Homeಅಂಕಣಗಳುಮೋದಿ ಆಡಳಿತಕ್ಕೆ ಆರು ವರ್ಷ : ಸೂತಕದ ಮನೆಯಲ್ಲಿ ಸಂಭ್ರಮ

ಮೋದಿ ಆಡಳಿತಕ್ಕೆ ಆರು ವರ್ಷ : ಸೂತಕದ ಮನೆಯಲ್ಲಿ ಸಂಭ್ರಮ

- Advertisement -
- Advertisement -

ಈ ಸಂಚಿಕೆಯನ್ನು ನಾವು ಅಂತಿಮಗೊಳಿಸುತ್ತಿರುವ ಹೊತ್ತಿನಲ್ಲಿ ಯಡಿಯೂರಪ್ಪನವರು ಯಲಹಂಕ ಫ್ಲೈಓವರ್‌ಗೆ ಮರುನಾಮಕರಣ ಮಾಡಲು ಸಿದ್ಧರಾಗುತ್ತಿರುವ ಸುದ್ದಿ ಬಂದಿದೆ. ಅದೇ ಸಮಯದಲ್ಲಿ ದೆಹಲಿಯ ಸಿಂಹಾಸನದಲ್ಲಿ ಕುಳಿತಿರುವವರು ಎರಡನೆ ಸಾರಿ ಪಟ್ಟಾಭಿಷಕ್ತರಾಗಿ ಒಂದು ವರ್ಷ ಕಳೆಯುತ್ತಿದ್ದು, ಒಟ್ಟು ಆರು ವರ್ಷಗಳ ಸಂಭ್ರಮಕ್ಕೆ ಛೇ ಸಾಲ್ ಬೇಮಿಸಾಲ್ ಎಂಬ ಘೋಷಣೆ, ಹ್ಯಾಷ್‍ಟ್ಯಾಗ್‍ಅನ್ನು ಅಂತಿಮಗೊಳಿಸುತ್ತಿದ್ದಾರೆಂದು ಹೇಳಲಾಗಿದೆ.

ಇಲ್ಲೇ ಕರ್ನಾಟಕದಲ್ಲಿ ಜಾರ್ಖಂಡ್‍ನಿಂದ ಇಲ್ಲಿಗೆ ‘ಬಂದಿರುವ’ ಇಬ್ಬರು ವಲಸೆ ಕಾರ್ಮಿಕ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಲಾಗಿದೆಯೆಂದು ನೆರವು ನೀಡಲು ಹೋದ ಜನಶಕ್ತಿ ಮತ್ತು ಸ್ವಾನ್ ಕಾರ್ಯಕರ್ತರಿಗೆ ಅದು ‘ಅತ್ಯಾಚಾರ, ಮಾನವ ಕಳ್ಳಸಾಗಾಣಿಕೆ, ಅಕ್ರಮ ಬಂಧನ ಹಾಗೂ ಜೀತದ ದುಡಿಮೆ’ಯ ಪ್ರಕರಣವೆಂದು ಗೊತ್ತಾಗಿದೆ. ಆ ಮಹಿಳೆಯರಿಗೆ ಅಕಸ್ಮಾತ್ತಾಗಿ ಪರಿಚಯವಾದ್ದರಿಂದ ನೆರವು ನೀಡಲು ಇಲ್ಲೇ ಉಳಿದುಕೊಂಡ ನಿಕೊಲಸ್ ಮುರ್ಮು ಎಂಬ ಸಂತಾಲಿ ಯುವಕ ಈಗ ತಾನೇ ನಮ್ಮ ಕಚೇರಿಗೆ ಬಂದು ಹೋದರು.

ಆ ನಿಕೊಲಸ್ ಮುರ್ಮುವನ್ನು ನಾನೊಂದು ಪ್ರಶ್ನೆ ಕೇಳಿದೆ, ‘ನಿಮಗೆ ಸಿದ್ದು ಮುರ್ಮು ಗೊತ್ತಾ?’. ಆತ ನೀಡಿದ ಉತ್ತರ ನನಗೆ ಅಚ್ಚರಿ ಮೂಡಿಸಿತು. ‘ಅಂಗ್ರೇಜಿಗಳ ವಿರುದ್ಧ ನಮ್ಮ ಸಂತಾಲರು ನಡೆಸಿದ ಸಂಗ್ರಾಮದ ನಾಯಕನಾತ. ನಮಗೆ ಸ್ವಾತಂತ್ರ್ಯ ಬಂದಿತೆಂದು ಹೇಳುತ್ತಾರೆ. ನಮಗಂತೂ ಬಂದಿಲ್ಲ. ಬಂದಿದ್ದರೆ ಹೀಗೇಕಾಗುತ್ತಿತ್ತು?’ ಪಕ್ಕದಲ್ಲೇ ಕೂತಿದ್ದ ಅತ್ಯಾಚಾರವನ್ನು ಎದುರಿಸಿ ಗಟ್ಟಿಯಾಗಿ ನಿಂತಿರುವ ಮಹಿಳೆಯನ್ನು ತೋರಿಸಿ ಹೇಳಿದರು. ಕಳೆದ ನಾಲ್ಕು ದಿನಗಳಿಂದ ಸತತವಾಗಿ ಪೊಲೀಸ್ ಸ್ಟೇಷನ್ನುಗಳನ್ನು ಸುತ್ತುತ್ತಾ ಇದ್ದ ಆಕೆ ತನ್ನನ್ನು ಬಾಧಿಸುತ್ತಿರುವ ಕಿವಿ ನೋವಿಗೆ ಪರಿಹಾರ ಕೇಳಲು ಬಂದಿದ್ದರು.

ಇಂತಹ ನೂರಲ್ಲ, ಸಾವಿರವಲ್ಲ, ಕೋಟಿ ಕಥೆಗಳು ಈ ದೇಶದ ವಲಸೆ ಕಾರ್ಮಿಕರದ್ದಿದೆ ಎಂದು ಕಳೆದ ಒಂದು ತಿಂಗಳಿಂದ ಗೊತ್ತಾಗುತ್ತಿದೆ. ಹಸಿವಿನಿಂದ ರೈಲಿನಲ್ಲೇ ಸತ್ತ ಮಗು, ನಡೆದೂ ನಡೆದೂ ಸತ್ತ ವಯಸ್ಕರು, ಬಹುಶಃ ದಿಕ್ಕೇಡಿಗಳಾಗಿರುವ ವೃದ್ಧರು ಇಂತಹ ಎಷ್ಟೋ ಎಷ್ಟೋ ಕಥೆಗಳು. ಕನಿಷ್ಠ ಸಂವೇದನೆಯಿರುವವರು ಯಾರಾಗಿದ್ದರೂ ಅವರಿಗೆ ನಾವು ಗಾಢ ಸೂತಕದ ಮಧ್ಯೆ ಇದ್ದೇವೆ ಎನಿಸಬೇಕು. ಆದರೆ ಹ್ಯಾಷ್‍ಟ್ಯಾಗ್‍ಗಳನ್ನು ಅಂತಿಮಗೊಳಿಸಿಕೊಂಡು ಸಂಭ್ರಮಿಸಲು ಯತ್ನಿಸುತ್ತಿರುವವರಿಗೆ ಅದು ತಟ್ಟಿದಂತೆ ಕಾಣುತ್ತಿಲ್ಲ.

ಅಂತಹುದೇ ಮನಸ್ಥಿತಿಯ ಭಾಗವಾಗಿ ಕರ್ನಾಟಕದ ಮುಖ್ಯಮಂತ್ರಿಯೂ ಫ್ಲೈಓವರ್ ಮರುನಾಮಕರಣಕ್ಕೆ ಮುಂದಾಗಿದ್ದಾರೆಯೇ? ಅಷ್ಟೇ ಇದ್ದಂತೆ ಕಾಣುತ್ತಿಲ್ಲ. ಸಾವರ್ಕರ್ ಹೆಸರನ್ನು ಇಡುವ ಘೋಷಣೆ ಮಾಡಿದಾಕ್ಷಣ ಅದರ ಬಗ್ಗೆ ಚರ್ಚೆ ಶುರುವಾಗುತ್ತದೆ. ಅಲ್ಲಿಗೆ ಕರ್ನಾಟಕಕ್ಕೆ ಕೇಂದ್ರದಿಂದಾದ ಅನ್ಯಾಯ, ವಲಸೆ ಕಾರ್ಮಿಕರ ಬವಣೆ, ರಾಜ್ಯದ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿರುವುದು ಎಲ್ಲವೂ ಪಕ್ಕಕ್ಕೆ ಸರಿಯುತ್ತದೆ. ಇನ್ನು ಮುಂದೆ ಶ್ರಮಿಕರು ಕೆಲಸವಿಲ್ಲದೇ ಮತ್ತಷ್ಟು ಅಗ್ಗವಾಗುವುದು, ವ್ಯಾಪಾರಸ್ಥರು ವ್ಯಾಪಾರ ಕಡಿಮೆಯಾಗಿ ಕಂಗೆಡುವುದು ಇವ್ಯಾವುವೂ ಚರ್ಚೆಯ ವಿಷಯಗಳಾಗದಿರಬೇಕೆಂದರೆ ಇಂತಹ ವಿವಾದಗಳು ಮೇಲಿಂದ ಮೇಲೆ ಏಳುತ್ತಿರಬೇಕು.

ಹೀಗಿರುವಾಗ ಮಾಧ್ಯಮಗಳು ಆಳುವವರನ್ನು ಪ್ರಶ್ನಿಸುವ ಬದಲು, ತುತ್ತೂರಿಗಳಾಗಲಿವೆ ಎಂಬುದರಲ್ಲಿ ಅನುಮಾನವೇ ಇಲ್ಲ. ಕೇಂದ್ರ ಸರ್ಕಾರ ಮಾಡಿದ ಸರಿಯನ್ನು, ಸರಿಯೆಂದೂ, ತಪ್ಪನ್ನು ತಪ್ಪೆಂದೂ ಹೇಳುವ ಧೈರ್ಯವಾಗಲೀ, ವೃತ್ತಿ ಬದ್ಧತೆಯಾಗಲೀ ಇಲ್ಲವೇ ಇಲ್ಲ. ಹೀಗಾಗಿ ಪತ್ರಿಕೆಯಲ್ಲಿ ಈ ಸಾರಿ ಒಂದು ವರ್ಷದ ಕೇಂದ್ರ ಸರ್ಕಾರದ ಸಾಧನೆಯನ್ನು ಒರೆಗೆ ಹಚ್ಚಲು ಪ್ರಯತ್ನಿಸಲಾಗಿದೆ.

ಹಲವಾರು ತಜ್ಞರನ್ನು ಈ ಕುರಿತ ಲೇಖನಗಳನ್ನು ಬರೆದುಕೊಡಲು ಕೇಳಿದೆವು. ಕೆಲವರಿಗೆ 5 ವರ್ಷಗಳಲ್ಲಿ ನಡೆದದ್ದಕ್ಕೂ ಈ ಒಂದು ವರ್ಷಕ್ಕೂ ವ್ಯತ್ಯಾಸವಿದೆಯೆನಿಸಿದರೆ, ಇನ್ನು ಕೆಲವರಿಗೆ 5 ವರ್ಷಗಳಲ್ಲಿ ಮಾಡಲು ಯತ್ನಿಸಿ ವಿಫಲವಾದದ್ದಕ್ಕೆಲ್ಲಾ ಈಗ ಒಂದು ರೂಪ ಕೊಡುತ್ತಿದ್ದಾರೆ ಎನಿಸಿದೆ. ಆದರೆ, ಕೊರೊನಾ ಬಿಕ್ಕಟ್ಟನ್ನು ಸರ್ಕಾರವು ಜನವಿರೋಧಿ ನೀತಿಗಳನ್ನು ತರಲು ಬಳಸುತ್ತಿದೆ ಎಂಬ ವಿಚಾರದಲ್ಲಿ ಯಾರಿಗೂ ಅನುಮಾನವಿಲ್ಲ. ಉಳಿದೆಲ್ಲಾ ದೇಶಗಳು ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ತಮ್ಮ ಎಂದಿನ ನೀತಿಗಳನ್ನು ಮಾರ್ಪಡಿಸಿಕೊಂಡು ಜನಪರವಾದ ಕೆಲವು ನೀತಿಗಳನ್ನು ಜಾರಿಗೆ ತರಲು ಮುಂದಾಗಿದ್ದರೆ, ಭಾರತವು ಸಂಪೂರ್ಣ ವಿರುದ್ಧ ದಿಕ್ಕಿನಲ್ಲಿ ಸಾಗಿದೆ.

ರೈತರು-ಕೃಷಿ ಕ್ಷೇತ್ರ, ಕಾರ್ಮಿಕರು-ಉದ್ದಿಮೆಗಳ ಕ್ಷೇತ, ಪರಿಸರ-ಅರಣ್ಯ ಒಳಗೊಂಡಂತೆ ಎಲ್ಲಾ ಕಡೆ ಒಂದೇ ಹಾಡು. ದೇಶದ ಆಡಳಿತದ ಚುಕ್ಕಾಣಿ ಹಿಡಿದವರಿಗೆ ಇದೊಂದು ರೀತಿಯ ಸಂಭ್ರಮವಿದ್ದಂತೆ ಕಾಣುತ್ತಿದೆ. ಎಲ್ಲವೂ ಸೂತಕದ ಮನೆಯ ಸಂಭ್ರಮವಲ್ಲದೇ ಇನ್ನೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...