Homeಮುಖಪುಟಜನ ಏನ್‌ ಮಾಡ್ಬೇಕು ಅಂತ ಹೇಳ್ತಿರೋ ಸರ್ಕಾರ ತಾನೇನು ಮಾಡಿದೀನಿ ಅಂತನೇ ಹೇಳ್ತಿಲ್ಲ?

ಜನ ಏನ್‌ ಮಾಡ್ಬೇಕು ಅಂತ ಹೇಳ್ತಿರೋ ಸರ್ಕಾರ ತಾನೇನು ಮಾಡಿದೀನಿ ಅಂತನೇ ಹೇಳ್ತಿಲ್ಲ?

- Advertisement -
- Advertisement -

ಒಂದಾನೊಂದು ಕಾಲದಾಗ ಜಾನ್ ಕೆನಡಿ ಅಂತ ಒಬ್ಬರು ಇದ್ದರು. ಅವರು ಅಮೆರಿಕದ ಅಧ್ಯಕ್ಷರಾಗಿದ್ದರು. ಅವರು ತಮ್ಮ ಸಣ್ಣ ಜೀವನ ಕಾಲದಾಗ ಅನೇಕ ಒಳ್ಳೆ ಕೆಲಸ ಮಾಡಿದರು.

ಅವರು 1960ರೊಳಗ ತಮ್ಮ 43ನೇ ವಯಸ್ಸಿಗೆ ಅಧ್ಯಕ್ಷೀಯ ಚುನಾವಣೆ ಗೆದ್ದು ಅತಿಕಮ್ಮಿ ವಯಸ್ಸಿನ ಅಧ್ಯಕ್ಷ ಅಂತ ಅಮೆರಿಕದ ಇತಿಹಾಸದಾಗ ದಾಖಲು ಮಾಡಿದರು. ಆರ್ಥಿಕ ಹಿಂಜರಿಕೆಯಿಂದ ಹೊಡೆತ ತಿಂದಿದ್ದ ಅಮೆರಿಕಾವನ್ನು ಬೆಳವಣಿಗೆಯ ದಾರಿಯೊಳಗ ದೂಡಿದರು. ವಿಶ್ವಾದ್ಯಂತ ಶಾಂತಿ ಹಾಗೂ ಅಭಿವೃದ್ಧಿ ಸ್ಥಾಪಿಸಲಿಕ್ಕೆ ಪೀಸ್‍ಕೋರ್ ಅನ್ನೋ ಸಂಸ್ಥೆ ಸುರು ಮಾಡಿದರು. ರಷಿಯಾ ಒಕ್ಕೂಟದ ಅಧ್ಯಕ್ಷ ಕ್ರುಷೇವ ಅವರ ಜೊತೆಗೆ ಶಾಂತಿ ಒಪ್ಪಂದ ಸಹಿ ಮಾಡಿ ಪರಮಾಣು ಯುದ್ಧ ತಪ್ಪಿಸಿದರು. ನಿರುದ್ಯೋಗಿಗಳಿಗೆ ಭತ್ಯೆ, ಕೌಶಲ್ಯ ತರಬೇತಿ ಮುಂತಾದ ಯೋಜನೆಗಳನ್ನು ಆರಂಭ ಮಾಡಿದರು. ಕರಿಯರು ಹೆಚ್ಚಾಗಿ ಇದ್ದ ಕೊಳಚೆ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು, ಕರಿಯರ ಶಿಕ್ಷಣದ ಸಲುವಾಗಿ ತೆರೆಯಲಾದ ವಿಶೇಷ ಕಾಲೇಜುಗಳನ್ನು ಬೆಳೆಸಲು ಅನುದಾನ ನೀಡಿದರು. ಮಹಿಳಾ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀತಿಯ ಅನುವಾಗಿ ಹೆಚ್ಚಿನ ಕೂಲಿ ಸಿಗುವಂತೆ ಕಾನೂನು ಮಾಡಿದರು, ಇತ್ಯಾದಿ.

ಜಾನ್ ಕೆನಡಿ

ತಮ್ಮ ಚುನಾವಣೆಯ ಗೆಲುವನ್ನು ಅವರು ಇದು `ಒಂದು ಪಕ್ಷದ ಗೆಲುವು ಅಲ್ಲ. ಸ್ವಾತಂತ್ರ್ಯದ ಉತ್ಸವ’ ಅಂತ ಬಣ್ಣಿಸಿದರು. ಇದು ಮನುಷ್ಯರೆಲ್ಲರ ಉತ್ಥಾನದ ಅವಕಾಶದ ದಾರಿ. ಎಲ್ಲ ರೀತಿಯ ಬಡತನವನ್ನೂ, ಗುಲಾಮಗಿರಿಯನ್ನು ತೊಡೆದುಹಾಕುವ ಅವಕಾಶ ಈಗ ನಮ್ಮ ಮುಂದೆ ಇದೆ ಎಂದವರು. ಆದರ ಅವರ ಒಂದು ಮಾತು ಭಾಳ ಫೇಮಸ್ಸು. ಅದು ನಮಗೆಲ್ಲರಿಗೂ ಗೊತ್ತು. ನಿಮಗಾಗಿ ಈ ದೇಶ ಏನು ಮಾಡುತ್ತದೆ ಎಂದು ಕೇಳಬೇಡಿ. ನೀವು ನಿಮ್ಮ ದೇಶಕ್ಕಾಗಿ ಏನು ನೀಡಬಲ್ಲಿರಿ ಎನ್ನುವುದನ್ನು ಕೇಳಿಕೊಳ್ಳಿರಿ.

ಅವರ ವಿಚಾರಗಳನ್ನು, ಸಿದ್ಧಾಂತಗಳನ್ನು ಮನಸೋ ಇಚ್ಛೆ ಪಾಲಿಸುವವರಿಗೆ ಕೆನಡಿಯನ್ ಅಂತ ಕರೀತಾರ. ಹಂಗಂದರ ಕೆನಡಾದಿಂದ ಬಂದವರು ಅಂತ ಅಲ್ಲ. ಜಾನ್ ಕೆನಡಿಯವರ ವಿಚಾರಗಳನ್ನ, ಕಾರ್ಯಕ್ರಮ- ಯೋಜನೆಗಳನ್ನು ಒಪ್ಪಿಕೊಂಡು ನಡೆಯುವವರು ಅಂತ. ಈಗಿನ ನಮ್ಮ ನಾಯಕರನ್ನು ಕೆನೆಡಿಯನ್ ಅಂತ ಕರೀಬಹುದು ಅಂತೀರೇನು?

ಒಂದು ರೀತಿಯಿಂದ ಅನಬಹುದೋ ಏನೋ. ಅದು ಏನಪಾ ಅಂದರ `ನೀವು ದೇಶಕ್ಕೆ ಏನು ಮಾಡಬಲ್ಲಿರಿ’ ಅನ್ನೋ ಮಾತು. ಇಡೀ ಜಗತ್ತಿನ 177 ದೇಶಗಳಲ್ಲಿ ಈ ಕೊರೊನಾ ವ್ಯಾಧಿ ಹೊಡಕೊಂಡದ. ದೊಡ್ಡ ಸಾಹುಕಾರ ಟ್ರಂಪಣ್ಣನವರಿಂದಾ ಹಿಡಕೊಂಡು ಸಣ್ಣಂಗಡಿ ಶೆಟ್ಟರಾದ ಉಗಾಂಡಾದ ಯಾವೋರಿ ಮುಸೇವಿನಿ ಅವರ ತನಕಾ ಎಲ್ಲಾರೂ ಜನರಿಗೆ `ಹಿಂಗ ಮಾಡರಿ, ಹಂಗ ಮಾಡರಿ, ಹಂಗಂತ ಹಂಗ ಮಾಡಬ್ಯಾಡ್ರಿ’ ಅಂತ ಹೇಳಲಿಕ್ಕೆ ಹತ್ಯಾರ. ಯಾರೂ ನಿಮ್ಮ ಸಲುವಾಗಿ ನಾವು ಏನು ಮಾಡತೇವಿ ಅನ್ನೋದನ್ನ ಹೇಳಲಿಕ್ಕೆ ಒಲ್ಲರು. ಊರು ಮುಂದಿನ ಹಣಮಂತನದೇವರ ಗುಡಿ ಸ್ವಾಮಿ ವಾರಕ್ಕೊಮ್ಮೆ ನೀತಿಪಾಠ ಹೇಳಿದಂಗ ಅವರು ಹೇಳಲಿಕ್ಕೆ ಹತ್ಯಾರ.

ಅವರು ಹೇಳಿದ್ದನ್ನ ನಾವು ಜೀ ಹುಜೂರ್ ಅಂತ ಕೇಳಲಿಕ್ಕೆ ಹತ್ತೇವಿ. ತಿರುಗಿ ಮಾತನಾಡಲಿಕ್ಕೆ ಹತ್ತಿಲ್ಲ. ಪ್ರಶ್ನೆ ಕೇಳಲಿಕ್ಕೆ ನಮಗ ಬರಂಗಿಲ್ಲ.

ಉದಾಹರಣೆಗೆ ಮಹಾಮಹಿಮ ಪ್ರಧಾನಿಗಳು ನೀವು ಕಫ್ರ್ಯೂ ಪಾಲಿಸಿರಿ, 14 ತಾಸು ಹೊರಗ ಬರಬ್ಯಾಡ್ರಿ, ಗಾಡಿ ಓಡಸಬ್ಯಾಡ್ರಿ, ಏನೂ ಖರೀದಿ ಮಾಡಬ್ಯಾಡ್ರಿ, ಒಬ್ಬರಿಗೊಬ್ಬರು ಮಾತು ಆಡಬ್ಯಾಡ್ರಿ, ಇತ್ಯಾದಿ ಇತ್ಯಾದಿ ಅಂತ ಫರಮಾನು ಹೊರಡಿಸಿದಾಗ, ನಾವು ಸುಮ್ಮನೇ ಇದ್ದಿವಿ. ಬೆಂದಕಾಳೂರಿನ ದಂಡಾಧಿಕಾರಿಗಳು ಹೊರಗ ಬಂದರ ಕೇಸು ಹಾಕತೇವಿ ಅಂದರು. ಅವಾಗನೂ ಸುಮ್ಮನೇ ಇದ್ದೆವಿ. ಸಂಜೀಕೆ ಐದಕ್ಕ ಮನೀ ಬಾಲ್ಕನಿಯೊಳಗ ಹೋಗಿ ಚಪ್ಪಾಳೆ ಹೊಡಿಯಿರಿ ಅಂದರ ನಾವು ಶಂಖ, ಜಾಗಟೆ, ತಾಳ, ಡಮರು, ತಾಟು, ತಂಬಿಗಿ ಎಲ್ಲಾನೂ ಬಾರಿಸಿದಿವಿ. ಗುಂಪು ಕಟಿಗೋಬ್ಯಾಡ್ರಿ ಅಂತ ಅವರು ಹೇಳಿದರ ನಾವು ಚಪ್ಪಾಳೆ ಹೊಡೆಯೋ ಪವಿತ್ರ ಕಾರ್ಯಕ್ಕಾಗಿ ಗುಂಪು ಕಟ್ಟಿಕೊಂಡು ಬಿಟ್ಟಿವಿ. ಅದು ಬ್ಯಾರೆ ಮಾತು.

ನಮ್ಮ ಪಂತ ಪ್ರಧಾನರು ನೀವು ಹಿಂಗ ಮಾಡ್ರಿ ಅಂದರು ಆದರ ನಾವು ಏನು ಮಾಡತೇವಿ ಅಂತ ಹೇಳಲಿಲ್ಲ. ಒಂದು ತಾಸು ಭಾಷಣ ಮಾಡಿದರೂ ಸಹಿತ ಕೊರೊನಾ ವಿರುದ್ಧ ಸರಕಾರದ ಯೋಜನೆಗಳು ಏನು ಅನ್ನೋದು ಬಾಯಿ ಬಿಡಲಿಲ್ಲ.

ಹಂಗಾರ ಅವರು ಏನು ಹೇಳಬಹುದಿತ್ತು?-
ಈ ವಿಪತ್ತನ್ನು ರಾಷ್ಟ್ರೀಯ ವಿಪತ್ತು ಅಂತ ಘೋಷಿಸಿ ಅದರ ಪರಿಹಾರಕ್ಕ ಏನೇನು ಮಾಡಬಹುದು ಅಂತ ತಿಳಿಸಬಹುದಿತ್ತು. ಆದರ ಅವರು ಅದನ್ನು ಹೇಳಲಿಲ್ಲ. ಚುನಾವಣೆ ರಣತಂತ್ರಜ್ಞ ಪ್ರಶಾಂತ ಕಿಶೋರ ಅವರು ಮೋದಿ ಅವರು ಯಾವ ಕೆಟ್ಟ ಸುದ್ದಿಯನ್ನೂ ಕೊಡಬಾರದು. ಅವರು ಯಾವಾಗಲೂ ಬರೇ ಒಳ್ಳೆ ಸುದ್ದಿ ಕೊಡಬೇಕು ಅಂತ ಹೇಳಿಕೊಟ್ಟಿದ್ದರಂತ. ಇವರು ಅದನ್ನು ಚುನಾವಣೆ ಮುಗದ ಮ್ಯಾಲನೂ ಪಾಲಸಲಿಕ್ಕೆ ಹತ್ಯಾರ.

ಇದಕ್ಕ ಎಷ್ಟು ರೊಕ್ಕ ಇಟ್ಟೇವಿ ಅಂತ ಹೇಳಬಹುದಿತ್ತು. ಚುನಾವಣೆ ಗಿಂತ ಮುಂಚೆ ಹಣಕಾಸಿನ ಮಾತು ಹಗಲೆಲ್ಲಾ ಆಡಿದ ಮೋದಿ ಅವರು ಈಗ ಮಾತಾಡವಲ್ಲರು.

ಅದಕ್ಕೊಂದು ವಿಶೇಷ ತಂಡ ಕಟ್ಟೇವಿ ಅಂತ ಹೇಳಬಹುದಿತ್ತು. ಚುನಾವಣೆ ಕಾರ್ಯಕ್ಕೆ, ಪಕ್ಕದ ಕೆಲಸಕ್ಕೆ ತಂಡ ಕಟ್ಟೋರು ವಿಪತ್ತಿನ ನಿರ್ವಹಣೆಗೆ ಕಟ್ಟತಾರೋ ಇಲ್ಲವೋ, ಗೊತ್ತಿಲ್ಲ.

ಅದರ ಸಲುವಾಗಿ ಒಂದು ಆಸ್ಪತ್ರೆ, ಸಂಶೋಧನಾ ಕೇಂದ್ರ, ಪ್ರಯೋಗಾಲಯ ಇತ್ಯಾದಿ ಮೀಸಲು ಇಡತೇವಿ, ಹೊಸದಾಗಿ ಆರಂಭ ಮಾಡತೇವಿ ಅಂತ ಅನ್ನಬಹುದಿತ್ತು. ಅದನ್ನು ಅನ್ನಲಿಲ್ಲ. ರವಾಂಡಾ, ಸಿಯಾರಾ ಲಿಯೋನ್ ಮುಂತಾದ ಸಣ್ಣಸಣ್ಣ ದೇಶಗಳು ಮಾಡಲಿಕ್ಕೆ ಹತ್ಯಾವು.

ಚೀನಾದವರು ಹತ್ತು ದಿನದಾಗ ಹೊಸಾ ಆಸ್ಪತ್ರೆ ಕಟ್ಟಿದ್ದು ನಾವೆಲ್ಲಾ ನೋಡಿ ಚಪ್ಪಾಳೆ ತಟ್ಟೇವಿ. ಆದರ ಈಗ ನಾಯಕರು ಹೇಳಿದರು ಅಂತ ಚಪ್ಪಾಳೆ ತಟ್ಟಿದಿವಿ. ಅದಕ್ಕೂ ಇದಕ್ಕೂ ನಮಗ ವ್ಯತ್ಯಾಸ ಗೊತ್ತಿಲ್ಲ.

ಚೀನಾದ ಕೊರೊನಾ ಆಸ್ಪತ್ರೆ

ಈಗ ನಮ್ಮ ಮುಂದ ಇರೋದು ಏನು-ಯುದ್ಧನೋ? ಸರ್ಜಿಕಲ್ ಸ್ಟ್ರೈಕೋ? ಹೋರಾಟನೋ? ಅಥವಾ ವಿಪತ್ತೋ? ಕೊರೊನಾ ರೋಗದ ಜೊತೆ ಹೊಡೆದಾಟ ಅಂದರ ಜನರ ಹತ್ತರ ಮುಚ್ಚಿ-ಮುಚ್ಚಿ ಇಡುವಂಥಾ ಸೀಕ್ರೆಟ್ ಏನರ ಅದ ಏನು? ಇದನ್ನ ತಿಳಕೋಬೇಕಾರ ನೀವು ಏನು ಸೈನ್ಯದ ಅಧಿಕಾರಿ ಆಗಿರಬೇಕಿಲ್ಲ. ನಿಮಗ ಕನಿಷ್ಠ ಸಾಮಾನ್ಯ ಜ್ಞಾನ ಇದ್ದರ ಸಾಕು. ಆದರ ಈಗಿನ ಕಾಲ ಹೆಂಗಂದ ಅಂದರ ಬ್ಯಾರೆ ಬೇಕಾದ್ದು ಸಿಗತದ, ಸಾಮಾನ್ಯ ಜ್ಞಾನ ಸಿಗಂಗಿಲ್ಲ. ಅದು ಎಷ್ಟು ಅಪರೂಪ ಅಂದರ ರೊಕ್ಕ ಅಲ್ಲಾ, ಜೀವಾ ಕೊಟ್ಟರೂ ಸಿಗಂಗಿಲ್ಲ. ಇದನ್ನು ಸರಿಮಾಡುವುದು ಘಟಾನುಘಟಿ ನಾಯಕರ ಕಡೆನೂ ಸಾಧ್ಯ ಇಲ್ಲ, ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...