ಪಕ್ಷದ ಪ್ರಧಾನ ಕಚೇರಿಯಲ್ಲಿ ವಂದೇ ಮಾತರಂ ಹಾಡಿದ ಬಗ್ಗೆ ನಡೆಯುತ್ತಿರುವ ವಿವಾದದ ನಡುವೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ ಸ್ಪಷ್ಟನೆ ನೀಡಿದ್ದಾರೆ. ಪಕ್ಷದ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ದೂರಿನ ಆಧಾರವನ್ನು ಪ್ರಶ್ನಿಸಿರಿವ ಅವರು, “ಮಹಾತ್ಮ ಗಾಂಧಿ, ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರು ಹಾಡಿದ್ದನ್ನೇ ನಾವೂ ಹಾಡಿದ್ದೇವೆ. ನಮ್ಮ ವಿರುದ್ಧ ದೂರು ದಾಖಲಿಸುವುದಾದರೆ, ಅವರ ವಿರುದ್ಧವೂ ದೂರು ದಾಖಲಿಸಬೇಕು” ಎಂದು ಹೇಳಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಧ್ವಜಾರೋಹಣ ಮಾಡಿದ ನಂತರ ವಂದೇ ಮಾತರಂ ಹಾಡಲಾಯಿತು. ಈ ಸಂದರ್ಭದಲ್ಲಿ ವಂದೇ ಮಾತರಂ ಪೂರ್ಣ ಆವೃತ್ತಿನ್ನು ಹಾಡಲಾಯಿತು. ಗಾಯಕರು ಪೂರ್ಣ ಆವೃತ್ತಿಯನ್ನು ಹಾಡುತ್ತಿರುವುದನ್ನು ಗಮನಿಸಿದ ಸೋನಿಯಾ ಗಾಂಧಿ ಅವರುಖರ್ಗೆ ಕಡೆಗೆ ಸನ್ನೆ ಮಾಡಿದರು. ನಂತರ ಗಾಯಕರೊಂದಿಗೆ ಸಂವಹನ ನಡೆಸಿ, ಅದನ್ನು ಅರ್ಧಕ್ಕೇ ನಿಲ್ಲಿಸುವಂತೆ ಕೇಳಿಕೊಂಡರು ಎಂಬ ಆರೋಪವಿದೆ.
ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ವಂದೇ ಮಾತರಂ ಹಾಡುವಿಕೆಯನ್ನು ಅಡ್ಡಿಪಡಿಸಲು ಪ್ರಯತ್ನಿಸಲಾಗಿದೆ ಎಂಬ ಆರೋಪದ ಮೇಲೆ ಎಫ್ಐಆರ್ ದಾಖಲಿಸುವಂತೆ ಕೋರಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಸೋಮವಾರ ದೆಹಲಿ ಪೊಲೀಸರಿಗೆ ದೂರು ಸಲ್ಲಿಸಲಾಯಿತು.
ವರದಿಗಾರರೊಂದಿಗೆ ಮಾತನಾಡಿದ ಖರ್ಗೆ, “ಸರಿ ನೋಡಿ, ಅವರು ಯಾವ ದೂರು ದಾಖಲಿಸುತ್ತಾರೆ? ಮಹಾತ್ಮ ಗಾಂಧಿ ಹಾಡಿದ ಅದೇ ವಂದೇ ಮಾತರಂ ಅನ್ನು ನಾವು ಹಾಡಿದ್ದೇವೆ. ಜವಾಹರಲಾಲ್ ನೆಹರು ಹಾಡಿದ್ದನ್ನು ನಾವು ಹಾಡಿದ್ದೇವೆ. ಕಳೆದ 18 ವರ್ಷಗಳಿಂದ, ವಾಜಪೇಯಿ ನೇತೃತ್ವದ ಅವರ ಕೇಂದ್ರ ಸರ್ಕಾರ ಹಾಡಿದ್ದನ್ನು ಒಳಗೊಂಡಂತೆ, ಅವರು ಹಾಡಿದ್ದನ್ನು ನಾವು ಹಾಡಿದ್ದೇವೆ. 12 ವರ್ಷಗಳ ಕಾಲ, ಮುಖ್ಯಮಂತ್ರಿಯಾಗಿ, ಅವರು (ಪ್ರಧಾನಿ ನರೇಂದ್ರ ಮೋದಿ) ಅವರು ಇಷ್ಟು ವರ್ಷಗಳಿಂದ ಹಾಡುತ್ತಿರುವ ಅದೇ ವಂದೇ ಮಾತರಂ ಅನ್ನು ಸಹ ಹಾಡಿದ್ದಾರೆ” ಎಂದರು.
“ನಾವು ಮಾಡಿದ್ದು ಅಪರಾಧವಾಗಿದ್ದರೆ, ಅವರು 18 ವರ್ಷಗಳಿಂದ ಈ ಅಪರಾಧವನ್ನು ಮಾಡುತ್ತಿದ್ದಾರೆ. ಇದು ಒಂದೇ ಅಪರಾಧವಾಗಿದ್ದರೆ, ಮಹಾತ್ಮಾ ಗಾಂಧಿಯವರ ವಿರುದ್ಧ ಪ್ರಕರಣ ದಾಖಲಿಸಿ. ನಾವು ಮಾಡಿದ್ದು ಅಪರಾಧವಾಗಿದ್ದರೆ, ನೆಹರೂ ಅವರ ವಿರುದ್ಧ ಪ್ರಕರಣ ದಾಖಲಿಸಿ” ಎಂದು ಅವರು ಹೇಳಿದರು.
ಕಾಂಗ್ರೆಸ್ ವಿಮರ್ಷಕರು ಹುಟ್ಟುವ ಮೊದಲೇ ರಾಷ್ಟ್ರಗೀತೆಗಳ ಕುರಿತು ಕಾಂಗ್ರೆಸ್ನ ನಿರ್ಣಯ ಅಂಗೀಕರಿಸಿದೆ ಎಂದು ಖರ್ಗೆ ಹೇಳಿದರು.
“ನೀವು ಏನು ಹೇಳಿದರೂ ಅದೇ ಅಂತಿಮವೇ? ಮುಂಬರುವ ವರ್ಷಗಳಲ್ಲಿ ಮತ್ತೊಂದು ಸರ್ಕಾರ ಬರುತ್ತದೆ, ಆದ್ದರಿಂದ ಅವರು ಏನು ಹೇಳಿದರೂ ಅದು ಮಾತ್ರ ಆಗುತ್ತದೆಯೇ?” ಎಂದು ಅವರು ಕೇಳಿದರು.


