Homeನಿಜವೋ ಸುಳ್ಳೋFact check: ಇಟಲಿಯ ಉದ್ಯಮಿ ತನ್ನ ಹೋಟೆಲ್‌ನಿಂದು ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ನಿಜವೇ?

Fact check: ಇಟಲಿಯ ಉದ್ಯಮಿ ತನ್ನ ಹೋಟೆಲ್‌ನಿಂದು ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ನಿಜವೇ?

- Advertisement -
- Advertisement -

“ಇಟಲಿಯ ಕೋಟ್ಯಾಧಿಪತಿ ಹೋಟೆಲ್ ಮಾಲೀಕನೊಬ್ಬನ ಕುಟುಂಬಿಕರೆಲ್ಲರೂ ಕೊರೊನಾ ವೈರಸ್ ನಿಂದ ಸಾವಿಗೀಡಾಗಿದ್ದಕ್ಕೆ ಹತಾಶನಾಗಿ ತನ್ನ ಕಟ್ಟಡದ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ” ಎಂದು ತಲೆ ಬರಹ ಬರೆದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದ್ದು ಇದರ ಬಗ್ಗೆ “ಭೂಮ್ ಲೈವ್” ಫ್ಯಾಕ್ಟ್ ಚೆಕ್ ನಡೆಸಿದೆ.

ಕನ್ನಡದ ಶೀರ್ಷಿಕೆಯೊಂದಿಗೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಲವಾರು ಜನರು ಫೇಸ್ಬುಕ್ಕಿನಲ್ಲಿ ಈ ವಿಡಿಯೊವನ್ನು #Coronaeffect ಹ್ಯಾಶ್ ಟ್ಯಾಗ್ ನೊಂದಿಗೆ ಶೇರ್ ಮಾಡಿದ್ದಾರೆ.

ಎಂಟರ್ಟೈನ್ಮೆಂಟ್ ಎಂಬ ಪೇಜ್ “ಇಟಲಿಯ ಕೋಟ್ಯಾಧಿಪತಿ ಹೋಟೆಲ್ ಮಾಲೀಕ, ತನ್ನ ಕುಟುಂಬದ ಎಲ್ಲಾ ಸದಸ್ಯರನ್ನು ಕೊರೋನಾ ವೈರಸ್ ನಿಂದ ಕಳೆದುಕೊಂಡು ಹತಾಶನಾಗಿ ತನ್ನ ಕಟ್ಟಡದ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು…” ಎಂಬ ಬರಹದೊಂದಿಗೆ ಈ ವಿಡಿಯೋ ಪ್ರಸಾರ ಮಾಡಿದೆ.

#Coronaeffect ?????

ಇಟಲಿಯ ಕೋಟ್ಯಾಧಿಪತಿ ಹೋಟೆಲ್ ಮಾಲೀಕ, ತನ್ನ ಕುಟುಂಬದ ಎಲ್ಲಾ ಸದಸ್ಯರನ್ನು ಕೊರೋನಾ ವೈರಸ್ ನಿಂದ ಕಳೆದುಕೊಂಡು ಹತಾಶನಾಗಿ ತನ್ನ ಕಟ್ಟಡದ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು…

Posted by Entertainment on Sunday, April 5, 2020

1 ನಿಮಿಷ 59 ಸೆಕೆಂಡುಗಳ ವೀಡಿಯೊವು ಸೈರನ್ ಮತ್ತು ಜನರು ಎತ್ತರದ ಕಟ್ಟಡವನ್ನು ನೋಡುತ್ತಾ ಗದ್ದಲ ಮಾಡುವ ಹಾಗೂ ವ್ಯಕ್ತಿಯೊಬ್ಬ ಕಟ್ಟಡದಿಂದ ಜಿಗಿಯುವುದನ್ನು ತೋರಿಸುತ್ತದೆ. ಅಲ್ಲದೆ ಬೇರೆ ಪೇಜ್ ಗಳಲ್ಲೂ ಇದೇ ವಿಡಿಯೊ ಅದೇ ತಲೆಬರಹದಲ್ಲಿ ಹಂಚಿಕೊಳ್ಳಲಾಗಿದೆ.

ಅದಲ್ಲದೆ ಬೇರೆ ಹಲವು ಜನರೂ ಈ ವಿಡಿಯೋವನ್ನು ಅದೇ ತಲೆ ಬರಹದಲ್ಲಿ ಹಂಚಿದ್ದಾರೆ.

ಫ್ಯಾಕ್ಟ್ ಚೆಕ್:

ಈ ವೀಡಿಯೋ 2015 ರ ವಿಡಿಯೊವಾಗಿದ್ದು, ಅಮೆರಿಕದ ಫಿಲಡೆಲ್ಫಿಯಾದಲ್ಲಿನ ಎತ್ತರದ ಹೋಟೆಲ್‌ನಿಂದ ಉದ್ಯಮಿಯೊಬ್ಬರು ಹಾರಿದ್ದಾಗಿದೆ ಎಂದು ಭೂಮ್ ಲೈವ್ ಇದರ ಮೂಲವನ್ನು ಕಂಡು ಹಿಡಿದು ಹೇಳಿದೆ. ಇದೇ ವೀಡಿಯೊವನ್ನು ಇತರ ಸುಳ್ಳುಗಳಿಗೆ ಕೂಡಾ ಬಳಸಿಕೊಳ್ಳಲಾಗಿತ್ತು.

ಆಗಸ್ಟ್ 2015 ರಲ್ಲಿ Ọmọ Oòdua ಎಂಬ ಫೇಸ್‌ಬುಕ್ ಪುಟದಲ್ಲಿ ಅಪ್‌ಲೋಡ್ ಮಾಡಿದ ದೀರ್ಘ ಆವೃತ್ತಿಯ ವೀಡಿಯೋ ಇದಾಗಿದ್ದು, ವೀಡಿಯೊದಲ್ಲಿನ ಶೀರ್ಷಿಕೆ ಸುಳ್ಳಾಗಿದ್ದರೂ ‘ಗ್ರಾಫಿಕ್: ಗರ್ಭಿಣಿ ಘಾನಿಯನ್ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡುವ ಆಘಾತಕಾರಿ ವಿಡಿಯೋ…” ಎಂದು ಬರೆಯಲಾಗಿದೆ.

Graphic: Pregnant Ghanaian Woman jumps off the Cliff

Suicide Pregnant Ghanaian Jumps BuildingShocking VideoGhanaian Woman jumps off the Cliff as Hubby sleeps with Her Mom. Pregnant Ghanaian Woman Jumps From 40 Storey Building Because Her Husband Was Sleeping With Her Mom and was carrying her husbands child,40 Storey Building jumpingMust she commit suicide?Comment your opinion and share

Posted by Ọmọ Oòdua on Monday, August 10, 2015

ವೀಡಿಯೊದಲ್ಲಿ ವ್ಯಕ್ತಿಯೂ ಕಟ್ಟಡದಿಂದ ಜಿಗಿದ ನಂತರ 49 ಸೆಕೆಂಡುಗಳಲ್ಲಿ, “215-232-2000” ನಂಬರ್ ಇರುವ ಕಾರನ್ನು ನೋಡಬಹುದು.

ಈ ಸಂಖ್ಯೆಯ ಕಾರು ಫಿಲಡೆಲ್ಫಿಯಾ ಪ್ರದೇಶದ್ದಾಗಿದ್ದು, ಈ ಕಾರು ಬಾಡಿಗೆ ಕ್ಯಾಬಿನ ಕಾರಾಗಿದೆ. ( ಕಾರುಗಳ ಬಗ್ಗೆ ಇಲ್ಲಿ ನೋಡಿ PHLcabs )

ನಂತರ ಗೂಗಲ್ ನಲ್ಲಿ ಹುಡುಕಾಟ ನಡೆಸಿದಾಗ – ಎಂಬಸಿ ಸೂಟ್ಸ್ ಹೋಟೆಲಿನ 25 ನೇ ಮಹಡಿಯಿಂದ ಹಾರಿ ವ್ಯಕ್ತಿಯೊಬ್ಬ ಹಾರಿ ಆತ್ಮಹತ್ಯೆ ಮಾಡಿದ ಬಗೆಗಿನ ಪ್ರಕರಣದ ಬಗ್ಗೆ 2015 ಸುದ್ದಿಯರುವ ವರದಿ ಲಭಿಸಿದೆ.

ಸ್ಥಳೀಯ ಮಾಧ್ಯಮವಾದ “ಫಿಲ್ಲಿ ವಾಯ್ಸ್‌”ನಲ್ಲಿ ಮೇ 2, 2015 ರಂದು ಪ್ರಕಟವಾದ ವರದಿಯೊಂದು ಈ ಘಟನೆಯನ್ನು ವಿವರಿಸಿದೆ ಹಾಗೂ ಮೇ 6, 2015 ರಂದು ಪ್ರಕಟವಾದ ಅದರ ಬಗ್ಗೆ ಮುಂದುವರೆದ ವರದಿಯೂ ಹಾರಿದ ವ್ಯಕ್ತಿಯನ್ನು ಉದ್ಯಮಿ ಎಂದು ಗುರುತಿಸಿದೆ.

ವೈರಲ್ ವೀಡಿಯೊದಲ್ಲಿ ಇರುವ ಸ್ಥಳವು ಸರಿಯಾಗಿದೆಯೇ ಎಂದು ಪರಿಶೀಲಿಸಿದಾಗ, ಅದು ಸೆಂಟರ್ ನಗರದಲ್ಲಿರುವ ಎಂಬೆಸಿ ಸೂಟ್ಸ್ ಹೋಟೆಲ್ ಎಂದು ದೃಡಪಟ್ಟಿದೆ.

ಭೂಮ್ ಲೈವ್ ಎಂಬೆಸಿ ಸೂಟ್ಸ್ ಹೋಟೆಲ್ ಅನ್ನು ಸಂಪರ್ಕಿಸಿ, ಘಟನೆ ನಡೆದಿರುವ ಬಗ್ಗೆ ದೃಡಪಡಿಸಿದೆ ಎಂದು ಹೇಳಿದೆ.

ಕೊರೊನಾ ವೈರಸ್ ಬಗ್ಗೆ ದೇಶದಾದ್ಯಂತ ಹಲವಾರು ಸುಳ್ಳುಗಳು ಹರಡುತ್ತಿದೆ. ಸರಿಯಾಗಿ ಗಮನಿಸಿದರೆ ಇಂತಹ ಸುಳ್ಳು ಸುದ್ದಿಗಳನ್ನು ಹರಡುತ್ತಿರುವಲ್ಲಿ ಹೆಚ್ಚಿನವರು ಬಲಪಂಥೀಯರಾಗಿದ್ದಾರೆ ಅಥವಾ ಬಲಪಂಥೀಯ ಗುಂಪಿನಲ್ಲಿ ಗುರುತಿಸಿ ಕೊಂಡವರಾಗಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...