Homeಮುಖಪುಟಕೊರೋನಾ: ಭವಿಷ್ಯದ ಸುಳ್ಳು ಸುದ್ದಿಗಳು

ಕೊರೋನಾ: ಭವಿಷ್ಯದ ಸುಳ್ಳು ಸುದ್ದಿಗಳು

ಸಾಬರಿಂದ ಹಬ್ಬಿತು ವೈರಸ್ ಎಂದು ಇನ್ನೊಂದು ಸುಳ್ಳುಸುದ್ದಿ ಹರಡಿಸುತ್ತಾರೆ. ಆದರೆ ಅದಕ್ಕೆ ಕಾರಣ ಅವರು ಸಾಬರಾಗಿರುವುದು ಅಲ್ಲದೇ ಇನ್ನೊಂದು ಬಹುಮುಖ್ಯ ಕಾರಣವಿದೆ.

- Advertisement -
- Advertisement -

ಮುಂದಿನೆರಡು ತಿಂಗಳಿನಲ್ಲಿ, ಕೊರೊನಾ ಹತೋಟಿಗೆ ಬಂದರೆ, ಬಿಜೆಪಿ ಹಬ್ಬಿಸುವ ಸುಳ್ಳುಸುದ್ಧಿಗಳು ಇಂತಿರಲಿವೆ:

– ಭಾರತಕ್ಕೆ ಬರಲು ಹೆದರಿತೆ ಕೊರೋನಾ? ನೋಡಿ ಮೋದಿ ಯೋಗದ ಪರಿಣಾಮ!

– ವುಹಾನ್‌ನಲ್ಲಿ ಕೊರೋನಾ ವೈರಸ್ ಗೆಳತಿಯ ವೇಷ ಧರಿಸಿ ವೈರಸ್‌ನನ್ನೇ ಕೊಂದ ಧೋವಲ್!

– ಅಮಿ_ ಶಾ_ ದಡಿಯಲ್ಲಿ ವಿಲವಿಲ ಒದ್ದಾಡಿದ ದಡ್ಡ ಕೊರೋನಾ!

ಕೊರೋನಾಸುರನನ್ನು ಕೊಂದ ಕಾರಣಕ್ಕಷ್ಟೇ ಅಲ್ಲದೇ, ಭಾರತದಲ್ಲಿ ಈ ವೈರಸ್‌ನ ರಗಳೆ ಮುಂದೆ ಹೆಚ್ಚು ಹಬ್ಬದೇ ಹೋದರೆ ಅದಕ್ಕೆ ಇನ್ನೂ ಕೆಲವು ಕಾರಣಗಳಿವೆ. ಅವು ಹೀಗಿವೆ.

ನಮ್ಮ ದೇಶದ ಜಿಡಿಪಿ ಪ್ರವಾಸೋದ್ಯಮದ ಕಾರಣದಿಂದ 9% ನಷ್ಟು ಗಳಿಸುತ್ತದೆ. ಆದರೆ ಚೈನಾದಿಂದ ನಮ್ಮಲ್ಲಿ ಬರುವ ಪ್ರವಾಸಿಗರ ಸಂಖ್ಯೆ ಅತ್ಯಂತ ಅಲ್ಪ. (ಉತ್ತರ ಇಟಲಿಯ ಸಮಸ್ಯೆ ಮುಖ್ಯವಾಗಿ ಉಂಟಾದದ್ದೇ ಚೀನಾದ ಪ್ರವಾಸಿಗರ ಕಾರಣದಿಂದ. ಅದು ದಕ್ಷಿಣ ಜರ್ಮನಿಯ ಬವೇರಿಯಾ ಪ್ರಾಂತ್ಯಕ್ಕೆ ದಾಟಿದ್ದು ಶೆಂಗಿಯನ್ ದೇಶಗಳಿಗೆ ಪೋರಸ್ ಗಡಿಗಳಿರುವ ಕಾರಣದಿಂದ). ಮಲೇಷ್ಯಾ ಹೊರತುಪಡಿಸಿದರೆ ಪೂರ್ವ ಏಷ್ಯಾದಿಂದ ಭಾರತಕ್ಕೆ ಬರುವ ಪ್ರವಾಸಿಗರು ಅತ್ಯಂತ ಕಡಿಮೆ. ಯೂರೋಪಿನಿಂದ ಭಾರತಕ್ಕೆ ಬರುವ ಪ್ರವಾಸಿಗರು ಬೇಸಿಗೆಯಲ್ಲಿ ಹೆಚ್ಚು ಬರುತ್ತಾರೆಯೇ ಹೊರತು, ನಮ್ಮ ಚಳಿಗಾಲದಲ್ಲಿ ಅಲ್ಲ.

ಸೇವೆ ಆಧಾರಿತ ಎಕಾನಮಿಯ ದೇಶವಾದ ನಮ್ಮಿಂದ ಯುರೋಪಿಗೋ, ಅಮೇರಿಕಾಕ್ಕೋ ಹೋಗುವ ಜನಗಳು ಬಹಳ ಕಡಿಮೆ. ಉತ್ಪನ್ನಾಧರಿತ ದೇಶವಾದ ಚೈನಾದಿಂದ ಹೊರದೇಶಗಳಿಗೆ ಭೇಟಿ ಕೊಡುವ ಜನರೂ, ವಸ್ತುಗಳೂ ಬಹಳ ಹೆಚ್ಚು. (ನಾವು ಹೆಚ್ಚೆಂದರೆ ಸಾಫ್ಟ್ ವೇರ್ ವೈರಸ್ ಉಂಟುಮಾಡಿ ಹರಡಬಹುದಷ್ಟೇ! ಆದರೆ ಕಮ್ಯೂನಲ್ ವೈರಸ್ ಹರಡುವುದರಲ್ಲೇ ಬಿಝಿಯಾದ ನಮ್ಮ ಸಾಫ್ಟ್-ವೇರ್ ಇಂಜಿನೀರುಗಳಿಗೆ ಅಷ್ಟು ತಲೆಯಾಗಲೀ ವ್ಯವಧಾನವಾಗಲೀ ಇಲ್ಲ.) ಹಾಗಾಗಿ, ಬಹುಷಃ ನಮ್ಮ ದೇಶಕ್ಕೆ ಈ ವೈರಸ್ ಹೆಚ್ಚು ಬಂದಿರದೇ ಇರಬಹುದು.

ಸಾಬರಿಂದ ಹಬ್ಬಿತು ವೈರಸ್ ಎಂದು ಇನ್ನೊಂದು ಸುಳ್ಳುಸುದ್ದಿ ಹರಡಿಸುತ್ತಾರೆ. ಆದರೆ ಅದಕ್ಕೆ ಕಾರಣ ಅವರು ಸಾಬರಾಗಿರುವುದು ಅಲ್ಲದೇ ಇನ್ನೊಂದು ಬಹುಮುಖ್ಯ ಕಾರಣವಿದೆ.

ಜಗತ್ತಿನ ಏರ್-ಟ್ರಾಫಿಕ್ ಟ್ರಾನ್ಸಿಟ್‌ಗಳಲ್ಲಿ (ಅಂದರೆ ಬೆಂಗಳೂರಿನಿಂದ ಸಾಗರಕ್ಕೆ ಹೋಗುವಾಗ ಸಿಗರೇಟ್ ಸೇದಲು ಬಸ್ ನಿಲ್ಲುವ ಕೆ.ಬಿ ಕ್ರಾಸೋ ಅರಸಿಕೆರೆಯೋ ಅಂಥ ಜಾಗ ಅಂತಿಟ್ಟುಕೊಳ್ಳಿ.) ದುಬೈ ಅತ್ಯಂತ ಮುಖ್ಯ ಏರ್ಪೋರ್ಟ್. ಅದು ಜಗತ್ತಿನ ಅತೀದೊಡ್ಡ ಟ್ರಾನ್ಸಿಟ್ ಏರ್ಪೋರ್ಟ್ಗಳ ಪೈಕಿ ಒಂದು. ವರ್ಷಕ್ಕೆ ಹತ್ತು ಕೋಟಿ ಜನ ಆ ವಿಮಾನ ನಿಲ್ದಾಣದಲ್ಲಿ ಕಾಲಿಡುತ್ತಾರೆ. 12 ನಿಮಿಷಕ್ಕೆ ಒಂದು ಕಿಲೋಮೀಟರ್ ನಡೆಯುವ ನನಗೆ ನಾಲ್ಕು ಕಿಲೋಮೀಟರ್‌ಗಳಷ್ಟಿರುವ ಆ ಏರ್ಪೋರ್ಟ್ನ ತುದಿಯಿಂದ ತುದಿಗೆ ತಲುಪಲು ಗಂಟೆಗಿಂತ ಹೆಚ್ಚು ಹಿಡಿದಿತ್ತು. ಅಂಥ ವಿಸ್ತಾರ ಜಾಗದಲ್ಲಿ ಎಷ್ಟು ಜನಕ್ಕೆ ಹಬ್ಬುವುದೆಂದು ಗೊತ್ತಾಗದೇ ಜಾತಿಧರ್ಮ ಮೀರಿ ಕೊರೊನಾ ಕೈಲಾದಷ್ಟು ಜನರಿಗೆ ಅಂಟಿಕೊಳ್ಳುತ್ತದೆ. ಕೈತೊಳೆಯದ ಜನ ಇನ್ನಷ್ಟು ಹಬ್ಬಿಸುತ್ತಾರೆ. ಮಿಡಲ್ ಈಸ್ಟ್ನಲ್ಲಿ ಸಾಬರಿರುವುದರಿಂದ ಅದು ಅವರ ಗಡ್ಡಕ್ಕೂ ಅಂಟಿಕೊಳ್ಳುವ ಸಾಧ್ಯತೆಯಿದೆ ಹೊರತು, ಅವರು ಸಾಬರೆಂದು ಕೊರೋನಾಕ್ಕೆ ಗೊತ್ತಾಗುವುದಿಲ್ಲ. ಅದು ಗೊತ್ತಾಗುವುದು ನಮ್ಮ ಬಿಜೆಪಿಗಳಿಗೆ ಮಾತ್ರ.

ಇನ್ನೊಂದು ತರ್ಕವಿದೆ. ಇದು ಅನೇಕ ಬಾರಿಯ ವಯಕ್ತಿಕ ಅನುಭವದ್ದು. ಯೂರೋಪಿನಿಂದ ಮತ್ತು ಅಮೆರಿಕಾದಿಂದ ದುಬೈನ ಟ್ರಾನ್ಸಿಟ್‌ವರೆಗೆ ಅತ್ಯಂತ ಒಳ್ಳೆಯ ರೀತಿಯಲ್ಲಿ ಮೇಂಟೇನ್ ಮಾಡಲಾದ ಬೋಯಿಂಗ್ 747 ಜಂಬೋಜೆಟ್‌ಗಳಂತಹ ವಿಮಾನಗಳು ಬರುತ್ತವೆ. ಅಲ್ಲಿಂದ ಇಂಡಿಯಾಕ್ಕೆ ಮತ್ತು ಏಷ್ಯಾದ ದೇಶಗಳಿಗೆ ಬರುವ ವಿಮಾನಗಳು -ಸ್ಯಾನಿಟೇಷನ್‌ನ ದೃಷ್ಟಿಯಿಂದ – ಅಷ್ಟು ಉತ್ತಮವಾಗಿರದ ಏರ್ ಬಸ್ ವಿಮಾನಗಳು.

ಝೀ ಟಿವಿಯ ಸುಧೀರ್ ಚೌಧರಿಯಂಥವರು ಚೀಪ್ (pun intended) ಎಡಿಟರ್ ಆಗಿರುವ, ಆಕ್ಸೆಂಟೆಡ್ ಇಂಗ್ಲಿಷ್ ಮಾತಾಡುವ ನಿರೂಪಕಿ ಇರುವ ವಿಯೋನ್ ಟಿ.ವಿಯ ವರದಿ ಚೈನಾದ ಕುರಿತು ದೊಡ್ಡ ಕಾನ್ಸ್-ಪಿರಸಿ ಥಿಯರಿಯನ್ನು ಹಬ್ಬಿಸುತ್ತಿದೆ. Ravi Belagere ತನಿಖಾ ಪತ್ರಕರ್ತರು ಇದನ್ನು ಹಂಚಿಕೊಳ್ಳುತ್ತಾರೆ. (ನಾನಿಲ್ಲಿ ಚೈನಾವನ್ನು ಖಂಡಿತಾ ಸಪೋರ್ಟ್ ಮಾಡುತ್ತಿಲ್ಲ. ನಮ್ಮ ಮನೆಗೆ ಬಂದು ಊಟ ಮಾಡಿಕೊಂಡು ಹೋಗಿ, ಅವರ ಮನೆಗೆ ಹೋದರೆ ಬಾಗಿಲಲ್ಲಿ ಮಾತಾಡಿಸಿ ಕಳುಹಿಸುವ ದೇಶ ಅದು.) ಆದರೆ ಜಾಗತಿಕ ಡಿಪ್ಲೊಮಸಿ ಮತ್ತು ಎಕನಾಮಿಕ್ಸ್ನ ಕನಿಷ್ಟ ನರಮಂಡಲ ಗೊತ್ತಿದ್ದರೆ ಅಂಥ ಥಿಯರಿಯನ್ನು ಯಾರೂ ನಂಬುವುದಿಲ್ಲ. ಮಾಸ್ಕ್ ಮಾರಿ ಶ್ರೀಮಂತವಾಗುತ್ತದೆ ಚೈನಾ ಎನ್ನುತ್ತಾರೆ ಜನ. ಅಡಿಗೆಮನೆಗೆ ಬೆಂಕಿ ಹಾಕಿ ಅಕ್ಕಿ ಮಾರಲಾಗುವುದಿಲ್ಲ. ಐಫೋನ್ ಕೊಳ್ಳುವವರೆಲ್ಲ ಸತ್ತು ಹೋದರೆ ಅದನ್ನು ಮಾಡುವ ಚೈನಾ ಅದನ್ನು ಅಂಡಿಗೆ ಹಾಕಿಕೊಳ್ಳಬೇಕಷ್ಟೇ.

ಜರ್ಮನಿಯಲ್ಲಿ ಮೂರು ವರ್ಷದಿಂದ ನಾನು ವಾಸಿಸುತ್ತಿರುವ ಬಿಲ್ಡಿಂಗ್‌ನಲ್ಲಿ ಸುಮಾರು 20-25 ಜನ ಚೈನೀಸ್ ಹುಡುಗರನ್ನು ಮಾತಾಡಿಸಲು ಪ್ರಯತ್ನಿಸಿದ್ದೇನೆ. ರಾಜಕೀಯ ಮಾತಾಡಲು ಪ್ರಯತ್ನಿಸಿದರೆ ಒಂದೋ ಹೆದರುತ್ತಾರೆ. ಅಥವಾ I don’t want to spek about it ಎಂದು ನೇರವಾಗಿ ಹೇಳುವಷ್ಟು ಹೆದರುತ್ತಾರೆ. ಒಬ್ಬ ಹುಡುಗ ಮಾತ್ರ ಅಡಿಗೆ ಮನೆಯ ಕಿಟಕಿ ಬಾಗಿಲುಗಳ ಮುಚ್ಚಿ ಕಥೆಗಳನ್ನು ಹೇಳಿದ. ಅದೆಲ್ಲ ನಾವು ಆ ದೇಶದ ಬಗ್ಗೆ ನಂಬಿರುವಂಥದ್ದೇ. ಅಂಥದ್ದೇ ಡಿಕ್ಟೇಟೋರಿಯಲ್ ದೇಶ ನಾವಾಗಲು ಕಾದುಕುಳಿತಿದ್ದೇವೆ. ಬೆಳಿಗ್ಗೆ ಚೈನಾದಂಥ ಆಡಳಿತ ಬರಬೇಕು ಎಂದು ಕೂಗುತ್ತೇವೆ. ಮಧ್ಯಾಹ್ನ ಆ ದೇಶ ಜಗತ್ತಿಗೆ ನ್ಯೂಸ್ ಕೊಡುತ್ತಿಲ್ಲ ಅಂಥ ಬೊಬ್ಬಿರಿಯುತ್ತೇವೆ. ಸಂಜೆ ನಮ್ಮ ಬಗ್ಗೆ ಅಮೇರಿಕನ್ ಮೀಡಿಯಾ ತಪ್ಪಾಗಿ ಬಿಂಬಿಸುತ್ತಿದೆ ಎಂದು ಕನ್ನಡ ಮೀಡಿಯಾಗಳು ಊಳಿಡುತ್ತವೆ.

ಇದೆಲ್ಲ ಬಿಟ್ಟು-

ಒಂದೊಮ್ಮೆ, ಇನ್ಕ್ಯುಬೇಷನ್ ಅವಧಿ ಹೆಚ್ಚಿರುವ ಈ ವೈರಸ್ ಬಂದಿದ್ದು, ಜನರಿಂದ ಜನಕ್ಕೆ ಹರಡಿ ಅದು ಕಾಣಿಸಿಕೊಂಡರೆ, ಅದು ಮುಂದೆರಡು ತಿಂಗಳಿನಲ್ಲಿ – ಈ ಸರ್ಕಾರ ಹಿಂದೂಮುಂದೂ ಯೋಚಿಸದ ರೀತಿಯಲ್ಲಿ ಲಾಕ್ ಡೌನ್ ಮಾಡಿ, ಟೆಸ್ಟುಗಳನ್ನೂ ಸರಿಯಾಗಿ ಮಾಡದೇ ಜನರಿಂದ ಜನರಿಗೆ ಹಬ್ಬುವಂತೆ ಮಾಡಿದ್ದರಲ್ಲಿ ಸಾಬರಿಗೆ ಬಂದಿದ್ದರೆ ಅದು ಕೊರೋನಾದ ತಪ್ಪೇ ಹೊರತು ಸಾಬರದ್ದಲ್ಲ ಎಂದು ಅರ್ಥ.

ಪುಣ್ಯಕ್ಕೆ ಸಾಬರಲ್ಲಿ ಮುಕ್ಕಾಲು ಪಾಲು ಜನ ಕುಡಿಯುವುದಿಲ್ಲ. ಹೆಂಡ ಕೊಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೆದರಿಸುತಿರುವ ಹಿಂದುಗಳಿಗೆ ಹೆಂಡ ಕೊಡುತ್ತಿರುವ ನಾವು ಸಾಬರಿಗೆ ಅದನ್ನೂ ಕೊಡದೇ ಮಜಾ ನೋಡುತ್ತಿದ್ದೆವು. ಆ ಅವಕಾಶ ಮಾತ್ರ ಬಿಜೆಪಿಗೆ ತಪ್ಪಿಹೋಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...