Homeಕವನಮತ್ತೆ ಹುಟ್ಟಿಬಾ ಅಣ್ಣ ಬಸವಣ್ಣ .......

ಮತ್ತೆ ಹುಟ್ಟಿಬಾ ಅಣ್ಣ ಬಸವಣ್ಣ …….

- Advertisement -
- Advertisement -

ಕತ್ತಲಾಗಿದೆ ಜಗವು
ಜ್ಞಾನದ ದೀವಿಗೆ ಹಿಡಿದು
ಮತ್ತೆ ಹುಟ್ಟಿ ಬಾ
ಅಣ್ಷ ಬಸವಣ್ಣ

ಅಕ್ಷಯ ತೃತೀಯ ಗಳಿಗೆ,
ಒಳ್ಳೆಯ ಗಳಿಗೆಯಾದುದೇ
ನಿನ್ನ ಜನನದಿಂದ,
ಈ ಮಿತಿಗೆ ಮಾಡುವ
ಕಾರ್ಯ ಶುಭವೆಂದು
ಬಡಿದಾಡುವ ಜನ,
ನಿನ್ನ ತತ್ವಗಳನೆಲ್ಲಾ
ಗಾಳಿಗೆ ತೂರಿಹರು,

ತಿಳಿಹೇಳಲು
ಮತ್ತೆ ಹುಟ್ಟಿ ಬಾ
ಅಣ್ಣ ಬಸವಣ್ಣ……

ಇಂದೊಂದು ದಿನ
ಸರಕಾರಿ ರಜೆ ಘೋಷಿಸಿ,
ನಿನ್ನ ಪಟಕೊಂದು
ಹೂವಿನ ಹಾರ ಹಾಕಿ,
ತರಾತುರಿಯ ಮೆರವಣಿಗೆಯಲಿ
ನಿನ್ನ ನೆಡೆದಾಡಿಸಿ,
ಬಾಯ್ತುಂಬಾ
ನಿನ್ನ ಹೊಗಳಿ ಉಂಡು
ಮಲಗುವವರಿಗೆ,

ತಿಳಿಹೇಳಲು
ಮತ್ತೆ ಹುಟ್ಟಿ ಬಾ
ಅಣ್ಣ ಬಸವಣ್ಣ……

ಸಭೆ-ಸಮಾರಂಭಗಳ
ವೇದಿಕೆಯಲಿ,
ಸಹಸ್ರಾರು ಜನರೆದುರಿಗೆ,
ಕಂಠಪಾಠ ಮಾಡಿದ
ನಾಲ್ಕು ವಚನಗಳ ವಾಚಿಸಿ,
ಮರಳಿ ಮಣ್ಣು ತಿನ್ನುವ
ಕೆಲಸ ಮಾಡುವವರ
ಕೆಲ ಜನರಿಗೆ,

ತಿಳಿಹೇಳಲು
ಮತ್ತೆ ಹುಟ್ಟಿ ಬಾ
ಅಣ್ಣ ಬಸವಣ್ಣ……

ನೀನೇ ಒಂದು ಧರ್ಮ
ನಿನ್ನ ಹೆಸರಿನಾ
ಧರ್ಮದಾ ನೆರಳಿನಲಿ,
ಅಧರ್ಮ ಮಾಡುವಾ
ಕೆಲವು ಕದನಗಳು
ಹಗಲಿರುಳು ನೆಡೆಯುತ್ತಿವೆ,

ತಿಳಿಹೇಳಲು
ಮತ್ತೆ ಹುಟ್ಟಿ ಬಾ
ಅಣ್ಣ ಬಸವಣ್ಣ……

ಆಚರಣೆ ಯಾವುದಾದರೇನು,
ವಿಚಾರ ವಿಲ್ಲದೇ ಫಲವೇನು,
ಮೌಢ್ಯಗಳ ದಿಕ್ಕರಿಸಿದ
ಎಲ್ಲರ ಭಾವಗಳ ಭಕುತಿಗೆ
ಮುಕುಟವಿಟ್ಟ ,
ನಿನ್ಮ ಭಾವಕೆ ಬೆಂಕಿ ಹಚ್ಚುವ
ಜನರಿಹರು,

ತಿಳಿಹೇಳಲು
ಮತ್ತೆ ಹುಟ್ಟಿ ಬಾ
ಅಣ್ಣ ಬಸವಣ್ಣ……

ನುಡಿ-ನೆಡೆಯ ಹೆಜ್ಜೆಗಳಾ
ಗುರುತು,
ನಿನ್ನ ವಚನದಾ ಗುಟ್ಟು,
ವಚನ ವಾಚನವ
ಮಾಡುವವರೆಲ್ಲರೂ,
ಪಾಲಿಸುವರಾ ಎಂದು,

ತಿಳಿಹೇಳಲು
ಮತ್ತೆ ಹುಟ್ಟಿ ಬಾ
ಅಣ್ಣ ಬಸವಣ್ಣ……

ಮಾಧ್ಯಮಗಳ ಬರಾಟೆಯಿಲ್ಲ,
ಸಾಮಾಜಿಕ ಜಾಲತಾಣದಾ
ಅಬ್ಬರವಿಲ್ಲ,
ಮೈಕು- ಮೋಟಾರು ಗಾಡಿಗಳ
ಗಲಾಟೆಯಿಲ್ಲದೇ,
ಹೇಗೆ ಸೇರಿಸಿದೆ ಎಣಕೆಯಿಲ್ಲದಾ
ಶರಣ ಗಣಗಳನು,
ಅದರ ಗುಟ್ಟು,

ತಿಳಿಹೇಳಲು
ಮತ್ತೆ ಹುಟ್ಟಿ ಬಾ
ಅಣ್ಣ ಬಸವಣ್ಣ……

ಜಾತಿ-ಧರ್ಮಗಳ ದೊಂಬಿಯಲಿ
ನಿತ್ಯವೂ ಮಾರಣ ಹೋಮ,
ಅಧಿಕಾರದಾ ಹಪಹಪಿಗೆ
ಅಂಧಕಾರ ಮಾಡಿಹರು ನಾಡನ್ನು,
ಅರಿವಿನಾ ದೀವಿಗೆ ಹಿಡಿದು
ನಮ್ಮನ್ನು ರಕ್ಷಿಸಿ,
ಫಾತುಕರ ಮನಕೆ

ತಿಳಿಹೇಳಲು
ಮತ್ತೆ ಹುಟ್ಟಿ ಬಾ
ಅಣ್ಣ ಬಸವಣ್ಣ……

  • ಶೈಲಜಾ ಹಿರೇಮಠ, ಗಂಗಾವತಿ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...