Homeಅಂಕಣಗಳುನೂರು ನೋಟ | ಎಚ್.ಎಸ್.ದೊರೆಸ್ವಾಮಿಸರ್ಕಾರ ಮಾಡಬೇಕಾದ್ದನ್ನು ಮಾಡಿ, ಜನರನ್ನೂ ಕ್ರಿಯಾಶೀಲರನ್ನಾಗಿಸುವ ಸಮಯವಿದು

ಸರ್ಕಾರ ಮಾಡಬೇಕಾದ್ದನ್ನು ಮಾಡಿ, ಜನರನ್ನೂ ಕ್ರಿಯಾಶೀಲರನ್ನಾಗಿಸುವ ಸಮಯವಿದು

- Advertisement -
- Advertisement -

ಕೊರೋನಾ ಮಹಾಮಾರಿ ವಿರುದ್ಧ ಸಮರ ಹೂಡಿ ಆಗಿದೆ. ರೋಗದ ಪತ್ತೆಯ ಕೆಲಸವನ್ನು ಇನ್ನೂ ಮೊದಲೇ ಆರಂಭಿಸಬಹುದಿತ್ತು. 40 ಕೋಟಿ ಜನರನ್ನು ಬಡತನದಲ್ಲಿಡಲಾಗಿದೆ. ಇವರಿಗೆ ಯಾವ ಜೀವಭದ್ರತೆಯೂ ಇಲ್ಲ. ಊಟ ಮೊದಲೇ ಇಲ್ಲ. ಇವರು ಹೇಗೆ ಜೀವಿಸಬೇಕು? ವಲಸಿಗ ಕಾರ್ಮಿಕರ ಪರಿಸ್ಥಿತಿಯಂತೂ ಇನ್ನೂ ಘನಘೋರ; ಮಹಮದೀಯರೆ ರೋಗ ಹರಡಲು ಕಾರಣರು ಎಂದು ಜನತೆಯ ಮನಸ್ಸಿನಲ್ಲಿ ವಿಷ ಬಿಜ ಬಿತ್ತಿ ಹಿಂದುರಾಷ್ಟ್ರ ಆಗಬೇಕೆನ್ನುವ ಹುಂಬರು, ತಲೆಕೆಟ್ಟವರಂತೆ ಮಾತನಾಡುತ್ತಾ, ಜನರ ಮನಸ್ಸಿನಲ್ಲಿ ಕೋಮುವ್ಯಾಧಿ ಕೆರಳುವಂತೆ ಹೇಳಿಕೆ ನೀಡುತ್ತಿದ್ದಾರೆ. ಸರ್ಕಾರ ತನ್ನ ಮೌನದ ಮೂಲಕ ಅವರ ನಿಲುವನ್ನು ಸಮರ್ಥಿಸುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಬಿಜೆಪಿ ಸ್ಥಾಪನೆಯ 40ನೇ ವರ್ಷದ ದಿನದಂದೇ ಎಲ್ಲರು ರಾತ್ರಿ ಒಂಭತ್ತು ಘಂಟೆಯಿಂದ 9 ನಿಮಿಷ ಕಾಲ ಮೋಂಬತ್ತಿ ಹತ್ತಿಸಬೇಕೆಂದು ಫರ್ಮಾನ್ ಹೊರಡಿಸುವ ಮೂಲಕ ಕೊರೋನಾದ ದುರುಪಯೋಗ ಮಾಡಿಕೊಂಡದ್ದು ಸರಿಯೇ ಎಂದು ಪ್ರಶ್ನಿಸುವವರಿದ್ದಾರೆ. ಭಾರತದ ಕೊನೇ ಪಕ್ಷ ಹತ್ತು ಕೋಟಿ ಜನ ಆ ದಿನ ಮೋಂಬತ್ತಿ ಹಚ್ಚಿದ್ದರೆ, ಮೋಂಬತ್ತಿಗೆ 20 ಕೋಟಿ ರೂಗಳನ್ನು ವೆಚ್ಚ ಮಾಡಿದಂತಾಯಿತು. ಅದೇ 20 ಕೋಟಿಯನ್ನು ಕೊರೋನಾ ತಡೆಗಟ್ಟುವುದಕ್ಕೆ ಉಪಯೋಗಿಸಬಹುದಿತ್ತು, ಇಲ್ಲವೇ ಒಂದಷ್ಟು ಜನರಿಗೆ ಊಟ ಕೊಡಬಹುದಾಗಿತ್ತಲ್ಲವೇ ಎಂದು ಕೇಳುವವರೂ ಇದ್ದಾರೆ. ಇವೆಲ್ಲಕ್ಕಿಂತ ಮೊದಲು ಕೇಳುವ ಪ್ರಶ್ನೆ ಒಂದು ತಿಂಗಳ ಹಿಂದೆಯೇ ಕೊರೋನಾ ಹರಡುತ್ತಿರುವ ಸುದ್ದಿ ಸರ್ಕಾರಕ್ಕೆ ಗೊತ್ತಾದರೂ ಕೂಡಲೆ ಕ್ರಮ ಕೈಗೊಳ್ಳಲಿಲ್ಲ ಎಂಬುದು. ಇದೆಲ್ಲದಕ್ಕೂ ಮೋದಿ ಅವರ ಉತ್ತರ ‘ದಿವ್ಯಮೌನ’. ಇದು ಎಲ್ಲರಿಗೂ ತಿಳಿದ ವಿಷಯ; ಮೋದಿಜಿ ತಮಗೆ ತೋಚಿದ್ದನ್ನು ಹೇಳುವವರೇ ಹೊರತು ಜನ ಕೇಳಿದ ಪ್ರಶ್ನೆಗೆ ಉತ್ತರ ಕೊಡುವ ಜಾಯಮಾನದವರಲ್ಲ. ತಮಗೆ ಬೇಕಾದರೆ ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿ ಕೇಳಿದ ಪ್ರಶ್ನೆಗೂ ಉತ್ತರ ಕೊಡುತ್ತಾರೆ. ಆದರೆ ಈ ಗಹನ ವಿಚಾರಕ್ಕಲ್ಲ. ಬಿಜೆಪಿ ಸಂಘಪರಿವಾರದ ಕೆಲವರನ್ನು ಸಾಕಿಕೊಂಡಿದ್ದಾರೆ ಮೋದಿ. ಈ ಮತಾಂಧರು ನೂರು ಸಾರಿ ವಿಷಕಾರಿದರೂ ಮೋದಿ ಮತ್ತು ಷಾ ಅವರನ್ನು ಪ್ರಶ್ನಿಸುವುದಿಲ್ಲ. ಅದಕ್ಕೆ ಕಾರಣ ಅವರೆಲ್ಲ Hidden Agendaಗೆ ಅನುಗುಣವಾಗಿ ಮಾತನಾಡುವ (ಅಪ) ಪ್ರಚಾರಕರು!

ಇವೆಲ್ಲ ಒತ್ತಟ್ಟಿಗಿರಲಿ. ಈಗ ಸರ್ಕಾರ ಮಾಡಬೇಕಾದ್ದೇನು? ನಾವು ಅದನ್ನು ಕುರಿತು ಯೋಚನೆ ಮಾಡುವ. ಎಂದಿನಂತೆಯೇ ನಾವು ಮುಂದೆಯೂ People’s curfew, 144ನೇ ಸೆಕ್ಷನ್ ಜಾರಿ ಇವುಗಳನ್ನೇ ಮುಂದುವರೆಸಿಕೊಂಡೇ ಹೋಗುವುದೇ? ಇಲ್ಲವೇ ಜನರಿಗೆ ರೋಗದ ಬಗ್ಗೆ ತಿಳುವಳಿಕೆ ಕೊಟ್ಟು, ಅವರನ್ನು ಜಾಗೃತಗೊಳಿಸುವುದೇ? ಇದುವರೆಗೆ ಸರ್ಕಾರ ಮಾಡಿರುವುದೆಲ್ಲ ಇದನ್ನೆ. ಇದು ಮಾಬಾಪ್ ಸರ್ಕಾರ ಎಂದು ಜನ ಭಾವಿಸಿದ್ದಾರೆ. ರೋಗ ಬಂದರೆ ಸರ್ಕಾರ ಅದನ್ನು ತಡೆ ಹಿಡಿಯುತ್ತದೆ. ನಾವ್ಯಾಕೆ ಅದಕ್ಕೆ ತಲೆ ಕೆಡಿಸಿಕೊಳ್ಳಬೇಕು ಎಂದುಕೊಂಡು ಜನ ಜಡರಾಗುತ್ತಿದ್ದಾರೆ. ಬಿಹಾರದಲ್ಲಿ ಗಂಗಾ ನದಿ ಪ್ರವಾಹ ಬಂದು ಕೊಚ್ಚಿಕೊಂಡು ಹೋಗುವ ಸೂಚನೆ ಇದ್ದಾಗಲೂ ಜನ ಸಿನಿಮಾಕ್ಕೆ ಹೋಗಿ ಕೂತಿರುತ್ತಾರಂತೆ. ಮಾಬಾಪ್ ಗೌರ್ನಮೆಂಟ್ ನಮ್ಮನ್ನು ಪ್ರವಾಹದಿಂದ ರಕ್ಷಣೆ ಮಾಡುತ್ತದೆ ಎಂಬ ನಂಬಿಕೆಯಿಂದ. ಪ್ರವಾಹ ಬರುವುದಿದ್ದರೆ ಎಲ್ಲಿಗೆ ಹೋಗಬೇಕು? ಮರ ಹತ್ತಿ ಕೂಡೋಣವೇ, ಗಂಗಾ ನದಿಯಿಂದ ದೂರವಿರುವ ಗ್ರಾಮಕ್ಕೆ ಹೋಗಿ ತಾತ್ಕಾಲಿಕವಾಗಿ ರಕ್ಷಣೆ ಪಡೆಯಬೇಕೇ ಎಂದು ಹಿಂದಿನ ದಿನಗಳಲ್ಲಿ ಜನ ಯೋಚಿಸುತ್ತಿದ್ದರು. ಈಗಿನ ಜನ ಸರ್ಕಾರ ನಮ್ಮ ರಕ್ಷಣೆ ಮಾಡುತ್ತದೆ, ನಾವೇಕೆ ತಲೆ ಕೆಡಿಸಿಕೊಳ್ಳಬೇಕು ಎನ್ನುತ್ತಾರೆ.

ಸರ್ಕಾರ ತಾನೇನೆಲ್ಲಾ ಮಾಡಬಹುದೋ ಅದನ್ನೆಲ್ಲಾ ಮಾಡಿ ಇನ್ನಾದರೂ ಜನತೆಗೆ ‘ನಿಮ್ಮ ಜವಾಬ್ದಾರಿ ನಿರ್ವಹಿಸಿ, ರೋಗ ಹರಡದಂತೆ ತಡೆಗಟ್ಟಲು ನೀವೇನೂ ಮಾಡಬೇಕೋ ವಿಚಾರ ಮಾಡಿ’ ಎಂದು ತಿಳಿಸಬೇಕು. ಕರ್ತವ್ಯ ನಿರ್ವಹಣೆ ಮಾಡಿ ಎಂದು ತಿಳುವಳಿಕೆ ನೀಡಿ ಜನರನ್ನು ಜವಾಬ್ದಾರಿಯುತ ಪ್ರಜೆಗಳನ್ನಾಗಿ ಪರಿವರ್ತಿಸಬೇಕು. ಈಗ ಜನರನ್ನ ಮೋದಿ ವಿಚಾರ ಶೂನ್ಯರನ್ನಾಗಿ ಮಾಡಿದೆ. ಬೇಜವಾಬ್ದಾರಿಯಿಂದ ನಡೆಸಿಕೊಳ್ಳಲು ಬೇಕಾದ ವಾತಾವರಣ ಸೃಷ್ಟಿ ಮಾಡಿದೆ. ಇನ್ನಾದರೂ ಎಚ್ಚೆತ್ತು ಸರ್ಕಾರ ಸಮಾಜದ ವಿಚಾರವಂತರು ಏನು ಮಾಡಬೇಕು? ಕಾರ್ಮಿಕರು ಏನು ಮಾಡಬೇಕು, ವಿದ್ಯಾರ್ಥಿಗಳು ಯುವಕರು ಏನು ಮಾಡಬಹುದು? ಜನಸಾಮಾನ್ಯರು ಅನುಸರಿಸಬೇಕಾದ ನಿಯಮಗಳೇನು? ಎಂಬುದನ್ನು ಕುರಿತು ಅವರಿಗೆಲ್ಲ ಹೇಳಬೇಕು. ರಚನಾತ್ಮಕ ಸಲಹೆಗಳನ್ನು ಅವರಿಗೆ ನೀಡಬೇಕು. ಒಟ್ಟಿನಲ್ಲಿ ಜನಜಾಗೃತಿ ಮೂಡಿಸಿ ಅವರೆಲ್ಲ ಜವಬ್ದಾರಿಯಿಂದ ವರ್ತಿಸುವಂತೆ ಪ್ರೇರಣೆ ನೀಡಬೇಕು.


ಇದನ್ನು ಓದಿ: ಸಂಘ ಪರಿವಾರಕ್ಕೆ ಎಚ್.ಎಸ್.ದೊರೆಸ್ವಾಮಿಯವರೇ ಟಾರ್ಗೆಟ್‌ ಏಕೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಒಳ್ಳೆ ಉಡುಪು, ಮೇಕಪ್…ಅಪರೂಪಕ್ಕೊಮ್ಮೆ ಬೆಚ್ಚಿಬೀಳಿಸುವ ಮವ್ನಿ ಬಾಬಾನಂತೆ…ಅಬ್ಬಾ! ನಾಡಿಗೆ ಉಳಿಗಾಲವುಂಟೆ!

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...