Homeಅಂಕಣಗಳುನೂರು ನೋಟ | ಎಚ್.ಎಸ್.ದೊರೆಸ್ವಾಮಿಈಶ್ವರಪ್ಪನವರಿಗೆ ನನ್ನ ಮೇಲೆ ಸಿಟ್ಟು ಏಕೆಂದರೆ… : ಎಚ್.ಎಸ್ ದೊರೆಸ್ವಾಮಿ

ಈಶ್ವರಪ್ಪನವರಿಗೆ ನನ್ನ ಮೇಲೆ ಸಿಟ್ಟು ಏಕೆಂದರೆ… : ಎಚ್.ಎಸ್ ದೊರೆಸ್ವಾಮಿ

ಮುಸ್ಲಿಮರೆ ಅಧಿಕ ಸಂಖ್ಯೆಯಲ್ಲಿರುವ ಕಾಶ್ಮೀರದಲ್ಲಿ ಷೇಕ್ ಅಬ್ದುಲ್ಲಾ ಅಲ್ಲಿನ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೊಂಡ ಗೋಹತ್ಯಾ ನಿಷೇಧ ಕಾಯಿದೆಯಲ್ಲಿ ಗೋಹತ್ಯ ಮಾಡಿದವನಿಗೆ 10 ವರ್ಷ ಸೆರೆವಾಸ ಎಂದು ಹೇಳಿದೆ.

- Advertisement -
- Advertisement -

ನಾನು ಎಡಪಂಥೀಯರ ಜೊತೆ ಗುರುತಿಸುಕೊಳ್ಳುವವನು ಎಂದು ಸಂಘಪರಿವಾರ ಮತ್ತು ಬಿಜೆಪಿ ನನ್ನನ್ನು ಟೀಕಿಸುತ್ತದೆ. ನಾನು ರಾಜಕಾರಣಿ ಎಂದು ಶಾಸಕ ಎಚ್.ಡಿ ರೇವಣ್ಣ ಅಸೆಂಬ್ಲಿಯಲ್ಲಿ ಬಾಯಿತಪ್ಪಿ ಹೇಳಿದ್ದರು. ನಾನು ಎಲ್ಲರ ಜೊಎ ಕೈಜೋಡಿಸುವವನೆಂದು ಹೇಳಿಕೊಳ್ಳಲು ನನಗೆ ಅಳುಕಿಲ್ಲ. ನಾನು ರಾಜಕಾರಣಿಯೂ ಹೌದು. ಆದರೆ ನಾನು ಅಧಿಕಾರ ದಾಹಕ್ಕಾಗಿ ರಾಜಕೀಯ ಮಾಡುವವನ್ನಲ್ಲ. ಪಕ್ಷ ರಾಜಕಾರಣದಲ್ಲಿ ನನಗೆ ನಂಬಿಕೆಯೂ ಇಲ್ಲ.

ನಾನು ಎಲ್ಲರೊಡನೆ ಕೂಡಿಕೊಳ್ಳುವ ಸ್ವಭಾವದವನು. ಅದು ದೇಶದ ಒಳಿತಿಗಾಗಿ, ಭದ್ರತೆಗಾಗಿ, ಪ್ರಜಾಪ್ರಭುತ್ವ ಎತ್ತಿ ಹಿಡಿಯುವುದಕ್ಕಾಗಿ. ಕೋಮು ವಿದ್ವೇಷ, ಸರ್ವಾಧಿಕಾರಿ ಮನೋಭಾವವನ್ನು ಕಿತ್ತೆಸೆಯುವುದಕ್ಕಾಗಿ ನಾನು ರಾಜಕೀಯದವರೊಡನೆ ಕೈಜೋಡಿಸಲು ಸೈ. ಸೇಡಿನ ರಾಜಕೀಯ, ಮತೀಯ, ಧಾರ್ಮಿಕ ರಾಜಕೀಯಗಳನ್ನು ನಾನು ಎಂದೆಂದಿಗೂ ವಿರೋಧಿಸುವವನು. ಎಲ್ಲರೊಡನೆ ನಾನು ಬೆರೆತರೂ ನಾನು ಅವರವನಲ್ಲ. ನಾನು ಸರ್ವೋದಯ ಸಿದ್ಧಾಂತವನ್ನು ನಂಬಿದವನು. ಗಾಂಧೀಜಿಯವರ ಮಾರ್ಗಾನುಯಾಯಿ.

ಕೈಗಾ ಚಳವಳಿಯಲ್ಲಿ, ತುರ್ತು ಪರಿಸ್ಥಿತಿಯಲ್ಲಿ ನಾನು ಸಂಘಪರಿವಾರದವರೊಡನೆಯೂ ಕೂಡಿಕೊಂಡವನು. ಸಭೆ, ಸಮ್ಮೇಳನ, ಚರ್ಚಾಕೂಟ, ವಿಚಾರ ಸಂಕಿರಣ, ಚಳವಳಿಗೆ ಯಾರೇ ಕರೆದರೂ ನಾನು ಹೋಗುವವನು. ಆದರೆ ಅವುಗಳಲ್ಲೆಲ್ಲ ಸರ್ವೋದಯ ಛಾಪನ್ನು ಮೂಡಿಸಲು ಪ್ರಯತ್ನಿಸುತ್ತೇನೆ. ನಾಡಿನ ಹಿತದೃಷ್ಠಿಯಿಂದ ಏನು ಹೇಳಬೇಕೋ ಅದನ್ನು ನಿರ್ಭೀಡತಯಿಂದ ಹೇಳುತ್ತೇನೆ. ನಾನು ಯಾವ Ism ಗೂ ದಾಸನಲ್ಲ. ನಾನು ನಂಬುವುದು Humanisam ನಲ್ಲಿ.

ಅನೇಕ ಮೂಲಭೂತ ವಿಚಾರಗಳಲ್ಲಿ ನನ್ನ ನಿಲುವು, ರಾಜಕೀಯ ಸಂಸ್ಥೆಯ ನಿಲುವುಗಳಿಗಿಂತ ಭಿನ್ನ. ಆದರೂ ನನ್ನನ್ನು ಎಲ್ಲರೂ ಪ್ರೀತಿ ವಿಶ್ವಾಸದಿಂದ ತಮ್ಮ ಕಾರ್ಯಕ್ರಮಗಳಿಗೆ ಕರೆಯುತ್ತಾರೆ.

ಸರ್ವೋದಯ ಸಿದ್ದಾಂತವೇ ಹಾಗೆ. ಗಾಂಧೀಜಿಯವರ ವಿಚಾರಗಳೇ ಹಾಗೆ. ಸರ್ವೋದಯ ಎಲ್ಲರ ಒಳಿತನ್ನು ಬಯಸುತ್ತದೆ. ಸವೇಜನೋ ಸುಖಿನೋಭವಂತು ಎಂದು ದೇವರ ಮುಂದೆ ಕೂತು ಪ್ರತಿದಿನ ಹೇಳಿದರೆ ಸಾಲದು. ಅದನ್ನು ಕಾರ್ಯಗತ ಮಾಡಬೆಕು. ಇದು ಹಿಂದೂ ಧರ್ಮದ ನಿಲುವು. ಭಾಜಪ ಮೊದಲುಗೊಂಡು ಯಾವ ರಾಜಕೀಯ ಪಕ್ಷವೂ ಸರ್ವೋದಯವನ್ನು ತನ್ನ ರಾಜಕೀಯ ಸಿದ್ಧಾಂತವಾಗಿ ಅಂಗೀಕರಿಸಿಲ್ಲ. ಹಿಂದುತ್ವ ಪ್ರತಿಪಾದಕರು ಡೋಂಗಿಗಳು ಎನ್ನುವುದು ಇದೇನಾ?

ಗೋರಕ್ಷಣೆಯ ವಿಷಯಕ್ಕೆ ನನ್ನ ಪೂರ್ಣ ಸಹಮತವಿದೆ. ಆದರೆ ಮತೀಯ ದ್ವೇಷ ಬೆಳೆಸುವ ದೃಷ್ಠಿಯಿಂದ ಗೋಸಂರಕ್ಷಣೆಯ ವಿಷಯ ಕೈಗೆತ್ತಿಕೊಳ್ಳುವುದಕ್ಕೆ ನನ್ನ ಸಹಮತವಿಲ್ಲ. ಗೋವು ಒಂದು ವಿಶೇಷ ಪ್ರಾಣಿ. ಅದನ್ನು ಕೊಲ್ಲದೆ ಅದರ ಹಾಲನ್ನು ಆಹಾರವಾಗಿ ಬಳಸಲುಬರುವ ಏಕೈಕ ಪ್ರಾಣಿ ಗೋವು. ರೈತ ಗೋವನ್ನು ತನ್ನ ಪರಿವಾರದ ಸದಸ್ಯನನ್ನಾಗಿ ಭಾವಿಸುತ್ತಾನೆ. ಆಕಳ ಹಾಲು ಅತ್ಯುತ್ಕ್ರಷ್ಟ ಆಹಾರ. ಹಸುವಿನ ಹಾಲಿನಲ್ಲಿ ದೇಹಪೋಷಣೆಗೆ ಬೇಕಾದ ಎಲ್ಲ ಅಂಸಗಳು ಸಮತೋಲನದಲ್ಲಿರುತ್ತವೆ. ಮಕ್ಕಳಿಗೆ ಅದು ಅಮೃತಸಮಾನ. ಇದಕ್ಕಾಗಿ ಸರ್ವೋದಯದಲ್ಲಿ ಗೋವಿಗೆ ವಿಶಿಷ್ಠ ಸ್ಥಾನಮಾನ ನೀಡಿದೆ. ಗೋವನ್ನು ಕೊಲ್ಲುವುದು ಅನೀತಿ.

ಸ್ವಾತಂತ್ರ್ಯ ಪ್ರಾಪ್ತವಾದ ನಂತರ ಗೋವಧೆ ನಿಷೇಧ ಕಾಯಿದೆ ಅನೇಕ ರಾಜ್ಯಗಳಲ್ಲಿ ಜಾರಿಗೆ ಬಂದಿದೆ. ಯಾವುದೇ ಕಾರಣಕ್ಕೂ ಗೋವನ್ನು, ಅದರ ಕರುವನ್ನು, ಎತ್ತನ್ನು, ಗೂಳಿಯನ್ನು ಕೊಲ್ಲಬಾರದು ಎಂದು ಆ ಕಾನೂನು ಹೇಳುತ್ತದೆ. ಗೋವಧೆ ಮಾಡಿದರೆ 3 ವರ್ಷಗಳ ಸೆರವಾಸ ಎಂದು ಕರ್ನಾಟಕದಲ್ಲಿ ಶಾಸನವಿದೆ.

ಮುಸ್ಲಿಮರೆ ಅಧಿಕ ಸಂಖ್ಯೆಯಲ್ಲಿರುವ ಕಾಶ್ಮೀರದಲ್ಲಿ ಷೇಕ್ ಅಬ್ದುಲ್ಲಾ ಅಲ್ಲಿನ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೊಂಡ ಗೋಹತ್ಯಾ ನಿಷೇಧ ಕಾಯಿದೆಯಲ್ಲಿ ಗೋಹತ್ಯ ಮಾಡಿದವನಿಗೆ 10 ವರ್ಷ ಸೆರೆವಾಸ ಎಂದು ಹೇಳಿದೆ. ಆದ್ದರಿಂದ ಗೋಹತ್ಯೆ ನಿಷೇಧ ಹಿಂದುಗಳಿಗೆ ಮಾತ್ರ ಬೇಕಿದೆ ಎಂಬುದೇನೂ ಇಲ್ಲ. ಇದನ್ನು ಷೇಕ್ ಅಬ್ದುಲ್ಲಾ ಶಾಸನ ತರುವ ಮೂಲಕ ಸಾಬೀತು ಮಾಡಿದ್ದಾರೆ.

ಅದರಂತೆ ಬಡತನ ನೀಗುವ ಕೆಲಸದಲ್ಲಿಯಾವ Ismಗೂ ಅವಕಾಶವಿಲ್ಲ. ಸ್ವತಂತ್ರ ಭಾರತದಲ್ಲಿ ಬಡತನ, ಅಸಮಾನತೆ ಇರಲೇಬಾರದು. ಸರ್ಕಾರಗಳ ಬಂದು ಹೋದವು. 72 ವರ್ಷಗಳು ಕಳೆದರೂ ಬಡತನ ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆಯೇ ಹೊರತು, ಕಡಿಮೆಯಾಗುತ್ತಿಲ್ಲ. ಬಡವ ಬಲ್ಲಿದ ಅಂತರ ಹೆಚ್ಚುತ್ತಲೇ ಇದೆ. ಇದರ ವಿರುದ್ಧ ಎಲ್ಲರೂ ಕೂಡಿಕೊಂಡು ಹೋರಾಡಬೇಕಾಗಿದೆ.

ವಿನೋಬಾ ಭಾವೆ ಹಳ್ಳಿಯಲ್ಲಿ ದುಡಿಯುತ್ತಾ ಎಲ್ಲರಿಗೂ 5 ಎಕರೆ ಭೂಮಿ ಹಂಚುತ್ತಾ, ಭೂದಾನ ಯಜ್ಞ ಕಾರ್ಯಕ್ರಮವನ್ನು ಕೈಗೆತ್ತಿಕೊಂಡರು. ಭಾರತದಲ್ಲಿ ಸರ್ವೋದಯ ಪಾದಯಾತ್ರೆ ಕೈಗೊಂಡರು. ಭೂಹೀನರಿಗೆ ತಮ್ಮಲ್ಲಿರುವ ಜಮೀನಿನಲ್ಲಿ ಸ್ವಲ್ಪ ದಾನ ಮಾಡಿ ಎಂದು ಜಮೀನು ಇರುವವರ ಬಳಿ ಬೇಡಿಕೆ ಇಟ್ಟರು. ನಾನು ಭೂಮಿಯ ಭಿಕ್ಷೆ ಬೇಡಲು ಬಂದಿಲ್ಲ, ಬಡವರ ಬದುಕುವ ಹಕ್ಕಿಗಾಗಿ ಭೂದಾನ ಕೇಳಲು ಬಂದಿದ್ದೇನೆ ಎಂದರು. ಅವರಿಗೆ ಉಳ್ಳ ಜನ ಸ್ಪಂದಿಸಿದರು. ಭಾರತದಲ್ಲಿ ಹೊಡೆಯದೆ, ಬಡಿಯದೆ, ಕಾನೂನಿನ ಕತ್ತೆಗೆ ಕಾಯದೆ ಉಳ್ಳವರ ಮನಪರಿವರ್ತನೆ ಮಾಡುವ ಮೂಲಕ 42 ಲಕ್ಷ ಎಕರೆ ಜಮೀನನ್ನು ದಾನವಾಗಿ ಪಡೆದರು. ಭಾರತದಲ್ಲಿ ಗ್ರಾಮೀಣ ಜನರ ಬಡತನ ನೀಗಲು 5 ಕೋಟಿ ಎಕರೆ ಜಮೀನು ಬೇಕು. ಸರ್ಕಾರ ಬಡವರ ಆಶಯವನ್ನು ಪೂರೈಸುವುದು ತಮ್ಮ ಆದ್ಯ ಕರ್ತವ್ಯವೆಂದು ಭಾವಿಸಬೇಕು. ಅದಕ್ಕಾಗಿ ಭೂ ಸುಧಾರಣೆ ಕಾಯ್ದೆಯನ್ನು ಪರಿಶೀಲಿಸಿ ಸರ್ಕಾರ ಭಾರತದ ಎಲ್ಲ ಭೂಹೀನರಿಗೆ ತಲಾ 5 ಎಕರೆ ಜಮೀನು ಹಂಚಬೇಕು.

ಇನ್ನೊಂದು ವಿಷಯ. ಕೊಪ್ಪದಲ್ಲಿ ಹತ್ತಾರು ವರ್ಷಗಳಿಂದ ಗುಡಿಸಲುಗಳಲಿದ್ದವರ ಗುಡಿಸಲು ಕೆಡವುವು ಪ್ರಯತ್ನ ತಹಶೀಲ್ದಾರರಿಂದ ನಡೆದಿತ್ತು. ರವಿಕೃಷ್ಣರೆಡ್ಡಿ ನೇತೃತ್ವದಲ್ಲಿ ಗುಡಿಸಲುವಾಸಿಗಳು, ಹೋರಾಟಗಾರರು ಸೇರಿ ತಹಶೀಲ್ದಾರರ ಕಚೇರಿ ಆವರಣದಲ್ಲಿ ಧರಣಿ ಸತ್ಯಾಗ್ರಹ ಮಾಡಿದೆವು. ತಹಶೀಲ್ದಾರರನ್ನು ಕರೆಸಿ ‘ಜನರ ಗುಡಿಸಲುಗಳನ್ನು ತರೆವು ಮಾಡುವ ಮೊದಲು ಅವರಿಗೆ ಬೇರೆಡೆ ಗುಡಿಸಲುಗಳನ್ನು ಹಾಕಿಸಿಕೊಟ್ಟು ಮರ್ಯಾದೆಯಿಂದ ಅವರನ್ನು ನಡೆಸಿಕೊಳ್ಳಿ. ಭಾರತೀಯ ಪ್ರಜೆಗಳನ್ನು ನೆಲೆ ಇಲ್ಲದಂತೆ ಮಾಡಿ, ಬಿಸಿಲಿನಲ್ಲಿ ನಿಲ್ಲಿಸಲು ನಿಮಗೆ ಅಧಿಕಾರ ಕೊಟ್ಟವರು ಯಾರು ಎಂದು ನಾನು ಛೇಡಿಸಿದೆ.

ಅಂದು ರಾತ್ರಿ ಉಳಿದುಕೊಳ್ಳಲು ಒಬ್ಬರ ಮನೆಗೆ ಆಹ್ವಾನಿಸಿದರು. ನಾನು ಹೋಗಿ ಉಳಿದಿದ್ದೆ. ಬೆಳಿಗ್ಗೆ ವಾಪಸ್ ಬರುವಾಗ ಅವರು ನನ್ನೊಡನೆ ಫೋಟೊ ತೆಗೆಸಿಕೊಂಡರು. ನಾನು ಯಾವ ಸಭೆಗೆ ಭಾಗವಹಿಸಲು ಹೋದರೂ, ಸಭೆ ಮುಗಿದ ಮೇಲೆ ಹುಡುಗರು, ಊರಿನಪ್ರಮುಖರು, ಸಭೆಗೆ ಬಂದಿದ್ದವರು, ಹೆಣ್ಣು ಮಕ್ಕಳು ನನ್ನ ಜೊತೆ ಫೋಟೊ ತೆಗಿಸಿಕೊಳ್ಳುವುದು ವಾಡಿಕೆ. ಇಂತಹ ಫೋಟೊಗಳು ಸಾವಿರಾರಿರಬಹುದು.

ಅದರಂತೆಯೇ ಅಮೂಲ್ಯ ಎನ್ನುವ ಈ ಹುಡುಗಿಯೂ ನನ್ನ ಜೊತೆ ಫೋಟೊ ತೆಗಿಸಿಕೊಂಡಳು ಎಂದು ನಾನು ಭಾವಿಸುತ್ತೇನೆ. ಅವಳು ನಾಲ್ಕು ವರ್ಷಗಳ ಹಿಂದೆ ಚಿಕ್ಕ ವಯಸ್ಸಿನಲ್ಲಿ ನನ್ನೊಡನೆ ತೆಗಿಸಿಕೊಂಡ ಆ ಫೋಟೊವನ್ನು ಎಲ್ಲಿಂದಲೋ ತಂದು ವಿಧಾನಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಶಾಸನ ಸಭೆಯಲ್ಲಿ ತೋರಿಸಿ ನನ್ನನ್ನು Anti National ಎಂದು ಬಿಂಬಿಸಲು ಹೊರಟರು. ಒಟ್ಟಿನಲ್ಲಿ ನನ್ನ ಚಾರಿತ್ರ್ಯವಧೆ ಮಾಡುವುದು ಅವರ ಉದ್ದೇಶವಾಗಿತ್ತು. ನನ್ನ ಮೇಲೆ ಅವರಿಗಿರಬಹುದಾದ ಸಿಟ್ಟೆಂದರೆ ಜ್ವಾಲಾಮುಖಿ ಪತ್ರಿಕೆಯ ಅಂಕಣಕಾರನಾಗಿ ‘ನಮ್ಮಲ್ಲಿ ಒಬ್ಬ ಹಿರಣ್ಯಾಕ್ಷ ಎಂಬ ಶೀರ್ಷಿಕೆಯ ಒಂದು ಲೇಖನ ಬರೆದಿದ್ದೆ. ಅದರಲ್ಲಿ ಈಶ್ವರಪ್ಪನವರು ಶಿವಮೊಗ್ಗದ ಮೂಲೆ ಮೂಲೆಯಲ್ಲಿ ಸೈಟುಗಳನ್ನು , ಮನೆಗಳನ್ನು ಅವರ ಹೆಂಡತಿ, ಮಗ, ಸೋಸೆ, ಮಗಳು, ಅಳಿಯ ಎಲ್ಲರ ಹೆಸರಿನಲ್ಲಿಯೂ ಕೊಂಡಿರುವುದನ್ನು ಬಡಾವಣೆಗಳ ಹೆಸರು, ಕೊಂಡಿರತಕ್ಕ ಮನೆಯ ಅಥವಾ ಸೈಟಿನ ಸರ್ವೇ ನಂಬರ್, ವಿಸ್ತೀರ್ಣಗಳನ್ನೊಳಗೊಂಡ ವಿವರಗಳನ್ನು ದಾಖಲೆ ಸಮೇತ ನಮೂದಿಸಿ ಬರೆದಿದ್ದೆ. ಹಿಂದೆ ಹಿರಣ್ಯಾಕ್ಷ ಎಂಬ ರಾಕ್ಷಸ ಇದ್ದು, ಭೂಮಂಡಲವನ್ನು ತನ್ನದಾಗಿ ಮಾಡಿಕೊಳ್ಳಲು ಭೂಮಿಯನ್ನು ಚಾಪೆಯಂತೆ ಸುತ್ತಿ ತೆಗೆದುಕೊಂಡುಹೋಗಿ ಸಮುದ್ರದ ಒಳಗಡೆ ಬಚ್ಚಿಟ್ಟಿದ್ದ. ವಿಷ್ಣು ಕೂರ್ಮಾವತಾರದಲ್ಲಿ ಬಂದು ಸಮುದ್ರದಾಳದಲ್ಲಿ ಬಚ್ಚಿಟ್ಟಿದ್ದ ಭೂಮಿಯನ್ನು ತೆಗೆದುಕೊಂಡು ಹೋಗಿ ಹರಡಿ ಭೂಮಂಡಲಕ್ಎಕ ಮರುಜೀವ ಕೊಟ್ಟ.

ಅದರಂತೆ ಈಶ್ವರಪ್ಪನವರು ಶಿವಮೊಗ್ಗದ ಭೂಮಿಯನ್ನೆಲ್ಲ ಕೊಂಡುಕೊಂಡು ತಮ್ಮದಾಗಿಸಿಕೊಳ್ಳುತ್ತಾರೋ ಎಂಬ ಭಯ ನನ್ನದು. ಅದಕ್ಕಾಗಿ ಆ ಲೇಖನ ಬರೆದೆ. ಆ ಕಾರಣದಿಂದ ಈಶ್ವರಪ್ಪನವರಿಗೆ ನನ್ನ ಮೇಲೆ ಸಿಟ್ಟಿರಬಹುದು. ಆ ಸಿಟ್ಟನ್ನು ಅಸೆಂಬ್ಲಿಯಲ್ಲಿ ಈ ಫೋಟೊ ತೋರಿಸುವ ಮೂಲಕ ವ್ಯಕ್ತಪಡಿಸಿರಬಹುದೆಂಬುದು ನನ್ನ ಅನಿಸಿಕೆ.


ಇದನ್ನು ಓದಿ: ತಮಿಳುನಾಡು ಲಾಕಪ್‌ ಡೆತ್: ಪೊಲೀಸ್ ದೌರ್ಜನ್ಯಕ್ಕೆ ಕೊನೆಯೆಂದು? ಮಾತು ಸೋತ ಭಾರತ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...