Homeಆರೋಗ್ಯಕೊರೋನಾವೈರಸ್‌ ಕುರಿತ ಊಹಾಪೋಹಗಳಿಗೆ WHO ಸ್ಪಷ್ಟನೆ: ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು ಗೊತ್ತೆ?

ಕೊರೋನಾವೈರಸ್‌ ಕುರಿತ ಊಹಾಪೋಹಗಳಿಗೆ WHO ಸ್ಪಷ್ಟನೆ: ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು ಗೊತ್ತೆ?

- Advertisement -
- Advertisement -

ಕೊರೋನಾ ವೈರಸ್‌ ಹರಡುತ್ತಿರುವ ಸಮಯದಲ್ಲಿ ಅದಕ್ಕಿಂತಲೂ ವೇಗವಾಗಿ ಅದರ ಕುರಿತ ಸುಳ್ಳು ಸುದ್ದಿಯಗಳು, ತಪ್ಪು ಅಭಿಪ್ರಾಯಗಳು ಹರಡುತ್ತಿವೆ. ಈ ಕುರಿತು ಗೊಂದಲಗಳಿಗೆ ಅವಕಾಶ ಮಾಡಿಕೊಡಬಾರದೆಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ವೆಬ್‌ಸೈಟ್‌ನಲ್ಲಿ ಒಂದಷ್ಟು ಸ್ಪಷ್ಟನೆಗಳನ್ನು ನೀಡಿದೆ. ಅವುಗಳೆಂದರೆ…

  • ಬೆಳ್ಳುಳ್ಳಿಯು ಆರೋಗ್ಯಕರ ಆಹಾರ; ಅದರಲ್ಲಿ ಹಲವು ಸೂಕ್ಷ್ಮಾಣುಗಳ ನಿರೋಧಕ ಶಕ್ತಿ ಇರಬಹುದು; ಆದರೆ ಅದನ್ನು ತಿನ್ನುವುದರಿಂದ ಹೊಸ ಕೊರೋನಾವೈರಸ್ ವಿರುದ್ಧ ರಕ್ಷಣೆ ಸಿಗುತ್ತದೆ ಎಂಬುದಕ್ಕೆ ಪುರಾವೆಗಳಿಲ್ಲ.
  • ಮೂಗನ್ನು ಪದೇ ಪದೇ ಸಲೈನ್‌ನಿಂದ (ಉಪ್ಪು ನೀರು, ಕ್ಷಾರ) ತೊಳೆಯುವುದರಿಂದ ಉಸಿರಾಟದ ಸೋಂಕು ತಡೆದ ಬಗ್ಗೆ ನಿದರ್ಶನಗಳಿಲ್ಲ.
  • ಚೀನಾದ ವಸ್ತುಗಳಿಂದ ಕೊರೋನಾವೈರಸ್ ಬರುತ್ತದೆ ಎಂದೇನಿಲ್ಲ; ಹಾಗಿದ್ದೂ ಚೀನಾದ ವಸ್ತುಗಳನ್ನು ಪಡೆಯುವಾಗ ಅದರ ಪೊಟ್ಟಣವನ್ನು ಶುಚಿಗೊಳಿಸಿ ಮತ್ತು ಅದನ್ನು ಮುಟ್ಟಿದ ಮೇಲೆ ಕೈಗಳನ್ನು ಸಾಬೂನು ಮತ್ತು ನೀರಿನಿಂದ ತೊಳೆದುಕೊಳ್ಳಿರಿ.
  • ಹೊಸ ಕೊರೋನಾವೈರಸ್ ಉಷ್ಣ ಮತ್ತು ಶೀತ ಪ್ರದೇಶಗಳೆಂದು ಪರಿಗಣಿಸದೆ ಎಲ್ಲಾ ಪ್ರದೇಶಗಳಲ್ಲೂ ವರ್ಗಾವಣೆ ಆಗುತ್ತದೆ. ಆಗಾಗ್ಗೆ ಕೈ ತೊಳೆದುಕೊಳ್ಳುವುದೇ ಇದಕ್ಕಿರುವ ಅತ್ಯುತ್ತಮ ತಡೆ.
  • ಶೀತಗಾಳಿ ಮತ್ತು ಮಂಜಿನಿಂದ ಕೊರೋನಾವೈರಸ್ ಸಾಯುವುದಿಲ್ಲ.
  • ಬಿಸಿನೀರಿನ ಸ್ನಾನ ಮಾಡುವುದರಿಂದ ಹೊಸ ಕೊರೋನಾವೈರಸ್ ಕಾಯಿಲೆಯನ್ನು ತಡೆಯಲು ಆಗುವುದಿಲ್ಲ.
  • ಸೊಳ್ಳೆ ಕಡಿತದಿಂದ ಹೊಸ ಕೊರೋನಾವೈರಸ್ ಸೋಂಕು ಬರುವುದಿಲ್ಲ. ಇದು ಮುಖ್ಯತಃ ಶ್ವಾಸನಾಳದ ವೈರಸ್; ಸೋಂಕಿನ ವ್ಯಕ್ತಿ ಸೀನಿದಾಗ, ಕೆಮ್ಮಿದಾಗ ಹೊರಬೀಳುವ ಎಂಜಲಿನ ಕಣಗಳಿಂದ ಹರಡುತ್ತದೆ.
  • ಸಾಕುಪ್ರಾಣಿಗಳಿಗೆ ಕೊರೋನಾವೈರಸ್ ಬರುತ್ತದೆ ಎಂಬುದಕ್ಕೆ ಪುರಾವೆಗಳಿಲ್ಲ; ಆದಾಗ್ಯೂ ಅಂತಹ ಸಾಕುಪ್ರಾಣಿಗಳನ್ನು ಮುಟ್ಟಿದಾಗ ಚೆನ್ನಾಗಿ ಕೈ ತೊಳೆದುಕೊಳ್ಳಿ.
  • ಹೊಸ ಕೊರೋನಾವೈರಸ್ ಯಾವುದೇ ವಯಸ್ಸಿನ ವ್ಯಕ್ತಿಗೂ ಬರಬಹುದು.
  • ಆಂಟಿ-ಬಯಾಟಿಕ್‌ಗಳು ಕೇವಲ ಬ್ಯಾಕ್ಟೀರಿಯಾ ತಡೆಗೆ ನೆರವಾಗುತ್ತವೆಯೇ ಹೊರತು ಕೊರೋನಾವೈರಸ್ ವಿರುದ್ಧ ಬಳಕೆಗೆ ಬರುವುದಿಲ್ಲ.
  • ನ್ಯೂಮೋನಿಯ ಲಸಿಕೆಯು ಕೊರೋನಾವೈರಸ್ ಗೆ ಚಿಕಿತ್ಸೆ ಅಲ್ಲ. ಆದಾಗ್ಯೂ ನಿಮ್ಮ ಆರೋಗ್ಯಕ್ಕಾಗಿ ಉಸಿರಾಟ ಸಂಬಂಧಿ ಲಸಿಕೆ ಹಾಕಿಸಿಕೊಳ್ಳಬಹುದು.
  • ಥರ್ಮಲ್ ಸ್ಕಾನರ್‌ನಿಂದ ಜ್ವರ ಬಂದವರನ್ನು ಗುರುತಿಸಬಹುದೇ ಹೊರತು 10 ದಿನಗಳ ಒಳಗಿರುವ ಸೋಂಕು ಪೀಡಿತರನ್ನಲ್ಲ; ಅವರಲ್ಲಿ ಇನ್ನೂ ಜ್ವರ ಬರದೇ ಇರಲೂಬಹುದು. (ಸೋಂಕಿನಿಂದ ಜ್ವರ ಬರಲು ಎರಡರಿಂದ ಹತ್ತು ದಿನಗಳು ಬೇಕು).
  • ಹ್ಯಾಂಡ್ ಡ್ರೈಯರ್‌ಗಳಿಂದ ಈ ವೈರಸನ್ನು ಸಾಯಿಸಲು ಸಾಧ್ಯವಿಲ್ಲ. ಆಗಾಗ್ಗೆ ಕೈ ತೊಳೆದುಕೊಳ್ಳುವುದೇ ಸೂಕ್ತ ವಿಧಾನ.
  • ಅಲ್ಟ್ರಾವಯಲೆಟ್ ದೀಪದಿಂದ ಹೊಸ ಕೊರೋನಾವೈರಸ್‌ ಅನ್ನು ಸಾಯಿಸಲು ಬರುವುದಿಲ್ಲ. ಅದನ್ನು ಕೈ ಶುದ್ಧೀಕರಣಕ್ಕೆ ಬಳಸಬಾರದು.
  • ಹೊಸ ಕೊರೋನಾವೈರಸ್ಗೆ ಸದ್ಯಕ್ಕಂತೂ ಯಾವುದೇ ನಿರ್ದಿಷ್ಟ ಔಷಧ ಇಲ್ಲ. ಆದರೆ ಸೋಂಕು ಪೀಡಿತರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಮತ್ತು ಸೂಕ್ತ ಬೆಂಬಲ ನೀಡಬೇಕು.

ದೇಹದ ಮೇಲೆಲ್ಲ ಆಲ್ಕೋಹಾಲ್ ಅಥವಾ ಕ್ಲೋರಿನ್ ಸಿಂಪಡಣೆ ಮಾಡಿದರೆ ದೇಹದ ಒಳಗೆ ಅದಾಗಲೇ ಹೊಕ್ಕಿರಬಹುದಾದ ಹೊಸ ಕೊರೋನಾವೈರಸ್ ಸಾಯುವುದಿಲ್ಲ.

ಮೂಲ: ವಿಶ್ವ ಆರೋಗ್ಯ ಸಂಸ್ಥೆ ವೆಬ್‌ಸೈಟ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...