Homeಪ್ರಪಂಚಬ್ರೆಜಿಲ್ ಆಳುವ ವರ್ಗ ಮತ್ತು ಪ್ರಜಾತಂತ್ರ

ಬ್ರೆಜಿಲ್ ಆಳುವ ವರ್ಗ ಮತ್ತು ಪ್ರಜಾತಂತ್ರ

- Advertisement -
- Advertisement -

ಭರತ್ ಹೆಬ್ಬಾಳ್ |

2012ರ ಸೆಪ್ಟೆಂಬರ್ ತಿಂಗಳಲ್ಲಿ ‘ಭ್ರಷ್ಟಾಚಾರದ ವಿರುದ್ದ ಭಾರತ’ ಹೋರಾಟದ ಮುಂಚೂಣಿಯಲ್ಲಿದ್ದ ಪ್ರಶಾಂತ್ ಭೂಷಣ್ ಮತ್ತು ಅರವಿಂದ್ ಕೇಜ್ರಿವಾಲ್ ಅವರುಗಳು ಕಾಂಗ್ರೆಸ್ ಮತ್ತು ರಾಬರ್ಟ್ ವಾದ್ರಾ ವಿರುದ್ದ ಭ್ರಷ್ಟಾಚಾರದ ಆರೋಪ ಮಾಡಿದ್ದು ನಿಮಗೆ ನೆನಪಿರಬಹುದು. ಆಗ ವಾದ್ರಾ ಇವರೆಲ್ಲ ‘ಬಾಳೆಹಣ್ಣು ಗಣತಂತ್ರದ ಮಾವಿನ ಪ್ರಜೆಗಳು’ ಎಂದು ಪ್ರತಿಕ್ರಿಯಿಸಿದ್ದರು. ರಾಜಕೀಯ ಶಬ್ದಕೋಶದಲ್ಲಿ ಬನಾನಾ ರಿಪಬ್ಲಿಕ್ (ಬಾಳೆಹಣ್ಣಿನ ಗಣತಂತ್ರ) ಎಂದರೆ ಒಂದು ಸೀಮಿತ ಸಂಪನ್ಮೂಲದ, ಉತ್ಪನ್ನದ ರಫ್ತಿನ (ಬಾಳೆ ಹಣ್ಣು ಅಥವಾ ಅದಿರು) ಮೇಲೆ ಅವಲಂಬಿತವಾಗಿರುವ, ರಾಜಕೀಯವಾಗಿ ಅಸ್ಥಿರವಾದ ದೇಶ ಎಂಬ ಅರ್ಥವನ್ನು ಕೊಡುತ್ತದೆ. ಸಾಮಾನ್ಯವಾಗಿ, ಬಾಳೆಹಣ್ಣಿನ ಗಣರಾಜ್ಯವು ಅತ್ಯಂತ ಶ್ರೇಣೀಕೃತ ಸಾಮಾಜಿಕ ವರ್ಗಗಳ ಸಮಾಜವನ್ನು ಹೊಂದಿರುತ್ತದೆ (ಒಂದು ಕಡೆ ದೊಡ್ಡ ಬಡ ಕಾರ್ಮಿಕ ವರ್ಗ, ಮತ್ತೊಂದು ಕಡೆ ಉದ್ದಿಮೆಪತಿಗಳು, ರಾಜಕಾರಣ ಮತ್ತು ಸೈನ್ಯದ ಗಣ್ಯರನ್ನು ಹೊಂದಿರುವ ಆಳುವ-ವರ್ಗದ ಪ್ರಭುತ್ವ).

ಈ ಪದವನ್ನು ಮೊದಲ ಬಾರಿಗೆ 1901 ರಲ್ಲಿ ಓ ಹೆನ್ರಿ ಎಂಬ ಅಮೆರಿಕಾದ ಬರಹಗಾರ ದಕ್ಷಿಣ ಅಮೆರಿಕಾದ ದೇಶಗಳನ್ನು ತನ್ನ ವಸಾಹುತುಶಾಹಿ ವಿಸ್ತರಣೆಯಿಂದ ಕೊಳ್ಳೆ ಹೊಡೆಯುತ್ತಿದ್ದ ಮತ್ತು ಲಾಭಕ್ಕಾಗಿ ದೇಶಗಳನ್ನೇ ಆಸ್ಥಿರಗೊಳಿಸುತ್ತಿದ್ದ ಅಮೆರಿಕಾದ ಯುನೈಟೆಡ್ ಫ್ರೂಟ್ ಕಂಪನಿ ಬಗ್ಗೆ ಬರೆಯುತ್ತಾ ಬಳಸುತ್ತಾರೆ. ಅಮೆರಿಕಾದ ಸಾಮ್ರಾಜ್ಯಶಾಹಿ ವಿಸ್ತರಣೆಗಾಗಿ ಈ ಇಂತಹ ಕಂಪನಿಗಳು ಮಾಡಿದ ಹತ್ಯಾಕಾಂಡಗಳು ಬಹಳಷ್ಟಿವೆ. ದಕ್ಷಿಣ ಅಮೆರಿಕ ಖಂಡದ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಇತಿಹಾಸ ಇದನ್ನೇ ಸೂಚಿಸುತ್ತದೆ.

1964ರಿಂದ 1985ರವರೆಗೂ ಮಿಲಿಟರೀ ಸರ್ವಾಧಿಕಾರದಲ್ಲಿದ್ದ ಬ್ರೆಜಿಲ್ ಕಾನೂನಾತ್ಮಕವಾಗಿ ಗುಲಾಮಗಿರಿ ನಿರ್ಮೂಲನೆ ಮಾಡಿದ ಕೊನೆಯ ದೇಶ (1988ರಲ್ಲಿ). ತನ್ನ ದೇಶದಲ್ಲಿ ಅರ್ಧಕ್ಕಿಂತ ಜನಸಂಖ್ಯೆ ಕಪ್ಪು ಜನರಿದ್ದರೂ, ದೃಶ್ಯಮಾಧ್ಯಮದಲ್ಲಿ ಬಹುತೇಕ ಬಿಳಿಯರನ್ನೇ ತೋರಿಸುವ ದೇಶ. ಮೊದಲಿಂದಲೂ ವಸಾಹುತುಶಾಹಿ ಆಳ್ವಿಕೆಯಲ್ಲಿ ಬ್ರೆಜಿಲ್ಲನ್ನು ಬಿಳಿಯಾಗಿಸುವ ನೀತಿಗಳನ್ನು (ಯುರೋಪಿಯನ್ ಜನರನ್ನು ಬ್ರೆಜಿಲ್ ಮತ್ತಿತರ ದೇಶಗಳಿಗೆ ಕರೆತರುವುದು) ಉತ್ತೇಜಿಸಲಾಗಿತ್ತು. ಇಂತಹ ಇತಿಹಾಸದಿಂದಾಗಿ ಈಗಲೂ ಅದು ಅತ್ಯಂತ ವರ್ಣಭೇದ ಅನುಸರಿಸುವ ವ್ಯವಸ್ಥೆಯನ್ನು ಹೊಂದಿದೆ. ದಕ್ಷಿಣ ಭಾಗದಲ್ಲಿರುವ ಪ್ರದೇಶಗಳು ಬಹುತೇಕ ಬಿಳಿಯರಿಂದ ಕೂಡಿದೆ.

70ರ ದಶಕದಿಂದ ಪ್ರಪಂಚದಾದ್ಯಂತ ಆವರಿಸಿಕೊಂಡಿರುವ ನವಉದಾರೀಕರಣದ ಮೂಲ ಹುಡುಕುತ್ತಾ ಹೋದರೆ ಎಪ್ಪತ್ತರ ದಶಕದಲ್ಲಿ ಲ್ಯಾಟಿನ್ ಅಮೆರಿಕದಲ್ಲಾದ ರಾಜಕೀಯ ಬೆಳವಣಿಗೆಗಳ ಆದಿಯು ಸಿಗುತ್ತದೆ. ಮಿಲಿಟರಿ ಸರ್ವಾಧಿಕಾರ ಹೋಗಿ ಪ್ರಜಾಪ್ರಭುತ್ವ ಬಂದರೂ ಕೂಡ, ಸರ್ವಾಧಿಕಾರದ ಪರಂಪರೆಯು ಹಳೆಯ ದೊಡ್ಡ ದೊಡ್ಡ ಭೂಮಾಲೀಕರು, ಸಾರ್ವಜನಿಕ ಸಂಸ್ಥೆಗಳಲ್ಲಿನ ದೊಡ್ಡ ದೊಡ್ಡ ಕುಳಗಳು, ಮಿಲಿಟರಿಯ ಪ್ರಭಾವಗಳು ರಾಜಕೀಯ ಸಂಸ್ಕೃತಿಯಲ್ಲಿ ಆವರಿಸಿಕೊಂಡಿತ್ತು. ಇದರ ಜೊತೆಗೆ ಬ್ರೆಜಿಲ್‍ನ ಮಾಧ್ಯಮ ಕೂಡ ಯಾವಾಗಲೂ ಸಿರಿವಂತರ ಪರವಾಗಿತ್ತು. ಇಂದಿಗೂ ಬಹುತೇಕ ಬ್ರೆಜಿಲ್ ಮಾಧ್ಯಮ ಖಾಸಗಿ ಹಿಡಿತದಲ್ಲಿದೆ.

1965ರ ಮಿಲಿಟರಿ ಆಡಳಿತದಲ್ಲಿ ಹುಟ್ಟಿಕೊಂಡ ಗ್ಲೋಬೋ ಎನ್ನುವ ಒಂದು ಮಾಧ್ಯಮ ಸಂಸ್ಥೆಯು ಅಲ್ಲಿನ ಅತ್ಯಂತ ದೊಡ್ಡ ಮಾಧ್ಯಮ ಸಂಸ್ಥೆ. ಇದು ಆ ದೇಶದ ಅತ್ಯಂತ ದೊಡ್ಡ ಶ್ರೀಮಂತ ಮನೆತನದ ಮಾಲೀಕತ್ವದಲ್ಲಿದೆ. ದೇಶದ ಅರ್ಧದಷ್ಟು ಜನ ಗ್ಲೋಬೋ ವೀಕ್ಷಿಸುತ್ತಾರೆ (9 ಕೋಟಿಗೂ ಮೇಲೂ). ಭಾರತದ ಮಾಧ್ಯಮಗಳ ಅರ್ನಾಬ್ ಗೋಸ್ವಾಮಿ, ಸುಧಿರ್ ಚೌದರೀ, ರಜತ್ ಶರ್ಮ, ರೋಹಿತ್ ಸರ್ದಾನರಂಥ ಪತ್ರಕರ್ತರು ಸರ್ವಾಧಿಕಾರದ ತುತ್ತೂರಿಯನ್ನು ಇನ್ನೂ ಚೆನ್ನಾಗಿ ಹೇಗೆ ಊದಬೇಕು ಎಂಬ ಪಾಠವನ್ನು ಇವರಿಂದ ಕಲಿಯಬಹುದು ಎಂದರೆ, ಅದು ಇನ್ನೂ ಹೇಗಿರಬೇಕು ಊಹಿಸಿಕೊಳ್ಳಿ. ಬ್ರೆಜಿಲ್‍ನ ಎರಡನೇ ಅತಿದೊಡ್ಡ ಮಾಧ್ಯಮ ಸಂಸ್ಥೆ ‘ಬಾಂಡೆರಸ್ಟೆಸ್’ ಧಾರ್ಮಿಕ ಸಂಸ್ಥೆಯ ಒಡೆತನದಲ್ಲಿದೆ. ಬ್ರೆಜಿಲ್ ದೇಶ ಪ್ರಪಂಚದಲ್ಲಿಯೇ ಅತ್ಯಂತ ಹೆಚ್ಚು ಕ್ರೈಸ್ತ ಧರ್ಮೀಯರಿರುವ ಕ್ಯಾಥೊಲಿಕ್ ದೇಶ. ಮಿಲಿಟರಿ ಜೊತೆ ಇವೂ ಕೂಡ ಬ್ರೆಜಿಲ್‍ನ ಸ್ಥಾಪಿತ ಹಿತಾಸಕ್ತಿ ಕಾಯುವ ಸಾಂಪ್ರದಾಯಿಕ ಪ್ರತಿಗಾಮಿ ಶಕ್ತಿಗಳು.

ಇವೆಲ್ಲವನ್ನೂ ಃಃಃ ಲಾಬಿ ಎಂದು ಕರೆಯುತ್ತಾರೆ. ಈ ಲಾಬಿಗೆ ಬ್ರೆಜಿಲ್ ಕಾಂಗ್ರೆಸ್ ಮತ್ತು ಸೆನೆಟ್ನಲ್ಲಿ 40% ಸಂಖ್ಯಾಬಲವಿದೆ. ಮೊದಲನೆಯದು ಬೀಫ್ ಲಾಬಿ, ಇದರಲ್ಲಿ ಸಾವಿರಾರು ಅಥವಾ ಲಕ್ಷ ಲಕ್ಷ ಎಕರೆಗಟ್ಟಲೆ ಹೊಂದಿರುವ ಭೂಮಾಲೀಕರು ಬರುತ್ತಾರೆ. ಇವರು ದನದ ಮಾಂಸ ರಫ್ತು ಮಾಡುವ ವ್ಯವಹಾರದ ಜೊತೆಗೆ ಸೋಯಾ ಬೀನ್, ಕಬ್ಬು(ಸಕ್ಕರೆ), ಆರೆಂಜ್, ಬಾಳೆಹಣ್ಣು, ಕಾಫೀ ರಫ್ತು ಮಾಡುವ ಗುಂಪಾಗಿದ್ದಾರೆ. ಚುನಾವಣೆಗೂ ಮುಂಚೆ ಬೊಲ್ಸಾನರೋ ಅಮೆಜಾನ್ ಕಾಡುಗಳನ್ನು ಕಡಿದು ಈ ವ್ಯವಹಾರದ ವಿಸ್ತರಣೆ ಮಾಡುವುದಕ್ಕೆ ಸಂಪೂರ್ಣ ಬೆಂಬಲ ಕೊಡುವುದಾಗಿ ಹೇಳಿದ್ದ. ಇನ್ನು ಎರಡನೆಯ ಬಿ, ಬುಲೆಟ್ ಲಾಬಿಯಲ್ಲಿ ಸ್ವತಹಃ ಬೊಲ್ಸಾನರೋ ದೊಡ್ಡ ನಾಯಕ. ಇವನ ಪ್ರಕಾರ ಇವನು ಕೂಡ ಪಾಲ್ಗೊಂಡಿದ್ದ ಮಿಲಿಟರಿ ಸರ್ವಾಧಿಕಾರದಲ್ಲಿ ಚಿತ್ರಹಿಂಸೆಯ ಜೊತೆಗೆ ಕಡಿಮೆ ಜನರನ್ನು ಸಾಯಿಸಿದ್ದು ದೊಡ್ಡ ತಪ್ಪು. ಇನ್ನೂ 30 ಸಾವಿರ ಜನರನ್ನು ಸಾಯಿಸಬೇಕಿತ್ತೆಂದು ಸಾರ್ವಜನಿಕವಾಗಿ ಹೇಳಿಕೆ ಕೊಟ್ಟಿದ್ದ. ಇವನ ಜೊತೆ ಇನ್ನೂ ಹಲವು ಮಿಲಿಟರಿ ಅಧಿಕಾರಿಗಳು ಕಾರ್ಮಿಕ ಪಕ್ಷದ ಅಧಿಕಾರದಲ್ಲಿ ಸ್ಥಾಪಿಸಿದ್ದ ‘ಸರ್ವಾಧಿಕಾರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತಾದ ಸತ್ಯ ಆಯೋಗ’ದ ಮುಂದೆ ವಿಚಾರಣೆಗಳನ್ನು ಎದುರುಸುತ್ತಿದ್ದಾರೆ. ಮೂರನೆಯದು ಬೈಬಲ್ ಲಾಬಿ, ಇದು ಕೂಡ ಧಾರ್ಮಿಕ ಮೂಲಭೂತವಾದ ಪ್ರತಿಪಾದಿಸುವ ಒಂದು ಗುಂಪು.

ಇವರೆಲ್ಲರ ಜೊತೆಗೆ ಅಮೆರಿಕ ಬೇಹುಗಾರಿಕೆ ಸಂಸ್ಥೆಗಳ ಸಹಭಾಗಿತ್ವ ಮತ್ತು ಬ್ರೆಜಿಲ್ ನ್ಯಾಯಾಂಗ ವ್ಯವಸ್ಥೆ ಸೇರಿ ಎರಡನೇ ಬಾರಿಗೆ ನ್ಯಾಯಯುತವಾಗಿ ಚುನಾಯಿರಾತಾಗಿದ್ದ ದಿಲ್ಮ ರೌಸೆಫ್‍ರನ್ನು ಒಂದು ಹುಸಿ ಆರೋಪದಡಿ ಅಧಿಕಾರದಿಂದ ಹೊರ ಹಾಕುತ್ತಾರೆ. ಇವರ ವಿರುದ್ದ ದೋಷಾರೋಪ ಮಾಡಿದ್ದ 4 ಜನರಲ್ಲಿ ನಾಲ್ಕು ಜನವೂ ಭ್ರಷ್ಟಾಚಾರದ ಆರೋಪವನ್ನು ಎದುರಿಸುತ್ತಿದ್ದಾರೆ. ದಿಲ್ಮ ಆಡಳಿತದಲ್ಲಿ ಉಪರಾಷ್ಟ್ರಪತಿಯಾಗಿದ್ದ ಮಿಚಿಯಾಲ್ ತೆಮೆರ್ ತಾವು ಕೂಡ ದಿಲ್ಮರನ್ನು ಕೆಳಗಿಳಿಸುವ ಷಡ್ಯಂತ್ರದ ಪಾತ್ರಧಾರಿಯೂ ಆಗಿದ್ದರು ಮತ್ತು ಸ್ವತಃ ಅವರೇ ಭ್ರಷ್ಟಾಚಾರದ ಆರೋಪವನ್ನು ಎದುರಿಸಿ ಅಧಿಕಾರದಿಂದ ಕೆಳೆಗಿಳಿಯಬೇಕಾಗುತ್ತದೆ.

ನಂತರದ ಅಭಿಪ್ರಾಯ ಸಮೀಕ್ಷೆಯಲ್ಲಿ ಎಲ್ಲರಿಗಿಂತಲೂ ಮುಂಚೂಣಿಯಲ್ಲಿದ್ದ ಲೂಲಾರನ್ನು ಕ್ಷುಲ್ಲಕ ಕಾರಣಗಳನ್ನು ಮುಂದೆ ಮಾಡಿ, ನ್ಯಾಯಾಂಗ ವ್ಯವಸ್ಥೆಯನ್ನೂ ದುರ್ಬಳಕೆ ಮಾಡಿಕೊಂಡು ಜೈಲಿಗಟ್ಟುತ್ತಾರೆ. (ಬ್ರೆಜಿಲ್ ಚುನಾವಣೆಗಳಲ್ಲಿ ಒಬ್ಬ ಅಭ್ಯರ್ಥಿ ಸತತ ಎರಡು ಬಾರಿಗೂ ಹೆಚ್ಚು ಚುನಾವಣೆಗೆ ನಿಲ್ಲುವ ಹಾಗಿಲ್ಲ, ಹಾಗಾಗಿ 2010ರ ನಂತರ ಮತ್ತೆ 2018ರಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದರು). ಈ ತೀರ್ಪಿಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿ ತನ್ನ ಮಾನವ ಹಕ್ಕುಗಳ ಸಮಿತಿಯ ವತಿಯಿಂದ ಲೂಲಾರನ್ನು ಚುನಾವಣೆಯಿಂದ ಅನರ್ಹಗೊಳಿಸಬಾರದು ಮತ್ತು ವಿಚಾರಣೆ ನಡೆಯುವವರೆಗೂ ಅವರು ಚುನಾವಣೆಯಲ್ಲಿ ನಿಲ್ಲಬಹುದೆಂದು ಹೇಳಿಕೆ ನೀಡಿತ್ತು. ಈ ಚುನಾವಣೆ ಎಷ್ಟು ಆಳುವ ವರ್ಗದ ಪರವಾಗಿತ್ತೆಂದರೆ ತಮ್ಮ ಅಭ್ಯರ್ಥಿ ಗೆಲ್ಲಲು, ಇವರ ವಿರುದ್ಧ ಇದ್ದ ಗೆಲ್ಲುವ ಅಭ್ಯರ್ಥಿಯನ್ನು ಹೇಗಾದರೂ ಮುಗಿಸಬೇಕಿತ್ತು. ಬ್ರೆಜಿಲ್ ಚುನಾವಣೆಯಲ್ಲಿ ಆದದ್ದು ಅದೇ. ಇಲ್ಲಿ ಭಾರತದಲ್ಲಿ ಸರ್ವಾಧಿಕಾರದ ಹೆಜ್ಜೆಗಳು ದೊಡ್ಡ ದೊಡ್ಡದಾಗುತ್ತಿದ್ದಂತೆ ಇಲ್ಲೂ ಕೂಡ ಪ್ರತಿಪಕ್ಷದ ನಾಯಕರುಗಳನ್ನು ಜೈಲಿಗಟ್ಟಿದರೂ ಅದು ಆಶ್ಚರ್ಯವಲ್ಲ. ಈಗಾಗಲೇ ಇದನ್ನು ಕೆಲವು ನಾಯಕರುಗಳ ಮೇಲೆ ಅದನ್ನು ಉಪಯೋಗಿಸುತ್ತಿದ್ದಾರೆ.

(ಬೊಲ್ಸಾನರೋ ಪ್ರಚಾರ, ಅದರ ಹಿಂದಿನ ಶಕ್ತಿಗಳು, ಮುಂಬರುವ ಚುನಾವಣೆಗಳ ಬಗ್ಗೆ ಕಡೆಯ ಕಂತು ಮುಂದಿನ ಸಂಚಿಕೆಯಲ್ಲಿ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...