ಟಿವಿ ತಾರೆ ಮೋಹೆನಾ ಕುಮಾರಿ ಸಿಂಗ್ರವರ ಇಡೀ ಕುಟುಂಬವೂ ಕೊರೊನಾ ವೈರಸ್ಗೆ ತುತ್ತಾಗಿರುವ ಹಿನ್ನೆಲೆಯಲ್ಲಿ ಅವರ ಚೇತರಿಕೆಗೆ ಪ್ರಾರ್ಥನೆ ಸಲ್ಲಿಸುತ್ತಿರುವ ಅಭಿಮಾನಿಗಳಿಗೆ ಅವರು ’ನಮ್ಮ ಬಗ್ಗೆ ಚಿಂತೆ ಬಿಡಿ, ಇತರರು ನಮಗಿಂತಲೂ ಹೆಚ್ಚು ಬಳಲುತ್ತಿದ್ದಾರೆ’ ಎಂದು ಹೇಳಿದ್ದಾರೆ.
ಯೆ ರಿಷ್ಟಾ ಕ್ಯಾ ಕೆಹ್ಲತಾ ಹೈ ಪಾತ್ರದಲ್ಲಿ ಹೆಸರುವಾಸಿಯಾಗಿರುವ ಮೋಹೆನಾರವರು ಇಂದು ಬೆಳಿಗ್ಗೆ ಇನ್ಸ್ಟಾಗ್ರಾಮ್ನಲ್ಲಿ ತಮಗೆ ಮತ್ತು ತಮ್ಮ ಕುಟುಂಬದ 17 ಜನಕ್ಕೆ ಕೊರೊನಾ ಸೋಂಕು ತಗುಲಿರುವುದನ್ನು ದೃಢಪಡಿಸಿದ್ದಾರೆ. “ನಿದ್ರೆ ಮಾಡಲು ಸಾಧ್ಯವಿಲ್ಲ. ಈ ಆರಂಭಿಕ ದಿನಗಳು ಮನೆಯಲ್ಲಿ ನಮಗೆಲ್ಲರಿಗೂ ವಿಶೇಷವಾಗಿ ನಮ್ಮ ಮಕ್ಕಳು ಮತ್ತು ನಮ್ಮ ಹಿರಿಯರಿಗೆ ಕಷ್ಟಕರವಾಗಿದೆ. ಆದರೆ ನಾವು ಬೇಗನೆ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ. ನಾವು ಚೆನ್ನಾಗಿರುತ್ತೇವೆ. ನಮಗಿಂತ ಹೆಚ್ಚು ಬಳಲುತ್ತಿರುವ ಜನರು ಸುತ್ತಲೂ ಇರುವುದರಿಂದ ಯಾವುದರ ಬಗ್ಗೆಯೂ ದೂರು ನೀಡಲು ನಮಗೆ ಹಕ್ಕಿಲ್ಲ” ಎಂದು ಬರೆದುಕೊಂಡಿದ್ದಾರೆ.
ಮೊಹೇನಾ ಅವರು 2019 ರ ಅಕ್ಟೋಬರ್ನಲ್ಲಿ ಸುಯೇಶ್ ರಾವತ್ (ಉತ್ತರಾಖಂಡ ಪ್ರವಾಸೋದ್ಯಮ ಸಚಿವ ಸತ್ಪಾಲ್ ಮಹಾರಾಜ್ ಅವರ ಪುತ್ರ) ಅವರನ್ನು ವಿವಾಹವಾದರು. ನಂತರ ಅವರು ಡೆಹ್ರಾಡೂನ್ಗೆ ಸ್ಥಳಾಂತರಗೊಂಡರು. ತಾನು, ತನ್ನ ಪತಿ, ಅತ್ತೆ, ಅತ್ತಿಗೆ ಮತ್ತು ತನ್ನ ಐದು ವರ್ಷದ ಮಗ ಮತ್ತು ಕುಟುಂಬದ ಇತರ ಕೆಲವು ಸದಸ್ಯರಿಗೆ ಕೊರೊನಾ ಸೋಂಕು ತಗುಲಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಪದೇ ಪದೇ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿಯೂ ಅವರು ಈ ಮೇಲಿನ ಹೇಳಿಕೆಯನ್ನು ನೀಡಿದ್ದಾರೆ.
ತನ್ನ ಹೇಳಿಕೆಯಲ್ಲಿ, ತಾನು ಬೇಗ ಗುಣಮುಖಲಾಗಲೆಂದು ಹಾರೈಸಿದ ಅಭಿಮಾನಿಗಳಿಗೆ ಮೋಹೇನಾ ಕೃತಜ್ಞತೆಯ ಸಂದೇಶವನ್ನು ಅರ್ಪಿಸಿದ್ದಾರೆ. “ನೀವು ಕಳುಹಿಸುತ್ತಿರುವ ಎಲ್ಲಾ ಸಂದೇಶಗಳು, ಪ್ರಾರ್ಥನೆಗಳು ಮತ್ತು ಪ್ರೀತಿಗೆ ನಾನು ಪ್ರತಿಯೊಬ್ಬರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಇದು ನಮ್ಮ ಉತ್ಸಾಹವನ್ನು ಉಳಿಸುತ್ತದೆ ಮತ್ತು ನಮ್ಮ ಹೃದಯದಲ್ಲಿ ನಿಮಗೆ ತುಂಬಾ ಕೃತಜ್ಞತೆ ಇದೆ” ಎಂದು ತಿಳಿಸಿದ್ದಾರೆ.
ಯೆ ರಿಷ್ಟಾ ಕ್ಯಾ ಕೆಹ್ಲತಾ ಹೈ ಚಿತ್ರದಲ್ಲಿ ಮೋಹೆನಾ ಜೊತೆ ನಟಿಸಿದ ಮತ್ತೊಬ್ಬ ನಟಿ ನಿಧಿ ಉತ್ತಮ್, “ಮೋಹ್, ಮತ್ತು ಇಡೀ ಕುಟುಂಬಕ್ಕೆ ನಮ್ಮೆಲ್ಲರ ಪ್ರಾರ್ಥನೆ ಮತ್ತು ಪ್ರೀತಿ. ನೀವು ಅಂತಹ ಪ್ರಬಲ ವ್ಯಕ್ತಿ ಎಂದು ನನಗೆ ತಿಳಿದಿದೆ, ನೀವು ಖಂಡಿತವಾಗಿಯೂ ಹೋರಾಡುತ್ತೀರಿ ಮತ್ತು ಬೇಗನೆ ಗುಣಮುಖರಾಗುತ್ತೀರಿ.” ಎಂದು ಬರೆದಿದ್ದಾರೆ.
ಮೋಹೇನಾ ಕುಮಾರಿ ಸಿಂಗ್ ಅವರು ಮಧ್ಯಪ್ರದೇಶದ ರೇವಾ ರಾಜಮನೆತನದ ಮಹಾರಾಜ ಪುಷ್ಪ್ರಜ್ ಸಿಂಗ್ ಮತ್ತು ರಾಗಿಣಿ ಸಿಂಗ್ ಅವರ ಪುತ್ರಿ. ಜನಪ್ರಿಯ ಟಿವಿ ಶೋ ಯೆ ರಿಷ್ಟಾ ಕ್ಯಾ ಕೆಹ್ಲತಾ ಹೈ ಚಿತ್ರದಲ್ಲಿ ಕೀರ್ತಿ ಗೋಯೆಂಕಾ ಪಾತ್ರವನ್ನು ನಿರ್ವಹಿಸುವುದರಲ್ಲಿ ಅವರು ಹೆಚ್ಚು ಹೆಸರುವಾಸಿಯಾಗಿದ್ದಾರೆ. ದಿಲ್ ದೋಸ್ತಿ ಡ್ಯಾನ್ಸ್ ಎಂಬ ಟಿವಿ ಕಾರ್ಯಕ್ರಮದಲ್ಲಿ ಮೋಹೆನಾ ಕೂಡ ಕಾಣಿಸಿಕೊಂಡಿದ್ದಾರೆ. ಡ್ಯಾನ್ಸ್ ರಿಯಾಲಿಟಿ ಶೋ ಝಲಕ್ ದಿಖ್ಲಾ ಜಾ ನಲ್ಲಿ ನೃತ್ಯ ಬೋಧಕಿಯಾಗಿಯೂ ಕೆಲಸ ಮಾಡಿದ್ದಾರೆ. ಅವರು ಡ್ಯಾನ್ಸ್ ರಿಯಾಲಿಟಿ ಶೋ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಸೀಸನ್ 3 ನಲ್ಲಿ ಸ್ಪರ್ಧಿಯಾಗಿದ್ದರು.
ಇದನ್ನೂ ಓದಿ: ಜಾತಿ ವ್ಯವಸ್ಥೆಯ ಹೊಲಸು ಎತ್ತಿತೋರಿಸುವ ಪಲಾಸ 1978