Homeರಾಜಕೀಯಈ ಅಜಾತಶತ್ರು ತನ್ನ ಹಲ್ಲು, ಉಗುರುಗಳನ್ನು ಧಾರೆಯೆರೆದ ವ್ಯಾಘ್ರನಂತಲ್ಲಾ

ಈ ಅಜಾತಶತ್ರು ತನ್ನ ಹಲ್ಲು, ಉಗುರುಗಳನ್ನು ಧಾರೆಯೆರೆದ ವ್ಯಾಘ್ರನಂತಲ್ಲಾ

- Advertisement -
- Advertisement -

ಅಟಲ್ ಬಿಹಾರಿ ವಾಜಪೇಯಿಯವರು ನಿರ್ಗಮಿಸಿದ್ದಾರೆ. ಅವರು ಮಾತು ನಿಲ್ಲಿಸಿ ಒಂದು ದಶಕವಾಗುತ್ತಾ ಬಂದಿತ್ತು. ಯಾರನ್ನೂ ಗುರುತಿಸಲಾಗದೆ ಮಗುವಿನಂತೆ ನೋಡುತ್ತಿದ್ದರು. ಎಲ್ಲರೂ ಅವರ ಸ್ಥಿತಿ ಕಂಡು ಮರುಗುತ್ತಿದ್ದರು. ಹಾಲಿ ಬಿಜೆಪಿಯ ಹಲವು ಹಿರಿಯರು ವಾಜಪೇಯಿಯಂತಲ್ಲದಿದ್ದರೂ ಒಂಥರದಲ್ಲಿ ಮೌನಿಗಳಾಗಿದ್ದಾರಂತಲ್ಲಾ.
ವಾಜಪೇಯಿಯವರ ನಿಧನಕ್ಕೆ ತಮ್ಮ ಬತ್ತಳಿಕೆಯಲ್ಲಿನ ಎಲ್ಲಾ ಪದಪುಂಜಗಳಿಗೂ ಸಾಣೆಹಿಡಿದು ಝಳಪಿದ ಮಾಧ್ಯಮದ ಬೃಹಸ್ಪತಿಗಳು ಕಡೆಗೆ `ಅಜಾತಶತೃ’ `ಕವಿಹೃದಯಿ’ ಎಂದೆಲ್ಲಾ ಕರೆದು ಸುಸ್ತಾದವಂತಲ್ಲಾ.
ವಾಜಪೇಯಿ ಅಜಾತಶತ್ರು ನಿಜ. ಆದರೂ, ಅವರು ಶತ್ರುಸೈನ್ಯವನ್ನು ಹೊಂದಿದ್ದರು. ಆ ಸೈನ್ಯದ ಸೇನಾಪತಿ ಮಾತ್ರ ಅಡ್ವಾನಿ. ಸದರಿ ಅಡ್ವಾನಿಯವರು ತಮ್ಮ ಗುರುವರ್ಯನನ್ನು ಪ್ರಧಾನಿಯಾಗಿ ಮಾಡಲು ಶ್ರೀ ರಾಮಚಂದ್ರನನ್ನೇ ಬೀದಿಗೆ ತಂದರು. ಅದರಿಂದಾದ ಸಾವುನೋವುಗಳಿಗೆ ಅದ್ವಾನಿಯೇ ಕಾರಣ, ವಾಜಪೇಯಿ ಅಲ್ಲ ಎಂದು ಹೇಗೆ ಹೇಳುವುದು. ಥೂತ್ತೇರಿ..!

*********

ಅಡ್ವಾನಿ ಈ ಅಜಾತಶತ್ರುವನ್ನು ಪ್ರಧಾನಿಯಾಗಿ ಮಾಡಲು ಸೈನ್ಯ ಸಮೇತರಾಗಿ ಹೊರಟಿದ್ದು ಬಾಬರಿ ಮಸೀದಿ ದಿಕ್ಕಿಗೆ. ನೋಡುನೋಡುತ್ತಿದ್ದಂತೆಯೇ ಮಸೀದಿ ನೆಲಸಮವಾಯ್ತು. ಅದಕ್ಕೆ ಸ್ಫೂರ್ತಿ ಅಜಾತಶತೃ ಕವನ. ಏಕೆಂದರೆ ನಮ್ಮ ಅಜಾತಶತ್ರು ಕವಿ ಬೇರೆ ಆಗಿದ್ದರಿಂದ ಭಾಷಣದಲ್ಲಿನ ಅರ್ಧಭಾಗದಲ್ಲಿ ಕವಿಸಾಲುಗಳಿರುತ್ತಿದ್ದವು. ಬಾಬರಿ ಮಸೀದಿ ಉರುಳಿಸುವುದರಲ್ಲಿ ವಾಜಪೇಯಿ ಕಾವ್ಯ ಎಂತಹ ಸ್ಫೂರ್ತಿ ಕೊಟ್ಟಿತ್ತೆಂದರೆ, ಅವರ ಸಾಲುಗಳನ್ನೇ ತರ್ಜುಮೆ ಮಾಡಿಕೊಂಡ ಚೆಡ್ಡಿಗಳು,
ನೀವು ಬಂದರೆ ಜೊತೆಯಾಗಿ,
ನೀವು ಬಾರದಿರೆ ಬಿಟ್ಟು,
ತಡೆಯ ಬಂದರೆ ಹತ್ತಿಕ್ಕಿ,
ಮಂದಿರವಲ್ಲೇ ಕಟ್ಟುವೆವು
ಭಜನೆಗೆ ಅಲ್ಲೇ ಕೂರುವೆವು
ಕೀರ್ಥನೆ ಅಲ್ಲೇ ಹಾಡುವೆವು
ಪಾಕಶಾಲೆ ಕಡೆ ಓಡುವೆವು
ಎಂದು ಕರೆದುಕೊಂಡು ಅದನ್ನೆ ದೇಶಕ್ಕೆಲ್ಲಾ ಮೆಸೇಜು ಮಾಡಿದವಲ್ಲಾ ಥೂತ್ತೇರಿ…!

********

ನಮ್ಮ ಕವಿಹೃದಯದ ಅಜಾತಶತ್ರು ನೆಹರು ಕಾಲದವರು. ರಾಜೀವ್‍ಗಾಂಧಿ ಪ್ರಧಾನಿಯಾದಾಗಲೂ ವಿರೋಧ ಪಕ್ಷದ ನಾಯಕ. ಆಗ ಭಾರತವನ್ನು ತಿರುಗುತ್ತಾ, ನಮ್ಮ ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆಗಳು ತುಂಬಾ ಹೀನ ಸ್ಥಿತಿಯಲ್ಲಿವೆ, ಮಕ್ಕಳಿಗೆ ಅಕ್ಷರ ಬರೆದು ತೋರಲು ಬ್ಲಾಕ್ ಬೋರ್ಡುಗಳಿಲ್ಲ. ಇದು ರಾಜೀವ್‍ಗಾಂಧಿಯಂತಹ ನಾಯಕರಿಗೆ ಗೊತ್ತಾಗುವುದಿಲ್ಲ ಎಂದು ಹೇಳಿದ್ದರು. ನಂತರ ಸದರಿ ಕವಿಯೇ ಪ್ರಧಾನಿಯಾದರು. ಭಾರತದ ಎಲ್ಲಾ ಹಳ್ಳಿಗಳಲ್ಲಿ ಸುಸಜ್ಜಿತ ಪ್ರೈಮರಿ ಶಾಲೆ ರೂಪುಗೊಳ್ಳುತ್ತವೆಂದು ಕಾಯುತ್ತಿರಬೇಕಾದರೆ, ವಾಜಪೇಯಿ ಪ್ರೊಕ್ರಾನ್ ಸಿಡಿಸಿದರು. ಇದರಿಂದ ಶಾಕಾದ ಲಂಕೇಶ್ `ಮಗ ಎಲ್ಲಾ ಬಿಟ್ಟು ಭಂಗಿ ನೆಟ್ಟ’ ಎಂದು ಬರೆದರಂತಲ್ಲಾ, ಥೂತ್ತೇರಿ…!

********

ನಮ್ಮ ಅಜಾತಶತೃ ವಾಜಪೇಯಿಯವರನ್ನ ಕೆಲವು ಟೀಕಾಕಾರರು ಗೋಮುಖವ್ಯಾಘ್ರ ಎಂದು ಬಣ್ಣಿಸಿದ್ದರು. ಆದರೆ ಆ ವ್ಯಾಘ್ರನಿಗೆ ಹಲ್ಲು ಉಗುರುಗಳಿರಲಿಲ್ಲ. ಆದರೂ ಅವುಗಳನ್ನು ಬೇರೆಯವರಿಗೆ ಕರ್ಣನಂತೆ ಧಾರೆಯೆರೆದಿದ್ದರು. ಧಾರೆ ಎರೆಸಿಕೊಂಡ ಅಢ್ವಾನಿ ಅವತಾರ ಅಂತ್ಯಗೊಂಡ ನಂತರ ಪ್ರಖರ ಹಲ್ಲು ಉಗುರುಗಳೊಂದಿಗೆ ಕಂಗೊಳಿಸಿದ ಮೋದಿ ಎಂಬ ವ್ಯಾಘ್ರ ವಾಜಪೇಯಿ, ಅಡ್ವಾನಿಗಳ ಸೃಷ್ಟಿಯೇ ಹೊರತು, ಸ್ವಯಂ ಸೃಷ್ಟಿಯಾದುದಲ್ಲವಂತಲ್ಲಾ. ಈಚೆಗೆ ಪ್ರಾಣಿತಳಿ ಶಾಸ್ತ್ರಜ್ಞರು ಒಂದು ಪ್ರಯೋಗ ಮಾಡಿ, ಸಿಂಹ ಮತ್ತು ಹುಲಿಯನ್ನು ಕೂಡಿಸಿ ವಿಶೇಷ ತಳಿ ತೆಗೆದು ಅದಕ್ಕೆ ಲೈಗರ್ ಎಂದು ನಾಮಕರಣ ಮಾಡಿದ್ದಾರೆ. ಆ ಲೈಗರ್ ನೋಡಿದರೆ ಅದರೊಳಗೆ ಸಿಂಹ ಮತ್ತು ಹುಲಿ ಎರಡೂ ಅಡಗಿರುವುದು ಗೋಚರವಾಗುತ್ತದಂತೆ. ಭಾರತ ಕಂಡ ಅಪರೂಪದ ಪ್ರಧಾನಿ ಮೋದಿಯನ್ನು ನೋಡಿದರೆ ಗೋಮುಖವ್ಯಾಘ್ರನಾದ ವಾಜಪೇಯಿ, ವ್ಯಾಘ್ರಮುಖದ ಗೋವಾದ ಅಡ್ವಾನಿ, ಈ ಇಬ್ಬರ ಚಹರೆಗಳೂ ಗೋಚರಿಸುತ್ತಾ ದೇಶಕ್ಕೆ ಆತಂಕ ಉಂಟಾಗಿದೆಯಂತಲ್ಲಾ ಥೂತ್ತೇರಿ..!

********

ಭಾರತದ ಇಡೀ ಸಂಘಪರಿವಾರ ಮತ್ತದರ ನಿರ್ಮಾತೃಗಳೆಲ್ಲಾ ರಾಮಮಂದಿರದ ಬಗ್ಗೆ ಹೋರಾಡುತ್ತಿರುವುದರ ಹಿಂದೆ ಸಾವಿರಾರು ವರ್ಷಗಳ ಇತಿಹಾಸವಿದೆಯಂತಲ್ಲಾ.
ಆ ಇತಿಹಾಸ ಯಾವುದಪ್ಪಾ ಎಂದರೆ, ಭಾರತವನ್ನೇ ಬಾಳೆಯೆಲೆ ಮಾಡಿಕೊಂಡು ಉಂಡ ಜನ ನೆಲೆಸಿದ್ದುದು ದೇವಸ್ಥಾನದ ಒಳಗೆ. ಆ ದೇವಸ್ಥಾನದಲ್ಲಿ ಹಜಾರ, ಗರ್ಭಗುಡಿ, ಪೌಳಿ ಮತ್ತು ಪಾಕಶಾಲೆಗಳಿದ್ದವು. ಮನೋರಂಜನೆಗೆ ಭಜನೆ ಕೀರ್ತನೆ ಜೊತೆಗೆ ಭರತನಾಟ್ಯಗಳು ಜರುಗುತ್ತಿದ್ದವು. ಕೈ ಸಡಿಲಬಿಟ್ಟು ಭೋಜನ ಭಾರಿಸಿದವರು ಸುಧಾರಿಸಿಕೊಳ್ಳಲು ಒಳ ಜಗಲಿ ಇದ್ದವು. ಹೀಗೆ ಮಂದಿರದೊಳಗೇ ಬದುಕಿದ್ದ ಜನ ಬಿಜೆಪಿ ಪಾರ್ಟಿ ಮಾಡಿಕೊಂಡು ಬೀದಿಗೆ ಬಂದಾಗಲೂ ಅವುಗಳ ಬಾಯಿಂದ ಬರುತ್ತಿರುವ ಮಾತೂ ಕೂಡಾ ಮಂದಿರ ನಿರ್ಮಾಣವೇ ಹೊರತು ಭಾರತ ಇಂದು ಹೆದರಿಸುತ್ತಿರುವ ಸಮಸ್ಯೆಗಳಲ್ಲವಂತಲ್ಲಾ ಥೂತ್ತೇರಿ..!

********

ದಿಢೀರನೆ ಕೇರಳದ ಕಡೆ ಅಪ್ಪಳಿಸಿದ ಜಲಪ್ರಳಯವಾದಂತೆ ಹಾಡುಹಗಲು ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿ ಉದ್ಭವಿಸಿದ ಕುಮಾರಣ್ಣ, ಎಮ್ಮೆ ಕರುವಿನ ಮೇಲೆ ಶಾಲು ಹಾಕಿದಂತೆ ವಸ್ತ್ರ ಧರಿಸಿಕೊಂಡು ಕುಕ್ಕೆ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳಕ್ಕೆ ನುಗ್ಗಿ ಹೋಗುತ್ತಿದ್ದಾರಂತಲ್ಲಾ. ಹೊಸದಾಗಿ ಮುಖ್ಯಮಂತ್ರಿಯಾದವರು ಮೊದಲು ಮಾಡುವ ಕೆಲಸವೇನೆಂದರೆ, ಆಯಾ ಜಿಲ್ಲೆಯ ಆಡಳಿತವನ್ನು ಮೀಟಿಂಗ್ ಕರೆದು ಸಲಹೆಕೊಡುವುದು ಹಾಗೂ ತಾರತಮ್ಯದ ಕಾರಣಕ್ಕೆ ರೊಚ್ಚಿಗೆದ್ದ ಜನಗಳ ಬಳಿಗೋಗಿ ಸಾಂತ್ವನ ಹೇಳುವುದು, ಹಾಗೇ ಬಿತ್ತನೆಗೆ ಭೂಮಿ ರೆಡಿಮಾಡಿಕೊಂಡು ಮಳೆ ಬರದೆ ಕಂಗಾಲಾಗಿರುವ ರೈತನ ಬಳಿಗೋಗುವುದು.. ಇದೆಲ್ಲವನ್ನ ಬಿಟ್ಟು ಕುಮಾರಣ್ಣ ಮಂಡ್ಯದಲ್ಲಿ ನಾಲ್ಕು ಪೈರು ನಾಟಿ ಮಾಡಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಓಡಿಹೋದದ್ದು ನೋಡಿದ ಯಡ್ಡಿ ಪಟಾಲಂ ಕುಂಡಿ ಬಡಿದುಕೊಂಡು ನಕ್ಕವಂತಲ್ಲಾ, ಥೂತ್ತೇರಿ…!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...