Homeಮುಖಪುಟಗರುಡ ಪುರಾಣವನ್ನು ಹೇಗೆ ಗ್ರಹಿಸಬೇಕು?

ಗರುಡ ಪುರಾಣವನ್ನು ಹೇಗೆ ಗ್ರಹಿಸಬೇಕು?

- Advertisement -
- Advertisement -

ಗರುಡ ಪುರಾಣವನ್ನು ಓದಿದಾಗ ಗ್ರಹಿಕೆಗೆ ಸಿಕ್ಕುವುದು ವೈರಾಗ್ಯದ ಸಾರ. ಪ್ರಾಣವಾಯುವಿನ ಸೂಕ್ಷ್ಮತೆಗಳನ್ನು ಪ್ರತಿಮಾರೂಪದಲ್ಲಿ, ಒಗಟುಗಳಲ್ಲಿ ವಿವರಿಸಿದಂತೆ ತೋರುತ್ತದೆ. ಪ್ರಸ್ತುತ ಜೀವನ ಮತ್ತು ಜೀವನದಾಚೆಯ ಮರ್ಮ – ಇವುಗಳನ್ನು ಅರಿತುಕೊಳ್ಳಲು ಸಾಧ್ಯವಾಗುವಂತಹ ಸೂಕ್ಷ್ಮ ಮಾರ್ಗಗಳನ್ನು, ಸಂವೇದನೆಗಳನ್ನು ಗ್ರಹಿಸಲು ಸಾಧ್ಯವೆಂಬಂತೆ ಭಾಸವಾಗುತ್ತದೆ. ಪ್ರಾಣವು ಚಲಿಸುವಂತದ್ದು ಮತ್ತು ಅದು ಚಲನೆಯಲ್ಲಿರುವುದು. ಹಾಗೆ ಚಲಿಸುವಾಗ ಅದನ್ನು ಮನಸ್ಸೆಂಬುದನ್ನು ಹೇಗೆ ಗ್ರಹಿಸುತ್ತದೆ? ಬುದ್ಧಿ ಹೇಗೆ ವಿಶ್ಲೇಷಿಸಬಹುದು? ಇತ್ಯಾದಿಗಳನ್ನು ಈ ಪ್ರಾಣದ ಪ್ರಯಾಣ ಸೂಚಿಸುವುದರಿಂದಲೇ ಹಾರುವ ಗರುಡನ ಪ್ರತಿಮೆ ಇಲ್ಲಿ ರೂಪಕವಾಗಿದೆ ಎಂದು ಗ್ರಹಿಸಬಹುದು. ಆದರೆ ಇದು ಬರಿಯ ಒಂದು ಮಗ್ಗುಲಿನ ಆಲೋಚನೆಯಾಗುತ್ತದೆ. ಅದರ ಆಳ ಮತ್ತು ವಿಸ್ತಾರದ ಜೊತೆಗೆ ನಂತರ ಸೇರ್ಪಡೆಯಾದ ಹುನ್ನಾರಗಳು ಕೂಡ ಅಧ್ಯಯನ ವ್ಯಾಪ್ತಿಯು ಹಿರಿದಾಗಿಸುತ್ತದೆ.

ಗರುಡ ಪುರಾಣವನ್ನು ಓದಿದರೆ ವೈರಾಗ್ಯವುಂಟಾಗಿ ಸಂಸಾರದ ಮೇಲೆ ಜಿಗುಪ್ಸೆ ಬರಬಹುದೆಂಬ ಕಾರಣದಿಂದ ನಿಷೇಧವನ್ನು ಹೇರಿರಬೇಕು. ಗರುಡ ಪುರಾಣ ಉಂಟು ಮಾಡುವ ವೈರಾಗ್ಯದ ಗಾಢ ಪ್ರಭಾವವನ್ನು ಗಮನಿಸಿರುವವರಿಗೆ ಇದು ನಿಜವೆನಿಸುತ್ತದೆ. ಸಾವು ಸಂಭವಿಸಿದಾಗ ಓದುವುದರಿಂದ ಹದಿನೈದು ದಿನಗಳ ಅಪರ ಕಾರ್ಯದ ವೇಳೆಯಲ್ಲಿ ಸಂಬಂಧಿಕರಲ್ಲಿ ವೈರಾಗ್ಯವು ನೆಲೆಸಿ, ಸಾವು ಎಂಬುದು ಅಂತಹ ಆಘಾತಕಾರಿಯಾದ ಅವಘಡ ಅಲ್ಲ, ಸಹಜವಾದದ್ದು, ನೈಸರ್ಗಿಕವಾದದ್ದು ಎಂಬ ಅರಿವು ಉಂಟಾಗಿ ಮನಸ್ಸಿಗೆ ಶಾಂತಿ ಲಭಿಸಲಿ ಎಂಬ ಉದ್ದೇಶವೇ ಹೊರತು ಬೇರೆ ಏನೂ ಇಲ್ಲ. ಕಾಲಾನಂತರದಲ್ಲಿ ಇದು ವಾಡಿಕೆಯಾಯಿತು.

ವಿಷ್ಣು ತನ್ನ ವಾಹನವಾದ ಗರುಡನಿಗೆ ನೀಡುವ ಉಪದೇಶದ ರೂಪದಲ್ಲಿರುವ ಗರುಡ ಪುರಾಣ ನಾನಾ ಕಾರಣಗಳಿಂದ ಆಕರ್ಷಕ. ಸಾಮಾನ್ಯ ಜನರಿಗೆ ತಿಳಿದಿರುವ ಹಾಗೆ ಅದು ನರಕದ ವರ್ಣನೆ, ಸಾವಿನ ಕುರಿತಾದದ್ದು ಎಂಬ ಭಾವ. ಅದು ನಿಜವಾದರೂ ಅದರ ವಿಚಾರವೇ ಇಡೀ ಗರುಡ ಪುರಾಣವೇನಲ್ಲ. ಪ್ರೇತಕಾಂಡ ಅಥವಾ ಪ್ರೇತಕಲ್ಪವು ಅದರ ಒಂದು ಭಾಗ ಅಷ್ಟೇ. ಎಲ್ಲಾ ಪುರಾಣಗಳನ್ನೂ ಅನಾದಿ, ಪುರಾತನ ಎಂದು ಹೇಗೆ ಕರೆಯಲು ಸಾಧ್ಯವಿಲ್ಲವೋ ಹಾಗೆಯೇ ಗರುಡ ಪುರಾಣವೂ ಕೂಡ ಪೂರ್ಣ ಪುರಾತನವೇನಲ್ಲ. ಕಾಲದಿಂದ ಕಾಲಕ್ಕೆ ಹಲವಾರು ಕರ್ತೃಗಳು ಇದರಲ್ಲಿ ಲೇಖನಿಗಳನ್ನಾಡಿಸುತ್ತಾ ಕೃತಿಯನ್ನು ವಿಸ್ತರಿಸಿದ್ದಾರೆ. ಹಾಗಾಗಿ ಇಡೀ ಗರುಡಪುರಾಣ ಏನನ್ನು ಧ್ವನಿಸಲು ಹೊರಟಿತ್ತು, ಈಗ ಅದರಲ್ಲಿ ಏನೇನೆಲ್ಲಾ ಇದೆ ಎಂದು ಚುಟುಕಾಗಿ ಹೇಳಲು ಕಷ್ಟವಾಗುವುದು.

ಗರುಡನೊಬ್ಬ ಅಪ್ರತಿಮ ವೀರ. ದಾಸ್ಯದ ವಿರುದ್ಧ ದನಿ ಎತ್ತಿದ ಬಂಡಾಯಗಾರ. ಹಾಗೂ ಆರ್ಯರ ಕುಟಿಲತನಕ್ಕೆ ಮೋಸ ಹೋದ ಮತ್ತು ಸೋತ ದುರಂತ ಪ್ರತಿಮೆ ಕೂಡಾ. ನಾಗ ಮತ್ತು ಗರುಡ ಈ ಎರಡೂ ಗಣಗಳು ಅಥವಾ ಕುಲಗಳೂ ಒಂದೇ ಮೂಲದಿಂದ ಬಂದಿರುವವಾದರೂ ತಮ್ಮ ಆಂತರಿಕ ಕಲಹದಿಂದ ಅಥವಾ ದಾಯಾದೀ ಜಗಳದಿಂದ ಆರ್ಯರ ರಾಜಕೀಯ ತಂತ್ರಕ್ಕೆ ಬಲಿಪಶುಗಳಾದರು. ನಾಗಕುಲವಾದರೂ ದೇವತೆಗಳ ವಿರುದ್ಧ ಸೆಣೆಸುತ್ತಲೇ ಬಂತು. ಆದರೆ ಗರುಡ, ದೇವತೆಗಳ ತಂತ್ರಕ್ಕೆ ಬಲಿಯಾಗಿ ತಮ್ಮದೇ ಮೂಲದ ಗಣದವರಿಗೆ ಶತ್ರುಗಳಾದರು. ಗರುಡ ವಿಷ್ಣುವಿನ ವಾಹನವೆಂದರೆ, ಆರ್ಯರ ರೂಪಕವಾದ ವಿಷ್ಣುವು ಬುಡಕಟ್ಟಿನ ಗರುಡನನ್ನು ತನ್ನ ಅಧೀನದಲ್ಲಿಟ್ಟುಕೊಂಡು, ನಂತರ ವಿರೋಧಿಗಳಾದ ನಾಗರ ಮೇಲೆ ತನ್ನ ವೈಷಮ್ಯವನ್ನು ಸಾಧಿಸುವುದರ ಸಂಕೇತ.
ಆರ್ಯ ರಾಜಕೀಯ ಹುಟ್ಟಿಹಾಕಿದ ಮೌಢ್ಯಕ್ಕೆ ನಮ್ಮ ಜನ ಇಂದೂ ಸಹೋದರರಾದ ನಾಗ ಮತ್ತು ಗರುಡರನ್ನು ಶತ್ರುಗಳಂತೆ ನೋಡುತ್ತಿದ್ದಾರೆ. ಜೊತೆಗೆ ಗರುಡ ಮಚ್ಚೆ ಇದ್ದರೆ ಹಾವುಗಳು ಬಾಧಿಸವು, ಸರ್ಪದೋಷ ಬಾರದು ಎಂಬ ಮೌಢ್ಯಗಳು ಬೇರೆ. ಗರುಡನಂತ ಮುಗ್ಧ ಮತ್ತು ವೀರನನ್ನು ತಮ್ಮ ಕಾವಲು ಭಟನಂತೆ ಅಥವಾ ಸಾರಥಿಯಂತೆ ವಾಹಕವನ್ನಾಗಿ ಮಾಡಿಕೊಂಡ ಕತೆಯನ್ನು ಪುರಾಣಗಳು ತಿಳಿಸುತ್ತವೆ.

ಗರುಡನ ಪುರಾಣದ ಕಥೆಯನ್ನು ಗಮನಿಸಿದರೆ ಕದ್ರು ಮತ್ತು ವಿನುತೆಯರಿಬ್ಬರೂ ತಾಯಾಳಿಕೆಯವರಾಗಿದ್ದವರೆಂದು ತೋರುತ್ತದೆ. ಜೊತೆಗೆ ಅವರಿಬ್ಬರೂ ಕೂಡ ಗಣಗಳ ಮತ್ತು ಬಣಗಳ ಒಡತಿಯರೆಂದು ಕೂಡ ಕಾಣುತ್ತದೆ. ಅವರಿಬ್ಬರಲ್ಲಿ ನಡೆಯುವ ಸಂಘರ್ಷದ ಕತೆಯು ಮಕ್ಕಳಿಗೆ ಮುಂದುವರಿದಿತ್ತು. ಪಂಥವು ಅದೇನೇ ಇರಲಿ, ನಾಗರನ್ನು ದ್ವೇಷಿಸಲು ಇಂದ್ರನು, ಆರ್ಯರ ದೇವರಾಜನು ಕುಮ್ಮಕ್ಕು ಕೊಡುತ್ತಾನೆ. ಅವರಿಬ್ಬರನ್ನೂ ಒಂದಾಗಲು ಬಿಡುವುದಿಲ್ಲ. ಒಡೆದು ಆಳುವ ನೀತಿಯನ್ನು ಆರ್ಯರಲ್ಲಿ ಕಾಣುತ್ತೇವೆ. ಆದರೆ ಅದೇ ಇಂದ್ರ ಅಮೃತವನ್ನು ಕದಿಯುತ್ತಾನೆ.

ಅದೇನೇ ಇರಲಿ, ಕರ್ನಾಟಕದಲ್ಲಿಯೂ ಸ್ವಾಮಿನಿಷ್ಠ ಸಾಹಸಿಗಳನ್ನು, ಪ್ರಾಣವನ್ನೇ ಮುಡಿಪಿಟ್ಟು ತಮ್ಮ ದಣಿಯನ್ನು ಕಾಪಾಡುತ್ತಿದ್ದ ನಿಷ್ಠರನ್ನು ಗರುಡ ಎಂದು ಕರೆಯುವುದು ಕಾಕತಾಳೀಯವೇನಲ್ಲ. ಪೌರಾಣಿಕ ಗರುಡನ ಸ್ವಾಮಿನಿಷ್ಠತೆಯು ಇಲ್ಲಿಯವರೆಗೂ ಧ್ವನಿಸಿದೆ.
ಇಂಥಾ ಗರುಡನಿಗೆ ಯಮಮಾರ್ಗದ ಬಗ್ಗೆ ವಿಷ್ಣುವು ಹೇಳುತ್ತಾನೆ.

ಇಂತೆಲ್ಲಾ ಮಾಹಿತಿಗಳಿಂದ ಗರುಡ ಪುರಾಣವು ಪರಿಷ್ಕೃತಗೊಂಡಿರುವುದು ಮಹಾಭಾರತದ ನಂತರದ ಕಾಲದಲ್ಲಿ ಎಂದು ಅವಲೋಕಿಸಬಹುದು. ಅದೂ ಚಾರ್ವಾಕರ ನಂತರ. ಚಾರ್ವಾಕರ ಪ್ರಭಾವ ದಟ್ಟವಾಗುತ್ತಿದ್ದ ಸಮಯದಲ್ಲಿ ಜನಗಳಲ್ಲಿ ತಾವು ಮಾಡುವ ಕರ್ಮಗಳ ಭಯ ಹುಟ್ಟಿಸುವ ಅಗತ್ಯ ವೈದಿಕರಿಗಿತ್ತು. ಹಾಗಾಗಿ ಗರುಡಪುರಾಣದಲ್ಲಿ ನರಕದ ಬಾಧೆ ಸೇರಿಸಲಾಯಿತು.

ಸಾವಿನ ಭಯವನ್ನು ಗೆಲ್ಲಲು ಮತ್ತು ಬದುಕಿರುವಾಗ ನೈತಿಕತೆಯನ್ನು ಮೀರದಿರುವ ಆಶಯ ಗರುಡ ಪುರಾಣ ಕೃತಿಯಲ್ಲಿ ಅಡಗಿದೆ. ವಿಪರೀತದ ಪ್ರತಿಮಾ ರೂಪಕಗಳನ್ನು ನೇರವಾಗಿ ಗ್ರಹಿಸಿದರೆ ಗರುಡ ಪುರಾಣದ ಓದು ಮೌಢ್ಯತೆಯ ಪಾಲಾಗುತ್ತದೆ.‌

  • ಯೋಗೇಶ್‌ ಮಾಸ್ಟರ್

ಇದನ್ನೂ ಓದಿ: ತಾನೊಂದು ಹೆಣ್ಣಾಗಿದ್ದು ಶಾಪ, ಕಪ್ಪು ಹೆಣ್ಣಾಗಿದ್ದು ಮಹಾಶಾಪ : ಮೇರಿ ಪ್ರಿನ್ಸ್ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...