ಎನ್ಯುಮರೇಷನ್ ಫಾರಂ (ಗಣತಿ ನಮೂನೆ) ಸಲ್ಲಿಕೆ ಹಂತ ಮುಗಿದ ಬಳಿಕ (ಆ.18-19ರ ಪ್ರಕಾರ) ದೊರೆತ ಮಾಹಿತಿ ಪ್ರಕಾರ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಕರ್ನಾಟಕದ ಸುಮಾರು ಒಂದೂವರೆ ಕೋಟಿ ( 1,51,77,155) ಜನರ ಮೇಲೆ ಪರಿಣಾಮ ಬೀರುವುದು ಖಚಿತವಾಗಿದೆ.
ಎಸ್ಐಆರ್ ಸಲುವಾಗಿ 16 ಜೂನ್ 2026ರಂದು ಕರ್ನಾಟಕದ ಮತದಾರರ ಪಟ್ಟಿಯನ್ನು ಫ್ರೀಝ್ ಮಾಡಲಾಗಿದೆ. ಈ ವೇಳೆಗೆ ರಾಜ್ಯದ ಒಟ್ಟು ಮತದಾರರ ಸಂಖ್ಯೆ 5,54,32,314 ಇತ್ತು. ಎಸ್ಐಆರ್ನ ಎನ್ಯುಮರೇಷನ್ ಹಂತ ಮುಗಿದ ಬಳಿಕ, ಚುನಾವಣಾ ಆಯೋಗ 1,07,96, 415 ಜನರನ್ನು ಎಎಸ್ಡಿಡಿಒ ಎಂದು ಪಟ್ಟಿ ಮಾಡಿದೆ.
1,07,96, 415 ಎಎಸ್ಡಿಡಿಒ ಡಿಲೀಟ್ ಜೊತೆಗೆ ಎನ್ಯುಮರೇಷನ್ ಫಾರಂ ಡಿಜಿಟಲೀಕರಣಗೊಂಡ 43, 80,740 ಮತದಾರರಿಗೆ ಅನ್ ಮ್ಯಾಪಿಂಗ್ ಮತ್ತು ಅನಾಮಲಿಸ್ (ಲಾಜಿಕಲ್ ಡಿಸ್ಕ್ರಿಪೆನ್ಸಿ) ಎಂಬ ಕಾರಣಕ್ಕೆ ನೋಟಿಸ್ ಬರಲಿದೆ. 23,45,428 ಮತದಾರರಿಗೆ ಅನ್ಮ್ಯಾಪಿಂಗ್ ಮತ್ತು 23,35,312 ಅನಾಮಲಿಸ್ ಕಾರಣಕ್ಕೆ ನೋಟಿಸ್ ನೀಡಲು ಚುನಾವಣಾ ಆಯೋಗ ಸಿದ್ದತೆ ನಡೆಸಿದೆ.
ಪ್ರಸ್ತುತ ಎಎಸ್ಡಿಒ ಪಟ್ಟಿಯಲ್ಲಿರುವ 1,07,96, 415 ಮತದಾರರ ಹೆಸರು ಕರಡು ಪಟ್ಟಿಯಲ್ಲಿ ಬರುವುದಿಲ್ಲ. ಇವರನ್ನು ಈಗಾಗಲೇ ಡಿಲಿಟ್ ಎಂದು ತೀರ್ಮಾನಿಸಲಾಗಿದೆ. ಇನ್ನು ನೋಟಿಸ್ ಪಡೆಯಲಿರುವ 43, 80,740 ಮತದಾರರಲ್ಲಿ ವಿಚಾರಣೆ ಹಾಜರಾಗಿ ದಾಖಲೆ ಸಲ್ಲಿಸದ ಕಾರಣಕ್ಕೆ ಎಷ್ಟು ಜನರು ತಮ್ಮ ಹಕ್ಕು ಕಳೆದುಕೊಳ್ಳಲಿದ್ದಾರೆ ಎಂಬುವುದನ್ನು ಕಾದು ನೋಡಬೇಕಿದೆ.
ಚುನಾವಣಾ ಆಯೋಗ ಎಎಸ್ಡಿಡಿಒ ಪಟ್ಟಿ ಮಾಡಿರುವವರಲ್ಲಿ ಅರ್ಹ ಮತದಾರರು ಒಳಗೊಂಡಿದ್ದರೆ, ಅವರು ತಮ್ಮ ಹಕ್ಕು ಉಳಿಸಿಕೊಳ್ಳಲು ಫಾರಂ-6 ಸಲ್ಲಿಸುವ ಅಗತ್ಯವಿದೆ. ಈ ಮೂಲಕ ಹೊಸ ಮತದಾರರೆಂದು ಅವರನ್ನು ಪರಿಗಣಿಸಲಾಗುತ್ತದೆ. ಫಾರಂ-6 ಜೊತೆಗೆ ಪ್ರೊಜೆನಿ ಮ್ಯಾಪಿಂಗ್ ಸ್ವಯಂ ದೃಢೀಕರಣ ಸಲ್ಲಿಸುವುದು ಕಡ್ಡಾಯವಾಗಿದೆ.
ಎಎಸ್ಡಿಡಿಒ, ಅನ್ ಮ್ಯಾಪಿಂಗ್ ಅಥವಾ ಲಾಜಿಕಲ್ ಡಿಸ್ಕ್ರಿಪೆನ್ಸಿ ಇವುಗಳಲ್ಲಿ ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಬಿದ್ದರೂ, ಅವರ ಮುಂದಿರುವ ಅವಕಾಶ ಫಾರಂ-6 ಮಾತ್ರವಾಗಿದೆ. ಆದರೆ, ಫಾರಂ-6 ಸಲ್ಲಿಸುವುದಾದರೆ ಪ್ರೊಜೆನಿ ಮ್ಯಾಪಿಂಗ್ ಕಡ್ಡಾಯ ಎಂಬ ಆಯೋಗದ ಹೊಸ ನಿಯಮ ಮತ್ತೊಂದು ತಡೆಯಾಗುವ ಸಾಧ್ಯತೆ ಇದೆ.
ಎಸ್ಐಆರ್ ಕುರಿತು ಕಾರ್ಯ ಪ್ರವೃತ್ತವಾಗಿರುವ ನಾಗರಿಕ ಸಂಘಟನೆಗಳು ಚುನಾವಣಾ ಆಯೋಗದ ಎಎಸ್ಡಿಡಿಒ ಪಟ್ಟಿಯನ್ನು ಸಂಪೂರ್ಣ ಒಪ್ಪಿಕೊಂಡಿಲ್ಲ. ಚುನಾವಣಾ ಆಯೋಗ ಎಎಸ್ಡಿಡಿಒ ಪಟ್ಟಿ ಸಂಪೂರ್ಣ ಸರಿಯಾಗಿದೆ ಎಂದು ವಾದಿಸುತ್ತಿದೆ. ಆದರೆ, ಸಂಘಟನೆಗಳು ಲಕ್ಷಾಂತರ ಮಂದಿ ಅರ್ಹ ಮತದಾರರು ವ್ಯವಸ್ಥೆಯ ಲೋಪಕ್ಕೆ ಇನ್ನೂ ಡಿಲಿಟ್ ಪಟ್ಟಿಯಲ್ಲಿದ್ದಾರೆ ಎಂದು ಹೇಳುತ್ತಿವೆ.
ಎಸ್ಐಆರ್ನ ಎಎಸ್ಡಿಡಿಒ, ಅನ್ಮ್ಯಾಪ್, ಲಾಜಿಕಲ್ ಡಿಸ್ಕ್ರಿಪೆನ್ಸಿ ಎಂಬ ಈ ಮೂರು ಕಾರಣಗಳಿಂದ ಕರ್ನಾಟಕದ ಒಂದೂವರೆ ಕೋಟಿ ಮತದಾರರು ಬಾದಿತರಾಗಿದ್ದಾರೆ ಎಂಬುವುದು ಸದ್ಯಕ್ಕೆ ಖಚಿತವಾಗಿದೆ. ಈ ಅಂಕಿ ಅಂಶಗಳಲ್ಲಿ ಕೊಂಚ ಬದಲಾವಣೆಯಾಗಬಹುದು.
ವ್ಯವಸ್ಥೆಯಲ್ಲಿ ಹಲವು ಲೋಪಗಳಿಗೆ. ಹಾಗಾಗಿ, ಕೇವಲ ನೋಟಿಸ್ ಪಡೆಯಲಿರುವವರನ್ನು ಮಾತ್ರ ಪರಿಗಣಿಸಿ, ಆಯೋಗ ಹೊರಗಿಟ್ಟ ಎಎಸ್ಡಿಡಿಒ ಪಟ್ಟಿಯಲ್ಲಿರುವ ಅರ್ಹ ಮತದಾರರನ್ನು ನಾವು ಬದಿಗೊತ್ತಲು ಅಥವಾ ಮರೆತು ಬಿಡಲು ಸಾಧ್ಯವಿಲ್ಲ. ಪ್ರತಿಯೊಬ್ಬ ಅರ್ಹ ಮತದಾರರಿಗೂ ನ್ಯಾಯ ದೊರೆಯಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ಮುಂದುವರಿ ಎಂಬುವುದು ನಾಗರಿಕ ಸಂಘಟನೆಗಳ ಆಗ್ರಹವಾಗಿದೆ.


