ದೆಹಲಿಯ ಜಂತರ್ ಮಂತರ್ನಲ್ಲಿ ಜೂನ್ 20ರಂದು ಶುರುವಾಗಿದ್ದ ಈ ಆಂದೋಲನ ಇದೀಗ ದೇಶಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಸಿಜೆಪಿ ಪಟ್ಟು ಹಿಡಿದಿದ್ದು, ಇಂದು ದೇಶದ ಪ್ರತಿ ಜಿಲ್ಲಾ ಕೇಂದ್ರಗಳಲ್ಲೂ ಶಾಂತಿಯುತ ಧರಣಿ ನಡೆಸುವಂತೆ ತನ್ನ ಬೆಂಬಲಿಗರು, ನಾಗರಿಕ ಸಮಾಜ ಹಾಗೂ ವಿದ್ಯಾರ್ಥಿ ಸಂಘಟನೆಗಳಿಗೆ ಅದು ಕರೆ ನೀಡಿದೆ.
ಜುಲೈ 20 ರಂದು ‘ಸಂಸದ್ ಚಲೋ’ ಮೆರವಣಿಗೆಯ ಮೇಲೆ ದೆಹಲಿ ಪೋಲೀಸರು ನಡೆಸಿದ ತೀವ್ರ ಬಲಪ್ರಯೋಗದ ನಂತರ, ವಿದ್ಯಾರ್ಥಿಗಳ ಈ ಪ್ರತಿಭಟನೆಯನ್ನು ಹತ್ತಿಕ್ಕಲು ಹಾಗೂ ಅವರ ಹೋರಾಟದ ಹಾದಿಯನ್ನು ತಪ್ಪಿಸಲು ಬಲಪಂಥೀಯ ಹಿಂದುತ್ವವಾದಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್ ಮತ್ತು ಉಗ್ರ ಗೂಂಡಾ ಪಡೆಗಳು ಅಖಾಡಕ್ಕಿಳಿದಿವೆ.
View this post on Instagram
“ಪ್ರತಿಭಟನೆಯಲ್ಲಿ ಸಿವಿಲ್ ಉಡುಪಿನಲ್ಲಿದ್ದವರನ್ನು ಗೂಂಡಾಗಳೆಂದು ಪ್ರತಿಭಟನಾಕಾರರು ದೂರಿದ್ದರು, ಅವರು ವಾಸ್ತವವಾಗಿ ಪೋಲೀಸ್ ಅಧಿಕಾರಿಗಳು. ಆದರೆ ಅಸಲಿ ಗೂಂಡಾಗಳು ಈಗ ಬಂದಿದ್ದಾರೆ, ಇಡೀ ದೆಹಲಿಯಲ್ಲಿ ಸುತ್ತಾಡುತ್ತಿದ್ದೇವೆ, ನಮಗೆ ಒಂದೇ ಒಂದು ಕಾಕ್ರೋಚ್ (ಪ್ರತಿಭಟನಾಕಾರರು) ಕೂಡ ಸಿಗುತ್ತಿಲ್ಲ” ಎಂದು ಲಾಯ್ಡ್ ಹರಡುತ್ತಿರುವ ಸ್ವತಂತ್ರ ಭಾರದ್ವಾಜ್ ಎಂಬ ಹಿಂದುತ್ವ ಇನ್ಫ್ಲುಯೆನ್ಸರ್ನ ವಿಡಿಯೋ ಲಕ್ಷಾಂತರ ಲೈಕ್ಸ್ ಪಡೆದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
View this post on Instagram
A post shared by Swatantra Bhardwaj (@bhardwaj_swatantra_official)
ಸಾರ್ವಜನಿಕವಾಗಿ ಇಂತಹ ಬೆದರಿಕೆ ಹಾಕುವ ಮೂಲಭೂತವಾದಿ ಪಡೆಯು, ಜಂತರ್ ಮಂತರ್ನ ವಿದ್ಯಾರ್ಥಿ ಚಳವಳಿಯನ್ನು ‘ದೇಶದ್ರೋಹಿ’, ‘ವಿದೇಶಿ ನಿಧಿ ಆಧಾರಿತ’ ಹಾಗೂ ‘ಜಿಹಾದಿ ಮನಸ್ಥಿತಿ’ ಎಂದು ಬಿಂಬಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನಮಗೆ ಕೇವಲ ಒಂದು ದಿನ ದೆಹಲಿ ಪೋಲೀಸ್ ಪಡೆಯಲ್ಲಿ ಕೆಲಸ ಮಾಡಲು ಅವಕಾಶ ನೀಡಲಿ, ಸಮವಸ್ತ್ರವಿಲ್ಲದೆ ಇಡೀ ಪ್ರತಿಭಟನಾಕಾರರಿಗೆ ಲಾಠಿಯಿಂದ ಬುದ್ಧಿ ಕಲಿಸಿ ಅವರ ಜಾಗವನ್ನು ತೋರಿಸುತ್ತೇವೆ ಎಂದು ಈ ಶಕ್ತಿಗಳು ಬಹಿರಂಗವಾಗಿ ಹಿಂಸಾಚಾರಕ್ಕೆ ಕರೆ ನೀಡುತ್ತಿವೆ.
ಈ ಬಲಪಂಥೀಯ ಇಕೋ-ಸಿಸ್ಟಮ್ನ ಪ್ರಮುಖ ನಾಯಕರು ಪ್ರತಿಭಟನಾ ಸ್ಥಳದಲ್ಲಿ ನೇರವಾಗಿ ಹಿಂಸೆಯಲ್ಲಿ ಪಾಲ್ಗೊಂಡಿದ್ದಾರೆ. ಲಕ್ಷಾಂತರ ಫಾಲೋವರ್ಸ್ ಹೊಂದಿರುವ ಸ್ವತಂತ್ರ ಭಾರದ್ವಾಜ್, ಸಚಿವ ಚಿರಾಗ್ ಪಾಸ್ವಾನ್ ಅವರೊಂದಿಗೆ ಫೋಟೋ ಹಂಚಿಕೊಂಡಿರುವ ವಿಡಿಯೋಗಳ ಜೊತೆಗೆ, ಪ್ರತಿಭಟನಾ ಸ್ಥಳದಲ್ಲಿದ್ದ ಪುಟ್ಟ ಹೆಣ್ಣುಮಗುವಿನ ತಂದೆ ಸಂಜಯ್ ಎಂಬುವವರ ಮೇಲೆ ಹಲ್ಲೆ ಮಾರಣಾಂತಿಕ ನಡೆಸಿ ದೌರ್ಜನ್ಯ ಎಸಗಿದ್ದಾನೆ ಎಂದು ಸಿಜೆಪಿ ವಕ್ತಾರ ಸೌರವ್ ದಾಸ್ ಸ್ಪಷ್ಟಪಡಿಸಿದ್ದಾರೆ.
#Imp: This goon also attacked minor Nishu’s father, Sanjay ji, inside Jantar Mantar and broke his skull. We kept demanding that the Police invoke SC/ST Act, and stricter IPC provisions. Our fear was that he’ll be emboldened to repeat this.@DCPNewDelhi why are you protecting…
— Saurav Das (@SauravDassss) July 23, 2026
ಇನ್ನು 10 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಅಭಿಷೇಕ್ ಠಾಕೂರ್ ಸನಾತನಿ ಎಂಬ ಮತ್ತೊಬ್ಬ ಇನ್ಫ್ಲುಯೆನ್ಸರ್, ತನ್ನ ಕೈಯಲ್ಲಿ ಲಾಠಿ ಹಿಡಿದುಕೊಂಡು “ನಮಗೆ ಕೇವಲ 6 ಗಂಟೆ ಸಮಯ ಕೊಡಿ, ದೇಶವನ್ನು ಬಾಂಗ್ಲಾದೇಶ ಅಥವಾ ನೇಪಾಳ ಮಾಡಲು ಹೊರಟಿರುವ ಈ ಉಗ್ರರನ್ನು ಭೂಮಿಯ ಮೇಲೆಯೇ ಜಾಗವಿಲ್ಲದಂತೆ ಓಡಿಸುತ್ತೇವೆ” ಎಂದು ಬಹಿರಂಗ ಸವಾಲು ಹಾಕಿದ್ದಾನೆ. ಈತನೂ ಸಹ ಕಪಿಲ್ ಮಿಶ್ರಾ ಮತ್ತು ಡಾ. ಸುಧಾಂಶು ತ್ರಿವೇದಿ ಅವರಂತಹ ಬಿಜೆಪಿ ಅಗ್ರ ನಾಯಕರೊಂದಿಗೆ ಸಿಕ್ರಿಯವಾಗಿ ಗುರುತಿಸಿಕೊಂಡಿದ್ದಾನೆ.
View this post on Instagram
ಅಷ್ಟೇ ಅಲ್ಲದೆ, ‘ಹಿಂದು ರಕ್ಷಾ ದಳ’ದ ರಾಷ್ಟ್ರೀಯ ಅಧ್ಯಕ್ಷ ಭೂಪೇಂದ್ರ ತೋಮರ್ ಉರುಫ್ ‘ಪಿಂಕಿ ಭಯ್ಯಾ’ ಹಾಗೂ ಹರ್ಷ ಚೌಧರಿ ನೇತೃತ್ವದ ಪಡೆಗಳು ಕತ್ತಿಗಳನ್ನು ಪ್ರದರ್ಶಿಸುತ್ತಾ, “ಪ್ರತಿಭಟನಾಕಾರರಿಗೆ ಪಾಠ ಕಲಿಸಲು ಪ್ರತಿ ಹಿಂದುತ್ವ ಯೋಧನೂ ಸಿದ್ಧರಾಗಬೇಕು” ಎಂದು ಪ್ರಚೋದನಾಕಾರಿ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ಇವರಲ್ಲಿ ಕೆಲವರು ತಾವೇ ಪೋಲೀಸರಂತೆ ವೇಷ ಧರಿಸಿ ಪ್ರತಿಭಟನಾಕಾರರ ಗುಂಪಿನೊಳಗೆ ನುಸುಳಿ, ಮಾಧ್ಯಮ ಪ್ರತಿನಿಧಿಗಳು ಮತ್ತು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲು ಉದ್ರೇಕಿಸುತ್ತಿರುವುದು ಹಾಗೂ ‘ಹೊಡೆಯಿರಿ ಹೊಡೆಯಿರಿ’ ಎಂದು ಕೂಗುತ್ತಿರುವುದು ರೆಕಾರ್ಡ್ ಆಗಿದೆ.
View this post on Instagram
ಈ ವೈರಲ್ ವಿಡಿಯೋಗಳಲ್ಲಿ ಗೂಂಡಾಗಿರಿ ಜೊತೆಗೆ, ಅಖಿಲ ಭಾರತ ಹಿಂದೂ ಮಹಾಸಭಾದ ಮಾಜಿ ಉಪಾಧ್ಯಕ್ಷ ಸತೀಶ್ ಕುಮಾರ್ ಅಗರ್ವಾಲ್ ಅವರು ದೆಹಲಿ ಹೈಕೋರ್ಟ್ನಲ್ಲಿ ಪಿಐಎಲ್ ಸಲ್ಲಿಸಿ, ಇಡೀ ವಿದ್ಯಾರ್ಥಿ ಹೋರಾಟದ ವಿರುದ್ಧ ಎನ್ಐಎ (NIA) ತನಿಖೆಗೆ ಆಗ್ರಹಿಸುವ ಮೂಲಕ ನ್ಯಾಯಾಲಯವನ್ನೂ ಹೋರಾಟಗಾರರ ವಿರುದ್ಧ ಬಳಸಿಕೊಳ್ಳಲು ಯತ್ನಿಸುತ್ತಿದ್ದಾರೆ.
ಒಟ್ಟಾರೆಯಾಗಿ, ಜಂತರ್ ಮಂತರ್ನಲ್ಲಿ ಶಾಂತಿಯುತವಾಗಿ ತಮ್ಮ ಭವಿಷ್ಯಕ್ಕಾಗಿ ಪ್ರತಿಭಟಿಸುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳು, ಯುವತಿಯರು ಮತ್ತು ಮಕ್ಕಳ ಮೇಲೆ ದೆಹಲಿ ಪೋಲೀಸರ ಲಾಠಿಚಾರ್ಜ್ ಒಂದೆಡೆಯಾದರೆ, ಇನ್ನೊಂದೆಡೆ ರಾಜಕೀಯ ಬೆಂಬಲದೊಂದಿಗೆ ‘ಒಂದು ದಿನದ ಮಟ್ಟಿಗೆ ನಮ್ಮನ್ನು ಪೋಲೀಸ್ ಮಾಡಿ’ ಎಂದು ಅರಚುತ್ತಿರುವ ಉಗ್ರ ಮೂಲಭೂತವಾದಿಗಳ ಸೃಷ್ಟಿತ ಗೂಂಡಾಗಿರಿಯ ಭೀತಿ ಎದುರಾಗಿದೆ. ನ್ಯಾಯಯುತ ವಿದ್ಯಾರ್ಥಿ ಹೋರಾಟವನ್ನು ಹತ್ತಿಕ್ಕಲು ಸರ್ಕಾರಿ ಶಕ್ತಿ ಮತ್ತು ಬಲಪಂಥೀಯ ಗೂಂಡಾಗಳು ಕೈಜೋಡಿಸಿರುವುದು ನಮ್ಮ ಪ್ರಜಾಪ್ರಭುತ್ವದ ಅಸ್ಮಿತೆಗೆ ಎದುರಾಗಿರುವ ಅತಿದೊಡ್ಡ ಅಪಾಯವಾಗಿದೆ.
Source: The Quint


