ದೆಹಲಿಯ ಶಾಹೀನ್ ಬಾಗ್ ಪ್ರದೇಶದಲ್ಲಿ ಒಂದೂವರೆ ತಿಂಗಳಿನಿಂದ ನಡೆಯುತ್ತಿರುವ ಸಿಎಎ, ಎನ್ಆರ್ಸಿ ವಿರುದ್ಧದ ಹೋರಾಟದಲ್ಲಿ ಬೀಡುಬಿಟ್ಟಿರುವ ಸಾವಿರಾರು ಪ್ರತಿಭಟನಾಕಾರರನ್ನು ಅಲ್ಲಿಂದ ಹೊರಕಳಿಸುವಂತೆ ದೆಹಲಿಯ ಮಾಜಿ ಬಿಜೆಪಿ ಶಾಸಕರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರಕ್ಕೆ ಮುಂದೂಡಿದೆ.
ಉನ್ನತ ನ್ಯಾಯಾಲಯವು ಇಂದು ಈ ಪ್ರಕರಣದ ವಿಚಾರಣೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ನಾಳೆ ರಾಷ್ಟ್ರ ರಾಜಧಾನಿಯಲ್ಲಿ ವಿಧಾನಸಭಾ ಚುನಾವಣೆಯ ಕಾರಣ ಈ ವಿಷಯವನ್ನು ಮುಂದೂಡಿದೆ. ಇದು ಚುನಾವಣೆಯ ಮೇಲೆ “ಪ್ರಭಾವ ಬೀರಲು” ಬಯಸುವುದಿಲ್ಲ ಎಂದು ಕೋರ್ಟ್ ಹೇಳಿದೆ.
ಮುಂದೂಡುವಿಕೆಯಿಂದ ಚುನಾವಣೆಯ ನಂತರ ಪ್ರಕರಣವನ್ನು ಆಲಿಸಲಾಗುವುದಿಲ್ಲ ಎಂದು ಅರ್ಜಿದಾರರು ವಾದಿಸಿದರು. ಇದಕ್ಕೆ “ಬೆಕ್ಕು ಚೀಲದಿಂದ ಹೊರಬಂದಿದೆ … ಅದಕ್ಕೆ ನಾವು ಮುಂದೂಡುತ್ತಿದ್ದೇವೆ” ಎಂದು ನ್ಯಾಯಮೂರ್ತಿ ಎಸ್.ಕೆ.ಕೌಲ್ ಹಾಸ್ಯಮಯವಾಗಿ ಉತ್ತರಿಸಿದ್ದಾರೆ.
“ಅದಕ್ಕಾಗಿಯೇ ನಾವು ‘ಸೋಮವಾರ ಬನ್ನಿ’ ಎಂದು ಹೇಳುತ್ತಿದ್ದೇವೆ. ನಾವು ಅದನ್ನು (ಚುನಾವಣೆ) ಏಕೆ ಪ್ರಭಾವಿಸಬೇಕು? ನಾವು ಸಮಸ್ಯೆಯನ್ನು ಅರ್ಥಮಾಡಿಕೊಂಡಿದ್ದೇವೆ ಮತ್ತು ಅದನ್ನು ಹೇಗೆ ಪರಿಹರಿಸಬೇಕೆಂದು ನಾವು ನೋಡಬೇಕಾಗಿದೆ. ನಾವು ಅದನ್ನು ಸೋಮವಾರ ತೆಗೆದುಕೊಳ್ಳುತ್ತೇವೆ. ಎಂದು ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಮತ್ತು ಕೆ.ಎಂ.ಜೋಸೆಫ್ ಅವರನ್ನೊಳಗೊಂಡ ಇಬ್ಬರು ನ್ಯಾಯಾಧೀಶರ ಪೀಠ ಹೇಳಿದೆ.
ಅಲ್ಲದೇ ಈ ವಿಷಯವನ್ನು ದೆಹಲಿ ಹೈಕೋರ್ಟ್ಗೆ ಏಕೆ ವಾಪಸ್ ಕಳುಹಿಸಬಾರದು ಎಂದು ವಿವರಿಸಲು ಸೋಮವಾರ ಸಿದ್ದರಾಗಿ ಬನ್ನಿ ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ.
ಈ ವಾರದ ಆರಂಭದಲ್ಲಿ ಬಿಜೆಪಿ ನಾಯಕ ನಂದ್ ಕಿಶೋರ್ ಅವರು ಸಲ್ಲಿಸಿದ ಅರ್ಜಿಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಭಟನೆ ಮತ್ತು ಆಂದೋಲನಕ್ಕೆ ಸಂಪೂರ್ಣ ನಿರ್ಬಂಧ ಹೇರಲು “ಸಮಗ್ರ ಮಾರ್ಗಸೂಚಿಗಳನ್ನು” ಕೋರಿದೆ. ಅದರಲ್ಲಿ ಶಾಹೀನ್ ಬಾಗ್ನಲ್ಲಿ ಒಂದು ತಿಂಗಳಿನಿಂದ ನಡೆಯುತ್ತಿರುವ ಪ್ರತಿಭಟನೆಗಳ ಉಲ್ಲೇಖವಿದೆ.
ಕಾನೂನು ಜಾರಿಗೊಳಿಸುವವರು “ಪ್ರತಿಭಟನಾಕಾರರ ಆಸೆ ಮತ್ತು ಮನೋಭಾವಗಳಿಗೆ ಒತ್ತೆಯಾಳುಗಳಾಗಿರುತ್ತಾರೆ” ಎಂದು ಹೇಳುವ ಅರ್ಜಿಯಲ್ಲಿ, ಪ್ರಮುಖ ರಸ್ತೆ ನಿರ್ಬಂಧಿಸಲ್ಪಟ್ಟಿರುವುದರಿಂದ ನಿವಾಸಿಗಳು ಮತ್ತು ದಕ್ಷಿಣ ದೆಹಲಿ ಮತ್ತು ನೋಯ್ಡಾ ನಡುವೆ ಪ್ರಯಾಣಿಸುವವರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳುತ್ತದೆ.
ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಆಂದೋಲನ ನಡೆಸಲು 200 ಕ್ಕೂ ಹೆಚ್ಚು ಮಹಿಳೆಯರು ಚಳಿಗಾಲದಲ್ಲಿ ಧೈರ್ಯ ತುಂಬಿರುವ ಶಾಹೀನ್ ಬಾಗ್ ಸ್ಥಳವು ರಾಷ್ಟ್ರವ್ಯಾಪಿ ಪ್ರತಿಭಟನೆಗಳ ಕೇಂದ್ರಬಿಂದುವಾಗಿ ಹೊರಹೊಮ್ಮಿದೆ. ಇದನ್ನು ದೆಹಲಿ ಚುನಾವಣೆಯ ಕೇಂದ್ರಬಿಂದುವಾಗಿಸುವುದು ಬಿಜೆಪಿಯ ಮುಖ್ಯ ಗುರಿಯಾಗಿದೆ. ಆದರೆ ಆ ಆಸೆಗೆ ಸುಪ್ರೀಂ ತಣ್ಣೀರು ಎರಚಿದೆ.