Homeಅಂಕಣಗಳುಕ್ಯಾಶ್‍ಲೆಸ್ ಎಕಾನಮಿ ಅಂದಿದ್ದವ್ರು ಕಲರ್‍ಕಲರ್ ನೋಟು ಪ್ರಿಂಟ್ ಮಾಡ್ತಾ ಅವುರೆ

ಕ್ಯಾಶ್‍ಲೆಸ್ ಎಕಾನಮಿ ಅಂದಿದ್ದವ್ರು ಕಲರ್‍ಕಲರ್ ನೋಟು ಪ್ರಿಂಟ್ ಮಾಡ್ತಾ ಅವುರೆ

- Advertisement -
- Advertisement -

ಕೇಳುಗರಿಗೆಲ್ಲ ಆಘಾತವಾಣಿ ವಾರ್ತೆಗಳಿಗೆ ಸ್ವಾಗತ, ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತ. ಈಗ ವಾರ್ತೆಗಳ ವಿವರ..
ಉಡುಪಿಯ ಅಷ್ಟಮಠದ ಶಿರೂರು ಸ್ವಾಮಿಗಳ ಪಾಯ್ಸನ್ ಫುಡ್ ಸಾವಿಗೆ ಕಿಂಚಿತ್ತೂ ಕರುಳು ಕರಗದ ತೇಜಾವರ ಸ್ವಾಮಿಗಳು, ಆ ಸ್ವಾಮಿ ನಂತರ ಫೊರೆನ್ಸಿಕ್ ಸೈನ್ಸನ್ನೇ ನುಣ್ಣಗೆ ಅರೆದು ಗಟಗಟ ಕುಡಿದವರಂತೆ ಕೆಕರುಮಕರಾಗಿ ಹೇಳಿಕೆ ಕೊಟ್ಟಿದ್ದಾರೆ. ಆ ಸ್ವಾಮಿ ಎಣ್ಣೆ ತಗತಿದ್ದ, ಹೆಣ್ಮಕ್ಕಳ ಮ್ಯಾಟ್ರಲ್ಲಿ ವೀಕ್ ಇದ್ದ, ಹಂಗಾಗಿ ಸತ್ತೋಗಿರಬೇಕು ಅಂತ ತೇಜಾವರರು ಕೀರಲು ದನಿಯಲ್ಲಿ ಊಳಿಟ್ಟಿದ್ದಾರೆ. ದಿವಂಗತ ಸ್ವಾಮಿ ಬದುಕಿದ್ದಾಗ “ಎಂಟು ಮಠಗಳ ಎಲ್ಲ ಸ್ವಾಮುಗೋಳು ಮ್ಯಾರೇಜ್ ಮಾಡ್ಕಂಡು, ಕದ್ದು ಮಕ್ಕಳು ಹುಟ್ಟುಸಿ, ಹುಟ್ಟಿಸಿದ ಮಕ್ಳೆಲ್ಲವನ್ನು ಕದ್ದು ಮಡಗಿದ್ದಾರೆ, ಬಾಂಬೆ, ಪೂನಾದಲ್ಲಿ ಹೋಟೆಲ್ ಬ್ಯುಜಿನೆಸ್ ನಡುಸ್ತಾವ್ರೆ, ಮೀಟ್ರುಬಡ್ಡಿಗೆ ಸಾಲ ಕೊಟ್ಟು ಪರ್ಸೆಂಟೇಜ್ ಬಡ್ಡಿ ಯವಾರ ನಡುಸ್ತಾವ್ರೆ” ಅಂತ ಮುರಕೊಂಡು ಬಿದ್ದಿದ್ದಾಗ ಬಾಯಿಗೆ ಹೊಲಿಗೆ ಹಾಕ್ಕಂಡು ಕಮಕ್ ಕಿಮಕ್ ಅನ್ನದೆ ಇದ್ದ ತೇಜಾವರರಿಗೆ ಇದ್ದಕ್ಕಿದ್ದಂತೆ ಈ ಧೈರ್ಯ ಎಲ್ಲಿಂದ ಬಂತು ಎಂದು ಭಕ್ತಾದಿಗಳೇ ಗಾಬರಿಯಾಗಿದ್ದಾರೆ. ನೂರಾರು ಸಲ ಮಠದ ಗಾಯಕಿಯೊಬ್ಬರ ಮೇಲೆ ರೇಪು ಮಾಡಿ ಕೋರ್ಟಿಂದ ಉಗಿಸಿಕೊಂಡ ಕೌಬಾಯ್ ಸ್ವಾಮಿ ವಿಷಯದಲ್ಲಿ ಲವಿಡವಿ ಸೈಲೆನ್ಸ್ ಮೈಂಟೈನ್ ಮಾಡುತ್ತ ಸಪೋರ್ಟ್ ಕೊಡೋ ತೇಜಾವರರು ತಮ್ಮ ಎಂಟು ಮಠಗಳ ಸ್ವಾಮಿಗಳ ರಹಸ್ಯವನ್ನೆಲ್ಲ ಹರಾಜು ಹಾಕುತ್ತಿದ್ದ ಸ್ವಾಮಿ ಅನುಮಾನಾಸ್ಪದವಾಗಿ ಸತ್ತ ನಂತರವೂ ಹಗೆ ಸಾಧಿಸಿ ಕಳಪೆ ಮಾತನ್ನಾಡುವುದು ಆ ಮನುಷ್ಯನ ನೀಚತನ ಎಂಬ ಜನ ಮಾತಾಡಿಕೊಳ್ಳುತ್ತಿರುವುದು ತಿಳಿದುಬಂದಿದೆ.

*****

ರಿಸರ್ವ್ ಬ್ಯಾಂಕ್ ಗೌರ್ನರ್ ಆಗಿದ್ದ ರಘುರಾಮ್ ರಾಜನ್ ರಂಥ ಪಳಗಿದ ಆರ್ಥಿಕತಜ್ಞರಿಗೆ ಕೊಡಬಾರದ ಕಾಟ ಕೊಟ್ಟು ಒಕ್ಕಲೆಬ್ಬಿಸಿದ ಶಿಲಾಯುಗದ ಸನಾತನಿ ಪೀಡೆಗಳು, ಚೀಪಿದ ಮೂಳೆ ತಮ್ಮತ್ತ ಬಿಸಾಕುವ ಅಂಬಾನಿಗಳ ಕೊಂಪೆಯಿಂದ ಕೊಳೆತ ಮಿದುಳಿನ ಆಸಾಮಿಯನ್ನು ತಂದು ಆ ಜಾಗಕ್ಕೆ ಕೂರಿಸಿದ್ದು ಈಗ ಹಳೆಯ ವಿಷಯ, ಹೊಸ ವಿಷಯ ಏನಪ್ಪ ಅಂದ್ರೆ ರಿಸರ್ವ್ ಬ್ಯಾಂಕೆಂದರೆ ಬೊಂಬಾಯ್ ಮಿಠಾಯ್ ಮಾರೋ ಅಂಗಡಿ ಅಂತ ಭ್ರಮೆಯಲ್ಲಿರೋ ಈ ಅಂಬಾನಿ ಜವಾನನಿಗೆ ಒಂದೈವತ್ತು ಹುಚ್ಚರು ಒಮ್ಮೆಲೇ ಕಚ್ಚಿ ತಲೆ ಇನ್ಫೆಕ್ಷನ್ ಆಗಿರೋ ಸಾಧ್ಯತೆಗಳು ಕಂಡುಬರುತ್ತಿವೆ. ಜನರು ಬಳಸುತ್ತಿದ್ದ ಮುದ್ದಾದ ನೋಟುಗಳನ್ನು ಕಚಡಿ ಪಿಚಡಿ ಆಕಾರದಲ್ಲಿ ಇಷ್ಟಬಂದಂತೆ ಚಡ್ಡಿ ಬದಲಿಸಿದಂತೆ ಬದಲಿಸಿ ಒಂದರ ಹಿಂದೊಂದು ಪೀಕಲಾಟ ತಂದಿಡ್ತಿರೋ ಉರ್ಜಿತ್ ಪಟೇಲ್ ಎಟಿಎಂ ವ್ಯವಸ್ಥೆಗೇ ಡಿಚ್ಚಿ ಹೊಡೆಯುತ್ತಿದ್ದಾನೆ. ಇವನು ಬದಲಿಸೋ ನೋಟುಗಳ ಸೈಜು ಎಟಿಎಂಗಳಿಗೆ ಸರಿ ಹೋಗದೆ ಬ್ಯಾಂಕುಗಳು ಲಬೋಲಬೋ ಬಾಯಿ ಬಡ್ಕೊಂಡ್ರೂ ಹೊಸದಾಗಿ 100 ರುಪಾಯಿ ನೋಟು ಡಿಸೈನ್ ಚೇಂಜ್ ಮಾಡಿ ಚಲಾವಣೆಗೆ ಬಿಡಲಾಗಿದೆ. ನೋಟ್ ಬ್ಯಾನ್ ಟೈಮಿನಲ್ಲಿ ನಾವು ನೋಟೇ ಇಲ್ಲದ ಕ್ಯಾಶ್‍ಲೆಸ್ ಎಕಾನಮಿ ನಿರ್ಮಿಸ್ತೀವಿ ಅಂತ ಬೊಗಳಿದವರು ತಿಂಗಳಿಂದ ತಿಂಗಳಿಗೆ ನೋಟುಗಳ ಪ್ರಿಂಟಿಂಗನ್ನು ಹೆಚ್ಚಿಸ್ತಿರೋದ್ಯಾಕೆ ಅನ್ನೋ ಮರ್ಮ ಯಾರಿಗೂ ಗೊತ್ತಾಗ್ತ ಇಲ್ಲ. ಜನರ ಪಡಿಪಾಟಲುಗಳನ್ನು ಸೈಕೋಗಳಂತೆ ಎಂಜಾಯ್ ಮಾಡ್ತಿರೋ ಈ ಸನಾತನಿ ಪಿಶಾಚಿಗಳಿಗೆ ಬರಬಾರದ್ದು ಬಂದು ಹುಳ ಬಿದ್ದು ಸಾಯಲೆಂದು ಜನರು ಶಾಪ ಹಾಕುತ್ತಿರುವುದು ತಿಳಿದು ಬಂದಿದೆ.

*****

ವಯಸ್ಸಲ್ಲದ ವಯಸ್ಸಲ್ಲಿ “ಕುಚ್ ಕುಚ್ ಹೋತಾ ಹೈ, ಬ್ಲೂಜೆಪಿವಾಲೇ ಲಡ್ಕಿ ಲೇಜಾಯೇಂಗೆ” ಅಂತ ಸರ್ಕಾರಿ ಕ್ಲರ್ಕ್ ಹುಡುಗಿಯೊಂದಿಗೆ ಕದ್ದುಮುಚ್ಚಿ ಕುಸುಮುಸು ಮಾಡಿ ಕೈ ಎತ್ತಿದ್ದ ಬ್ಲೂಜೆಪಿಯ ರಾಮದಾಸನಿಗೆ ಶನಿ ಮಕದ ಮೇಲೆ ಅಂಡೂರಿ ಕುಂತುಬಿಟ್ಟಿದ್ದಾನೆ. ಎಲ್ಲ ಮುಗಿದ ಮೇಲೆ ರಾಮ್ದಾಸ ಕೈಗೆ ಸಿಗದಂಗೆ ತಪ್ಪಿಸ್ಕಂಡು ಓಡೋಗವ್ನೆ ಅಂತ ರೊಚ್ಚಿಗೆದ್ದಿರೋ ಪ್ಲೇಮಕುಮಾರಿಯೆಂಬ ರಾಮ್ದಾಸನ ಮಾಜಿ ಲವರ್ರು ಸೀದಾ ಕೈಕೊಟ್ಟ ಮಿಡಲ್ ಏಜ್ ಮನ್ಮಥನ ಆಫೀಸಿನ ಮುಂದೆ ಧುಡುಮ್ಮನೆ ಬಿದ್ದಿದೆ. ದೀಪಾವಳಿಯ ವಿಷ್ಣುಚಕ್ರದಂತೆ ಗರಗರಗರ ತಿರುಗುತ್ತ ನೆಲದ ಮೇಲೆ ಕೂಚಿಪುಡಿ-ಭರತನಾಟ್ಯ ಎರಡನ್ನೂ ಮಿಕ್ಸ್ ಮಾಡಿದ ಘನಘೋರ ನೃತ್ಯವಾಡಿ ರಾಮ್ದಾಸ್ ಕಛೇರಿಯೆದುರು ನೆರೆದ ಬ್ಲೂಜೆಪಿ ಕಾರ್ಯಕರ್ತರಿಗೆ ಪುಗ್ಸಟ್ಟೆ ಮನರಂಜನೆ ಒದಗಿಸಿದ್ದಾರೆ. ಈ ಹೆಣ್ಣಿನೊಡನೆ ಕಳ್ಳಾಟವಾಡಿ ಕೈಗೆ ಚೊಂಬು ಕೊಟ್ಟು ಯಾಮಾರಿಸಿ ಇನ್ನೊಂದರ ಬೆನ್ನುಬೀಳಲು ರೆಡಿಯಾಗಿದ್ದ ರಾಮ್ದಾಸನ ಗಂಟಲಿಗೆ ಹೆಟ್ಟಿದ ಗಢಾರಿಯಾಗಿರೋ ಪ್ಲೇಮಕುಮಾರಿ.. ನಾನು ಕುಲಗೆಟ್ಟು ಹೋಗಿರೋ ರಾಮ್ದಾಸನಿಗೆ ಬಾಳು ಕೊಡ್ತೇನೆ, ಈ ಓತಿಕ್ಯಾತದ ಮೂತಿಯವನ ಬಾಳು ಬಂಗಾರ ಮಾಡಿ, ಮಾನ ಹರಿದು ಊರು ಬಾಗಲು ಮಾಡಿ, ಅವನ ಹಣೆಗೆ ಅಕ್ಕಿಕಾಳು ಮಡಗೋತನಕ ನಾನು ಬ್ಯೂಟಿಪಾರ್ಲರಿನಲ್ಲಿ ಐಬ್ರೋ ಮಾಡ್ಸಲ್ಲ ಅಂತ ಶಪಥಗೈದಿದ್ದಾರೆ. ಈ ವೀರಪ್ರತಿಜ್ಞೆ ತಿಳಿದ ರಾಮ್ದಾಸನು ಕೆ.ಆರ್.ಪುರದ ಬಾರ್‍ನ ಟಾಯ್ಲೆಟ್ಟಿನಲ್ಲಿ ಕುಳಿತು ಗೊಳೋ ಅಂತ ಅಳುತ್ತಿದ್ದಾರೆಂದು ಬಾರ್ ಸಪ್ಲೈಯರ್ ಮಾಹಿತಿ ನೀಡಿದ್ದಾರೆ.

*****

ರಾಜಕಾರಣಿಗಳು ಜನರ ದುಡ್ಡು ದೋಚುವುದನ್ನು ನೀವು ಕೇಳಿದ್ದೀರಿ, ಈಗ ಟಾಯ್ಲೆಟ್, ಕಮೋಡ್, ಪೈಪುಗಳನ್ನೂ ಬಿಡದೆ ದೋಚುತ್ತಿರುವುದು ಹೊಸ ವಿಷಯ. ವಿಷ್ಯ ಏನಪ್ಪ ಅಂದ್ರೆ ಕಾರವಾರದ ಹಿಂದಿನ ಕೈ ಪಕ್ಷದ ಎಮ್ಮೆಲ್ಲೆ ಸತೀಶ್ ಸೈಲ್ ಎಂಬ ಗಣಿ ಗಢವನು ತನಗೆ ಸರ್ಕಾರ ಒದಗಿಸಿದ್ದ ಕಛೇರಿ ಶೌಚಾಲಯದ ಕಮೋಡು, ಪೈಪು, ಫ್ಲಶ್ ಬ್ಲಾಕ್ಸೆಲ್ಲವನ್ನೂ ಬಿಚ್ಚಿಕೊಂಡು ಮಂಗಮಾಯವಾಗಿದ್ದಾನೆ. ಹೊಸದಾಗಿ ಆಯ್ಕೆಯಾದ ಎಮ್ಮೆಲ್ಲೆ ಲೂಪಾಲಿ ನಾಯ್ಕ ಎಂಬ ಬ್ಲೂಜೆಪಿ ಎಮ್ಮೆಲ್ಲೆ ಈ ಕಛೇರಿಗೆ ಬಂದಾಗ ಟಾಯ್ಲೆಟ್ ರೂಮಿನಲ್ಲಿ ಬಕೀಟು ನಲ್ಲಿಯೊಂದನ್ನು ಬಿಟ್ಟು ಉಳಿದದ್ದೆಲ್ಲ ಠಣಾರ್ ಆಗಿರುವುದು ಕಂಡು ಕಂಗಾಲಾಗಿದ್ದಾರೆ. ಅಜೆರ್ಂಟಾಗಿ ನಿತ್ಯಕರ್ಮಗಳನ್ನು ಮುಗಿಸಿಕೊಳ್ಳಲೂ ಸಾಧ್ಯವಾಗದಂತೆ ಪೀಕಲಾಟಕ್ಕೆ ಸಿಲುಕಿರೋ ಬ್ಲೂಜೆಪಿ ಎಮ್ಮೆಲ್ಲೆಗೆ ಸದ್ಯಕ್ಕೆ ಪೇ & ಯೂಸ್ ಸುಲಭ್ ಶೌಚಾಲಯವೇ ಗತಿಯಾಗಿದೆಯಂತೆ. ತನ್ನನ್ನು ಈ ಸ್ಥಿತಿಗೆ ನೂಕಿ ಹೋಗಿರೊ ಹಳೇ ಎಮ್ಮೆಲ್ಲೆ ಸತೀಶನ ಮೇಲೆ ಟಾಯ್ಲೆಟ್ ಕಳ್ಳತನದ ಕೇಸು ಹಾಕಲು ಲೂಪಾಲಿ ಮೇಡಂ ಸಿದ್ದರಾಗಿದ್ದಾರೆಂದು ಸುಲಭ್ ಶೌಚಾಲಯದ ಸಿಬ್ಬಂದಿ ತಿಳಿಸಿದ್ದಾರೆ. ನೂರಾರು ಕೋಟಿ ಗಣಿ ಯವಾರ ನಡೆಸೋ ಸತೀಶನಿಗೆ ಟಾಯ್ಲೆಟ್ ಐಟಂಗಳನ್ನ ಕದ್ಕೊಂಡು ಹೋಗೋ ದುರ್ಗತಿ ಯಾಕೆ ಬಂತೆಂದು ವಿಚಾರಿಸಿದಾಗ ಹೊಸ ಸಂಗತಿಯೊಂದು ಬಯಲಾಗಿದೆ. ವಾಸ್ತುಪ್ರಕಾರ ಪೂಜೆ ಮಾಡಿ ಅಳವಡಿಸಿರೋ ಇದೇ ಐಟಂಗಳನ್ನು ಬಳಸಿದ್ರೆ ನಿನಗೆ ಒಳ್ಳೆಯದೆಂದು ಗಢವ ಗೋರಿಲ್ಲ ಬ್ರಮ್ಮಾಂಡ ಪಿಂಡ ಟಾಯ್ಲೆಟ್ಟೋಪದೇಶ ಮಾಡಿದ್ದನಂತೆ. ಅದಕ್ಕೆಂದು ಅಧಿಕಾರ ಎಗರಿಹೋದ ಮೇಲೆ ಮಾಜಿ ಎಮ್ಮೆಲ್ಲೆ ಸತೀಶನು ಟಾಯ್ಲೆಟ್ಟನ್ನು ಅನಾಮತ್ತಾಗಿ ಪಾರ್ಟ್ ಪಾರ್ಟಾಗಿ ಬಿಚ್ಚಿಕೊಂಡು ಹೋಗಿದ್ದಾನೆಂದು ಬಲ್ಲ ಮೂಲಗಳು ಸ್ಪಷ್ಟಪಡಿಸಿವೆ.

*****

ದನದ ಮಾಂಸ ತಿನ್ನುವುದನ್ನು ನಿಲ್ಲಿಸಿದರೆ, ಗೋರಕ್ಷಕರಿಂದ ನಡೆಯುತ್ತಿರುವ ದನಸಾಗಾಟಗಾರರ ಕೊಲೆಗಳು ನಿಲ್ಲುತ್ತವೆಂದು ರಾಷ್ಟ್ರೀಯ ಸರ್ವನಾಶಕ ಸಂಘದ ಇಂದ್ರೇಶನೆಂಬ ಮುದಿಹೋರಿ ಸ್ಟೇಟ್‍ಮೆಂಟ್ ಎಸೆದಿದೆ. ‘ದನದಮಾಂಸ ತಿನ್ನುವರನ್ನು ನಾವು ಕೊಲ್ತಾನೇ ಇರ್ತೇವೆ, ಜೀವ ಬೇಕೋ ದನದ ಮಾಂಸ ಬೇಕೋ?’ ಅಂತ ಬೆದರಿಕೆಯೊಡ್ಡಿದೆ. ಇತ್ತಕಡೆ ಪಕೋಡತಾತನ ಆಳ್ವಿಕೆಯಲ್ಲಿ ಇಂಡಿಯದೇಶ ಜಗತ್ತಿನಲ್ಲೇ ಅತಿದೊಡ್ಡ ದನದಮಾಂಸ ರಫ್ತುದಾರ ದೇಶವಾಗಿದೆ. ದನಹಸುಗಳನ್ನು ಕೊಂದು ರಫ್ತುಮಾಡೋ ಕಂಪನಿಗಳಿಂದ ಎಂಜಲೆತ್ತಿಕೊಂಡು ಓಡಾಡ್ತಿರೋ ಇವರು ದನಗಳನ್ನು ರಕ್ಷಿಸೋ ಮಾತನಾಡುವುದು, ವಿಕೃತಕಾಮಿ ಉಮೇಶ್ ರೆಡ್ಡಿ ಮಹಿಳಾ ಸುರಕ್ಷತೆ ಬಗ್ಗೆ ಭಾಷಣ ಹೊಡೆದಂತೆ ಕೇಳುತ್ತದೆಯೆಂದು ಸಂತ್ರಸ್ತೆಯೊಬ್ಬರು ತಿಳಿಸಿದ್ದಾರೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ನಮ್ಮ ನಿಮ್ಮ ಬೇಟಿ ಮುಂದಿನವಾರ. ಅಲ್ಲೀತನಕ ನೀವೂ ನೆಮ್ದಿಯಾಗಿರಿ, ನಾವೂ ನೆಮ್ದಿಯಾಗಿರುತ್ತೇವೆ ಅಂತ ಹೇಳುತ್ತ, ವಾರ್ತಾಪ್ರಸಾರಕ್ಕೆ ಮಂಗಳ ಹಾಡುತ್ತಿದ್ದೇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....