Homeಮುಖಪುಟಕಡುಖೋಟಾ ಅನ್ನೋ ಡೀಫ್ ಫೇಕು : ದೆಹಲಿಯಲ್ಲಿ ಬಿಜೆಪಿಯ ಮನೋಜ್‌ ತಿವಾರಿ ಮಾಡಿದ ಮೋಡಿ ಗೊತ್ತೆ?

ಕಡುಖೋಟಾ ಅನ್ನೋ ಡೀಫ್ ಫೇಕು : ದೆಹಲಿಯಲ್ಲಿ ಬಿಜೆಪಿಯ ಮನೋಜ್‌ ತಿವಾರಿ ಮಾಡಿದ ಮೋಡಿ ಗೊತ್ತೆ?

- Advertisement -
- Advertisement -

ʻನೀಂ ಕಡು ಕಾಫಿ ಬಲ್ಲೆ, ಕಡು ಖೋಟಾ ಬಲ್ಲೆಯಾ?ʼ

ʻನಿನ್ನೆ ಹುಟ್ಟಿದವನಿಗಿಂತ ಇವತ್ತು ಹುಟ್ಟಿದವ ಶಾಣ್ಯಾʼ ಅಂತ ಒಂದು ಗಾದಿ ಮಾತು ಅದ. ಅದು ಬ್ಯಾರೆ ಎಲ್ಲೆರ ಇದು ಸುಳ್ಳು ಆಗಬಹುದು, ಆದರ ತಂತ್ರಜ್ಞಾನದ ವಿಷಯದಾಗ ಅಗದೀ ಖರೆ.

ನಮ್ಮ ಯುವ ಸಾಫ್ಟವೇರು ತಂತ್ರಜ್ಞರು ಒಂದು ಕಂಪ್ಯೂಟರು, ಒಂದು ಇಂಟರನೆಟ್ಟು ಇಟಗೊಂಡು ಏನೇನೆಲ್ಲಾ ಮಾಡತಾರ ಅಂದರ ಕೇಳಬ್ಯಾಡರಿ. ಅವರ ಮಾಡಿದ ಒಂದೊಂದ ಕೆಲಸದ ಪರಿಣಾಮ ತಿಳಕೊಳ್ಳಿಕ್ಕೆ ನಮಗ ಭಾಳ ಟೈಂ ಬೇಕಾಗತದ. ಒಂದು ತಿಳಕೊಳ್ಳೋದರಾಗ ಇನ್ನೊಂದ ಬಂದಿರತದ.

ಕೆಲವೊಮ್ಮೆ ತಿಳಿಯಂಗೇ ಇಲ್ಲ.

ಈಗ ಅಂಥಾದ್ದೊಂದ ಬಂದದ. ಅದರ ಹೆಸರು ಕಡು ಖೋಟಾ. ಖೋಟಾ ಅನ್ನೋದು ನಮಗ ಎಲ್ಲಾರಿಗೂ ಗೊತ್ತು. ದಿನಾ ಅದನ್ನ ನೋಡತೇವಿ, ಕೇಳತೇವಿ, ನಂಬತೇವಿ. ಈಗ ಇದೇನಪಾ ಕಡು ಖೋಟಾ?

ಕಡು ಖೋಟಾ ಅಥವಾ ಡೀಪ್ ಫೇಕು ಅನ್ನೋ ತಂತ್ರಜ್ಞಾನ ನಮ್ಮ ಎಲ್ಲಾ ನಂಬಿಕೆಗಳನ್ನ, ತಿಳಿವಳಿಕೆಯನ್ನ ಬುಡಮೇಲು ಮಾಡುವಷ್ಟು ಶಕ್ತಿ ಇರುವಂಥಾದ್ದು. ಇದು ಮುಂದೆ ಎಂದೋ ಬರೋದಲ್ಲಾ. ಈಗಾಗಲೇ ಬಂದು ಬಿಟ್ಟದ. ಬರೇ ಇಂಗ್ಲಂಡು- ಅಮೆರಿಕಾದಾಗ ಬಂದಿಲ್ಲಾ, ನಮ್ಮ ಭಾರತ ವರ್ಷದಾಗ ಬಂದು ಬಿಟ್ಟದ.

ಮೊನ್ನೆ ದೆಹಲಿ ಚುನಾವಣೆಯೊಳಗ ಇದರ ಉಪಯೋಗ ಆಗೇದ ಅಂತ ತಂತ್ರಜ್ಞಾನ ಕಂಪನಿ ವೈಸ್ ವರದಿ ಮಾಡೇದ.

ಕಡು ಖೋಟಾ ಅಂದರ ತುಂಬ ತೀಕ್ಷ್ಣ ತಂತ್ರಜ್ಞಾನ ಉಪಯೋಗಿಸಿ ಸುಳ್ಳು ಸುಳ್ಳು ವಿಡಿಯೋಗಳನ್ನು ತಯಾರು ಮಾಡೋದು. ಯಾವುದು ಅಸಾಧ್ಯವೋ, ಯಾವುದು ಆಗಲಿಕ್ಕೆ ಸಾಧ್ಯವೇ ಇಲ್ಲವೋ ಅದನ್ನ ಆಗೇ ಬಿಟ್ಟದ ಅನ್ನೋಹಂಗ ತೋರಸೋದು. ಇದು ಸಣ್ಣ ಹುಡುಗರ ವಿಡಿಯೋಗೇಮೋ, ಅನಿಮೇಷನ್ ಕಾರ್ಟೂನೋ ಇದ್ದರ ಸಮಸ್ಯೆ ಇರಲಿಲ್ಲ. ಆದರ ಇದು ಆಗತಾ ಇರೋದು ಸುದ್ದಿ ಮಾಧ್ಯಮದಾಗ. ಕಮಲ ಹಾಸನ ಅವರ ಇಂಡಿಯನ್ ಸಿನಿಮಾದಾಗ ನೇತಾಜಿ ಜೊತೆಗೆ ಚಿತ್ರದ ನಾಯಕ ಓಡಾಡಿದಂಗ ಮಾಡಿದ್ದರು. ಆದರ ಅದು ಕೃತಕ ಅಂತ ಗೊತ್ತಾಗತಿತ್ತು. ಕಡು ಖೋಟಾ ಅಂದರ ಗೊತ್ತೇ ಆಗದ ಹಂಗ ಕಲಬೆರಕೆ ಮಾಡೋ ಕಲೆ. ಇದು ಎಷ್ಟು ಅಪಾಯಕಾರಿ ಅಂತ ಸ್ವಲ್ಪ ವಿಚಾರ ಮಾಡಿದರ ತಿಳೀತದ.

ಉದಾಹರಣೆಗೆ ಕಳೆದ ವಾರ ಇಂಗ್ಲಂಡಿನ ಇಂಜಿನಿಯರು ಒಬ್ಬ ಕನ್ಸರ್ವೇಟಿವ್ ಪಕ್ಷದ ಬೋರಿಸ ಜಾನಸನ್ ಅವರು ಲಿಬರಲ್ ಪಕ್ಷದ ಸಭೆಯೊಳಗ ಭಾಷಣ ಮಾಡಿದಂಗ, ಲಿಬರಲ್ ಪಕ್ಷದ ಜಿಮ್ಮಿ ಕಾರ್ಬಿನ್ ಅವರು ವಿರೋಧ ಪಕ್ಷದ ಸಮಾರಂಭದಾಗ ಸನ್ಮಾನ ಸ್ವೀಕರಿಸಿದ ಹಂಗ ವಿಡಿಯೋ ತಯಾರು ಮಾಡಿಬಿಟ್ಟ. ಇದನ್ನ ಭಾಳ ಮಂದಿ ನಂಬಿ ಷೇರು, ಲೈಕು, ಕಾಮೆಂಟು ಮಾಡಿದರು.

ಗ್ಯಾಬೋನ್ ದೇಶದ ಅಧ್ಯಕ್ಷ ಅಲಿ ಬೊಂಗೋ ಅವರು ಮಾಡಿದ ಭಾಷಣದ ವಿಡಿಯೋ ತುಣುಕಿನಿಂದ ಅವರ ದೇಶದಾಗ ಒಂದು ಕ್ಷಿಪ್ರಕ್ರಾಂತಿ ಆತು. ಹಿಂಸಾಚಾರ ಆತು. ಆದರ ಆ ಭಾಷಣ ಅವರು ಮಾಡಿರಲೇ ಇಲ್ಲ. ಅವರ ಹಳೇ ವಿಡಿಯೋಗಳ ತುಣುಕುಗಳನ್ನು ಸೇರಿಸಿ, ಅವಕ್ಕೆ ಹೊಸಾ ಅಂಗಿ- ಪ್ಯಾಂಟು ಹಾಕಿ ಖೋಟಾ ವಿಡಿಯೋ ತಯಾರು ಮಾಡಲಾಯಿತು. ಅದು ಇಷ್ಟೆಲ್ಲಾ ಘೋಟಾಲಾ ಮಾಡಿತು.

ಕಡು ಖೋಟಾ ವಿಡಿಯೋ ತಂತ್ರಜ್ಞಾನದ ಬಗ್ಗೆ ಜಾಗೃತಿ ಮೂಡಿಸಬೇಕು ಅಂತ ಹೇಳಿ ಸ್ಲೋವಾಕಿಯಾದ ಒಬ್ಬ ಪುಣ್ಯಾತ್ಮ ಪ್ರಯತ್ನ ಮಾಡಲಿಕ್ಕೆ ಹತ್ಯಾನ. ಕಂಟ್ರೋಲ್- ಶಿಫ್ಟ್ – ಫೇಸ್ ಅನ್ನೋ ಯೂಟ್ಯೂಬ ವಿಡಿಯೋ ಸರಣಿಯೊಳಗ ಆತ ಇಲ್ಲಿಯವರೆಗೂ 20 ಕಡು ಖೋಟಾ ವಿಡಿಯೋಗಳನ್ನ ಹಾಕ್ಯಾನ. ಅದರಾಗಿನ ಉದಾಹರಣೆ ಅಂದರ 1973 ರಲ್ಲಿ ತೀರಿ ಹೋಗಿರೋ ನಟ ಬ್ರೂಸ್ ಲೀ ಯನ್ನು ಹೀರೋ ಮಾಡಿ 2010 ಸಿನಿಮಾಗಳನ್ನು ಮರು ತಯಾರಿ ಮಾಡೋದು, ಬ್ಯಾಟ ಮ್ಯಾನಿನ ಜೋಕರ ಪಾತ್ರ ತೊಗೊಂಡು ಹೋಗಿ ಇನ್ನಾವುದೋ ಸಂಬಂಧ ಇರಲಾರದ ಸಿನಿಮಾದಾಗ ವಿಲನ್ ಮಾಡೋದು, ಈಗ ಜೀವಂತ ಇರಲಾರದ ಡೇವಿಡ್ ಬೋವಿ ಅವರಂತಹಾ ಪಾಪ್- ರಾಕ್ ಹಾಡುಗಾರರ ಬಾಯಾಗಿಂದಾ ಹೊಸಾ ಹಾಡುಗಳನ್ನು ಹೇಳಿಸೋದು, ಇತ್ಯಾದಿ.

ಉದಾಹರಣೆ ನೋಡಿ:

ನೀವು ಕಲ್ಪನೆ ಮಾಡಿಕೊರಿ. ಇವತ್ತಿನ ಚಲನಚಿತ್ರ ನಟಿಯರು ಕಪ್ಪು- ಬಿಳುಪಿನ ಸಿನಿಮಾದಾಗ ಮಾಡೋದು, ಅಥವಾ ಮೀನಾಕುಮಾರಿ, ಉದಯ ಚಂದ್ರಿಕಾ ಸರ್ವಮಂಗಳಾ ಇವರೆಲ್ಲಾ ಇವನೇ ಶ್ರೀಮನ್ನಾರಾಯಣ, ಕೆಜಿಎಫ್ ನಂತಾ ಸಿನಿಮಾದಾಗ ಮಾಡೋದು ಹೆಂಗಿರತದ?

ಇಂಥದೆಲ್ಲಾ ಮಸ್ತ ಮಜಾ ಇರಬಹದು ಬಿಡ್ರಿ.

ಆದರ ಇಂಥಾದೆಲ್ಲಾ ರಾಜಕೀಯದಾಗ ಬಂದರ? ಏನಾದೀತು?

ಉದಾಹರಣೆಗೆ ರಾಹುಲ ಗಾಂಧಿ ನರೇಂದ್ರಮೋದಿ ಚುನಾವಣಾ ಪ್ರಚಾರಕ್ಕ ನಿಂತರ? ದೇವೇಗೌಡರೂ- ಅಮಿತ ಷಾ ಆಲಿಂಗನ ಮಾಡಿಕೊಂಡ ವಿಡಿಯೋ ನಿಮ್ಮ ಫೋನಿನ್ಯಾಗ ಒಡಮೂಡಿದರ? ನೆಹರೂ – ಜಿನ್ನಾ ಇಬ್ಬರೂ ಅಣ್ಣ- ತಮ್ಮಾ ಅಂತ ವಾಟ್ಸಪ್ಪು ಮೆಸೇಜು ಈಗಾಗಲೇ ಬರಲಿಕ್ಕೆ ಹತ್ತೇದ. ಅವರಿಬ್ಬರೂ ನಾವು ಒಂದೇ ತಾಯಿಯ ಮಕ್ಕಳು ಅಂತ ಹೇಳೋ ವಿಡಿಯೋ ಹುಟ್ಟಿಗೊಂಡರ? ನನ್ನನ್ನ ಯಾರೂ ಹತ್ಯೆ ಮಾಡಿಲ್ಲ. ಸುಳ್ಳ ಸುಳ್ಳ ಯರ‍್ಯಾರನ್ನೋ ಬಯ್ಯಬ್ಯಾಡ್ರಿ. ಸಬಕೋ ಸನಮತಿ ದೇ ಭಗವಾನ ಅಂತ ಗಾಂಧಿ ದೇಶವನ್ನು ಸಂಬೋಧಿಸಿ ಮಾತಾಡೋ ವಿಡಿಯೋ ನಾಳೆ ಟೀವಿಯೊಳಗ ಪ್ರಸಾರ ಆದರ? ಇಂಥಾವೆಲ್ಲಾ ಸುರು ಆದರ ಸ್ವರ್ಗಕ್ಕೆ ಕಿಚ್ಚು ಹಚ್ಚೋದು ಅಲ್ಲಾ, ನರಕಕ್ಕೆ ಕಿಚ್ಚು ಹಚ್ಚೋದು ಆಗತೇತಿ.

ಯಾವುದು ಕಡು ಖೋಟಾ, ಯಾವುದು ಅಲ್ಲಾ ಅಂತ ಕಂಡುಹಿಡಿಯೋ ತಂತ್ರಜ್ಞಾನ ಇನ್ನೂ ಬಂದಿಲ್ಲಂತ. ಕೃತಕ ಬುದ್ಧಿಮತ್ತೆ ಕ್ಷೇತ್ರ ಬೆಳದಂಗ ಬರಬಹುದಂತ. ಆದರ ಪೇಪರು- ಫೋನಿನ್ಯಾಗ ಬಂದ ಖೋಟಾ ಸುದ್ದಿಗಳನ್ನು ವರೆಗೆ ಹಚ್ಚಲು ನಮ್ಮ ಜನಾ ತಯಾರಿಲ್ಲಾ ಎಲ್ಲಾನೂ ಹುಯ್ಯ ಅಂತ ನಂಬತಾರ. ಇನ್ನ ಕಡು ಖೋಟಾ ವಿಡಿಯೋ ಪ್ರಸಾರ ಆಗಲಿಕ್ಕೆ ಹತ್ತಿದವಂದರ ಏನಾದೀತ?

ಅಂದಂಗ ಬಿಜೆಪಿ ದೆಹಲಿ ಅಧ್ಯಕ್ಷ ಮನೋಜ ತಿವಾರಿ ಅವರು ಬೇರೆ ಬೇರೆ ಪೋಷಾಕು ಧರಿಸಿ ನಾಲ್ಕು -ಐದು ಭಾಷೆಯೊಳಗ ಮತದಾರರಿಗೆ ಮತ ಕೇಳೋ ವಿಡಿಯೋಗಳನ್ನು ಬಿಡುಗಡೆ ಮಾಡಿದ್ದರಂತ. ಅವರಿಗೆ ಅಷ್ಟು ಭಾಷಾನ ಬರಂಗಿಲ್ಲ, ಬಂದರೂ ಅಷ್ಟು ಸುಲಲಿತವಾಗಿ ಮಾತಾಡಲಿಕ್ಕೆ ಆಗಂಗಿಲ್ಲ ಅಂತ ಅವರನ್ನ ಬಲ್ಲವರಿಗೆ ಖಾತ್ರಿ ಆತಂತ. ಹಿಂಗಾಗಿ ಅವು ಕಡು ಖೋಟಾ ಅಂತ ಎಲ್ಲಾರಿಗೂ ಗುಮಾನಿ ಬಂತಂತ. ಆ ನಂತರ ವೈಸ್ ಸಂಸ್ಥೆಯ ವರದಿ ಬಂತು, ಅದು ಬ್ಯಾರೆ ವಿಷಯ. ಇದು ಅಂತ್ಯ ಅಲ್ಲ, ಆರಂಭ ಅನ್ನೋದನ್ನ ನಾವು ತಿಳಕೋಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಜಾರಿಯಾದ್ರೆ ಗ್ಯಾರಂಟಿಯನ್ನು ಕಳೆದುಕೊಳ್ತೀರಿ!

"ಬಡವರ ಮತಗಳನ್ನು ಪಟ್ಟಿಯಿಂದ ತೆಗೆಯಲು ಎಸ್‌ಐಆರ್ (SIR) ಮೂಲಕ ದೊಡ್ಡ ಸಂಚು ರೂಪಿಸಲಾಗಿದೆ. ನಾವೆಲ್ಲರೂ ಬಹಳ ಎಚ್ಚರಿಕೆಯಿಂದ ಇರಬೇಕು, ಇಲ್ಲದಿದ್ದರೆ ಮತ ಹಕ್ಕಿನ ಜೊತೆಗೆ ಶಕ್ತಿ, ಗೃಹಲಕ್ಷ್ಮಿಯಂತಹ ಗ್ಯಾರೆಂಟಿ ಯೋಜನೆಯನ್ನು ಕಳೆದುಕೊಳ್ಳಬೇಕಾಗುತ್ತದೆ" ಎಂದು...

ವೈಯಕ್ತಿಕ ಸ್ವಾತಂತ್ರ್ಯ Vs ಕಠಿಣ ಕಾಯ್ದೆ: ಯುಎಪಿಎ ಜಾಮೀನು ಭಿನ್ನಾಭಿಪ್ರಾಯಕ್ಕೆ ಸಿಗುವುದೇ ಸುಪ್ರೀಂ ಪರಿಹಾರ?

ಯುಎಪಿಎ ಅಡಿಯಲ್ಲಿ ದೀರ್ಘಕಾಲದ ಜೈಲುವಾಸದ ಹಿನ್ನೆಲೆ, ಜಾಮೀನು ನೀಡುವ ಕುರಿತು ಸುಪ್ರೀಂ ಕೋರ್ಟ್‌ನ ಎರಡು ನ್ಯಾಯಪೀಠಗಳ ನಡುವೆ ಭಿನ್ನಾಭಿಪ್ರಾಯ ಮೂಡಿದ ಕಾರಣ, ವಿಚಾರವನ್ನು ಸುಪ್ರೀಂ ಕೋರ್ಟ್‌ ವಿಸ್ತೃತ ಪೀಠಕ್ಕೆ ಶಿಫಾರಸು ಮಾಡಲಾಗಿದೆ ಎಂದು...

ತಾಯ್ತನ ಕ್ರೀಡೆಗೆ ಅಡ್ಡಿಯಾಗಬಾರದು: ಕುಸ್ತಿ ಒಕ್ಕೂಟಕ್ಕೆ ದೆಹಲಿ ಹೈಕೋರ್ಟ್ ಚಾಟಿ, ವಿನೇಶ್ ಫೋಗಟ್‌ಗೆ ಬಿಗ್ ರಿಲೀಫ್!

ಖ್ಯಾತ ಮಹಿಳಾ ಕುಸ್ತಿ ಪಟು ವಿನೇಶ್ ಫೋಗಟ್ ಅವರನ್ನು ದೇಶೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸದಂತೆ "ಅನರ್ಹ" ಎಂದು ಘೋಷಿಸಿದ್ದ ಭಾರತೀಯ ಕುಸ್ತಿ ಒಕ್ಕೂಟದ (WFI) ನಿರ್ಧಾರವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ....

ಗುಜರಾತ್: ಜಾನುವಾರು ಹತ್ಯೆ ಆರೋಪದಲ್ಲಿ ಬಂಧಿಸಿದ 70 ವರ್ಷದ ಮುಸ್ಲಿಂ ವ್ಯಕ್ತಿ ಸಾವು: ‘ತಂದೆಯನ್ನು ಕೊಂದರು’ ಎಂದು ಆರೋಪಿಸಿದ ಮಗ

ಗುಜರಾತ್‌ನ ಅಹಮದಾಬಾದ್ ನಗರದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ 70 ವರ್ಷದ ಜಹೀರ್ ಶೇಖ್ ಎಂಬ ಮುಸ್ಲಿಂ ವೃದ್ಧರೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆಯು ಗುಜರಾತ್‌ನಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದು, ಕಸ್ಟಡಿ ನಿಂದನೆ, ಪೊಲೀಸರ ದೌರ್ಜನ್ಯ...

ಪಶ್ಚಿಮ ಬಂಗಾಳ: ಬಿಜೆಪಿಗೆ ಉಲ್ಟಾ ಹೊಡೆಯುತ್ತಾ ಗೋ-ಹತ್ಯೆ ನಿಷೇಧ ಕಾಯ್ದೆ?

ಬಕ್ರೀದ್ (ಈದ್-ಉಲ್-ಅದ್ಹಾ) ಹಬ್ಬ ಹತ್ತಿರ ಬರುತ್ತಿದ್ದಂತೆ, ಪಶ್ಚಿಮ ಬಂಗಾಳದಲ್ಲಿ ಗೋ ಹತ್ಯೆ ನಿಯಂತ್ರಣ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಈ ಆಕ್ರೋಶ ಕೇವಲ ಧಾರ್ಮಿಕ ಕಾರಣಗಳಿಗಷ್ಟೇ ಸೀಮಿತವಾಗಿಲ್ಲ, ಬದಲಿಗೆ ವ್ಯಾಪಾರಿಗಳು,...

ಪ.ಬಂಗಾಳ: ಮಮತಾ ಸರ್ಕಾರ ಜಾರಿ ಮಾಡಿದ್ದ OBC ಮೀಸಲಾತಿಯನ್ನು ಕಿತ್ತೆಸೆದ ಸುವೇಂದು ನೇತೃತ್ವದ ಬಿಜೆಪಿ ಸರ್ಕಾರ

ಪಶ್ಚಿಮ ಬಂಗಾಳದ ಒಬಿಸಿ (ಇತರ ಹಿಂದುಳಿದ ವರ್ಗಗಳು) ಪಟ್ಟಿಯಲ್ಲಿದ್ದ ಮುಸ್ಲಿಂ ಸಮುದಾಯಗಳನ್ನು ಕೈಬಿಡುವ ಮೂಲಕ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ನೂತನ ಬಿಜೆಪಿ ಸರ್ಕಾರವು ಭಾರಿ ರಾಜಕೀಯ ಸಂಚಲನ ಸೃಷ್ಟಿಸಿದೆ. ಈ ಹಿಂದೆ...

ಸಾಮಾಜಿಕ ಹೋರಾಟಗಾರ ‘ಫರಿದುಲ್ ಇಸ್ಲಾಂ’ರನ್ನು ಸುಳ್ಳು ಪ್ರಕರಣದಲ್ಲಿ ಬಂಧಿಸಿದ ಕೋಲ್ಕತ್ತಾ ಪೊಲೀಸರು

ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ನೇತೃತ್ವದ ನೂತನ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಇನ್ನು ಹತ್ತು ದಿನಗಳು ಕಳೆಯುವಷ್ಟರಲ್ಲೇ, ಸರ್ಕಾರದ ಆಡಳಿತವನ್ನು ಪ್ರಶ್ನಿಸುವವರ ಹಾಗೂ ಹೋರಾಟಗಾರರ ಧ್ವನಿಯನ್ನು ಹತ್ತಿಕ್ಕುವ ಕೆಲಸ ಆರಂಭವಾಗಿದೆ ಎಂಬ...

ಉಪ್ಪಿನಂಗಡಿ: ಸೂರ್ಯ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ, ಚಿಕಿತ್ಸೆಗೆಂದು ತೆರಳಿ ಶವವಾಗಿ ಮರಳಿದ ಬೀದಿಬದಿ ವ್ಯಾಪಾರಿ!

ಖಾಸಗಿ ಆಸ್ಪತ್ರೆಗಳ ಹಣದ ದಾಹ ಮತ್ತು ವೈದ್ಯಕೀಯ ಸಿಬ್ಬಂದಿಯ ಘೋರ ನಿರ್ಲಕ್ಷ್ಯಕ್ಕೆ ಮತ್ತೊಂದು ಬಡ ಜೀವ ಬಲಿಯಾಗಿದೆ. ಉಪ್ಪಿನಂಗಡಿಯ ಸೂರ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ಮೊಹಮ್ಮದ್ ಶರೀಫ್ (35) ಎಂಬ ಬೀದಿ ಬದಿ...

ಬಿಸಿಲಿನ ಬೆಂಕಿಗೆ ‘ಎಲ್ ನಿನೊ’ ತುಪ್ಪ: 2026ರ ಮುಂಗಾರು ಕಥೆ ಏನು?

ದೇಶಾದ್ಯಂತ ತಾಪಮಾನ ದಿನೇ ದಿನೇ ಏರುತ್ತಿದ್ದು, ಭೀಕರ ಶಾಖದ ಅಲೆಗಳಿಗೆ (Heatwaves) ಜನ ತತ್ತರಿಸಿ ಹೋಗಿದ್ದಾರೆ. ಈ ಹೊತ್ತಿನಲ್ಲಿ ಎಲ್ಲರ ಕಣ್ಣುಗಳು ಸಾವಿರಾರು ಕಿಲೋಮೀಟರ್ ದೂರದ ಪೆಸಿಫಿಕ್ ಮಹಾಸಾಗರದಲ್ಲಿ ಸಂಭವಿಸುತ್ತಿರುವ ಹವಾಮಾನ ಬದಲಾವಣೆಯ...

ಸುಮಾರು 1 ಲಕ್ಷ ಶಾಲೆಗಳಲ್ಲಿ ಬಾಲಕಿಯರಿಗೆ ಶೌಚಾಲಯವಿಲ್ಲ, 61,000 ಶಾಲೆಗಳಲ್ಲಿ ಕ್ರಿಯಾತ್ಮಕ ಶೌಚಾಲಯಗಳಿಲ್ಲ: ನೀತಿ ಆಯೋಗ

ಶಿಕ್ಷಣವು ಒಂದು ದೇಶದ ಅಭಿವೃದ್ಧಿಯ ಬೆನ್ನೆಲುಬು ಅಂತಲೇ ಹೇಳಲಾಗುತ್ತದೆ. ಆದರೆ, ಭಾರತದ ಶಾಲಾ ಶಿಕ್ಷಣದ ಮೂಲಭೂತ ಸೌಕರ್ಯಗಳು ಮತ್ತು ವ್ಯವಸ್ಥೆಯ ಕುರಿತಾಗಿ ನೀತಿ ಆಯೋಗ ಹಾಗೂ ಯುಡಿಐಎಸ್ಇ+ (UDISE+ 2024–25) ಇತ್ತೀಚೆಗೆ ಬಿಡುಗಡೆ...