Homeಮುಖಪುಟವಿಡಿಯೊ| ಅಯ್ಯಯ್ಯೊ ಪದ್ಮಕ್ಕ; ಅಂಥಾದ್ದೇನಾಗಿಲ್ಲ ಎಲ್ಲ ಅರಾಮು; ಎಲ್ಲಾ ಆರಾಮು.

ವಿಡಿಯೊ| ಅಯ್ಯಯ್ಯೊ ಪದ್ಮಕ್ಕ; ಅಂಥಾದ್ದೇನಾಗಿಲ್ಲ ಎಲ್ಲ ಅರಾಮು; ಎಲ್ಲಾ ಆರಾಮು.

- Advertisement -
- Advertisement -

ಎಲ್ಲಾ ಆರಾಮು

ಪಾಮರರಿಗೆ: ಈ ಹಾಡನ್ನು ಬರೆದ ಕಾಲದ ಬಗ್ಗೆ ಕಾಳಿದಾಸನ ಕಾಲದೇಶದ ಬಗ್ಗೆಯಿರುವಷ್ಟೇ ಗೊಂದಲಗಳಿವೆ. ಮೂಲದ ಬಗ್ಗೆ ನದಿಮೂಲದಷ್ಟೆ ಕುತೂಹಲವಿದೆ. ಇದನ್ನು ಬರೆದವರು ಯಾರು ಎಂಬುದು ಇದರ ಕತೃಗಳ ಜಗಳಾನಂತರವೂ ನಿರ್ಧಾರವಾಗಲಿಲ್ಲ. ೧೮೯೩ ಡಿಸೆಂಬರ್ ೧೬ ರಂದು ಆಡಲ್ಪಟ್ಟ “ಲಾಟ್ರೆಕ್ ನ ಎಚ್” ಎಂಬ ಒಂದು ಇಂಗ್ಲೀಷ್ ಕಾಮಿಡಿಯಲ್ಲಿದ್ದ ಒಂದು ಸಂಭಾಷಣೆಯ ತುಣುಕನ್ನಿಟ್ಟುಕೊಂಡು ೧೯೩೬ ರಲ್ಲಿ ಪೌಲ್ ಮಿಸ್’ರಕಿ ಎಂಬುವವನು ಈ ಹಾಡು ಬರೆದನಂತೆ ಎಂಬ ಇನ್ನೊಂದು ಉಹಾಪೋಹವೂ ಇದೆ.  ಇದೆಲ್ಲದರ ನಂತರ ರೇ ವೆಂಟ್ಯುರಾ ಎಂಬ ಫ್ರೆಂಚ್ ಸಂಗೀತದ ಅಪೂರ್ವನೂ, ಜಾಝ್‌ಅನ್ನು ಫ್ರಾನ್ಸಿನಲ್ಲಿ ಸಮೃದ್ಧವಾಗಿ ಬೆಳೆಸಿದವನೂ ಈ ಹಾಡಿಗೆ ಸಂಗೀತ ನೀಡಿದ. ಫ್ರೆಂಚ್ ಗೀತೆಗಳಲ್ಲಿ ಅಬ್ಬರವೆನ್ನುವುದು ಇಲ್ಲವೇ ಇಲ್ಲ. ಬಾಯಿಯಿಂಬ ಹೊರಟ ಹೊಗೆ ಸುರುಳಿಗಳನ್ನು ವರ್ಣಿಸುತ್ತ ಮಗುವನ್ನು ಮಲಗಿಸುವ ಜೋಗುಳದಂಥ ಹಾಡುಗಳಿವೆ ಅಲ್ಲಿ. ತೀರಾ ಸರಳ. ಈ ಕೆಳಗಿನ ಹಾಡಿನಲ್ಲಿ ಬಹುತೇಕ ಸಾಲುಗಳು ಪುನರಾವರ್ತಿತ. ನಿಜವಾಗಿ ಇರುವುದು ನಾಲ್ಕೋ ಐದೋ ಸಾಲುಗಳಷ್ಟೇ. ಬಿಡುಗಡೆಗೊಂಡಾಗ ಈ ಹಾಡು ಯೂರೋಪಿನ ತುಂಬ ಎಷ್ಟು ಪ್ರಿಯವಾದ ಗೀತೆಯಾಗಿ ಹೋಯಿತೆಂದರೆ ರೇ ವೆಂಟ್ಯುರಾ ಮತ್ತು ಪೌಲ್ ಮಿಸ್’ರಕಿ “ಎಲ್ಲಾ ಆರಾಮು” ನ ಕತೃಗಳಾಗಿಯೇ ಇವತ್ತಿಗೂ ಉಳಿದಿದ್ದಾರೆ.

ನಮ್ಮಲ್ಲೂ ಈ ಹಾಡಿನ ಲಾಜಿಕ್ಕಿನ ಥರದವುಗಳು ಇಲ್ಲವೆಂದಲ್ಲ. ಇಂಗ್ಲೀಷ್, ಫ್ರೆಂಚ್, ಸ್ಪಾನಿಷ್, ಆಸ್ಟ್ರಿಯನ್ ಗಳಲ್ಲಿ ಇದೇ ರೀತಿಯ ಸಂಭಾಷಣೆಗಳು ತುಂಬ ಸಿಗುತ್ತವೆ. ಆದರೆ ಈ ಹಾಡಿನ ವ್ಯಂಗ್ಯ ಮತ್ತು ತಿಳಿ ಹಾಸ್ಯಗಳು ಆಗಿನ ಭಯಗ್ರಸ್ಥ ಯೂರೋಪಿನಲ್ಲಿ ಶೀಘ್ರವಾಗಿ ಹರಡಿತೆಂದರೆ ೧೯೩೬ ರಲ್ಲಿ ಇದೇ ಹೆಸರಿನ ಒಂದು ಸಿನೆಮಾ ಕೂಡ ತೆರೆಕಂಡಿತು.  ನನ್ನ ಅನುವಾದದಲ್ಲಿ ಎರಡು ಬದಲಾವಣೆ ಮಾಡಿಕೊಂಡಿದ್ದೇನೆ ನಾನು. ಮೂಲದಲ್ಲಿ ಕುದುರೆ ಸಾಯುತ್ತದೆ; ಇಲ್ಲಿ ಎಮ್ಮೆ. ಮತ್ತು ಅಲ್ಲಿ ಮನೆ ಕುಸಿದ ಮೇಲೆ ಗಂಡ ಸಾಯುತ್ತಾನೆ. ಇಲ್ಲಿ ಅದನ್ನು ಉಲ್ಟಾ ಮಾಡಿಕೊಂಡೆ- ಫ್ರೆಂಚಿನ ಮತ್ತು ಕನ್ನಡದ ವಾಕ್ಯರಚನೆಗಳ ಭಿನ್ನತೆಯ ಕಾರಣದಿಂದ. ಹಾಡಿನ ಮೂಲ ಲಯ ಮತ್ತು ತಾಳದಲ್ಲಿಯೇ ಈ ಅನುವಾದವೂ ಇದೆ. ಹಾಗಾಗಿ ಈ ಕೆಳಗಿನ ಲಿಂಕ್ ನಲ್ಲಿ ಹಾಡು ಕೇಳಿ ಅದೇ ರಿದಮ್ ಅನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಹಾಡನ್ನು ಕನ್ನಡದಲ್ಲಿ ಹಾಡಿಕೊಳ್ಳಬಹುದು. ಇದೊಂದು “ಗೀತೆ” ಎನ್ನುವುದು ಮನಸ್ಸಿನಲ್ಲಿರಲಿ ಎಂದು ಕೋರಿಕೆ.

ವಿಡಿಯೊ ನೋಡಿ.

ಪಂಡಿತರಿಗೆ: ’ರಾಜಕೀಯ ಮತ್ತು ಸಾಮಾಜಿಕವಾಗಿ’ ಈ ಹಾಡು ಹೊರಗೆ ಬಂದು, ಮೆಡಿಟರೇನಿಯನ್ ದೇಶಗಳಾದ್ಯಂತ ಪ್ರಸಿದ್ಧವಾದ ಕಾಲ ನಾಝೀಸಂ ನ ಬರ್ಭರತೆ ಯೂರೋಪಿನ ಮನಸ್ಸನ್ನು ಕೊರೆಯತೊಡಗಿದಂತದ್ದು- ಎಂಬುದಾಗಿ ಯೂಟ್ಯೂಬಿನಲ್ಲಿ ಫ್ರೆಂಚ್ ಗೀತೆಗಳ ಬಗ್ಗೆ ಆಳವಾದ ಗ್ರಹಿಕೆಗಳನ್ನು ದಾಖಲಿಸುವವಳೊಬ್ಬಳು ಬರೆಯುತ್ತಾಳೆ. ಮುಖ್ಯವಾದ್ದನ್ನು ನಿರ್ಲಕ್ಷಿಸುವ ಅಥವಾ ಲಕ್ಷಿಸಲು ಭಯಪಡುವ ಕಾಲವನ್ನು ಗೇಲಿ ಮಾಡಲು ರೇ ವೆಂಟ್ಯುರಾ ಇದನ್ನು ಅಳವಡಿಸಿಕೊಂಡನಂತೆ. ವಾಸ್ತವದಲ್ಲಿ ಫ್ರೆಂಚ್ ಕಾವ್ಯದಷ್ಟೇ ತೀವ್ರವಾಗಿ ರಾಜಕೀಯವನ್ನು ವಿಮರ್ಶಿಸಿದವು ಈ ಫ್ರೆಂಚ್ ಗೀತೆಗಳು. ಈ ಸರಳ ಹಾಡು ಎಷ್ಟು ಚೂಪಾದ ಒಂದು ರಾಜಕೀಯ ಹಾಡೂ ಆಯಿತೆಂದರೆ- ಯೂರೋಪಿನ ಪತ್ರಿಕೆಗಳು “ಎಲ್ಲಾ ಅರಾಮು ಮುಸಲೋನಿ ಮಹಾಶಯ” ಎಂದು ಇಟಲಿ-ಇಥಿಯೋಪಿಯನ್ ಯುದ್ಧದ ಸಮಯದಲ್ಲಿಯೂ, “ಎಲ್ಲಾ ಅರಾಮು ಸ್ಟಾಲಿನ್ ಮಹಾಶಯ” ಎಂದು ಸ್ಪಾನಿಷ್ ಅಂತರ್ಯುದ್ಧದ. ಸಮಯದಲ್ಲೂ ತಮಾಷೆ ಮಾಡಲು ಶುರುಮಾಡಿದ್ದವು. ತಣ್ಣನೆಯ ರಾಜಕೀಯ ಫ್ರೆಂಚ್ ಗೀತೆಗಳಿಗೆ ಇನ್ನೊಂದು ದೊಡ್ಡ ಉದಾಹಾರಣೆಯೆಂದರೆ ಬೋರಿಸ್ ವಿಯಾಂ ಎಂಬಾತ ಬರೆದು ಹಾಡಿದ “ಲ್ ಡೆಸರ್ಟರ್” ಎಂಬ ರಚನೆ. ಸರ್ವಾಧಿಕಾರದ ವಿರುದ್ಧ ದುಃಖ ಮತ್ತು ಸ್ಪಷ್ಟತೆಯಲ್ಲಿ ದನಿಯೆತ್ತುವ ಈ ಹಾಡನ್ನು ಅಪಾರ ವಿನಯ ಹಾಗೂ ದೃಢತೆಯಲ್ಲಿ ಹಾಡುತಾನೆ ಬೋರಿಸ್. ಹಾಡಿದು ಕೇವಲ ಫ್ರೆಂಚ್ ಭಾಷೆಯೊಂದರಲ್ಲೇ ಮೂವತ್ತಕ್ಕಿಂತ ಹೆಚ್ಚಿನ ರೂಪಗಳಲ್ಲಿ ಅಫ್ರಿಕಾದ ಅನೇಕ ಸರ್ವಾಧಿಕಾರೀ ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿತು. ಸಾಹಿತ್ಯ ಬೇರೆಯಾದರೂ ಧ್ವನಿ, ದೃಢತೆ ಮತ್ತು ವಿನಯಗಳು ಈ ಹಾಡಿನ ಎಲ್ಲ ರೂಪಗಳಲ್ಲೂ ಹಾಗೆಯೇ ಇದ್ದವು ಎಂಬುದು ಈ ಗೀತೆಗಳ ವ್ಯಾಪಕತೆಯನ್ನು ತೊರಿಸುತ್ತವೆ ಅಂದುಕೊಂಡಿದ್ದೇನೆ.

೨೦೧೦ರಲ್ಲಿ ಕೆಂಡಸಂಪಿಗೆ ಗೆ ಮಾಡಿದ್ದ ಮೂಲ ಹಾಡಿನ ನಿಷ್ಟ ಅನುವಾದ ಇಲ್ಲಿದೆ. ಈಗಿನ ವೀಡಿಯೋ ಹಾಡು ಸಧ್ಯದ ಪರಿಸ್ಥಿತಿಗೆ ಬದಲಿಸಿ ಬರೆದದ್ದು.

“ಹಲೋ ಹಲೋ ಕಿಟ್ಟಿ

ಎನಪ್ಪಾ ವಿಶೇಷ?

ಇರಲಿಲ್ಲ ಊರಲ್ಲಿ; ಹದಿನೈದು ದಿನದಿಂದ

ನಾ ಮರಳಿ ಬಂದಾಗ

ಏನೇನು ಕಂಡೇನು?

ಏನಾಯಿತಲ್ಲಿ; ಹದಿನೈದು ದಿನದಿಂದ?”

“ಅಂಥಾದ್ದೇನಿಲ್ಲ; ಏನಿಲ್ಲ ಪದ್ಮಕ್ಕ

ಎಲ್ಲ ಆರಾಮು; ಎಲ್ಲಾ ಅರಾಮು.

ಅದ್ರೂನೂ ನಾಮಿಮ್ಗೆ ಹೇಳೋದು ಹೇಳ್ತೀನಿ

ಸಣ್ಣ್-ಪುಟ್ಟ ಮಾತಷ್ಟೇ; ತಲೆ ಹೋಗೋದೇನಿಲ್ಲ.

ನಿಮ್ ಮುದ್ದು ಎಮ್ಮೆ-ಬೆಳ್ಳಿ ಇತ್ತಲ್ಲ?

ಅದೊಂದು ಸತ್ತೋಯ್ತು. ಅದು ಬಿಟ್ರೆ ಪದ್ಮಕ್ಕ

ಇನ್ನೇನು ಇಲ್ಲ; ಎಲ್ಲ ಆರಾಮು, ಎಲ್ಲಾ ಅರಾಮು.”

“ಹಲೋ ಹಲೋ ಕಿಟ್ಟಿ!

ಎಂಥಾ ಮಾತಂದೇ?

ನನ್ನೆಮ್ಮೆ ಸತ್ತೋಯ್ತಾ

ಓ ನನ್ನ ಬಂಗಾರ!

ಹೇಳಪ್ಪಾ ನಂಗೆ-

ಇದಾಗಿದ್ ಹೆಂಗೆ?”

“ಅಯ್ಯಯ್ಯೊ ಪದ್ಮಕ್ಕ; ಅಂಥಾದ್ದೇನಾಗಿಲ್ಲ

ಎಲ್ಲ ಅರಾಮು; ಎಲ್ಲಾ ಆರಾಮು.

ಅದ್ರೂನೂ ನಾಮಿಮ್ಗೆ ಹೇಳೋದು ಹೇಳ್ತೀನಿ

ಸಣ್ಣ್-ಪುಟ್ಟ ಮಾತಷ್ಟೇ; ತಲೆ ಹೋಗೋದೇನಿಲ್ಲ.

ನಿಮ್ ಕೊಟ್ಗೇಗ್’ ಮೊನ್ನೆ

ಬೆಂಕಿ ಬಿತ್ತಲ್ಲ?- ಅದ್ರಲ್ಲಿ ಬೆಳ್ಳಿ

ಸಿಕ್ಕೊಂಡಳಲ್ಲ? ಅಷ್ಟೇನೆ ಪದ್ಮಕ್ಕ

ಅದು ಬಿಟ್ರೆ ಏನಿಲ್ಲ

ಏನೇನು ಇಲ್ಲ; ಎಲ್ಲ ಆರಾಮು, ಎಲ್ಲಾ ಅರಾಮು”

“ಹಲೋ ಹಲೋ ಕಿಟ್ಟಿ!

ಎಂಥಾ ಮಾತಂದೇ?

ನನ್ ಕೊಟ್ಗೆ ಸುಟ್ಟೋಯ್ತಾ

ಓ ಹಾಳು ದೇವ್ರೆ!

ಹೇಳಪ್ಪಾ ನಂಗೆ-

ಇದಾಗಿದ್ ಹೇಂಗೆ?”

“ಅಯ್ಯಯ್ಯೊ ಪದ್ಮಕ್ಕ; ಅಂಥಾದ್ದೇನಾಗಿಲ್ಲ

ಎಲ್ಲ ಅರಾಮು; ಎಲ್ಲಾ ಆರಾಮು.

ಅದ್ರೂನೂ ನಾಮಿಮ್ಗೆ ಹೇಳೋದು ಹೇಳ್ತೀನಿ

ಸಣ್ಣ್-ಪುಟ್ಟ ಮಾತಷ್ಟೇ; ತಲೆ ಹೋಗೋದೇನಿಲ್ಲ.

ನಿಮ್ಮನೆಗ್’ ಮೊನ್ನೆ ಬೆಂಕಿ ಬಿತ್ತಲ್ಲ?

ಅದೊಂಚೂರ್ ಕೊಟ್ಗೆಗೆ

ಹತ್ಕೊಂಡಿತ್ತಷ್ಟೇ! ಅಷ್ಟೇನೆ ಪದ್ಮಕ್ಕ

ಅದು ಬಿಟ್ರೆ ಏನಿಲ್ಲ

ಏನೇನು ಇಲ್ಲ; ಎಲ್ಲ ಆರಾಮು, ಎಲ್ಲಾ ಅರಾಮು.”

“ಹಲೋ ಹಲೋ ಕಿಟ್ಟಿ!

ಎಂಥಾ ಮಾತಂದೇ?

ನಮ್ಮನೆ ಬಿದ್ದೋಯ್ತಾ?

ಓ ನನ್ನ ಗೋಳೇ!

ಹೇಳಪ್ಪಾ ನಂಗೆ-

ಇದಾಗಿದ್ ಹೆಂಗೆ?”

“ಅದಿಷ್ಟೇ ಪದ್ಮಕ್ಕಾ; ಹೆಚ್ಚೇನು ಇಲ್ಲ.

ನಿನ್ ಗಂಡ ರಾಮಣ್ಣ

ಕುಡ್ಕೊಂಡು ಬಂದ್’ನಲ್ಲಾ.

ಏನ್ ಬೇಜಾರೋ ಏನೋ; ನೇಣಾಕ್ಕೊಂಡ್’ಬಿಟ್ನಲ್ಲ.

ಆಗವ್ನ ಕಾಲಿಗೆ ತಾಗಿತು ಚಿಮಣಿ

ಹತ್ಗೊಂತು ಬೆಂಕಿ- ಸುಟ್ಟೋಯ್ತು ನಿಮ್ಮನೆ.

ಆಗಂತೂ ಏನ್ ಗಾಳಿ, ತುಂಬಾನೇ ಪದ್ಮಕ್ಕಾ!

ಅಂಟಿತು ಬೆಂಕಿ-ಉರಿದೋಯ್ತು ಕೊಟ್ಟಿಗೆ.

ನಿಮ್ಮನೆ ಎಮ್ಮೆ ಸತ್ತಿದ್ದು ಹಿಂಗೆ. ಅಷ್ಟೇನೆ ಪದ್ಮಕ್ಕ

ಅದು ಬಿಟ್ರೆ ಏನಿಲ್ಲ

ಏನೇನು ಇಲ್ಲ; ಎಲ್ಲ ಆರಾಮು, ಎಲ್ಲಾ ಅರಾಮು.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸೋಶಿಯಲ್ ಮೀಡಿಯಾಗಳಲ್ಲಿ ಅಪ್ರಾಪ್ತರಿಗೆ ಹೆಚ್ಚುತ್ತಿರುವ ಅಪಾಯ; ಲೈಂಗಿಕ ಶೋಷಣೆ ತಡೆಗೆ ಮೆಟಾದಿಂದ ಮಹತ್ವದ ನಿರ್ಧಾರ!

ಸಾಮಾಜಿಕ ಜಾಲತಾಣಗಳ ಬಳಕೆ ಯುವಜನರು ಮತ್ತು ಮಕ್ಕಳ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಗಿರುವ ಬೆನ್ನಲ್ಲೇ, ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸಲು ಮೆಟಾ ಮಹತ್ವದ ನಿರ್ಧಾರ ಕೈಗೊಂಡಿದೆ....

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...

‘NAZA’ಗೆ ವೆನಿಸ್ ವಿಶೇಷ ಜ್ಯೂರಿ ಪ್ರಶಸ್ತಿ; ಸ್ವದೇಶ ಇಸ್ರೇಲ್‌ನ ಎಐ ಹತ್ಯಾಕಾಂಡ ಬಯಲಿಗೆಳೆದ ನಿರ್ದೇಶಕರಿಗೆ ಪೌರತ್ವ ಕಸಿಯುವ ಬೆದರಿಕೆ

ವೆನಿಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದ ‘NAZA’ ಸಾಕ್ಷ್ಯಚಿತ್ರದ ನಿರ್ದೇಶಕರ ವಿರುದ್ಧ ಇಸ್ರೇಲಿ ಸಂಸ್ಕೃತಿ ಸಚಿವ ಮಿಕಿ ಜೋಹರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯಕ್ಕೆ ದ್ರೋಹ’ ಎಸಗಿದ್ದಾರೆಂದು ಆರೋಪಿಸಿ ಅವರ ಇಸ್ರೇಲಿ...

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...