ಚಲನಚಿತ್ರ ನಿರ್ಮಾಪಕ ಆದಿತ್ಯ ಧರ್ ಅವರ ಆಕ್ಷನ್ ಎಂಟರ್ಟೈನರ್ ಧುರಂಧರ್ನ ಮುಂದುವರಿದ ಭಾಗವು ಬಾಕ್ಸ್ ಆಫೀಸ್ನಲ್ಲಿ ಭಾರಿ ಗಳಿಕೆಯ ಜೊತೆಗೆ ಬಲಪಂಥೀಯ ವರ್ಗದ ಪ್ರೇಕ್ಷಕರ ಪ್ರತಿಕ್ರಿಯೆಯನ್ನು ಗಳಿಸುತ್ತಿದೆ. ಆದರೂ, ಈ ಚಿತ್ರವು ಸಾಕಷ್ಟು ವಿರೋಧವನ್ನೂ ಎದುರಿಸುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಖ್ಯಾತ ಯೂಟ್ಯೂಬರ್ ಧೃವ ರಾಥೀ, “ಈ ಚಿತ್ರದಲ್ಲಿ ಮನರಂಜನೆ ಕಡಿಮೆ. ಆದರೆ, ಭಾರತೀಯ ಜನತಾ ಪಕ್ಷದ ದೊಡ್ಡ ಬಜೆಟ್ನ ರಾಜಕೀಯ ಅಭಿಯಾನವಾಗಿ ಹೆಚ್ಚು ಕಾರ್ಯನಿರ್ವಹಿಸುತ್ತದೆ” ಎಂದು ಆರೋಪಿಸಿದ್ದಾರೆ.
ಚಿತ್ರದ ನಿರೂಪಣೆಯು ನೈಜ ಘಟನೆಗಳ ಆಯ್ದ ವ್ಯಾಖ್ಯಾನಗಳನ್ನು ಪ್ರಸ್ತುತಪಡಿಸುತ್ತದೆ. ವಿಶೇಷವಾಗಿ, 2016 ರ ನೋಟು ರದ್ದತಿಯನ್ನು ಕ್ರಾಮತಿಕಾರಿ ನಿರ್ಧಾರವಾಗಿ ಚಿತ್ರಿಸುತ್ತದೆ. ಪಾಕಿಸ್ತಾನದ ವಿಶಾಲ ಆರ್ಥಿಕ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ ಎಂದು ನಿರ್ದೇಶಕ ವಾದಿಸಿದ್ದಾರೆ.
ಧೃವ್ ವಿಶ್ಲೇಷಣೆಯ ಪ್ರಕಾರ, ಚಲನಚಿತ್ರವು ಪ್ರೇಕ್ಷಕರ ಗ್ರಹಿಕೆಯನ್ನು ರೂಪಿಸುವ ಭಾವನಾತ್ಮಕ ಕಥೆ ಹೇಳುವ ತಂತ್ರಗಳನ್ನು ಹೆಚ್ಚು ಅವಲಂಬಿಸಿದೆ. ನೈಜ ಘಟನೆಗಳನ್ನು ಚಿತ್ರಿಸುವ ಚಿತ್ರದ ಹೇಳಿಕೆಯನ್ನು ಅವರು ಪ್ರಶ್ನಿಸಿದ್ದು, ಹಲವಾರು ಚಿತ್ರಣಗಳು ವಾಸ್ತವಿಕತೆಗಿಂತ ಭಿನ್ನವಾಗಿವೆ ಎಂದು ಹೇಳಿದರು.
ರಾಜಕೀಯ ಅಭಿಪ್ರಾಯವನ್ನು ಪ್ರಭಾವಿಸುವಲ್ಲಿ ಸಿನಿಮಾದ ಪಾತ್ರದ ಬಗ್ಗೆ ನಡೆಯುತ್ತಿರುವ ಚರ್ಚೆಗಳಿಗೆ ಈ ಟೀಕೆ ಸೇರಿಸುತ್ತದೆ.
ಔಟ್ಲುಕ್ನ ಇತ್ತೀಚಿನ ವರದಿಯ ಪ್ರಕಾರ, ಅಂತರರಾಷ್ಟ್ರೀಯ ಮಾಧ್ಯಮಗಳ ಕೆಲವು ವಿಭಾಗಗಳು ಚಿತ್ರದ ನಿರೂಪಣಾ ಶೈಲಿಯನ್ನು ಟೀಕಿಸಿವೆ. ವಿಶೇಷವಾಗಿ ಅದರ ಹಿಂಸೆಯ ಗ್ರಾಫಿಕ್ ಚಿತ್ರಣ ಮತ್ತು ಗ್ರಹಿಸಿದ ರಾಜಕೀಯ ಸಂದೇವನ್ಶನು. ರಣವೀರ್ ಸಿಂಗ್ ನಿರ್ವಹಿಸಿದ ಹಮ್ಜಾ ಅಲಿ ಮಜಾರಿ ಅವರ ಮೇಲೆ ಕಥೆ ಕೇಂದ್ರೀಕೃತವಾಗಿದೆ. ಅವರು ಲಿಯಾರಿಯಲ್ಲಿ ಮತ್ತು ಪಾಕಿಸ್ತಾನದ ಐಎಸ್ಐ ಒಳಗೆ ಪ್ರಯಾಣವನ್ನು ಕಂಡುಕೊಳ್ಳುತ್ತಾರೆ. ಭಾರತದಲ್ಲಿ ದಾಳಿಗಳನ್ನು ಆಯೋಜಿಸಿದ ಆರೋಪ ಹೊತ್ತಿರುವ ಭಯೋತ್ಪಾದಕ ಗುಂಪುಗಳನ್ನು ಸಹ ಎದುರಿಸುತ್ತಾರೆ.


