Homeಅಂಕಣಗಳುಖಾಸಗಿ ಆಸ್ಪತ್ರೆಯಲ್ಲಿ ರಾಜಕಾರಣಿಗಳು: ಆರೋಗ್ಯ ವ್ಯವಸ್ಥೆಯ ರಾಷ್ಟ್ರೀಕರಣಕ್ಕೆ ಸೂಕ್ತ ಸಮಯ

ಖಾಸಗಿ ಆಸ್ಪತ್ರೆಯಲ್ಲಿ ರಾಜಕಾರಣಿಗಳು: ಆರೋಗ್ಯ ವ್ಯವಸ್ಥೆಯ ರಾಷ್ಟ್ರೀಕರಣಕ್ಕೆ ಸೂಕ್ತ ಸಮಯ

ಯಡಿಯೂರಪ್ಪನವರೂ, ಸಿದ್ದರಾಮಯ್ಯನವರೂ, ಅಮಿತ್‍ಷಾ ಅವರೂ ಗುಣಮುಖರಾಗಿ ಹೊರಬರಲಿ. ಅವರೆಲ್ಲರಿಗೂ ಒಳ್ಳೆಯದನ್ನೇ ಹಾರೈಸೋಣ. ಆದರೆ ಜನಸಾಮಾನ್ಯರು ನೋವು, ಸಂಕಟದಲ್ಲಿರುವಾಗ ಅವರಿಗೂ ಉತ್ತಮ ಗುಣಮಟ್ಟದ ಚಿಕಿತ್ಸೆಯ ಅಗತ್ಯವಿರುತ್ತದೆ ಅಲ್ಲವೇ?

- Advertisement -
- Advertisement -

ದೇಶದ ಹಲವು ಅಧಿಕಾರಸ್ಥ ರಾಜಕೀಯ ನಾಯಕರುಗಳಿಗೆ ಕೊರೊನಾ ತಗುಲಿದ ನಂತರ ಅವರುಗಳು ಸರ್ಕಾರೀ ಆಸ್ಪತ್ರೆಯಲ್ಲಿ ಏಕೆ ದಾಖಲಾಗುತ್ತಿಲ್ಲ ಎಂಬ ಪ್ರಶ್ನೆ ಎದ್ದಿದೆ. ಸರ್ಕಾರೀ ಮತ್ತು ಖಾಸಗೀ ಆಸ್ಪತ್ರೆಗಳೆರಡರಲ್ಲೂ ಕೆಲಸ ಮಾಡಿರುವ ಅನುಭವದಿಂದ ಈ ಕೆಳಗಿನ ಎರಡು ಅಂಶಗಳನ್ನು ಖಚಿತವಾಗಿ ಹೇಳಬಹುದು. ಒಂದು, ಈ ರಾಜಕೀಯ ನಾಯಕರುಗಳಿಗೆ ತಾವೇ ಅನುದಾನ ಬಿಡುಗಡೆ ಮಾಡುವ ನಮ್ಮ ಸರ್ಕಾರೀ ವೈದ್ಯಕೀಯ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತಿದೆ ಎಂಬ ತಿಳುವಳಿಕೆ ಇದ್ದಂತಿಲ್ಲ. ಎರಡು, ಜನಸಾಮಾನ್ಯರು ತಮ್ಮ ಆರೋಗ್ಯದ ಕುರಿತು ಯೋಚಿಸುವ ರೀತಿಯಲ್ಲಿಯೇ ಇವರುಗಳೂ ಯೋಚಿಸುತ್ತಿದ್ದಾರೆ.

ಇಂದಿಗೂ ನಮ್ಮ ಸರ್ಕಾರೀ ವೈದ್ಯಕೀಯ ವ್ಯವಸ್ಥೆಯಲ್ಲಿ ಉನ್ನತ ಸಂಸ್ಥೆಗಳು ಅತ್ಯುತ್ತಮವಾಗಿಯೇ ಇವೆ. ದೆಹಲಿಯ ಏಮ್ಸ್ ಮಾತ್ರವಲ್ಲದೇ, ನಮ್ಮದೇ ಬೆಂಗಳೂರಿನ ನಿಮ್ಹಾನ್ಸ್, ಜಯದೇವ ಹಾಗೂ ವಿಕ್ಟೋರಿಯಾ ಕ್ಯಾಂಪಸ್ಸಿನಲ್ಲಿರುವ ಟ್ರಾಮಾ ಸೆಂಟರ್ ಇವೆಲ್ಲವೂ ಗುಣಮಟ್ಟದ ಸೇವೆಯನ್ನೇ ಒದಗಿಸುತ್ತಿವೆ. ಅಂತಹ ಆಸ್ಪತ್ರೆಗಳಿಗೆ ಈ ಪ್ರಭಾವೀ ರಾಜಕಾರಣಿಗಳು ದಾಖಲಾದರೆ ಅವರಿಗೆ ಇನ್ನೂ ಉತ್ತಮವಾದ ಸೇವೆಯನ್ನು ಒದಗಿಸಲು ಅಲ್ಲಿನ ಸಿಬ್ಬಂದಿ ತುದಿಗಾಲಿನ ಮೇಲೆ ನಿಂತಿರುತ್ತಾರೆ. ಅದಕ್ಕಾಗಿ ಆಸ್ಪತ್ರೆಯ ಎಲ್ಲಾ ನಿಯಮಗಳನ್ನೂ ಬದಲಿಸಿ ಇವರಿಗಾಗಿ ಎಲ್ಲಾ ವ್ಯವಸ್ಥೆಗಳನ್ನೂ ಮಾಡಿಕೊಡಲಾಗುತ್ತದೆ. ಅಲ್ಲಿಗೆ ಹೋಗುವುದಕ್ಕೆ ಮುಂಚೆ ಒಂದೇ ಒಂದು ಫೋನ್ ಕರೆ ಮಾಡಿದರೆ ಸಾಕು, ಆ ಆಸ್ಪತ್ರೆಗಳ ನಿರ್ದೇಶಕರ ಕೊಠಡಿಯಲ್ಲೇ ವಿವಿಧ ವಿಭಾಗಗಳ ಮುಖ್ಯಸ್ಥರೇ ಬಂದು ಕಾದಿದ್ದು, ಪರೀಕ್ಷೆ ಮಾಡಿ ಪ್ರತ್ಯೇಕವಾದ ಕೊಠಡಿಗಳನ್ನು ಇವರಿಗಾಗಿ ಸಿದ್ಧಗೊಳಿಸಿ ಉತ್ತಮವಾದ ಚಿಕಿತ್ಸೆ ನೀಡುತ್ತಾರೆ. ಹಾಗೆ ನೋಡಿದರೆ ಇದಕ್ಕಾಗಿ ನೀವು ಮುಖ್ಯಮಂತ್ರಿ, ಕೇಂದ್ರ ಗೃಹಮಂತ್ರಿ ಅಥವಾ ವಿರೋಧ ಪಕ್ಷದ ನಾಯಕನಾಗಬೇಕಿಲ್ಲ. ಆರೋಗ್ಯ ಮಂತ್ರಿಯ ಪಿಎ ಆಗಿದ್ದರೂ ಸಾಕು. ಇನ್ನೂ ಹೇಳಬೇಕೆಂದರೆ, ಈ ಆಸ್ಪತ್ರೆಯ ವಿವಿಧ ಗೋಲ್‍ಮಾಲ್‍ಗಳನ್ನು ಬಯಲಿಗೆಳೆಯಲು ಆಗಿಂದಾಗ್ಗೆ ಆರ್‌ಟಿಐ ಹಾಕುತ್ತಾ, ಸಣ್ಣ ಪುಟ್ಟ ಪ್ರತಿಭಟನೆಗಳನ್ನು ಮಾಡುವ ವ್ಯಕ್ತಿಯಾಗಿದ್ದರೂ ಸಾಕು.

ಹೀಗಿದ್ದರೂ, ಅಧಿಕಾರಸ್ಥ ರಾಜಕಾರಣಿಗಳು ಇಂತಹ ದೊಡ್ಡ ಸರ್ಕಾರೀ ಆಸ್ಪತ್ರೆಗಳಿಗೂ ದಾಖಲಾಗದೇ ಇರಲು ಕಾರಣವೇನು? ಅವರಿಗೆ ನಮ್ಮ ಸರ್ಕಾರೀ ವೈದ್ಯಕೀಯ ವ್ಯವಸ್ಥೆಯಲ್ಲಿಯೇ ಕೆಲವು ಸಂಸ್ಥೆಗಳು ಉತ್ತಮವಾಗಿರುವುದರ ಬಗ್ಗೆ ಗೊತ್ತಿಲ್ಲ. ಅಂತಹ ಆಸ್ಪತ್ರೆಗಳ ಉದ್ಘಾಟನೆಗೆ, ನವೀಕರಣಕ್ಕೆ ಅವರು ಹೋದಾಗ ನೋಡುವುದನ್ನು ಬಿಟ್ಟರೆ ಈ ಆಸ್ಪತ್ರೆಗಳ ಗುಣಮಟ್ಟದ ಬಗ್ಗೆ ಅವರಿಗೆ ತಿಳಿದಿಲ್ಲ. ಜಡ್ಡುಗಟ್ಟಿದ ಸರ್ಕಾರೀ ವ್ಯವಸ್ಥೆಯಲ್ಲಿ ಮನೆ ಮಾಡಿರುವ ಜನವಿರೋಧಿ ಗುಣ, ನಿರ್ಲಕ್ಷ್ಯಗಳು ಜನಸಾಮಾನ್ಯರಿಗೆ ತೊಂದರೆ ಕೊಡುತ್ತವೆನ್ನುವುದು ನಿಜ; ಈ ಅಧಿಕಾರಸ್ಥರಿಗಲ್ಲ. ಹಾಗಾಗಿ ಯಾರಾದರೂ ಅಧಿಕಾರಸ್ಥ ರಾಜಕಾರಣಿ ಸರ್ಕಾರೀ ಆಸ್ಪತ್ರೆಗೆ ಹೋಗಿ ದಾಖಲಾದರೆ ಅವರು ಯಾವ ತ್ಯಾಗವನ್ನೂ ಮಾಡಿದಂತೆ ಅಲ್ಲ.

ಎರಡನೆಯದಾಗಿ, ಆರೋಗ್ಯದ ಕುರಿತಾಗಿ ಇರುವ ತಿಳುವಳಿಕೆಯಲ್ಲೇ ಒಂದು ಮೂಲಭೂತ ದೋಷವಿದೆ. ಇದು ಈ ದೇಶದ ಬಹುತೇಕ ಜನರಲ್ಲಿ ಇರುವ ತಿಳುವಳಿಕೆಯಾಗಿದೆ. ಅದೇನೆಂದರೆ ಹಣ ಕೊಡದೇ ಇದ್ದಲ್ಲಿ ಉತ್ತಮವಾದ ಏನೂ ಸಿಗುವುದಿಲ್ಲ ಎಂಬ ಗಾಢನಂಬಿಕೆ. ಸಾಮಾನ್ಯವಾಗಿ ಜನರಿಗೆ ಉಚಿತವಾಗಿ ಸಿಗುವ ಅನುಕೂಲಗಳನ್ನು ಸರ್ಕಾರವು ಕೊಡಮಾಡುತ್ತದೆ. ಈಗೀಗ ಅದೂ ಕಡಿಮೆಯಾಗಿದೆ. ಉತ್ತಮವಾದ ರಸ್ತೆಯೆಂದರೆ ಟೋಲ್ ಇರುವ ರಸ್ತೆ ಎಂದಾಗಿಲ್ಲವೇ, ಹಾಗೆ. ಕೊಡುವ ಹಣ ಹೆಚ್ಚಾದಷ್ಟೂ ಉತ್ತಮ ಗುಣಮಟ್ಟದ ವಸ್ತು ಅಥವಾ ಸೇವೆ ಸಿಗುತ್ತದೆ ಎಂಬ ಮಾರುಕಟ್ಟೆಯ ಮೇಲಿನ ನಂಬುಗೆ ಹೀಗೆ ಮಾಡುತ್ತದೆ. ಉಳಿದ ವಿಚಾರಗಳಲ್ಲಿ ಸ್ವಲ್ಪ ರಿಸ್ಕ್ ತೆಗೆದುಕೊಳ್ಳಲು ಜನರು ಸಿದ್ಧರಿರುತ್ತಾರಾದರೂ, ತಮ್ಮ ಆರೋಗ್ಯದ ವಿಚಾರದಲ್ಲಿ ಅಂತಹದನ್ನು ‘ಅಪಾಯಕ್ಕೆ’ ತಮ್ಮನ್ನು ತಾವು ಒಡ್ಡಿಕೊಳ್ಳಲು ಸಿದ್ಧರಿರುವುದಿಲ್ಲ.

ಖಾಸಗಿ ಆಸ್ಪತ್ರೆಗಳಲ್ಲಿ ವಿಪರೀತ ಬಿಲ್ ಮಾಡುತ್ತಾರೆ, ಅನಗತ್ಯವಾದ ಪರೀಕ್ಷೆ, ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗುತ್ತದೆ ಮತ್ತು ಬೇಕಿಲ್ಲದ ಔಷಧಿಗಳನ್ನು ನೀಡಲಾಗುತ್ತದೆ ಎಂಬೆಲ್ಲಾ ತಕರಾರು, ದೂರುಗಳು ಇರುತ್ತವಾದರೂ, ಈ ಸದ್ಯ ತಮಗೆ ಬಂದಿರುವ ಖಾಯಿಲೆಗಂತೂ ತಮ್ಮ ಜೇಬಿಗೆ ಕಷ್ಟಸಾಧ್ಯವಾದರೂ, ಇರುವುದರಲ್ಲೆ ಅತ್ಯುತ್ತಮವಾದ ಚಿಕಿತ್ಸೆ ದೊರೆಯಲಿ ಎಂದೇ ಎಲ್ಲರೂ ಬಯಸುತ್ತಾರೆ. ಖಾಸಗಿ ಆಸ್ಪತ್ರೆಗಳ ಥಳಕು ಬಳುಕಿನಲ್ಲಿ ತೋರಿಕೆಯ ಚೆಂದ ಬೇಕಾದಷ್ಟು ಇದ್ದೇ ಇರುತ್ತದೆ ಮತ್ತು ಸರ್ಕಾರೀ ಆಸ್ಪತ್ರೆಗಳಲ್ಲಿ ಜನರನ್ನು ಪ್ರೀತಿ ಗೌರವದಿಂದ ಮಾತಾಡಿಸುವ ಕಷ್ಟ ಬಹುತೇಕ ಯಾರೂ ತೆಗೆದುಕೊಳ್ಳುವುದಿಲ್ಲ. ಚಿಕಿತ್ಸೆಯಲ್ಲೂ ಉಡಾಫೆ, ನಿರ್ಲಕ್ಷ್ಯ ಇರಬಹುದು. ಇದರ ಅರ್ಥ ಖಾಸಗಿ ಆಸ್ಪತ್ರೆಗಳಲ್ಲಿ ಬೇರಾವುದೋ ಮಾಂತ್ರಿಕ ಶಕ್ತಿ ಇರುವುದಿಲ್ಲ. ಅವರು ನಂಬರ್ 1 ಡಾಕ್ಟ್ರು, ಇವರು ನಂಬರ್ 2 ಸರ್ಜನ್ ಎಂಬುದೆಲ್ಲಾ ಅರ್ಥಹೀನ. ವಾಸ್ತವದಲ್ಲಿ ಮನುಷ್ಯರಿಗೆ ಬರುವ ರೋಗಗಳಲ್ಲಿ ಹೆಚ್ಚಿನವು, ಮನುಷ್ಯ ದೇಹಕ್ಕೆ/ಪ್ರಕೃತಿಗೆ ಇರುವ ಅಪಾರ ಶಕ್ತಿಯ ಕಾರಣದಿಂದ ಗುಣವಾಗುತ್ತವೆಯೇ ಹೊರತು ಚಿಕಿತ್ಸೆಯಿಂದಲ್ಲ. ಆದರೆ, ರೋಗಿಗಳನ್ನು ಕ್ಯೂನಲ್ಲಿ ಕಾಯಿಸುವುದು, ಉಡಾಫೆಯಿಂದ ಮಾತನಾಡಿಸುವುದು, ಗಮನ ಕೊಟ್ಟು ನೋಡದಿರುವುದು, ಸ್ವಚ್ಛವಾಗಿಲ್ಲದೇ ಇರುವುದು ಇತ್ಯಾದಿ ಸಮಸ್ಯೆಗಳು ಸರ್ಕಾರೀ ಆಸ್ಪತ್ರೆಗಳಲ್ಲಿರುವುದು ವಾಸ್ತವ. ಇದಕ್ಕೆ ಸರ್ಕಾರೀ ಆಸ್ಪತ್ರೆಗಳ ಮೇಲಿರುವ ಭಾರೀ ಹೊರೆಯೂ ಒಂದು ಕಾರಣವಾಗಿದೆ; ಸರ್ಕಾರೀ ವ್ಯವಸ್ಥೆಯ ಇತರ ವಿಭಾಗಗಳಲ್ಲೂ ಕಾಣುವ ಜಡತ್ವ, ಉತ್ತರದಾಯಿತ್ವ ರಹಿತ ಕಾರ್ಯನಿರ್ವಹಣೆ, ಭ್ರಷ್ಟಾಚಾರಗಳೂ ಕಾರಣವಾಗಿವೆ. ಆದರೆ, ಅವಾವುವೂ ಅಧಿಕಾರಸ್ಥ ರಾಜಕಾರಣಿಗಳು ಹೋದಾಗ ಸಮಸ್ಯೆಗಳಾಗುವುದಿಲ್ಲ. ಎಲ್ಲಾ ಅವ್ಯವಸ್ಥೆಗಳ ನಡುವೆಯೂ ಅವರಿಗೆ ಭಿನ್ನ ರೀತಿಯ ಚಿಕಿತ್ಸೆಯನ್ನು ವೈದ್ಯಾಧಿಕಾರಿಗಳು ಖಾತರಿಪಡಿಸಬಲ್ಲರು.

ಅಂತಹ ಖಾತರಿಯು ಜನಸಾಮಾನ್ಯರಿಗೆ ಸಾಧ್ಯವಿಲ್ಲ. ಖಾಸಗಿ ವ್ಯವಸ್ಥೆಯಲ್ಲೂ ಕಡಿಮೆ ಹಣ ತೆರುವವರಿಗೆ ಕಡಿಮೆ ಗುಣಮಟ್ಟದ ಚಿಕಿತ್ಸೆಯಷ್ಟೇ ಲಭ್ಯವಾಗುತ್ತದೆ. ಇದೇ ಕೋವಿಡ್ ಚಿಕಿತ್ಸೆಯ ಸಂದರ್ಭದಲ್ಲೂ ಬಿಬಿಎಂಪಿಯಿಂದ ರೆಫರ್ ಆದ ರೋಗಿಗಳಿಗೆ ಬೇರೆ ಚಿಕಿತ್ಸೆ ಮತ್ತು ತಾವೇ ಹಣ ನೀಡುವುದಾದರೆ ಬೇರ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ನೋವು, ಸಂಕಟದಲ್ಲಿರುವಾಗ ಮನುಷ್ಯರು ಸಾಂತ್ವನ ಮತ್ತು ಪರಿಹಾರವನ್ನು ಬಯಸುತ್ತಾರೆ. ಇದಕ್ಕೆ ರಾಜಕಾರಣಿಗಳೂ ಹೊರತಲ್ಲ. ಅವರ ಪ್ರಭಾವ, ಅಧಿಕಾರದ ಕಾರಣಕ್ಕೆ ಸರ್ಕಾರೀ ವ್ಯವಸ್ಥೆಯಲ್ಲಿ ಉತ್ತಮ ಚಿಕಿತ್ಸೆ ದೊರೆಯುವ ಸಾಧ್ಯತೆಯಿದ್ದರೂ ಸಿಎಂ, ಮಾಜಿ ಸಿಎಂಗಳು ಅಲ್ಲಿಗೆ ಹೋಗಿಲ್ಲ ಎನ್ನುವುದಾದರೆ, ಅವರು ಸಾಮಾನ್ಯ ಜನರ ಪರಿಸ್ಥಿತಿಯ ಕುರಿತು ಆಲೋಚಿಸುವ ಉತ್ತರದಾಯಿತ್ವವನ್ನು ಹೊರಲೇಬೇಕಿದೆ. ಯಡಿಯೂರಪ್ಪನವರೂ, ಸಿದ್ದರಾಮಯ್ಯನವರೂ, ಅಮಿತ್‍ಷಾ ಅವರೂ ಗುಣಮುಖರಾಗಿ ಹೊರಬರಲಿ. ಅವರೆಲ್ಲರಿಗೂ ಒಳ್ಳೆಯದನ್ನೇ ಹಾರೈಸೋಣ. ಆದರೆ ಜನಸಾಮಾನ್ಯರು ನೋವು, ಸಂಕಟದಲ್ಲಿರುವಾಗ ಅವರಿಗೂ ಉತ್ತಮ ಗುಣಮಟ್ಟದ ಚಿಕಿತ್ಸೆಯ ಅಗತ್ಯವಿರುತ್ತದೆ ಅಲ್ಲವೇ? ಹಾಗಾಗಿ ನೀವೇಕೆ ಖಾಸಗಿ ಆಸ್ಪತ್ರೆಗೆ ಹೋಗುತ್ತಿದ್ದೀರಿ ಎಂಬ ಪ್ರಶ್ನೆಯನ್ನು ಈ ಹೊತ್ತಿನಲ್ಲಿ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಆರೋಗ್ಯ ವ್ಯವಸ್ಥೆಯ ಸಂಪೂರ್ಣ ರಾಷ್ಟ್ರೀಕರಣದ ನಿಟ್ಟಿನಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಬಲವರ್ಧನೆ, ವಿಸ್ತರಣೆ ಹಾಗೂ ಖಾಸಗಿ ವೈದ್ಯಕೀಯ ವ್ಯವಸ್ಥೆಯ ನಿಯಂತ್ರಣದ ಪ್ರಶ್ನೆಯನ್ನು ಗಟ್ಟಿಯಾಗಿ ಎತ್ತಲೇಬೇಕು. ಅದು ಸಾಧ್ಯವಾಗುವುದಾದರೆ ದೇಶಕ್ಕೆ ಸಾಕಷ್ಟು ಹಾನಿ ಮಾಡಿರುವ ಕೊರೊನಾದಿಂದ ಒಂದಾದರೂ ಒಳಿತಾಯಿತು ಎಂದುಕೊಳ್ಳಬಹುದು.


ಇದನ್ನು ಓದಿ: ಕೋವಿಡ್ ಸೋಂಕಿತ ಬಹುತೇಕ ರಾಜಕಾರಣಿಗಳು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ! ಏಕೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...