್ನು ತಡೆದಿದ್ದಾರೆ, ಆದರೆ ಮುಂಬರುವ ವಾರಗಳಲ್ಲಿ ಯುದ್ಧವು ವಿಸ್ತರಣೆಯಾದಲ್ಲಿ ತಾವು ತಮ್ಮ ನಿರ್ಧಾರವನ್ನು ಬದಲಿಸುವುದಾಗಿ ಅವರಲ್ಲಿ ಕೆಲವರು ಹೇಳಿದ್ದಾರೆ.

ಅಮೆರಿಕ ಮತ್ತು ಇಸ್ರೇಲ್ ಶನಿವಾರದಿಂದ ಇರಾನ್ ಮೇಲೆ ದಾಳಿ ನಡೆಸಲಾರಂಭಿಸಿವೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಇಸ್ರೇಲ್ ಮತ್ತು ಗಲ್ಫ್ ಪ್ರದೇಶದಲ್ಲಿರುವ ಅಮೆರಿಕದ ಮಿತ್ರ ರಾಷ್ಟ್ರಗಳ ಮೇಲೆ ಸರಣಿ ದಾಳಿಗಳನ್ನು ನಡೆಸುತ್ತಿದೆ.

ಯುದ್ಧದಿಂದ ಹೊರಬರಲು ಯಾವುದೇ ಸ್ಪಷ್ಟ ಮಾರ್ಗಗಳು ಕಾಣಿಸದ ಹಿನ್ನೆಲೆಯಲ್ಲಿ, ಈ ಯುದ್ಧವು ಎಂಟು ವಾರಗಳ ಕಾಲ ಮುಂದುವರಿಯಬಹುದು ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹೇಳಿದ್ದಾರೆ. ಇದು ಕಳೆದ ವಾರಾಂತ್ಯದಲ್ಲಿ ಟ್ರಂಪ್ ಅವರು ಉಲ್ಲೇಖಿಸಿದ್ದ ಅವಧಿಗಿಂತ ಸುಮಾರು ಎರಡರಷ್ಟು ಹೆಚ್ಚಾಗಿದೆ.

ಬುಧವಾರ ನಡೆದ ಮತದಾನದಲ್ಲಿ ಇಬ್ಬರು ಸಂಸದರು ತಮ್ಮ ಪಕ್ಷದ ನಿಲುವಿಗೆ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ. ಪೆನ್ಸಿಲ್ವೇನಿಯಾದ ಡೆಮೋಕ್ರಾಟ್ ಸಂಸದ ಜಾನ್ ಫೆಟರ್‌ಮನ್ ಅವರು ಈ ನಿರ್ಣಯವನ್ನು ವಿರೋಧಿಸಿದರೆ, ಕೆಂಟುಕಿಯ ರಿಪಬ್ಲಿಕನ್ ಸಂಸದ ರಾಂಡ್ ಪಾಲ್ ಅವರು ನಿರ್ಣಯದ ಪರವಾಗಿ ಮತ ಚಲಾಯಿಸಿದ್ದಾರೆ. ಈ ಇಬ್ಬರನ್ನು ಹೊರತುಪಡಿಸಿ, ಉಳಿದೆಲ್ಲಾ ಸದಸ್ಯರು ತಮ್ಮ ಪಕ್ಷದ ನಿಲುವಿಗೆ ಅನುಗುಣವಾಗಿಯೇ ಮತ ಚಲಾವಣೆ ಮಾಡಿದ್ದಾರೆ.

ಮೇನ್ ಪ್ರಾಂತ್ಯದ ಕಟ್ಟಾ ಸಂಪ್ರದಾಯವಾದಿ ರಿಪಬ್ಲಿಕನ್ ಸಂಸದೆಯಾದ ಸೂಸನ್ ಕಾಲಿನ್ಸ್ ಅವರು ಈ ನಿರ್ಣಯದ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ. ಮತದಾನದ ನಂತರ ಮಾತನಾಡಿದ ಅವರು, “ಈ ಕಾನೂನನ್ನು ಅಂಗೀಕರಿಸಿದ್ದರೆ ಅದು ಇರಾನ್ ಮತ್ತು ಅಮೆರಿಕದ ಸೈನಿಕರಿಗೆ ತಪ್ಪು ಸಂದೇಶವನ್ನು ರವಾನಿಸಿದಂತಾಗುತ್ತಿತ್ತು” ಎಂದು ಅಭಿಪ್ರಾಯಪಟ್ಟಿದ್ದಾರೆ.

“ಈ ಸಂದರ್ಭದಲ್ಲಿ, ನಮ್ಮ ಸೇವಾ ಸದಸ್ಯರಿಗೆ (ಸೈನಿಕರಿಗೆ) ಅಚಲವಾದ ಬೆಂಬಲವನ್ನು ನೀಡುವುದು ಅತ್ಯಂತ ಮುಖ್ಯವಾಗಿದೆ; ಹಾಗೆಯೇ ಆಡಳಿತ (ಸರ್ಕಾರ) ಕಾಂಗ್ರೆಸ್‌ನೊಂದಿಗೆ ನಿರಂತರವಾಗಿ ಸಮಾಲೋಚನೆ ನಡೆಸುವುದು ಕೂಡ ಅಷ್ಟೇ ಅಗತ್ಯವಾಗಿದೆ” ಎಂದು ಅವರು ಹೇಳಿದ್ದಾರೆ.

ಮತದಾನಕ್ಕೂ ಮುನ್ನ ನಿರ್ಣಯದ ಪರವಾಗಿ ಮಾತನಾಡಿದ ಸೆನೆಟ್ ಡೆಮಾಕ್ರಟಿಕ್ ನಾಯಕ ಚಕ್ ಶುಮರ್, “ಪಶ್ಚಿಮ ಏಷ್ಯಾದಲ್ಲಿ ಕೊನೆಯಿಲ್ಲದ ಯುದ್ಧಗಳಿಂದ ಬೇಸತ್ತಿರುವ ಅಮೆರಿಕದ ಜನತೆಯ ಪರವಾಗಿ ನೀವು ನಿಲ್ಲುತ್ತೀರಾ? ಅಥವಾ ಡೊನಾಲ್ಡ್ ಟ್ರಂಪ್ ಮತ್ತು ಪೀಟ್ ಹೆಗ್ಸೆತ್ ಅವರು ನಮ್ಮನ್ನು ಮತ್ತೊಂದು ಯುದ್ಧದ ಅಂಧಕಾರಕ್ಕೆ ದೂಡುತ್ತಿರುವಾಗ ಅವರ ಪರವಾಗಿ ನಿಲ್ಲುತ್ತೀರಾ?” ಎಂದು ಪ್ರಶ್ನಿಸಿದ್ದಾರೆ.

ನಿರ್ಣಯವು ಗುರುವಾರ ಪ್ರತಿನಿಧಿಗಳ ಸಭೆಯಲ್ಲಿ (ಸಂಸತ್ತಿನ ಕೆಳಮನೆ) ಮತದಾನಕ್ಕೆ ಬರಲಿದೆ, ಆದರೆ ಅಲ್ಲಿ ಇದು ಕಠಿಣ ಸವಾಲನ್ನು ಎದುರಿಸಬೇಕಾಗಬಹುದು.

ಔಪಚಾರಿಕವಾಗಿ ಯುದ್ಧ ಘೋಷಣೆ ಮಾಡದೆಯೇ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸುವ ವ್ಯಾಪಕ ಅಧಿಕಾರ ಅಧ್ಯಕ್ಷರಿಗಿದೆ. ಆದರೆ, ಸಂಘರ್ಷ ಅಥವಾ ದಾಳಿ ಪ್ರಾರಂಭವಾದ 48 ಗಂಟೆಗಳ ಒಳಗೆ ಅವರು ಈ ಬಗ್ಗೆ ಕಾಂಗ್ರೆಸ್‌ಗೆ (ಸಂಸತ್ತಿಗೆ) ಕಡ್ಡಾಯವಾಗಿ ಮಾಹಿತಿ ನೀಡಬೇಕು ಎಂದು ಅಮೆರಿಕದ ಸಂವಿಧಾನ ಹೇಳುತ್ತದೆ.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಅವರು, ಟ್ರಂಪ್ ಆಡಳಿತವು ಆ ನಿಯಮವನ್ನು (ದಾಳಿಯ ಬಗ್ಗೆ 48 ಗಂಟೆಗಳ ಒಳಗೆ ಕಾಂಗ್ರೆಸ್‌ಗೆ ತಿಳಿಸುವುದು) ಸರಿಯಾಗಿಯೇ ಪಾಲಿಸಿದೆ ಎಂದು ಪ್ರತಿಪಾದಿಸಿದ್ದಾರೆ.

ಇರಾನ್ ಮೇಲಿನ ಆರಂಭಿಕ ದಾಳಿಗಳು ಶುರುವಾಗುವ ಮೊದಲೇ ಕಾಂಗ್ರೆಸ್‌ನ ಉನ್ನತ ನಾಯಕರಿಗೆ ಮಾಹಿತಿ ನೀಡಲಾಗಿತ್ತು. ಸೋಮವಾರದಂದು ಅಧ್ಯಕ್ಷ ಟ್ರಂಪ್ ಅವರು ಈ ಕುರಿತು ಕಾಂಗ್ರೆಸ್‌ಗೆ ಪತ್ರವೊಂದನ್ನು ಬರೆದಿದ್ದಾರೆ; ಆದರೂ ಈ ಮಾಹಿತಿ ನೀಡುವುದು ಅನಿವಾರ್ಯವೇನಲ್ಲ ಎಂಬ ತಮ್ಮ ನಿಲುವನ್ನು ಅವರು ಮುಂದುವರಿಸಿದ್ದಾರೆ ಎಂದು ಬಿಬಿಸಿ ವರದಿ ಹೇಳಿದೆ.

ಕಳೆದ ವರ್ಷ ಇರಾನ್‌ನ ಪರಮಾಣು ಸ್ಥಾವರಗಳ ಮೇಲೆ ಅಮೆರಿಕ ನಡೆಸಿದ ದಾಳಿ ಮತ್ತು ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ವಶಕ್ಕೆ ಪಡೆದ ಪ್ರಸಂಗಗಳಂತೆ, ಟ್ರಂಪ್ ಅವರು ಈ ಹಿಂದೆ ಕೂಡ ಕಾಂಗ್ರೆಸ್‌ನ ಅನುಮೋದನೆಯಿಲ್ಲದೆಯೇ ಮಿಲಿಟರಿ ಕಾರ್ಯಾಚರಣೆಗಳಿಗೆ ಆದೇಶ ನೀಡಿದ್ದರು ಎಂದು ವರದಿ ಉಲ್ಲೇಖಿಸಿದೆ.

“ಯಾವೊಬ್ಬ ಅಧ್ಯಕ್ಷರ ಆಡಳಿತವೂ ಯುದ್ಧದ ಅಧಿಕಾರ ಕಾಯ್ದೆಯನ್ನು (ವಾರ್ ಪವರ್ಸ್ ಆಕ್ಟ್) ಸಂವಿಧಾನಬದ್ಧ ಎಂದು ಇದುವರೆಗೆ ಒಪ್ಪಿಕೊಂಡಿಲ್ಲ – ರಿಪಬ್ಲಿಕನ್ ಅಧ್ಯಕ್ಷರಾಗಲಿ ಅಥವಾ ಡೆಮಾಕ್ರಟಿಕ್ ಅಧ್ಯಕ್ಷರಾಗಲಿ ಇದನ್ನು ಒಪ್ಪಿಲ್ಲ” ಎಂದು ಮಾಜಿ ಸೆನೆಟರ್ ಆಗಿರುವ ರೂಬಿಯೋ ಹೇಳಿದ್ದಾರೆ.

ಅಮೆರಿಕದ ಮಾಜಿ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರು ವಿಯೆಟ್ನಾಂ ಮೇಲೆ ಯುದ್ಧ ಮಾಡುವ ಅಧಿಕಾರವನ್ನು ನಿರ್ಬಂಧಿಸಲು ಅಮೆರಿಕದ ಕಾಂಗ್ರೆಸ್ 1973 ರಲ್ಲಿ ‘ವಾರ್ ಪವರ್ಸ್ ರೆಸಲ್ಯೂಶನ್’ (ಯುದ್ಧ ಅಧಿಕಾರಗಳ ನಿರ್ಣಯ) ಅನ್ನು ಅಂಗೀಕರಿಸಿತ್ತು.

ಯಾವುದೇ ಮಿಲಿಟರಿ ಕ್ರಮ ಕೈಗೊಂಡ 48 ಗಂಟೆಗಳ ಒಳಗೆ ಅಧ್ಯಕ್ಷರು ಈ ಬಗ್ಗೆ ಸಂಸತ್ತಿಗೆ ಮಾಹಿತಿ ನೀಡಬೇಕು ಮತ್ತು ಸಂಘರ್ಷ ಪ್ರಾರಂಭವಾದ 60 ದಿನಗಳ ಒಳಗೆ ಸಂಸತ್ತು ‘ಮಿಲಿಟರಿ ಬಲದ ಬಳಕೆಯ ಅಧಿಕಾರ’ವನ್ನು ಅಂಗೀಕರಿಸಬೇಕು ಎಂದು ಈ ನಿಯಮವು ಕಡ್ಡಾಯಗೊಳಿಸುತ್ತದೆ.

2001ರಿಂದಲೂ, ಅಮೆರಿಕದ ಆಡಳಿತಗಳು ಪಶ್ಚಿಮ ಏಷ್ಯಾದಲ್ಲಿ ಮಿಲಿಟರಿ ಬಲವನ್ನು ಬಳಸಲು ಸೆಪ್ಟೆಂಬರ್ 11ರ ದಾಳಿಯ ನಂತರ ಅಂಗೀಕರಿಸಲಾದ ಮಿಲಿಟರಿ ಬಲದ ಬಳಕೆಗೆ ಅಧಿಕಾರ (Authorization for Use of Military Force-AUMF) ಅನ್ನು ಸಮರ್ಥನೆಯಾಗಿ ಬಳಸಿಕೊಳ್ಳುತ್ತಾ ಬಂದಿವೆ. ಆ ಅನುಮೋದನೆಯನ್ನು ರದ್ದುಗೊಳಿಸಲು ನಡೆಸಿದ ಹಲವಾರು ಪ್ರಯತ್ನಗಳು ವಿಫಲವಾಗಿವೆ.

ಈಗಿನ ಇರಾನ್ ಸಂಘರ್ಷದಲ್ಲೂ ಟ್ರಂಪ್ ಆಡಳಿತವು ಇದೇ ಹಳೆಯ ಅಧಿಕಾರವನ್ನು ಬಳಸಿಕೊಳ್ಳುತ್ತಿದೆ, ಇದನ್ನು ತಡೆಯಲು ಡೆಮೋಕ್ರಾಟ್‌ಗಳು ನಡೆಸುತ್ತಿರುವ ಕಾನೂನು ಹೋರಾಟಕ್ಕೆ ಹಿನ್ನಡೆಯಾಗಿದೆ.






ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....

ವಿಜಯ್ ಹೇಳಿದ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಟಿವಿಕೆ ಶಾಸಕರ ಕ್ರಿಮಿನಲ್ ಹಿನ್ನೆಲೆ

ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟಿವಿಕೆ ಎಂಬ ಪಕ್ಷ, 75 ವರ್ಷಗಳ ಅನುಭವಿ ಪಕ್ಷವಾದ ಡಿಎಂಕೆಯನ್ನು ಸೋಲಿಸಿರುವುದು, ಕಳೆದ ಅರವತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ದ್ರಾವಿಡ ಚಳುವಳಿ ಹಿನ್ನೆಲೆಯ ಪಕ್ಷವನ್ನು...

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು: ಫಲಿತಾಂಶದ ಬಳಿಕ ಭುಗಿಲೆದ್ದ ಹಿಂಸಾಚಾರ, ಕನಿಷ್ಠ ಐದು ಮಂದಿ ಸಾವು

ಕೊಲ್ಕತ್ತಾ, ಮೇ 8: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮೊದಲ ಬಾರಿಗೆ ಬೃಹತ್ ಗೆಲುವು ಸಾಧಿಸಿದ್ದು, ರಾಜ್ಯದ 294 ಸ್ಥಾನಗಳ ಪೈಕಿ 206 ಸ್ಥಾನಗಳನ್ನು ಗೆದ್ದು ಮುಂದಿನ...

ಪಂಚರಾಜ್ಯ ಚುನಾವಣೆಯ ಗೋಜಲುಗಳು

ವಿವಾದಾತ್ಮಕ ಮತ್ತು ಸಂವಿಧಾನ ವಿರೋಧಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ಅಡಿಯಲ್ಲಿ ನಡೆದ 2026ರ ಐದು ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಏಕರೂಪದ ಅಭಿಮತವನ್ನು ವ್ಯಕ್ತಪಡಿಸಲಿಲ್ಲ. ಮತ್ತು ಸಂಕೀರ್ಣವಾದ ಫಲಿತಾಂಶ ಕೊಟ್ಟಿದ್ದಾರೆ. ಪಶ್ಚಿಮ...

ಪ್ರಜಾಸತ್ತೆಯ ಉಳಿವಿಗೆ ಇದು ನಿರ್ಣಾಯಕ ಕ್ಷಣ : ಮಹತ್ವದ ಕಣ್ಣೋಟ

ಚುನಾವಣೆಗಳು ಮತ್ತು ನ್ಯಾಯಾಲಯಗಳು ಇನ್ನು ಪರಿಹಾರವಲ್ಲ ಎಂಬ ಅಭಿಪ್ರಾಯಕ್ಕೆ ಜನರು ಬರಲು ಈ ಬಾರಿಯ ವಿಧಾನಸಭಾ ಚುನಾವಣೆಗಳೇ ಕಾರಣವಾಗಿವೆ. ಇಂದು 'ಭಾರತದ ಪರಿಕಲ್ಪನೆ'ಗೆ (Idea of India) ಸಂಚಕಾರ ಬಂದಿದೆ. ಪ್ರಜಾಪ್ರಭುತ್ವವು ಕೇವಲ...

ಭಾಗ-2: ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

30 ಸಾವಿರದಿಂದ ಒಂದು ಸಾವಿರದ ಒಳಗಿನ ಮತಗಳ ಅಂತರದಿಂದ ಗೆದ್ದಿರುವ ಕರ್ನಾಟಕದ 97 ಕ್ಷೇತ್ರಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಆದಂತೆಯೇ ರಾಜ್ಯದಲ್ಲಿ ಚುನಾವಣೆ ಸಮೀಪಿಸಿದಾಗ ಎಸ್‌ಐಆರ್ ಜಾರಿಯಾದರೆ ಬಿಜೆಪಿಗೆ ಅನುಕೂಲವಾಗುವ...

ತಮಿಳುನಾಡಿನಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದ 60 ನೂತನ ಶಾಸಕರು

ತಮಿಳುನಾಡು ರಾಜಕಾರಣ ಎಂದರೆ ಅದು ಐದು ದಶಕಗಳಿಂದ ಕೇವಲ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಜಿದ್ದಾಜಿದ್ದಿ. ಆದರೆ 2026ರ ಫಲಿತಾಂಶವು ಈ "ದ್ವಿಪಕ್ಷೀಯ" ಸಂಪ್ರದಾಯವನ್ನು ಮುರಿದುಹಾಕಿದೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ...

‘ಪ್ರಜಾತಂತ್ರಕ್ಕೆ ಬೆದರಿಕೆ ಒಡ್ಡುತ್ತಿರುವ ಎಸ್ಐಆರ್’: ಬಿಜೆಪಿಯ (ಕು)ತಂತ್ರ ಫಲಿಸಿದರೇ ಭಾರತವೇ ಇರುವುದಿಲ್ಲ..!

ಪಂಚರಾಜ್ಯ ಚುನಾವಣಾ ಫಲಿತಾಂಶಗಳು 2026 ಮೇ 4ರಂದು ಹೊರಬಿದ್ದಿದ್ದು, ಭಾರತೀಯ ಜನತಾ ಪಾರ್ಟಿ ಪಶ್ಚಿಮ ಬಂಗಾಳವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಆದರೆ ಈ ಗೆಲುವು ಕೇವಲ ಜನರ ಆದರ್ಶವಲ್ಲ, ಬದಲಿಗೆ ಚುನಾವಣಾ ವ್ಯವಸ್ಥೆಯೇ...