Homeಮುಖಪುಟವಲಸೆ ಕಾರ್ಮಿಕರನ್ನು ತಮ್ಮ ಊರುಗಳಿಗೆ ಹೋಗದಂತೆ ತಡೆಯುತ್ತಿರುವ ಸರ್ಕಾರದ ಕ್ರೌರ್ಯದ ಗಣಿತ: ಶಿವಸುಂದರ್‌ 

ವಲಸೆ ಕಾರ್ಮಿಕರನ್ನು ತಮ್ಮ ಊರುಗಳಿಗೆ ಹೋಗದಂತೆ ತಡೆಯುತ್ತಿರುವ ಸರ್ಕಾರದ ಕ್ರೌರ್ಯದ ಗಣಿತ: ಶಿವಸುಂದರ್‌ 

- Advertisement -
- Advertisement -

ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಕರ್ನಾಟಕ ಸರ್ಕಾರ ನಿಗದಿತ ಬಸ್‌ ದರಕ್ಕಿಂತ ಮೂರು ಪಟ್ಟು ಹೆಚ್ಚುಮಾಡಿತ್ತು. ಇದರ ಕುರಿತು ಆಕ್ರೋಶ ಬಂದ ನಂತರ ಆ ನಿರ್ಧಾರವನ್ನು ಸರ್ಕಾರ ವಾಪಸ್ ಪಡೆದುಕೊಂಡಿದೆ. ಇದರ ಕುರಿತಾಗಿ ಶಿವಸುಂದರ್‌ರವರು ವಿವರವಾದ ವರದಿ ಬರೆದಿದ್ದಾರೆ. ಅದರ ಪೂರ್ಣಪಾಠ ಕೆಳಗಿನಂತಿದೆ.

ನಿನ್ನೆ ಮೇ ದಿನ. ಅದರ ಬಹುಮಾನವೆಂಬಂತೆ ವಲಸೆ ಕಾರ್ಮಿಕರು ತಮ್ಮಊರುಗಳಿಗೆ ಹೋಗಲು ಉಚಿತವಾಗಿ KSRTC ಸಾರಿಗೆ ಕಲ್ಪಿಸುತ್ತೇವೆಂದು ಕರ್ನಾಟಕದ ಬಿಜೆಪಿ ಸರ್ಕಾರ ಹೇಳಿತ್ತು. ಆದರೆ ಆಗುತ್ತಿರುವುದೇ ಬೇರೆ..

ಕಳೆದರಡು ತಿಂಗಳಿಂದ ಕೂಲಿ ಇರಲಿ ಹೊಟ್ಟೆಪಾಡಿಗು ಗತಿ ಇಲ್ಲದೆ ತತ್ತರಿಸುತ್ತಿರುವ ವಲಸೆ ಕೂಲಿಗಳಿಂದ KSRTC ಮೂಲಕ ಸರ್ಕಾರ ಮೂರುಪಟ್ಟು ಹೆಚ್ಚಿನ ದರವನ್ನು ವಸೂಲಿ ಮಾಡಲು ಮುಂದಾಗಿದೆ. ಅದಕ್ಕೆ ಮುಂದೊಡ್ಡುತ್ತಿರುವ ನೆಪ ಕೋವಿಡ್ ಮುನ್ನೆಚ್ಚರಿಕೆ.

ಅಂದರೆ ಕೋವಿಡ್ ಕಾರಣದಿಂದ ಬಸ್ಸೊಳಗೆ ದೈಹಿಕ ಅಂತರವನ್ನು ಕಾಪಾಡಿಕೊಳ್ಳುವ ಸಲುವಾಗಿ 52 ಸೀಟುಗಳ ಬಸ್ಸಿನಲ್ಲಿ ಕೇವಲ 30 ಪ್ರಯಾಣಿಕರನ್ನು ಮಾತ್ರ ಕೊಂಡೊಯ್ಯಬೇಕಿದೆ. . ಹೀಗಾಗಿ ಉಳಿದ ಸೀಟುಗಳ ಟಿಕೇಟಿನ ಹೊರೆಯನ್ನು ಸರ್ಕಾರ ಪ್ರಯಾಣ ಮಾಡುವ ಸಂತ್ರಸ್ತ ವಲಸೆ ಕಾರ್ಮಿಕರ ಮೇಲೆ ಹಾಕುತ್ತಿದೆ. ಆದರಿಂದಲೇ ರೂಟ್ ಬಸ್ಸುಗಳನ್ನು ಬಿಡದೆ ಪ್ರಯಾಣದ ಗುತ್ತಿಗೆಯ ಮೇಲೆ ಬಸ್ಸನ್ನು ನೀಡುತ್ತಿದೆ.

ತಮ್ಮದಲ್ಲದ ತಪ್ಪಿಗೆ ಇನ್ನಿಲ್ಲದ ಶಿಕ್ಷೆಯನ್ನು ಅನುಭವಿಸುತ್ತಿರುವ ವಲಸೆ ಕಾರ್ಮಿಕರನ್ನು ಒಂದು ನಾಗರಿಕ ಸರ್ಕಾರ ಪುಕ್ಕಟೆಯಾಗಿ ಅವರವರ ಊರಿಗೆ ತಲುಪಿಸಬೇಕಿತ್ತು. ಆದರೆ ಇದು ಹೃದಯಹೀನ ಸರ್ಕಾರ.

ಮತ್ತೀಗ ಈ ಸಂದರ್ಭದಲ್ಲೂ ಹೇಗೆ ರಣಹದ್ದುಗಳಂತೆ ವಲಸೆ ಕಾರ್ಮಿಕರನ್ನು ಸುಲಿಯುತ್ತಿದೆ ಎಂಬುದು ಈ ಸರಳ ಲೆಕ್ಕಾಚಾರ ನೋಡಿದರೆ ಅರ್ಥವಾಗುತ್ತದೆ:

ಬೆಂಗಳೂರಿನಲ್ಲಿ ಒಂದು ಅಂದಾಜಿನ ಪ್ರಕಾರ 60 ಲಕ್ಷಕ್ಕೂ ಹೆಚ್ಚು ಅಸಂಘಟಿತ ವಲಯದ ಕಾರ್ಮಿಕರಿದ್ದಾರೆ. ಅವರಲ್ಲಿ 28 ಲಕ್ಷ ಜನ ಕಟ್ಟಡ ಹಾಗು ಇತರ ನಿರ್ಮಾಣ ಕಾಮಗಾರಿಗಳಲ್ಲಿ (Building And Other Construction Workers- BOCW) ಕೆಲಸ ಮಾಡುವ ಕಟ್ಟಡ ಕಾರ್ಮಿಕರು.

ಈ ಕಟ್ಟಡ ವಲಯದ ದಿನಗೂಲಿ ಕಾರ್ಮಿಕರ ಕಲ್ಯಾಣಕ್ಕಾಗಿ 1994ರಲ್ಲಿ ಒಂದು ಕಾಯಿದೆಯು ರೂಪಿತವಾಯಿತು. ಅದಕ್ಕೆ ಸಂಬಂಧಪಟ್ಟ ನೀತಿ ನಿಯಮಾವಳಿಗಳನ್ನು ಕರ್ನಾಟಕ ಸರ್ಕಾರವು 2007ರಲ್ಲಿ ರೂಪಿಸಿತು.

ಈ ಕಾಯಿದೆಯಡಿ, ನಿರ್ಮಾಣವಾಗುತ್ತಿರುವ ಎಲ್ಲಾ ಕಟ್ಟಡ ಕಾಮಗಾರಿಗಳ ಮೇಲೆ ಶೇ. 1 ರಷ್ಟು ಸೆಸ್ ಅನ್ನು ವಿಧಿಸಿ ಅದರಿಂದ ಸಂಗ್ರಹವಾಗುವ ಹಣದಿಂದ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿ ಯನ್ನು ಸ್ಥಾಪಿಸಲಾಯಿತು.

ಈ ಹಣವನ್ನು ಕಟ್ಟಡ ಕಾರ್ಮಿಕರ ಸಂಕ್ಷೇಮ, ವೈದ್ಯಕೀಯ, ಶಿಕ್ಷಣ , ಮರಣ, ವಿವಾಹ, ಕೌಶಲ್ಯ ತರಬೇತಿ ಹಾಗು ಅಪಘಾತ ಪರಿಹಾರಗಳಿಗಾಗಿ ವಿನಿಯೋಗಿಸಬೇಕೆಂದು ಕಾನೂನು ಮಾಡಲಾಯಿತು. ಆದರೆ ಇದರ ಸೌಲಭ್ಯ ಪಡೆಯಬೇಕೆಂದರೆ ಕಟ್ಟಡ ಕಾರ್ಮಿಕರು ಇದರಡಿ ನೋಂದಾಯಿಸಿಕೊಂಡಿರಬೇಕು.

ಆದರೆ ಬಹುಪಾಲು ಕಟ್ಟಡ ಕಾರ್ಮಿಕರು ವಲಸೆ ಕಾರ್ಮಿಕರಾಗಿದ್ದು ಅನ ಕ್ಷರಸ್ಥರು ಆಗಿರುವುದರಿಂದ ಶೇ. 75 ಭಾಗ ಕೂಲಿಗಳು ನೋಂದಾಯಿಸಿಕೊಂಡಿಲ್ಲ. ಈ ಯೋಜನೆಗಳ ಅರಿವು ಅವರಿಗಿಲ್ಲ. ಹೀಗಾಗಿಯೇ ಇದರಲ್ಲಿ ಸಂಗ್ರಹವಾಗಿರುವ ಶೇ. 90 ರಷ್ಟು ಹಣ ವ್ಯಯವಾಗುವುದೇ ಇಲ್ಲ.

ಇವತ್ತಿನ ಕೋವಿಡ್ ಸಂದರ್ಭದಲ್ಲಿ ಹಾಗು ವಲಸೆ ಕಾರ್ಮಿಕರು ಊರಿಗೆ ಹೋಗಲಾಗದೇ ಸಂಕಷ್ಟ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಈ ಅನ್ಯಾಯ ಇನ್ನಷ್ಟು ಅಮಾನುಷವಾಗಿ ನಡೆಯುತ್ತಿದೆ.

ಉದಾಹರಣೆಗೆ: ಕರ್ನಾಟಕದಲ್ಲಿ ಬಹುಪಾಲು ವಲಸೆ ಕಾರ್ಮಿಕರು ಕೆಲಸಮಾಡುವುದು ಕಟ್ಟಡ ಹಾಗು ಇತರ ನಿರ್ಮಾಣ ಕ್ಷೇತ್ರಗಳಲ್ಲಿ. 2019-20ರ ವೇಳೆಗೆ ಕರ್ನಾಟಕದಲ್ಲಿ ಕಟ್ಟಡ ಹಾಗು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ನಿಧಿಯಲ್ಲಿ 8000 ಕೋಟಿ ರು. ಹಣ ಕೊಳೆಯುತ್ತಾ ಬಿದ್ದಿತ್ತು

ಕಟ್ಟಡ ಕಾರ್ಮಿಕರ ಸಂಕಷ್ಟಗಳನ್ನೂ ಬಗೆಹರಿಸಲೆಂದೇ ತಾನೇ ಈ ಹಣ ಇರುವುದು? ಹಾಗಿದ್ದಲ್ಲಿ ತಮ್ಮತಮ್ಮ ಊರಿಗೆ ಹೋಗಲು ಉಚಿತವಾಗಿ ಬಸ್ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಸರ್ಕಾರವು ಈ ಹಣವನ್ನು ಬಳಸಿಕೊಳ್ಳಬಹುದಲ್ಲಾ? ಅದಕ್ಕೆ ಎಷ್ಟು ಖರ್ಚಾಗಬಹುದು?

ಈಗ ಸರ್ಕಾರದ ಲೆಕ್ಕಾಚಾರದ ಪ್ರಕಾರ ಅಂದಾಜು ಒಂದು. ಲಕ್ಷ ವಲಸೆ ಕಾರ್ಮಿಕರಿಗೆ ವಸತಿ ಮತ್ತು ಆಹಾರ ವನ್ನು ಒದಗಿಸಲಾಗುತ್ತಿದೆ. ಅವರೆಲ್ಲರೂ ಊರಿಗೆ ಹೋಗಿ ಬದುಕು ಕಂಡುಕೊಳ್ಳಲು ಬಯಸುತ್ತಿರುತ್ತಾರೆ. ಇದರ ಜೊತೆಗೆ ಸರ್ಕಾರದ ಪರಿಹಾರ ವ್ಯಾಪ್ತಿಯಲ್ಲಿ ರದ ಇನ್ನು ಲಕ್ಷಾಂತರ ವಲಸೆ ಕಾರ್ಮಿಕರು ಊರಿಗೆ ಹೋಗಲು ತವಕಿಸುತ್ತಿದ್ದಾರೆ. ಹೀಗಾಗಿ ಅವರ ಸಂಖ್ಯೆ ಹೆಚ್ಚೆಂದರೆ 5 ಲಕ್ಷ ಇರುತ್ತದೆ ಎಂದಿಟ್ಟುಕೊಳ್ಳೋಣ.

KSARTC ಯ ಒಂದು ಕರ್ನಾಟಕ ಸಾರಿಗೆ ಬಸ್ಸನ್ನು ಬಾಡಿಗೆಗೆ ತೆಗೆದುಕೊಂಡರೆ ಒಂದು ಕಿಮೀ ಗೆ 37 ರು. ಮತ್ತು ಟೋಲ್ ಶುಲ್ಕ ತಲಾ ರು. 2 ಸೇರಿ ಒಟ್ಟು ಒಂದು ಕಿಮೀಗೆ 39 ರೂಗಳಾಗುತ್ತದೆ.

ಈಗ ಬೆಂಗಳೂರಿನಿಂದ ಬೀದರ್ 700 ಕಿಮಿ ದೂರದಲ್ಲಿದೆ. ಬೆಳಗಾವಿ 600, ರಾಯಚೂರು 450, ಕೋಲಾರ 70 ಕಿಮಿ ದೂರ. ಹೀಗಾಗಿ ಬೆಂಗಳೂರಿನಲ್ಲಿರುವ ವಲಸೆ ಕಾರ್ಮಿಕರ ಊರು ಬೆಂಗಳೂರಿನಿಂದ ಸರಾಸರಿ 500 ಕಿಮಿ ದೂರದಲ್ಲಿದೆ ಎಂದಿಟ್ಟುಕೊಳ್ಳೋಣ. ಹೀಗಾಗಿ ವಲಸೆ ಕಾರ್ಮಿಕರನ್ನು ಅವರ ಊರಿಗೆ ಬಿಟ್ಟು ಬರಲು ಒಟ್ಟು 1000 ಕಿಮಿ ಪ್ರಯಾಣವಾಗುತ್ತದೆ. KSRTC ಯ ಕರ್ನಾಟಕ ಸಾರಿಗೆ ಬಸ್ ಪ್ರಯಾಣ ದರ ಮೇಲೆ ಹೇಳಿದಂತೆ ಕಿಮೀಗೆ 39ರು.ಗಳಂತೆ 1000 ಕಿಮೀಗೆ 39000 ರು.ಗಳಾಗುತ್ತದೆ .

ಕೋವಿಡ್ ಮುನ್ನೆಚ್ಚರಿಕೆಯ ಕಾರಣದಿಂದ ದೈಹಿಕ ಅಂತರ ಕಾಪಾಡಿಕೊಳ್ಳಲು ಒಂದು ಬಸ್ಸಿನಲ್ಲಿ 52 ಜನರ ಬದಲು 30 ಜನರೇ ಪ್ರಯಾಣಿಸುತ್ತಾರೆ ಎಂದಿಟ್ಟುಕೊಳ್ಳೋಣ. ಆಗ ಒಂದು ಲಕ್ಷ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲು 3,300 ಬಸ್ಸುಗಳು ಬೇಕಾಗುತ್ತದೆ.

ಆಗ ಒಂದು ಬಸ್ಸಿಗೆ 39,000 ರು.ನಂತೆ ಒಂದು ಲಕ್ಷ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲು ಬೇಕಾದ 3,300 ಬಸ್ಸುಗಳಿಗೆ ಬೇಕಾಗುವುದು ಕೇವಲ 13 ಕೋಟಿ ರು.ಗಳು ಮಾತ್ರ.

ಈ ಲೆಕ್ಕಾಚಾರದಂತೆ ಎಲ್ಲಾ ಐದು ಲಕ್ಷ ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ತಲುಪಿಸಲು ಬೇಕಾಗುವುದು 65 ಕೋಟಿ ರು. ಗಳು ಮಾತ್ರ !!

ಇದು ವಲಸೆ ಕಾರ್ಮಿಕರ ಸಂಕ್ಷೇಮ ನಿಧಿಯಲ್ಲಿ ಬಳಸದೆ ಕೊಳೆಯುತ್ತಿರುವ 8000 ಕೋಟಿಯ ಶೇ. 1 ಕ್ಕಿಂತ ಕಡಿಮೆ!!!

ಹೀಗೆ ಸರ್ಕಾರ ಬೇರೆ ಯಾವುದೇ ಹಣವನ್ನು ವೆಚ್ಚ ಮಾಡದೆ ಕಾರ್ಮಿಕರ ಸಂಕ್ಷೇಮಕ್ಕೆಂದೇ ಕೂಡಿಟ್ಟಿರುವ ಹಣದ ಅತ್ಯಲ್ಪ ಪಾಲನ್ನು ಅವರಿಗೆಂದೇ ವೆಚ್ಚ ಮಾಡಿದರು ಎಲ್ಲಾ ಕಾರ್ಮಿಕರನ್ನು ಉಚಿತವಾಗಿ ಊರಿಗೆ ತಲುಪಿಸಬಹುದು.

ಆದರೂ ಸರ್ಕಾರವು ಏಕೆ ಕಾರ್ಮಿಕರ ದುಡ್ಡನು ಕಾರ್ಮಿಕರಿಗೆ ವೆಚ್ಚ ಮಾಡದೆ ಉಲ್ಟಾ ಅವರಿಂದಲೇ ಮೂರುಪಟ್ಟು ದುಡ್ಡನ್ನು ಹೀರುತ್ತಿದೆ??

ಇದಕ್ಕೆ ಎರಡು ಅಮಾನುಷ ಹಾಗು ದುಷ್ಟ ಕಾರಣಗಳಿವೆ..

ಮೊದಲನೆಯದಾಗಿ ಸರ್ಕಾರದ ಕೆಟ್ಟ ಆರ್ಥಿಕ ನೀತಿಗಳಿಂದಾಗಿ , ಕೇಂದ್ರ ಸರ್ಕಾರದ ಅಸಹಕಾರಿ ಧೋರಣೆಯಿಂದಾಗಿ ಹಾಗು ಇದೀಗ ಕೋವಿಡ್ ಲಾಕ್ದೌನಿನಿಂದಾಗಿ ಮತ್ತು ಕೇಂದ್ರ ವು ರಾಜ್ಯದ ತೆರಿಗೆ ಪಾಲಿನ ಪಾಲಿನ ಹಣವನ್ನು ಬಿಡುಗಡೆ ಮಾಡದಿರುವುದರಿಂದಾಗಿ ಕರ್ನಾಟಕ ಸರ್ಕಾರದ ಬಳಿ ಸರ್ಕಾರ ನಡೆಸುವುದಕ್ಕಿರಲಿ ಕೋವಿಡ್ ವಿರುದ್ಧದ ಹೋರಾಟಕ್ಕೆ ಬೇಕಾದ ಅಗತ್ಯ ವೆಚ್ಚಗಳನ್ನು ಮಾಡುವುದಕ್ಕೂ ಹಣವಿಲ್ಲ.

ಈ ಬಿಕ್ಕಟ್ಟಿನಿಂದ ಪಾರಾಗಲು ದುಷ್ಟ ಕೇಂದ್ರ ಸರ್ಕಾರ ಮೊನ್ನೆ ಒಂದು ಸುತ್ತೋಲೆಯನ್ನು ಹೊರಡಿಸಿದೆ.

ಅದರ ಪ್ರಕಾರ ಕರ್ನಾಟಕ ರಾಜ್ಯ ಸರ್ಕಾರವು ಕಟ್ಟಡ ಕಾರ್ಮಿಕರ ನಿಧಿಯಲ್ಲಿರುವ ಕಾರ್ಮಿಕರಿಗೆ ಸೇರಬೇಕಿರುವ 8000 ಕೋಟಿ ಹಣವನ್ನು ಕೋವಿಡ್ ಹಾಗು ಇತರ ಬಾಬತ್ತುಗಳಿಗೆ ವೆಚ್ಚ ಮಾಡಿಕೊಳ್ಳಲು ಕೇಂದ್ರ ಹಣಕಾಸು ಸಚಿವಾಲಯವು ಆದೇಶಿಸಿದೆ. ..!

ಆದ್ದರಿಂದಲೇ ಪ್ರಾರಂಭದಲ್ಲಿ 16,500 ವಲಸೆ ಕಾರ್ಮಿಕರನ್ನು ಉಚಿತವಾಗಿ ಅವರವರ ಊರಿಗೆ ತಲುಪಿಸಿದ ಕರ್ನಾಟಕ ಸರ್ಕಾರ ನಿನ್ನೆಯಿಂದ ಅದನ್ನು ಬಂದ್ ಮಾಡಿಡೇ ಮತ್ತು ಉಲ್ಟಾ ವಲಸೆಕಾರ್ಮಿಕರನ್ನೇ ಸುಲಿಯಲು ಹೊರಟಿದೆ.

ಇನ್ನೊಂದು ಅಮಾನುಷ ಕಾರಣವೆಂದರೆ , ಮೇ 4 ರಿಂದ ಬಹುಪಾಲು ಆರ್ಥಿಕ ಚಟುವಟಿಕೆಗಳು ಒಂದೊಂದಾಗಿ ಪ್ರಾರಂಭವಾಗಲಿದ್ದು ಮತ್ತೆ ಅಲ್ಲಿ ಅಗ್ಗದ ದರದಲ್ಲಿ ಕೆಲಸ ಮಾಡಲು ಈ ವಲಸೆ ಕಾರ್ಮಿಕರ ಅಗತ್ಯವಿದೆ. ಆದರೆ ಈ ಕೋವಿಡ್ ಬಿಕ್ಕಟ್ಟಿನ ಈ ನಗರ ಮತ್ತು ಸರ್ಕಾರ ಗಳ ಅಮಾನುಷ ನಡವಳಿಕೆಗಳಿಂದ ಕಂಗೆಟ್ಟು ಊರಿಗೆ ಹೊರಟಿರುವ ಈ ವಲಸೆ ಕಾರ್ಮಿಕರು ಊರಿಗೆ ಹೋಗಿಬಿಟ್ಟರೆ ಸದ್ಯಕ್ಕೆ ವಾಪಸ್ ಬರುವ ಸೂಚನೆಗಳಿಲ್ಲ. ಹಾಗಾದಲ್ಲಿ ನಗರದ ಆರ್ಥಿಕತೆ ಅಗ್ಗದ ಕೂಲಿಯಿಲ್ಲದೆ ತಲೆ ಎತ್ತುವುದಿಲ್ಲ.

ಈ ಬಂಡವಾಳಶಾಹಿ ಪರ ದುಷ್ಟ ಲೆಕ್ಕಾಕಾರಗಳಿನ್ನಿಟ್ಟುಕೊಂದು ವಲಸೆ ಕಾರ್ಮಿಕರು ಊರಿಗೆ ಹೋಗುವುದನ್ನು ತಪ್ಪಿಸಲೆಂದೇ ಮೂರುಪಟ್ಟು ಹೆಚ್ಚಿನ ದರವನ್ನು ವಿಧಿಸಿ ಊರಿಗೆ ಹೋಗುವವರನ್ನು ನಿರುತ್ತೇಜಗೊಳಿಸಲಾಗುತ್ತಿದೆ.

ಇಂದು ಕಾರ್ಮಿಕ ದಿನಕ್ಕೆ ಶುಭಾಶಯಗಳನ್ನು ಹೇಳುವ ನೆಪದಲ್ಲಿ ವಲಸೆ ಕಾರ್ಮಿಕರಿಗೆ ಊರಿಗೆ ಹೋಗಬೇಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಮಾಡಿರುವ “ಮನವಿ” ಯ ಹಿಂದಿನ ಕ್ರೌರ್ಯವಿದು…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...