Homeಮುಖಪುಟನೋಟು ನಿಷೇಧದಿಂದ ಉದ್ಯಮಿಯೊಬ್ಬ ಟೀ ಮಾರುವ ಪರಿಸ್ಥಿತಿಗೆ ಬಂದ ಕಥೆ...

ನೋಟು ನಿಷೇಧದಿಂದ ಉದ್ಯಮಿಯೊಬ್ಬ ಟೀ ಮಾರುವ ಪರಿಸ್ಥಿತಿಗೆ ಬಂದ ಕಥೆ…

ಯುವ ಉದ್ಯಮಿಯೊಬ್ಬ ಇಂದು ಚಹಾ ಅಂಗಡಿ ಮತ್ತು ರೆಸ್ಟೋರೆಂಟ್‌ನಲ್ಲಿ ಅಡುಗೆ ಮತ್ತು ಡೆಲವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಕಾರಣ 2016 ರಲ್ಲಿ ಭಾರತ ಸರ್ಕಾರವು ರಾತ್ರೋರಾತ್ರಿ ಘೋಷಿಸಿದ ನೋಟ್ ಬ್ಯಾನ್.

- Advertisement -
- Advertisement -

24 ನೇ ವಯಸ್ಸಿನಲ್ಲಿ ನಿಜೀಶ್ ಸಹದೇವನ್ ಅವರ ಜೀವನವು ತುಂಬಾ ಆರಾಮದಾಯಕವಾಗಿದ್ದವು. ಕೇರಳದ ತ್ರಿಶೂರ್‌ನಲ್ಲಿ ನೈಸರ್ಗಿಕ ರಸಗೊಬ್ಬರಗಳನ್ನು ತಯಾರಿಸುವ ಎಸ್‌ವಿಆರ್ ಆಗ್ರೋ ಪ್ರಾಡಕ್ಟ್ಸ್ ಕಂಪನಿಯ ಮಾಜಿ ಮಾಲೀಕರಾದ ಅವರು ಯೋಗ್ಯ ಲಾಭ ಗಳಿಸುತ್ತಾ 462 ಉದ್ಯೋಗಿಗಳಿಗೆ ಕೆಲಸ ನೀಡಿದ್ದರು.

“ನಾನು 18 ವರ್ಷದವನಿದ್ದಾಗ ವ್ಯವಹಾರವನ್ನು ಪ್ರಾರಂಭಿಸಿದೆ. ನನ್ನ ರಸಗೊಬ್ಬರವೂ ಸಸ್ಯಗಳಿಗೆ, ಬೇರುಗಳಿಗೆ, ಎಲೆಗಳಿಗೆ ಮತ್ತು ತರಕಾರಿಗಳ ಮೇಲೆ ಬಳಸಬಹುದಾದ ಅತ್ಯಂತ ಪರಿಣಾಮಕಾರಿ ಪಾಚಿ ಆಧಾರಿತ ಹಸಿರು ಗೊಬ್ಬರವಾಗಿದೆ. ಆದರೆ ಈಗ ನನ್ನಲ್ಲಿ ಉಳಿದಿರುವುದು ಉತ್ಪನ್ನದ ಪೇಟೆಂಟ್ ಮಾತ್ರ” ಎಂದು ನಿಜೀಶ್ ಸಹದೇವನ್ ಹೇಳುತ್ತಾರೆ.

ಬ್ಯಾಚುಲರ್ ಇನ್ ಟೆಕ್ನಾಲಜಿ (ಬಿಟೆಕ್) ಮುಗಿಸಿ, ತನ್ನ ಉತ್ಪನ್ನದ ಪ್ರಯೋಜನಗಳನ್ನು ಕಂಡುಕೊಂಡ ನಂತರ ನಿಜೀಶ್ ಸಹದೇವನ್ ತಾನೊಬ್ಬ ಉದ್ಯಮಿಯಾಗಲು ನಿರ್ಧರಿಸಿದರು. ಈ ರಸಗೊಬ್ಬರವು ಹ್ಯೂಮಿಕ್ ಆಮ್ಲದ ಜೊತೆ ಸಸ್ಯಶಾಸ್ತ್ರೀಯ ಪೋಷಕಾಂಶಗಳು, ಸಾಗರದ ಮತ್ತು ಪ್ರಾಣಿಯ ಪ್ರೋಟೀನ್‌ಗಳೊಂದಿಗೆ ಸಂಯೋಜಿಸಿದ್ದರಿಂದ ಅದು ಗರಿಷ್ಠ ಬೆಳೆ ಉತ್ಪಾದನೆಗೆ ಕಾರಣವಾಗುವಂತೆ ತಯಾರಿಸಲಾಗಿತ್ತು.

“ಕೇರಳ ಸರ್ಕಾರದ ಸಣ್ಣ ಮತ್ತು ಮಧ್ಯಮ ಉದ್ಯಮ ಯೋಜನೆಯ ಕಾರ್ಯಕ್ರಮದಡಿಯ ಸಹಾಯದಿಂದ ಕೆಲವೇ ಸಾವಿರ ರುಪಾಯಿಗಳ ಹೂಡಿಕೆಯೊಂದಿಗೆ ನನ್ನ ಉದ್ಯಮವನ್ನು ಪ್ರಾರಂಭಿಸಿದೆ. ನನ್ನ ಉತ್ಪನ್ನದ ಒಂದು ಬಾಟಲಿಗೆ 500 ರೂ ವೆಚ್ಚವಾಗುತ್ತಿತ್ತು ಹಾಗೂ 2,000 ಸಸ್ಯಗಳಲ್ಲಿ ಬಳಸಬಹುದಾಗಿತ್ತು” ಎಂದು ನಿಜೀಶ್ ಸಹದೇವನ್ ವಿವರಿಸುತ್ತಾರೆ. ಅವರ ಉತ್ಪನ್ನವನ್ನು ರೈತರು ಸ್ವೀಕರಿಸುವುರ ಮೂಲಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿ 250 ಸಿಬ್ಬಂದಿಯನ್ನು ನೇಮಿಸಿ ವ್ಯವಹಾರವನ್ನು ವಿಸ್ತರಿಸಲು ಸಹಾಯ ಮಾಡಿತು. ನಿಜೀಶ್ ಸಹದೇವನ್ “ಉತ್ಪನ್ನವು ಅದ್ಭುತವಾಗಿದ್ದರಿಂದ ಅದು ತುಂಬಾ ವೇಗವಾಗಿ ಮಾರಾಟವಾಯಿತು” ಎಂದು ಹೇಳುತ್ತಾರೆ.

ಇಂದು 32 ವರ್ಷದ ಅವರು ತನ್ನ ಲಕ್ಷಾಂತರ ಹಣವನ್ನು ಕಳೆದುಕೊಂಡಿದ್ದಾರೆ. ದುಬೈನ ಕರಾಮಾದಲ್ಲಿರುವ “ಎರಾನೊಜ್ಲಿ ಮೂಸಕಂಡೆ ಚಾಯಕ್ಕಡ” ಎಂಬ ಚಹಾ ಅಂಗಡಿ ಮತ್ತು ರೆಸ್ಟೋರೆಂಟ್‌ನಲ್ಲಿ ಅಡುಗೆ ಮತ್ತು ಡೆಲವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಕಾರಣ 2016 ರಲ್ಲಿ ಭಾರತ ಸರ್ಕಾರವು ರಾತ್ರೋರಾತ್ರಿ ಘೋಷಿಸಿದ ನೋಟ್ ಬ್ಯಾನ್. ಇದರಿಂದಾಗಿ ನಿಜೀಶ್ ಸಹದೇವನ್ ಜೀವನವೇ ಅಲ್ಲೋಲಕಲ್ಲೋಲವಾಗಿದೆ.

ತನ್ನ ವ್ಯವಹಾರದಲ್ಲಿ ಹೆಚ್ಚು ಹೂಡಿಕೆ ಮಾಡಿದ್ದ ನಿಜೀಶ್ ಗಲ್ಫ್ ಮೂಲದ ದೊಡ್ಡ ಗ್ರಾಹಕರನ್ನು ಕಳೆದುಕೊಂಡ ನಂತರ, ತಮಿಳುನಾಡಿನ ಪೊಲ್ಲಾಚಿಯಲ್ಲಿರುವ ತನ್ನ ಉತ್ಪಾದನಾ ಘಟಕವನ್ನು ಮಾರಾಟ ಮಾಡಬೇಕಾಯಿತು. ನಂತರ ತನ್ನ ಎಲ್ಲ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿ ಅವರ ಪೂರ್ವಜರ ಮನೆಯನ್ನು ಸಹ ಮಾರಾಟ ಮಾಡಿದರು. “ನನ್ನ ವ್ಯವಹಾರವನ್ನು ಬೆಳೆಸಲು ನಾನು ತೆಗೆದುಕೊಂಡ ಬ್ಯಾಂಕ್ ಸಾಲಗಳನ್ನು ಮರುಪಾವತಿಸಲು ನನ್ನ ತಂದೆಯನ್ನು ಸಮಾಧಿ ಮಾಡಿದ ಭೂಮಿಯನ್ನು ಸಹಃ ನಾನು ಮಾರಾಟ ಮಾಡಬೇಕಾಯಿತು” ಎಂದು ನಿಜೀಶ್ ಸಹದೇವನ್ ವಿವರಿಸಿದರು.

“ನಾನು ಪರೋಟ ಬೇಯಿಸುತ್ತೇನೆ, ಚಹಾ ತಯಾರಿಸುತ್ತೇನೆ ಮತ್ತು ರೆಸ್ಟೋರೆಂಟ್‌ನಲ್ಲಿ ಡೆಲೆವರಿ ಮಾಡುತ್ತೇನೆ” ಎಂದು ಅವರು ಹೇಳುತ್ತಾರೆ. ಈಗ ಕೆಲಸ ಸಿಕ್ಕಿರುವುದರಿಂದ “ನನ್ನ ಬಾಲ್ಯದ ಗೆಳೆಯನಿಗೆ ಧನ್ಯವಾದಗಳು” ಎಂದು ಈ ಕೇರಳಿಗ ತಮ್ಮ ಕಥೆಯನ್ನು ದುಬೈ ಪತ್ರಿಕೆ “ಖಲೀಜ್ ಟೈಮ್ಸ್” ಜೊತೆ ಹಂಚಿಕೊಂಡಿದ್ದಾರೆ.

ಕಷ್ಟದ ಸಮಯ

“2016 ರಲ್ಲಿ, ಗಲ್ಫ್ ಮೂಲದ ಹೊಸ ಗ್ರಾಹಕರು ನನ್ನ ಉತ್ಪನ್ನವನ್ನು ಟನ್ನುಗಳ ಲೆಕ್ಕದಲ್ಲಿ ಕೊಳ್ಳುತ್ತೇವೆ ಎಂದು ಒಪ್ಪಿದ್ದರಿಂದ, ನಾನು 3 ಕೋಟಿ ರೂ ಸಾಲವನ್ನು ಪಡೆದು ಇನ್ನೂ ಐದು ಕಾರ್ಖಾನೆಗಳನ್ನು ತೆರೆದೆ” ಎಂದು ಅವರು ವಿವರಿಸುತ್ತಾರೆ. ಮುಂದಿನ 10 ವರ್ಷಗಳಲ್ಲಿ ದೊಡ್ಡ ಮಟ್ಟದಲ್ಲಿ ಲಾಭ ಗಳಿಸುವ ಲೆಕ್ಕಹಾಕುತ್ತಾ, ಸಹದೇವನ್ ತನ್ನ ವ್ಯವಹಾರವನ್ನು ವಿಸ್ತರಿಸಲು ಪ್ರಾರಂಭಿಸಿದರು.

“ನನ್ನ ಇಡೀ ಜೀವನವು ನವೆಂಬರ್ 2016 ರಲ್ಲಿ ನಿಂತುಹೋಯಿತು. ನೋಟು ಅಮಾನ್ಯೀಕರಣದಿಂದಾಗಿ ರಾತ್ರೋರಾತ್ರಿ ಗ್ರಾಹಕರು ಕೊಳ್ಳಲು ಹಿಂದೆ ಸರಿದರು. ಬೃಹತ್ ಮಟ್ಟದಲ್ಲಿ ಉತ್ಪಾದನೆಯಾಗಿತ್ತು, ಆದರೆ ಅದನ್ನು ಕೊಳ್ಳಲು ಯಾರೂ ಇರಲಿಲ್ಲ” ಎಂದು ಅವರು ಹೇಳುತ್ತಾರೆ. ಬ್ಯಾಂಕುಗಳಿಗೆ ಸಾಲ ಮರುಪಾವತಿ ಮಾಡುವ ಅನಿವಾರ್ಯತೆ ಬಂದಾಗ ಸಹದೇವನ್ ತನ್ನ ಒಡೆತನದ ಎಲ್ಲವನ್ನೂ ಮಾರಾಟ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದರು.

ರಕ್ಷಣೆಗೆ ಬಂದ ಬಾಲ್ಯದ ಗೆಳೆಯ

ತನ್ನ ಮಾಜಿ ಪತ್ನಿಯೊಂದಿಗೆ  ವಿಚ್ಛೇದನದ ನಂತರ, ಸಹದೇವನ್ ಅವರ ಬಾಲ್ಯ ಸ್ನೇಹಿತ ದುಬೈ ಮೂಲದ ಉದ್ಯಮಿ ಅಬ್ದುಲ್ ರಶೀದ್ ದುಬೈಗೆ ಹೋಗುವಂತೆ ಸೂಚಿಸಿದರು. ಆಗ ರಶೀದ್ ತಮ್ಮ ಉದ್ಯಮವನ್ನು ಆಹಾರ ಮತ್ತು ಪಾನೀಯ ಕ್ಷೇತ್ರಕ್ಕೆ ವಿಸ್ತರಿಸುವ ಯೋಜನೆಯನ್ನು ಹೊಂದಿದ್ದರು. “ಅವನು ನನ್ನ ಅವಸ್ಥೆಯನ್ನು ನೋಡಿ, ಆದಷ್ಟು ಬೇಗ ನನಗಾಗಿ ಈ ಚಹಾ ಅಂಗಡಿಯನ್ನು ಮಾಡಿ ಕೊಟ್ಟ. ರಶೀದ್ ನನಗೆ ದೇವರಿದ್ದಂತೆ. ಅಂದು ಅವನು ಇಲ್ಲದಿರುತ್ತಿದ್ದರೆ, ನಾನು ಇಲ್ಲಿ ಇರುತ್ತಿರಲಿಲ್ಲ. ಅವನು ನನ್ನನ್ನು ಮೇಲಕ್ಕೆತ್ತಿದ” ಎನ್ನುತ್ತಾರಲ್ಲದೆ ಇಂದು ನಾನು ನನ್ನ ಸಾಲಗಳನ್ನು ಮರುಪಾವತಿಸಿದ್ದೇನೆ ಮತ್ತು ನನ್ನ ವಯಸ್ಸಾದ ತಾಯಿಗೆ ಮನೆ ಮಾಡಿ ಕೊಟ್ಟಿದ್ದೇನೆ ಎನ್ನುತ್ತಾರೆ.

ಎಷ್ಟರಮಟ್ಟಿಗೆಂದರೆ, ಸಹದೇವನ್ ತನ್ನ ಐಫೋನ್‌ನಲ್ಲಿ ರಶೀದ್ ಹೆಸರನ್ನು ‘ಗಾಡ್’ ಎಂದು ಸೇವ್ ಮಾಡಿಟ್ಟುಕೊಂಡಿದ್ದಾರೆ. ಆರು ತಿಂಗಳಷ್ಟೇ ಆಗಿರುವ ಇವರ ರೆಸ್ಟೋರೆಂಟ್ ಚಹಾ, ತಿಂಡಿಗಳು ಮತ್ತು ಕೇರಳದ ಮಲಬಾರ್ ಪದ್ಧತಿಯ ಅಡುಗೆಗಳು ಬಹಳ ಬೇಗನೇ ಜನಪ್ರಿಯತೆಯನ್ನು ಗಳಿಸಿವೆ. “ನಾನು ಈ ವ್ಯವಹಾರವನ್ನು ಸ್ವಲ್ಪ ಸಮಯದ ನಂತರ ಪ್ರಾರಂಭಿಸಲು ಬಯಸಿದ್ದೆ, ಆದರೆ ನಿಜೀಶ್‌ಗೆ ಬಂದ ಕಷ್ಟ ನೋಡಿ ಇದು ಸರಿಯಾದ ಸಮಯ ಎಂದು ನಿರ್ಧರಿಸಿದೆ” ಎಂದು ರಶೀದ್ ಹೇಳುತ್ತಾರೆ.

ಈಗ, ಕರಮಾದ ಕಾಲುದಾರಿಗಳಲ್ಲಿರುವ ಈ ಪುಟ್ಟ ಚಹಾ ಅಂಗಡಿಯು ಯುಎಇಯಲ್ಲಿ ಯಶಸ್ವಿ ಬ್ರಾಂಡ್ ಆಗಿ ಬೆಳೆಯುತ್ತದೆ ಎಂದು ಸಹದೇವನ್ ಆಶಿಸಿದ್ದಾರೆ. ಅವರು ತಮ್ಮ ಜೀವನ ಕಥೆಯನ್ನು ಚಲನಚಿತ್ರವನ್ನಾಗಿ ಪರಿವರ್ತಿಸುವ ಆಶಯವನ್ನೂ ಹೊಂದಿದ್ದಾರೆ. “ನನ್ನ ಬಿಡುವಿನ ವೇಳೆಯಲ್ಲಿ ನಾನು ಚಲನಚಿತ್ರ ಸ್ಕ್ರಿಪ್ಟ್‌ಗಳನ್ನು ಬರೆಯುತ್ತೇನೆ. ಒಂದು ದಿನ ಚಲನಚಿತ್ರ ನಿರ್ಮಾಪಕನಾಗಲು ನಾನು ಬಯಸುತ್ತೇನೆ” ಎಂದು ಅವರು ಹೇಳುತ್ತಾರೆ.

ಅನುವಾದ: ಬಾಪು

ಕೃಪೆ: ಖಲೀಜ್ ಟೈಮ್ಸ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...