Homeಗೌರಿ ಕಣ್ಣೋಟಲಿಂಗ ತಾರತಮ್ಯ ಕುರಿತು ಮೆಚ್ಚುಗೆ ಪಡೆದ ಆಸ್ಟ್ರೇಲಿಯಾದ ಪ್ರಥಮ ಮಹಿಳಾ ಪ್ರಧಾನಿ ಜೂಲಿಯಾ ಭಾಷಣ

ಲಿಂಗ ತಾರತಮ್ಯ ಕುರಿತು ಮೆಚ್ಚುಗೆ ಪಡೆದ ಆಸ್ಟ್ರೇಲಿಯಾದ ಪ್ರಥಮ ಮಹಿಳಾ ಪ್ರಧಾನಿ ಜೂಲಿಯಾ ಭಾಷಣ

ಜೂಲಿಯಾ ಮಾಡಿದ ಭಾಷಣ ಎಲ್ಲಾ ಪುರುಷ ಪ್ರಧಾನ ಸಮಾಜಗಳಲ್ಲಿ ಲಿಂಗಭೇದ ಮತ್ತು ಸ್ರೀದ್ವೇಷಿ ಚಿಂತನೆಗಳು ಹೇಗೆ ಹಾಸುಹೊಕ್ಕಿದೆ ಎಂದು ತೋರಿಸುತ್ತದೆ.

- Advertisement -
- Advertisement -

ಜೂಲಿಯಾ ಗಿಲ್ಲಾರ್ಡ್ ಆಸ್ಟ್ರೇಲಿಯಾ ದೇಶದ ಪ್ರಥಮ ಮಹಿಳಾ ಪ್ರಧಾನಿ. ವಿದ್ಯಾರ್ಥಿನಿ ಆಗಿದ್ದಾಗಲೇ ರಾಜಕೀಯದಲ್ಲಿ ಆಸಕ್ತಿ ಹೊಂದಿದ ಜೂಲಿಯಾ ಸಮಾಜವಾದದಲ್ಲಿ ನಂಬಿಕೆ ಇಟ್ಟವಳು. ಆ ಕಾರಣಕ್ಕೆ ಆಸ್ಟ್ರೇಲಿಯಾದ ಎಡಪಂಥೀಯ ಒಲವನ್ನು ಹೊಂದಿರುವ ಲೇಬರ್ ಪಾರ್ಟಿಯನ್ನು ಸೇರಿಕೊಂಡು ಒಂದೊAದೇ ಮೆಟ್ಟಿಲುಗಳನ್ನು ಏರುತ್ತಾ ಹೋದರು. ಹಿಂದಿನ ಪ್ರಧಾನಿ ಕೆವಿನ್ ರುಡ್ ಅವರು ತಮ್ಮ ಲೇಬರ್ ಪಕ್ಷದ ಸದಸ್ಯರ ಬೆಂಬಲವನ್ನು ಕಳೆದುಕೊಂಡಾಗ ಜೂಲಿಯಾ ಅವರನ್ನು ಪ್ರಧಾನಿಯಾಗಿ ಆ ಪಕ್ಷದ ಸಂಸದರು ಮನಸಿಲ್ಲದ ಮನಸ್ಸಿನೊಂದಿಗೆ ಆಯ್ಕೆ ಮಾಡಿದ್ದರು. ಅವರ ಹಿಂಜರಿಕೆಗೆ ಕಾರಣ ಜೂಲಿಯಾ ಆ ಸ್ಥಾನಕ್ಕೆ ಬೇಕಾದ ಅರ್ಹತೆಗಳನ್ನು ಹೊಂದಿದ್ದಾರೋ ಇಲ್ಲವೂ ಎಂಬುದಾಗಿರಲಿಲ್ಲ. ಬದಲಾಗಿ ಈ ಮಹಿಳೆಗಿಂತ ಸೂಕ್ತವಾದ ಪುರುಷ ತಮ್ಮ ಮುಂದೆ ಇಲ್ಲವಲ್ಲ ಎಂಬ ಲಿಂಗ ತಾರತಮ್ಯ.

ಜೂಲಿಯಾ ಅವರಿಗೆ ಈಗ 51 ವರ್ಷ ವಯಸ್ಸು. ಮದುವೆ ಆಗಿರದ ಆಕೆ ಯಾವ ಮುಚ್ಚುಮರೆ ಇಲ್ಲದೆ ತನ್ನ ಪುರುಷ ಸಂಗಾತಿಯೊಂದಿಗೆ ವಾಸಿಸುತ್ತಿದ್ದಾರೆ. ಇತರೆ ದೇಶಗಳ ಮಹಿಳೆಯರಂತೆ ಜೂಲಿಯಾ ಕೂಡ ತನ್ನ ವೃತ್ತಿ ಬದುಕಿನಲ್ಲಿ ಲಿಂಗಬೇಧವನ್ನು ಎದುರಿಸುತ್ತಲೇ ಮುಂದೆ ಬಂದವರು. ಈಗ ಅವರು ಪ್ರಧಾನಿ ಆಗಿದ್ದರೂ ಆಕೆ ಮಹಿಳೆ ಆಗಿರುವುದರಿಂದಲೇ ಆಕೆಯನ್ನು ಟೀಕೆ ಮಾಡುವವರಿಗೆ ಲೆಕ್ಕವಿಲ್ಲ. ಜೂಲಿಯಾ ಅವರ ಆತ್ಮಸ್ಥೈರ್ಯವನ್ನು ಮುರಿದು ಹಾಕಲು ಆಕೆಯ ಟೀಕಾಕಾರರು ಮಾಡಿರುವ ಪ್ರಯತ್ನಗಳಲ್ಲಿ ಹಲವು ಹೇಸಿಗೆ ಹುಟ್ಟಿಸುವಂತಹವು. ಉದಾಹರಣೆಗೆ ಜೂಲಿಯಾ ಅವರು ಮಕ್ಕಳನ್ನು ಹೆತ್ತಿಲ್ಲ. ಅದನ್ನೇ ಅಸ್ತ್ರವಾಗಿಸಿಕೊಂಡು ಕೆಲವರು ಅವರನ್ನು “ಬೇಕಂತಲೇ ಬಂಜೆ ಆಗಿರುವವಳು’’ ಎಂದು ಜರಿಯುವ ಮಟ್ಟಕ್ಕೆ ಹೋಗಿದ್ದೂ ಉಂಟು. ಜೊತೆಗೆ “Ditch the Bitch’’ (ಈ ಹಾದರಗಿತ್ತಿಯನ್ನು ತೊಲಗಿಸಿ) ಎಂಬ ಕರೆ ಕೊಟ್ಟು ಆಕೆಯ ವಿರುದ್ಧ ಚುನಾವಣಾ ಪ್ರಚಾರವನ್ನೂ ಮಾಡಲಾಗಿತ್ತು.

ಜೂಲಿಯಾ ಮಾಡಿದ ಭಾಷಣ ಎಲ್ಲಾ ಪುರುಷ ಪ್ರಧಾನ ಸಮಾಜಗಳಲ್ಲಿ ಲಿಂಗಭೇದ ಮತ್ತು ಸ್ರೀದ್ವೇಷಿ ಚಿಂತನೆಗಳು ಹೇಗೆ ಹಾಸುಹೊಕ್ಕಿದೆ ಎಂದು ತೋರುವುದರಿಂದ ಅವರ ಸಾರಾಂಶವನ್ನು ಇಲ್ಲಿ ನೀಡುತ್ತಿದ್ದೇನೆ.

ನಾನು ಪ್ರಧಾನಿಯಾಗಿ ಈ ಕುರ್ಚಿಯಲ್ಲಿ ಕೂರುವ ನನ್ನ ಎದುರು ವಿರೋಧ ಪಕ್ಷದ ನಾಯಕರಾಗಿ ಕೂರುವ ಈ ಮನುಷ್ಯ ಮೊದಲಿನಿಂದಲೂ ಸ್ತ್ರೀದ್ವೇಷ ನೀತಿಯನ್ನೇ ಪ್ರದರ್ಶಿಸುತ್ತಾ ಬಂದಿದ್ದಾರೆ. ಉದಾಹರಣೆಗೆ ಒಮ್ಮೆ ಈ ಸಂಸತ್ತಿನಲ್ಲಿ ಮಾತನಾಡುತ್ತಾ ನಾನು ’ಗೌರವಾರ್ಹ ಮಹಿಳೆ’ಯಂತೆ ವರ್ತಿಸಬೇಕು ಎಂದಿದ್ದರು. ನನ್ನ ಜಾಗದಲ್ಲಿ ಪುರುಷನೊಬ್ಬ ಕೂತಿದ್ದರೆ ಆತನ ಬಗ್ಗೆ ಇಂತಹ ಪದಗಳನ್ನು ಉಪಯೋಗಿಸುತ್ತಿದ್ದರೆ? ಇಲ್ಲ. ವಿರೋಧ ಪಕ್ಷದ ನಾಯಕರು ಒಮ್ಮೆ ಸಂಸತ್ತಿನ ಹೊರಗಡೆ ನನ್ನ ವಿರುದ್ಧ ’Ditch the Bitch’ ಎಂದು ಬರೆಯಲಾಗಿದ್ದ ಪೋಸ್ಟರ್ ಪಕ್ಕ ನಿಂತರು. ಹಾಗೆಯೇ ಇನ್ನೊಮ್ಮೆ ನನ್ನನ್ನು ಯಾವುದೋ ಪುರಷನ ಹಾದರಗಿತ್ತಿ ಎಂದು ಬಣ್ಣಿಸಿದ್ದ ಪೋಸ್ಟರ್ ಪಕ್ಕ ನಿಂತರು. ಅದು ಮಹಿಳಾ ದ್ವೇಷ ನಿಲುವಲ್ಲದೆ ಇನ್ನೇನು? ಪ್ರತಿದಿನ, ಪ್ರತಿಹಂತದಲ್ಲಿ, ವಿವಿಧ ತರಹದಲ್ಲಿ ನಾನು ಈ ವ್ಯಕ್ತಿಯಿಂದ ಸ್ತ್ರೀದ್ವೇಷಿ ನಿಲುವನ್ನು, ಲಿಂಗಬೇಧ ತಾರತಮ್ಯವನ್ನು ಎದುರಿಸುತ್ತಿದ್ದೇನೆ.

ಇಂತಹ ಮನುಷ್ಯ ಈ ಸಂಸತನ್ನು ಪ್ರವೇಶಿಸಿ ಆಸ್ಟ್ರೇಲಿಯಾದ ಮಹಿಳೆಯರಲ್ಲಿ ಕ್ಷಮೆ ಕೇಳಿಲ್ಲ. ನನ್ನನ್ನು ಪದೇಪದೇ ಅವಮಾನಿಸಿದ್ದಕ್ಕೆ ನನಗೆ ಸಾರಿ ಹೇಳಿಲ್ಲ. ಆದರೆ ಇವತ್ತು ರಾಜಕೀಯ ದುರುದ್ದೇಶದಿಂದ ಮಹಿಳೆಯರ ಪರ ನಿಂತಿರುವುದಾಗಿ ಪೋಸು ಕೊಡುತ್ತಿದ್ದಾರೆ. ಇಂತಹ ಇಬ್ಬಂದಿ ನೀತಿಯನ್ನು ಯಾರೂ ಸಹಿಸಕೂಡದು.

ಆಕೆಯ ಭಾಷಣ ನನಗೆ ಇಷ್ಟವಾಗಿದ್ದರಿಂದ ಅದರ ಮುಖ್ಯ ಭಾಗಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ….

– ಗೌರಿ ಲಂಕೇಶ್

ಅಕ್ಟೋಬರ್ 31, 2012


ಇದನ್ನೂ ಓದಿ: ದೈಹಿಕ ಸೌಂದರ್ಯ & ಧಾರ್ಮಿಕ ನಂಬಿಕೆ: ಆದರ್ಶ ಹುಡುಗಿಯ ಕುರಿತು ಗೌರಿ ಲಂಕೇಶ್‌ ಬರಹ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...