Homeಗೌರಿ ಕಣ್ಣೋಟನಿತೀಶ್ ಕುಮಾರ್ ಮಾಧ್ಯಮಗಳನ್ನು ಬಳಸಿಕೊಂಡ ಬಗೆ! - ಗೌರಿ ಕಣ್ಣೋಟ

ನಿತೀಶ್ ಕುಮಾರ್ ಮಾಧ್ಯಮಗಳನ್ನು ಬಳಸಿಕೊಂಡ ಬಗೆ! – ಗೌರಿ ಕಣ್ಣೋಟ

- Advertisement -
- Advertisement -

ನನಗೆ ಅಚ್ಚರಿ ಮೂಡಿಸಿದ್ದು ಬಿಹಾರದ ಮುಖ್ಯಮಂತ್ರಿ ಆಗಿರುವ ನಿತೀಶ್ ಕುಮಾರ್ ಅವರ ಸರ್ಕಾರದಲ್ಲಿ ಆಗುತ್ತಿರುವ ಪ್ರಜಾಪ್ರಭುತ್ವದ ದಮನ. ಸಭ್ಯನಂತೆ ಸ್ವಚ್ಛಹಸ್ತನಂತೆ ಕಾಣುವ ನಿತೀಶ್ ಕುಮಾರ್ ಹೇಗೆ ತಮ್ಮ ರಾಜ್ಯದ ಮಾಧ್ಯಮಗಳನ್ನು ನಿಯಂತ್ರಿಸುತ್ತಿದ್ದಾರೆ ಎಂಬುದನ್ನು ಕುರಿತು ‘ಓಪನ್’ ಪತ್ರಿಕೆಯಲ್ಲಿ ಒಂದು ಸುದೀರ್ಘವಾದ ವರದಿ ಪ್ರಕಟಗೊಂಡಿದೆ. ಅದನ್ನು ಓದಿದನಂತರ ನಿತೀಶ್ ಕುಮಾರ್ ಅವರ ಬಗ್ಗೆ ಅಚ್ಚರಿ ಆಯಿತು.

‘ಓಪನ್’ ಪತ್ರಿಕೆಯಲ್ಲಿ ಧೀರೇಂದ್ರ ಕೆ. ಝಾ ಎಂಬುವವರು ಬರೆದಿರುವ ವರದಿಯ ಸಾರಾಂಶ ಹೀಗಿದೆ:

ಇತ್ತೀಚೆಗೆ ಬಿಹಾರದ ರಾಜಧಾನಿ ಪಾಟ್ನಾದಲ್ಲಿರುವ ಒಂದು ಮನೆಯ ಮೇಲೆ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದರು. ಆ ದಾಳಿಯಲ್ಲಿ ಅವರಿಗೆ ಐದು ಕೋಟಿ ರೂಪಾಯಿಗಳು ಸಿಕ್ಕವಲ್ಲದೆ, ಪಾಟ್ನಾದಲ್ಲಿರುವ ಸುಮಾರು ಐವತ್ತು ಮನೆಗಳ ಖರೀದಿ ಪತ್ರಗಳೂ ಸಿಕ್ಕವು. ಐದು ಕೋಟಿಯಷ್ಟು ದೊಡ್ಡಮೊತ್ತ ಮತ್ತು ಐವತ್ತು ಮನೆಗಳ ದಾಖಲೆಗಳು ಸಿಕ್ಕಿದ್ದರೂ ಬಿಹಾರದ ಯಾವ ಪತ್ರಿಕೆಯೂ ಈ ದಾಳಿಯ ಬಗ್ಗೆ ವರದಿ ಮಾಡಲಿಲ್ಲ. ಅದಕ್ಕೆ ಕಾರಣ ಆ ಮನೆಯಲ್ಲಿ ವಾಸಿಸುತ್ತಿರುವಾತ ಮುಖ್ಯಮಂತ್ರಿ ನಿತೀಶ್‌ಕುಮಾರ್ ಅವರಿಗೆ ಆಪ್ತನಾಗಿರುವ ಮತ್ತು ನಿತೀಶ್‌ಕುಮಾರ್ ಅವರ ಸಂಯುಕ್ತ ಜನತಾದಳದ ಖಜಾಂಚಿ ಆಗಿರುವ ವಿನಯ್‌ಕುಮಾರ್ ಸಿನ್ಹಾ! ಅಂದಹಾಗೆ ನಿತೀಶ್‌ಕುಮಾರ್ ಅವರು ಮುಖ್ಯಮಂತ್ರಿ ಆಗುವತನಕ ಇದೇ ಮನೆಯಲ್ಲಿ ವಾಸಿಸುತ್ತಿದ್ದರು ಮತ್ತು ಈಗ ಅದನ್ನು ತಮ್ಮ ಆಪ್ತನಿಗೆ ಬಿಟ್ಟುಕೊಟ್ಟಿದ್ದಾರೆ.

ಭ್ರಷ್ಟಾಚಾರ ಮತ್ತು ರಾಜಕೀಯ ವಾಸನೆ ಇರುವ ಈ ದಾಳಿಯ ಬಗ್ಗೆ ಯಾಕೆ ಬಿಹಾರದ ಪತ್ರಿಕೆಗಳು ವರದಿ ಮಾಡಲಿಲ್ಲ ಎಂದು ನೋಡಿದಾಗ ಇದು ಒಂದು ವಿಶೇಷ ಸಂಗತಿ ಅಲ್ಲವೆಂದೂ, ಇಂತಹ ‘ಮರೆಮಾಚುವ’ ಕೆಲಸದಲ್ಲಿ ಆ ರಾಜ್ಯದ ಪತ್ರಿಕೆಗಳೂ ದಿನನಿತ್ಯ ತೊಡಗಿವೆ ಎಂದೂ ಗೊತ್ತಾಯಿತು.

ನಿತೀಶ್‌ಕುಮಾರ್ ಬಿಹಾರದ ಮುಖ್ಯಮಂತ್ರಿ ಆದಾಗಿನಿಂದಲೂ ಅವರು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಅಲ್ಲಿನ ಮಾಧ್ಯಮಗಳನ್ನು ನಿಯಂತ್ರಿಸುತ್ತಿದ್ದಾರೆ. ಅವರನ್ನು ಟೀಕೆ ಮಾಡುವ ಪತ್ರಿಕೆಗಳ ಆದಾಯ ಮೂಲಗಳನ್ನು ಕಡಿದು ಹಾಕುವಮೂಲಕ ಅಂತಹ ‘ದಾರಿ ತಪ್ಪಿದ’ ಮಾಧ್ಯಮಗಳನ್ನು ‘ಸರಿದಾರಿಗೆ’ ತರುತ್ತಿದ್ದಾರೆ. ಹಾಗೆ ‘ಸರಿ ದಾರಿಗೆ’ ಎಳೆಯಲ್ಪಟ್ಟ ಪತ್ರಿಕೆಗಳಲ್ಲಿ ‘ಪಿಂಡಾರ್’ ಎಂಬ ಉರ್ದು ಪತ್ರಿಕೆಯೂ ಒಂದು.

ಈ ‘ಪಿಂಡಾರ್’ ಪತ್ರಿಕೆಗೆ ಡಾ. ರೈಹಾನ್ ಘಾಣಿ ಎಂಬುವವರು ಸಂಪಾದಕರಾಗಿದ್ದರು. 2007ರಲ್ಲಿ ನಿತೀಶ್ ಕುಮಾರ್ ಅವರ ಪತ್ನಿ ಮಡಿದಾಗ ಆಕೆಯ ಅಂತ್ಯಸಂಸ್ಕಾರವನ್ನು ಒಂದು ರಾಜಕೀಯ ಸಭೆಯಾಗಿ ಮುಖ್ಯಮಂತ್ರಿ ಪರಿವರ್ತಿಸಿದ್ದರು. ಇದನ್ನು ಟೀಕಿಸಿ ಘಾಣಿ ಅವರು ಮಾಡಿದ ಈ ‘ಪ್ರಮಾದ’ಕ್ಕೆ ಮಾರನೆ ದಿನವೇ ಅವರಿಗೆ ಬಿಸಿಮುಟ್ಟಿಸಿದ್ದರು ನಿತೀಶ್ ಕುಮಾರ್ ‘ಪಿಂಡಾರ್’ ಪತ್ರಿಕೆಯ ಮಾಲೀಕರ ಮೇಲೆ ಒತ್ತಡ ತಂದು ಘಾಣಿ ಅವರನ್ನು ಸಂಪಾದಕ ಹುದ್ದೆಯಿಂದ ಓಡಿಸಲಾಯಿತು, ಅವರು ಹಲವಾರು ವರ್ಷಗಳಿಂದ ಬರೆಯುತ್ತಿದ್ದ ಅಂಕಣಕ್ಕೆ ಕತ್ತರಿ ಬಿತ್ತು. ಇಂತಹ ಅವಮಾನವನ್ನು ಸಹಿಸದೆ ಘಾಣಿ ಅವರು ರಾಜೀನಾಮೆ ಕೊಟ್ಟು ಆ ಪತ್ರಿಕೆಯಿಂದ ಹೊರಬಿದ್ದರು.

ಈ ಕತೆ ಅಲ್ಲಿಗೇ ಮುಗಿಯುವುದಿಲ್ಲ. ನಿತೀಶ್ ಕುಮಾರ್ ಅವರ ಆಸೆಗೆ ತಕ್ಕಂತೆ ‘ಪಿಂಡಾರ್’ ಪತ್ರಿಕೆಯ ಮಾಲೀಕ ಎ.ಕೆ.ಎಹಸಾನಿ ಅವರು ನಡೆದುಕೊಂಡಿದ್ದರಿಂದ ಆ ಪತ್ರಿಕೆಗೆ ಬಿಹಾರ ಸರ್ಕಾರದಿಂದ ಸಾಕಷ್ಟು ಲಾಭ ಸಿಕ್ಕಿತು. ಘಾಣಿ ಅವರು ಸಂಪಾದಕರಾಗಿದ್ದಾಗ 2007ರಲ್ಲಿ ‘ಪಿಂಡಾರ್’ ಪತ್ರಿಕೆಗೆ ಬಿಹಾರದ ಸರ್ಕಾರದಿಂದ ಕೇವಲ ಒಂದು ಲಕ್ಷ ರೂಪಾಯಿಗಳಷ್ಟು ಜಾಹೀರಾತುಗಳು ಸಿಕ್ಕಿದ್ದವು. ಆದರೆ ಘಾಣಿ ಅವರು ಹೊರನಡೆದ ನಂತರ ಮಾಲೀಕ ಎಹಸಾನಿ ಅವರೇ ಸಂಪಾದಕರಾದ ನಂತರ ಅದೇ ಪತ್ರಿಕೆಗೆ 2008 ರಲ್ಲಿ 24 ಲಕ್ಷ ರೂಪಾಯಿಗಳಷ್ಟು ಜಾಹೀರಾತುಗಳು ಹರಿದುಬಂದವು. ಅದರ ಮುಂದಿನ ವರ್ಷವೂ ‘ಪಿಂಡಾರ್’ ಪತ್ರಿಕೆ ನಿತೀಶ್ ಕುಮಾರ್ ಅವರ ತಾಳಕ್ಕೆ ಕುಣಿದಿದ್ದರಿಂದ 2009ರಲ್ಲಿ ಬರೋಬ್ಬರಿ 40 ಲಕ್ಷದ ಸರ್ಕಾರಿ ಜಾಹೀರಾತುಗಳು ಸಿಕ್ಕಿದವು. 2010ರಲ್ಲಿ ಅದು 48 ಲಕ್ಷಕ್ಕೆ ಏರಿತು! ಸಹಜವಾಗಿಯೇ ‘ಪಿಂಡಾರ್’ ಪತ್ರಿಕೆ ಇವತ್ತು ನಿತೀಶ್ ಕುಮಾರರ ಭಟ್ಟಂಗಿ ಪತ್ರಿಕೆಯಾಗಿದೆ.

ಅಂದಹಾಗೆ ಈ ವಿದ್ಯಮಾನ ಕೇವಲ ‘ಪಿಂಡಾರ್’ ಪತ್ರಿಕೆಗೆ ಸೀಮಿತವಾಗಿಲ್ಲ. ಬಿಹಾರ ರಾಜ್ಯದಲ್ಲಿ ಹೇಳಿಕೊಳ್ಳುವಂತಹ ಖಾಸಗಿ ಉದ್ಯಮ, ಕಾರ್ಖಾನೆ, ಸಂಸ್ಥೆಗಳು ಇಲ್ಲ ಆದ್ದರಿಂದ ಅಲ್ಲಿನ ಪತ್ರಿಕೆಗಳು ತಮ್ಮ ಉಳಿವಿಗಾಗಿ ಸರ್ಕಾರಿ ಜಾಹೀರಾತುಗಳನ್ನೇ ಅವಲಂಬಿಸಲೇಬೇಕಿದೆ. ಇದನ್ನೇ ತನ್ನ ಅಸ್ತ್ರವಾಗಿಸಿಕೊಂಡಿರುವ ನಿತೀಶ್‌ಕುಮಾರ್ ಅಲ್ಲಿನ ಪತ್ರಿಕೆಗಳನ್ನು ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದಾರೆ. ಅದನ್ನು ಅವರು ಅದೆಷ್ಟು ಚಾಕಚಕ್ಯತೆಯಿಂದ ಮಾಡಿದ್ದಾರೆಂಬುದು ಅಚ್ಚರಿ ಮೂಡಿಸುತ್ತದೆ.

ನಿತೀಶ್‌ಕುಮಾರ್ ಬಿಹಾರದ ಮುಖ್ಯಮಂತ್ರಿ ಆಗುವತನಕ ಆ ರಾಜ್ಯದ ಬಜೆಟ್‌ನಲ್ಲಿ ಸರ್ಕಾರಿ ಜಾಹೀರಾತುಗಳಿಗೆ ಕಡಿಮೆ ಹಣವನ್ನು ಎತ್ತಿಡಲಾಗುತ್ತಿತ್ತು. ಉದಾಹರಣೆಗೆ ಲಾಲೂ ಪ್ರಸಾದ್ ಯಾದವ್ ಅವರ ಆರ್‌ಜೆಡಿ ಪಕ್ಷ ಬಿಹಾರದಲ್ಲಿ ಅಧಿಕಾರದಲ್ಲಿದ್ದ 2005-06ರಲ್ಲಿ ಇಂತಹ ಜಾಹೀರಾತುಗಳಿಗೆ 4.5 ಕೋಟಿ ರೂಪಾಯಿಗಳನ್ನು ಸರ್ಕಾರಿ ಖಜಾನೆಯಿಂದ ವೆಚ್ಚ ಮಾಡಲಾಗಿತ್ತು. ಆದರೆ ನಿತೀಶ್‌ಕುಮಾರ್ ಅಧಿಕಾರ ವಹಿಸಿಕೊಂಡ ನಂತರ ಮರುವರ್ಷವೇ (2006-07ರಲ್ಲಿ) ಆ ಮೊತ್ತವನ್ನು 5.4 ಕೋಟಿಗಳಿಗೆ ಏರಿಸಲಾಯಿತು. 2007-08ರಲ್ಲಿ ಅದು ದುಪ್ಪಟ್ಟುಗೊಂಡು 9.65 ಕೋಟಿಯಾಯಿತು. 2008-09ರಲ್ಲಿ ಅದು ಮೂರುಪಟ್ಟು ಹೆಚ್ಚಾಗಿ 27.5 ಕೋಟಿಗೆ ಏರಿತು. 2009-10ರಲ್ಲಿ ಮತ್ತಷ್ಟು ಹೆಚ್ಚಾಗಿ 34.5 ಕೋಟಿ ರೂ. ಗೆ ಮುಟ್ಟಿತು.

ಇಷ್ಟು ದೊಡ್ಡ ಮೊತ್ತದಲ್ಲಿ ಯಾವ ಪತ್ರಿಕೆಗೆ ಎಷ್ಟು ಕೊಡಬೇಕೆಂಬ ನಿರ್ಧಾರವನ್ನು ಸ್ವತಃ ನಿತೀಶ್‌ಕುಮಾರ್ ಅವರೇ ತೆಗೆದುಕೊಳ್ಳುವುದರಿಂದ ಇವತ್ತು ಅಲ್ಲಿಯ ಬಹಳಷ್ಟು ಪತ್ರಿಕೆಗಳು ಅವರ ಹೊಗಳುಭಟ್ಟ ಪತ್ರಿಕೆಗಳಾಗಿ ಮಾರ್ಪಾಟುಗೊಂಡಿವೆ. ಇದರ ಬಗ್ಗೆ ‘ಪಿಂಡಾರ್’ ಪತ್ರಿಕೆಯ ಮಾಜಿ ಸಂಪಾದಕ ಘಾಣಿ ಅವರು ಹೇಳುವುದೇನೆಂದರೆ “ತುರ್ತುಪರಿಸ್ಥಿತಿ ಸಂದರ್ಭದಲ್ಲಿ ದೇಶದಾದ್ಯಂತ ಘೋಷಿತ ಪತ್ರಿಕಾ ಸೆನ್ಸಾರ್‌ಶಿಪ್ ಇತ್ತು. ಆದರೆ ನಿತೀಶ್‌ಕುಮಾರ್ ಆಡಳಿತದಡಿ ಬಿಹಾರದಲ್ಲಿ ಅಘೋಷಿತ ಸೆನ್ಸಾರ್‌ಶಿಪ್ ಜಾರಿಯಲ್ಲಿದೆ. ಇದು ಪ್ರಜಾಪ್ರಭುತ್ವಕ್ಕೆ ಬಹಳಷ್ಟು ಅಪಾಯಕಾರಿ” ಎಂದು.

  • ಗೌರಿ ಲಂಕೇಶ್.

ಮೇ 2, 2012

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...