Homeಮುಖಪುಟಬೇಜವಾಬ್ದಾರಿ ನಡವಳಿಕೆಗಾಗಿ ಕ್ಷಮೆ ಕೋರಿದ ದಿ ಟೈಮ್ಸ್‌ ಆಫ್‌ ಇಂಡಿಯಾ : ಉಳಿದ ಮಾಧ್ಯಮಗಳಿಗೂ ಇದು...

ಬೇಜವಾಬ್ದಾರಿ ನಡವಳಿಕೆಗಾಗಿ ಕ್ಷಮೆ ಕೋರಿದ ದಿ ಟೈಮ್ಸ್‌ ಆಫ್‌ ಇಂಡಿಯಾ : ಉಳಿದ ಮಾಧ್ಯಮಗಳಿಗೂ ಇದು ಪಾಠ

- Advertisement -
- Advertisement -

“ಈ ಸುದ್ದಿಯಲ್ಲಿ ನಾವು ಅಜಾಗರೂಕತೆಯಿಂದಾಗಿ ತಪ್ಪಾದ ಫೋಟೋವನ್ನು ಅಪ್‌ಲೋಡ್ ಮಾಡಿದ್ದೇವೆ. ಈ ದೋಷಕ್ಕಾಗಿ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ.” ಹೀಗೆಂದು ದಿ ಟೈಮ್ಸ್‌ ಆಫ್‌ ಇಂಡಿಯಾ ಇಂದಿನ ಒಂದು ವರದಿಯ ಮೊದಲ ಪ್ಯಾರದಲ್ಲಿ ಬರೆದುಕೊಂಡಿದೆ. ಹಾಗಾದರೆ ಅದು ಮಾಡಿದ ತಪ್ಪಾದರೂ ಏನು? ಅದರಿಂದಾದ ಅನಾಹುತವೇನು ನೋಡೋಣ ಬನ್ನಿ. ಏಕೆಂದರೆ ಇದರಿಂದ ಉಳಿದ ಮಾಧ್ಯಮಗಳು ಕಲಿಯುವುದು ಬಹಳಷ್ಟಿದೆ.

ಕ್ಷಮೆ ಕೇಳಿದ ಟೈಮ್ಸ್‌ ಆಫ್‌ ಇಂಡಿಯಾ

“ಭಾರತದಲ್ಲಿ ಪತ್ರಿಕೋದ್ಯಮ ಈ ಮಟ್ಟಕ್ಕೆ ಇಳಿದಿದೆ. TOI ಮತ್ತು ಭಾರತೀಯ ಪತ್ರಿಕೋದ್ಯಮದ ಮೇಲೆ ನಾನು ಇಟ್ಟಿದ್ದ ಸಣ್ಣ ಪ್ರಮಾಣದ ನಂಬಿಕೆ ಈಗಷ್ಟೇ ಕಡಿಮೆಯಾಗಿದೆ. ನಾವು ಸಂಪೂರ್ಣವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಮತ್ತು ಈ ಘಟನೆಗೂ ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ. ಇದು ನಿಜವಾಗಿಯೂ ನಮ್ಮ ಕುಟುಂಬ ಮತ್ತು ಸ್ನೇಹಿತರನ್ನು ಬೆಚ್ಚಿಬೀಳಿಸಿದೆ ಮತ್ತು ಈ ಬೆಳಿಗ್ಗೆ ನಮಗೆ ಡಿಸ್ಟರ್ಬ್‌ ಆಗಿದೆ.”

“TOI, ದಯವಿಟ್ಟು ಈ ತಪ್ಪನ್ನು ತಿದ್ದುಪಡಿ ಮಾಡಿ ಮತ್ತು ಔಪಚಾರಿಕ ಕ್ಷಮೆಯಾಚನೆಯೊಂದಿಗೆ ಸರಿಪಡಿಸಿ. ಮತ್ತೊಮ್ಮೆ ಹೇಳುತ್ತಿದ್ದೇವೆ, ನಾವು ಚೆನ್ನಾಗಿದ್ದೇವೆ ಮತ್ತು ನಮ್ಮ ಬಗ್ಗೆ ಕಾಳಜಿ ವಹಿಸುವ ಎಲ್ಲ ಪ್ರೀತಿಪಾತ್ರರಿಗೆ ಧನ್ಯವಾದಗಳು. ನಾವು ಹಿಂದೆಂದಿಗಿಂತಲೂ ಸಂತೋಷದಿಂದ ಮತ್ತು ಒಟ್ಟಿಗೆ ಇದ್ದೇವೆ.” ಹೀಗೆಂದು ಇಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡ ದಂಪತಿಗಳು ಸಿದ್ದ ಆಹಾರ ಉದ್ಯಮಿಗಳಾದ (ಬಗೆ ಬಗೆ ಅಡುಗೆ ಮಾಡುವ ಮತ್ತು ರೆಸಿಪಿ ಹೇಳಿಕೊಡುವ) ಅಮಿತ್ ಅಗರ್ವಾಲ್ ಮತ್ತು ಶಿಲ್ಪಿ ಅಗರ್ವಾಲ್.

TOI has used our photo for an unrelated news without any verification. This is what the journalism has come down to.

This is what the journalism has come down to in India. Whatever small amount of trust I had on TOI and on Indian journalism has just gone down the drain. We (Amit Agarwal & Shilpi Agarwal) are doing totally fine and this incident is nowhere related to us. This has really shocked our family and friends and caused a chaos this morning for us.TOI, please fix this asap with a correction and formal apology. Once again, we are fine and thanks to all the loved ones who are concerned about us. We are happy and together like never before 🙂 #incorrectnews #timesofindia #fakenews #TOINewslink: https://timesofindia.indiatimes.com/city/kolkata/man-kills-estranged-wife-in-bluru-mom-in-law-in-kol-shoots-self/articleshow/76519987.cms

Posted by Foods And Flavors on Monday, June 22, 2020

ಅವರು ಹೀಗೆ ಹೇಳಲು ಕಾರಣವೆಂದರೆ ಜೂನ್ 22 ರಂದು ಬೆಂಗಳೂರಿನಲ್ಲಿ ನಡೆದ ಸರಣಿ ಕೊಲೆ ಮತ್ತು ಆತ್ಮಹತ್ಯೆ ಪ್ರಕರಣವೊಂದನ್ನು ವರದಿ ಮಾಡಿರುವ ಟೈಮ್ಸ್‌ ಆಫ್‌ ಇಂಡಿಯಾವು ತನ್ನ ಸುದ್ದಿಯ ಮುಖಪುಟದಲ್ಲಿ ಈ ಇಬ್ಬರೂ ದಂಪತಿಗಳ ಫೋಟೊವನ್ನು ಪ್ರಕಟಿಸಿಬಿಟ್ಟಿದೆ. ಅದನ್ನು ಗಮನಿಸಿದ ಅವರ ಸ್ನೇಹಿತರು ಮತ್ತು ಸಂಬಂಧಿಕರು ಆತಂಕಗೊಂಡು ಅಮಿತ್ ಅಗರ್ವಾಲ್ ಮತ್ತು ಶಿಲ್ಪಿ ಅಗರ್ವಾಲ್‌ಗೆ ಫೋನ್ ಮಾಡಿ ಆತಂಕ ಹಂಚಿಕೊಂಡಿದ್ದಾರೆ.

ನಿಜವಾಗಿ ನಡೆದುದ್ದೇನು? ತಪ್ಪಾಗಿದ್ದು ಎಲ್ಲಿ?

ಕೋಲ್ಕತ್ತಾ ಮೂಲದ ಚಾರ್ಟರ್ಡ್ ಅಕೌಂಟೆಂಟ್ ಆದ ವ್ಯಕ್ತಿಯೊಬ್ಬ ಬೆಂಗಳೂರಿನ ಹುಡುಗಿಯನ್ನು ಮದುವೆಯಾಗಿದ್ದಾರೆ. ತದನಂತರ ಅವರ ಸಂಸಾರದಲ್ಲಿ ಬಿರುಕುಬಂದು ವಿಚ್ಚೇದನ ಪಡೆದಿದ್ದಾರೆ. ಆದರೆ ಆಸ್ತಿ ವಿಷಯಕ್ಕೆ ತೀವ್ರ ಜಗಳವಾದ್ದರಿಂದ ತನ್ನ ವಿಚ್ಛೇದಿತ ಹೆಂಡತಿ ಮನೆಗೆ ನುಗ್ಗಿ ಆಕೆಯನ್ನು ಕೊಲೆ ಮಾಡಿದ್ದಾನೆ. ಅಲ್ಲಿಂದ ಕೊಲ್ಕತ್ತಾಗೆ ಮರಳಿ ಆಕೆಯ ತಾಯಿಯನ್ನು ಸಹ ಕೊಂದಿದ್ದಾನೆ. ನಂತರ ತಾನೂ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಹೆಸರೂ ಅಮಿತ್ ಅಗರ್ವಾಲ್ ಮತ್ತು ಆತನ ವಿಚ್ಛೇದಿತ ಪತ್ನಿಯ ಹೆಸರು ಶಿಲ್ಪಿ ಅಗರ್ವಾಲ್ ಆಗಿದೆ. ಇಬ್ಬರೂ ಸಹ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದಾರೆ. ಟೈಮ್ಸ್ ಆಫ್‌ ಇಂಡಿಯಾ ಸುದ್ದಿ ಮಾಡುವ ಭರದಲ್ಲಿ ಇವರ ಬದಲಿಗೆ ಸಿದ್ದ ಆಹಾರ ಉದ್ಯಮಿಗಳಾದ ಅಮಿತ್ ಅಗರ್ವಾಲ್ ಮತ್ತು ಶಿಲ್ಪಿ ಅಗರ್ವಾಲ್‌ರವರ ಚಿತ್ರ ಪ್ರಕಟಿಸಿಬಿಟ್ಟಿದೆ.

ಇದರಿಂದ ನೊಂದುಕೊಂಡ ಆ ಉದ್ಯಮಿಗಳು ಫೇಸ್‌ಬುಕ್‌ನಲ್ಲಿ ವಿಡಿಯೋವೊಂದನ್ನು ಪೋಸ್ಟ್‌ ಮಾಡಿ “ಖ್ಯಾತ ಪತ್ರಿಕೆ ಈ ರೀತಿ ಮಾಡಬಾರದು. ಸುದ್ದಿ ಪ್ರಕಟಿಸುವ ಮುನ್ನ ಪರೀಶಿಲಿಸಬೇಕು” ಎಂದು ಆಗ್ರಹಿಸಿದ್ದಾರೆ.

“ಸುದ್ದಿಯನ್ನು ಬ್ರೇಕಿಂಗ್‌ ಮಾಡುವ ವಿಪರೀತ ಹುಚ್ಚಿನೊಂದಿಗೆ ಅನೈತಿಕ ಮತ್ತು ವೃತ್ತಿಪರವಲ್ಲದ ಕೆಲಸದ ಸಂಸ್ಕೃತಿಯು ಭಾರತೀಯ ಪತ್ರಿಕೋದ್ಯಮವನ್ನು ನಾಶಪಡಿಸುತ್ತಿದೆ. ಇದೇ ತಪ್ಪಿಗೆ ಪಾಶ್ಚಿಮಾತ್ಯ ದೇಶಗಳಲ್ಲಿ ನ್ಯಾಯಾಲಯಗಳು ಮಿಲಿಯನ್ ಡಾಲರ್‌ ಡಂಡ ವಿಧಿಸುತ್ತಿದ್ದವು” ಎಂದು ಅರುಣ್ ಭೋಥ್ರಾ ಎಂಬುವವರು ಟ್ವೀಟ್‌ ಮಾಡಿದ್ದಾರೆ.

ತದನಂತರ ತನ್ನ ತಪ್ಪಿನ ಅರಿವಾದ ಕೂಡಲೇ ಟೈಮ್ಸ್‌ ಆಫ್‌ ಇಂಡಿಯಾ ಆ ದಂಪತಿಗಳ ಫೋಟೊವನ್ನು ತೆಗೆದುಹಾಕಿ ಕ್ರೈಂ ನ ಸಾಂಕೇತಿಕ ಫೋಟೊವನ್ನು ಅಪ್‌ಲೋಡ್‌ ಮಾಡಿದೆ. ಜೊತೆಗೆ ತಾನು ಮಾಡಿದ ಪ್ರಮಾದಕ್ಕಾಗಿ ಕ್ಷಮೆ ಕೇಳಿದೆ.

ಈ ಕುರಿತು ಟೈಮ್ಸ್‌ ಆಫ್‌ ಇಂಡಿಯಾದ ಛೀಫ್‌ ಎಡಿಟರ್‌ ರಾಜೇಶ್‌ ಕುರ್ಲಾ ಪ್ರತಿಕ್ರಿಯಿಸಿ “ಈ ತಪ್ಪು ಮತ್ತೆ ಮರಕಳಿಸುವುದಿಲ್ಲ. ಈ ಭಯಾನಕ ತಪ್ಪಿನಿಂದಾಗಿ ದಂಪತಿಗಳಿಗೆ ಏನಾಗಿದೆಯೆಂದು ಗೊತ್ತಿದೆ. ನಾನು ಅವರಿಗೆ ವೈಯಕ್ತಿಕವಾಗಿ ಕ್ಷಮೆಯಾಚಿಸಲು ಬಯಸುತ್ತೇನೆ. ಜಗತ್ತು ಅವಲಂಬಿಸಿರುವ ಅಧಿಕೃತ ಮೂಲವನ್ನು ನಾವು ಅವಲಂಬಿಸಿದ್ದೇವೆ. ಪಾಠ ಕಲಿತಿದ್ದೇವೆ” ಎಂದು ಟ್ವೀಟ್‌ ಮಾಡಿದ್ದಾರೆ.

ಇದು ಉಳಿದೆಲ್ಲಾ ಮಾಧ್ಯಮಗಳಿಗೂ ಪಾಠವಾಗಬೇಕಿದೆ. ಸಾವಧಾನದಿಂದ ಪುನರ್‌ ಪರಿಶೀಲನೆ ಮಾಡುವುದನ್ನು ರೂಢಿಸಿಕೊಳ್ಳಬೇಕಿದೆ. ಪ್ರಮಾಣಿಕೃತ ಮೂಲಗಳು ಇಲ್ಲದಿದ್ದರೆ ಆ ಸುದ್ದಿ ಅಥವಾ ಫೋಟೊವನ್ನು ಪ್ರಕಟಿಸದಿದ್ದರೂ ನಷ್ಟವೇನಿಲ್ಲ. ಆದರೆ ಗಾಳಿ ಸುದ್ದಿಗಳನ್ನು ನಂಬಿಕೊಂಡು ಸುದ್ದಿ ಪ್ರಕಟಿಸಿ ಇನ್ನೊಬ್ಬರ ವೈಯಕ್ತಿಕ ಗೌಪ್ಯತೆಯ ಮೇಲೆ ದಾಳಿ ಮಾಡುವುದು ಸರ್ವಥಾ ಸರಿಯಲ್ಲ ಎಂಬುದನ್ನು ಕಲಿಯಬೇಕಿದೆ. ನಮ್ಮ ಮಾಧ್ಯಮ ಮಿತ್ರರು ಮಾಧ್ಯಮಗಳು ಹೇಗೆ ಕಾರ್ಯನಿರ್ವಹಿಸಬೇಕು ಎಂಬುದರ ಬಗ್ಗೆ ಬಂದಿರುವ ಅತ್ಯುತ್ತಮ ಹಾಲಿವುಡ್‌ ಚಿತ್ರ ’ಸ್ಪಾಟ್‌ಲೈಟ್‌’ ಒಮ್ಮೆ ನೋಡಿದರೆ ಈ ರೀತಿಯ ತಪ್ಪುಗಳಾಗುವುದಿಲ್ಲ.


ಇದನ್ನೂ ಓದಿ; ಸ್ಪಾಟ್‍ಲೈಟ್ ಎನ್ನುವ ಸಿನೆಮಾ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...

ಮೊದಲ ಪತ್ನಿಗೆ ಮುಸ್ಲಿಂ ಪತಿ ಜೀವನಾಂಶ ನಿರಾಕರಿಸುವಂತಿಲ್ಲ: ಕೇರಳ ಹೈಕೋರ್ಟ್

ಎರಡನೇ ಪತ್ನಿಯ ಮೇಲಿನ ಆರ್ಥಿಕ ಜವಾಬ್ದಾರಿ ಕುರಿತ ಮಹತ್ವದ ತೀರ್ಪಿನಲ್ಲಿ, ಮುಸ್ಲಿಂ ಪುರುಷನು ತನ್ನ ಮೊದಲ ಪತ್ನಿಗೆ ಜೀವನಾಂಶ ಪಾವತಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಎಲ್ಲ ಪತ್ನಿಯರನ್ನು ಸಮಾನವಾಗಿ...

ಆಸ್ಪತ್ರೆಗಳು ಕಡ್ಡಾಯವಾಗಿ ದರಪಟ್ಟಿ ಪ್ರದರ್ಶಿಸಬೇಕು, ಹಣ ಪಾವತಿಸದ ಕಾರಣ ತುರ್ತು ಆರೈಕೆ ನಿರಾಕರಿಸುವಂತಿಲ್ಲ : ಕಾನೂನು ಎತ್ತಿ ಹಿಡಿದ ಹೈಕೋರ್ಟ್

ಕೇರಳ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಮತ್ತು ನಿಬಂಧನೆಗಳನ್ನು ಎತ್ತಿಹಿಡಿದ ಹೈಕೋರ್ಟ್‌ನ ಏಕ ಸದಸ್ಯ ಪೀಠದ ಆದೇಶದ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮತ್ತು ಕೇರಳ ಖಾಸಗಿ ಆಸ್ಪತ್ರೆಗಳ ಸಂಘ ಸಲ್ಲಿಸಿದ್ದ ಮೇಲ್ಮನವಿಗಳನ್ನು...