Homeಪ್ರಪಂಚಬ್ರೆಜಿಲ್‌ನಲ್ಲಿ ಕಾರ್ಮಿಕ ಪಕ್ಷದ ಆಡಳಿತದ ಅವಧಿ

ಬ್ರೆಜಿಲ್‌ನಲ್ಲಿ ಕಾರ್ಮಿಕ ಪಕ್ಷದ ಆಡಳಿತದ ಅವಧಿ

- Advertisement -
- Advertisement -

ಭರತ್ ಹೆಬ್ಬಾಳ್ |

ಎರಡನೇ ಮಹಾಯುದ್ಧದ ನಂತರ ಶುರುವಾದ ಶೀತಲ ಸಮರದ ಸಮಯದಲ್ಲಿ ಬಂಡವಾಳವಾದ ಪ್ರತಿಪಾದಿಸುವ ಅಮೆರಿಕ ಮತ್ತು ಸಮಾಜವಾದ ಸಾರುವ ಸೋವಿಯಟ್ ಒಕ್ಕೂಟಗಳ ನಡುವೆ, ಇಡೀ ಪ್ರಪಂಚವೇ ರಣರಂಗವಾಗಿತ್ತು. ಅದರಲ್ಲೂ ಫಿಡೆಲ್ ಕ್ಯಾಸ್ಟ್ರೋ ನೇತೃತ್ವದಲ್ಲಿ ಕ್ಯೂಬಾದಲ್ಲಾದ ಕ್ರಾಂತಿ ದಕ್ಷಿಣ ಅಮೆರಿಕ ರಾಷ್ಟ್ರಗಳಲ್ಲಿ ಒಂದು ಸಂಚಲನವನ್ನೇ ಉಂಟು ಮಾಡಿತ್ತು.. ಹರಡುತ್ತಿದ್ದ ಸಮಾಜವಾದವನ್ನು ಹತ್ತಿಕ್ಕಲು ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳು ದಕ್ಷಿಣ ಅಮೆರಿಕಾದ ಒಂದರ ನಂತರ ಒಂದು ರಾಷ್ಟ್ರಗಳಲ್ಲಿ ತನ್ನ ಆರ್ಥಿಕ ಭಯೋತ್ಪಾದನೆ ಮತ್ತು ನೇರ ಮಿಲಿಟರಿ ಕ್ಷಿಪ್ರ ಕ್ರಾಂತಿಗಳ ಮೂಲಕ ಮಿಲಿಟರಿ ಸರ್ವಾಧಿಕಾರವನ್ನು ಸ್ಥಾಪಿಸುತ್ತಿತ್ತು. ಇದಕ್ಕೆ ಅದು `ಆಪರೇಶನ್ ಕೊಂಡೋರ್’ ಎಂದು ಹೆಸರಿಟ್ಟಿತ್ತು. ಆಪರೇಶನ್ ಕೊಂಡೋರ್‌ನ ಮುಖ್ಯ ಉದ್ದೇಶವೇ ಸಮಾಜದಲ್ಲಿ ಎಡಪಂಥೀಯ ಚಿಂತನೆಗಳನ್ನು ಕಿತ್ತೊಗೆಯುವುದು. ಈ ಕಾರ್ಯಾಚರಣೆಗಳು ಮಿಲಿಟರಿ ಆಡಳಿತದ ವಿರುದ್ದ ದನಿಯೆತ್ತುತ್ತಿದ್ದ ಪ್ರಜೆಗಳು, ರಾಜಕೀಯ ಭಿನ್ನಮತೀಯರು, ಯೂನಿಯನ್ ನಾಯಕರು, ವಿದ್ಯಾರ್ಥಿಗಳು, ಸಂಘಟಕರು, ಪತ್ರಕರ್ತರು, ಪಾದ್ರಿಗಳ ಅಪಹರಣ, ಚಿತ್ರಹಿಂಸೆ, ಜೈಲು, ಹತ್ಯೆಗಳಲ್ಲಿ ಮುಗಿಯುತ್ತಿತ್ತು ಮತ್ತು ಅವರೇ ಅಚ್ಚು ಹಾಕಿದ ಹಾಗೆ ಇವರನ್ನೆಲ್ಲಾ ಆಕ್ಟಿವಿಸ್ಟ್, ಲೆಫ್ಟಿಸ್ಟ್ ಮತ್ತು ಟೆರರಿಸ್ಟ್ ಎಂದು ಬಿಂಬಿಸಲಾಗುತ್ತಿತ್ತು. ಎಲ್ಲಾ ದಕ್ಷಿಣ ರಾಷ್ಟ್ರಗಳ ಹಾಗೆ, ಐತಿಹಾಸಿಕವಾಗಿ ಬ್ರೆಜಿಲ್ ದೇಶವನ್ನು ಕೂಡ ಕೆಲವೇ ಕೆಲವು ಆಸ್ತಿವಂತರಾದ ಒಂದು ಸಣ್ಣ ಗುಂಪು ಆಳುತ್ತಿತ್ತು. ಈ ಗುಂಪು ಬಹುಮುಖ್ಯವಾಗಿ ಕೃಷಿ ವ್ಯವಹಾರ(ಅಗ್ರಿ ಬಿಸ್ನೆಸ್ BEEF), ಮಿಲಿಟರಿ (BULLET) ಮತ್ತು ಕ್ರಿಶ್ಚಿಯನ್ ಮಿಷನರಿ ಬೋಧಕರ(BIBLE) ಗುಂಪಾಗಿತ್ತು. ಇದನ್ನು ಬ್ರೆಜಿಲ್‌ನಲ್ಲಿ BBB ಲಾಬಿ (ಬೀಫ್, ಬುಲೆಟ್ ಮತ್ತು ಬೈಬಲ್ ಎಂದು ಕರೆಯುತ್ತಾರೆ). ಎಲ್ಲಾ ಸ್ಥಾಪಿತ ಹಿತಾಸಕ್ತಿಗಳ ಸಂಗಮವೇ ಈ BBB ಲಾಬಿ (ಬ್ರೆಜಿಲ್ ಹೆಚ್ಚಾಗಿ, ದನದ ಮಾಂಸ, ಕೋಳಿ ಮಾಂಸ, ಕಬ್ಬಿಣದ ಅದಿರು, ಆರೆಂಜ್ ರಸ, ಸಕ್ಕರೆ, ಕಾಫಿ ಮತ್ತು ತಂಬಾಕು ರಫ್ತು ಮಾಡುತ್ತದೆ).

ಬ್ರೆಜಿಲ್ ದಕ್ಷಿಣ ಅಮೆರಿಕಾದಲ್ಲೇ ಅತ್ಯಂತ ಜನಸಂಖ್ಯೆಯುಳ್ಳ ದೇಶ. ಪ್ರಪಂಚದ 15% ಕುಡಿಯುವ ನೀರು ಬ್ರೆಜಿಲ್‌ನಲ್ಲಿದೆ. ದಕ್ಷಿಣ ಅಮೆರಿಕಾದ 41 ಕೋಟಿ ಜನಸಂಖ್ಯೆಯಲ್ಲಿ ಸುಮಾರು 21 ಕೋಟಿ ಜನಸಂಖ್ಯೆ ಬ್ರೆಜಿಲ್‌ನಲ್ಲಿದೆ ಮತ್ತು ದಕ್ಷಿಣ ಅಮೆರಿಕಾದ ಬೇರೆಲ್ಲ ದೇಶಗಳು ಸ್ಪಾನಿಷ್ ಭಾಷೆಯಲ್ಲಿ ಮಾತನಾಡಿದರೆ ಬ್ರೆಜಿಲ್‌ನಲ್ಲಿ ಮಾತ್ರ ಪೋರ್ಚುಗೀಸ್ ಮಾತಾಡುತ್ತಾರೆ. ಏಕೆಂದರೆ ಯುರೋಪಿನ ಪೋರ್ಚುಗಲ್ ಬ್ರೆಜಿಲ್‌ನನ್ನು ಆಳಿದ್ದು.

ಈ ದೇಶದ ಈಶಾನ್ಯ ಭಾಗದ ಒಂದು ಬಡ ಕುಟುಂಬದ 7ನೇ ಮಗನಾಗಿ ಹುಟ್ಟಿದ ಲೂಲಾ ಅಷ್ಟು ಹೆಚ್ಚಾಗಿ ಓದದೆ ತನ್ನ ಮನೆಯವರೊಂದಿಗೆ ಕೆಲಸಕ್ಕಾಗಿ ದೇಶದ ದಕ್ಷಿಣದಲ್ಲಿರುವ ದೊಡ್ಡ ನಗರ ಸಾಒ ಪಾಲೊಗೆ ಬಂದು ನೆಲೆಸುತ್ತಾರೆ. 14ನೇ ವಯಸ್ಸಿನಲ್ಲಿ ಒಂದು ಕಾರ್ ಕಂಪನಿ ಲೋಹದ ಕಾರ್ಮಿಕನಾಗಿ ಕೆಲಸ ಮಾಡುತ್ತಾರೆ. ಈ ಕಾರ್ಖಾನೆಗಳಲ್ಲಿ ರಾಜಕೀಯ ಮತ್ತು ಎಡಪಂಥೀಯ ವಿಚಾರಗಳನ್ನು ಕಲಿತ ಲೂಲಾ 1975ರ ವೇಳೆಗೆ ಈ ಲೋಹ ಕಾರ್ಮಿಕರ ಸಂಘಟನೆಯ ಮುಖಂಡರಾಗಿರುತ್ತಾರೆ. ಬ್ರೆಜಿಲ್‌ನ ಇತಿಹಾಸದಲ್ಲೇ ಕಂಡ ಅತ್ಯಂತ ದೊಡ್ಡ ದೊಡ್ಡ ಕಾರ್ಮಿಕ ಹೋರಾಟಗಳನ್ನು ರೂಪಿಸಿ ಮಿಲಿಟರೀ ಸರ್ವಾಧಿಕಾರದ ಕೆಂಗಣ್ಣಿಗೆ ಗುರಿಯಾಗಿ ತಿಂಗಳವರೆಗೂ ಸೆರೆವಾಸ ಮತ್ತು ಚಿತ್ರಹಿಂಸೆ ಅನುಭವಿಸಿ ಹೊರಬಂದ ನಂತರ 1980ರಲ್ಲಿ ಕಾರ್ಮಿಕ ಪಾರ್ಟಿಯ ಇನ್ನೂ ಇತರರೊಂದಿಗೆ ಸೇರಿ ಕಟ್ಟುತ್ತಾರೆ.. ಕಾರ್ಮಿಕ ಪಕ್ಷ ಬ್ರೆಜಿಲ್‌ನ ಇತಿಹಾಸದಲ್ಲೇ ಮೊದಲ ನೈಜ ಸಮಾಜವಾದಿ ಪಕ್ಷವಾಗಿ ಟ್ರೇಡ್ ಯೂನಿಯನ್, ಬುದ್ಧಿಜೀವಿಗಳು ಮತ್ತು ಆಕ್ಟಿವಿಸ್ಟ್ಗಳನ್ನು ತನ್ನತ್ತ ಸೆಳೆಯುತ್ತದೆ. ಮೊದಲಿನಿಂದಲೂ ಭೂಸುಧಾರಣೆಯನ್ನೇ ಕಾಣದ ಬ್ರೆಜಿಲ್‌ನಲ್ಲಿ 46% ಭೂಮಿ 1%ಕ್ಕಿಂತಲೂ ಕಡಿಮೆ ಇರುವ ಜನರಲ್ಲಿದೆ.

ಎಪ್ಪತ್ತು ಮತ್ತು ಎಂಬತ್ತರ ದಶಕದಲ್ಲಿ ಕೆಲಸಕ್ಕಾಗಿ ಹಳ್ಳಿಗಾಡಿನಿಂದ ಪಟ್ಟಣಕ್ಕೆ ಸೇರಿದ ಬ್ರೆಜಿಲ್ಲಿಯನ್ನರ ಜನಸಂಖ್ಯೆ ಎರಡು ಕೋಟಿಗೂ ಮೇಲು. ಇವರಲ್ಲಿ ಒಂದೂವರೆ ಕೋಟಿಗೂ ಹೆಚ್ಚಿನ ಗ್ರಾಮೀಣ ಕಾರ್ಮಿಕರು ಭೂಮಿ ಮತ್ತು ವಸತಿ ವಂಚಿತರು. ಇವರೆಲ್ಲರು ಸೇರಿ ‘ಖಾಲಿ ಇರುವ ಭೂಮಿಯಲ್ಲಿ ನೆಲೆಸುವುದೇ ನಮ್ಮೆಲ್ಲರ ಪರಿಹಾರ’ ಎಂಬ ಘೋಷಣೆಯೊಂದಿಗೆ 1984ರಲ್ಲಿ ಭೂಮಿ ಮತ್ತು ವಸತಿವಂಚಿತ ಕಾರ್ಮಿಕ ಆಂದೋಲನವನ್ನು ಶುರು ಮಾಡುತ್ತಾರೆ. ಇದು ಅಮೆರಿಕ ಖಂಡದಲ್ಲಿಯೇ ಅತ್ಯಂತ ದೊಡ್ಡ ಹೋರಾಟ ಸಮಿತಿ. ಇದರಲ್ಲಿ ಒಂದೂವರೆ ಕೋಟಿಗೂ ಹೆಚ್ಚು ಜನ ಸದಸ್ಯರಿದ್ದಾರೆ. ಇವೆಲ್ಲಾ ಹೋರಾಟಗಳ ಫಲವಾಗಿ 1985ರ ಮಾರ್ಚ್ 31ರಂದು ಮಿಲಿಟರೀ ಆಡಳಿತ ಕೊನೆಗೊಂಡು ಪ್ರಜಾಪ್ರಭುತ್ವದ ಕಡೆಗೆ ಬ್ರೆಜಿಲ್ ಹೆಜ್ಜೆಯಿಡುತ್ತದೆ. ಪ್ರಜಾಪ್ರಭುತ್ವದಡಿಯಲ್ಲಿ ನಡೆದ ಚುನಾವಣೆಗಳಲ್ಲಿ ಕೂಡ ನಡುಪಂಥೀಯರು ಅಥವಾ ನಡು-ಬಲಪಂಥೀಯರು ಅಧಿಕಾರ ಹಿಡಿದಿರುತ್ತಾರೆ ಮತ್ತು ನವ ಉದಾರೀಕರಣದ ರಾಜಕೀಯವನ್ನು ಚಾಚೂತಪ್ಪದೆ ಮಾಡಿಕೊಂಡು ಬರುತ್ತಿರುತ್ತಾರೆ. 70 ಮತ್ತು 80ರ ದಶಕದಲ್ಲಿ ಬ್ರೆಜಿಲ್ ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ದುಡಿಯುವ ವರ್ಗವಿದ್ದ ರಾಷ್ಟ್ರ. ಕಾರ್ಮಿಕ ಪಕ್ಷ 80 ಮತ್ತು 90ರ ದಶಕದಲ್ಲಿ ತುಂಬಾ ಜನಾಂದೋಲನಗಳು ಮತ್ತು ಜನಸಂಪರ್ಕ ಯೋಜನೆಗಳನ್ನು ರೂಪಿಸುತ್ತದೆ. ಇದರ ನಡುವೆ ಲೂಲಾ ಮೂರು ಬಾರಿ (1989, 1994 ಮತ್ತು 1998) ಚುನಾವಣೆಗಳಲ್ಲಿ ನಿಂತು ಸೋತಿರುತ್ತಾರೆ. ಮುಂದೆ 2002ರಲ್ಲಿ ನಡೆದ ಚುನಾವಣೆಯಲ್ಲಿ ಜಯಭೇರಿ ಬಾರಿಸುತ್ತಾರೆ.

80ರಲ್ಲಿ ಭಾರೀ ದೊಡ್ಡ ಕಾರ್ಮಿಕ ಒಕ್ಕೂಟದ ಬಂಡಾಯದಿಂದ ಸ್ಥಾಪನೆಯಾಗಿದ್ದ ಕಾರ್ಮಿಕ ಪಕ್ಷ, ತೀವ್ರಗಾಮಿ ಪ್ರಗತಿಪರತೆ ಮತ್ತು ಕ್ರಾಂತಿಕಾರಿ ವಿದ್ಯಾರ್ಥಿ ಚಳುವಳಿಗಳ ದೆಸೆಯಿಂದ ಅಧಿಕಾರವನ್ನು ಪಡೆದಿತ್ತು. ಕಾರ್ಮಿಕ ಪಕ್ಷವು 2002ರಿಂದ 2010ರವರೆಗೂ ಲೂಲಾ ನಾಯಕತ್ವದಲ್ಲಿ ಮತ್ತು 2010ರಿಂದ 2016ರವರೆಗೂ ದಿಲ್ಮ ರೌಸೆಫ್ಫ್ ನಾಯಕತ್ವದಲ್ಲಿ 2010ರಿಂದ 2016ರವರೆಗೆ ಅಧಿಕಾರ ಹಿಡಿದಿತ್ತು. ಲೂಲಾ ರಾಷ್ಟ್ರಪತಿಯಾದ ದಿನದಿಂದಲೇ ದೇಶದ ಸಿರಿವಂತರ ಮೂರ್ನಾಲ್ಕು ಕುಟುಂಬಗಳೇ ನಡೆಸುವ ಬ್ರೆಜಿಲ್ ಮಾಧ್ಯಮಗಳ ಮೂಲಕ ‘ದೇಶವು ಅದರಲ್ಲೂ ಬಡವರು, ನಮ್ಮನ್ನು ಅವಮಾನಿಸಲೆಂದೇ ಒಬ್ಬ ಓದಿಲ್ಲದ ಕಾರ್ಮಿಕನನ್ನು ದೇಶದ ನಾಯಕನನ್ನಾಗಿಸಿದೆ’ ಎಂದು ಜರಿಯುತ್ತಾರೆ. ಪಕ್ಷದಲ್ಲಿಯೇ ಇದ್ದ ಕ್ರಾಂತಿಕಾರಿ ಸಂಘಟಕರು ಚುನಾವಣೆ ಗೆಲ್ಲಲು ಪಕ್ಷದ ಕ್ರಾಂತಿಕಾರಿ ಸಿದ್ಧಾಂತದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆಪಾದಿಸುತ್ತಾರೆ. ಇವೆಲ್ಲದರ ನಡುವೆ ಲೂಲಾ ತನ್ನ ಅಧಿಕಾರದ 8 ವರ್ಷ ಪೂರೈಸುತ್ತಾರೆ. ಜನಪ್ರಿಯ ಜನಕಲ್ಯಾಣ ಯೋಜನೆಗಳನ್ನು ರೂಪಿಸುತ್ತಾರೆ. ಬೊಳ್ಸೋ ಕುಟುಂಬ ಯೋಜನೆ ಪ್ರಸಿದ್ಧಿ ಪಡೆಯುತ್ತದೆ. ಈ ಯೋಜನೆಯ ಅಡಿಯಲ್ಲಿ ಯಾರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿರುತ್ತಾರೋ ಮತ್ತು ಸಮಯಕ್ಕೆ ಸರಿಯಾಗಿ ಲಸಿಕೆಗಳನ್ನು ಹಾಕಿಸುತ್ತಾರೋ ಅವರಿಗೆ ತಿಂಗಳಿಗೆ 115 ಡಾಲರ್ ಸರ್ಕಾರದಿಂದ ನೇರ ಸಂದಾಯವಾಗುತ್ತದೆ. ಬಡತನದಿಂದ ಸ್ವಲ್ಪ ಜನ ಮಧ್ಯಮ ವರ್ಗಕ್ಕೆ ಸೇರುತ್ತಾರೆ. ಗ್ರಾಮೀಣ ಆರೋಗ್ಯ, ವಿದ್ಯುತ್ ಸಂಪರ್ಕ ಎಲ್ಲರಿಗೂ ಸಿಗುವ ಹಾಗೆ ಮಾಡುತ್ತಾರೆ. ಬಡ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯಕ್ಕೆ ಸೇರುವ ಹಾಗೆ ಮೀಸಲಾತಿ ತರುತ್ತಾರೆ. ಬ್ರೆಜಿಲ್ ಹಿಂದೆಂದೂ ಕಂಡರಿಯದ ಆರ್ಥಿಕ ಪ್ರಗತಿಯನ್ನು ಕಾಣುತ್ತದೆ (2008ರ ಆರ್ಥಿಕ ಕುಸಿತದ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಎದುರಿಸದೆ). ಅಮೆರಿಕ ವಾಣಿಜ್ಯಕ್ಕೆ ಸೀಮಿತವಾಗಿದ್ದ ಬ್ರೆಜಿಲ್ ಮಾರುಕಟ್ಟೆ ಸ್ವಂತ ವಿದೇಶಿ ನೀತಿ ಮತ್ತು ಬ್ರಿಕ್ಸ್ (ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಒಕ್ಕೂಟ) ವತಿಯಿಂದ ಜಾಗತಿಕ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತದೆ. ಲೂಲಾ ಅಧಿಕಾರದ ಕೊನೆಯಲ್ಲಿ ಅವರ ಜನಪ್ರಿಯತೆ 80%ರಷ್ಟು ಇತ್ತು. ಇದು ಯಾವುದೇ ದೇಶದ ನಾಯಕರಿಗೆ ಇರಲಿಲ್ಲ. ಬಡವರೇ ಅಲ್ಲದೆ ಶ್ರೀಮಂತರು ಸಹಾ ಲೂಲಾರನ್ನು ಪ್ರೀತಿಸುತ್ತಿದ್ದರು. ಲೂಲಾ ನಂತರ ಲೂಲರ ಸ್ವಂತ ಆಯ್ಕೆಯಾದ ದಿಲ್ಮ ರೌಸೆಫ್ಫ್ (ಮಿಲಿಟರೀ ಸರ್ವಾಧಿಕಾರದಲ್ಲಿ 3 ವರ್ಷ ಜೈಲುಪಾಲಾಗಿ ಚಿತ್ರಹಿಂಸೆ ಅನುಭವಿಸಿದ್ದ ಸವೊ ಪಾಲೊ ನಗರದ ಯುವತಿ) ಬ್ರೆಜಿಲ್‌ನ ನಾಯಕಿಯಾಗುತ್ತಾರೆ. ನಾಲ್ಕು ಬಾರೀ ಸೋತು ಇಲ್ಲಿಯವರೆಗೂ ತೆರೆಮರೆಯಲ್ಲಿ ಯೋಜನೆಗಳನ್ನು ರೂಪಿಸುತ್ತಿದ್ದ ದೊಡ್ಡ ದೊಡ್ಡ ಸ್ಥಾಪಿತ ಹಿತಾಸಕ್ತಿಗಳು, ಪ್ರತಿಗಾಮಿ ಶಕ್ತಿಗಳ ಕುತಂತ್ರದಿಂದ ಮತ್ತು ತನ್ನದೇ ತಪ್ಪುಗಳಿಂದ ಆಕೆಯು 2016ರಲ್ಲಿ ಇಲ್ಲ-ಸಲ್ಲದ ಕ್ಷುಲ್ಲಕ ದೋಷಾರೋಪಗಳಿಂದ ಅಧಿಕಾರದಿಂದ ಕೆಳಗಿಳಿಯಬೇಕಾಗುತ್ತದೆ ಮತ್ತು 2018ರ ಚುನಾವಣೆಯ ಹೊತ್ತಿಗೆ ಸ್ಥಾಪಿತ ಹಿತಾಸಕ್ತಿಗಳ (ಬಿಬಿಬಿ ಲಾಬಿ) ಕಾರ್ಯಾಚರಣೆಯು ಚುರುಕುಗೊಳ್ಳುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...