Homeರಾಜಕೀಯಸಾಧನೆಶೂನ್ಯ ಬಿಜೆಪಿಯಿಂದ ಮತ್ತೆ ರಾಮ ಮಂದಿರದ ಜಪ

ಸಾಧನೆಶೂನ್ಯ ಬಿಜೆಪಿಯಿಂದ ಮತ್ತೆ ರಾಮ ಮಂದಿರದ ಜಪ

- Advertisement -
- Advertisement -

ಪಿ.ಕೆ. ಮಲ್ಲನಗೌಡರ್ |

ರಾಮಮಂದಿರದ ಹೆಸರಲ್ಲಿ ಕೋಮು ಧ್ರುವೀಕರಣ ಮಾಡಿ, 2019ರ ಚುನಾವಣೆ ಗೆಲ್ಲಲು ಸಂಘಪರಿವಾರ ರೂಪಿಸಿರುವ ಜೀವದ್ವೇಷಿ ಕಾರ್ಯಕ್ರಮದ ರಿಹರ್ಸಲ್ ರವಿವಾರ ಯಾವುದೇ ಅಹಿತಕರ ಘಟನೆಗಳಿಲ್ಲದೇ ಮುಗಿದಿದೆ. ಆದರೆ ಅದು ಒಂದು ಅಪಾಯದ ಮುನ್ಸೂಚನೆಯನ್ನು ನೀಡಿದೆ. 1992ರಲ್ಲಾದಂತೆ ಮತ್ತೆ ಹಿಂಸಾಚಾರದ ಮೂಲಕ ಧ್ರುವೀಕರಣ ಮಾಡವ ಹುನ್ನಾರಕ್ಕೆ ಚಾಲನೆ ನೀಡಲಾಗಿದೆ.

ವಿಎಚ್‍ಪಿ, ಆರ್‍ಎಸ್‍ಎಸ್‍ಗಳ ಈ ಸರಣಿ ಕಾರ್ಯಕ್ರಮ ಬಿಜೆಪಿ ಸರ್ಕಾರದ ಮೇಲೆ ಒತ್ತಡ ಹೇರುವ ಉದ್ದೇಶದ್ದು ಎನಿಸುವಂತೆ ಬಿಂಬಿಸಲಾಗಿದೆ. ಆದರೆ ಈ ಕಾರ್ಯಕ್ರಮದ ಪ್ರಾಯೋಜಕ ಖುದ್ದು ಬಿಜೆಪಿಯೇ ಆಗಿದೆ. ಇನ್ನು ಸ್ಪಷ್ಟವಾಗಿ ನರೇಂದ್ರ ಮೋದಿ ಮತ್ತು ಅಮಿತ್‍ಶಾಗಳೇ ಆಗಿದ್ದಾರೆ.

ನೋಟು ಅಮಾನ್ಯೀಕರಣ, ಜಿಎಸ್‍ಟಿಗಳಿಂದ ಜರ್ಜರಿತಗೊಂಡ ಜನಸಾಮಾನ್ಯರನ್ನು ಒಲಿಸಿಕೊಳ್ಳಲು ಅದಕ್ಕೆ ಈಗ ಉಳಿದಿರುವ ದಾರಿ ಇದೇ ಆಗಿದೆ. 2014ರ ನಂತರ ನಡೆದ ಲೋಕಸಭಾ ಉಪಚುನಾವಣೆಗಳಲ್ಲಿ, ವಿಪಕ್ಷಗಳು ಒಮ್ಮತದ ಅಭ್ಯರ್ಥಿ ಹಾಕಿದರೆ ಬಿಜೆಪಿಗೆ ಹೀನಾಯ ಸೋಲು ಎಂಬುದು ಪಕ್ಕಾ ಆಗಿದೆ. ಒಟ್ಟು 16 ಉಪಚುನಾವಣೆಗಳಲ್ಲಿ ಸೋತಿರುವ ಬಿಜೆಪಿ, 2014ರಲ್ಲಿ ತಾನು ಗೆದ್ದಿದ್ದ 10 ಕ್ಷೇತ್ರಗಳನ್ನು ಕಳೆದುಕೊಂಡು, 282ರಿಂದ 272ಕ್ಕೆ ಕುಸಿದಿದೆ. ಭಾರಿ ಅಂತರದ ಸೋಲುಗಳು ಅದನ್ನು ಕಂಗೆಡಿಸಿವೆ.

ಮೋದಿಯ ಭಾಷಣಗಳು ಈಗ ಜನರಿಂದ ಲೇವಡಿಗೆ ಒಳಗಾಗುತ್ತಿವೆ. ಅಭಿವೃದ್ಧಿ ಆಧಾರದಲ್ಲಿ ಮತ ಕೇಳುವೆವು ಎಂಬ ಸೋಗಲಾಡಿತನ ಮಾಡುತ್ತಲೇ ಅಡ್ಡ ಮಾರ್ಗಗಳನ್ನು ಹಿಡಿಯುತ್ತ ಸಾಗಿದೆ. ಉತ್ತರದಲ್ಲಿ ಈಗ ಚುನಾವಣಾ ಪ್ರಚಾರಗಳಲ್ಲಿ ಮೋದಿ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರನ್ನು ವ್ಯಂಗ್ಯ ಮಾಡುವ ಕಸರತ್ತಿನಲ್ಲಿ ತೊಡಗಿದ್ದಾರೆ. ಇದು ಫಲ ಕೊಡಲಾರದು ಎಂದು ಸಂಶಯ ಬರತೊಡಗಿದ ಮೇಲೆ ಸಂಘ ಪರಿವಾರ ಅಖಾಡಕ್ಕೆ ಇಳಿದಿದೆ. ರಕ್ತಪಾತ ನಡೆಸಿಯಾದರೂ 2019ರ ಚುನಾವಣೆ ಗೆಲ್ಲುವ ಜೀವವಿರೋಧಿ, ದೇಶವಿರೋಧಿ ಕೃತ್ಯಕ್ಕೆ ಧರ್ಮಸಂಸದ್ ಎಂಬ ಅಧರ್ಮದ ಕಾರ್ಯಕ್ರಮಕ್ಕೆ ಈಗ ಖುಲ್ಲಂಖುಲ್ಲಂ ಕೈಹಾಕಿದೆ.

ಆದರೆ ಅನಧಿಕೃತವಾಗಿಇದು ಎಂದೋ ಶುರುವಾಗಿದೆ. ಉತ್ತರಪ್ರದೇಶದ ವಿಧಾನಸಭಾ ಚುನಾವಣೆಗಳನ್ನು ಅದು ಗೆದ್ದಿದ್ದು ಜನರ ಬದುಕಿಗೆ ಬೆಂಕಿ ಇಡುವ ಮೂಲಕವೇ. ಅಲ್ಲಿ ಯೋಗಿ ಆದಿತ್ಯನಾಥರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂಡಿಸಿದ್ದು, ಹಿಂದೂ ಮತಗಳ ಧ್ರುವೀಕರಣಕ್ಕಾಗಿಯೇ. ಮೊದಲ ದಿನದಿಂದಲೂ ಯೋಗಿ ಇದಕ್ಕೆ ಪೂರಕವಾದ ಹುಚ್ಚಾಟವನ್ನೇ ನಡೆಸುತ್ತ ಬಂದಿದ್ದಾರೆ. ಕಳೆದ 2 ತಿಂಗಳಿಂದ ಈ ಪುಣ್ಯಾತ್ನ ಮುಖ್ಯಮಂತ್ರಿಯ ಅಜೆಂಡಾ ಅಯೋಧ್ಯಾ, ರಾಮಮಂದಿರವಷ್ಟೇ ಆಗಿದೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಆಹಾರಧಾನ್ಯಗಳ ಬೆಲೆ ಏರಿಕೆಯನ್ನು ನಿಯಂತ್ರಿಸಲು ಅಸಮರ್ಥವಾಗಿರುವ ಸರ್ಕಾರ, ಈಗ ರಫೇಲ್ ರಾಡಿಯಲ್ಲಿ ಸಿಕ್ಕಿ ಹಾಕಿಕೊಂಡಿದೆ. ಇದೆಲ್ಲಕ್ಕೂ ಮುಖ್ಯವಾಗಿ ರೈತಾಪಿ ಸಮುದಾಯದ ಕಷ್ಟಗಳಿಗೆ ಸ್ಪಂದಿಸುವ ಒಂದೇಒಂದು ಕಾರ್ಯಕ್ರಮವನ್ನೂ ರೂಪಿಸದ ಸರ್ಕಾರ, ಉದ್ಯಮಿಗಳ ಹಿತ ಕಾಯುತ್ತ ದೇಶದ ಆರ್ಥಿಕತೆಯನ್ನೇ ಡೋಲಾಯಮಾನ ಮಾಡಿದೆ.

ನ್ಯಾಯಾಲಯಕ್ಕೇ ಸವಾಲು

ಹೊರಮಾತಿನಲ್ಲಿ ನ್ಯಾಯಾಲಯದ ತೀರ್ಪಿಗೆ ಬದ್ಧ ಎಂದು 4 ವರ್ಷ ಕಾಲ ಹಾಕಿದ ಬಿಜೆಪಿ, ಈಗ ತನ್ನ ಮಾನ ಮುಚ್ಚಿಕೊಳ್ಳಲು ಸಂಘ ಪರಿವಾರದ ಇತರ ಅಂಗಗಳ ಮೂಲಕ ಕಾನೂನು ಅಥವಾ ಸುಗ್ರಿವಾಜ್ಞೆಯ ಬೇಡಿಕೆಯನ್ನು ಮುನ್ನೆಲೆಗೆ ತಂದಿದೆ. ನ್ಯಾಯಾಲಯ ವಿಚಾರಣೆಯನ್ನು ಈಗಲೇ ಆರಂಭಿಸಿದ್ದರೂ ಅದರ ನಿಲುವೇನೂ ಬದಲಾಗುತ್ತಿರಲಿಲ್ಲ. ಕಳೆದ ಚುನಾವಣೆಯಲ್ಲಿ ಪ್ರಣಾಳಿಕೆಯಲ್ಲಿ ಮಂದಿರದ ಭರಸ ನೀಡಿ, ‘ರಾಮಭಕ್ತರಿಗೇ’ ವಂಚಿಸಿದ ನಡೆಯ ಲಾಭವನ್ನು ಶಿವಸೇನಾ ಪಡೆಯಲು ಕಣಕ್ಕೆ ಇಳಿದ ಮೇಲಂತೂ ಸಂಘಕ್ಕೆ ಹಿಂದೂತ್ವದ ಹಾದಿಯನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳುವ ಅನಿವಾರ್ಯತೆಯೂ ಸೃಷ್ಟಿಯಾಗಿದೆ.

2017ರಲ್ಲಿ ಸುಪ್ರಿಂ ತೀರ್ಪ ಉಲ್ಲಂಘನೆ

ಬಿಜೆಪಿ ಮತ್ತೆ ಧ್ವಂಸ ರಾಜಕಾರಣಕ್ಕೆ ಇಳಿಯುವ ಸುಳಿವು 2017ರಲ್ಲಿಯೇ ಸಿಕ್ಕಿತ್ತು. ವಿಎಚ್‍ಪಿ ಮುಖಡ ರಾಮ ವಿಲಾಸ್ ವೇದಾಂತಿ, ಅಭಯ ಚೈತನ್ಯ ಸ್ವಾಮಿಯ ನೇತೃತ್ವದಲ್ಲಿ ಸಾಧುಸಂತರ ಗುಂಪೊಂದು ರಾಮಲಲ್ಲಾ ದೇಗುಲಕ್ಕೆ ತ್ರಿಶೂಲ ಹಿಡಿದು ಪ್ರವೇಶಿಸುವ ಮೂಲಕ ಸುಪ್ರಿಂ ಕೋರ್ಟ್‍ನ 2002ರ ಆದೇಶವನ್ನು ಉಲ್ಲಂಘಿಸಿತ್ತು. ಯಾವುದೇ ಆಯುಧ, ಧರ್ಮದ ಸಂಕೇತಗಳನ್ನು ಈ ನಿಷೇಧಿತ ಪ್ರದೇಶದಲ್ಲಿ ತರಬಾರದು ಎಂಬ ಆದೇಶವನ್ನು ಉಲ್ಲಂಘಿಸಲು ಯೋಗಿ ಆದಿತ್ಯನಾಥ ಸರ್ಕಾರ ಕುಮ್ಮಕ್ಕು ನೀಡಿತ್ತು. ಫೈಜಾಬಾದ್‍ನ ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ವಿಎಚ್‍ಪಿಯ ನಡೆಯನ್ನು ಬೆಂಬಲಿಸಿ ಮಾತಾಡಿದ್ದರು.

2014ರಿಂದ ಕಲ್ಲು ಸಂಗ್ರಹ

2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ವಿಎಚ್‍ಪಿ ದೇಶಾದ್ಯಂತ ಕಲ್ಲು ಸಂಗ್ರಹ ಕೆಲಸವನ್ನು ಆರಂಭಿಸಿತ್ತು. ಅಯೋಧ್ಯೆಯಲ್ಲಿರುವ ತನ್ನ ವರ್ಕ್‍ಶಾಪ್‍ನಲ್ಲಿ ಕಲ್ಲು ಕೆತ್ತನೆಯ ಕೆಲಸಕ್ಕೆ ವೇಗ ನೀಡಲಾರಂಭಿಸಿತು. 2017ರಲ್ಲಿ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್‍ಮಂದಿರ ನಿರ್ಮಾಣಕ್ಕೆ ಕೋರ್ಟ್ ಸಂಧಾನ ವಹಿಸಲು ಸಿದ್ದವೆಂದಾಗ, ಇನ್ನಷ್ಟು ಚುರುಕುಗೊಂಡ ವಿಎಚ್‍ಪಿ, ಮುಸ್ಲಿಂ ಸಂಘಟನೆಗಳು ಸಲ್ಲಿಸಿರುವ ಆಕ್ಷೇಪಣಾ ಅರ್ಜಿಗಳನ್ನು ಹಿಂದಕ್ಕೆ ಪಡೆಯಲು ಒತ್ತಾಯಿಸಿತ್ತು. ಆದರೆ ಆ ವರ್ಷ ಅಪೆಕ್ಸ್ ಕೋರ್ಟ್ ಬಿಜೆಪಿಯ ಲಾಲ ಕೃಷ್ಣ ಅದ್ವಾನಿ, ಮುರಳಿ ಮನೋಹರ ಜೋಶಿ ಮತ್ತು ಉಮಾ ಭಾರತಿಯವರ ಮೇಲೆ ಹೊರಿಸಿದ್ದ ಕ್ರಿಮಿನಲ್‍ಸಂಚಿನ ಆರೋಪಗಳನ್ನು ಮಾನ್ಯ ಮಾಡಿತು.ಹೀಗಾಗಿ ಖೇಹರ್ ಸಾಹೇಬರ ‘ಸಂಧಾನ’ ಶುರುವೇ ಆಗಲಿಲ್ಲ.

ಸಂಕಟ ಬಂದಾಗ ರಾಮರಮಣ!

ಜನಪರ ಆಡಳಿತ ನೀಡುವ ಯಾವ ಪ್ರಯತ್ನವನ್ನೂ ಇಲ್ಲಿವರೆಗಿನ ಬಿಜೆಪಿ ಸರ್ಕಾರಗಳು (ಕೇಂದ್ರ ಮತ್ತು ರಾಜ್ಯ ಸರ್ಕಾರಗಳು) ನೀಡಿಲ್ಲ. ಸಂಘ ಪರಿವಾರದ ತಲೆಯಲ್ಲಿ ಹಿಂದೂರಾಷ್ಟ್ರ ಎಂಬ ಗೊಬ್ಬರ ಬಿಟ್ಟರೆ ಮತ್ತೇನಿಲ್ಲ. ಗೋಳ್ವಾಲ್ಕರ್ ಎಂಬ ಜೀವವಿರೋಧಿಯ ‘ಸಿದ್ದಾಂತ’ವೇ ಅದಕ್ಕೆ ಸಂವಿಧಾನ. ಗಾಂಧಿ, ಅಂಬೇಡ್ಕರ್, ಪಟೇಲರ ಹೆಸರನ್ನು ಕೇವಲ ಲಾಭಕ್ಕಷ್ಟೇ ಅದು ಬಳಸಿಕೊಳ್ಳುತ್ತದೆ. ಈಗ ಮೋದಿ ಮಾಡುತ್ತಿರುವುದೂ ಅದನ್ನೇ. ಮೋದಿಯ ‘ಅಭಿವೃದ್ಧಿ’ ಎಂದರೆ ಖದೀಮ ಉದ್ಯಮಿಗಳಿಗಾಗಿ ಯೋಜನೆ ರೂಪಿಸುವುದು, ಹಣ ಕೊಳ್ಳೆ ಹೊಡೆದು, ಅದನ್ನು ಹಿಂದೂತ್ವದ ಉದ್ಯಮದಲ್ಲಿ ಹೂಡುವುದು.

ಜನರ ನಿತ್ಯ ಬವಣೆಗಳ ಬಗ್ಗೆ ಯೋಚಿಸದ ಬಿಜೆಪಿಗೆ ಚುನಾವಣೆ ಬಂದಾಗ ರಾಮ ನೆನಪಾಗುತ್ತಾನೆ. ಆದರೆ ಈ ಸಲ ಮಾಧ್ಯಮಗಳ ಭಾರಿಬೆಂಬಲದ ಹೊರತಾಗಿಯೂ 2019ರ ಚುನಾವಣೆಯ ಭಯ ಶುರುವಾಗಿರುವುದರಿಂದ ಮತ್ತೆ ಅದು ಧ್ರುವೀಕರಣಕ್ಕೆ ಕೈ ಹಾಕಿದೆ.

ಮೊನ್ನೆ ದೇಶಾದ್ಯಂತ ನಡೆಸಿದ ಸಭೆಗಳ ಸ್ವರೂಪ, ಧಾಟಿ ನೋಡಿದರೆ 1992 ಮತ್ತು 2002ರ ಹತ್ಯಾಕಾಂಡಗಳಿಗಿಂತಲೂ ಭೀಕರವಾದ ಕೋಮುಗಲಭೆಗೆ ಅದು ಸಿದ್ಧತೆ ನಡೆಸಿರುವ ಸೂಚನೆಗಳು ಕಾಣುತ್ತಿವೆ. ಅಯೋಧ್ಯೆಯಲ್ಲಿ ನಡೆದ ಧರ್ಮಸಂಸದ್ ಬರೀ ಆರಂಭ ಮತ್ತು ರಿಹರ್ಸಲ್ ಮಾತ್ರ…..

ಈ ದೇಶದ ರೈತರು, ದಲಿತರು ಮತ್ತು ಎಲ್ಲ ಶ್ರಮಜೀವಿಗಳು ಈ ಹುನ್ನಾರವನ್ನು ಚಿವುಟಿ ಹಾಕಲು ಜನಾಂದೋಲನ ರೂಪಿಸಬೇಕಿದೆ.

ನಂಬುಗೆ, ಪುರಾಣ ಮತ್ತು ನ್ಯಾಯ!

2010ರಲ್ಲಿ ಅಲಹಾಬಾದ್ ಹೈಕೋರ್ಟ್ ಬಾಬ್ರಿ ಮಸೀದಿಯ ಜಾಗವನ್ನು ಮೂವರೂ ದಾವೆದಾರರಿಗೆ ಸರಿಸಮವಾಗಿ ಹಂಚಿ ನೀಡಿದ ತೀರ್ಪಿಗೆ ಆಗ ಜನಸಾಮಾನ್ಯರು ಸ್ವಾಗತಿಸಿದ್ದರು. ಮತ್ತೆ 1992ರ ದುಸ್ವಪ್ನ ಕಾಡಲಾರದು ಎಂಬ ಆಶಾಭಾವನೆಯೇ ಅದಕ್ಕೆ ಕಾರಣವಾಗಿತ್ತು.

ಆದರೆ ಪುರಾಣ ಮತ್ತು ದೇಶದ ಬಹುಸಂಖ್ಯಾತರ ನಂಬುಗೆಗಳನ್ನು ಆಧರಿಸಿ ಆ ವಿಲಕ್ಷಣ ತೀರ್ಪನ್ನು ನೀಡಲಾಗಿತ್ತು. ಆಶಿಶ್ ನಂದಿಯವರಂತಹ ದೇಸಿ ಚಿಂತಕರು ಕೂಡ, ನ್ಯಾಯದ ಚೌಕಟ್ಟನ್ನು ಮೀರಿ, ದೇಶದ ಜನರ ನಂಬಿಕೆಗಳನ್ನು ಆಧರಿಸಿ ತೀರ್ಪು ನೀಡುವ ಮೂಲಕ ಕೋರ್ಟ್ ಇತಿಹಾಸ ಸೃಷ್ಟಿಸಲು ಯತ್ನಿಸಿದೆ ಎಂದು ಕೊಂಡಾಡಿದ್ದರು! ಕನ್ನಡದ ‘ದೇಸಿ’ ಚಿಂತಕರಲ್ಲಿ ಒಬ್ಬರಾದ ಕೆ.ವಿ. ಅಕ್ಷರ ಕೂಡ ಸಂಭ್ರಮಪಟ್ಟಿದ್ದರು.

ಈ ದೇಶದ ಬಹುಸಂಖ್ಯಾತ ಶ್ರಮಿಕರಿಗೆ ರಾಮ ಆರಾಧ್ಯ ದೈವವೇ ಅಲ್ಲ. ರಾಮನ್ನು ಆರಾಧಿಸುವ ಬಹುಪಾಲು ಜನರು ‘ರಾಮ ಅಯೋಧ್ಯೆಯಲ್ಲಿ ಹುಟ್ಟಿದ್ದ’ ಎಂಬುದರ ಬಗ್ಗೆ ತಲೆ ಕೆಡಿಸಿಕೊಂಡಿಯೇ ಇಲ್ಲ. ಮಾಧ್ಯಮಗಳ ನೆರವಿನಿಂದ ಸಂಘಪರಿವಾರ ಅಂತಹ ನಂಬಿಕೆಯನ್ನು ಸೃಷಿಸಲು ಯತ್ನಿಸುತ್ತ ಬಂದಿದೆಯಷ್ಟೇ. ಸುಪ್ರಿಂಕೋರ್ಟ್ ವಿಚಾರಣೆ ಈ ಬಿಂಬಿತ ‘ಸತ್ಯ’ಗಳನ್ನು ದಾಟಿ ನ್ಯಾಯ ನೀಡುತ್ತದೆ ಎಂದು ಆಶಿಸೋಣ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...