Homeಅಂಕಣಗಳುಮೂರು ಸಾರಿ ಲಡ್ಡು ಹಂಚಲಾಯಿತು; ರೈತರಿಗೆ ಬೂಂದಿ ಕಾಳೂ ಸಿಗಲಿಲ್ಲ

ಮೂರು ಸಾರಿ ಲಡ್ಡು ಹಂಚಲಾಯಿತು; ರೈತರಿಗೆ ಬೂಂದಿ ಕಾಳೂ ಸಿಗಲಿಲ್ಲ

- Advertisement -
- Advertisement -

ಮಗು ಇನ್ನೂ ಹುಟ್ಟೇ ಇಲ್ಲ, ಆದರೆ ಈಗಾಗಲೇ ಮೂರು ಸಲ ಸಿಹಿ ಹಂಚಿಕೊಂಡು ತಿಂದುಬಿಟ್ಟರು. ರೈತರ ಬೆಳೆಗೆ ಸರಿಯಾದ ಬೆಲೆ ನೀಡುವಲ್ಲಿ ಮೋದಿ ಸರಕಾರ ಇದನ್ನೇ ಮಾಡಿದೆ. ಇಲ್ಲಿಯತನಕ ಒಬ್ಬ ರೈತನಿಗೂ ಹೆಚ್ಚಿಸಲಾದ ಬೆಲೆ ಸಿಕ್ಕಿಲ್ಲ. ಹೆಚ್ಚಿನ ರೈತರಿಗೆ ಬೆಲೆ ಸಿಗುವ ಸಾಧ್ಯತೆಯೂ ಕಾಣುತ್ತಿಲ್ಲ. ಆದರೆ ಮೂರು ಬಾರಿ ಚಪ್ಪಾಳೆ ತಟ್ಟಲಾಗಿದೆ, ಅಭಿನಂದನೆಗಳ ಪೋಸ್ಟರ್‍ಗಳು, ಹೋರ್ಡಿಂಗ್‍ಗಳನ್ನು ಹಚ್ಚಲಾಗಿದೆ, ಸಿಹಿ ತಿನ್ನಲಾಗಿದೆ.
ಫೆಬ್ರುವರಿ 1 ರಂದು ಅರುಣ್ ಜೇಟ್ಲಿಯವರು ಈ ‘ಐತಿಹಾಸಿಕ’ ನಿರ್ಣಯದ ಘೋಷಣೆ ಮಾಡಿದಾಗ ಮೊದಲ ಬಾರಿ ಲಡ್ಡೂ ತಿನ್ನಲಾಯಿತು. ವಿತ್ತ ಸಚಿವರು ಕೃಷಿ ವೆಚ್ಚದ ವ್ಯಾಖ್ಯೆಯನ್ನೇ ಬದಲಿಸಿದ ಹಾಗೂ ತಮ್ಮ ಮೂಲ ಆಶ್ವಾಸನೆಯಿಂದ ನುಣುಚಿಕೊಂಡ ಕಹಿ ಸತ್ಯ ಲಡ್ಡೂಗಳ ಸಿಹಿಯಲ್ಲಿ ಮುಚ್ಚಿಹೋಯಿತು. ಜುಲೈ 4 ರಂದು ಸರಕಾರ ಈ ವರ್ಷದ ಮುಂಗಾರು ಬೆಳೆಯ ಬೆಲೆಯಲ್ಲಿ ‘ಐತಿಹಾಸಿಕ’ ವೃದ್ಧಿ ಘೋಷಿಸಿದಾಗ ಎರಡನೇ ಬಾರಿ ಲಡ್ಡೂ ತಿನ್ನಲಾಯಿತು. ಇದಕ್ಕಿಂತ ಹೆಚ್ಚಿನ ಚುನಾವಣೆಯ ಉಂಡೆಗಳನ್ನು ಹಿಂದಿನ ಸರಕಾರ 2009 ರಲ್ಲಿಯೇ ಹಂಚಿತ್ತು ಎನ್ನುವ ಸತ್ಯವೂ ಈ ಲಡ್ಡೂಗಳ ಭಾರದಲ್ಲಿ ಅವಿತುಹೋಯಿತು.
ಕಳೆದ ವಾರ ಸರಕಾರದ ಖರೀದಿಯ ವಾರ್ಷಿಕ ನೀತಿಯನ್ನು ಕ್ಯಾಬಿನೆಟ್ ಘೋಷಿಸಿದಾಗ ಮೂರನೇ ಬಾರಿ ಲಡ್ಡೂ ತಿನ್ನಲಾಯಿತು. ಮತ್ತೆ ಇದನ್ನು ಒಂದು ಹೊಸ ‘ಐತಿಹಾಸಿಕ’ ಘೋಷಣೆಯಂತೇ ದೇಶದ ಎದುರಿಡಲಾಯಿತು. ತನ್ನ ಕಾಯಕದ ಫಲ ಯಾವಾಗ ಸಿಗುವುದೆಂದು ರೈತ ಮಾತ್ರ ಕಣ್ಣು ಬಿಟ್ಟು ಕಾಯುತ್ತಿದ್ದ.
ಎಲ್ಲ ರೈತರು ತಮ್ಮ ಎಲ್ಲಾ ಬೆಳೆಗಳನ್ನು ಎಮ್‍ಎಸ್‍ಪಿ ದರದಲ್ಲಿ ಮಾರಾಟ ಮಾಡುವ ಒಂದು ವ್ಯವಸ್ಥೆ ಹೇಗೆ ಮಾಡಬಹುದು ಎಂಬ ಸಮಸ್ಯೆಗೆ ಹೊಸ ನೀತಿಯಲ್ಲೂ ಯಾವುದೇ ಉತ್ತರವಿಲ್ಲ. ಈಗ ಮೂರು ವಿಧಗಳಲ್ಲಿ ಒಂದು ವಿಧದಲ್ಲಿ ಸರಕಾರೀ ಖರೀದಿ ಆಗಬಹುದು. ಮೊದಲನೆಯದು ಹಳೆಯ ಸರಕಾರೀ ಖರೀದಿಯ ವಿಧ. ಈ ಯೋಜನೆ ಅನುಗುಣವಾಗಿ ರೇಷನ್ ಅಂಗಡಿಗಳಲ್ಲಿ ಮಾರಾಟ ಮಾಡಲು ಸರಕಾರ ಧಾನ್ಯಗಳನ್ನು ಖರೀದಿ ಮಾಡುತ್ತದೆ. ಅಥವಾ ಮೌಲ್ಯ ಸಮರ್ಥನೆ ಯೋಜನೆಯ ಅಡಿಯಲ್ಲಿ ಯಾವುದೇ ಬೆಳೆಯ ಮಾರುಕಟ್ಟೆಯ ಬೆಲೆ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆಯಾದಲ್ಲಿ ಸರಕಾರ ಆ ಬೇಳೆಯನ್ನು ಖರೀದಿ ಮಾಡಲು ಪ್ರಾರಂಭಿಸುತ್ತದೆ. ಏಳು ತಿಂಗಳ ನಂತರ ಎಂದಿನಂತೆಯೇ ಈ ವರ್ಷ ಕೂಡ ಇದೇ ವಿಧಾನವನ್ನು ಅಳವಡಿಸಿಕೊಳ್ಳಲಾಗುವುದು ಎಂದು ಸರಕಾರ ನಿರ್ಣಯಿಸಿದೆ.
ಒಂದೇ ಒಂದು ಬದಲಾವಣೆ ಏನೆಂದರೆ, ಸರಕಾರ ತನ್ನ ಬಜೆಟ್‍ನಲ್ಲಿ ಮಾಡಿದ ಕಟುವ್ಯಂಗ್ಯವನ್ನು ಸುಧಾರಿಸುತ್ತ ಈ ಖರೀದಿಗಾಗಿ 200 ಕೋಟಿಗಳ ಬದಲಾಗಿ ಈಗ ಸುಮಾರು 16,000 ಕೋಟಿ ರೂಪಾಯಿಗಳನ್ನು ನೀಡುವ ನಿರ್ಣಯ ಮಾಡಿದೆ. ಅದರೊಂದಿಗೆ ಸರಕಾರೀ ಖರೀದಿ ಮಾಡುವ ಏಜೆನ್ಸಿಗಳು ಬ್ಯಾಂಕಿನಿಂದ 45,000 ಕೋಟಿ ರೂಪಾಯಿಗಳ ಸಾಲ ಮಾಡಬಹುದು ಎನ್ನುವ ಘೋಷಣೆಯನ್ನೂ ಮಾಡಿದೆ. ಆದರೆ ಇದರಲ್ಲಿ ಸರಕಾರ ಗ್ಯಾರಂಟಿ ಮಾತ್ರ ನೀಡಿದೆ, ತನ್ನ ಬೊಕ್ಕಸದಿಂದ ಒಂದು ರೂಪಾಯಿಯನ್ನೂ ಹಾಕಿಲ್ಲ.
ವಾಸ್ತವದಲ್ಲಿ ಈ ಮೊತ್ತವೂ ಒಂಟೆ ಬಾಯಲ್ಲಿ ಜೀರಿಗೆ ಹಾಕಿದಂತಿದೆ ಏಕೆಂದರೆ, ಸರಕಾರ ಎಲ್ಲಾ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸುವ ಯೋಜನೆಯನ್ನು ಗಂಭೀರವಾಗಿ ಪರಿಗಣಿಸಿದ್ದಲ್ಲಿ ಅದಕ್ಕೆ ಕನಿಷ್ಠ ಒಂದೂವರೆಯಿಂದ ಎರಡು ಲಕ್ಷ ಕೋಟಿ ರೂಪಾಯಿಗಳ ವ್ಯವಸ್ಥೆ ಮಾಡಬೇಕಿತ್ತು. ಸರಕಾರ ಯಾವುದೇ ಬೆಳೆಯ ಸಂಪೂರ್ಣ ಉತ್ಪನ್ನದಲ್ಲಿ ಕೇವಲ 25% ಉತ್ಪನ್ನ ಖರೀದಿಸುವಲ್ಲಿ ಮಾತ್ರ ರಾಜ್ಯ ಸರಕಾರದೊಂದಿಗೆ ಸಹಯೋಗ ಮಾಡುವುದು ಎನ್ನುವ ಸತ್ಯವೂ ಲಡ್ಡೂಗಳ ತಟ್ಟೆಯ ಮುಂದೆ ಮುಚ್ಚಿಹೋಗಿದೆ. ಇನ್ನುಳಿದ 75% ಖರೀದಿ ಮಾಡುವುದು ರಾಜ್ಯಸರಕಾರದ ತಲೆನೋವು ಆಗಿರುತ್ತದೆ. ರಾಜ್ಯ ಸರಕಾರಗಳಲ್ಲಿ ಅಷ್ಟು ದುಡ್ಡು ಇರೋಲ್ಲ, ರೈತರಿಗೆ ಬೆಳೆಯನ್ನು ಖರೀದಿ ಮಾಡಲ್ಲ.
ಅದರ ಬದಲಿಗೆ ಕೇಂದ್ರ ಸರಕಾರ ಪ್ರಾಯೋಗಿಕವಾಗಿ ಎರಡು ಬೇರೇ ವಿಧಾನಗಳ ಘೋಷಣೆ ಮಾಡಿದೆ. ಆದರೆ ಇವೆರಡರಿಂದಲೂ ರೈತರಿಗೆ ಯಾವುದೇ ಲಾಭ ಆಗಲು ಸಾಧ್ಯವಿಲ್ಲ. ಮೊದಲನೇದಂತೂ ಮಧ್ಯಪ್ರದೇಶದಲ್ಲಿ ಸಂಪೂರ್ಣವಾಗಿ ಫೇಲ್ ಆದ ‘ಭಾವಾಂತರ’ ಯೋಜನೆ. ಇದರಲ್ಲಿ ರೈತರು ಭಾರಿ ನಷ್ಟ ಅನುಭವಿಸಬೇಕಾಗಿ ಬಂತು. ಇನ್ನೊಂದೆಡೆ ಈ ಯೋಜನೆಯ ಗರಿಷ್ಠ ಲಾಭ ಪಡೆಯಲು ವ್ಯಾಪಾರಿಗಳು ರಾತ್ರೋರಾತ್ರಿ ಬೆಳೆಗಳನ್ನು ಬೆಲೆ ಇಳಿಸಿಬಿಟ್ಟರು ಹಾಗೂ ನಂತರ ಭಾರೀ ಲಾಭ ಗಳಿಸಿದರು. ಇದನ್ನು ಸುಧಾರಿಸದೇ ಭಾವಾಂತರ ಯೋಜನೆ ದೇಶಾದ್ಯಂತ ಅನುಷ್ಠಾನಗೊಳಿಸಿದರೆ ರೈತರಿಗೆ ನಷ್ಠ ಹಾಗೂ ವ್ಯಾಪಾರಿ ಮತ್ತು ವಂಚಕರಿಗೆ ಲಾಭ ಕಟ್ಟಿಟ್ಟ ಬುತ್ತಿ.
ಮೂರನೇ ವಿಧಾನ, ಸರಕಾರದ ಪರವಾಗಿ ಕನಿಷ್ಠ ಬೆಂಬಲ ಬೆಲೆ ಮೇಲೆ ಖರೀದಿಯನ್ನು ಖಾಸಗೀ ವ್ಯಾಪಾರಿಗಳು ಮಾಡುವುದು. ಖರೀದಿ, ಸಂಸ್ಕರಣೆ, ಶೇಖರಣೆ ಮತ್ತು ಮಾರಾಟ ಇವೆಲ್ಲವೂ ಅವರ ಜವಾಬ್ದಾರಿ ಆಗಿರುತ್ತವೆ. ಸರಕಾರ ಅವರ ಈ ಕೆಲಸಕ್ಕಾಗಿ 15% ವರೆಗೆ ಶುಲ್ಕ ಪಾವತಿಸುತ್ತದೆ. ಆದರೆ, ಪ್ರಶ್ನೆ ಇರುವುದು, ಒಂದು ವೇಳೆ ಬೆಳೆಯ ಮಾರುಕಟ್ಟೆಯ ಬೆಲೆ ಕನಿಷ್ಠ ಬೆಂಬಲ ಬೆಲೆಗಿಂತ ತುಂಬಾ ಕಡಿಮೆ ಇದ್ದಲ್ಲಿ ಯಾವುದೇ ವ್ಯಾಪಾರಿ ಅದನ್ನೇಕೆ ಖರೀದಿಸುತ್ತಾರೆ ಎನ್ನುವುದು. ಇದರ ಬದಲಾಗಿ ಸರಕಾರ ಯಾವುದೇ ವ್ಯಾಪಾರಿ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ಖರೀದಿಸುವುದನ್ನು ಅಪರಾಧ ಎಂದು ಪರಿಗಣಿಸುವಂತೆ ನಿಯಮ ಮಾಡಬೇಕು ಎಂದು ರೈತ ಚಳವಳಿಗಳು ಬೇಡಿಕೆ ಇಟ್ಟಿದ್ದವು. ಇದರ ಬಗ್ಗೆ ಕೇಂದ್ರ ಸರಕಾರ ಮೌನ ತೋರಿದೆ.
ಈಗ ಅನಿಸುವುದೇನೆಂದರೆ, ಈ ಬಾರಿಯೂ ಮತ್ತೊಮ್ಮೆ ಕುರ್ಚಿಗಳು ಲಡ್ಡೂ ತಿಂದು ಹಾಕುತ್ತವೆ ಹಾಗೂ ರೈತ ನೋಡುತ್ತ ನಿಲ್ಲಲಿದ್ದಾನೆ. ಸರ್ಕಾರ ಈ ‘ಐತಿಹಾಸಿಕ’ ನಿರ್ಣಯದ ಘೋಷಣೆ ಮಾಡಿಬಿಟ್ಟೆನೆಂದು ಕೇಂದ್ರ ಸರ್ಕಾರ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡು ಸಂಭ್ರಮ ಆಚರಿಸುತ್ತಿದ್ದಾಗ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಮಂಡಿಗಳಲ್ಲಿ ಹೆಸರುಕಾಳು ಬಂದು ಬಿದ್ದಿತ್ತು. ಸಾಮಾನ್ಯ ಕನಿಷ್ಠ ಬೆಂಬಲ ಬೆಲೆ ಸರ್ಕಾರದ ಪ್ರಕಾರ ಅಧಿಕೃತವಾಗಿ 6975 ಆಗಿದ್ದರೂ, ಮಂಡಿಯ ವೆಬ್‍ಸೈಟುಗಳಲ್ಲಿ ಅದು 3900 ಅಥವಾ 4400 ಎಂದು ಕಾಣಿಸಿಕೊಳ್ಳುತ್ತಾ, ಹೆಸರುಕಾಳಿನ ವಹಿವಾಟು ಅಷ್ಟಕ್ಕೇ ನಡೆದು ಮುಗಿಯಿತು. ಹೆಸರಿನ ಉಂಡೆಗಳಂತೂ ರೈತರ ಪಾಲಿಗೆ ಬಹಳ ಕಹಿಯಾದವು. ಇನ್ನುಳಿದ ಲಡ್ಡುಗಳ ಸಿಹಿಯು ರೈತರ ಮನೆಬಾಗಿಲಿನವರೆಗೆ ತಲುಪಲಿದೆಯೇ?

– ಯೋಗೇಂದ್ರ ಯಾದವ್
ಅನುವಾದ: ರಾಜಶೇಖರ್ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...