HomeಮುಖಪುಟLazarus To World Leaks : ಆತಂಕ ಸೃಷ್ಟಿಸಿದ ಕೂಡಂಕುಳಂ ಸೈಬರ್ ದಾಳಿಗಳು

Lazarus To World Leaks : ಆತಂಕ ಸೃಷ್ಟಿಸಿದ ಕೂಡಂಕುಳಂ ಸೈಬರ್ ದಾಳಿಗಳು

- Advertisement -
- Advertisement -

ಭಾರತದ ಅತಿ ದೊಡ್ಡ ಪರಮಾಣು ವಿದ್ಯುತ್ ಕೇಂದ್ರವಾದ ತಮಿಳುನಾಡಿನ  ತಿರುನೆಲ್ವೇಲಿಯ ಕೂಡಂಕುಳಂ, ಕಳೆದ ಏಳು ವರ್ಷಗಳ ಅವಧಿಯಲ್ಲಿ ಎರಡು ಬಾರಿ ಪ್ರಮುಖ ಸೈಬರ್ ಭದ್ರತಾ ಆತಂಕಗಳಿಗೆ ಕೇಂದ್ರ ಬಿಂದುವಾಗಿದೆ. 2019ರ ಮೊದಲ ಘಟನೆಯು ಉತ್ತರ ಕೊರಿಯಾ ಬೆಂಬಲಿತ ಲಾಝರಸ್ ಗ್ರೂಪ್‌ಗೆ ಸಂಬಂಧಿಸಿದ ಮಾಲ್‌ವೇರ್ ಅನ್ನು ಒಳಗೊಂಡಿದ್ದರೆ, ಇತ್ತೀಚಿನ 2026ರ ಭದ್ರತಾ ಉಲ್ಲಂಘನೆಯು ವರ್ಲ್ಡ್ ಲೀಕ್ಸ್ ಎಂಬ ರಾನ್ಸಮ್‌ವೇರ್ ಗುಂಪಿನ ಮೇಲೆ ಕೇಂದ್ರೀಕೃತವಾಗಿದೆ. ಈ ಗುಂಪು ಸಾವಿರಾರು ಸೂಕ್ಷ್ಮ ಯೋಜನಾ ದಾಖಲೆಗಳನ್ನು ಸೋರಿಕೆ ಮಾಡಿರುವುದಾಗಿ ಪ್ರತಿಪಾದಿಸಿದೆ.

ಈ ಎರಡೂ ಘಟನೆಗಳು ನಿರ್ಣಾಯಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡ ಸೈಬರ್ ಬೆದರಿಕೆಗಳು ಹೇಗೆ ರಹಸ್ಯ ಗೂಢಚರ್ಯೆಯಿಂದ ಡೇಟಾ ಕಳ್ಳತನ ಮತ್ತು ಸುಲಿಗೆಯ ಕಡೆಗೆ ಬದಲಾಗಿವೆ ಎಂಬುವುದನ್ನು ತೋರಿಸಿವೆ. ಹಾಗೆಯೇ ಇದು ದೇಶದ ಸೈಬರ್ ಭದ್ರತೆಯ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕಿವೆ.

2019ರ ಲಾಝರಸ್ ಮಾಲ್‌ವೇರ್

ಮೊದಲ ಪ್ರಮುಖ ಸೈಬರ್ ಭದ್ರತಾ ಆತಂಕವು ಅಕ್ಟೋಬರ್ 2019ರಲ್ಲಿ ಬೆಳಕಿಗೆ ಬಂದಿತ್ತು. ಆಗ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎನ್‌ಪಿಸಿಐಎಲ್) ಕೂಡಂಕುಳಂ ವಿದ್ಯುತ್ ಕೇಂದ್ರದ ಆಡಳಿತಾತ್ಮಕ ನೆಟ್‌ವರ್ಕ್‌ಗೆ ಸಂಪರ್ಕ ಹೊಂದಿದ್ದ ಕಂಪ್ಯೂಟರ್‌ಗೆ ಮಾಲ್‌ವೇರ್ ಸೋಂಕು ತಗುಲಿರುವುದನ್ನು ದೃಢಪಡಿಸಿತ್ತು. ಸೈಬರ್ ಭದ್ರತಾ ಸಂಶೋಧಕರು ಈ ದಾಳಿಯನ್ನು ಲಾಝರಸ್ ಗ್ರೂಪ್‌ಗೆ ಸಂಬಂಧಿಸಿದ ‘ಡಿಟ್ರಾಕ್’ (DTrack) ಮಾಲ್‌ವೇರ್‌ನದ್ದೆಂದು ಗುರುತಿಸಿದ್ದರು.

ರಿಯಾಕ್ಟರ್ ನಿಯಂತ್ರಣ ವ್ಯವಸ್ಥೆಗಳನ್ನು ‘ಏರ್-ಗ್ಯಾಪ್ಡ್’ ನೆಟ್‌ವರ್ಕ್‌ಗಳ ಮೂಲಕ ಪ್ರತ್ಯೇಕವಾಗಿ ಇರಿಸಲಾಗಿತ್ತು ಮತ್ತು ಕಾರ್ಯಾಚರಣೆಯ ಸುರಕ್ಷತೆಗೆ ಯಾವುದೇ ಧಕ್ಕೆಯಾಗಿಲ್ಲ ಎಂದು ಎನ್‌ಪಿಸಿಐಎಲ್ ಸ್ಪಷ್ಟಪಡಿಸಿತ್ತು. ಆದಾಗ್ಯೂ, ಈ ಘಟನೆಯು ಕಾರ್ಯಾಚರಣೆಯೇತರ ವ್ಯವಸ್ಥೆಗಳಲ್ಲಿದ್ದ ದೌರ್ಬಲ್ಯಗಳನ್ನು ಬಹಿರಂಗಪಡಿಸಿತ್ತು ಹಾಗೂ ಸಂಪೂರ್ಣವಾಗಿ ಪ್ರತ್ಯೇಕಿಸಲ್ಪಟ್ಟ ನಿರ್ಣಾಯಕ ಮೂಲಸೌಕರ್ಯಗಳು ಸಹ ದೈನಂದಿನ ದಿನಚರಿಯ ಕಾರ್ಯಾಚರಣೆಗಳಿಗಾಗಿ ಡಿಜಿಟಲ್ ಆಡಳಿತಾತ್ಮಕ ನೆಟ್‌ವರ್ಕ್‌ಗಳ ಮೇಲೆಯೇ ಅವಲಂಬಿತವಾಗಿವೆ ಎಂಬುವುದನ್ನು ಎತ್ತಿ ತೋರಿಸಿತ್ತು.

2026ರ ರಾನ್ಸಮ್‌ವೇರ್ ಭದ್ರತಾ ಉಲ್ಲಂಘನೆ

ಇತ್ತೀಚಿನ ಘಟನೆಯು ಸೈಬರ್ ದಾಳಿಯ ವಿಧಾನ ಮತ್ತು ಉದ್ದೇಶ ಎರಡರಲ್ಲೂ ಗಮನಾರ್ಹವಾಗಿ ಭಿನ್ನವಾಗಿದೆ. ಗುತ್ತಿಗೆದಾರ ಸಂಸ್ಥೆಯಾದ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್‌ಗೆ ಸಂಬಂಧಿಸಿದ ಡೇಟಾವನ್ನು ಹ್ಯಾಕ್ ಮಾಡಿದ ನಂತರ, ‘ವರ್ಲ್ಡ್ ಲೀಕ್ಸ್’ ಎಂಬ ರಾನ್ಸಮ್‌ವೇರ್ ಗುಂಪು ಕೂಡಂಕುಳಂ ಪರಮಾಣು ವಿದ್ಯುತ್ ಕೇಂದ್ರಕ್ಕೆ ಸಂಬಂಧಿಸಿದೆ ಎನ್ನಲಾದ ಸುಮಾರು 19,000 ಫೈಲ್‌ಗಳನ್ನು ಲೀಕ್ ಮಾಡಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಯೊಟ್ಟಾ ನಿರ್ವಹಿಸುವ ಥರ್ಡ್‌ ಪಾರ್ಟಿ ಸರ್ವರ್‌ ಒಳಗೊಂಡಿರುವ ಭಾಗಶಃ ಭದ್ರತಾ ಉಲ್ಲಂಘನೆಯನ್ನು ರಿಲಯನ್ಸ್ ಸಂಸ್ಥೆಯು ಒಪ್ಪಿಕೊಂಡಿದ್ದು, ಅಧಿಕಾರಿಗಳು ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದಾರೆ ಎಂದು ವರದಿಯಾಗಿದೆ.

ಸೋರಿಕೆಯಾದ ಮಾಹಿತಿಯು ಮುಖ್ಯವಾಗಿ ಪ್ರಸ್ತುತ ನಿರ್ಮಾಣ ಹಂತದಲ್ಲಿರುವ 3 ಮತ್ತು 4 ನೇ ಘಟಕಗಳಿಗೆ ಸಂಬಂಧಿಸಿದ ಇಂಜಿನಿಯರಿಂಗ್ ರೇಖಾಚಿತ್ರಗಳು, ಪೂರೈಕೆದಾರರ ಮಾಹಿತಿ, ಪರಿಶೀಲನಾ ದಾಖಲೆಗಳು ಮತ್ತು ವಿಮಾ ಪತ್ರಗಳನ್ನು ಒಳಗೊಂಡಿದೆ ಎಂದು ವರದಿಯಾಗಿದೆ. ಆದರೆ, ಪರಮಾಣು ಸುರಕ್ಷತಾ ವ್ಯವಸ್ಥೆಗಳು ಅಥವಾ ರಿಯಾಕ್ಟರ್ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ಯಾವುದೇ ಫೈಲ್‌ಗಳು ಹ್ಯಾಕ್ ಆಗಿಲ್ಲ ಮತ್ತು ವಿದ್ಯುತ್ ಕೇಂದ್ರದ ಪ್ರಮುಖ ಕಾರ್ಯಾಚರಣಾ ನೆಟ್‌ವರ್ಕ್ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಎನ್‌ಪಿಸಿಐಎಲ್ ತಿಳಿಸಿದೆ.

ದಾಳಿ ತಂತ್ರಗಳು ಹೇಗೆ ಬದಲಾಗಿವೆ?

ಎರಡೂ ಘಟನೆಗಳ ನಡುವಿನ ವ್ಯತ್ಯಾಸವು ಜಾಗತಿಕ ಸೈಬರ್ ಬೆದರಿಕೆಗಳಲ್ಲಿ ಆಗಿರುವ ದೊಡ್ಡ ಬದಲಾವಣೆಗಳನ್ನು ತೋರಿಸುತ್ತದೆ.

2019 ರ ಮಾಲ್‌ವೇರ್ ದಾಳಿಯು ರಹಸ್ಯವಾಗಿ ಮಾಹಿತಿ ಕದಿಯುವುದು ಮತ್ತು ದೀರ್ಘಕಾಲದವರೆಗೆ ವ್ಯವಸ್ಥೆಯೊಳಗೆ ಅಡಗಿರುವ ಉದ್ದೇಶವನ್ನು ಹೊಂದಿತ್ತು. ಇಂತಹ ಅತ್ಯಾಧುನಿಕ ಬೆದರಿಕೆಗಳು ಸಾಮಾನ್ಯವಾಗಿ ಯಾರಿಗೂ ತಿಳಿಯದಂತೆ ರಹಸ್ಯ ಮಾಹಿತಿಯನ್ನು ಹುಡುಕುತ್ತವೆ.

ಆದರೆ 2026 ರ ಘಟನೆಯು ವಿಭಿನ್ನವಾಗಿದೆ. ಇಂದಿನ ರಾನ್ಸಮ್‌ವೇರ್ ಗುಂಪುಗಳು ಕೇವಲ ಕಂಪ್ಯೂಟರ್ ವ್ಯವಸ್ಥೆಯನ್ನು ಲಾಕ್ ಮಾಡುವುದಿಲ್ಲ; ಅದರೊಂದಿಗೆ ಡೇಟಾ ಕಳ್ಳತನ ಮಾಡಿ, ಅದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತವೆ. ಇಲ್ಲಿ ದಾಳಿಕೋರರ ಉದ್ದೇಶ ರಿಯಾಕ್ಟರ್ ಕಾರ್ಯಾಚರಣೆಯನ್ನು ನಿಲ್ಲಿಸುವುದಲ್ಲ, ಬದಲಿಗೆ ಕಂಪನಿಯ ರಹಸ್ಯ ದಾಖಲೆಗಳು ಮತ್ತು ಇಂಜಿನಿಯರಿಂಗ್ ಮಾಹಿತಿಯನ್ನು ಹೊರಹಾಕಿ ಸಂಸ್ಥೆಗಳ ಮೇಲೆ ಒತ್ತಡ ಹೇರುವುದಾಗಿದೆ.

ಆಡಳಿತ ವ್ಯವಸ್ಥೆಗಳು ಏಕೆ ಇಲ್ಲಿ ಮ್ಯಾಟರ್?

ಎರಡೂ ಘಟನೆಗಳು ಸೈಬರ್ ಅಪಾಯಗಳು ಕೇವಲ ರಿಯಾಕ್ಟರ್ ನಿಯಂತ್ರಣ ಕೊಠಡಿಗಳಿಗಷ್ಟೇ ಸೀಮಿತವಾಗಿರದೆ, ಅವುಗಳ ಆಚೆಗೂ ವಿಸ್ತರಿಸಿವೆ ಎಂಬುದನ್ನು ಒತ್ತಿಹೇಳುತ್ತವೆ.

ಆಡಳಿತ ವಿಭಾಗದ ಕಂಪ್ಯೂಟರ್‌ಗಳಲ್ಲಿ ಸಾಮಗ್ರಿ ಖರೀದಿ ದಾಖಲೆಗಳು, ವ್ಯಾಪಾರಿಗಳ ವಿವರಗಳು, ಇಂಜಿನಿಯರಿಂಗ್ ಪ್ಲಾನ್‌ಗಳು ಮತ್ತು ನೌಕರರ ಮಾಹಿತಿ ಇರುತ್ತವೆ. ಮುಖ್ಯ ಕೆಲಸದ ನೆಟ್‌ವರ್ಕ್‌ಗಳನ್ನು ಪ್ರತ್ಯೇಕವಾಗಿ ಇಟ್ಟಿದ್ದರೂ ಸಹ, ಈ ಆಡಳಿತ ವಿಭಾಗದ ಮಾಹಿತಿಯನ್ನು ಕದ್ದರೆ ಸಾಕು; ವೈರಿಗಳು ಇಡೀ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲು, ಪೂರೈಕೆದಾರರನ್ನು ಪತ್ತೆಹಚ್ಚಲು ಮತ್ತು ಮುಂದಿನ ದಾಳಿಗಳಿಗೆ ಸಂಚು ರೂಪಿಸಲು ಹಾದಿಯಾಗುತ್ತದೆ. ಇದೇ ಕಾರಣಕ್ಕೆ ಹ್ಯಾಕರ್‌ಗಳು ಕಂಪನಿಯ ಜೊತೆ ಕೆಲಸ ಮಾಡುವ ಹೊರಗಿನ ಗುತ್ತಿಗೆದಾರರು ಅಥವಾ ಸೇವಾ ಪೂರೈಕೆದಾರರನ್ನು ಸುಲಭವಾಗಿ ಗುರಿ ಮಾಡುತ್ತಿದ್ದಾರೆ ಎಂದು ತಜ್ಞರು ಹೇಳುತ್ತಾರೆ. ಯಾಕೆಂದರೆ, ಇವರು ಕಡಿಮೆ ಭದ್ರತೆಯ ನಿಯಮಗಳನ್ನು ಹೊಂದಿದ್ದರೂ ಸಹ, ಮುಖ್ಯ ಪ್ರಾಜೆಕ್ಟ್‌ಗಳೊಂದಿಗೆ ಡಿಜಿಟಲ್ ಸಂಪರ್ಕವನ್ನು ಹೊಂದಿರುತ್ತಾರೆ.

2019ರ ನಂತರ ಏನು ಬದಲಾಗಿದೆ?

ಲಾಝರಸ್ ಘಟನೆಯ ನಂತರ, ಭಾರತವು CERT-In ಮತ್ತು ಇತರ ಭದ್ರತಾ ಸಂಸ್ಥೆಗಳ ಮೂಲಕ ಸೈಬರ್ ತಪಾಸಣೆ, ದೂರು ವರದಿ ವ್ಯವಸ್ಥೆ ಮತ್ತು ಪ್ರಮುಖ ಮೂಲಸೌಕರ್ಯಗಳ ಮೇಲ್ವಿಚಾರಣೆಯನ್ನು ಬಲಪಡಿಸಿದೆ. ಪ್ರಮುಖ ಆಸ್ತಿಪಾಸ್ತಿಗಳನ್ನು ನಿರ್ವಹಿಸುವ ಸಂಸ್ಥೆಗಳು ಸಹ ತಮ್ಮ ನೆಟ್‌ವರ್ಕ್‌ಗಳನ್ನು ಪ್ರತ್ಯೇಕವಾಗಿ ಇರಿಸುವ ವ್ಯವಸ್ಥೆ, ಎಂಡ್‌ಪಾಯಿಂಟ್ ಮಾನಿಟರಿಂಗ್ ಮತ್ತು ಪೂರೈಕೆ ಸರಪಳಿಯ ಸುರಕ್ಷತಾ ಪರಿಶೀಲನೆಯನ್ನು ಹೆಚ್ಚಿಸಿವೆ. ಪ್ರಸ್ತುತ ನಡೆಯುತ್ತಿರುವ ತನಿಖೆಯ ಪ್ರಕಾರ, 2019ರ ಘಟನೆಗೆ ಹೋಲಿಸಿದರೆ ಈಗ ಸರ್ಕಾರಿ ಸಂಸ್ಥೆಗಳು, ಪ್ಲಾಂಟ್ ಆಪರೇಟರ್‌ಗಳು ಮತ್ತು ಖಾಸಗಿ ಗುತ್ತಿಗೆದಾರರ ನಡುವೆ ಅತ್ಯಂತ ವೇಗದ ಸಮನ್ವಯತೆ ಕಂಡುಬರುತ್ತಿದೆ ಎಂದು ತಿಳಿದುಬಂದಿದೆ.

ಭಾರತದ ಸೈಬರ್ ಭದ್ರತೆ ವ್ಯವಸ್ಥೆ ಸುಧಾರಿಸಿದೆಯಾ?

ಈ ಎಲ್ಲಾ ಪುರಾವೆಗಳನ್ನು ನೋಡಿದರೆ ನಮ್ಮ ಭದ್ರತೆ ಸುಧಾರಿಸಿದೆ ಎನಿಸಿದರೂ, ಕೆಲವು ಲೋಪದೋಷಗಳು ಇನ್ನೂ ಇವೆ ಎಂಬುದು ತಿಳಿಯುತ್ತದೆ. ಮುಖ್ಯ ರಿಯಾಕ್ಟರ್‌ಗಳ ಕಂಪ್ಯೂಟರ್ ಲಿಂಕ್‌ಗಳನ್ನು ಪ್ರತ್ಯೇಕವಾಗಿ ಇಟ್ಟಿರುವುದರಿಂದ ಅವು ಸುರಕ್ಷಿತವಾಗಿವೆ. ಆದರೆ, ‘ವರ್ಲ್ಡ್ ಲೀಕ್ಸ್’ ಡೇಟಾ ಸೋರಿಕೆ ಘಟನೆಯನ್ನು ಗಮನಿಸಿದರೆ ಹೊರಗಿನ ಗುತ್ತಿಗೆದಾರರು, ಕ್ಲೌಡ್ ಸಿಸ್ಟಮ್ ಮತ್ತು ಕಚೇರಿಯ ಕಂಪ್ಯೂಟರ್‌ಗಳು ಇನ್ನೂ ಅಪಾಯದಲ್ಲಿವೆ ಎಂದು ಗೊತ್ತಾಗುತ್ತದೆ. ಭಾರತದ ಪರಮಾಣು ಕೇಂದ್ರಗಳು ಬೆಳೆಯುತ್ತಿರುವುದರಿಂದ, ಕೇವಲ ರಿಯಾಕ್ಟರ್‌ಗಳನ್ನು ಕಾಪಾಡಿದರೆ ಸಾಲದು; ಅವುಗಳ ಜೊತೆ ಸಂಪರ್ಕದಲ್ಲಿರುವ ಇಡೀ ಡಿಜಿಟಲ್ ವ್ಯವಸ್ಥೆಯನ್ನು ರಕ್ಷಿಸುವುದು ಅತಿ ಮುಖ್ಯವಾಗಿದೆ.

Courtesy : outlookindia.com

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಂತರ್ ಮಂತರ್ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಕೇಜ್ರಿವಾಲ್ ಭೇಟಿ

ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜಂತರ್ ಮಂತರ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಖ್ಯಾತ ಶಿಕ್ಷಣ ತಜ್ಞ ಹಾಗೂ ಪರಿಸರ...

E20 ಪೆಟ್ರೋಲ್ ಪ್ರಕರಣ : ‘ಗ್ರ್ಯಾಂಡ್ ವಿಟಾರಾ’ ಕಾರು ಬದಲಾಯಿಸಿ ಕೊಡಲು ಮಾರುತಿ ಸುಝುಕಿಗೆ ಗ್ರಾಹಕ ನ್ಯಾಯಾಲಯ ಆದೇಶ

ಛತ್ತೀಸ್‌ಗಢದ ರಾಯ್‌ಪುರದ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗವು (ಡಿಸಿಡಿಆರ್‌ಸಿ), E20 ಇಂಧನ (ಪೆಟ್ರೋಲ್) ಬಳಕೆಯಿಂದಾಗಿ ಕಾರು ಕೆಟ್ಟುಹೋಗಿದೆ ಎಂದು ಆರೋಪಿಸಿದ ವ್ಯಕ್ತಿಗೆ ಹೊಸ 'ಗ್ರಾಂಡ್ ವಿಟಾರಾ' ಕಾರನ್ನು ನೀಡುವಂತೆ ಕಾರು ತಯಾರಿಕಾ...

ಸಿಜೆಪಿ ಶಾಂತಿಯುತ ಪ್ರತಿಭಟನೆಗೆ ನಿರಂತರ ಪೊಲೀಸ್ ಕಣ್ಗಾವಲು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್‌ನಲ್ಲಿ ಜಿರಳೆ ಜನತಾ ಪಕ್ಷ (ಸಿಜೆಪಿ) ಆಯೋಜಿಸಿರುವ ಶಾಂತಿಯುತ ಧರಣಿ ಮತ್ತು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸುವ ನಾಗರಿಕರ ಮೇಲೆ ದೆಹಲಿ ಪೊಲೀಸರು ನಿರಂತರ ಮತ್ತು ವ್ಯಾಪಕ ಕಣ್ಗಾವಲು...

IAS ಆಗುವ ಮುನ್ನ ‘ಪರಿಪೂರ್ಣ ತಾಯಿ’ಯಾಗಿ ಎಂದ ರಾಜ್ಯಪಾಲರ ಸಲಹೆ ಪುರುಷ ಪ್ರಾಧ್ಯಾನ್ಯತೆಯ ಮುಂದುವರೆದ ಆಚರಣೆ ಅಲ್ಲವೆ?

ಇತ್ತೀಚೆಗೆ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು, "ಮಹಿಳೆಯರು IAS ಅಧಿಕಾರಿ ಅಥವಾ ಶಿಕ್ಷಕಿಯಾಗುವ ಕನಸು ಕಾಣುವ ಮೊದಲು 'ಪರಿಣಿತ ತಾಯಿ' ಆಗುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದ್ದರು. ಕಾನ್ಪುರದ ಛತ್ರಪತಿ...

ಹಿಂದಿನ ಮದುವೆ, ಮಗು ವಿಚಾರ ಮುಚ್ಚಿಟ್ಟಿದ್ದಕ್ಕೆ ಸಹೋದರನೊಂದಿಗಿನ ಸಂಬಂಧ ಮುರಿದುಕೊಂಡಿದ್ದ ಕಾನೂನು ವಿದ್ಯಾರ್ಥಿನಿಯನ್ನು ಇರಿದು ಕೊಂದ ತಮ್ಮ

ಬೆಂಗಳೂರು: ಮೊದಲ ಮದುವೆ ಹಾಗೂ ಮಗುವಿದ್ದ ವಿಷಯವನ್ನು ಮುಚ್ಚಿಟ್ಟು ವಂಚಿಸಿದ್ದ ಪ್ರಿಯಕರನೊಂದಿಗಿನ ಸಂಬಂಧವನ್ನು ಮುರಿದುಕೊಂಡ ಕಾರಣಕ್ಕೆ, ಆತನ ಸಹೋದರನಿಂದಲೇ ಚಾಕು ಇರಿತಕ್ಕೊಳಗಾಗಿದ್ದ ಕಾನೂನು ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ...

ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ಅಮೆರಿಕ ದಾಳಿಗೆ ಇರಾನ್‌ನಿಂದ ಪ್ರತೀಕಾರ

ಕಳೆದ ಗುರುವಾರ (ಜು.16) ಖುಜೆಸ್ತಾನ್ ಪ್ರಾಂತ್ಯದಲ್ಲಿರುವ ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ, ಕುವೈತ್ ಮತ್ತು ಬಹ್ರೇನ್ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ವಾಯು ನೆಲೆಗಳ ಮೇಲೆ ಇರಾನ್ ಪ್ರತಿದಾಳಿ...

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ: ಪ್ರಶ್ನೆಗಳನ್ನು ಖರೀದಿಸಲು 5 ಲಕ್ಷ ರೂ. ಪಾವತಿಸಿದ್ದ ಲಾತೂರ್ ಕೋಚಿಂಗ್ ಮಾಲೀಕ: ನ್ಯಾಯಾಲಯಕ್ಕೆ ಸಿಬಿಐ ಮಾಹಿತಿ

ದೇಶಾದ್ಯಂತ ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲಿಗೆ ತಳ್ಳಿದ ನೀಟ್ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ದಿನಕ್ಕೊಂದು ಆಘಾತಕಾರಿ ಸತ್ಯಗಳು ಹೊರಬರುತ್ತಿದ್ದು, ಇಡೀ ಶಿಕ್ಷಣ ವ್ಯವಸ್ಥೆಯನ್ನು ಜರ್ಜರಿತಗೊಳಿಸಿರುವ ಈ ದಂಧೆಯ ಆಳ ಎಷ್ಟು...

ನಾನು ಸತ್ತರೂ ಪರ್ವಾಗಿಲ್ಲ, ಉಪವಾಸ ಹಿಂಪಡೆಯಲ್ಲ: ಜುಲೈ 20ರ ಸಂಸತ್ ಚಲೋಗೆ ವಾಂಗ್‌ಚುಕ್ ಕರೆ

ದೇಶದ ಶಿಕ್ಷಣ ವ್ಯವಸ್ಥೆಯಲ್ಲಿನ ಸರಣಿ ಪರೀಕ್ಷಾ ಅಕ್ರಮ ಹಾಗೂ ನೀಟ್ (NEET) ಹಗರಣದ ವಿರುದ್ಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ತಕ್ಷಣವೇ...

ಉತ್ತರ ಪ್ರದೇಶ : ಮೊಹಮ್ಮದ್ ಅಲಿ ಜೌಹರ್ ವಿವಿಯ 38 ಕಟ್ಟಡಗಳನ್ನು ಕೆಡವಲು ಮುಂದಾದ ಸರ್ಕಾರ!

ಸಮಾಜವಾದಿ ಪಕ್ಷದ (ಎಸ್‌ಪಿ) ಮುಖಂಡ ಆಝಂ ಖಾನ್ ಅವರಿಗೆ ಸೇರಿದ ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯದ 38 ಕಟ್ಟಡಗಳನ್ನು ಕೆಡವಲು ಉತ್ತರ ಪ್ರದೇಶದ ರಾಂಪುರ ನಗರಾಭಿವೃದ್ಧಿ ಪ್ರಾಧಿಕಾರ (ಆರ್‌ಡಿಎ) ಆದೇಶಿಸಿದೆ ಎಂದು ಬುಧವಾರ...

ಉಪವಾಸ ಕೊನೆಗೊಳಿಸಲು ನಿರಾಕರಿಸಿದ ಸೋನಮ್ ವಾಂಗ್‌ಚುಕ್ : 19ನೇ ದಿನವೂ ಮುಂದುವರಿದ ಸತ್ಯಾಗ್ರಹ; ಇನ್ನಷ್ಟು ಹದಗೆಟ್ಟ ಆರೋಗ್ಯ

ರಾಜಕೀಯ ನಾಯಕರು, ಬೆಂಬಲಿಗರು ಮತ್ತು ಕಾನೂನು ಮಧ್ಯಸ್ಥಿಕೆಗಳ ಮೂಲಕ ಪದೇ ಪದೇ ಮನವಿ ಮಾಡಿಕೊಂಡಿದ್ದರೂ ಸಹ, ಹೋರಾಟಗಾರ ಸೋನಮ್ ವಾಂಗ್‌ಚುಕ್ ಅವರು ತಮ್ಮ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೊನೆಗೊಳಿಸಲು ನಿರಾಕರಿಸಿದ್ದಾರೆ. ಸರ್ಕಾರದ ಕಡೆಯಿಂದ...