Homeರಾಷ್ಟ್ರೀಯಮೋದಿಯವರ ವಿದೇಶಾಂಗ ನೀತಿ ಸಂಪೂರ್ಣವಾಗಿ ದಿಕ್ಕು ತಪ್ಪಿದೆ, ನಗೆಪಾಟಲಿಗೆ ಈಡಾಗಿದೆ, ಅನೈತಿಕತೆಯಿಂದ ಕೂಡಿದೆ. ಇದು ಜಗಜ್ಜಾಹೀರಾಗಿದೆ...

ಮೋದಿಯವರ ವಿದೇಶಾಂಗ ನೀತಿ ಸಂಪೂರ್ಣವಾಗಿ ದಿಕ್ಕು ತಪ್ಪಿದೆ, ನಗೆಪಾಟಲಿಗೆ ಈಡಾಗಿದೆ, ಅನೈತಿಕತೆಯಿಂದ ಕೂಡಿದೆ. ಇದು ಜಗಜ್ಜಾಹೀರಾಗಿದೆ – ಶ್ರೀಪಾದ್‌ ಭಟ್

- Advertisement -
- Advertisement -

ತಮ್ಮ ಸ್ಥಳೀಯ ಮತಬ್ಯಾಂಕ್ ರಾಜಕಾರಣದ ಜೊತೆಗೆ ವಿದೇಶಿ ನೀತಿಯನ್ನು ತಳುಕು ಹಾಕುವುದು.

ಉದಾಹರಣೆಗೆ ಅಮೆರಿಕ-ಇಸ್ರೇಲ್ ಜಂಟಿಯಾಗಿ ನಡೆಸುತ್ತಿರುವ ಇರಾನ್ ಮೇಲಿನ ಯುದ್ಧದ ಸಮಯದಲ್ಲಿ ಮೋದಿ ನೇತೃತ್ವದ ಸರ್ಕಾರವು ತಾನು ಇರಾನ್ ಪರ ನಿಲುವು ತಾಳಿದರೆ ತಮ್ಮನ್ನು ಮತದಾರರು ದುರ್ಬಲರು ಎಂದು ತಿಳಿಯುತ್ತಾರೆ… ತಾನು ಸಹ ಅಮೇರಿಕಾ-ಇಸ್ರೇಲ್ ತರಹ ತೋಳ್ಬಲ ಪ್ರದರ್ಶಿಸುವ ವಿಶ್ವಗುರು ಎನ್ನುವ ಪ್ರಚಾರ ಮುಕ್ಕಾಗದಂತೆ ನೋಡಿಕೊಳ್ಳಬೇಕು..
ಇಸ್ರೇಲ್ ಹಾಗೂ ನೇತನ್ಯಾಹು ನಮ್ಮ ರೀತಿ, ಇಲ್ಲಿನ ಹಿಂದುತ್ವ ರಾಜಕಾರಣ ಅಲ್ಲಿನ ಜುಡಾಯಿಸಂ… ಇಬ್ಬರಿಗೂ ಇಸ್ಲಾಂ ಸಮಾನ ಶತೃ ಎನ್ನುವ ಕಥನ ಸೃಷ್ಟಿಸಲಾಗಿದೆ.. ಈಗ ಅದನ್ನು ಉಳಿಸಿಕೊಳ್ಳುವ ಅನಿವಾರ್ಯತೆಯಿದೆ.. ಇದಕ್ಕಾಗಿ ಇಸ್ರೇಲ್ ನ ಭಯೋತ್ಪಾದನೆ ಧೋರಣೆಯನ್ನು ಬೆಂಬಲಿಸುವಂತಹ ಸ್ಥಿತಿಯಲ್ಲಿದ್ದಾರೆ…
ಇಲ್ಲಿ ಮುಸ್ಲಿಂರ ವಿರುದ್ಧ ನೆರೇಶನ್ ಸೃಷ್ಟಿಸಿ ಜಾಗತಿಕವಾಗಿ ಇಸ್ಲಾಂ ದೇಶದ ಪರವಾಗಿ ಮಾತನಾಡಿದರೆ ತಮ್ಮ ಮತಬ್ಯಾಂಕ್ ಮೇಲೆ ಪರಿಣಾಮ ಬೀರುತ್ತದೆ…
ಒಂದುವೇಳೆ ಕಾಂಗ್ರೆಸ್ ಪಕ್ಷ, ಚಿಂತಕರು, ಸಂಘಟನೆಗಳು ಏನಾದರೂ ಇರಾನ್ ಪರ ನಿಲುವು ತಾಳಿದರೆ ಅವರನ್ನು ದೇಶದ್ರೋಹಿಗಳು ಎಂದು ಪ್ರಚಾರ ಮಾಡಲು ಮತ್ತು ಮುಂಬರುವ ಪ.ಬಂಗಾಳ, ಅಸ್ಸಾಂ ಚುನಾವಣೆಗಳಲ್ಲಿ ಇದನ್ನು ಬಳಸಿಕೊಳ್ಳಲು ಅನುಕೂಲವಾಗುತ್ತದೆ…
ಪ್ರಚಾರದ ಸಂದರ್ಭದಲ್ಲಿ ಮೋದಿ ‘ನಾವು ದೇಶದ ಹಿತಕ್ಕಾಗಿ, ಅವರು ಇರಾನ್ ಹಿತಕ್ಕಾಗಿ’ ಎಂದು ಭಾಷಣ ಮಾಡುವುದರಲ್ಲಿ ಅನುಮಾನವೇ ಇರಲಿಲ್ಲ…
ಒಟ್ಟಿನಲ್ಲಿ ಪ.ಬಂಗಾಳ, ಕೇರಳ, ಅಸ್ಸಾಂ ರಾಜ್ಯದ ಚುನಾವಣಾ ಪ್ರಚಾರದ ಹೊತ್ತಿಗೆ ಇರಾನ್ – ಮುಸ್ಲಿಂ ವಿರುದ್ಧ ನೆರೇಶನ್ ನ ರೆಸಿಪಿ ತಯಾರಿಸುವ ಕೆಲಸ ಶುರುವಾಗಿತ್ತು…

ಆದರೆ ಎರಡು ವಾರಗಳಲ್ಲಿ ಎಲ್ಲವೂ ತಲೆಕೆಳಗಾಗಿ ಮೋದಿ ‘ಇಂಡಿಯಾ ದೇಶ ಇರಾನ್ ನ ಸ್ನೇಹಿತರು’ ಎನ್ನುವ ಸ್ಥಿತಿ ನಿರ್ಮಾಣವಾಗಿದೆ…

ಅತ್ತ ಸರ್ಕಾರದ ಮಟ್ಟದಲ್ಲಿ

ಈ ಯುದ್ಧ ಬಹು ದಿನಗಳ ಕಾಲ ನಡೆಯುವುದಿಲ್ಲ. ನಾಲ್ಕೈದು ದಿನಗಳಲ್ಲಿ ಮುಗಿದು ಇರಾಕ್, ಈಜಿಪ್ಟ್ ರೀತಿ ಇರಾನ್ ಶರಣಾಗುತ್ತದೆ, ಆಂತರಿಕವಾಗಿ ಅಲ್ಲಿನ ಜನ ಬೀದಿಗೆ ಬರುತ್ತಾರೆ.. ಹೀಗಾಗಿ ಆರಂಭದಿಂದಲೂ ಅಮೇರಿಕಾ -ಇಸ್ರೇಲ್ ಪರವಾಗಿದ್ದರೆ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ.. ಇದು ಈ ಸರ್ಕಾರದ ಯೋಚನಾ ಲಹರಿ.. ಇದು ಸಂಭವಿಸಿದರೆ ‘ಮೋದಿ ಅಂದರೆ ಸಾಮಾನ್ಯವೇ’ ಎನ್ನುವ ಪ್ರಚಾರ…
ಆದರೆ ಎಲ್ಲಾ ತಲೆಕೆಳಗಾಗಿ ಇಂದು ಯುದ್ಧ ಆರಂಭಿಸಿದ ಟ್ರಂಪ್ ಗೆ ಮುಂದಿನ ದಾರಿ ಏನು? ಯುದ್ಧ ನಿಲ್ಲಿಸುವುದು ಹೇಗೆ? ಇದರಿಂದ ಹೊರಬರಲು ದಾರಿಗಳೇನು? ಒಂದೂ ಗೊತ್ತಾಗದೆ ದಿಗ್ಮೂಢಗೊಂಡಿದ್ದರೆ ಇವರನ್ನು ನಂಬಿ ರಾಜತಾಂತ್ರಿಕ ವ್ಯವಹಾರ ಮಾಡಿ ದೇಶದ ಘನತೆ ಹಾಳುಗೆಡವಿದ್ದು ಮೋದಿಯವರ ಸಾಧನೆ…

ಮೋದಿಯವರು ಯುದ್ಧ ನಡೆಯುವ ಎರಡು ದಿನಗಳ ಮುಂಚೆ ಇಸ್ರೇಲ್ ದೇಶಕ್ಕೆ ಹೋಗಿದ್ದು ಯಾಕೆ? ನೇತನ್ಯಾಹುನ್ನು ಹೊಗಳಿದ್ದು ಯಾಕೆ? ಇದು ಅವರ ವೈಯಕ್ತಿಕ ನಿಲುವೇ? ಅಥವಾ ವಿದೇಶಾಂಗ ಇಲಾಖೆಯದೇ?
ಇವರಿಗೆ ತಮ್ಮ ಭೇಟಿಯ ನಂತರ ಕೆಲವೇ ದಿನಗಳಲ್ಲಿ ಯುದ್ಧ ಪ್ರಾರಂಭವಾಗುತ್ತದೆ ಎಂದು ಗೊತ್ತಿರಲಿಲ್ಲವೇ? ಅದರ ಮುನ್ಸೂಚನೆ ಇರಲಿಲ್ಲವೇ? ಹೌದಾದರೆ ಅಮೆರಿಕ -ಇಸ್ರೇಲ್ ದೇಶಗಳು ಭಾರತದ ಜಿಗ್ರಿ ದೋಸ್ತ್ ಎನ್ನುವ ಮಾತಿಗೆ ಬೆಲೆಯಿಲ್ಲದಂತಾಯಿತೇ?
ಟ್ರಂಪ್, ನೇತಾನ್ಯಾಹು ನನಗೆ ತೀರಾ ಹತ್ತಿರ ಎಂದು ಹೇಳಿಕೊಳ್ಳುವ ಮೋದಿಯವರ ವಿಶ್ವಾಸಾರ್ಹತೆ ಪ್ರಶ್ನಾರ್ಹವಲ್ಲವೇ?
ದೇಶದ ಹಿತಾಸಕ್ತಿಯನ್ನು ಈ ರೀತಿ ವೈಯಕ್ತಿಕ ವೈಭವೀಕರಣಕ್ಕೆ ಬಲಿ ಕೊಟ್ಟಂತಲ್ಲವೇ?
ಅಥವಾ ಗೊತ್ತಿದ್ದರೆ ಕೊಲ್ಲಿ ರಾಷ್ಟ್ರಗಳಲ್ಲಿರುವ ಭಾರತೀಯರನ್ನು ಎಚ್ಚರಿಸುವ, ಅಲ್ಲಿಂದ ಕರೆತರುವ ಪ್ರಯತ್ನ ಯಾಕೆ ಮಾಡಲಿಲ್ಲ?

ಅಮೇರಿಕಾ-ಇಸ್ರೇಲ್ ದಾಳಿಯನ್ನು, ಖಮೇನಿ ಹತ್ಯೆಯನ್ನು ಇದುವರೆಗೂ ಖಂಡಿಸಿಲ್ಲ.. ಯುದ್ಧ ಪ್ರಾರಂಭವಾಗಿ ಒಂದು ವಾರದ ನಂತರ ವಿದೇಶಾಂಗ ಕಾರ್ಯದರ್ಶಿ ಇರಾನಿನಲ್ಲಿನ ಸಾವುಗಳಿಗೆ ಒಂದು ಸಾಲಿನಲ್ಲಿ ಖೇದ ವ್ಯಕ್ತಪಡಿಸುತ್ತಾರೆ.
ಆದರೆ ಈ ಸಾವಿರಾರು ಸಾವುಗಳಿಗೆ ಕಾರಣರಾದವರ ಕುರಿತು ಹೇಳಿಕೆ ನೀಡುವುದಿಲ್ಲ
ಆದರೆ ವಿಶ್ವಸಂಸ್ಥೆಯಲ್ಲಿ ಗಲ್ಫ್ ದೇಶಗಳ ಮೇಲಿನ ಇರಾನ್ ದಾಳಿಯನ್ನು ಖಂಡಿಸುವ ನಿರ್ಣಯಕ್ಕೆ ಬೆಂಬಲ ವ್ಯಕ್ತಪಡಿಸಿ ಸಹಿ ಹಾಕುತ್ತಾರೆ..
ಇದು ತಟಸ್ಥ ನೀತಿಯೇ?

ಭಾರತ ಬ್ರಿಕ್ಸ್ ಒಕ್ಕೂಟದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದೆ. ಆದರೆ ಈ ಒಕ್ಕೂಟದ ಸದಸ್ಯ ದೇಶವಾದ ಇರಾನ್ ಪರ ಮಾತನಾಡುತ್ತಿಲ್ಲ..
ಮುಂದಿನ ನವೆಂಬರ್ ತಿಂಗಳಲ್ಲಿ ಬ್ರಿಕ್ಸ್ ಶೃಂಗಸಭೆ ಇದೆ. ಆಗ ಯಾವ ಮುಖ ಹೊತ್ತು ಭಾಗವಹಿಸುತ್ತದೆ?
ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಜೊತೆಗೆ ಮೋದಿಯವರು ಫೋನ್ ಮೂಲಕ ಮಾತನಾಡಿ ‘ಹೊರ್ಮೂಜ್ ಜಲಸಂಧಿ’ ಮೂಲಕ ತೈಲ ನೌಕೆಗಳು ಹಾದು ಹೋಗಲು ಕುರಿತು ಚರ್ಚೆ ನಡೆಸಿದರು ಎಂದು ವರದಿಯಾಗಿದೆ. ನಿಜ ಇದು ಅಗತ್ಯವಿದೆ.
ಆದರೆ ಇರಾನ್ ‘ಭಾರತದಿಂದ ರಾಜತಾಂತ್ರಿಕವಾಗಿ ಮರಳಿ ನಮಗೇನು ಸಿಗುತ್ತಿದೆ’ ಎಂದು ಕೇಳುತ್ತಿದೆ.. ಇದಕ್ಕೆ ಭಾರತದ ಬಳಿ ಉತ್ತರವಿಲ್ಲ..
ಹೊರ್ಮೂಜ್ ಜಲಸಂಧಿ ಮೂಲಕ ಭಾರತದ ಹತ್ತಾರು ತೈಲ ನೌಕೆಗಳು ಹಾದು ಬರಬೇಕು ಎಂದು ಗೊತ್ತಿದ್ದರೂ ಇರಾನ್ ಜೊತೆಗೆ ಮಾತುಕತೆ ನಡೆಸುವ ಗೋಜಿಗೆ ಹೋಗದೆ ಅದರ ವಿರೋಧಿ ಪಾಳ್ಯದಲ್ಲಿ ಗುರುತಿಸಿಕೊಂಡಿದ್ದು ಅನೈತಿಕತೆ ಮತ್ತು ರಾಜತಾಂತ್ರಿಕ ವೈಫಲ್ಯ.

ಜೂನ್ 2025ರಲ್ಲಿಯೇ ಅಮೇರಿಕಾ ಏಕಪಕ್ಷೀಯವಾಗಿ ಇರಾನ್ ಮೇಲೆ ದಾಳಿ ಮಾಡಿದಾಗ ಎಚ್ಚೆತ್ತುಕೊಂಡು ಸುರಕ್ಷಿತ ಪ್ರಮಾಣದ ತೈಲ ಸಂಗ್ರಹದ ಕಡೆ ಯಾಕೆ ಗಮನ ಹರಿಸದೆ ವ್ಯರ್ಥವಾಗಿ ಕಾಲ ಕಳೆದರು? ಇಂದಿನ ಗಂಭೀರ ಪರಿಸ್ಥಿತಿ ತಂದುಕೊಂಡಿದ್ಯಾಕೆ?
ಇದನ್ನು ‘ಉತ್ತಮ ಆಡಳಿತ ‘ ಎಂದು ಕರೆಯಲು ಸಾಧ್ಯವೇ?

ರಷ್ಯಾ ಜೊತೆಗೆ ತೈಲ ಖರೀದಿ ಸಂಬಂಧದ ವ್ಯವಹಾರ ಒಪ್ಪಂದ ಕುರಿತು ಸರ್ಕಾರದ ನಡೆ ಅವಮಾನಕರವಾಗಿದೆ. ಉತ್ತಮ ರಾಜತಾಂತ್ರಿಕತೆಯ ಕೊರತೆ ಮತ್ತು ಆ ಕುರಿತು ಅಜ್ಞಾನದ ಕಾರಣ ಇಡೀ ದೇಶವೇ ಸಂದಿಗ್ಧತೆಯಲ್ಲಿದೆ.
ರಷ್ಯಾ ಜೊತೆಗೆ ತೈಲ ಖರೀದಿ ವ್ಯವಹಾರವನ್ನು ಸಮರ್ಥವಾಗಿ ನಿರ್ವಹಿಸಿದ್ದರೆ ಇಂದಿನ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ…

ಇದಕ್ಕೆ ಮೋದಿ ನೇತೃತ್ವದ ಸರ್ಕಾರ ಜವಾಬ್ದಾರಿ ಹೊರಬೇಕು.. ಉತ್ತರ ಕೊಡಬೇಕು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭಿಜೀತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಹೋರಾಟವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಕಾಕ್ರೋಚ್‌ಗಳಿಗೆ ಅಭಿನಂದಿಸಿದ ಸೋನಮ್ ವಾಂಗ್‌ಚುಕ್ – ಪ್ರಕಾಶ್‌ ರಾಜ್

ದೇಶದ ಯುವಜನರ ಹಲವು ದಿನಗಳ ಹೋರಾಟದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮುಂದೆ ಮಂಡಿಯೂರಿದೆ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಗೆಲುವಿಗೆ ಕಾಕ್ರೋಚ್ ಜನತಾ ಪಕ್ಷದ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿರಳೆಗಳ ಹರ್ಷೋದ್ಗಾರ: ದೆಹಲಿ ಪೊಲೀಸರಿಂದ ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ

ದೇಶಾದ್ಯಂತ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ನಡುವೆ ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದು, ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್‌ ಜನತಾ...

ಕಾಕ್ರೋಚ್‌ಗಳಿಗೆ ಮಣಿದ ಮೋದಿ ಸರ್ಕಾರ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು (ಜುಲೈ 25) ಪ್ರಧಾನ ಮಂತ್ರಿಗಳಿಗೆ ತಮ್ಮ...

ಅಭಿಜೀತ್ ದಿಪ್ಕೆಗೆ ಟೈಫಾಯ್ಡ್; ಪ್ರತಿಭಟನೆ ಮುಂದುವರಿಯಲಿದೆ ಎಂದ ಸಿಜೆಪಿ ಸಂಸ್ಥಾಪಕ

ತನಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ ಎಂದು ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಇಂದು ಹೇಳಿದ್ದಾರೆ. "ನನ್ನ ಅನಾರೋಗ್ಯವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ...

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...

ಹತ್ಯಾಕಾಂಡಕ್ಕೆ ಸಮನಾದ NEET ಹಗರಣ ನಡೆಯಲು ಬಿಟ್ಟ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲಿ

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕ್ ಆದ ನಂತರದ ಬೆಳವಣಿಗೆಗಳನ್ನು ಇಡೀ ದೇಶ ಗಮನಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಜೂನ್ ಆರಂಭದಿಂದ ಇಲ್ಲಿಯವರೆಗೆ ದೇಶದ ವಿದ್ಯಾರ್ಥಿಗಳು ನಡೆಸುತ್ತಿರುವ ಆಂದೋಲನವನ್ನು ದೇಶದ ಜನತೆ ನೋಡುತ್ತಿದ್ದಾರೆ. ದೇಶದ...

ಸಿಜೆಪಿ ಮತ್ತು ಜೆನ್‌ ಜಿಫಿಕೇಶನ್: ಪ್ರಸ್ತುತ ಬೆಳವಣಿಗೆ, ಭವಿಷ್ಯದ ಸಾಧ್ಯತೆ

ಇತ್ತೀಚಿನ ಬೆಳವಣಿಗೆಗಳು ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಸಿಜೆಪಿ (ಕಾಕ್ರೋಚ್‌ ಜನತಾ ಪಕ್ಷ) ಪ್ರತಿಭಟನೆ ಈಗ ತಾರ್ಕಿಕ ಹಂತಕ್ಕೆ ತಲಪುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣಕ್ಕೆ ನೀಟ್‌ನ (ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ) ಮೊದಲ...

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...