Homeಮುಖಪುಟಬೇಜವಾಬ್ದಾರಿ ನಡವಳಿಕೆಗಾಗಿ ಕ್ಷಮೆ ಕೋರಿದ ದಿ ಟೈಮ್ಸ್‌ ಆಫ್‌ ಇಂಡಿಯಾ : ಉಳಿದ ಮಾಧ್ಯಮಗಳಿಗೂ ಇದು...

ಬೇಜವಾಬ್ದಾರಿ ನಡವಳಿಕೆಗಾಗಿ ಕ್ಷಮೆ ಕೋರಿದ ದಿ ಟೈಮ್ಸ್‌ ಆಫ್‌ ಇಂಡಿಯಾ : ಉಳಿದ ಮಾಧ್ಯಮಗಳಿಗೂ ಇದು ಪಾಠ

- Advertisement -
- Advertisement -

“ಈ ಸುದ್ದಿಯಲ್ಲಿ ನಾವು ಅಜಾಗರೂಕತೆಯಿಂದಾಗಿ ತಪ್ಪಾದ ಫೋಟೋವನ್ನು ಅಪ್‌ಲೋಡ್ ಮಾಡಿದ್ದೇವೆ. ಈ ದೋಷಕ್ಕಾಗಿ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ.” ಹೀಗೆಂದು ದಿ ಟೈಮ್ಸ್‌ ಆಫ್‌ ಇಂಡಿಯಾ ಇಂದಿನ ಒಂದು ವರದಿಯ ಮೊದಲ ಪ್ಯಾರದಲ್ಲಿ ಬರೆದುಕೊಂಡಿದೆ. ಹಾಗಾದರೆ ಅದು ಮಾಡಿದ ತಪ್ಪಾದರೂ ಏನು? ಅದರಿಂದಾದ ಅನಾಹುತವೇನು ನೋಡೋಣ ಬನ್ನಿ. ಏಕೆಂದರೆ ಇದರಿಂದ ಉಳಿದ ಮಾಧ್ಯಮಗಳು ಕಲಿಯುವುದು ಬಹಳಷ್ಟಿದೆ.

ಕ್ಷಮೆ ಕೇಳಿದ ಟೈಮ್ಸ್‌ ಆಫ್‌ ಇಂಡಿಯಾ

“ಭಾರತದಲ್ಲಿ ಪತ್ರಿಕೋದ್ಯಮ ಈ ಮಟ್ಟಕ್ಕೆ ಇಳಿದಿದೆ. TOI ಮತ್ತು ಭಾರತೀಯ ಪತ್ರಿಕೋದ್ಯಮದ ಮೇಲೆ ನಾನು ಇಟ್ಟಿದ್ದ ಸಣ್ಣ ಪ್ರಮಾಣದ ನಂಬಿಕೆ ಈಗಷ್ಟೇ ಕಡಿಮೆಯಾಗಿದೆ. ನಾವು ಸಂಪೂರ್ಣವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಮತ್ತು ಈ ಘಟನೆಗೂ ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ. ಇದು ನಿಜವಾಗಿಯೂ ನಮ್ಮ ಕುಟುಂಬ ಮತ್ತು ಸ್ನೇಹಿತರನ್ನು ಬೆಚ್ಚಿಬೀಳಿಸಿದೆ ಮತ್ತು ಈ ಬೆಳಿಗ್ಗೆ ನಮಗೆ ಡಿಸ್ಟರ್ಬ್‌ ಆಗಿದೆ.”

“TOI, ದಯವಿಟ್ಟು ಈ ತಪ್ಪನ್ನು ತಿದ್ದುಪಡಿ ಮಾಡಿ ಮತ್ತು ಔಪಚಾರಿಕ ಕ್ಷಮೆಯಾಚನೆಯೊಂದಿಗೆ ಸರಿಪಡಿಸಿ. ಮತ್ತೊಮ್ಮೆ ಹೇಳುತ್ತಿದ್ದೇವೆ, ನಾವು ಚೆನ್ನಾಗಿದ್ದೇವೆ ಮತ್ತು ನಮ್ಮ ಬಗ್ಗೆ ಕಾಳಜಿ ವಹಿಸುವ ಎಲ್ಲ ಪ್ರೀತಿಪಾತ್ರರಿಗೆ ಧನ್ಯವಾದಗಳು. ನಾವು ಹಿಂದೆಂದಿಗಿಂತಲೂ ಸಂತೋಷದಿಂದ ಮತ್ತು ಒಟ್ಟಿಗೆ ಇದ್ದೇವೆ.” ಹೀಗೆಂದು ಇಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡ ದಂಪತಿಗಳು ಸಿದ್ದ ಆಹಾರ ಉದ್ಯಮಿಗಳಾದ (ಬಗೆ ಬಗೆ ಅಡುಗೆ ಮಾಡುವ ಮತ್ತು ರೆಸಿಪಿ ಹೇಳಿಕೊಡುವ) ಅಮಿತ್ ಅಗರ್ವಾಲ್ ಮತ್ತು ಶಿಲ್ಪಿ ಅಗರ್ವಾಲ್.

TOI has used our photo for an unrelated news without any verification. This is what the journalism has come down to.

This is what the journalism has come down to in India. Whatever small amount of trust I had on TOI and on Indian journalism has just gone down the drain. We (Amit Agarwal & Shilpi Agarwal) are doing totally fine and this incident is nowhere related to us. This has really shocked our family and friends and caused a chaos this morning for us.TOI, please fix this asap with a correction and formal apology. Once again, we are fine and thanks to all the loved ones who are concerned about us. We are happy and together like never before 🙂 #incorrectnews #timesofindia #fakenews #TOINewslink: https://timesofindia.indiatimes.com/city/kolkata/man-kills-estranged-wife-in-bluru-mom-in-law-in-kol-shoots-self/articleshow/76519987.cms

Posted by Foods And Flavors on Monday, June 22, 2020

ಅವರು ಹೀಗೆ ಹೇಳಲು ಕಾರಣವೆಂದರೆ ಜೂನ್ 22 ರಂದು ಬೆಂಗಳೂರಿನಲ್ಲಿ ನಡೆದ ಸರಣಿ ಕೊಲೆ ಮತ್ತು ಆತ್ಮಹತ್ಯೆ ಪ್ರಕರಣವೊಂದನ್ನು ವರದಿ ಮಾಡಿರುವ ಟೈಮ್ಸ್‌ ಆಫ್‌ ಇಂಡಿಯಾವು ತನ್ನ ಸುದ್ದಿಯ ಮುಖಪುಟದಲ್ಲಿ ಈ ಇಬ್ಬರೂ ದಂಪತಿಗಳ ಫೋಟೊವನ್ನು ಪ್ರಕಟಿಸಿಬಿಟ್ಟಿದೆ. ಅದನ್ನು ಗಮನಿಸಿದ ಅವರ ಸ್ನೇಹಿತರು ಮತ್ತು ಸಂಬಂಧಿಕರು ಆತಂಕಗೊಂಡು ಅಮಿತ್ ಅಗರ್ವಾಲ್ ಮತ್ತು ಶಿಲ್ಪಿ ಅಗರ್ವಾಲ್‌ಗೆ ಫೋನ್ ಮಾಡಿ ಆತಂಕ ಹಂಚಿಕೊಂಡಿದ್ದಾರೆ.

ನಿಜವಾಗಿ ನಡೆದುದ್ದೇನು? ತಪ್ಪಾಗಿದ್ದು ಎಲ್ಲಿ?

ಕೋಲ್ಕತ್ತಾ ಮೂಲದ ಚಾರ್ಟರ್ಡ್ ಅಕೌಂಟೆಂಟ್ ಆದ ವ್ಯಕ್ತಿಯೊಬ್ಬ ಬೆಂಗಳೂರಿನ ಹುಡುಗಿಯನ್ನು ಮದುವೆಯಾಗಿದ್ದಾರೆ. ತದನಂತರ ಅವರ ಸಂಸಾರದಲ್ಲಿ ಬಿರುಕುಬಂದು ವಿಚ್ಚೇದನ ಪಡೆದಿದ್ದಾರೆ. ಆದರೆ ಆಸ್ತಿ ವಿಷಯಕ್ಕೆ ತೀವ್ರ ಜಗಳವಾದ್ದರಿಂದ ತನ್ನ ವಿಚ್ಛೇದಿತ ಹೆಂಡತಿ ಮನೆಗೆ ನುಗ್ಗಿ ಆಕೆಯನ್ನು ಕೊಲೆ ಮಾಡಿದ್ದಾನೆ. ಅಲ್ಲಿಂದ ಕೊಲ್ಕತ್ತಾಗೆ ಮರಳಿ ಆಕೆಯ ತಾಯಿಯನ್ನು ಸಹ ಕೊಂದಿದ್ದಾನೆ. ನಂತರ ತಾನೂ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಹೆಸರೂ ಅಮಿತ್ ಅಗರ್ವಾಲ್ ಮತ್ತು ಆತನ ವಿಚ್ಛೇದಿತ ಪತ್ನಿಯ ಹೆಸರು ಶಿಲ್ಪಿ ಅಗರ್ವಾಲ್ ಆಗಿದೆ. ಇಬ್ಬರೂ ಸಹ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದಾರೆ. ಟೈಮ್ಸ್ ಆಫ್‌ ಇಂಡಿಯಾ ಸುದ್ದಿ ಮಾಡುವ ಭರದಲ್ಲಿ ಇವರ ಬದಲಿಗೆ ಸಿದ್ದ ಆಹಾರ ಉದ್ಯಮಿಗಳಾದ ಅಮಿತ್ ಅಗರ್ವಾಲ್ ಮತ್ತು ಶಿಲ್ಪಿ ಅಗರ್ವಾಲ್‌ರವರ ಚಿತ್ರ ಪ್ರಕಟಿಸಿಬಿಟ್ಟಿದೆ.

ಇದರಿಂದ ನೊಂದುಕೊಂಡ ಆ ಉದ್ಯಮಿಗಳು ಫೇಸ್‌ಬುಕ್‌ನಲ್ಲಿ ವಿಡಿಯೋವೊಂದನ್ನು ಪೋಸ್ಟ್‌ ಮಾಡಿ “ಖ್ಯಾತ ಪತ್ರಿಕೆ ಈ ರೀತಿ ಮಾಡಬಾರದು. ಸುದ್ದಿ ಪ್ರಕಟಿಸುವ ಮುನ್ನ ಪರೀಶಿಲಿಸಬೇಕು” ಎಂದು ಆಗ್ರಹಿಸಿದ್ದಾರೆ.

“ಸುದ್ದಿಯನ್ನು ಬ್ರೇಕಿಂಗ್‌ ಮಾಡುವ ವಿಪರೀತ ಹುಚ್ಚಿನೊಂದಿಗೆ ಅನೈತಿಕ ಮತ್ತು ವೃತ್ತಿಪರವಲ್ಲದ ಕೆಲಸದ ಸಂಸ್ಕೃತಿಯು ಭಾರತೀಯ ಪತ್ರಿಕೋದ್ಯಮವನ್ನು ನಾಶಪಡಿಸುತ್ತಿದೆ. ಇದೇ ತಪ್ಪಿಗೆ ಪಾಶ್ಚಿಮಾತ್ಯ ದೇಶಗಳಲ್ಲಿ ನ್ಯಾಯಾಲಯಗಳು ಮಿಲಿಯನ್ ಡಾಲರ್‌ ಡಂಡ ವಿಧಿಸುತ್ತಿದ್ದವು” ಎಂದು ಅರುಣ್ ಭೋಥ್ರಾ ಎಂಬುವವರು ಟ್ವೀಟ್‌ ಮಾಡಿದ್ದಾರೆ.

ತದನಂತರ ತನ್ನ ತಪ್ಪಿನ ಅರಿವಾದ ಕೂಡಲೇ ಟೈಮ್ಸ್‌ ಆಫ್‌ ಇಂಡಿಯಾ ಆ ದಂಪತಿಗಳ ಫೋಟೊವನ್ನು ತೆಗೆದುಹಾಕಿ ಕ್ರೈಂ ನ ಸಾಂಕೇತಿಕ ಫೋಟೊವನ್ನು ಅಪ್‌ಲೋಡ್‌ ಮಾಡಿದೆ. ಜೊತೆಗೆ ತಾನು ಮಾಡಿದ ಪ್ರಮಾದಕ್ಕಾಗಿ ಕ್ಷಮೆ ಕೇಳಿದೆ.

ಈ ಕುರಿತು ಟೈಮ್ಸ್‌ ಆಫ್‌ ಇಂಡಿಯಾದ ಛೀಫ್‌ ಎಡಿಟರ್‌ ರಾಜೇಶ್‌ ಕುರ್ಲಾ ಪ್ರತಿಕ್ರಿಯಿಸಿ “ಈ ತಪ್ಪು ಮತ್ತೆ ಮರಕಳಿಸುವುದಿಲ್ಲ. ಈ ಭಯಾನಕ ತಪ್ಪಿನಿಂದಾಗಿ ದಂಪತಿಗಳಿಗೆ ಏನಾಗಿದೆಯೆಂದು ಗೊತ್ತಿದೆ. ನಾನು ಅವರಿಗೆ ವೈಯಕ್ತಿಕವಾಗಿ ಕ್ಷಮೆಯಾಚಿಸಲು ಬಯಸುತ್ತೇನೆ. ಜಗತ್ತು ಅವಲಂಬಿಸಿರುವ ಅಧಿಕೃತ ಮೂಲವನ್ನು ನಾವು ಅವಲಂಬಿಸಿದ್ದೇವೆ. ಪಾಠ ಕಲಿತಿದ್ದೇವೆ” ಎಂದು ಟ್ವೀಟ್‌ ಮಾಡಿದ್ದಾರೆ.

ಇದು ಉಳಿದೆಲ್ಲಾ ಮಾಧ್ಯಮಗಳಿಗೂ ಪಾಠವಾಗಬೇಕಿದೆ. ಸಾವಧಾನದಿಂದ ಪುನರ್‌ ಪರಿಶೀಲನೆ ಮಾಡುವುದನ್ನು ರೂಢಿಸಿಕೊಳ್ಳಬೇಕಿದೆ. ಪ್ರಮಾಣಿಕೃತ ಮೂಲಗಳು ಇಲ್ಲದಿದ್ದರೆ ಆ ಸುದ್ದಿ ಅಥವಾ ಫೋಟೊವನ್ನು ಪ್ರಕಟಿಸದಿದ್ದರೂ ನಷ್ಟವೇನಿಲ್ಲ. ಆದರೆ ಗಾಳಿ ಸುದ್ದಿಗಳನ್ನು ನಂಬಿಕೊಂಡು ಸುದ್ದಿ ಪ್ರಕಟಿಸಿ ಇನ್ನೊಬ್ಬರ ವೈಯಕ್ತಿಕ ಗೌಪ್ಯತೆಯ ಮೇಲೆ ದಾಳಿ ಮಾಡುವುದು ಸರ್ವಥಾ ಸರಿಯಲ್ಲ ಎಂಬುದನ್ನು ಕಲಿಯಬೇಕಿದೆ. ನಮ್ಮ ಮಾಧ್ಯಮ ಮಿತ್ರರು ಮಾಧ್ಯಮಗಳು ಹೇಗೆ ಕಾರ್ಯನಿರ್ವಹಿಸಬೇಕು ಎಂಬುದರ ಬಗ್ಗೆ ಬಂದಿರುವ ಅತ್ಯುತ್ತಮ ಹಾಲಿವುಡ್‌ ಚಿತ್ರ ’ಸ್ಪಾಟ್‌ಲೈಟ್‌’ ಒಮ್ಮೆ ನೋಡಿದರೆ ಈ ರೀತಿಯ ತಪ್ಪುಗಳಾಗುವುದಿಲ್ಲ.


ಇದನ್ನೂ ಓದಿ; ಸ್ಪಾಟ್‍ಲೈಟ್ ಎನ್ನುವ ಸಿನೆಮಾ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...